Saturday, March 4, 2017

ಉತ್ತರ ಹುಡುಕಿ

ಚಡಪಡಿಸುತಿದೆ ಜೀವ
ತಳಮಳಗೊಂಡಿದೆ ಭಾವ
ಉತ್ತರವ ಹುಡುಕಿ ಹೊರಟಿದೆ
ಬೆಟ್ಟವೇ ಎದುರು ನಿಂತು ಕೇಳಿದೆ
ಶಾಂತಿಯ ನೆಲದಲ್ಲಿ
ಕ್ರಾಂತಿಯ ಕೋವಿ ಹಿಡಿದು
ಸ್ವಾತಂತ್ರ್ಯದ ಹಣತೆ ಹಚ್ಚಬಹುದೇ ?

ಪ್ರೀತಿಯಿಂದ ಬದುಕುವವರ
ಮನದೊಳಗೆ ದ್ವೇಷವ ಬಿತ್ತಿ
ಸಹಬಾಳ್ವೆಯ ಮೂಡಿಸಬಹುದೇ ?

ಸ್ನೇಹದ ಸಮಭಾವದಲ್ಲಿ
ಅಸಮಾನತೆಯ ಕಿಡಿ ಹೊತ್ತಿಸಿ
ಹೋರಾಟಕೆ ಇಂಬುಕೊಟ್ಟರೆ ಹೇಗೆ ?

ರಕ್ತದ ಮಡುವಿನಲ್ಲಿ ಒದ್ದಾಡಿ
ಹಕ್ಕಿನ ಕೂಸಿಗೆ ಹಾಲುಣಿಸಲು
ಹಿಂಸೆಯ ಹಾದಿ ಹಿಡಿಯುವುದೇ ?

ಜಾತಿಯ ಅಸ್ತ್ರವ ಹಿಡಿದು
ಕ್ಷೋಭೆಗೆ ಮುನ್ನುಡಿ ಬರೆದು
ಶಾಂತಿಯ ಕದಡಬಹುದೇ ?

ಮನುಜಮತದ ವಿಶ್ವಪಥದಿ
ಸಮಬಾಳು ಸಮಪಾಲಿಗಾಗಿ
ಸಂವಿಧಾನಕೆ ತೋರಬೇಕಲ್ಲವೇ ಬದ್ಧತೆ !??

1203ಪಿಎಂ02032017

ಅಮು ಭಾವಜೀವಿ