Monday, October 24, 2016

ಶಬ್ದರಹಿತ ಆರಾಧನೆ

ನಿಲ್ಲಲಿ ಸಿಡಿಮದ್ದಿನ ಹಾವಳಿ
ಬೆಳಗಲಿ ದೀಪ ಮನೆಮನಗಳಲಿ

ಜ್ಞಾನವೆಂಬುದು ಜ್ಯೋತಿಯಂತೆ
ನಿಶ್ಯಬ್ದದ ಆಶಾಕಿರಣ
ಅಜ್ಞಾನವು ಪಟಾಕಿಯಂತೆ
ಶಬ್ದಗಳದ್ದೇ ಆಕ್ರಂದನ

ನಿಸರ್ಗದ ಎಲ್ಲಾ ಸಾಧನೆ
ಶಬ್ದರಹಿತ ಆರಾಧನೆ
ಮನುಜ ನಿನ್ನೀ ಶೋಧನೆ
ಜೀವಸಂಕುಲಕೆ ನರಕಯಾತನೆ

ಬೆಂಕಿಯನ್ನೂ ಬೆಳಕಾಗಿ
ಕಂಡಿದ್ದು ನಮ್ಮ ಸಂಸ್ಕೃತಿ
ಬೆಂಕಿ ಸೋಕಿ ಶಬ್ದವಾಗಿ
ಮಾಡಿದ್ದು ವಿಕೃತಿ

ದೀಪದೀಪವ ಬೆಳಗಿ
ಕೋಪತಾಪವೆಲ್ಲಾ ಮುಳುಗಿ
ಪ್ರಶಾಂತತೆಯ ಪುಳಕವಾಗಿ
ಸಂಭ್ರಮಿಸಲಿ ದೀಪಾವಳಿ

ತೊಂದರೆಗಳು ದೂರವಾಗಿ ತತ್ವಾದರ್ಶಗಳು ನಮ್ಮ ಬೆಳಗಿ
ಮನದ ತಮವ ನೀಗಿ
ಪ್ರಜ್ವಲಿಸಲಿ ಬದುಕು ಹಬ್ಬವಾಗಿ

0757ಎಎಂ251016
ಅಮುಭಾವಜೀವಿ

Saturday, October 22, 2016

ಈ ಹೊತ್ತಿನ ತಲ್ಲಣ

ನ್ಯಾಯ ಸಿಗದ ಆಕ್ರೋಶದಲ್ಲಿ ಆಡಳಿತಶಾಹಿ ದಬ್ಬಾಳಿಕೆಯಲ್ಲಿ ಅಸಹಾಯಕರನ್ನಾಗಿಸಿದೆ
ಈ ಹೊತ್ತಿನ ತಲ್ಲಣ

ಬರಗಾಲ ತಂದ ಭೀಕರ ಕ್ಷಾಮ
ಜಗದಿ ಇಲ್ಲವಾಗಿದೆ ಕ್ಷೇಮ
ಸತ್ತ ಮಾನವ ಪ್ರೇಮವೇ
ಈ ಹೊತ್ತಿನ ತಲ್ಲಣ

ಭ್ರಷ್ಟರ ಕೂಟದಲ್ಲಿ
ನಿಷ್ಠರ ಪರದಾಟ ನೋಡಿಲ್ಲಿ
ದಕ್ಷತೆಯ ಆತ್ಮಹತ್ಯೆಯೇ
ಈ ಹೊತ್ತಿನ ತಲ್ಲಣ

ನೀರಿಗಾಗಿ ಹಂಬಲಿಸುವ
ನ್ಯಾಯಕ್ಕಾಗಿ ಹಲುಬುವ
ಬಡಪಾಯಿಗೆ ಬಿದ್ದ ಏಟುಗಳೇ
ಈ ಹೊತ್ತಿನ ತಲ್ಲಣ

ಬರ ಬಂದು ಬಾಯಾರಿ
ರೈತ ಸಾಲದ ಶೂಲಕೇರಿ
ತಬ್ಬಲಿ ಮಕ್ಕಳ ಆಕ್ರಂದನವೇ
ಈ ಹೊತ್ತಿನ ತಲ್ಲಣ

ಅಬಲೆಯರ ಮೇಲೆ ಅತ್ಯಾಚಾರ ಕಂದಮ್ಮಗಳ ಮೇಲೆ ವಾಮಾಚಾರ ರಕ್ಷಿಸುವವನಿಂದಲೇ ಭ್ರಷ್ಟಾಚಾರವೇ
ಈ ಹೊತ್ತಿನ ತಲ್ಲಣ

ಆಧುನಿಕತೆಯ ಆಡಂಬರದಿ ಸೋಮಾರಿತನದ ವಿಡಂಬನೆಯ ವೃದ್ಧಾಶ್ರಮದಿ ಹೆತ್ತವರ ರೋಧನೆಯೇ
ಈ ಹೊತ್ತಿನ ತಲ್ಲಣ

ಸಾಕಿನ್ನು ಈ ತಲ್ಲಣ
ಬದುಕಾಗಲಿ ಸವಿಯೂರಣ
ಸಾಮರಸ್ಯವೇ ಜೀವನ
ಸಹಬಾಳ್ವೆಯೇ ಸವಿಭೋಜನ 0240ಪಿಎಂ221016

ಅಮುಭಾವಜೀವಿ ಅಪ್ಪಾಜಿ ಎ ಮುಸ್ಟೂರು (ಅಮುಭಾವಜೀವಿ )

Tuesday, October 18, 2016

ಹುಣ್ಣಿಮೆಯ ರಾತ್ರಿಯಲಿ

ಹುಣ್ಣಿಮೆಯ ರಾತ್ರಿಯಲಿ
ತಣ್ಣನೆಯ ವೇಳೆಯಲಿ
ತೇಲಿ ಬಂತು ನಿನ್ನ ನೆನಪು
ಬೆಳದಿಂಗಳು ಚೆಲ್ಲಿದಂತೆ

ಆಸೆಗಳು ಅರಳಿದವು
ಕನಸುಗಳು ಮರಳಿದವು
ನನ್ನೀ ಹೃದಯ ಹಾಡಿತು
ನೀನೇನೇ ನನ್ನವಳೆಂದು

ತಾರೆಗಳು ನಗುತಿರಲು
ನಿನ್ನ ಗುಳಿ ಕೆನ್ನೆಯೊಳು
ತಂಗಾಳಿ ತುಸು ಮೆಲ್ಲ ಬೀಸಲು ಲಾಸ್ಯವಾಡಿದೆ ನನ್ನೀ ಮುಂಗುರುಳು

ಕಾಲ ಹೀಗೆ ಕಳೆದ್ಹೋಯ್ತು
ಬೆಳ್ಳಂಬೆಳಕು ಈಗಾಯ್ತು
ನಿನ್ನಿಂದ ಮೇಲೆ ಮುತ್ತಿನ ಹನಿ
ಸಾಲುಗಟ್ಟಿ ನಿಂತು ನೋಡಿದೆ ಇಬ್ಬನಿ

ನಲ್ಲೆ ನೀನು ಪ್ರಕೃತಿ
ನಿನ್ನಿಂದ ನನಗೊಂದು ಸಂಸ್ಕೃತಿ
ಕಾರಣ ಅದುವೇ ಈ ಪ್ರೀತಿ
ನಾನು ನೀನು ಬಾಳಸಂಗಾತಿ

0821ಪಿಎಂ161016

ಅಮುಭಾವಜೀವಿ

ಹೆಮ್ಮೆಗೆ

Feb 18, 2015
ಹೆಮ್ಮೆಗೆ

 ಭಾರತೀಯ ನಾನೆಂಬ ಹೆಮ್ಮೆಗೆ
 ಬಲ ನೀಡಲಿ ಅಭಿಮಾನ
 ಭಾರತೀಯತೆಯ ಎತ್ತಿ
 ಹಿಡಿಯಲಿಸ್ವಾಭಿಮಾನ

 ವಿವಿಧತೆಯಲ್ಲಿ ಏಕತೆ ಸಾಧಿಸಿ
ಜಾತ್ಯಾತೀತೆಯಲ್ಲಿ ಸಮರಸ ಬೆರೆಸಿ
ಅಖಂಡತೆಯ ಬುನಾಧಿ ಮೇಲೆ
 ತೆರೆದಿದೆ ಸಾಮರಸ್ಯದ ಬಾಗಿಲೆ

 ದಾರ್ಶನಿಕರ ದಾರಿ ದೀವಿಗೆ
ನಡೆಸಿಕೊಂಡು ಬಂದಿದೆ ನಮ್ಮನಿಲ್ಲಿಗೆ
ಸ್ವಾತಂತ್ರ್ಯದ ಈ ಅರಮನೆಯಲ್ಲಿ
 ಪಾರತಂತ್ರಕೆ ಅವಕಾಶವಿನ್ನೆಲ್ಲಿ

 ಧರ್ಮದ ತಳಹದಿಯಲ್ಲಿ
 ಜ್ಞಾನದ ಪ್ರಖರತೆಯಲ್ಲಿ
 ಸಂವಿಧಾನದ ಅನುಸಂಧಾನ
 ಅದು ಈ ಭಾರತೀಯನಿಗೆ ತಂದ ಬಿಗುಮಾನ

 ಗುರುತಿಸಿಕೊಳ್ಳ ಬೇಕು ನಾನಿಲ್ಲಿ
 ನಿಜ ಭಾರತೀಯನೆಂಬ ಹೆಮ್ಮೆಯಲಿ
 ಜನನಿ ಜನ್ಮ ಭೂಮಿಗೆ
ತನುಮನ ಮುಡಿಪವಳ ಸೇವೆಗೆ

 ಧನ್ಯ ಜನ್ಮ ಜನಿಸಿದುದಕಿಲ್ಲಿ
ಮಾನ್ಯನೆನಿಸಿದೆ ಜಗದಲ್ಲಿ
 ಪುಣ್ಯ ಪಡೆದೆ ಅವಳ ಮಡಿಲಲಿ
ಕಾರುಣ್ಯ ಬೀರಿದೀ ಗುಡಿಯಲಿ.

[1109am180215]
ಅಮುಭಾವಜೀವಿ 

ಬತ್ತಿದ ಮರದಲಿ

ಬತ್ತಿದ ಮರದಲಿ
ಸತ್ತಿದೆ ಬದುಕು
ಕಟ್ಟಿದ ಗೂಡಿಗೆ
ಉರಿಬಿಸಿಲ ತೊಡಕು

ಮಳೆಯೇ ಮಾಯವಾಗಿ
ಹಸಿರು ತಾ ನಾಶವಾಗಿ
ನೆರಳೇ ನರಳಾಡಿದೆ
ಬದುಕೇ ಬರಡಾಗಿದೆ

ಮಾನವನ ಅತಿಯಾಸೆಗೆ
ಪರಿಸರ ನಾಶವಾಯ್ತು
ಮುಗಿಲು ಬಂಜೆಯಾಗಿ
ಅಂತರ್ಜಲ ಪಾತಾಳ ಸೇರಿತು

ನಿತ್ಯವೂ ಇಲ್ಲಿ ಹೋರಾಟ
ಹೇಳತೀರದು ಆ ಸಂಕಟ ಮರುಭೂಮಿಯಲಿಷ್ಟು ತಂಪಿರಬಹುದು ಸಮೃದ್ಧ ಈ ಭೂಮಿ ಸುಡುತಿಹುದು

ಬರ ಬಂದಿದೆ ಈಗ ಎಲ್ಲೆಲ್ಲೂ
ಪರದಾಡಿದೆ ಜೀವ ಹಗಲಿರುಳು ಏನಾಗುವುದೋ ಈಗ ಬದುಕು ಯಾಕಾಗೆಯೋ ಈ ಕೆಡುಕು

1253ಪಿಎಂ151016

ಅಮುಭಾವಜೀವಿ

18102016