Friday, June 10, 2022

ಕವನ

ಎಲ್ಲಿರುವೆ ಮಾಧವ
ಕಾಣಿಸದೆ ನನ್ನೀ ವಿರಹದ ಭಾವ

ಮೊಸರಿನ ಗಡಿಗೆ ಹೊತ್ತು 
ನಾ ಬಂದೆನೋ ನಿನಗಾಗಿ
ನಾ ಬರುವುದ ತಿಳಿದಿದ್ದರೂ
ಎಲ್ಲಿ ಹೋದೆ ನೀ ಮರೆಯಾಗಿ

ಏತಕ್ಕೆ ನಿನಗೀ ಹುಡುಗಾಟ
ಎಲ್ಲಿಯವರೆಗೂ ನನ್ನೀ ಹುಡುಕಾಟ

ತುಳಸಿ ಮಾಲೆಯ ಕಟ್ಟಿ ತಂದಿರುವೆ
ಏತಕ್ಕೆ ನೀನು ಮರೆಯಾಗಿರುವೆ
ವಿರಹದಿ ನಾನು ಬೆಂದಿರುವೆ
ನಿನ್ನ ಕಾಣದೆ ನಾನು ನೊಂದಿರುವೆ

ಮತ್ತೆ ಮತ್ತೆ ನೀ ನೋಯಿಸುವೆ ಏಕೆ
ಏನು ಹೇಳು ನಿನ್ನ ಮನದ ಬೇಡಿಕೆ

ರಾಧೆಯು ನಾನು ನೀರಾದೆನು ಇನ್ನೂ
ರಮಿಸಲು ಬಾರೋ ಮಾಧವ
ನಿನ್ನ ಕೊಳಲ ದನಿಯ ಕೇಳಿದೆ ನಾನು
ಕಂಗಾಲಾಗಿರುವೆ ಚಡಪಡಿಸಿ ಜೀವ

ನೀನಿಲ್ಲದ ಬದುಕು ಸಾವಿಗೆ ಸಮಾನ
ನಿನ್ನ ಕಾಣದೆ ಸತ್ತರೆ ಸಾವಿಗೂ ಅವಮಾನ

ಕಣ್ಣ ಮುಂದೆ ಬಂದು ಬಿಡು ಈಗಲೇ
ಸಾವು ಬಂದು ನನ್ನ ಕರೆದೊಯ್ಯುವ ಮೊದಲೇ
ರಾಧೆಯ ಜೀವ ಜೀವನ ಕೃಷ್ಣಗೆ ಮುಡಿಪು
ನಿನ್ನ ಕಂಡರೆ ತಾನೆ ಮನಸ್ಸಿಗೆ ತಂಪು

0619ಎಎಂ11062022
*ಅಮುಭಾವಜೀವಿ ಮುಸ್ಟೂರು*

    

No comments:

Post a Comment