Saturday, September 3, 2022

ಕವನ

ಸ್ಥಾನದ ಮಹತ್ವ  ಅರಿಯದವ
ದೊಡ್ಡ ಸ್ಥಾನದಿ ಕೂತರೇನು
ಹೇಸಿಗೆ ಕಂಡ ಶ್ವಾನ ತನ್ನ 
ಬುದ್ದಿ ಬಿಟ್ಟು ಬದುಕುವುದೇನು
ಮಠದೊಳಗಿನ ಬೆಕ್ಕಿನ ಬಣ್ಣ 
ಬಯಲಾಗಲು ಈ ಗೌರವ ಯಾಕಿನ್ನು

ತನ್ನ ತಾ ಹಿಡಿತದಲ್ಲಿಡಲಾಗದ ಗುರು
ಸಮಾಜಕೆ ಕೊಡುವ ಸಂದೇಶವೇನು
ಮುಖವಾಡ ಕಳಚಿದ ಮೇಲೂ
ಮುಖ ಮುಚ್ಚಿಕೊಳ್ಳುವ  ಅಗತ್ಯವೇನು
ತಪ್ಪು ಮಾಡಿಲ್ಲ  ಎಂದಾದ ಮೇಲೆ
ಇಷ್ಟೆಲ್ಲಾ ರಂಪಾಟಗಳ  ಅರ್ಥವೇನು

ನೈತಿಕತೆಯನೇ ಕಳೆದುಕೊಂಡು 
ಅನೈತಿಕವಾಗಿ ನಡೆದು ಕೊಂಡು
ಗುರು ಪರಂಪರೆಗೆ ಮಸಿ ಬಳಿದಾಯ್ತು
ಕಾವಿಯು ಕಾಮವ ಸುಡದ ಮೇಲೆ
ಧರ್ಮಗುರು ಅಧರ್ಮಿಯಾದ ಮೇಲೆ 
ನಂಬಿಕೆಯೂ ಈಗ  ನಂಬದಾಯ್ತು

ಬೆಂಬಲಕೀಗ ನೈತಿಕಯೇ ಇಲ್ಲ 
ಪ್ರಭಾವ ಬೀರಲು ನಾಚಿಕೆಯಾಗೊಲ್ಲ
ದೊಡ್ಡವರೆನಿಸೊಂಡವರ ಸಣ್ಣತನವಿದು
ಎಚ್ಚೆತ್ತುಕೊಳ್ಳಬೇಕಿನ್ನು ಸಮಾಜ 
ಅರಿಯಬೇಕಿಂತ ಢೋಂಗಿತನದ ನಿಜ
ಧರ್ಮಕ್ಕೂ ಕಳಂಕ ಮೆತ್ತಿಕೊಂಡಿತಿಂದು

1133ಪಿಎಂ03092022
*ಅಮು ಭಾವಜೀವಿ ಮುಸ್ಟೂರು*

No comments:

Post a Comment