Tuesday, June 17, 2025

ಕವನ

 ಅನುದಿನದ ಸಂಗಾತಿ 
ಆಕಾಶವಾಣಿ ಎಂಬ ಪ್ರಸಾರ ಭಾರತಿ 
ಇಂದಿಗೂ ಎಂದೆಂದಿಗೂ ಜೊತೆಗಾತಿ 
ಈ ಶತಮಾನದ ಹೆಮ್ಮೆಯ ನುಡಿ ಗಾರುಡಿ 
ಉತ್ತರ ಧೃವದಿಂ ದಕ್ಷಿಣ ಧ್ರುವಕೂ 
ಊರ್ಧ್ವದೆಡೆ ಮುಖ ಮಾಡಿ ಮುನ್ನಡೆವ
ಋಷ್ಯಶೃಂಗದೆತ್ತರ ಪ್ರಸಾರ ಮಾಡಿ 
ಎಷ್ಟೊಂದು ಮಾಹಿತಿ ಮನರಂಜನೆ ಹೊತ್ತು ತಂದು 
ಏಳಿಗೆಯತ್ತ ನಮ್ಮ ಕೊಂಡೊಯ್ದು ಜ್ಞಾನದ 
ಐಶ್ವರ್ಯ ‍ ತುಂಬಿ ಸಮೃದ್ಧಗೊಳಿಸಿ 
ಒಂದಾಗಿ ಸಾಗುತ್ತಿದೆ ಜೊತೆ ಜೊತೆಗೆ 
ಓಡುತಿದೆ ಕಾಲದೊಂದಿಗೆ ಮುನ್ನುಗ್ಗಿ 
ಔನತ್ಯದ ಸಾಂಗತ್ಯ ತಂದ 
ಅಂತರಂಗದ ಅಭಿಮಾನ ತುಂಬಿದ 
ಅಹ್ಲಾದಕರ ನುಡಿ ಒಡನಾಡಿ ಆಕಾಶವಾಣಿ
೯೦ನೇ ವರ್ಷಾಚರಣೆಯ
೧೧೦೮ಪಿಎಂ೧೦೦೬೨೦೨೫
ಅಮು ಭಾವಜೀವಿ ಮುಸ್ಟೂರು.

ನಡೆದದ್ದಂತೂ ನಡೆದೇ ಹೋಯಿತು 
ನುಡಿಯುವವರಿಗೆ ತಟ್ಟದು ಆಪತ್ತು 
ದುಡಿಯುವವರಿಗೆ ಶಿಕ್ಷೆಯ ವಿಧಿಸಿ 
ಅಧಿಕಾರಕ್ಕೆ ಅಂಟಿಕೊಂಡಿದ್ದವರದೇ ತಾಕತ್ತು 

ಅಭಿಮಾನದ ಹೊಳೆ ದೊಡ್ಡದು 
ಆಚರಣೆಯ ಸ್ಥಳ ಚಿಕ್ಕದು 
ಒಮ್ಮೆಲೇ ಮುಗಿಲೆದ್ದ ಪ್ರವಾಹಕ್ಕೆ 
ಬೆರಳೆಣಿಕೆಯ ರಕ್ಷಕರಿಂದ ತಡೆಯಲಾಗದು 

ಕಾಲ್ತುಳಿತಕ್ಕೆ ಜೀವ ಹಾರಿ ಹೋದವು 
ಸತ್ತ ದೇಹಗಳು ಮಣ್ಣು ಸೇರಿದವು 
ಯಾರೂ ಹೊಣೆ ಹೊರುವುದಿಲ್ಲ ಸಾವಿಗೆ 
ಕಳೆದುಕೊಂಡವರಿಗಷ್ಟೇ ಗೊತ್ತದರ ನೋವು 

ಕಾಳಜಿಯೇ ಇಲ್ಲ ಆಳುವವರಿಗೆ 
ಮುಂಜಾಗ್ರತೆ ಇಲ್ಲ ಹೊಣೆ ಹೊತ್ತವರಿಗೆ 
ಸಾವನ್ನು ಮುಂದಿಟ್ಟುಕೊಂಡು ಮಾಧ್ಯಮಗಳ ಕಿರುಚಾಟ 
ಜನ ಮರಳೋ ಜಾತ್ರೆ ಮರುಳೋ ಕಾರಣ ಈ ದುರಂತಕೆ 

ಗೆದ್ದವರು ಅಭಿನಂದನೆಗೆ ಅರ್ಹರು 
ಅಧಿಕಾರದಲ್ಲಿರುವವರು ಅಭಿನಂದಿಸಿ ಖುಷಿಪಟ್ಟರು 
ಸತ್ತವರು ಮರೆತೇ ಹೋದರು ಆ ಸಂಭ್ರಮದಲ್ಲಿ 
ಸಾಂತ್ವಾನ ಹೇಳದೆ ಹೋದರು ಆ ಗೆದ್ದವರು

ಅಭಿಮಾನವಿರಬೇಕು ಅಂಧಾಭಿಮಾನ ಬೇಡ 
ಸಂಕಷ್ಟಕ್ಕೆ ಯಾರು ಬರರು ನಿಮ್ಮ ಸಂಗಡ 
ಜೀವ ಮುಖ್ಯ ಜೀವನ ಸೌಖ್ಯ ಮೊದಲು 
ನಿಮ್ಮ ನಂಬಿದವರ ನೀವೇ ಸೇರಿಸಬೇಕು ದಡ

೦೬೪೩ಪಿಎಂ೧೧೦೬೨೦೨೫
*ಅಮು ಭಾವಜೀವಿ ಮುಸ್ಟೂರು*

*ಹಾಯ್ಕು-೧. ಮೌನ*

ನಿನ್ನ ಮೌನವೇ 
ಪ್ರೇಮದ ಕವಿತೆಯು 
ಬಾಳ ಹಾದಿಲಿ


*ಹಾಯ್ಕು-೨. ಧ್ಯಾನ*

ಪ್ರೀತಿಯ ಧ್ಯಾನ 
ಮಾಡುತ ಮರೆತೆನು
ಕಳೆದು ಹೋಗಿ


*ಹಾಯ್ಕು-೩. ಜ್ಞಾನ*

ಹಚ್ಚಿದ ಜ್ಯೋತಿ 
ಜ್ಞಾನದ ಸಂಕೇತವು
ಪ್ರೀತಿಯೇ ಗುರು 

೦೩೧೪ಪಿಎಂ೧೨೦೬೨೦೨೫
ಅಪ್ಪಾಜಿ ಎ ಮುಸ್ಟೂರು ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ 

ಅದೆಷ್ಟು ಕನಸುಗಳ ಕಟ್ಟಿ ಹಾರಿದ್ದವೋ
ಅದಾವ ಗುರಿಯ ಸೇರ ಬಯಸಿದ್ದವೋ
ಖುಷಿ ಖುಷಿಯಲ್ಲಿ ಬಾನಾಡಿಯಂತೆ ತೇಲಿ 
ಗೂಡು ಸೇರುವ ತವಕದಲ್ಲಿದ್ದವರಿಗೆ ಎಂತಹ ಆಘಾತ 

ಯಂತ್ರದ ಬಾನಾಡಿಯೊಂದು ಆಗತಾನೆ 
ಗಗನದೆಡೆ ಚಿಮ್ಮಿ ಹೊರಟ ಪಯಣ 
ಹುಟ್ಟಿದ ಭೂಮಿ ಬಿಟ್ಟು ಹಾರಿದವರ 
ಹಣೆಯಲ್ಲಿ ಏನು ಬರೆದಿದ್ದು ಅದೆಷ್ಟು ದಾರುಣ 

ಸಿರಿವಂತಿಕೆಯ ಅಗರ್ಭದಲ್ಲಿ ಹುಟ್ಟಿದ್ದ 
ದುಡಿವ ಹೊಣೆಗಾರಿಕೆಯ ನೆಚ್ಚಿ ಹೊರಟಿದ್ದ 
ಬಂಧು ಬಾಂಧವರ ಸೇರುವ ತವಕದಲ್ಲಿದ್ದ
ನೂರಾರು ಜೀವಗಳಿಗೆ ಒಂದೇ ಮುಕ್ತಿ ದಯಪಾಲಿಸಿದ್ದ 

ಕರುಣೆ ಎಂಬುದೇ ಇಲ್ಲ ಆ ಸಾವಿಗೆ 
ಇಷ್ಟೊಂದು ಧಾರುಣವಾಗಬೇಕಿದ್ದೆ ಕೊನೆಗೆ 
ಏನೆಲ್ಲ ಜವಾಬ್ದಾರಿಗಳು ಜಾರಿ ಹೋದವು 
ಲೋಹದ ಹಕ್ಕಿಯ ಅವಘಡದಿ ಬೆಂದವು 

ಆಧುನಿಕತೆಯ ಅವಶ್ಯಕತೆ ಒಮ್ಮೊಮ್ಮೆ 
ಬದುಕಲು ಅವಕಾಶ ನೀಡುವುದಿಲ್ಲ 
ಅಮೂಲ್ಯ ಜೀವಗಳ ಅಂತ್ಯವೆಂದಿಗೂ 
ನಂಬಿದವರಿಗೆ ಮತ್ತೆ ದಕ್ಕುವುದಿಲ್ಲ 

ಚಿರಶಾಂತಿ ಇರಲಿ ನಿಮಗೆ 
ಆ ಬ್ರಾಂತಿ ಕಾಡುವುದು ಕೊನೆವರೆಗೆ 
ಏನೆಲ್ಲ ಸಾಧಿಸ ಹೊರಟ ಜೀವಗಳಿಗೆ
ಸಾವನ್ನು ಗೆಲ್ಲಲಾಗಲಿಲ್ಲ ಒಂದು ಘಳಿಗೆ

೦೬೩೩ಪಿಎಂ೧೨೦೬೨೦೨೫
*ಅಮು ಭಾವಜೀವಿ ಮುಸ್ಟೂರು*

ಮೋಡದ ಹಿಂದೆ ಓಡುವ ಚಂದಿರನಂತೆ 
ಹಾರಾಡುವ ಅವಳ ಮುಂಗುರುಳಂತೆ


ತಂಗಾಳಿಯ ಮೆಲ್ಲ ತೀಡುವುದು
ಅವಳುಟ್ಟ ಸೀರೆ ಸೆರಗು ಹಾರಾಡುವಂತೆ 
ಎಲೆ ಎಲೆ ಮೇಲೆ ಚೆಲ್ಲಿದ ಹನಿ ಸಾಲು 
ಬೆಳದಿಂಗಳಲ್ಲೂ ಬೆವತ ಅವಳ ಬೆವರ ಹನಿಗಳು 

ಮೋಡದ ಮರೆಯಲಿ ಚಕ್ಕಂದವಾಡುವ ಶಶಿಯಂತೆ 
ಮುಂಗುರುದ ಮರೆಯಲಿ ರಂಗೇರಿದ ಗುಳಿಕೆನ್ನೆಯಂತೆ
ಗಿಡ ಮರಗಳ ಮೆತ್ತೆಯ ಮೇಲೆ 
ನಿದ್ರೆಗೆ ಜಾರಿದ ಆ ದಂತ ಪಂಕ್ತಿ ಸಾಲೆ

ಆ ಚೆಲುವಿಗೆ ಸೋಲದವರುಂಟೆ 
ಆ ಸೊಬಗನ್ನುಕಂಡು ಕವಿಯಾಗದವರುಂಟೆ 
ಕೆತ್ತಿದವನಾರೋ ಈ ಕಲಾಕೃತಿಯ 
ಮೆಚ್ಚಿಕೊಂಡು ಹುಚ್ಚೆದ್ದಿದೆ ಹರೆಯ

೧೧೦೫ಪಿಎಂ೧೩೦೬೨೦೨೫
*ಅಮು ಭಾವಜೀವಿ ಮುಸ್ಟೂರು*

ನಾನೊಂದು ತ್ರಿಜ್ಯ 
ನೀನೋ ಸುತ್ತುವ ಪರಿಧಿ 
ಪ್ರೀತಿಯ ಕೇಂದ್ರವ ಹಾದು
ವ್ಯಾಸವಾಗಿ ಕೂಡುವ ನಾವು 

ಅತ್ತ ಇತ್ತ ಸುತ್ತ ಮುತ್ತ 
ಬಾಗಿಲೇ ಇರದ ಕೋಟೆ ಬದುಕು 
ಪ್ರಾಣ ಪೂರಣ ಗೈಯುತ 
ಪೂರ್ಣದಲಿ ಹಣ್ಣಾಗುವ ಬಾ ನಾವು 

ಬಿಂದು ಬಿಂದು ಬೆಸೆಯುವ 
ರೇಖೆಯ ರೆಕ್ಕೆ ಬಿಚ್ಚಿ ಹಾರುವ
ಕೋನದ ತಿರುವುಗಳು ತಡೆಯಲಾರವು 
ಮತ್ತೆ ಸೇರುವ ನಮ್ಮಿಬ್ಬರನು


ಚಂದಿರನಿರುವನು ಎಂದರೆ ಬಾನಲಿ 
ಚೆಲುವೆ ನೀನಿದ್ದ ಹಾಗೆ ನನ್ನ ಮನಸಲ್ಲಿ 
ತಾರೆಗಳು ಹೊಳೆಯುತ್ತಿರಲು ಅಲ್ಲಿ 
ನಗುವ ಹೊಳಪು ನೋಡು ನನ್ನ ಮೊಗದಲ್ಲಿ 

ಚಂದ್ರಿಕೆಗಾಗಿ ಕಾಯುವಳು ನೈದಿಲೆ 
ಚಂಚಲೆ ಹೇಳು ನಿನ್ನ ನಾ ಸೇರಲೆ 
ಬೆಳದಿಂಗಳ ಕಂಡು ಉಕ್ಕುವ ಶರಧಿ
ನೀ ಸಿಕ್ಕರೆ ದಕ್ಕಿದಂತೆ ನೆಮ್ಮದಿ 

ತಂಗಾಳಿಗೆ ತೂಗಾಡಿದೆ ತರುಲತೆ
ನಿನ್ನ ಕೆನ್ನೆಯ ಮುದ್ದಿಸುವ ಮುಂಗುರುಳಂತೆ 
ಫಳ ಫಳ ಹೊಳೆಯುವ ಕೋಲ್ಮಿಂಚು
ನಾನರಿಯೆ ಕಣ್ಣಂಚಿನ ಒಳಸಂಚು

ಈ ಇರುಳು ಆನಂದಮಯ ಹುಣ್ಣಿಮೆಯಲ್ಲಿ 
ಸಕ್ಕರೆ ಮಾತಿನ ಅರಗಿಣಿ ಇರಲು ಜೊತೆಯಲ್ಲಿ 
ತಾವರೆ ಕೊಳದಲ್ಲಿ ತೇಲುವ ಹಂಸೆಯಂತೆ
ನಾವಿಬ್ಬರು ಬೆರೆತ ಈ ಇರುಳೇ ಸ್ವರ್ಗದಂತೆ 

ಆ ಚಂದ್ರನಿಗೂ ಈ ಭೂಮಿಗೂ ಮಿಲನ 
ನನ್ನೊಳಗೆ ತಂದಿದೆ ‌ಏನೋ ಸಂಚಲನ 
ಪ್ರೀತಿಯ ಬಯಕೆಯ ಈ ಆಲಿಂಗನ 
ಆ ಬೆಳ್ದಿಂಗಳ ಬೆಸೆದಿದೆ ನಮ್ಮ ಈ ಬಂಧನ

1046ಪಿಎಂ14062025
*ಅಮು ಭಾವಜೀವಿ ಮುಸ್ಟೂರು*

Sunday, March 30, 2025

ಕವನ

*ನಿನ್ನ ಮಡಿಲಲಿ*

ಈ ಕೋಪ ಸರಿಯಿಲ್ಲ 
ಆ ರೂಪ ತಾಳಿರುವೆಯಲ್ಲ
ದೂರುವ ನಿನ್ನ ಕೋರುವೆ 
ಮುದ್ದಾಗಿ ಮಾತಾಡು ಚೆಲುವೆ

ಮುನಿಸು ತರವೇ ಮುಗುದೆ
ನಕ್ಕಾಗ ನೀ ನಮ್ಮ ಹೊಲದ ಗದ್ದೆ
ತಂಗಾಳಿ ನೀಡುವಂತೆ ಮುಂಗುರುಳು 
ಹೂವಾಗಿ ಅರಳಿದವು ಸುಮಗಳು 

ಏಕಾಂಗಿ ಚಂದಿರನಿಗೆ ನೀ ಜೊತೆಯಾಗು 
ಮಿನುಗುವ ತಾರೆಗಳೊಂದಿಗೆ ನೀ ಸೇರಿ ಹೋಗು 
ಹೊಳೆವ ಹೊಂಗೆರೆಯ  ಕಿರಣ ನಿನ್ನ ನಗು 
ನಿನ್ನ ಮಡಿಲಲ್ಲಿ ನಾನಾಗುವೆ ಮಗು 

ನಿನ್ನ ಪ್ರೀತಿಯ ಮಾತು ಜೇನಂತೆ 
ಕೋಪದಿ ನುಡಿದರೆ ಗುಡುಗು ಸಿಡಿಲಂತೆ 
ಆ ನೋಟವು ಕೋಲ್ಮಿಂಚಂತೆ
ನಿನ್ನೊಲವು ಸೋನೆ ಮಳೆಯಂತೆ 

ಸಾಗರ ಕಿನಾರೆಯಲಿ ನಾ ಕಾಯುವೆ 
ಅಲೆಯಾಗಿ ನೀ ಉಕ್ಕಿ ಬರುವ ರಭಸಕೆ
ನಿನ್ನೊಳಗೆ ನಾ ಬೆರೆತು ಹೋಗಿ 
ಮುತ್ತಾಗಿ ಕೊಡುವೆ ನಿನಗೆ ಕಾಣಿಕೆ 

೦೪೫೧ಪಿಎಂ೩೦೧೧೨೦೨೪
*ಅಪ್ಪಾಜಿ ಎ ಮುಸ್ಟೂರು*

ಹಾಕದಿರು ನೀ ಕಣ್ಣೀರು 
ನನ್ನಾಸೆಗದು ತಣ್ಣೀರು 
ನಗುನಗುತ ನೀನಿರು
ಬದುಕಲಿ ಆನಂದದ ಸೊಡರು 

ನಲ್ಮೆಯ ಗೆಳತಿಯೆ ನೀನು 
ನನ್ನ ಪಾಲಿಗೆ ಸವಿ ಜೇನು 
ನೀನಾಡುವ ಮಾತೆಲ್ಲ ನನಗೆ 
ಸ್ಪೂರ್ತಿಯ ಚಿಮ್ಮು ಹಲಗೆ 

ಹೃದಯಕ್ಕೆ ನೀ ಹೇಳು ಸಾಂತ್ವನ 
ಪ್ರೀತಿಯಲಿ ಬರೆವೆನಾಗ ಕವನ
ಖುಷಿ ಖುಷಿಯಾಗಿದ್ದರೆ ಜೀವನ
ಸದಾ ಸಂಭ್ರಮದ ಹೂಬನ

ನೀನಿಲ್ಲದ ಈ ಬಾಳು ಸೆರೆವಾಸ 
ನೀನಲ್ಲವೇ ನನ್ನ ಬಾಳ ವಿಶೇಷ 
ಆರಾಧಸುವೆ ನಿನ್ನ ಪ್ರೇಮ ಪೂಜೆಯಲ್ಲಿ
ಆಲಂಗಿಸು ನನ್ನ ನಿನ್ನೀ ತೋಳಬಂದಿಯಲಿ

ನೂರಾರು ಕನಸುಗಳು ನನಸಾಗಲಿ 
ಹೃದಯದ ಬಯಕೆಗಳೆಲ್ಲ ಕೈಗೂಡಲಿ
ಪ್ರೀತಿಯ ಈ ಸಂದೇಶ ಚಿರಾಯುವಾಗಲಿ 
ನಮ್ಮಿಬ್ಬರ ಅನುಬಂಧ ಅಮರವಾಗಲಿ

೦೩೩೨ಪಿಎಂ೦೧೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ನೊಂದಿದೆ ಜೀವ 
ಬೆಂದಿದೆ ಭಾವ
ಸಾವು ಬಯಸೋದು ಸಹಜ
ಬದುಕ ಗೆಲ್ಲು ಓ ಮನುಜ

ಅಮ್ಮ ಕಷ್ಟಪಟ್ಟು ಕೊಟ್ಟ ಜೀವ 
ಅಪ್ಪ ದುಡಿದು ದಣಿದು ನೀಡಿ ಜೀವನ 
ಸಣ್ಣದೊಂದು ಕಾರಣಕ್ಕೆ 
ಸತ್ತು ಬಿಡುವ ಮನಸು ದುರ್ಬಲ 

ಸ್ನೇಹದ ನಂಬಿಕೆಯಾಗು 
ಪ್ರೀತಿಯ ಬೆಂಬಲವಾಗು
ಬದುಕಿನ ಪ್ರತಿ ಕ್ಷಣವೂ 
ಆನಂದದಿ ಮುಂದೆ ಸಾಗಲಿ 

ಯಾರಿಗಿಲ್ಲ ಇಲ್ಲಿ ನೋವು 
ಯಾರಿಗಿಲ್ಲ ಇಲ್ಲಿ ಸಾವು 
ಹಿಂದೆ ಮುಂದೆ ಹಾದಿಹೋಕರು
ಸರತಿ ಸಾಲಿನಲ್ಲಿ ನಾನು ನೀನು 

ಸಾವೇ ಬಂದು ಕರೆದರೂ 
ಹೋಗದ ವಿಶ್ವಾಸವಿರಲಿ
ಸಾವು ಕೂಡ ಹೆಮ್ಮೆ ಪಡುವ 
ಹಾಗೆ ಈಸಬೇಕು ಇದ್ದು ಜೈಸಬೇಕಿಲ್ಲಿ

ಬಿಡು ಬಿಡು ಚಿಂತೆಯ ಓ ಜೀವವೇ 
ನಡುವೆ ಎದ್ದು ಹೋಗುವುದು ತರವೇ
ನಾಳೆಯ ಭರವಸೆ ಇರಲಿ 
ಇಂದಿನ ಹಂಬಲ ಹೆಚ್ಚಾಗಲಿ 

೩೧೫ಪಿಎಂ೦೨೧೨೨೦೨೪
ಅಪ್ಪಾಜಿ ಎ ಮುಸ್ಟೂರು 

#ಒಲವಿನ #ಭಜನೆ 

ಮೋಡಗಳು ಮುಸುಕಿದ ರಾತ್ರಿಯಲಿ 
ತಂಗಾಳಿ ಬೀಡುವ ಹೊತ್ತಿನಲ್ಲಿ 
ನಿನ್ನ ನೆನಪು ತೇಲಿ ಬಂತು ಮತ್ತಿನಲ್ಲಿ 
ಎದೆಯ ಭಾವಗಳ ನೀರವತೆ 
ವಿರಹ ವೇದನೆಯ ಕವಿತೆ 
ಮರುಕದಲ್ಲಿ ಮುಲುಕುತ್ತಾ ಮಲಗಿದೆ 

ನಿದ್ರೆಯು ಹತ್ತದ ಕಣ್ಗಳಲ್ಲಿ 
ಮದ್ಯಧೂಮಪಾನಗಳ ಜೊತೆಯಲ್ಲಿ 
ಕಥೆಯ ಹೇಳುತ ವ್ಯಥೆಯಲಿ ಓಲಾಡಿದೆ
ಪಾಪಿ ಹೃದಯವ ಕೆರೆದು
ಗಾಯ ಘಾಸಿಗೊಳಿಸಿದ ನೆನಪು 
ಮರೆತರೂ ಮರುಕಳಿಸಿ ಅಣಕಿಸುತ್ತಿದೆ

ಕಪ್ಪೆಗಳ ವಟಗುಟ್ಟುವ ಶಬ್ದ 
ನರಿಗಳು ಕೂಗುವ ಸದ್ದು 
ಓ ಎನ್ನುವ ನಾಯಿಗಳ ಆಕ್ರಂದನ 
ಪ್ರೀತಿಯ ಜೀವವ ಒದ್ದು
ಒಂಟಿ ಬಿಟ್ಟಿರಲು ಇಲ್ಲ ಮದ್ದು 
ಏಕಾಂತವೂ ಇಲ್ಲಿ ನಿತ್ಯ ಬಂಧನ 

ತಬ್ಬಲಿಯು ನೀನಾದೆ ಹೃದಯವೇ 
ನಾ ಒಬ್ಬಂಟಿಯಾದೆ ಓ ಸಮಯವೇ 
ಬೆಳಕು ಹರಿಯುವ ತನಕ ಒಲವಿನದೇ ಭಜನೆ 
ದಕ್ಕಿದ ದಾರಿದ್ರೆಲ್ಲ ನೀಗಿ 
ಮತ್ತೆ ಹೊಸತನದ ಪ್ರೇಮಿಯಾಗಿ 
ದಿನವನ್ನಾರಂಭಿಸುವುದೆನ್ನ ಚಿಂತನೆ 

೧೦೧೨ಪಿಎಂ೦೪೧೨೨೦೨೪
ಅಪ್ಪಾಜಿ ಎ ಮುಸ್ಟೂರು 

*ಬಾಳ ಯಾತ್ರೆಯ ದಿಬ್ಬಣ* 
ನೀಲ ನಭದ ನಿನ್ನ ನಲ್ಮೆಯಲ್ಲಿ 
ಮೂಡಿ ಬಂದ ಚಂದ್ರ ಬಿಂಬ 
ನಿನ್ನ ತಾರುಣ್ಯಕ್ಕೆ ತಲೆಬಾಗಿತು 

ಹಸಿರ ಮಡಿಲ ತೊಟ್ಟಿನಲ್ಲಿ 
ಬಿರಿದ ಮೊಗ್ಗು ಅರಳುವಲ್ಲಿ 
ನಿನ್ನ ರೂಪದ ಗಂಧ ಹೊಮ್ಮಿತು 

ಮುಸ್ಸಂಜೆಯ ರಂಗಲ್ಲಿಯೂ
ಗೋಧೂಳಿಯ ಚಿತ್ರಾವಳಿಯು 
ನಿನ್ನನ್ನೇ ಅಲ್ಲಿ ಚಿತ್ರಿಸಿತ್ತು 

ರಾತ್ರಿ ಕೂಡ ರಮ್ಯವಾಗಿ
ಬೆಳದಿಂಗಳು ಹಿತವಾಗಿ 
ನಿನ್ನನ್ನೇ ಮೋಹಿಸುತ್ತಿತ್ತು 

ನೈದಿಲೆ ಅರಳುವ ಹೊತ್ತು 
ಪೌರ್ಣಿಮೆಯು ಹಾಲು ಚೆಲ್ಲಿತ್ತು 
ನಿನ್ನ ಬರುವಿಕೆಗಾಗಿ ಕಾಯುತ 

ನಲ್ಲ ನಲ್ಲೆಯರ ಸರಸ ಸಲ್ಲಾಪ 
ಇರಹವಿರದ ಸಂತೃಪ್ತ 
ಇಲಿಯಳಧರ ಸವಿಯುತ 

ಮಧುಚಂದ್ರದ ಈ ಮಿಲನ 
ಮಧುಬಟ್ಟಲ ಸವಿ ಪಾನ 
ಬದುಕಿಗೆ ರಸದೌತಣ 

ಬದುಕು ನಿತ್ಯ ನೂತನ 
ಭರವಸೆ ತುಂಬಿದ ಈ ಬಂಧನ 
ಬಾಳಯಾತ್ರೆಯ ದಿಬ್ಬಣ 

೦೫೦೬೦೫೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
*ಒಲವ ಆರಾಧನೆ* 

ಬಾನ ಅಂಚಲ್ಲಿ ಮೂಡಿದ 
ಚಿತ್ತಾರದ ಸವಿ ರೂಪ ನೀನು 
ಇರುಳ ಬಾಂದಳದಲ್ಲಿ ಮಿನುಗುವ 
ತಾರೆಗಳ ಗೆಳತಿಯೇ ನೀನು 

ತಂಗಾಳಿ ತೀಡುವಾಗ ಸಂಭ್ರಮಿಸೋ
ಮುಂಗುರುಳ ಒಡತಿ ನೀನು 
ಬೆಳದಿಂಗಳಗೆ ಉಕ್ಕುವ ಅಲೆಯಂತ
ತಾರುಣ್ಯ ತುಂಬಿದ ತರುಣಿ ನೀನು 

ಹೂ ಬಿಟ್ಟು ಬಳುಕುವ ಲತೆಯಂತೆ
ಸುಮಬಾಲೆ ನಿನ್ನೀ ತನುವ ಸಂಭ್ರಮ 
ಮಧುವನರಸಿ ಬರುವ ದುಂಬಿಯಂತೆ 
ಮುದ್ದಿಸಿ ಮೈ ಮರೆಸಲಿ ನಮ್ಮ ಸಂಗಮ

ಹದವಾಗಿ ನೆನೆದ ಮಣ್ಣಿಂದ ಮೂಡಿದ 
ಸೊಬಗ ಶೃಂಗಾರದ ಪ್ರತಿಮೆ ನೀನು 
ಏನೆಂದು ಬಣ್ಣಿಸಲಿ ನಿನ್ನ ರೂಪ 
ಯಾವ ಉಪಮೆಯು ಸಾಲದು ಇನ್ನು 

ಅಂತರಂಗದ ಭಾಷೆಗೆ ನೀ ನುಡಿಯಾಗು 
ಕವಿ ಭಾವದ ತುಡಿತಕೆ ಮಿಡಿತವಾಗು 
ಎಂದೆಂದಿಗೂ ಅಳಿಯದ ಒಲವಿನ ಚೆಲುವೆ ನೀನು 
ಉಸಿರಿರುವ ತನಕ ಆ ಚೆಲುವಿನ ಆರಾಧಕ ನಾನು 

೦೫೨೧ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಅಂಜಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ 
ಕರ್ನಾಟಕ ರಾಜ್ಯ ಘಟಕ 

ದತ್ತಪದ:- *ಹಸಿವು* 
ಶೀರ್ಷಿಕೆ:- *ಹಸಿದ ಜೀವ* 

ಒಡಲ ಕಡಲು ಬತ್ತಿ
ಎಲುಬು ಮೂಳೆಗೆ ತೊಗಲು ಹತ್ತಿ 
ಚಿಂದಿ ಹುಟ್ಟ ದೇಹದೊಳಗೆ 
ಹಸಿವು ಸಮರ ಸಾರಿದೆ 

ಅಲ್ಲೆಲ್ಲೋ ಮದುವೆ ಮುಂಜಿಗಳಲ್ಲಿ 
ಬಗೆ ಬಗೆಯ ಭಕ್ಷ್ಯ ಭೋಜ್ಯಗಳೆಲ್ಲ
ಹಸಿವಿಲ್ಲದವರ ಎಲೆಯ ಮೇಲೆ 
ಅಸುನೀಗಿ ಮೋರಿ ಸೇರುತ್ತಿದೆ 

ಮುಸುರೆ ಸೇರುವ ಹಳಸಿದನ್ನವ
ಮನೆ ಬಾಗಿಲಿಗೆ ಬಂದವನಿಗಿಕ್ಕುವ
ಹೊಟ್ಟೆ ತುಂಬಿದವರ ಅಟ್ಟಹಾಸಕೆ 
ಮಮ್ಮಲ ಮರುಗಿದೆ ಹಸಿದ ಜೀವ

ಅನ್ನ ದೇವರು ಎಂದು ಹೇಳುವರೆಲ್ಲ 
ನಂಜಿನಂತೆ ಎಂಜಲು ಬಿಟ್ಟು ಹೋಗುವರು
ಹಸಿದವನಿಗೆ ರುಚಿ ತಿಳಿಯುವುದಿಲ್ಲ 
ಹೊಟ್ಟೆ ತುಂಬಿದರೆ ಸಾಕು ಬೇರೇನು ಬೇಕಿಲ್ಲ

ವ್ಯರ್ಥ ಮಾಡುವಿರೇಕೆ ಅನ್ನವನ್ನು 
ಅದರ ಹಿಂದಿನ ಶ್ರಮಿಕರ ಅರಿತಿರುವರೇ ನೀವು 
ಪೈರು ಅನ್ನವಾಗುವವರೆಗೆ 
ಬೆವರು ಸುರಿಸಿದವರೆಷ್ಟೋ ಬಲ್ಲಿರೇನು

೦೫೩೫ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಬೆಳಕೇ ಇರದ ಕಪ್ಪು ಕತ್ತಲ ಹಾದಿ 
ಕಸಿದುಕೊಂಡಿದ್ದು ಬಾಳಿನೆಲ್ಲ ನೆಮ್ಮದಿ 
ಕಷ್ಟಗಳ ಕಾರಿರುಳು ಕವಿದು 
ಹೊಸ ಬೆಳಕಿಗಾಗಿ ಹಂಬಲಿಸುತ್ತಿದೆ ಮನ 

ಹೆಜ್ಜೆ ಹೆಜ್ಜೆಗೂ ಇಲ್ಲಿ ಕಲ್ಲು ಮುಳ್ಳುಗಳದೆ ಪಾರಮ್ಯ 
ಇಂಥ ಸಂಕಷ್ಟದಲ್ಲಿ ಹೇಗೆ ಮುಟ್ಟುವುದು ಗಮ್ಯ 
ಆದರೂ ಎದೆಗುಂದದೆ ಎಚ್ಚರಿಕೆಯ ಹೆಜ್ಜೆನಿಟ್ಟು 
ಗುರಿ ಮುಟ್ಟುವತ್ತ ಸಾಗಿದೆ ಪಯಣ 

ಹಾದಿ ತೋರುವ ಮಾರ್ಗದರ್ಶಕರೆಲ್ಲ 
ಅಲ್ಲಲ್ಲೆ ನಡುವೆ ಬಿಟ್ಟು ಹೋದರು 
ಮನವೆಂಬ ದಿಗ್ದರ್ಶಕನ ಆತ್ಮವಿಶ್ವಾಸ 
ಒಬ್ಬಂಟಿಯಲ್ಲಿ ಛಲ ತುಂಬುತ್ತಿದೆ 

ಏನೇ ಆದರೂ ಗೆಲ್ಲಬೇಕು ಬದುಕನ್ನು 
ಕೊಲ್ಲುವ ಆಯುಧಗಳಿದ್ದರೇನು ಕಾಯುವ ಕೈಗಳಿವೆ 
ಎಂಬ ಭರವಸೆಯ ಈ ಹೋರಾಟ 
ತೆರೆಯುವುದು ಮುಂದೊಂದು ದಿನ ಸಾಧನೆಯ ಸಂಪುಟ 

ಅಂಜದಿರು ಮನವೇ ಮುನ್ನುಗ್ಗು ನೀನು 
ಉಳಿವಿಗಾಗಿ ಇಲ್ಲಿ ಹೋರಾಟ ಅನಿವಾರ್ಯ 
ಗೆಲ್ಲುವ ತನಕ ನೀನಾರಿಗೂ ಗೊತ್ತಾಗದು 
ಗೆದ್ದ ಮೇಲೆ ಜಗವೇ ನಿನ್ನ ಹಿಂದಿಂದೆ ಬರುವುದು

೦೫೫೯ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಎಲ್ಲೆಲ್ಲಿಯೂ ನೀನಿರುವೆ ಎಂದು 
ಹುಡುಕುತ್ತಾ ಅಲೆಯುತ್ತಿರುವೆ 
ಕಾಣದೆ ನೀನು ಎಲ್ಲಿ ಹೋದೆ 

ಬದುಕಿನಲ್ಲಿ ಬಳಲಿ ಬಂದೆ 
ನಿನ್ನ ಪಾದ ಸ್ಪರ್ಶಕಾಗಿ ಕಾದೆ 
ನಿನ್ನ ಕಾಣದೆ ನಾ ಕಂಗಾಲಾದೆ 

ಬರಿ ಕಲ್ಲು ಮುಳ್ಳುಗಳ ತುಳಿದು ಬಂದೆ 
ಹೂ ಹಾಸಿನ ದಾರಿ ಕಾಣದಾದೆ 
ಕೈ ಹಿಡಿದು ಕರೆದುಕೋ ನಿನ್ನ ಬಳಿಗೆ 

ಕನವರಿಕೆಯ ಬದುಕಾಗಿದೆ 
ಕಣ್ಣಾಲಿಗಳು ಮಂಜಾಗಿವೆ
ಈ ನಂಜನು ನೀಗಿಸು 

ಅಂತರಂಗವೀಗ ಶುದ್ದಿಯಾಗುತ್ತಿದೆ 
ಅಹಂಕಾರವೆಲ್ಲ ಕಮರಿಹೋಗಿದೆ 
ಶರಣಾಗತಿಯೊಂದೇ ನಿನ್ನ ತೋರಿದೆ 

ಆತ್ಮದೊಂದಿಗೆ ಪರಮಾತ್ಮ ನೀ ಬೆರೆತು ಹೋಗು 
ದೈವ ಸಾನಿಧ್ಯದಲ್ಲಿ ನಾ ನಿನ್ನ ಮಗು 
ಕರಪಿಡಿದು ನಿನ್ನ ಮಡಿಲಲ್ಲಿ ಮಲಗಿಸು 

ಬವಣೆಗಳ ಸಮರ ನಿಲ್ಲಲಿ 
ಪ್ರೀತಿಯ ಪ್ರಕಾರ ಎಚ್ಚಲಿ 
ನೋವಿಗೆ ನೀ ನೀಡು ಮದ್ದು 

ನಿನ್ನಾಲಯಕ್ಕೆ ಬಂದಿರುವೆ 
ನಿನ್ನ ಕಣ್ಮುಂದೆ ಪೊಡಮಟ್ಟಿರುವೆ
ಪೊರೆಯುವ ಹೊಣೆ ನಿನ್ನದು ದೇವ

೦೬೧೮ಎಎಂ೦೮೧೨೨೨೪
*ಅಪ್ಪಾಜಿ ಎ ಮುಸ್ಟೂರು* 

#ಎಲ್ಲಾ #ಪಾತ್ರಕೂ #ಹೊಂದುವ #ಪಡಿಯಚ್ಚು 

ಅಂತರಂಗ ನೋಯುತ್ತಿದೆ 
ಅನುಬಂಧ ಕಳಚುತಿದೆ 
ಏಕೆ ಹೀಗೆ ಎನ್ನುವುದು 
ಅರಿಯದಾಗಿ ಹೋಗಿದೆ 

ಪ್ರೀತಿ ಬೆಸೆದ ಬಾಂಧವ್ಯ 
ನೋವ ನೀಡುವುದು ಸಂಭಾವ್ಯ 
ಕಾರಣ ಏನೇ ಇದ್ದರೂ 
ನೋವಿಗೆ ಮದ್ದು ನೀನೇ ಇನಿಯ 

ಎದೆಯ ಭಾವಗಳ ಬೆಳಕಿಗೆ 
ಗ್ರಹಣ ಬಡಿದು ಕತ್ತಲಾಗಿ 
ಕಣ್ಣೀರಿನ ಹನಿಗಳ ಸಾಲು 
ಬತ್ತಿ ಹೋಗಿದೆ ವೇದನೆಗೆ 

ನನ್ನವರೆಂಬುವರೆಲ್ಲರೂ ದೂರ 
ನನ್ನವರೆಂದು ಕೊಂಡವರಿಗೆಲ್ಲ ನಾ ಭಾರ 
ಬದುಕಿನ ಯಾನಕ್ಕೆ ತಿರುವುಗಳು ನೂರು 
ದಿಕ್ಕು ತಪ್ಪಿದೆ ಗುರಿ ತೋರುವರಾರು 

ಹೆಣ್ಣಿನ ಬಾಳೆ ಹೀಗೆ 
ಸ್ವಂತಿಕೆ ಇಲ್ಲದ ಮಣ್ಣಿನ ಹಾಗೆ 
ಬೇಕಾದವರು ಬೇಕಾದ ರೂಪ ನೀಡಿ 
ಹೆಣ್ಣಿನ ಬದುಕಿಗೆ ಕೊಟ್ಟರು ಬೇಕಾದ ಹೆಸರು 

ತಾಯಿ ಮಡದಿ ಮಗಳು ಸೋದರಿ 
ಗೆಳತಿ ಗುರು ಇನ್ನು ಏನೇನು ಹೆಸರು 
ಎಲ್ಲ ಪಾತ್ರಗಳಿಗೂ ಹೊಂದುವ ಪಡಿಯಚ್ಚು
ಹೆಣ್ಣೆಂಬ ದೇಹಕ್ಕೆ ಕಣ್ಣಾಗರು ಯಾರು 

೦೮೨೧ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

Thursday, March 27, 2025

ಕವನ

*ತನಗ*








ಬಿದ್ದ ಮಳೆಯ ಕಂಪು 
ಇಳೆಗೆ ತಂತು ತಂಪು 
ಮಣ್ಣಿನೊಳಗೆ ಬೀಜ 
ಮೊಳೆವುದು ಸಹಜ

ಒಣ ಹುಲ್ಲು ನೆನೆದು 
ಹಸಿರುಟ್ಟು ಹೊಸದು
ನಳನಳಿಸಿ ನಿತ್ಯ 
ಸಂಭ್ರಮಿಸುತಲಿದೆ

ಗುಡುಗು ಮಿಂಚು ಮಳೆ 
ರಂಗು ತುಂಬಿದ ಇಳೆ
ಹೊಸ ಕನಸು ಹೊತ್ತು 
ಭೂಮಿ ಹಸಿರ ಸಂಪತ್ತು 

ತುಂಬಿ ಹರಿದ ನದಿ
ಕಳೆಯಿತು ಬೇಗುದಿ 
ಆಹಾಕಾರವಿನ್ನಿಲ್ಲ
ಧಗೆ ಆರಿದೆ ಇನ್ನು 

ಬರೆದ ಛಾಯೆಯಿಲ್ಲ
ಭುವಿ ಹಸಿರಾಯ್ತಲ್ಲ
ಆತಂಕವು ಇನ್ನಿಲ್ಲ 
ಸಮೃದ್ಧ ಜಗವೆಲ್ಲ 

0300ಪಿಎಂ24032025
,*ಅಮು ಭಾವಜೀವಿ ಮುಸ್ಟೂರು*

*ಸಂಜೆ ತನಗ*

ಮುಸಂಜೆ ಮುಗಿಲಲಿ 
ಹಕ್ಕಿಗಳ ಚಿತ್ತಾರ 
ಹಸಿವಿಗೆ ಕಾಳ್ತಂದು
ಸಲಹಿದೆ ಸಂಸಾರ 

ಗೋಧೂಳಿ ಕಾಲದಲ್ಲಿ 
ಮರಳುವ ಸಂಭ್ರಮ 
ಗೂಡಲ್ಲಿ ಗುಟುಕಿಟ್ಟ
ತೃಪ್ತಿಯ ತಾಯಿ ಪ್ರೇಮ

ಕತ್ತಲು ಆವರಿಸಿ
ಬೆಳದಿಂಗಳು ಮೂಡಿ 
ನಿದ್ರೆಗೆ ಜಾರಿ ಪಕ್ಷಿ 
ಬೇಗ ಎಬ್ಬಿಸ್ತು ಹಾಡಿ 

ಮತ್ತದು ಹೊರಟಿತು 
ಕಾಳು ಹೆಕ್ಕಿ ತರಲು 
ದಿನ ಸಾಗಿದೆ ಹೀಗೆ 
ಕುಟುಂಬ ಸಲಹಲು 

೦೬೩೫ಪಿಎಂ೨೫೦೩೨೦೨೫
*ಅಮು ಭಾವಜೀವಿ ಮುಸ್ಟೂರು*

*ಮಾಯದ ಗಾಯ*

ಹೃದಯಕ್ಕೆ ಆದ ಗಾಯ 
ಇನ್ನೇನು ಮಾಯುವುದರಲ್ಲಿತ್ತು
ಅಷ್ಟರಲ್ಲಾಗಲೇ ಆಗಂತುಕನೊಬ್ಬನ
ಪ್ರವೇಶವಾಯಿತು ನೋವ ಮರೆಸಲು 

ಮೊದಮೊದಲು ಎಲ್ಲವೂ ಇಷ್ಟವಾಗಿತ್ತು 
ನಗು ಸಂಭ್ರಮ ಸುಗ್ಗಿಯಾಗಿತ್ತು 
ಪ್ರೀತಿ ಅಲ್ಲಿ ಹೊಸ ಭರವಸೆ ಬಿತ್ತಿತ್ತು 
ಸ್ನೇಹ ಕಾಳಜಿಯ ಮಾಡುತ್ತಿತ್ತು 

ಕಾಲವೆಂಬುದು ಯಾವ ಪರಿವೆಯಿಲ್ಲದೆ
ಹಾಗೆ ಮೆಲ್ಲಮೆಲ್ಲನೆ ಸಾಗುತ್ತಿತ್ತು 
ಬಾಳಲ್ಲಿ ಬೇಸಿಗೆ ಮಳೆ ಚಳಿಗಾಲ
ಮತ್ತೊಮ್ಮೆ ವಕ್ಕರಿಸಿತ್ತು ಕೇಡುಗಾಲ

ಅನುಮಾನದ ಸಿಡಿಲು ಬಡಿದು
ಅವಮಾನದ ಬೇಗೆ ದಹಿಸಿ 
ಅನುಕಂಪದ ಅವಲಂಬನೆ 
ಸ್ವಾಭಿಮಾನದ ಕತ್ತು ಹಿಸುಕಿತು

ಅಳುವೇ ಉಳಿಯಿತು ಕೊನೆಗೆ 
ನಗುವನೇ ಬತ್ತಿಸಿತು ಧಗೆ 
ಪ್ರೀತಿಯ ಮಾತುಗಳು ಚುಚ್ಚಿ 
ನೋವಿನ ರಕ್ತವ ಹೀರುತ್ತಿತ್ತು 

ಬದುಕುವ ಹಕ್ಕಿಗಾಗಿ ಹೋರಾಟ 
ತಪ್ಪೀತಲೇ ಇಲ್ಲ ಸಂಕಷ್ಟ 
 ಮೋಸಕೆ ನಂಬಿಕೆಯ ಮುಖವಾಡ
ಅಮಾಯಕತೆ ಬಲಿಪಶು ಮಾಡಿತು ಧೃಢ
೧೦೦೪ಪಿಎಂ೨೫೦೩೨೦೨೫
*ಅಮು ಭಾವಜೀವಿ ಮುಸ್ಟೂರು*

#ಭಾವದ #ವ್ಯಥೆ 

ಇನ್ನೂ ಬತ್ತಿಲ್ಲ ನನ್ನ ಬರಹದ ಒರತೆ 
ಕಂತೆ ಕಂತೆ ಕೂತಿದೆ ಭಾವದ ವ್ಯಥೆ 
ನಾ ಬರೆದದ್ದನ್ನೆಲ್ಲಾ ಕದ್ದದ್ದೆಂದು ಹೇಳು ವರಂಟು 
ಸಾಕ್ಷಿ ಕೇಳಿದರೆ ಹೊರಡುವರು ಕಟ್ಟಿ ಮೂಟೆಯ ಗಂಟು 

ಎದೆಯ ಕವಾಟಗಳು ಮಿಡಿದಾಗ 
ಮನದ ಭಾವಗಳು ಕುಡಿ ಹೊಡೆದಾಗ
ಕಣ್ಣಾಲಿಗಳು ನೀರು ತುಂಬಿಕೊಂಡ
ನೊಂದ ಜೀವಗಳಿಗೂ ಗೊತ್ತು ಅದರ ವಾಸ್ತವ 

ನನ್ನದೇ ಬೇಕಾದಷ್ಟಿರುವಾಗ 
ಯಾರದೋ ಭಾವಕ್ಕೆ ಹೆಸರು 
ಜೋಡಿಸೋ ಅಗತ್ಯವಿಲ್ಲ
ಅರಿಯದೆ ಆದದ್ದು ಅರಿತಾಗ ಆಗುವುದಿಲ್ಲ 

ಕೊಚ್ಚೆಯಲ್ಲಿ ಬಿದ್ದ ವರಹ
ಬೇರೊಬ್ಬರ ಸ್ವಚ್ಛತೆಯ ಬಗ್ಗೆ ಮಾತನಾಡುವುದು 
ಅದರ ಭ್ರಮೆಯೇ ಹೊರತು 
ಅವರ ತಪ್ಪೇನಿದೆ ಇಲ್ಲಿ 

ಆದಿಯಿಂದ ಇಂದಿನವರೆಗೆ 
ಒಬ್ಬರ ಜೇಬೊಳಗೊಬ್ಬರು ಕೈಯಿಟ್ಟು 
ಕಟ್ಟಿದ ಕಥೆಗಳೇ ಸ್ವಾರಸ್ಯ ಸಾಹಿತ್ಯ 
ಕಾಮಾಲೆ ಕಣ್ಣಿನವರಿಗದು ಅಪಥ್ಯ 

ಉಸಿರಿರುವವರೆಗೂ ಉಸುರುವ ಭಾವ 
ಅದಕ್ಕೇಂದು ಒದಗದು ಅಭಾವ
ಕದ್ದು ಬರೆಯದೆ ಕುದ್ದು ಬೆಂದು ಬರೆವೆ 
ನನಗೇಕೆ ಬೊಬ್ಬೆ ಹೊಡೆದವರ ಗೊಡವೆ 

೧೨೦೧ಪಿಎಂ೨೬೦೩೨೦೨೪
*ಅಮು ಭಾವಜೀವಿ ಮುಸ್ಟೂರು*

*ಇದೇ ಉತ್ತರ*
ಅವಕಾಶ ಕೊಡಲಾಗದವರು 
ಏನೇನು ಕಥೆ ಹೇಳಿದರು 
ಅವಮಾನ ಮಾಡಲೆಂದೇ 
ಕದ್ದಮಾಲೆಂದು ದೂರ ತಳ್ಳಿದರು 

ಎದೆಯ ಮಣ್ಣು ಒಳಗೆ ಬಿದ್ದ 
ಭಾವದ ಬೀಜ ಸ್ಫೂರ್ತಿ ಮಳೆಗೆ ಕಾದಿದೆ 
ಮುಂಗಾರಿನ ಅಭಿಷೇಕಕೆ ನೆನೆದು 
ಮೊಳಕೆಯೊಡೆಯಲು ಯಾರ ಅಪ್ಪಣೆ ಬೇಕಿದೆ 

ಯಾರೂ ಇಲ್ಲಿ ಪ್ರಾಮಾಣಿಕರಲ್ಲ 
ಅಪ್ರಾಮಾಣಿಕರೂ ಇಲ್ಲಿ ಯಾರಿಲ್ಲ 
ಅವರವರ ಮೂಗಿನ ನೇರಕ್ಕೆ ನೋಡಿ 
ಕಾಮಾಲೆ ಕಣ್ಣಿನಲ್ಲಿ ಎಲ್ಲಾ ಅಳೆವರು

ಸ್ಥಾನಮಾನಗಳೇಕೆ ಹಾಡುವ ಹಕ್ಕಿಗೆ 
ಮಿಡಿವ ದನಿಯೊಂದಿಗೆ ಹಾಡುವ ಖುಷಿ 
ಮಾರಾಟದ ಸರಕುಗಳ ಬಯಸದು 
ಎಲ್ಲೋ ಒಂದು ಮಿಡಿತದ ಜೀವ ಸಾಕ್ಷಿಯಾಗುವುದು 

ಒಮ್ಮೆ ಎಡವಿದ್ದು ಸಹಜ 
ಆದರೆ ಅದೇ ಬದುಕಲ್ಲ ಎಂಬುದು ನಿಜ 
ಭಾವಜೀವಿಯ ಕಟ್ಟಿ ಹಾಕುವ ಬಲವಂತರಿಲ್ಲ 
ಕೆಟ್ಟದಾಗಿ ಚಿತ್ರಿಸುವವರಿಗೆ ಇದೇ ಉತ್ತರ 

೦೫೦೫ಪಿಎಂ೨೬೦೩೨೦೨೫
*ಅಮು ಭಾವಜೀವಿ ಮುಸ್ಟೂರು*
*ಚಂದ್ರ ತನಗ*

ಬಾನ ಬಯಲಿನಲ್ಲಿ 
ಬೆಳ್ದಿಂಗಳ ಚೆಲುವ
ತಾರೆಗಳ ನಡುವೆ 
ಬಾಲಚಂದ್ರ ಬರುವ

ಧರೆ ಧಗೆ ಆರಲು 
ಅವನ ನಗು ಬೇಕು 
ರಾತ್ರಿ ಹಿತವಾಗಲು
ಚಂದಿರನಿರಬೇಕು

ನೈದಿಲೆ ಕಾದಿರಲು 
ಬಂದೇ ಬರುವನವ 
ಪ್ರೀತಿಯ ಮಿಡಿತಕೆ 
ಸೋಲದೇ ಇರನವ

ಮಗುವಂತ ವದನ 
ಮರವಂತೆ ಪ್ರಿಯನ 
ಮಧುರ ಆಲಿಂಗನ
ಬರೆಸಿತೀ ಕವನ

ಬೆಳ್ಳಿ ಚುಕ್ಕಿ ಚಿತ್ತಾರ 
ಚಂದ್ರ ತಾರೆ ಸಂಸಾರ 
ಬೇಸರ ನೀಗೋ ಸುಂದ್ರ 
ಇರುಳ ಬಾನ ಲಾಂದ್ರ 

೦೫೫೬ಪಿಎಂ೨೬೦೩೨೦೨೫
*ಅಮು ಭಾವಜೀವಿ ಮುಸ್ಟೂರು*

*ಅಸ್ತಿತ್ವದ ಉಳಿಗಾಲಕ್ಕೆ*
ಬೆನ್ನ ಹಿಂದೆ ಯಾರಿಲ್ಲ ನನಗೆ 
ಬೆಂಬಲಕ್ಕೆ ದೇವರಿದ್ದಾನೆ ಕೊನೆವರೆಗೆ 

ಪ್ರತಿಭೆಯಿದೆ ನನ್ನೊಳಗೆ ಆದರೆ 
ಪ್ರಜ್ವಲಿಸಲು ನೂರೆಂಟು ಅಡ್ಡಿಯುಂಟು 
ಪ್ರಯತ್ನ ನಿರಂತರವಾಗಿದೆ 
ಪ್ರಾಮಾಣಿಕರ ಗುರುತಿಸುವುದಿಲ್ಲ ಯಾರು 

ಎದುರು ಹೊಗಳುತ್ತ ಬೆನ್ನಿಗಿರಿದು 
ನೋವ ನೀಡುವವರು ಬಹಳ 
ಎತ್ತರಕ್ಕೇರಲೆಂದು ಹರಸುವ 
ಕೈಗಳುಂಟು ವಿರಳ

ಎದೆಗೆ ಬಿದ್ದ ಭಾವದಕ್ಷರ 
ಮೊಳೆಯುವುದು ಮುಂಗಾರಿನ ಅಭಿಷೇಕಕ್ಕೆ
ತುಳಿಯುವವರೆಷ್ಟೇ ತುಳಿಯಲಿ 
ಚಿಗುರುವಾ ವಿಶ್ವಾಸವುಂಟು ಭಾವಜೀವಕ್ಕೆ 

ತಿಳಿದವರೇ ತುಳಿಯುವರು 
ಬೆಳೆಯಬೇಕು ಅವರಾಚೆಗೆ 
ಬಳಲದೇ ತೆವಳಬೇಕಿಲ್ಲಿ 
ಅಸ್ತಿತ್ವದ ಉಳಿಗಾಲಕ್ಕೆ

ದೂರುವರು ದೂರ ತಳ್ಳುವರು
ಹತ್ತಿರಕ್ಕೆ ಕರೆದುಕೊಳ್ಳಲಾರರು 
ಬೇಲಿಯ ಹೂವಿಗೇಕೆ ನಾಳೆಯ ಚಿಂತೆ 
ಅರಳಿದಂದೆ ಮುದಗೊಳಿಸಿದರೆ ಸಾಕು 

ನಾನಳಿದರೂ ಸಾಧನೆ ಉಳಿಯಬೇಕು 
ಬೆಟ್ಟದಷ್ಟಲ್ಲದಿದ್ದರೂ ಗರಿಕೆಯಷ್ಟಾದರೂ ಸಾಕು 
ಆ ನಂಬಿಕೆಯಿಂದ ಸಾಗುತಿದೆ ಪಯಣ 
ಅಜ್ಞಾತ ಬೆಂಬಲಿಗರೇ ಅದಕ್ಕೆ ಪ್ರೇರಣ

೦೬೩೨ಪಿಎಂ೨೬೦೩೨೦೨೫
*ಅಮು ಭಾವಜೀವಿ ಮುಸ್ಟೂರು*

ಯಾಕಿಷ್ಟು ಉರಿತಾಪ
ಸೂರ್ಯ ಯಾಕಪ್ಪ ಈ ಕೋಪ 
ಬೇಸಿಗೆ ಬಂತೆಂದರೆ ಸಾಕು 
ತೋರುವೆ ನಿನ್ನ ಉಗ್ರ ರೂಪ 

ಒಣಗಿದ ಹುಲ್ಲು ಕಡ್ಡಿ 
ಉದುರಿದ ಎಲೆ ಎಲ್ಲಾ 
ಕೆಡಿಸೋಕಿದರೆ ಸಾಕು 
ಕಾಡ್ಗಿಚ್ಚಾಗಿ ಮೆರೆಯುವುದು 

ಕೆರೆ ತೊರೆಗಳೆಲ್ಲ ಬತ್ತಿ ಹೋಗಿ 
ಖಗಮೃಗಗಳೆಲ್ಲ ಬಾಯಾರಿ ಸುಸ್ತಾಗಿ 
ಹನಿ ನೀರಿಗೂ ಆಹಾಕಾರ ಎದ್ದಿದೆ 
ಕೊಂಚ ನೀ ತಣ್ಣಗಾಗಬಾರದೆ ?

ಕಾದ ಬಾಣಲೆಯಂತಾಗಿದೆ ಭೂಮಿ 
ನಾವಲ್ಲಿ ಬದುಕುವುದೆಂತು ಸ್ವಾಮಿ 
ಕಾಡು ಕಡಿದ ತಪ್ಪಿಗಾಗಿ ಶಿಕ್ಷೆ 
ಅಂತರ್ಜಲ ಬರೆದು ಮಾಡಿದ್ದಕ್ಕಿಲ್ಲ ರಕ್ಷೆ

ಮುಂಜಾನೆ ಮುಸ್ಸಂಜೆ ಎಂದರೆ ನೀನು ಇಷ್ಟ 
ಮಧ್ಯಾಹ್ನಕ್ಯಾಕೋ ನಿನ್ನ ಸಹಿಸುವುದೇ ಕಷ್ಟ 
ಮರದ ನೆರಳು ತಂಪು ಪಾನೀಯ ಮೊರೆಹೋಗಿ
ಬದುಕುವಂತಾಗಿದೆ ಬಡಜೀವ 

ಕನಿಕರ ತೋರುವ ಒಂಚೂರು
ತಂಪಾದರೆ ಸಾಕು ಇಲ್ಲ ತಕರಾರು
ಭುವಿಯ ಬದುಕ ತಣಿಸಲಿ ಮುಂಗಾರು 
ದಣಿದ ಜೀವಗಳಿಗೆ ಹಿತ ನೀಡಲಿ ತಂಬೆಲರು

೦೯೩೦ಪಿಎಂ೨೬೦೩೨೦೨೫
*ಅಮು ಭಾವಜೀವಿ ಮುಸ್ಟೂರು*

ಎಲ್ಲರಂಥವಳಲ್ಲ ಇವಳು 
ಮೋಡಿ ಮಾಡಿ ಕಾಡಿ ಬೇಡಿ
ಹಾಲಿನಂತವರ ಬಾಳಲ್ಲಿ 
ಒಂದು ಹನಿ ಹುಳಿಯಾದವಳು

ಮೇಲ್ನೋಟಕ್ಕೆ ಇವಳು ಕೆಂಪು ಹತ್ತಿ ಹಣ್ಣು 
ಒಳಗೆ ಹುಳುಮೆತ್ತಿದ ಹುಣ್ಣು 
ಸ್ನೇಹದ ಬಲೆಯ ಬೀಸಿ 
ಪ್ರೀತಿಯ ಅಮಲೇರಿಸೋ ರಾತ್ರಿರಾಣಿ 

ಅವಳು ಬಯಸಿದಾಗ ಬಲು ಚಂದ 
ಬೇಡವಾಗಲು ಅಂಗಾಲ ಮುಳ್ಳು 
ಚುಚ್ಚಿ ಚುಚ್ಚಿ ವ್ರಣವಾಗಿಸಿ
ಬಾಳ ಹೆಣವಾಗಿಸುವ ಹೆಮ್ಮಾರಿ 

ಕರೆದಪ್ಪಿ ಮುದ್ದಾಡುವ ಪ್ರೇಮಿ 
ಕಡೆಗಣ್ಣ ಖತ್ತಿ ಮಸೆವ ಆಸಾಮಿ 
ಸಂಸಾರದೊಳಗಿದ್ದು ಸೆರಗ ಹಾಸಿ 
ಅಮಾಯಕರ ಅವಮಾನಿಸುವ ಗಿರಾಕಿ 

ದೊಡ್ಡ ದೊಡ್ಡವರೆಲ್ಲ ಅವಳ ಸೆರೆಗಂಚಲಿ 
ಕರಗಿಸುವಳು ನಾಲ್ಕು ಕಂಬನಿಯ ಚೆಲ್ಲಿ 
ಉಂಡು ತಿಂದವರೆಲ್ಲ ಬೆಂಬಲಿಸುವಾಗ 
ಬಂದಂತೆ ಮಹಾ ಪತಿವ್ರತೆ ಮೈತಾಳಿ 

ಸೋಲದಿರಿ ಯಾರು ಇವಳ ಕುಡಿ ನೋಟಕ್ಕೆ 
ಕರಗದಿರಿ ಅವಳ ತಳುಕು ಬಳಕು ಮೈಮಾಟಕೆ
ನಂಬದಿರಿ ಅವಳ ನಯವಂಚಕ ಮಾತುಗಳ 
ಯಾಮಾರಿದರೆ ಬಿಸಿ ಸೆಳೆವಳು ಗಾಳ

೦೯೫೧ಪಿಎಂ೨೬೦೩೨೦೨೫
*ಅಮು ಭಾವಜೀವಿ ಮುಸ್ಟೂರು*

Thursday, February 27, 2025

ಕವನ

ಕನ್ನಡ ನನ್ನುಸಿರು
ಕರುನಾಡು ನನ್ನ ಹೆಸರು
ಪ್ರೀತಿ ಕೊಟ್ಟ ನಾಡಿಗೆ
ಜೀವ ಕೊಡುವೆ ಭಾಷೆಗೆ

ತಾಯ ಗರ್ಭದಿಂದ ಬಂದ
ತಾಯ್ನುಡಿಯ ನಂಟಿದು
ಉಸಿರಿರುವ ತನಕ ಜೊತೆ ಬರುವ
ಅಕ್ಷರದನುಬಂಧವಿದು

ಕಬ್ಬಿಗರೆದೆಯಲಿ ಬಿದ್ದ ಭಾವ
ಅಕ್ಕರದ ರೆಕ್ಕೆ ಬಿಚ್ಚಿ ಹಾರಿದೆ
ನಾಡು ನುಡಿಯ ನಲುಮೆ ಸಿರಿಯ
ಧಾರೆಯೆರೆದು ನನ್ನ ಸೇರಿದೆ

ಕೆಂಪು ಹಳದಿ ತೊಟ್ಟು
ಅಭಿಮಾನದಿ ಹಾರಾಡುವೆ
ಭಾಷೆಗಾಗಿ ಎಂದೆಂದಿಗೂ
ಈ ಜೀವನ ಮುಡಿಪಿಡುವೆ

ಹರಸು ತಾಯಿ ಭುವನೇಶ್ವರಿ
ಕುವರ ನಾ ತೋರು ಸರಿದಾರಿ
ಸಿರಿಗನ್ನಡ ನುಡಿಯಲಿ ನಾಲಿಗೆ
ಸಿರಿ ತುಂಬಲಿ ನನ್ನೀ ನಾಡಿಗೆ

೦೪೦೩ಪಿಎಂ೦೫೧೧೨೦೨೨
*ಅಮುಭಾವಜೀವಿ ಮುಸ್ಟೂರು*

Monday, February 24, 2025

ಲೇಖನ

ಇಲ್ಲಿ ಯಾರು ಯಾರನ್ನು ಬೆಳೆಸುವುದಿಲ್ಲ. ಬೆಳೆಯುವ ಮೂಲ ಗೊತ್ತಿದ್ದವನು ತಾನಾಗೆ ಬೆಳೆಯುತ್ತಾನೆ. ಇಲ್ಲವೆಂದರೆ ತಾನಿದ್ದಲ್ಲಿಯೇ ಅಳಿದು ಹೋಗುತ್ತಾನೆ. ಪ್ರತಿಭೆ ಎಂದು ಕೂತರೆ ಪುಕ್ಸಟ್ಟೆ ಕೆಲಸಕ್ಕೂ ಯಾರು ನಮ್ಮನ್ನ ಮಾತನಾಡಿಸುವುದಿಲ್ಲ. ಇಲ್ಲೇನಿದ್ದರೂ ದೊಡ್ಡವರ ಹಿಂಬಾಲಕರಾಗಿರಬೇಕು, ಇಲ್ಲ ಸಾಕಷ್ಟು ಹಣದ ಅಧಿಕಾರದ ಕುಳಗಳಾಗಿರಬೇಕು. ಬೆಳೆದು ದೊಡ್ಡವರಾದವರೆಲ್ಲ ಯಾರೂ ಕೂಡ ಬೆಳೆಯುವವರ ಬೆನ್ನು ತಟ್ಟುವ ಗೋಜಿಗೆ ಹೋಗುವುದಿಲ್ಲ. ಅವರೇನಿದ್ದರೂ ಅವರ ಹಿಂಬಾಲಕರು, ಅವರ ಚಿರಪರಿಚಿತರು, ಅವರು ಹೇಳಿದ್ದನ್ನೆಲ್ಲ ಮಾಡುವಂತಹ ಅಮಾಯಕರನ್ನು ಬೆಳೆಸುವ ನಾಟಕವಾಡಿ ಸಮಾಜದೆದುರು ಬೀಗುತ್ತಿರುತ್ತಾರೆ. ಸ್ಥಳೀಯವಾಗಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲೂ ಅವರು ತಮ್ಮ ಆಚೆ-ಈಚೆ ಓಡಾಡುವವರನ್ನೇ ಮೆಚ್ಚಿ ಮೆರೆಸುತ್ತಿರುತ್ತಾರೆ. ಪ್ರತಿಭೆ ಇದ್ದು ಅವಕಾಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವವರು ಅವರ ಕಣ್ಣಿಗೂ ಬೀಳುವುದಿಲ್ಲ ಅಂತಹವರು ಯಾರಾದರೂ ಇದ್ದಾರೆಯೇ ಎಂದು ವಿಚಾರಿಸುವುದೂ ಇಲ್ಲ. 

    ಈಗಿನ ಎಲ್ಲಾ ಚಟುವಟಿಕೆಗಳು ಪ್ರಭಾವಿಗಳ ಕೃಪಾಪೋಷಿತವಾಗಿರುವುದರಿಂದ ಅವರ ಇಚ್ಛೆಯಂತೆ, ಅವರ ಸ್ವೇಚ್ಛೆಯಂತೆ, ಅವರನ್ನು ಮೆಚ್ಚಿಸುವ ಸಲುವಾಗಿಯೇ ಜನರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅವರ ನೈತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ವೈಯಕ್ತಿಕ ಕಾರ್ಯಕ್ರಮಗಳಾದರೆ ಅದು ಯಾರು ಪ್ರಶ್ನಿಸುವುದಿಲ್ಲ. ಆದರೆ ಸಾರ್ವಜನಿಕ ಕಾರ್ಯಕ್ರಮಗಳು ನಡೆಯುವಾಗ ಸರ್ವರನ್ನು ಒಳಗೊಂಡ ವೇದಿಕೆಯಾಗಿರದೇ ಕೇವಲ ಹೊಗಳು ಭಟ್ಟರ ಒಡ್ಡೋಲಗವಾಗಿರುತ್ತದೆ. ಅಲ್ಲಿ ಪ್ರಚಾರ ಬಯಸದ, ಯಾರಿಗೂ ತಮ್ಮತನವನ್ನು ಮಾರಿಕೊಳ್ಳದ, ತಮ್ಮ ಕಾಯಕ ನಿಷ್ಠೆಯನ್ನು ಪ್ರಾಮಾಣಿಕವಾಗಿ ಮಾಡುವವರು ನಿಕೃಷ್ಟವಾಗಿ ಎಲ್ಲೋ ಒಂದು ಮೂಲೆಯಲ್ಲಿ ಕುಳಿತು ತಮಗಾದ ಅನ್ಯಾಯದ ವಿರುದ್ಧ ಸಿಡಿದ್ದೇಳಲಾಗದೆ ಅಲ್ಲಿ ನಡೆಯುತ್ತಿರುವ ಅ(ಪ)ಟ್ಟಹಾಸಗಳನ್ನು ನೋಡಿ ಸಹಿಸಿಕೊಳ್ಳಲಾಗದೆ ಮರ ಮರ ಮರುಗಿ ಕೊರಗುತ್ತಾ ತಮ್ಮ ಪಾಡಿಗೆ ತಾವು ಇದ್ದುಬಿಡುತ್ತಾರೆ. ಇಂತಹ ಕಾರ್ಯಕ್ರಮಗಳ ಹೊಣೆ ಹೊತ್ತವರು ತಾವೇನು ಮಹತ್ ಸಾಧನೆ ಮಾಡಿ ಗೆದ್ದುಬಿಟ್ಟಿದ್ದೇವೆ ಎಂದು ಓಡಾಡುತ್ತಿರುತ್ತಾರೆ. ಹಣ ಅಧಿಕಾರ ವರ್ಚಸ್ಸು ಯಾವುದು ಇರದವರು ಅವರ ಪಾಲಿಗೆ ನಿಷ್ಪ್ರಯೋಜಕರು. ಅವರನ್ನು ಕಣ್ಣೆತ್ತಿಯೂ ನೋಡಿದಷ್ಟು ಅವಮಾನ ಮಾಡಿ ಬೀಗುತ್ತಿರುತ್ತಾರೆ. 

    ಯಾವುದೇ ಕಾರ್ಯಕ್ರಮಗಳು ನಡೆಯುತ್ತಿರುವ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದವರು ಕೂಡ ಇವರ ಬೇಳೆ ಬೇಯಿಸಲು ಒಪ್ಪುವುದಿಲ್ಲವೆಂದರೆ ಅವರನ್ನು ಕಾಲ ಕಸವಾಗಿ ನೋಡುವ ಅವರನ್ನು ಸೌಜನ್ಯಕಾದರೂ ಆಹ್ವಾನಿಸುವ ವೇದಿಕೆಯಲ್ಲಿ ಸ್ಥಾನ ನೀಡುವ ಯಾವ ಔದಾರ್ಯವನ್ನು ತೋರಿಸುವುದೇ ಇಲ್ಲ. ಅಂಥವರ ಪರಿಸ್ಥಿತಿ ಹೀಗಾದರೆ ಇನ್ನೂ ಬೆಳೆಯುತ್ತಿರುವ ಉದಯೋನ್ಮುಖರು ಎಲೆ ಮರೆಯ ಕಾಯಿಯಂತಿರುವ ಅದೆಷ್ಟೋ ಪ್ರತಿಭೆಗಳು ಬೆಳಕಿಗೆ ಬರದೆ ಅಲ್ಲೇ ಕತ್ತಲಲ್ಲೇ ಕಮರಿ ಹೋಗುತ್ತಿದ್ದಾರೆ. ಸಾರ್ವಜನಿಕ ಸಂಘ ಸಂಸ್ಥೆಗಳು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಡೆದರು ಕೂಡ ಸರ್ವರೂ ಒಪ್ಪಿತವಾಗುವಂತಹ ವ್ಯಕ್ತಿ ವ್ಯಕ್ತಿತ್ವಗಳನ್ನು ಗುರುತಿಸುವಲ್ಲಿ ವಿಫಲವಾಗಿ ಕೇವಲ ತಮ್ಮ ಸುತ್ತಮುತ್ತಲಿನ ಹತ್ತು ಜನರನ್ನೇ ದೊಡ್ಡವರೆಂದು ಬಿಂಬಿಸಿ ಅವರಿಂದ ಜೈಕಾರ ಪಡೆದು ಸಾಧಕರನ್ನು ನಾವೇ ಗುರುತಿಸಿ ಗೌರವಿಸಿದ್ದೇವೆ ಎಂದು ದೊಡ್ಡದಾಗಿ ಪ್ರಚಾರಗಿಟ್ಟಿಸಿ ಕೊಳ್ಳುತ್ತಿದ್ದಾರೆ. 

     ಇವತ್ತು ಕಾಲ ಬದಲಾಗಿದೆ. ಯಾರದೋ ಮರ್ಜಿಯಲ್ಲಿ ಪ್ರತಿಭೆ ಅರಳುವ ಅನಿವಾರ್ಯತೆ ಈಗಿಲ್ಲ. ಹೀಗೆಲ್ಲಾ ಸಾಕಷ್ಟು ಮಾಧ್ಯಮಗಳು ಸ್ವಪ್ರಯತ್ನದಿಂದ ಮೇಲೆ ಬರುವವರಿಗೆ ಅವರದೇ ಆದ ಸ್ವತಂತ್ರ ವೇದಿಕೆಯನ್ನು ಸೃಷ್ಟಿಸಿಕೊಂಡು ಜಗತ್ತಿನದುರು ತೆರೆದುಕೊಳ್ಳುವ ಅವಕಾಶ ಇದ್ದರೂ ಕೂಡ ಇಂಥವರ ತಿರಸ್ಕಾರದಿಂದ ನೊಂದುಕೊಳ್ಳುವವರೇ ಹೆಚ್ಚು. ನಾವು ಹೊರಗಡೆ ಎಷ್ಟೆಲ್ಲಾ ಸಾಧನೆ ಮಾಡಿದರೂ ಕೂಡ ನಮ್ಮ ನೆಲ ನಮ್ಮವರು ಇರುವ ಜಾಗಗಳಲ್ಲಿ ನಮ್ಮನ್ನು ಗುರುತಿಸುವುದಿರಲಿ ಗಮನಿಸುವ ಕೆಲಸವನ್ನು ಮಾಡುವುದಿಲ್ಲ. ಇದರಿಂದ ಬೇಸತ್ತ ಅದೆಷ್ಟೋ ಪ್ರತಿಭೆಗಳು ಯಾರಿಗೂ ಕಾಣದಂತೆ ಮರೆಯಲ್ಲಿ ಮರೆಯಾಗಿ ಹೋಗುತ್ತಿವೆ. ಪ್ರಭಾವಿಗಳ ಬೆಂಬಲಿತರ ಈ ಅಟ್ಟಹಾಸಗಳು ಕಡಿಮೆಯಾಗುವವರೆಗೂ ನೈಜ ಪ್ರತಿಭೆಗಳು ಅವಕಾಶದ ಹುಡುಕಾಟದಲ್ಲಿರುವವರು ಬೆಳಕಿಗೆ ಬರುವುದು ಅನುಮಾನ. 

೦೭೨೧ಪಿಂ೧೭೦೨೨೦೨೫
*ಅಮು ಭಾವಜೀವಿ ಮುಸ್ಟೂರು*

ಮಾತು ತಪ್ಪುವವರೇ ಎಲ್ಲ ಇಲ್ಲಿ 
ಬೆಳೆಯುವವರಿಗೆ ಹಾಕುವರೆಲ್ಲ ಬೇಲಿ 
ನಂಬಿಕೆ ಇಲ್ಲದ ನಾನಾ ಜನ 
ನಕಲಿ ಎಂದು ನಿತ್ಯ ನಗುವರು ಇಲ್ಲಿ 

ಸುಳ್ಳು ಸುಳ್ಳು ಆಪಾದನೆ ಹೊರಿಸಿ
ಸಾಕ್ಷಿ ಕೇಳಲು ತಲೆಮರೆಸಿ 
ಓಡಿ ಹೋಗುವರು ನಿರ್ಬಂಧಿಸಿ 
ಗಾಳಿಯಲ್ಲಿ ಗುಂಡು ಹಾರಿಸುವರು ಹೆದರಿಸಿ 

ಆಧಾರವಿಟ್ಟುಕೊಂಡು ಆಪಾದಿಸಬೇಕು 
ಅಪವಾದ ಹೊರಿಸುವ ಮೊದಲು ಯೋಚಿಸಬೇಕು 
ಅವಮಾನ ಮಾಡುವುದೇ ಕಾಯಕವಾಗಿರಲು
ಅಂತರಂಗದ ಶುದ್ದಿ ಉಳ್ಳವರೇ ಅವರು 

ಎಲ್ಲರೂ ಮುಖವಾಡ ಹೊತ್ತ ಕಚಡಗಳು 
ಪೂರ್ವಗ್ರಹ ಪೀಡಿತರಾದವರೆಲ್ಲ 
ಪರಾಮರ್ಶಿಸುವ ಯೋಗ್ಯತೆ ಯಾರಿಗೂ ಇಲ್ಲ 
ಅವರವರ ಮೂಗಿನ ನೇರಕ್ಕೆ ನಡೆವರು 

ಬೆಳೆಯುವವರ ಸಹಿಸಲಾಗದೆ ತಡೆಯುವರು
ಪ್ರತ್ಯಕ್ಷ ಕಂಡರೂ ಪ್ರಮಾಣಿಸದ ಶೀಲವಂತರು 
ಇಂಥವರಿಂದ ಯಾವ ಲಾಭವಿಲ್ಲ ಪ್ರಾಮಾಣಿಕರಿಗೆ 
ಸ್ವಚ್ಛತೆ ಕಾಣದು ಕೊಚ್ಚೆ ಮನದವರಿಗೆ 

೦೧೫೬ಪಿಎಂ೨೧೦೨೨೦೨೫
*ಅಮು ಭಾವಜೀವಿ ಮುಸ್ಟೂರು*

ಸಾವಿಗೆ ಹತ್ತಿರವಾಗಿ 
ಬದುಕಿಗೆ ಉತ್ತರವಾಗಿ 
ಸಾಗುತಿದೆ ಪಯಣ 

ಶೀರ್ಷಿಕೆ:-  *ಅವಳ ಹಸ್ತಾಕ್ಷರದೊಂದಿಗೆ ಕಾಪಾಟು ಸೇರಲಿ ಬದುಕು*.
ಹೆಣ್ಣು ಮಾಯೆಯ ರೂಪ. ಅವಳೊಮ್ಮೆ ಮನಸ್ಸಿಗೆ ಹೊಕ್ಕರೆ ಸಾಕು ಎಲ್ಲವೂ ಚಂದ. ಅವಳ ಮಾತನ್ನು ಮೀರುವ ಧೈರ್ಯ ಖಂಡಿತ ಇರುವುದಿಲ್ಲ. ಅವಳು ಕುಣಿಸಿದಂತೆ ಕುಣಿಯಬೇಕು ನಟಿಸಿದಂತೆ ನಾಟಕವಾಡಬೇಕು. ಸೂತ್ರದ ಗೊಂಬೆಯಂತೆ ಸದಾ ಅವಳ ಆಣತಿಯಂತೆ ನಗಬೇಕು ಅಳಬೇಕು. ಅವಳು ಹಿಡಿಸಿದ ಹುಚ್ಚಿಗೆ ಜಗದಿ ಎಲ್ಲವೂ ಸರಿಯಾಗಿ ಕಾಣುತ್ತದೆ. ಅವಳು ನಮ್ಮೊಳಗೆ ಇರುವ ತನಕ ಯಾವ ತಪ್ಪು ತಪ್ಪಾಗಿ ಕಾಣುವುದಿಲ್ಲ. ಒಮ್ಮೆ ಆಚೆ ಅವಳು ಹೊರಟು ಹೋದಳು ಎಂದರೆ ಆಗ ಇಡೀ ಜಗತ್ತೇ ಖಾಲಿ ಖಾಲಿ. ಅಲ್ಲಿಯವರೆಗೂ ಜಾಲಿ ಮೂಡ್ನಲ್ಲಿದ್ದ ಮನಸ್ಸು ಎಲ್ಲವನ್ನು ಕಳೆದುಕೊಂಡು ಬರಿಗೈಲಿ ಅಲೆಯುವಂತೆ ಮಾಡಿಬಿಡುತ್ತದೆ. ಅದಕ್ಕೆ ಹೆಣ್ಣು ಮಾಯೆ ಅಂದದ್ದು. 
    ನಮ್ಮ ಮನೆಯಲ್ಲಿ ಇರುವ ಅಮ್ಮ ಅಕ್ಕ ತಂಗಿಯರು ಇವರ್ಯಾರು ಅಷ್ಟೊಂದು ಪ್ರಭಾವ ಬೀರುವುದಿಲ್ಲ. ಆದರೆ ಹೊರಗಿನಿಂದ ಬಂದ ಅವಳು ಅದೇನು ಮೋಡಿ ಮಾಡುತ್ತಾಳೋ ಗೊತ್ತಿಲ್ಲ. ಒಮ್ಮೆ ಮನಸ್ಸಿಗೆ ಹಿಡಿಸಿಬಿಟ್ಟಳು ಎಂದ ಮೇಲೆ ಅವಳು ಹೇಳಿದ್ದೆಲ್ಲ ವೇದವಾಕ್ಯ. ಅವಳು ತೋರ್ಬೆರಳು ತೋರಿದರೆ ಕ್ಷಣಮಾತ್ರದಲ್ಲಿ ಅವಳೆದುರು ತಂದು ನಿಲ್ಲಿಸುವ ಸಾಹಸ ಪ್ರತಿ ಗಂಡಿನಲ್ಲೂ ಮೈಗೂಡಿಕೊಳ್ಳುತ್ತದೆ. ಹರೆಯದ ಅಮಲಿನಲ್ಲಿರುವವರಿಗಂತೂ ಸುಂದರ ಹೆಣ್ಣು ಅಪ್ಸರೆಯ ರೀತಿ. ಅವಳ ಮುಂದೆ ಬೇರೆ ಯಾರು ನಿಲ್ಲುವುದಿಲ್ಲ ಎಲ್ಲರನ್ನು ನಿವಾಳಿಸಿ ತೆಗೆದುಬಿಡಬೇಕು ಎನ್ನುವಷ್ಟು ಹಚ್ಚಿಕೊಂಡು ಬಿಡುತ್ತಾರೆ. ಅವಳ ವೈಯಾರ ಅವಳ ನಗು ಅವಳ ವೇಷ ಭೂಷಣ ಅವಳ ಮಾತು ಎಲ್ಲವೂ ಮರಳು ಮಾಡುವ ಸಾಧನಗಳು. ಇದರಲ್ಲಿ ನಾಟಕೀಯವಿದೆಷ , ಅವಳ ಸ್ವಾರ್ಥವಿದೆ, ಎನ್ನುವುದೇ ಅರ್ಥವಾಗುವುದಿಲ್ಲ. ಅವಳು ಹಾಕಿದ ಗೆರೆಯನ್ನು ದಾಟದಾಗದಷ್ಟು ಅಸಮರ್ಥರಾಗಿ ಹೋಗಿರುತ್ತಾರೆ. ಅಷ್ಟೊಂದು ಗಾಢವಾದ ಆಕ್ರಮಣವನ್ನು ಅವಳು ಗಂಡಿನ ಮನದಲ್ಲಿ ಹೃದಯದಲ್ಲಿ ಒಟ್ಟಾರೆ ಬದುಕಿನಲ್ಲಿಯೇ ಮಾಡಿಬಿಟ್ಟಿರುತ್ತಾಳೆ. ಅದು ಅವಳ ಅತಿಕ್ರಮಣ ಎಂದು ಎಲ್ಲಿಯೂ ಅನುಮಾನ ಪಡುವ ಮನಸ್ಥಿತಿ ಗಂಡಿಗೆ ಇರುವುದೇ ಇಲ್ಲ. ಅಂತ ವಿಶ್ವಾಮಿತ್ರನೇ ಹೆಣ್ಣಿನ ಮೋಡಿಗೆ ಮರುಳಾದನೆಂದರೆ ಇನ್ನು ಸಾಮಾನ್ಯ ಜನರ ಪಾಡು ಹೇಳುತೀರದು.
      ಬದುಕಿನ ಪ್ರತಿ ತಿರುವುಗಳಲ್ಲೂ ಗಂಡಿಗೆ ಹೆಣ್ಣಿನ ಸಹಾಯ ಬೇಕೇ ಬೇಕು. ಅದು ತಾಯಿಯಾಗಿರಲಿ ಸಹೋದರಿಯಾಗಿರಲಿ ಸ್ನೇಹಿತೆಯಾಗಿರಲಿ ಮನದನ್ನೇ ಆಗಿರಲಿ. ಅವಳ ಮಾರ್ಗದರ್ಶನವಿಲ್ಲದೆ ಒಂದು ಹುಲ್ಲು ಕಡ್ಡಿಯನ್ನು ಎತ್ತಿ ಇರುವಷ್ಟು ಸಮರ್ಥನಲ್ಲ ಈ ಗಂಡು. ಆದರೆ ಪ್ರೀತಿಯ ಅಮಲಿನಲ್ಲಿ ತೇಲುತ್ತಿರುವ ಗಂಡಿಗೆ ಅಂಕುಶ ಹಾಕಿ ತನಗೆ ಬೇಕಾದರೆ ರೀತಿಯಲ್ಲಿ ಬಳಸಿಕೊಳ್ಳುವ ಬೆಳೆಸುವ ಉಳಿಸುವ ಅಳಿಸುವ ಎಲ್ಲಾ ಸಾಮರ್ಥ್ಯ ಆ ಹೆಣ್ಣಿಗಿದೆ. ತಾಯಿ ಗೆಳತಿ ಸೋದರಿ ಇವರೆಲ್ಲ ಒಂದು ಹಂತದವರೆಗೆ ಮಾತ್ರ ಗಂಟಿನ ಏಳಿಗೆಗೆ ಬೇಕಾಗುತ್ತಾರೆ. ಅವರದೆಲ್ಲ ನಿಸ್ವಾರ್ಥ ಸಹಕಾರವಾಗಿರುತ್ತದೆ. ಆದರೆ ಹರೆಯದ ಅಮಲಿನಲ್ಲಿ ಪ್ರೀತಿಯ ಖೆಡ್ಡದಲ್ಲಿ ಬಿದ್ದ ಮೇಲೆಯೇ ಇವರ್ಯಾರು ಮುಖ್ಯ ಅನ್ನಿಸುವುದಿಲ್ಲ. ಆಗ ಅವಳೊಬ್ಬಳೇ ಪ್ರಪಂಚ, ಅವಳೊಬ್ಬಳೇ ಬಯಕೆ ಬಿನ್ನಹ. ಅವಳ ಹಿಂದೆ ಎಲ್ಲವನ್ನು ಬಿಟ್ಟು ಹೋಗುವಷ್ಟು ಧಾರಾಳತನ ಈ ಗಂಡಿನದ್ದು. ಅವಳೆಂದರೆ ಏಕೆ ಹೀಗೆ?! ಅವಳ ಮೇಲಿನ ಅವಗಾಹನೆ ತನ್ನನ್ನೇ ತಾನು ಮರೆಸಿ ಬಿಡುತ್ತದೆ. ಅವಳು ನೋಡುತ್ತಾಳೆ ಕಾಡುತ್ತಾಳೆ ಆಡಿಸುತ್ತಾಳೆ ಪೀಡಿಸುತ್ತಾಳೆ ಕೊನೆಗೆ ಎಲ್ಲವೂ ಬರಿದಾಗಿಸಿ ಓಡಿ ಹೋಗುತ್ತಾಳೆ. ಎಲ್ಲ ತರಲು ಜೊತೆ ಇದ್ದ ಅವನು ಕೊನೆಯದರಲ್ಲಿ ಮಾತ್ರ ಒಬ್ಬಂಟಿಯಾಗಿ ಬಿಡುತ್ತಾನೆ. ಒಂದು ಸಣ್ಣ ಸುಳಿವು ಸಹ ಕೊಡದ ಹಾಗೆ ಅವಳು ಅವನನ್ನು ತಿರಸ್ಕರಿಸಿ ಹೋದಾಗ ಇಡೀ ಜಗತ್ತೇ ಶೂನ್ಯವೆನಿಸಿಬಿಡುತ್ತದೆ ಅವನಿಗೆ. ಆಗ ಹೆಣ್ಣಿನ ಮೋಹ ಎಂತಹದ್ದು ಎಷ್ಟೊಂದು ಕೆಟ್ಟದ್ದು ಎಷ್ಟೊಂದು ಕ್ರೂರವಾದದ್ದು ಎಂಬುದು ಅರಿವಿಗೆ ಬರುತ್ತದೆ. ಅಷ್ಟು ಹೊತ್ತಿಗೆ ಆಗಲೇ ಕಾಲ ಮಿಂಚಿ ಹೋಗಿ ಎಲ್ಲ ಕಳೆದುಕೊಂಡು ಬರಿಗೈಯಾಗಿ ಅಕ್ಷರಶಃ ದಿವಾಳಿಯಾಗಿರುತ್ತಾನೆ. 
     ಏಕೆ ಹೀಗಾಯ್ತು ಎಂಬುದನ್ನು ಆಲೋಚಿಸಲು ಅವನಲ್ಲಿ ವ್ಯವಧಾನವಿಲ್ಲದೆ ದುಶ್ಚಟಗಳ ದಾಸನಾಗಿ ಬೀದಿ ಬೀದಿಗಳಲ್ಲಿ ಭಿಕ್ಷುಕನಂತೆ ಅಲೆಯಬೇಕಾಗುತ್ತದೆ. ಇಷ್ಟೆಲ್ಲಕೂ ಕಾರಣ ಹೆಣ್ಣೆಂಬ ಮಾಯೆ ಅವನು ಒಳಗೆ ಆವರಿಸಿ ಅವನನ್ನು ಹೇಗಿದ್ದವನು ಹೇಗಾದ ಎನ್ನುವ ಇತಿಹಾಸಕ್ಕೆ ಸಾಕ್ಷಿಯನ್ನು ಒದಗಿಸಿ ಮರೆಯಾಗಿ ಹೋಗಿರುತ್ತದೆ. ಹೆಣ್ಣನ್ನು ಬಯಸುವುದು ತಪ್ಪಲ್ಲ ಅದು ಪ್ರಕೃತಿಯ ನಿಯಮ. ಆದರೆ ತಾನು ಬಯಸುವ ಹೆಣ್ಣು ತನಗೆಷ್ಟು ಅವಶ್ಯಕತೆ ಇದೆ ಎಂಬುದನ್ನು ಅರಿತು ಅದಕ್ಕೆ ಹೊಂದುವಂತಹವಳನ್ನು ಆಯ್ಕೆ ಮಾಡಿಕೊಳ್ಳದ ತಪ್ಪಿಗೆ ಇಡೀ ಬದುಕನ್ನೇ ನರಕವಾಗಿಸಿಕೊಳ್ಳುವ ಮತ್ತೆ ಸರಿಪಡಿಸಿಕೊಳ್ಳಲಾಗದ ಮಟ್ಟಕ್ಕೆ ತಲುಪಿ ಬಿಡುತ್ತಾನೆ. ಆಗ ಅವನನ್ನು ಸಮಾಧಾನಿಸಲು ತನ್ನವರೆನ್ನುವ ಬಂಧುಗಳಿರುವುದಿಲ್ಲ ಅವನ ಪರಿಸ್ಥಿತಿಯನ್ನು ನೋಡಿ ಮರುಗುವ ಸಮಾಜ ನಗುವ ವಸ್ತುವನ್ನಾಗಿಸಿ ಆನಂದಿಸುತ್ತದೆಯೇ ಹೊರತು ಅವನ ನೋವಿಗೆ ಮುಲಾಮಂತು ಹಚ್ಚುವುದಿಲ್ಲ. ಹೀಗೆ ಹುಚ್ಚು ಹಿಡಿಸುವುದು ಹೆಣ್ಣಿನ ತಪ್ಪಲ್ಲ. ಅದು ಅವಳ ನಡೆ ನುಡಿಗಳಿಗೆ ಅಂಟಿದ ಶಾಪವಿದ್ದಂತೆ. ಅವಳೇನು ತನ್ನನ್ನೇ ಬಯಸು ಎಂದು ಎಲ್ಲರೂ ಕೇಳಿರುವುದಿಲ್ಲ. ಆದರೆ ಅವಳ ಮನಸಲ್ಲಿ ಏನಿದೆ ಎಂದು ಅರಿಯುವ ಮೊದಲೇ ಗಂಡು ಮನಸೋತು ಬಿಟ್ಟಿರುತ್ತಾನೆ. ಆಗ ಉನ್ಮಾದದಲ್ಲಿ ವಾಸ್ತವದ ಅರಿವು ಇರುವುದಿಲ್ಲ ಭವಿಷ್ಯದ ಯೋಚನೆಯು ಇರುವುದಿಲ್ಲ. ಇರುವಷ್ಟು ಸಮಯ ಅವಳೊಂದಿಗೆ ಕಳೆಯಬೇಕೆಂಬುದೊಂದೆ ಅವನ ಉತ್ಕಟ ಇಚ್ಛೆಯಾಗಿರುತ್ತದೆ. ಅದಕ್ಕಾಗಿ ಏನೇ ಕಷ್ಟ ಬಂದರೂ ಏನೇ ಮಾತುಗಳು ಬಂದರೂ ಯಾರೇ ತನ್ನನ್ನು ಬಿಟ್ಟು ಹೋದರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಏನೆಲ್ಲ ಕಳೆದುಕೊಂಡರು ಅವಳೊಬ್ಬಳು ತನಗೆ ದಕ್ಕಿರುವೆಂದು ಸೊಕ್ಕಿನಿಂದ ಉಕ್ಕಿ ಹೋಗಿರುತ್ತಾನೆ. ಆ ರಭಸದಲ್ಲಿ ಆಕಸ್ಮಿಕವಾಗಿ ಅವಳು ತನ್ನನ್ನು ಎಷ್ಟು ಇಲ್ಲಿಯವರೆಗೆ ಅನುರಕ್ತೆಯಾಗಿರುತ್ತಾಳೆ ಎಂಬುದನ್ನೇ ಆಲೋಚಿಸದಷ್ಟು ಕಳೆದು ಹೋಗಿರುತ್ತಾನೆ. 

    ಹೆಣ್ಣು ಸೌಂದರ್ಯದಲ್ಲಿ ಅವಳು ಹೇಗಿದ್ದರೂ ಗಂಡಿನ ನೋಟದಲ್ಲಿ ಸ್ಫುರದ್ರೂಪಿಯಾಗಿ ಕಂಡಳೆಂದಾದರೆ ಅವನು ಯಾವುದನ್ನು ಲೆಕ್ಕಿಸುವುದಿಲ್ಲ. ಆದರೆ ಹೆಣ್ಣು ಕೆಲವೊಮ್ಮೆ ಗಂಡಿನ ವ್ಯಕ್ತಿತ್ವ ಅಂತಸ್ತು ಸೌಂದರ್ಯ ದೇಹದಾರ್ಢ್ಯತೆ ಮುಂತಾದ ಮಾನದಂಡಗಳನಿಟ್ಟುಕೊಂಡು ಆ ಮೂಲಕ ತನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಕಲ್ಪನೆಯಲ್ಲಿ ಗಂಡಿನ ಮೋಹಕ್ಕೆ ಸಿಲುಕಬಹುದು. ಆದರೆ ಯಾವ ಹೆಣ್ಣು ಪರೀಕ್ಷಿಸದೆ ವಾಸ್ತವ ಅಂಶಗಳನ್ನು ಅರ್ಥಮಾಡಿಕೊಳ್ಳದೆ ಒಲಿಯುವುದಿಲ್ಲ. ಪ್ರೀತಿಯ ಅಮಲು ದೈಹಿಕ ವಾಂಚೆಗಳು ಆ ಇಬ್ಬರನ್ನು ಕುರುಡರನ್ನಾಗಿಸಿ ಒಬ್ಬರೊಳಗೊಬ್ಬರು ಕಳೆದುಹೋಗುವ ಹಾಗೆ ಮಾಡಿಬಿಡುತ್ತದೆ. ಅದೆಲ್ಲವೂ ತೀರಿದ ಮೇಲೆ ಇಬ್ಬರ ನಡುವೆ ಮನಸ್ತಾಪ, ತಿರಸ್ಕಾರ ,ಅಧಿಕಾರದ ದರ್ಪ, ಅಸಹಾಯಕತೆ, ಅನಿವಾರ್ಯತೆ, ಹಾಗೂ ಉಸಿರುಗಟ್ಟಿಸುವ ಕಾಳಜಿಗಳು ಸಂಬಂಧಗಳಲ್ಲಿ ಬಿರುಕು ಉಂಟುಮಾಡಲು ಕಾರಣೀಭೂತವಾಗುತ್ತವೆ. ಅಷ್ಟರಲ್ಲಾಗಲೇ ಎಲ್ಲವೂ ಮೀರಿ ಹೋಗಿರುತ್ತದೆ, ಮೋಹದ ಮಾಯೆ ಬಣ್ಣ ಕಳಚಿ ಮಣ್ಣಾಗಿರುತ್ತದೆ. ಆಗ ಪರಸ್ಪರರಲ್ಲಿ ಎಲ್ಲವೂ ತಪ್ಪು ತಪ್ಪಾಗಿ ಗೋಚರಿಸುತ್ತವೆ. ಅದನ್ನು ಹೇಳುವ ಭರದಲ್ಲಿ ಸಂಬಂಧಗಳು ಹಳಸುತ್ತವೆ. ಅನುಬಂಧಗಳು ಕಳಚುತ್ತವೆ. ಆಕಾಂಕ್ಷೆಗಳು ಅರ್ಥ ಕಳೆದುಕೊಳ್ಳುತ್ತವೆ. ಅವಲಂಬನೆ ನೇಣುಗೆಯುತ್ತದೆ. ಸ್ವಾಭಿಮಾನ ಜಾಗೃತವಾಗುತ್ತದೆ. ಅಭಿಮಾನ ಸತ್ತು ಹೋಗಿರುತ್ತದೆ. ಹೆಜ್ಜೆ ಹೆಜ್ಜೆಗೂ ಅನುಮಾನ ಹೊಂಚು ಹಾಕಿ ಕಾದು ಕುಳಿತು ಇಬ್ಬರ ನಡುವೆ ಬಿರುಕು ತರಲು ಹವಣಿಸುತ್ತಿರುತ್ತದೆ. ಈ ಸಂದರ್ಭದಲ್ಲಿ ಮೈಯೊಳಗೆ ಹೊಕ್ಕ ಮೋಹ ಮಾಯೆ ಮೆಲ್ಲನೆ ಆಚೆ ಹೋಗಿಬಿಟ್ಟಿರುತ್ತದೆ. ವಾಸ್ತವವನ್ನು ಅರಗಿಸಿಕೊಳ್ಳಲಾಗದೆ, ಇಷ್ಟೆಲ್ಲಾ ಆಗಿರುವುದು ಅಂದಿನ ಆ ಮಾಯೆ ಎಂಬುದು ಅರಿವಿಗೆ ಬಂದಾಗ ತನ್ನ ಬಗ್ಗೆ ತನಗೆ ಕೀಳರಿಮೆ ಉಂಟಾಗಿ ಅಕ್ಷರಶಹ ಮೃಗವಾಗುತ್ತಾನೆ. ಅಂದು ಬುದ್ದಿ ಹೇಳಿದವರು ಶತ್ರುಗಳಾಗಿರುತ್ತಾರೆ ಆದರೆ ಇಂದು ಬುದ್ಧಿ ಹೇಳುವವರು ಇಲ್ಲದೆ ಸಂತೈಸುವವರು ಇಲ್ಲದೆ ಅದರಿಂದ ಆಚೆ ಬರಲು ಒದ್ದಾಡುತ್ತಿರುತ್ತಾನೆ. ಅವಳಿಗೋಸ್ಕರ ಎಲ್ಲರನ್ನು ಎಲ್ಲವನ್ನು ದೂರ ಮಾಡಿಕೊಂಡವನಿಗೆ ಈಗ ಅದನ್ನು ಮತ್ತೆ ಪಡೆಯಲಾಗದೆ ಆಗಿರುವ ಗಾಯಕ್ಕೆ ಮುಲಾಮು ಸಿಗದೇ ಬದುಕಿನಲ್ಲಿ ನೋವಿನ ಸುನಾಮಿಯನ್ನೇ ಆಹ್ವಾನಿಸಿಕೊಂಡು ಬಾಳಿನ ವಿನಾಶಕ್ಕೆ ಈಡಾಗುತ್ತಾನೆ. 

      ಈ ಹೆಣ್ಣಿನ ಮಾಯೆ ಎಂಬುದು ಎಷ್ಟೆಲ್ಲಾ ಅನಾಹುತಗಳನ್ನು ಮಾಡಿ ಹೋದರು ಅದು ಬಿಟ್ಟು ಹೋಗಿರುವ ಕುರುಹುಗಳು ಬದುಕಿನ ಪುಟದಲ್ಲಿ ನೋವಿನ ಅಚ್ಚಳಿಯದ ನೆನಪುಗಳಾಗಿ ಉಳಿದು ಹೋಗುತ್ತವೆ. ಮಾಯೆ ಏನೋ ಬಿಟ್ಟಿರುತ್ತದೆ ಆದರೆ ಅದರ ಛಾಯೆ ಶಾಶ್ವತವಾಗಿ ಬೀರೂರಿ ಬಿಟ್ಟಿರುತ್ತದೆ. ಇಷ್ಟೆಲ್ಲ ಹೇಳಿದ ಮೇಲೆ ಹೆಣ್ಣು ಮಾಯೆ ಎಂಬುದು ಒಪ್ಪಿತವಾದರೂ ಆ ಮಾಯೆಯ ಮೋಡಿಗೆ ಸಿಲುಕದ ಹಾಗೆ ಜಾಣ್ಮೆಯನ್ನು ವಹಿಸುವ ವ್ಯಕ್ತಿ ಬದುಕಲ್ಲಿ ಸಫಲನಾಗುತ್ತಾನೆ. ಎಲ್ಲರಿಗೂ ಮಾದರಿಯಾಗಿರುತ್ತಾನೆ. ಅವನು ಗೇರು ಬೀಜದ ಹಾಗೆ ಹಣ್ಣಿಗೆ ಅಂಟಿಕೊಂಡಿದ್ದರು ಅದರ ಯಾವುದೇ ಬಂಧದಲ್ಲಿ ಬಂಧಿಯಾಗದೆ ಆನಂದದ ಬದುಕನ್ನು ಅನುಭವಿಸುತ್ತಾನೆ. ಪ್ರತಿಯೊಬ್ಬನು ಈ ರೀತಿಯಾಗಿ ಬದುಕಿದಾಗ ಮಾಯೆ ಎಂಬುದು ಬಳಿ ಸುಳಿಯಲಾರದೆ ಹೆಣ್ಣು ಎಂಬುದು ಬದುಕಿನ ಬೆಳಕಾಗಿ ಜೀವನಕ್ಕೆ ನೆರಳಾಗಿ ಪಯಣಕ್ಕೆ ಸಹಚಾರಿಯಾಗಿ ಆನಂದಕ್ಕೆ ಅನುರಾಗಿಯಾಗಿ ಸ್ನೇಹದ ಸೇತುವೆಯಾಗಿ ಪ್ರೀತಿಯ ಚೇತನವಾಗಿ ಏಳುಬೀಳುಗಳಲ್ಲಿ ಸಂಗಾತಿಯಾಗಿ ಸಂತೃಪ್ತ ಜೀವನಕ್ಕೆ ಸಹಧರ್ಮಿಣಿಯಾಗಿ ಸಕಲ ಇಷ್ಟಾರ್ಥಗಳನ್ನು ಪೂರೈಸಿ ಜೀವನ ಆರಂಭದ ಮುನ್ನುಡಿಯೊಂದಿಗೆ ಸಾವಿನ ಸಾಮಿಪ್ಯದಲ್ಲಿ ಸಾರ್ಥಕತೆಯ ಬೆನ್ನುಡಿ ಬರೆಯುತ್ತಾಳೆ. ಬಾಳ ಪುಸ್ತಕದಲ್ಲಿ ನೆಮ್ಮದಿಯ ಸಮೃದ್ಧಿಯನ್ನು ಕಟ್ಟಿಕೊಡುವ ಹೆಣ್ಣೊಬ್ಬಳ ಖುಷಿಯ ಹಸ್ತಾಕ್ಷರದೊಂದಿಗೆ ಬಾಳ ಸಂಪುಟದ ಕಪಾಟಿನಲ್ಲಿ ಅಮರವಾಗಿ ಉಳಿಯಲಿ. 

೧೧೨೩ಪಿಎಂ೨೩೦೨೨೦೨೫
ಅಮು ಭಾವಜೀವಿ ಮುಸ್ಟೂರು 

Wednesday, January 8, 2025

*ನಿನ್ನ ಮಡಿಲಲಿ*

ಈ ಕೋಪ ಸರಿಯಿಲ್ಲ 
ಆ ರೂಪ ತಾಳಿರುವೆಯಲ್ಲ
ದೂರುವ ನಿನ್ನ ಕೋರುವೆ 
ಮುದ್ದಾಗಿ ಮಾತಾಡು ಚೆಲುವೆ

ಮುನಿಸು ತರವೇ ಮುಗುದೆ
ನಕ್ಕಾಗ ನೀ ನಮ್ಮ ಹೊಲದ ಗದ್ದೆ
ತಂಗಾಳಿ ನೀಡುವಂತೆ ಮುಂಗುರುಳು 
ಹೂವಾಗಿ ಅರಳಿದವು ಸುಮಗಳು 

ಏಕಾಂಗಿ ಚಂದಿರನಿಗೆ ನೀ ಜೊತೆಯಾಗು 
ಮಿನುಗುವ ತಾರೆಗಳೊಂದಿಗೆ ನೀ ಸೇರಿ ಹೋಗು 
ಹೊಳೆವ ಹೊಂಗೆರೆಯ  ಕಿರಣ ನಿನ್ನ ನಗು 
ನಿನ್ನ ಮಡಿಲಲ್ಲಿ‌ಆಔ‌ಞಞಟಸಸಕೀಸಂಈಂ‌ ಂ‌ಂ‌ ಮಗು nhi hota he jaha 

ನಿನ್ನ ಪ್ರೀತಿಯ ಮಾತು ಜೇನಂತೆ 
ಕೋಪದಿ ನುಡಿದರೆ ಗುಡುಗು ಸಿಡಿಲಂತೆ 
ಆ ನೋಟವು ಕೋಲ್ಮಿಂಚಂತೆ
ನಿನ್ನೊಲವು ಸೋನೆ ಮಳೆಯಂತೆ 

ಸಾಗರ ಕಿನಾರೆಯಲಿ ನಾ ಕಾಯುವೆ 
ಅಲೆಯಾಗಿ ನೀ ಉಕ್ಕಿ ಬರುವ ರಭಸಕೆ
ನಿನ್ನೊಳಗೆ ನಾ ಬೆರೆತು ಹೋಗಿ 
ಮುತ್ತಾಗಿ ಕೊಡುವೆ ನಿನಗೆ ಕಾಣಿಕೆ 

೦೪೫೧ಪಿಎಂ೩೦೧೧೨೦೨೪
*ಅಪ್ಪಾಜಿ ಎ ಮುಸ್ಟೂರು*

ಹಾಕದಿರು ನೀ ಕಣ್ಣೀರು 
ನನ್ನಾಸೆಗದು ತಣ್ಣೀರು 
ನಗುನಗುತ ನೀನಿರು
ಬದುಕಲಿ ಆನಂದದ ಸೊಡರು 

ನಲ್ಮೆಯ ಗೆಳತಿಯೆ ನೀನು 
ನನ್ನ ಪಾಲಿಗೆ ಸವಿ ಜೇನು 
ನೀನಾಡುವ ಮಾತೆಲ್ಲ ನನಗೆ 
ಸ್ಪೂರ್ತಿಯ ಚಿಮ್ಮು ಹಲಗೆ 

ಹೃದಯಕ್ಕೆ ನೀ ಹೇಳು ಸಾಂತ್ವನ 
ಪ್ರೀತಿಯಲಿ ಬರೆವೆನಾಗ ಕವನ
ಖುಷಿ ಖುಷಿಯಾಗಿದ್ದರೆ ಜೀವನ
ಸದಾ ಸಂಭ್ರಮದ ಹೂಬನ

ನೀನಿಲ್ಲದ ಈ ಬಾಳು ಸೆರೆವಾಸ 
ನೀನಲ್ಲವೇ ನನ್ನ ಬಾಳ ವಿಶೇಷ 
ಆರಾಧಸುವೆ ನಿನ್ನ ಪ್ರೇಮ ಪೂಜೆಯಲ್ಲಿ
ಆಲಂಗಿಸು ನನ್ನ ನಿನ್ನೀ ತೋಳಬಂದಿಯಲಿ

ನೂರಾರು ಕನಸುಗಳು ನನಸಾಗಲಿ 
ಹೃದಯದ ಬಯಕೆಗಳೆಲ್ಲ ಕೈಗೂಡಲಿ
ಪ್ರೀತಿಯ ಈ ಸಂದೇಶ ಚಿರಾಯುವಾಗಲಿ 
ನಮ್ಮಿಬ್ಬರ ಅನುಬಂಧ ಅಮರವಾಗಲಿ

೦೩೩೨ಪಿಎಂ೦೧೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ನೊಂದಿದೆ ಜೀವ 
ಬೆಂದಿದೆ ಭಾವ
ಸಾವು ಬಯಸೋದು ಸಹಜ
ಬದುಕ ಗೆಲ್ಲು ಓ ಮನುಜ

ಅಮ್ಮ ಕಷ್ಟಪಟ್ಟು ಕೊಟ್ಟ ಜೀವ 
ಅಪ್ಪ ದುಡಿದು ದಣಿದು ನೀಡಿ ಜೀವನ 
ಸಣ್ಣದೊಂದು ಕಾರಣಕ್ಕೆ 
ಸತ್ತು ಬಿಡುವ ಮನಸು ದುರ್ಬಲ 

ಸ್ನೇಹದ ನಂಬಿಕೆಯಾಗು 
ಪ್ರೀತಿಯ ಬೆಂಬವಾಗು
ಬದುಕಿನ ಪ್ರತಿ ಕ್ಷಣವೂ 
ಆನಂದದಿ ಮುಂದೆ ಸಾಗಲಿ 

ಯಾರಿಗಿಲ್ಲ ಇಲ್ಲಿ ನೋವು 
ಯಾರಿಗಿಲ್ಲ ಇಲ್ಲಿ ಸಾವು 
ಹಿಂದೆ ಮುಂದೆ ಹಾದಿಹೋಕರು
ಸರತಿ ಸಾಲಿನಲ್ಲಿ ನಾನು ನೀನು 

ಸಾವೇ ಬಂದು ಕರೆದರೂ 
ಹೋಗದ ವಿಶ್ವಾಸವಿರಲಿ
ಸಾವು ಕೂಡ ಹೆಮ್ಮೆ ಪಡುವ 
ಹಾಗೆ ಈಸಬೇಕು ಇದ್ದು ಜೈಸಬೇಕಿಲ್ಲಿ

ಬಿಡು ಬಿಡು ಚಿಂತೆಯ ಓ ಜೀವವೇ 
ನಡುವೆ ಎದ್ದು ಹೋಗುವುದು ತರವೇ
ನಾಳೆಯ ಭರವಸೆ ಇರಲಿ 
ಇಂದಿನ ಹಂಬಲ ಹೆಚ್ಚಾಗಲಿ 

೩೧೫ಪಿಎಂ೦೨೧೨೨೦೨೪
ಅಪ್ಪಾಜಿ ಎ ಮುಸ್ಟೂರು 

#ಒಲವಿನ #ಭಜನೆ 

ಮೋಡಗಳು ಮುಸುಕಿದ ರಾತ್ರಿಯಲಿ 
ತಂಗಾಳಿ ಬೀಡುವ ಹೊತ್ತಿನಲ್ಲಿ 
ನಿನ್ನ ನೆನಪು ತೇಲಿ ಬಂತು ಮತ್ತಿನಲ್ಲಿ 
ಎದೆಯ ಭಾವಗಳ ನೀರವತೆ 
ವಿರಹ ವೇದನೆಯ ಕವಿತೆ 
ಮರುಕದಲ್ಲಿ ಮುಲುಕುತ್ತಾ ಮಲಗಿದೆ 

ನಿದ್ರೆಯು ಹತ್ತದ ಕಣ್ಗಳಲ್ಲಿ 
ಮದ್ಯಧೂಮಪಾನಗಳ ಜೊತೆಯಲ್ಲಿ 
ಕಥೆಯ ಹೇಳುತ ವ್ಯಥೆಯಲಿ ಓಲಾಡಿದೆ
ಪಾಪಿ ಹೃದಯವ ಕೆರೆದು
ಗಾಯ ಘಾಸಿಗೊಳಿಸಿದ ನೆನಪು 
ಮರೆತರೂ ಮರುಕಳಿಸಿ ಅಣಕಿಸುತ್ತಿದೆ

ಕಪ್ಪೆಗಳ ವಟಗುಟ್ಟುವ ಶಬ್ದ 
ನರಿಗಳು ಕೂಗುವ ಸದ್ದು 
ಓ ಎನ್ನುವ ನಾಯಿಗಳ ಆಕ್ರಂದನ 
ಪ್ರೀತಿಯ ಜೀವವ ಒದ್ದು
ಒಂಟಿ ಬಿಟ್ಟಿರಲು ಇಲ್ಲ ಮದ್ದು 
ಏಕಾಂತವೂ ಇಲ್ಲಿ ನಿತ್ಯ ಬಂಧನ 

ತಬ್ಬಲಿಯು ನೀನಾದೆ ಹೃದಯವೇ 
ನಾ ಒಬ್ಬಂಟಿಯಾದೆ ಓ ಸಮಯವೇ 
ಬೆಳಕು ಹರಿಯುವ ತನಕ ಒಲವಿನದೇ ಭಜನೆ 
ದಕ್ಕಿದ ದಾರಿದ್ರೆಲ್ಲ ನೀಗಿ 
ಮತ್ತೆ ಹೊಸತನದ ಪ್ರೇಮಿಯಾಗಿ 
ದಿನವನ್ನಾರಂಭಿಸುವುದೆನ್ನ ಚಿಂತನೆ 

೧೦೧೨ಪಿಎಂ೦೪೧೨೨೦೨೪
ಅಪ್ಪಾಜಿ ಎ ಮುಸ್ಟೂರು 

*ಬಾಳ ಯಾತ್ರೆಯ ದಿಬ್ಬಣ* 
ನೀಲ ನಭದ ನಿನ್ನ ನಲ್ಮೆಯಲ್ಲಿ 
ಮೂಡಿ ಬಂದ ಚಂದ್ರ ಬಿಂಬ 
ನಿನ್ನ ತಾರುಣ್ಯಕ್ಕೆ ತಲೆಬಾಗಿತು 

ಹಸಿರ ಮಡಿಲ ತೊಟ್ಟಿನಲ್ಲಿ 
ಬಿರಿದ ಮೊಗ್ಗು ಅರಳುವಲ್ಲಿ 
ನಿನ್ನ ರೂಪದ ಗಂಧ ಹೊಮ್ಮಿತು 

ಮುಸ್ಸಂಜೆಯ ರಂಗಲ್ಲಿಯೂ
ಗೋಧೂಳಿಯ ಚಿತ್ರಾವಳಿಯು 
ನಿನ್ನನ್ನೇ ಅಲ್ಲಿ ಚಿತ್ರಿಸಿತ್ತು 

ರಾತ್ರಿ ಕೂಡ ರಮ್ಯವಾಗಿ
ಬೆಳದಿಂಗಳು ಹಿತವಾಗಿ 
ನಿನ್ನನ್ನೇ ಮೋಹಿಸುತ್ತಿತ್ತು 

ನೈದಿಲೆ ಅರಳುವ ಹೊತ್ತು 
ಪೌರ್ಣಿಮೆಯು ಹಾಲು ಚೆಲ್ಲಿತ್ತು 
ನಿನ್ನ ಬರುವಿಕೆಗಾಗಿ ಕಾಯುತ 

ನಲ್ಲ ನಲ್ಲೆಯರ ಸರಸ ಸಲ್ಲಾಪ 
ಇರಹವಿರದ ಸಂತೃಪ್ತ 
ಇಲಿಯಳಧರ ಸವಿಯುತ 

ಮಧುಚಂದ್ರದ ಈ ಮಿಲನ 
ಮಧುಬಟ್ಟಲ ಸವಿ ಪಾನ 
ಬದುಕಿಗೆ ರಸದೌತಣ 

ಬದುಕು ನಿತ್ಯ ನೂತನ 
ಭರವಸೆ ತುಂಬಿದ ಈ ಬಂಧನ 
ಬಾಳಯಾತ್ರೆಯ ದಿಬ್ಬಣ 

೦೫೦೬೦೫೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
*ಒಲವ ಆರಾಧನೆ* 

ಬಾನ ಅಂಚಲ್ಲಿ ಮೂಡಿದ 
ಚಿತ್ತಾರದ ಸವಿ ರೂಪ ನೀನು 
ಇರುಳ ಬಾಂದಳದಲ್ಲಿ ಮಿನುಗುವ 
ತಾರೆಗಳ ಗೆಳತಿಯೇ ನೀನು 

ತಂಗಾಳಿ ತೀಡುವಾಗ ಸಂಭ್ರಮಿಸೋ
ಮುಂಗುರುಳ ಒಡತಿ ನೀನು 
ಬೆಳದಿಂಗಳಗೆ ಉಕ್ಕುವ ಅಲೆಯಂತ
ತಾರುಣ್ಯ ತುಂಬಿದ ತರುಣಿ ನೀನು 

ಹೂ ಬಿಟ್ಟು ಬಳುಕುವ ಲತೆಯಂತೆ
ಸುಮಬಾಲೆ ನಿನ್ನೀ ತನುವ ಸಂಭ್ರಮ 
ಮಧುವನರಸಿ ಬರುವ ದುಂಬಿಯಂತೆ 
ಮುದ್ದಿಸಿ ಮೈ ಮರೆಸಲಿ ನಮ್ಮ ಸಂಗಮ

ಹದವಾಗಿ ನೆನೆದ ಮಣ್ಣಿಂದ ಮೂಡಿದ 
ಸೊಬಗ ಶೃಂಗಾರದ ಪ್ರತಿಮೆ ನೀನು 
ಏನೆಂದು ಬಣ್ಣಿಸಲಿ ನಿನ್ನ ರೂಪ 
ಯಾವ ಉಪಮೆಯು ಸಾಲದು ಇನ್ನು 

ಅಂತರಂಗದ ಭಾಷೆಗೆ ನೀ ನುಡಿಯಾಗು 
ಕವಿ ಭಾವದ ತುಡಿತಕೆ ಮಿಡಿತವಾಗು 
ಎಂದೆಂದಿಗೂ ಅಳಿಯದ ಒಲವಿನ ಚೆಲುವೆ ನೀನು 
ಉಸಿರಿರುವ ತನಕ ಆ ಚೆಲುವಿನ ಆರಾಧಕ ನಾನು 

೦೫೨೧ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಅಂಜಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ 
ಕರ್ನಾಟಕ ರಾಜ್ಯ ಘಟಕ 

ದತ್ತಪದ:- *ಹಸಿವು* 
ಶೀರ್ಷಿಕೆ:- *ಹಸಿದ ಜೀವ* 

ಒಡಲ ಕಡಲು ಬತ್ತಿ
ಎಲುಬು ಮೂಳೆಗೆ ತೊಗಲು ಹತ್ತಿ 
ಚಿಂದಿ ಹುಟ್ಟ ದೇಹದೊಳಗೆ 
ಹಸಿವು ಸಮರ ಸಾರಿದೆ 

ಅಲ್ಲೆಲ್ಲೋ ಮದುವೆ ಮುಂಜಿಗಳಲ್ಲಿ 
ಬಗೆ ಬಗೆಯ ಭಕ್ಷ್ಯ ಭೋಜ್ಯಗಳೆಲ್ಲ
ಹಸಿವಿಲ್ಲದವರ ಎಲೆಯ ಮೇಲೆ 
ಅಸುನೀಗಿ ಮೋರಿ ಸೇರುತ್ತಿದೆ 

ಮುಸುರೆ ಸೇರುವ ಹಳಸಿದನ್ನವ
ಮನೆ ಬಾಗಿಲಿಗೆ ಬಂದವನಿಗಿಕ್ಕುವ
ಹೊಟ್ಟೆ ತುಂಬಿದವರ ಅಟ್ಟಹಾಸಕೆ 
ಮಮ್ಮಲ ಮರುಗಿದೆ ಹಸಿದ ಜೀವ

ಅನ್ನ ದೇವರು ಎಂದು ಹೇಳುವರೆಲ್ಲ 
ನಂಜಿನಂತೆ ಎಂಜಲು ಬಿಟ್ಟು ಹೋಗುವರು
ಹಸಿದವನಿಗೆ ರುಚಿ ತಿಳಿಯುವುದಿಲ್ಲ 
ಹೊಟ್ಟೆ ತುಂಬಿದರೆ ಸಾಕು ಬೇರೇನು ಬೇಕಿಲ್ಲ

ವ್ಯರ್ಥ ಮಾಡುವಿರೇಕೆ ಅನ್ನವನ್ನು 
ಅದರ ಹಿಂದಿನ ಶ್ರಮಿಕರ ಅರಿತಿರುವರೇ ನೀವು 
ಪೈರು ಅನ್ನವಾಗುವವರೆಗೆ 
ಬೆವರು ಸುರಿಸಿದವರೆಷ್ಟೋ ಬಲ್ಲಿರೇನು

೦೫೩೫ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಬೆಳಕೇ ಇರದ ಕಪ್ಪು ಕತ್ತಲ ಹಾದಿ 
ಕಸಿದುಕೊಂಡಿದ್ದು ಬಾಳಿನೆಲ್ಲ ನೆಮ್ಮದಿ 
ಕಷ್ಟಗಳ ಕಾರಿರುಳು ಕವಿದು 
ಹೊಸ ಬೆಳಕಿಗಾಗಿ ಹಂಬಲಿಸುತ್ತಿದೆ ಮನ 

ಹೆಜ್ಜೆ ಹೆಜ್ಜೆಗೂ ಇಲ್ಲಿ ಕಲ್ಲು ಮುಳ್ಳುಗಳದೆ ಪಾರಮ್ಯ 
ಇಂಥ ಸಂಕಷ್ಟದಲ್ಲಿ ಹೇಗೆ ಮುಟ್ಟುವುದು ಗಮ್ಯ 
ಆದರೂ ಎದೆಗುಂದದೆ ಎಚ್ಚರಿಕೆಯ ಹೆಜ್ಜೆನಿಟ್ಟು 
ಗುರಿ ಮುಟ್ಟುವತ್ತ ಸಾಗಿದೆ ಪಯಣ 

ಹಾದಿ ತೋರುವ ಮಾರ್ಗದರ್ಶಕರೆಲ್ಲ 
ಅಲ್ಲಲ್ಲೆ ನಡುವೆ ಬಿಟ್ಟು ಹೋದರು 
ಮನವೆಂಬ ದಿಗ್ದರ್ಶಕನ ಆತ್ಮವಿಶ್ವಾಸ 
ಒಬ್ಬಂಟಿಯಲ್ಲಿ ಛಲ ತುಂಬುತ್ತಿದೆ 

ಏನೇ ಆದರೂ ಗೆಲ್ಲಬೇಕು ಬದುಕನ್ನು 
ಕೊಲ್ಲುವ ಆಯುಧಗಳಿದ್ದರೇನು ಕಾಯುವ ಕೈಗಳಿವೆ 
ಎಂಬ ಭರವಸೆಯ ಈ ಹೋರಾಟ 
ತೆರೆಯುವುದು ಮುಂದೊಂದು ದಿನ ಸಾಧನೆಯ ಸಂಪುಟ 

ಅಂಜದಿರು ಮನವೇ ಮುನ್ನುಗ್ಗು ನೀನು 
ಉಳಿವಿಗಾಗಿ ಇಲ್ಲಿ ಹೋರಾಟ ಅನಿವಾರ್ಯ 
ಗೆಲ್ಲುವ ತನಕ ನೀನಾರಿಗೂ ಗೊತ್ತಾಗದು 
ಗೆದ್ದ ಮೇಲೆ ಜಗವೇ ನಿನ್ನ ಹಿಂದಿಂದೆ ಬರುವುದು

೦೫೫೯ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಎಲ್ಲೆಲ್ಲಿಯೂ ನೀನಿರುವೆ ಎಂದು 
ಹುಡುಕುತ್ತಾ ಅಲೆಯುತ್ತಿರುವೆ 
ಕಾಣದೆ ನೀನು ಎಲ್ಲಿ ಹೋದೆ 

ಬದುಕಿನಲ್ಲಿ ಬಳಲಿ ಬಂದೆ 
ನಿನ್ನ ಪಾದ ಸ್ಪರ್ಶಕಾಗಿ ಕಾದೆ 
ನಿನ್ನ ಕಾಣದೆ ನಾ ಕಂಗಾಲಾದೆ 

ಬರಿ ಕಲ್ಲು ಮುಳ್ಳುಗಳ ತುಳಿದು ಬಂದೆ 
ಹೂ ಹಾಸಿನ ದಾರಿ ಕಾಣದಾದೆ 
ಕೈ ಹಿಡಿದು ಕರೆದುಕೋ ನಿನ್ನ ಬಳಿಗೆ 

ಕನವರಿಕೆಯ ಬದುಕಾಗಿದೆ 
ಕಣ್ಣಾಲಿಗಳು ಮಂಜಾಗಿವೆ
ಈ ನಂಜನು ನೀಗಿಸು 

ಅಂತರಂಗವೀಗ ಶುದ್ದಿಯಾಗುತ್ತಿದೆ 
ಅಹಂಕಾರವೆಲ್ಲ ಕಮರಿಹೋಗಿದೆ 
ಶರಣಾಗತಿಯೊಂದೇ ನಿನ್ನ ತೋರಿದೆ 

ಆತ್ಮದೊಂದಿಗೆ ಪರಮಾತ್ಮ ನೀ ಬೆರೆತು ಹೋಗು 
ದೈವ ಸಾನಿಧ್ಯದಲ್ಲಿ ನಾ ನಿನ್ನ ಮಗು 
ಕರಪಿಡಿದು ನಿನ್ನ ಮಡಿಲಲ್ಲಿ ಮಲಗಿಸು 

ಬವಣೆಗಳ ಸಮರ ನಿಲ್ಲಲಿ 
ಪ್ರೀತಿಯ ಪ್ರಕಾರ ಎಚ್ಚಲಿ 
ನೋವಿಗೆ ನೀ ನೀಡು ಮದ್ದು 

ನಿನ್ನಾಲಯಕ್ಕೆ ಬಂದಿರುವೆ 
ನಿನ್ನ ಕಣ್ಮುಂದೆ ಪೊಡಮಟ್ಟಿರುವೆ
ಪೊರೆಯುವ ಹೊಣೆ ನಿನ್ನದು ದೇವ

೦೬೧೮ಎಎಂ೦೮೧೨೨೨೪
*ಅಪ್ಪಾಜಿ ಎ ಮುಸ್ಟೂರು* 

#ಎಲ್ಲಾ #ಪಾತ್ರಕೂ #ಹೊಂದುವ #ಪಡಿಯಚ್ಚು 

ಅಂತರಂಗ ನೋಯುತ್ತಿದೆ 
ಅನುಬಂಧ ಕಳಚುತಿದೆ 
ಏಕೆ ಹೀಗೆ ಎನ್ನುವುದು 
ಅರಿಯದಾಗಿ ಹೋಗಿದೆ 

ಪ್ರೀತಿ ಬೆಸೆದ ಬಾಂಧವ್ಯ 
ನೋವ ನೀಡುವುದು ಸಂಭಾವ್ಯ 
ಕಾರಣ ಏನೇ ಇದ್ದರೂ 
ನೋವಿಗೆ ಮದ್ದು ನೀನೇ ಇನಿಯ 

ಎದೆಯ ಭಾವಗಳ ಬೆಳಕಿಗೆ 
ಗ್ರಹಣ ಬಡಿದು ಕತ್ತಲಾಗಿ 
ಕಣ್ಣೀರಿನ ಹನಿಗಳ ಸಾಲು 
ಬತ್ತಿ ಹೋಗಿದೆ ವೇದನೆಗೆ 

ನನ್ನವರೆಂಬುವರೆಲ್ಲರೂ ದೂರ 
ನನ್ನವರೆಂದು ಕೊಂಡವರಿಗೆಲ್ಲ ನಾ ಭಾರ 
ಬದುಕಿನ ಯಾನಕ್ಕೆ ತಿರುವುಗಳು ನೂರು 
ದಿಕ್ಕು ತಪ್ಪಿದೆ ಗುರಿ ತೋರುವರಾರು 

ಹೆಣ್ಣಿನ ಬಾಳೆ ಹೀಗೆ 
ಸ್ವಂತಿಕೆ ಇಲ್ಲದ ಮಣ್ಣಿನ ಹಾಗೆ 
ಬೇಕಾದವರು ಬೇಕಾದ ರೂಪ ನೀಡಿ 
ಹೆಣ್ಣಿನ ಬದುಕಿಗೆ ಕೊಟ್ಟರು ಬೇಕಾದ ಹೆಸರು 

ತಾಯಿ ಮಡದಿ ಮಗಳು ಸೋದರಿ 
ಗೆಳತಿ ಗುರು ಇನ್ನು ಏನೇನು ಹೆಸರು 
ಎಲ್ಲ ಪಾತ್ರಗಳಿಗೂ ಹೊಂದುವ ಪಡಿಯಚ್ಚು
ಹೆಣ್ಣೆಂಬ ದೇಹಕ್ಕೆ ಕಣ್ಣಾಗರು ಯಾರು 

೦೮೨೧ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಕವನ

*ನಿನ್ನ ಮಡಿಲಲಿ*

ಈ ಕೋಪ ಸರಿಯಿಲ್ಲ 
ಆ ರೂಪ ತಾಳಿರುವೆಯಲ್ಲ
ದೂರುವ ನಿನ್ನ ಕೋರುವೆ 
ಮುದ್ದಾಗಿ ಮಾತಾಡು ಚೆಲುವೆ

ಮುನಿಸು ತರವೇ ಮುಗುದೆ
ನಕ್ಕಾಗ ನೀ ನಮ್ಮ ಹೊಲದ ಗದ್ದೆ
ತಂಗಾಳಿ ನೀಡುವಂತೆ ಮುಂಗುರುಳು 
ಹೂವಾಗಿ ಅರಳಿದವು ಸುಮಗಳು 

ಏಕಾಂಗಿ ಚಂದಿರನಿಗೆ ನೀ ಜೊತೆಯಾಗು 
ಮಿನುಗುವ ತಾರೆಗಳೊಂದಿಗೆ ನೀ ಸೇರಿ ಹೋಗು 
ಹೊಳೆವ ಹೊಂಗೆರೆಯ  ಕಿರಣ ನಿನ್ನ ನಗು 
ನಿನ್ನ ಮಡಿಲಲ್ಲಿ ನಾನಾಗುವೆ ಮಗು 

ನಿನ್ನ ಪ್ರೀತಿಯ ಮಾತು ಜೇನಂತೆ 
ಕೋಪದಿ ನುಡಿದರೆ ಗುಡುಗು ಸಿಡಿಲಂತೆ 
ಆ ನೋಟವು ಕೋಲ್ಮಿಂಚಂತೆ
ನಿನ್ನೊಲವು ಸೋನೆ ಮಳೆಯಂತೆ 

ಸಾಗರ ಕಿನಾರೆಯಲಿ ನಾ ಕಾಯುವೆ 
ಅಲೆಯಾಗಿ ನೀ ಉಕ್ಕಿ ಬರುವ ರಭಸಕೆ
ನಿನ್ನೊಳಗೆ ನಾ ಬೆರೆತು ಹೋಗಿ 
ಮುತ್ತಾಗಿ ಕೊಡುವೆ ನಿನಗೆ ಕಾಣಿಕೆ 

೦೪೫೧ಪಿಎಂ೩೦೧೧೨೦೨೪
*ಅಪ್ಪಾಜಿ ಎ ಮುಸ್ಟೂರು*

ಹಾಕದಿರು ನೀ ಕಣ್ಣೀರು 
ನನ್ನಾಸೆಗದು ತಣ್ಣೀರು 
ನಗುನಗುತ ನೀನಿರು
ಬದುಕಲಿ ಆನಂದದ ಸೊಡರು 

ನಲ್ಮೆಯ ಗೆಳತಿಯೆ ನೀನು 
ನನ್ನ ಪಾಲಿಗೆ ಸವಿ ಜೇನು 
ನೀನಾಡುವ ಮಾತೆಲ್ಲ ನನಗೆ 
ಸ್ಪೂರ್ತಿಯ ಚಿಮ್ಮು ಹಲಗೆ 

ಹೃದಯಕ್ಕೆ ನೀ ಹೇಳು ಸಾಂತ್ವನ 
ಪ್ರೀತಿಯಲಿ ಬರೆವೆನಾಗ ಕವನ
ಖುಷಿ ಖುಷಿಯಾಗಿದ್ದರೆ ಜೀವನ
ಸದಾ ಸಂಭ್ರಮದ ಹೂಬನ

ನೀನಿಲ್ಲದ ಈ ಬಾಳು ಸೆರೆವಾಸ 
ನೀನಲ್ಲವೇ ನನ್ನ ಬಾಳ ವಿಶೇಷ 
ಆರಾಧಸುವೆ ನಿನ್ನ ಪ್ರೇಮ ಪೂಜೆಯಲ್ಲಿ
ಆಲಂಗಿಸು ನನ್ನ ನಿನ್ನೀ ತೋಳಬಂದಿಯಲಿ

ನೂರಾರು ಕನಸುಗಳು ನನಸಾಗಲಿ 
ಹೃದಯದ ಬಯಕೆಗಳೆಲ್ಲ ಕೈಗೂಡಲಿ
ಪ್ರೀತಿಯ ಈ ಸಂದೇಶ ಚಿರಾಯುವಾಗಲಿ 
ನಮ್ಮಿಬ್ಬರ ಅನುಬಂಧ ಅಮರವಾಗಲಿ

೦೩೩೨ಪಿಎಂ೦೧೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ನೊಂದಿದೆ ಜೀವ 
ಬೆಂದಿದೆ ಭಾವ
ಸಾವು ಬಯಸೋದು ಸಹಜ
ಬದುಕ ಗೆಲ್ಲು ಓ ಮನುಜ

ಅಮ್ಮ ಕಷ್ಟಪಟ್ಟು ಕೊಟ್ಟ ಜೀವ 
ಅಪ್ಪ ದುಡಿದು ದಣಿದು ನೀಡಿ ಜೀವನ 
ಸಣ್ಣದೊಂದು ಕಾರಣಕ್ಕೆ 
ಸತ್ತು ಬಿಡುವ ಮನಸು ದುರ್ಬಲ 

ಸ್ನೇಹದ ನಂಬಿಕೆಯಾಗು 
ಪ್ರೀತಿಯ ಬೆಂಬವಾಗು
ಬದುಕಿನ ಪ್ರತಿ ಕ್ಷಣವೂ 
ಆನಂದದಿ ಮುಂದೆ ಸಾಗಲಿ 

ಯಾರಿಗಿಲ್ಲ ಇಲ್ಲಿ ನೋವು 
ಯಾರಿಗಿಲ್ಲ ಇಲ್ಲಿ ಸಾವು 
ಹಿಂದೆ ಮುಂದೆ ಹಾದಿಹೋಕರು
ಸರತಿ ಸಾಲಿನಲ್ಲಿ ನಾನು ನೀನು 

ಸಾವೇ ಬಂದು ಕರೆದರೂ 
ಹೋಗದ ವಿಶ್ವಾಸವಿರಲಿ
ಸಾವು ಕೂಡ ಹೆಮ್ಮೆ ಪಡುವ 
ಹಾಗೆ ಈಸಬೇಕು ಇದ್ದು ಜೈಸಬೇಕಿಲ್ಲಿ

ಬಿಡು ಬಿಡು ಚಿಂತೆಯ ಓ ಜೀವವೇ 
ನಡುವೆ ಎದ್ದು ಹೋಗುವುದು ತರವೇ
ನಾಳೆಯ ಭರವಸೆ ಇರಲಿ 
ಇಂದಿನ ಹಂಬಲ ಹೆಚ್ಚಾಗಲಿ 

೩೧೫ಪಿಎಂ೦೨೧೨೨೦೨೪
ಅಪ್ಪಾಜಿ ಎ ಮುಸ್ಟೂರು 

#ಒಲವಿನ #ಭಜನೆ 

ಮೋಡಗಳು ಮುಸುಕಿದ ರಾತ್ರಿಯಲಿ 
ತಂಗಾಳಿ ಬೀಡುವ ಹೊತ್ತಿನಲ್ಲಿ 
ನಿನ್ನ ನೆನಪು ತೇಲಿ ಬಂತು ಮತ್ತಿನಲ್ಲಿ 
ಎದೆಯ ಭಾವಗಳ ನೀರವತೆ 
ವಿರಹ ವೇದನೆಯ ಕವಿತೆ 
ಮರುಕದಲ್ಲಿ ಮುಲುಕುತ್ತಾ ಮಲಗಿದೆ 

ನಿದ್ರೆಯು ಹತ್ತದ ಕಣ್ಗಳಲ್ಲಿ 
ಮದ್ಯಧೂಮಪಾನಗಳ ಜೊತೆಯಲ್ಲಿ 
ಕಥೆಯ ಹೇಳುತ ವ್ಯಥೆಯಲಿ ಓಲಾಡಿದೆ
ಪಾಪಿ ಹೃದಯವ ಕೆರೆದು
ಗಾಯ ಘಾಸಿಗೊಳಿಸಿದ ನೆನಪು 
ಮರೆತರೂ ಮರುಕಳಿಸಿ ಅಣಕಿಸುತ್ತಿದೆ

ಕಪ್ಪೆಗಳ ವಟಗುಟ್ಟುವ ಶಬ್ದ 
ನರಿಗಳು ಕೂಗುವ ಸದ್ದು 
ಓ ಎನ್ನುವ ನಾಯಿಗಳ ಆಕ್ರಂದನ 
ಪ್ರೀತಿಯ ಜೀವವ ಒದ್ದು
ಒಂಟಿ ಬಿಟ್ಟಿರಲು ಇಲ್ಲ ಮದ್ದು 
ಏಕಾಂತವೂ ಇಲ್ಲಿ ನಿತ್ಯ ಬಂಧನ 

ತಬ್ಬಲಿಯು ನೀನಾದೆ ಹೃದಯವೇ 
ನಾ ಒಬ್ಬಂಟಿಯಾದೆ ಓ ಸಮಯವೇ 
ಬೆಳಕು ಹರಿಯುವ ತನಕ ಒಲವಿನದೇ ಭಜನೆ 
ದಕ್ಕಿದ ದಾರಿದ್ರೆಲ್ಲ ನೀಗಿ 
ಮತ್ತೆ ಹೊಸತನದ ಪ್ರೇಮಿಯಾಗಿ 
ದಿನವನ್ನಾರಂಭಿಸುವುದೆನ್ನ ಚಿಂತನೆ 

೧೦೧೨ಪಿಎಂ೦೪೧೨೨೦೨೪
ಅಪ್ಪಾಜಿ ಎ ಮುಸ್ಟೂರು 

*ಬಾಳ ಯಾತ್ರೆಯ ದಿಬ್ಬಣ* 
ನೀಲ ನಭದ ನಿನ್ನ ನಲ್ಮೆಯಲ್ಲಿ 
ಮೂಡಿ ಬಂದ ಚಂದ್ರ ಬಿಂಬ 
ನಿನ್ನ ತಾರುಣ್ಯಕ್ಕೆ ತಲೆಬಾಗಿತು 

ಹಸಿರ ಮಡಿಲ ತೊಟ್ಟಿನಲ್ಲಿ 
ಬಿರಿದ ಮೊಗ್ಗು ಅರಳುವಲ್ಲಿ 
ನಿನ್ನ ರೂಪದ ಗಂಧ ಹೊಮ್ಮಿತು 

ಮುಸ್ಸಂಜೆಯ ರಂಗಲ್ಲಿಯೂ
ಗೋಧೂಳಿಯ ಚಿತ್ರಾವಳಿಯು 
ನಿನ್ನನ್ನೇ ಅಲ್ಲಿ ಚಿತ್ರಿಸಿತ್ತು 

ರಾತ್ರಿ ಕೂಡ ರಮ್ಯವಾಗಿ
ಬೆಳದಿಂಗಳು ಹಿತವಾಗಿ 
ನಿನ್ನನ್ನೇ ಮೋಹಿಸುತ್ತಿತ್ತು 

ನೈದಿಲೆ ಅರಳುವ ಹೊತ್ತು 
ಪೌರ್ಣಿಮೆಯು ಹಾಲು ಚೆಲ್ಲಿತ್ತು 
ನಿನ್ನ ಬರುವಿಕೆಗಾಗಿ ಕಾಯುತ 

ನಲ್ಲ ನಲ್ಲೆಯರ ಸರಸ ಸಲ್ಲಾಪ 
ಇರಹವಿರದ ಸಂತೃಪ್ತ 
ಇಲಿಯಳಧರ ಸವಿಯುತ 

ಮಧುಚಂದ್ರದ ಈ ಮಿಲನ 
ಮಧುಬಟ್ಟಲ ಸವಿ ಪಾನ 
ಬದುಕಿಗೆ ರಸದೌತಣ 

ಬದುಕು ನಿತ್ಯ ನೂತನ 
ಭರವಸೆ ತುಂಬಿದ ಈ ಬಂಧನ 
ಬಾಳಯಾತ್ರೆಯ ದಿಬ್ಬಣ 

೦೫೦೬೦೫೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
*ಒಲವ ಆರಾಧನೆ* 

ಬಾನ ಅಂಚಲ್ಲಿ ಮೂಡಿದ 
ಚಿತ್ತಾರದ ಸವಿ ರೂಪ ನೀನು 
ಇರುಳ ಬಾಂದಳದಲ್ಲಿ ಮಿನುಗುವ 
ತಾರೆಗಳ ಗೆಳತಿಯೇ ನೀನು 

ತಂಗಾಳಿ ತೀಡುವಾಗ ಸಂಭ್ರಮಿಸೋ
ಮುಂಗುರುಳ ಒಡತಿ ನೀನು 
ಬೆಳದಿಂಗಳಗೆ ಉಕ್ಕುವ ಅಲೆಯಂತ
ತಾರುಣ್ಯ ತುಂಬಿದ ತರುಣಿ ನೀನು 

ಹೂ ಬಿಟ್ಟು ಬಳುಕುವ ಲತೆಯಂತೆ
ಸುಮಬಾಲೆ ನಿನ್ನೀ ತನುವ ಸಂಭ್ರಮ 
ಮಧುವನರಸಿ ಬರುವ ದುಂಬಿಯಂತೆ 
ಮುದ್ದಿಸಿ ಮೈ ಮರೆಸಲಿ ನಮ್ಮ ಸಂಗಮ

ಹದವಾಗಿ ನೆನೆದ ಮಣ್ಣಿಂದ ಮೂಡಿದ 
ಸೊಬಗ ಶೃಂಗಾರದ ಪ್ರತಿಮೆ ನೀನು 
ಏನೆಂದು ಬಣ್ಣಿಸಲಿ ನಿನ್ನ ರೂಪ 
ಯಾವ ಉಪಮೆಯು ಸಾಲದು ಇನ್ನು 

ಅಂತರಂಗದ ಭಾಷೆಗೆ ನೀ ನುಡಿಯಾಗು 
ಕವಿ ಭಾವದ ತುಡಿತಕೆ ಮಿಡಿತವಾಗು 
ಎಂದೆಂದಿಗೂ ಅಳಿಯದ ಒಲವಿನ ಚೆಲುವೆ ನೀನು 
ಉಸಿರಿರುವ ತನಕ ಆ ಚೆಲುವಿನ ಆರಾಧಕ ನಾನು 

೦೫೨೧ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಅಂಜಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ 
ಕರ್ನಾಟಕ ರಾಜ್ಯ ಘಟಕ 

ದತ್ತಪದ:- *ಹಸಿವು* 
ಶೀರ್ಷಿಕೆ:- *ಹಸಿದ ಜೀವ* 

ಒಡಲ ಕಡಲು ಬತ್ತಿ
ಎಲುಬು ಮೂಳೆಗೆ ತೊಗಲು ಹತ್ತಿ 
ಚಿಂದಿ ಹುಟ್ಟ ದೇಹದೊಳಗೆ 
ಹಸಿವು ಸಮರ ಸಾರಿದೆ 

ಅಲ್ಲೆಲ್ಲೋ ಮದುವೆ ಮುಂಜಿಗಳಲ್ಲಿ 
ಬಗೆ ಬಗೆಯ ಭಕ್ಷ್ಯ ಭೋಜ್ಯಗಳೆಲ್ಲ
ಹಸಿವಿಲ್ಲದವರ ಎಲೆಯ ಮೇಲೆ 
ಅಸುನೀಗಿ ಮೋರಿ ಸೇರುತ್ತಿದೆ 

ಮುಸುರೆ ಸೇರುವ ಹಳಸಿದನ್ನವ
ಮನೆ ಬಾಗಿಲಿಗೆ ಬಂದವನಿಗಿಕ್ಕುವ
ಹೊಟ್ಟೆ ತುಂಬಿದವರ ಅಟ್ಟಹಾಸಕೆ 
ಮಮ್ಮಲ ಮರುಗಿದೆ ಹಸಿದ ಜೀವ

ಅನ್ನ ದೇವರು ಎಂದು ಹೇಳುವರೆಲ್ಲ 
ನಂಜಿನಂತೆ ಎಂಜಲು ಬಿಟ್ಟು ಹೋಗುವರು
ಹಸಿದವನಿಗೆ ರುಚಿ ತಿಳಿಯುವುದಿಲ್ಲ 
ಹೊಟ್ಟೆ ತುಂಬಿದರೆ ಸಾಕು ಬೇರೇನು ಬೇಕಿಲ್ಲ

ವ್ಯರ್ಥ ಮಾಡುವಿರೇಕೆ ಅನ್ನವನ್ನು 
ಅದರ ಹಿಂದಿನ ಶ್ರಮಿಕರ ಅರಿತಿರುವರೇ ನೀವು 
ಪೈರು ಅನ್ನವಾಗುವವರೆಗೆ 
ಬೆವರು ಸುರಿಸಿದವರೆಷ್ಟೋ ಬಲ್ಲಿರೇನು

೦೫೩೫ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಬೆಳಕೇ ಇರದ ಕಪ್ಪು ಕತ್ತಲ ಹಾದಿ 
ಕಸಿದುಕೊಂಡಿದ್ದು ಬಾಳಿನೆಲ್ಲ ನೆಮ್ಮದಿ 
ಕಷ್ಟಗಳ ಕಾರಿರುಳು ಕವಿದು 
ಹೊಸ ಬೆಳಕಿಗಾಗಿ ಹಂಬಲಿಸುತ್ತಿದೆ ಮನ 

ಹೆಜ್ಜೆ ಹೆಜ್ಜೆಗೂ ಇಲ್ಲಿ ಕಲ್ಲು ಮುಳ್ಳುಗಳದೆ ಪಾರಮ್ಯ 
ಇಂಥ ಸಂಕಷ್ಟದಲ್ಲಿ ಹೇಗೆ ಮುಟ್ಟುವುದು ಗಮ್ಯ 
ಆದರೂ ಎದೆಗುಂದದೆ ಎಚ್ಚರಿಕೆಯ ಹೆಜ್ಜೆನಿಟ್ಟು 
ಗುರಿ ಮುಟ್ಟುವತ್ತ ಸಾಗಿದೆ ಪಯಣ 

ಹಾದಿ ತೋರುವ ಮಾರ್ಗದರ್ಶಕರೆಲ್ಲ 
ಅಲ್ಲಲ್ಲೆ ನಡುವೆ ಬಿಟ್ಟು ಹೋದರು 
ಮನವೆಂಬ ದಿಗ್ದರ್ಶಕನ ಆತ್ಮವಿಶ್ವಾಸ 
ಒಬ್ಬಂಟಿಯಲ್ಲಿ ಛಲ ತುಂಬುತ್ತಿದೆ 

ಏನೇ ಆದರೂ ಗೆಲ್ಲಬೇಕು ಬದುಕನ್ನು 
ಕೊಲ್ಲುವ ಆಯುಧಗಳಿದ್ದರೇನು ಕಾಯುವ ಕೈಗಳಿವೆ 
ಎಂಬ ಭರವಸೆಯ ಈ ಹೋರಾಟ 
ತೆರೆಯುವುದು ಮುಂದೊಂದು ದಿನ ಸಾಧನೆಯ ಸಂಪುಟ 

ಅಂಜದಿರು ಮನವೇ ಮುನ್ನುಗ್ಗು ನೀನು 
ಉಳಿವಿಗಾಗಿ ಇಲ್ಲಿ ಹೋರಾಟ ಅನಿವಾರ್ಯ 
ಗೆಲ್ಲುವ ತನಕ ನೀನಾರಿಗೂ ಗೊತ್ತಾಗದು 
ಗೆದ್ದ ಮೇಲೆ ಜಗವೇ ನಿನ್ನ ಹಿಂದಿಂದೆ ಬರುವುದು

೦೫೫೯ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಎಲ್ಲೆಲ್ಲಿಯೂ ನೀನಿರುವೆ ಎಂದು 
ಹುಡುಕುತ್ತಾ ಅಲೆಯುತ್ತಿರುವೆ 
ಕಾಣದೆ ನೀನು ಎಲ್ಲಿ ಹೋದೆ 

ಬದುಕಿನಲ್ಲಿ ಬಳಲಿ ಬಂದೆ 
ನಿನ್ನ ಪಾದ ಸ್ಪರ್ಶಕಾಗಿ ಕಾದೆ 
ನಿನ್ನ ಕಾಣದೆ ನಾ ಕಂಗಾಲಾದೆ 

ಬರಿ ಕಲ್ಲು ಮುಳ್ಳುಗಳ ತುಳಿದು ಬಂದೆ 
ಹೂ ಹಾಸಿನ ದಾರಿ ಕಾಣದಾದೆ 
ಕೈ ಹಿಡಿದು ಕರೆದುಕೋ ನಿನ್ನ ಬಳಿಗೆ 

ಕನವರಿಕೆಯ ಬದುಕಾಗಿದೆ 
ಕಣ್ಣಾಲಿಗಳು ಮಂಜಾಗಿವೆ
ಈ ನಂಜನು ನೀಗಿಸು 

ಅಂತರಂಗವೀಗ ಶುದ್ದಿಯಾಗುತ್ತಿದೆ 
ಅಹಂಕಾರವೆಲ್ಲ ಕಮರಿಹೋಗಿದೆ 
ಶರಣಾಗತಿಯೊಂದೇ ನಿನ್ನ ತೋರಿದೆ 

ಆತ್ಮದೊಂದಿಗೆ ಪರಮಾತ್ಮ ನೀ ಬೆರೆತು ಹೋಗು 
ದೈವ ಸಾನಿಧ್ಯದಲ್ಲಿ ನಾ ನಿನ್ನ ಮಗು 
ಕರಪಿಡಿದು ನಿನ್ನ ಮಡಿಲಲ್ಲಿ ಮಲಗಿಸು 

ಬವಣೆಗಳ ಸಮರ ನಿಲ್ಲಲಿ 
ಪ್ರೀತಿಯ ಪ್ರಕಾರ ಎಚ್ಚಲಿ 
ನೋವಿಗೆ ನೀ ನೀಡು ಮದ್ದು 

ನಿನ್ನಾಲಯಕ್ಕೆ ಬಂದಿರುವೆ 
ನಿನ್ನ ಕಣ್ಮುಂದೆ ಪೊಡಮಟ್ಟಿರುವೆ
ಪೊರೆಯುವ ಹೊಣೆ ನಿನ್ನದು ದೇವ

೦೬೧೮ಎಎಂ೦೮೧೨೨೨೪
*ಅಪ್ಪಾಜಿ ಎ ಮುಸ್ಟೂರು* 

#ಎಲ್ಲಾ #ಪಾತ್ರಕೂ #ಹೊಂದುವ #ಪಡಿಯಚ್ಚು 

ಅಂತರಂಗ ನೋಯುತ್ತಿದೆ 
ಅನುಬಂಧ ಕಳಚುತಿದೆ 
ಏಕೆ ಹೀಗೆ ಎನ್ನುವುದು 
ಅರಿಯದಾಗಿ ಹೋಗಿದೆ 

ಪ್ರೀತಿ ಬೆಸೆದ ಬಾಂಧವ್ಯ 
ನೋವ ನೀಡುವುದು ಸಂಭಾವ್ಯ 
ಕಾರಣ ಏನೇ ಇದ್ದರೂ 
ನೋವಿಗೆ ಮದ್ದು ನೀನೇ ಇನಿಯ 

ಎದೆಯ ಭಾವಗಳ ಬೆಳಕಿಗೆ 
ಗ್ರಹಣ ಬಡಿದು ಕತ್ತಲಾಗಿ 
ಕಣ್ಣೀರಿನ ಹನಿಗಳ ಸಾಲು 
ಬತ್ತಿ ಹೋಗಿದೆ ವೇದನೆಗೆ 

ನನ್ನವರೆಂಬುವರೆಲ್ಲರೂ ದೂರ 
ನನ್ನವರೆಂದು ಕೊಂಡವರಿಗೆಲ್ಲ ನಾ ಭಾರ 
ಬದುಕಿನ ಯಾನಕ್ಕೆ ತಿರುವುಗಳು ನೂರು 
ದಿಕ್ಕು ತಪ್ಪಿದೆ ಗುರಿ ತೋರುವರಾರು 

ಹೆಣ್ಣಿನ ಬಾಳೆ ಹೀಗೆ 
ಸ್ವಂತಿಕೆ ಇಲ್ಲದ ಮಣ್ಣಿನ ಹಾಗೆ 
ಬೇಕಾದವರು ಬೇಕಾದ ರೂಪ ನೀಡಿ 
ಹೆಣ್ಣಿನ ಬದುಕಿಗೆ ಕೊಟ್ಟರು ಬೇಕಾದ ಹೆಸರು 

ತಾಯಿ ಮಡದಿ ಮಗಳು ಸೋದರಿ 
ಗೆಳತಿ ಗುರು ಇನ್ನು ಏನೇನು ಹೆಸರು 
ಎಲ್ಲ ಪಾತ್ರಗಳಿಗೂ ಹೊಂದುವ ಪಡಿಯಚ್ಚು
ಹೆಣ್ಣೆಂಬ ದೇಹಕ್ಕೆ ಕಣ್ಣಾಗರು ಯಾರು 

೦೮೨೧ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಕವನ

*ನಿನ್ನ ಮಡಿಲಲಿ*

ಈ ಕೋಪ ಸರಿಯಿಲ್ಲ 
ಆ ರೂಪ ತಾಳಿರುವೆಯಲ್ಲ
ದೂರುವ ನಿನ್ನ ಕೋರುವೆ 
ಮುದ್ದಾಗಿ ಮಾತಾಡು ಚೆಲುವೆ

ಮುನಿಸು ತರವೇ ಮುಗುದೆ
ನಕ್ಕಾಗ ನೀ ನಮ್ಮ ಹೊಲದ ಗದ್ದೆ
ತಂಗಾಳಿ ನೀಡುವಂತೆ ಮುಂಗುರುಳು 
ಹೂವಾಗಿ ಅರಳಿದವು ಸುಮಗಳು 

ಏಕಾಂಗಿ ಚಂದಿರನಿಗೆ ನೀ ಜೊತೆಯಾಗು 
ಮಿನುಗುವ ತಾರೆಗಳೊಂದಿಗೆ ನೀ ಸೇರಿ ಹೋಗು 
ಹೊಳೆವ ಹೊಂಗೆರೆಯ  ಕಿರಣ ನಿನ್ನ ನಗು 
ನಿನ್ನ ಮಡಿಲಲ್ಲಿ ನಾನಾಗುವೆ ಮಗು 

ನಿನ್ನ ಪ್ರೀತಿಯ ಮಾತು ಜೇನಂತೆ 
ಕೋಪದಿ ನುಡಿದರೆ ಗುಡುಗು ಸಿಡಿಲಂತೆ 
ಆ ನೋಟವು ಕೋಲ್ಮಿಂಚಂತೆ
ನಿನ್ನೊಲವು ಸೋನೆ ಮಳೆಯಂತೆ 

ಸಾಗರ ಕಿನಾರೆಯಲಿ ನಾ ಕಾಯುವೆ 
ಅಲೆಯಾಗಿ ನೀ ಉಕ್ಕಿ ಬರುವ ರಭಸಕೆ
ನಿನ್ನೊಳಗೆ ನಾ ಬೆರೆತು ಹೋಗಿ 
ಮುತ್ತಾಗಿ ಕೊಡುವೆ ನಿನಗೆ ಕಾಣಿಕೆ 

೦೪೫೧ಪಿಎಂ೩೦೧೧೨೦೨೪
*ಅಪ್ಪಾಜಿ ಎ ಮುಸ್ಟೂರು*

ಹಾಕದಿರು ನೀ ಕಣ್ಣೀರು 
ನನ್ನಾಸೆಗದು ತಣ್ಣೀರು 
ನಗುನಗುತ ನೀನಿರು
ಬದುಕಲಿ ಆನಂದದ ಸೊಡರು 

ನಲ್ಮೆಯ ಗೆಳತಿಯೆ ನೀನು 
ನನ್ನ ಪಾಲಿಗೆ ಸವಿ ಜೇನು 
ನೀನಾಡುವ ಮಾತೆಲ್ಲ ನನಗೆ 
ಸ್ಪೂರ್ತಿಯ ಚಿಮ್ಮು ಹಲಗೆ 

ಹೃದಯಕ್ಕೆ ನೀ ಹೇಳು ಸಾಂತ್ವನ 
ಪ್ರೀತಿಯಲಿ ಬರೆವೆನಾಗ ಕವನ
ಖುಷಿ ಖುಷಿಯಾಗಿದ್ದರೆ ಜೀವನ
ಸದಾ ಸಂಭ್ರಮದ ಹೂಬನ

ನೀನಿಲ್ಲದ ಈ ಬಾಳು ಸೆರೆವಾಸ 
ನೀನಲ್ಲವೇ ನನ್ನ ಬಾಳ ವಿಶೇಷ 
ಆರಾಧಸುವೆ ನಿನ್ನ ಪ್ರೇಮ ಪೂಜೆಯಲ್ಲಿ
ಆಲಂಗಿಸು ನನ್ನ ನಿನ್ನೀ ತೋಳಬಂದಿಯಲಿ

ನೂರಾರು ಕನಸುಗಳು ನನಸಾಗಲಿ 
ಹೃದಯದ ಬಯಕೆಗಳೆಲ್ಲ ಕೈಗೂಡಲಿ
ಪ್ರೀತಿಯ ಈ ಸಂದೇಶ ಚಿರಾಯುವಾಗಲಿ 
ನಮ್ಮಿಬ್ಬರ ಅನುಬಂಧ ಅಮರವಾಗಲಿ

೦೩೩೨ಪಿಎಂ೦೧೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ನೊಂದಿದೆ ಜೀವ 
ಬೆಂದಿದೆ ಭಾವ
ಸಾವು ಬಯಸೋದು ಸಹಜ
ಬದುಕ ಗೆಲ್ಲು ಓ ಮನುಜ

ಅಮ್ಮ ಕಷ್ಟಪಟ್ಟು ಕೊಟ್ಟ ಜೀವ 
ಅಪ್ಪ ದುಡಿದು ದಣಿದು ನೀಡಿ ಜೀವನ 
ಸಣ್ಣದೊಂದು ಕಾರಣಕ್ಕೆ 
ಸತ್ತು ಬಿಡುವ ಮನಸು ದುರ್ಬಲ 

ಸ್ನೇಹದ ನಂಬಿಕೆಯಾಗು 
ಪ್ರೀತಿಯ ಬೆಂಬವಾಗು
ಬದುಕಿನ ಪ್ರತಿ ಕ್ಷಣವೂ 
ಆನಂದದಿ ಮುಂದೆ ಸಾಗಲಿ 

ಯಾರಿಗಿಲ್ಲ ಇಲ್ಲಿ ನೋವು 
ಯಾರಿಗಿಲ್ಲ ಇಲ್ಲಿ ಸಾವು 
ಹಿಂದೆ ಮುಂದೆ ಹಾದಿಹೋಕರು
ಸರತಿ ಸಾಲಿನಲ್ಲಿ ನಾನು ನೀನು 

ಸಾವೇ ಬಂದು ಕರೆದರೂ 
ಹೋಗದ ವಿಶ್ವಾಸವಿರಲಿ
ಸಾವು ಕೂಡ ಹೆಮ್ಮೆ ಪಡುವ 
ಹಾಗೆ ಈಸಬೇಕು ಇದ್ದು ಜೈಸಬೇಕಿಲ್ಲಿ

ಬಿಡು ಬಿಡು ಚಿಂತೆಯ ಓ ಜೀವವೇ 
ನಡುವೆ ಎದ್ದು ಹೋಗುವುದು ತರವೇ
ನಾಳೆಯ ಭರವಸೆ ಇರಲಿ 
ಇಂದಿನ ಹಂಬಲ ಹೆಚ್ಚಾಗಲಿ 

೩೧೫ಪಿಎಂ೦೨೧೨೨೦೨೪
ಅಪ್ಪಾಜಿ ಎ ಮುಸ್ಟೂರು 

#ಒಲವಿನ #ಭಜನೆ 

ಮೋಡಗಳು ಮುಸುಕಿದ ರಾತ್ರಿಯಲಿ 
ತಂಗಾಳಿ ಬೀಡುವ ಹೊತ್ತಿನಲ್ಲಿ 
ನಿನ್ನ ನೆನಪು ತೇಲಿ ಬಂತು ಮತ್ತಿನಲ್ಲಿ 
ಎದೆಯ ಭಾವಗಳ ನೀರವತೆ 
ವಿರಹ ವೇದನೆಯ ಕವಿತೆ 
ಮರುಕದಲ್ಲಿ ಮುಲುಕುತ್ತಾ ಮಲಗಿದೆ 

ನಿದ್ರೆಯು ಹತ್ತದ ಕಣ್ಗಳಲ್ಲಿ 
ಮದ್ಯಧೂಮಪಾನಗಳ ಜೊತೆಯಲ್ಲಿ 
ಕಥೆಯ ಹೇಳುತ ವ್ಯಥೆಯಲಿ ಓಲಾಡಿದೆ
ಪಾಪಿ ಹೃದಯವ ಕೆರೆದು
ಗಾಯ ಘಾಸಿಗೊಳಿಸಿದ ನೆನಪು 
ಮರೆತರೂ ಮರುಕಳಿಸಿ ಅಣಕಿಸುತ್ತಿದೆ

ಕಪ್ಪೆಗಳ ವಟಗುಟ್ಟುವ ಶಬ್ದ 
ನರಿಗಳು ಕೂಗುವ ಸದ್ದು 
ಓ ಎನ್ನುವ ನಾಯಿಗಳ ಆಕ್ರಂದನ 
ಪ್ರೀತಿಯ ಜೀವವ ಒದ್ದು
ಒಂಟಿ ಬಿಟ್ಟಿರಲು ಇಲ್ಲ ಮದ್ದು 
ಏಕಾಂತವೂ ಇಲ್ಲಿ ನಿತ್ಯ ಬಂಧನ 

ತಬ್ಬಲಿಯು ನೀನಾದೆ ಹೃದಯವೇ 
ನಾ ಒಬ್ಬಂಟಿಯಾದೆ ಓ ಸಮಯವೇ 
ಬೆಳಕು ಹರಿಯುವ ತನಕ ಒಲವಿನದೇ ಭಜನೆ 
ದಕ್ಕಿದ ದಾರಿದ್ರೆಲ್ಲ ನೀಗಿ 
ಮತ್ತೆ ಹೊಸತನದ ಪ್ರೇಮಿಯಾಗಿ 
ದಿನವನ್ನಾರಂಭಿಸುವುದೆನ್ನ ಚಿಂತನೆ 

೧೦೧೨ಪಿಎಂ೦೪೧೨೨೦೨೪
ಅಪ್ಪಾಜಿ ಎ ಮುಸ್ಟೂರು 

*ಬಾಳ ಯಾತ್ರೆಯ ದಿಬ್ಬಣ* 
ನೀಲ ನಭದ ನಿನ್ನ ನಲ್ಮೆಯಲ್ಲಿ 
ಮೂಡಿ ಬಂದ ಚಂದ್ರ ಬಿಂಬ 
ನಿನ್ನ ತಾರುಣ್ಯಕ್ಕೆ ತಲೆಬಾಗಿತು 

ಹಸಿರ ಮಡಿಲ ತೊಟ್ಟಿನಲ್ಲಿ 
ಬಿರಿದ ಮೊಗ್ಗು ಅರಳುವಲ್ಲಿ 
ನಿನ್ನ ರೂಪದ ಗಂಧ ಹೊಮ್ಮಿತು 

ಮುಸ್ಸಂಜೆಯ ರಂಗಲ್ಲಿಯೂ
ಗೋಧೂಳಿಯ ಚಿತ್ರಾವಳಿಯು 
ನಿನ್ನನ್ನೇ ಅಲ್ಲಿ ಚಿತ್ರಿಸಿತ್ತು 

ರಾತ್ರಿ ಕೂಡ ರಮ್ಯವಾಗಿ
ಬೆಳದಿಂಗಳು ಹಿತವಾಗಿ 
ನಿನ್ನನ್ನೇ ಮೋಹಿಸುತ್ತಿತ್ತು 

ನೈದಿಲೆ ಅರಳುವ ಹೊತ್ತು 
ಪೌರ್ಣಿಮೆಯು ಹಾಲು ಚೆಲ್ಲಿತ್ತು 
ನಿನ್ನ ಬರುವಿಕೆಗಾಗಿ ಕಾಯುತ 

ನಲ್ಲ ನಲ್ಲೆಯರ ಸರಸ ಸಲ್ಲಾಪ 
ಇರಹವಿರದ ಸಂತೃಪ್ತ 
ಇಲಿಯಳಧರ ಸವಿಯುತ 

ಮಧುಚಂದ್ರದ ಈ ಮಿಲನ 
ಮಧುಬಟ್ಟಲ ಸವಿ ಪಾನ 
ಬದುಕಿಗೆ ರಸದೌತಣ 

ಬದುಕು ನಿತ್ಯ ನೂತನ 
ಭರವಸೆ ತುಂಬಿದ ಈ ಬಂಧನ 
ಬಾಳಯಾತ್ರೆಯ ದಿಬ್ಬಣ 

೦೫೦೬೦೫೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
*ಒಲವ ಆರಾಧನೆ* 

ಬಾನ ಅಂಚಲ್ಲಿ ಮೂಡಿದ 
ಚಿತ್ತಾರದ ಸವಿ ರೂಪ ನೀನು 
ಇರುಳ ಬಾಂದಳದಲ್ಲಿ ಮಿನುಗುವ 
ತಾರೆಗಳ ಗೆಳತಿಯೇ ನೀನು 

ತಂಗಾಳಿ ತೀಡುವಾಗ ಸಂಭ್ರಮಿಸೋ
ಮುಂಗುರುಳ ಒಡತಿ ನೀನು 
ಬೆಳದಿಂಗಳಗೆ ಉಕ್ಕುವ ಅಲೆಯಂತ
ತಾರುಣ್ಯ ತುಂಬಿದ ತರುಣಿ ನೀನು 

ಹೂ ಬಿಟ್ಟು ಬಳುಕುವ ಲತೆಯಂತೆ
ಸುಮಬಾಲೆ ನಿನ್ನೀ ತನುವ ಸಂಭ್ರಮ 
ಮಧುವನರಸಿ ಬರುವ ದುಂಬಿಯಂತೆ 
ಮುದ್ದಿಸಿ ಮೈ ಮರೆಸಲಿ ನಮ್ಮ ಸಂಗಮ

ಹದವಾಗಿ ನೆನೆದ ಮಣ್ಣಿಂದ ಮೂಡಿದ 
ಸೊಬಗ ಶೃಂಗಾರದ ಪ್ರತಿಮೆ ನೀನು 
ಏನೆಂದು ಬಣ್ಣಿಸಲಿ ನಿನ್ನ ರೂಪ 
ಯಾವ ಉಪಮೆಯು ಸಾಲದು ಇನ್ನು 

ಅಂತರಂಗದ ಭಾಷೆಗೆ ನೀ ನುಡಿಯಾಗು 
ಕವಿ ಭಾವದ ತುಡಿತಕೆ ಮಿಡಿತವಾಗು 
ಎಂದೆಂದಿಗೂ ಅಳಿಯದ ಒಲವಿನ ಚೆಲುವೆ ನೀನು 
ಉಸಿರಿರುವ ತನಕ ಆ ಚೆಲುವಿನ ಆರಾಧಕ ನಾನು 

೦೫೨೧ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಅಂಜಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ 
ಕರ್ನಾಟಕ ರಾಜ್ಯ ಘಟಕ 

ದತ್ತಪದ:- *ಹಸಿವು* 
ಶೀರ್ಷಿಕೆ:- *ಹಸಿದ ಜೀವ* 

ಒಡಲ ಕಡಲು ಬತ್ತಿ
ಎಲುಬು ಮೂಳೆಗೆ ತೊಗಲು ಹತ್ತಿ 
ಚಿಂದಿ ಹುಟ್ಟ ದೇಹದೊಳಗೆ 
ಹಸಿವು ಸಮರ ಸಾರಿದೆ 

ಅಲ್ಲೆಲ್ಲೋ ಮದುವೆ ಮುಂಜಿಗಳಲ್ಲಿ 
ಬಗೆ ಬಗೆಯ ಭಕ್ಷ್ಯ ಭೋಜ್ಯಗಳೆಲ್ಲ
ಹಸಿವಿಲ್ಲದವರ ಎಲೆಯ ಮೇಲೆ 
ಅಸುನೀಗಿ ಮೋರಿ ಸೇರುತ್ತಿದೆ 

ಮುಸುರೆ ಸೇರುವ ಹಳಸಿದನ್ನವ
ಮನೆ ಬಾಗಿಲಿಗೆ ಬಂದವನಿಗಿಕ್ಕುವ
ಹೊಟ್ಟೆ ತುಂಬಿದವರ ಅಟ್ಟಹಾಸಕೆ 
ಮಮ್ಮಲ ಮರುಗಿದೆ ಹಸಿದ ಜೀವ

ಅನ್ನ ದೇವರು ಎಂದು ಹೇಳುವರೆಲ್ಲ 
ನಂಜಿನಂತೆ ಎಂಜಲು ಬಿಟ್ಟು ಹೋಗುವರು
ಹಸಿದವನಿಗೆ ರುಚಿ ತಿಳಿಯುವುದಿಲ್ಲ 
ಹೊಟ್ಟೆ ತುಂಬಿದರೆ ಸಾಕು ಬೇರೇನು ಬೇಕಿಲ್ಲ

ವ್ಯರ್ಥ ಮಾಡುವಿರೇಕೆ ಅನ್ನವನ್ನು 
ಅದರ ಹಿಂದಿನ ಶ್ರಮಿಕರ ಅರಿತಿರುವರೇ ನೀವು 
ಪೈರು ಅನ್ನವಾಗುವವರೆಗೆ 
ಬೆವರು ಸುರಿಸಿದವರೆಷ್ಟೋ ಬಲ್ಲಿರೇನು

೦೫೩೫ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಬೆಳಕೇ ಇರದ ಕಪ್ಪು ಕತ್ತಲ ಹಾದಿ 
ಕಸಿದುಕೊಂಡಿದ್ದು ಬಾಳಿನೆಲ್ಲ ನೆಮ್ಮದಿ 
ಕಷ್ಟಗಳ ಕಾರಿರುಳು ಕವಿದು 
ಹೊಸ ಬೆಳಕಿಗಾಗಿ ಹಂಬಲಿಸುತ್ತಿದೆ ಮನ 

ಹೆಜ್ಜೆ ಹೆಜ್ಜೆಗೂ ಇಲ್ಲಿ ಕಲ್ಲು ಮುಳ್ಳುಗಳದೆ ಪಾರಮ್ಯ 
ಇಂಥ ಸಂಕಷ್ಟದಲ್ಲಿ ಹೇಗೆ ಮುಟ್ಟುವುದು ಗಮ್ಯ 
ಆದರೂ ಎದೆಗುಂದದೆ ಎಚ್ಚರಿಕೆಯ ಹೆಜ್ಜೆನಿಟ್ಟು 
ಗುರಿ ಮುಟ್ಟುವತ್ತ ಸಾಗಿದೆ ಪಯಣ 

ಹಾದಿ ತೋರುವ ಮಾರ್ಗದರ್ಶಕರೆಲ್ಲ 
ಅಲ್ಲಲ್ಲೆ ನಡುವೆ ಬಿಟ್ಟು ಹೋದರು 
ಮನವೆಂಬ ದಿಗ್ದರ್ಶಕನ ಆತ್ಮವಿಶ್ವಾಸ 
ಒಬ್ಬಂಟಿಯಲ್ಲಿ ಛಲ ತುಂಬುತ್ತಿದೆ 

ಏನೇ ಆದರೂ ಗೆಲ್ಲಬೇಕು ಬದುಕನ್ನು 
ಕೊಲ್ಲುವ ಆಯುಧಗಳಿದ್ದರೇನು ಕಾಯುವ ಕೈಗಳಿವೆ 
ಎಂಬ ಭರವಸೆಯ ಈ ಹೋರಾಟ 
ತೆರೆಯುವುದು ಮುಂದೊಂದು ದಿನ ಸಾಧನೆಯ ಸಂಪುಟ 

ಅಂಜದಿರು ಮನವೇ ಮುನ್ನುಗ್ಗು ನೀನು 
ಉಳಿವಿಗಾಗಿ ಇಲ್ಲಿ ಹೋರಾಟ ಅನಿವಾರ್ಯ 
ಗೆಲ್ಲುವ ತನಕ ನೀನಾರಿಗೂ ಗೊತ್ತಾಗದು 
ಗೆದ್ದ ಮೇಲೆ ಜಗವೇ ನಿನ್ನ ಹಿಂದಿಂದೆ ಬರುವುದು

೦೫೫೯ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಎಲ್ಲೆಲ್ಲಿಯೂ ನೀನಿರುವೆ ಎಂದು 
ಹುಡುಕುತ್ತಾ ಅಲೆಯುತ್ತಿರುವೆ 
ಕಾಣದೆ ನೀನು ಎಲ್ಲಿ ಹೋದೆ 

ಬದುಕಿನಲ್ಲಿ ಬಳಲಿ ಬಂದೆ 
ನಿನ್ನ ಪಾದ ಸ್ಪರ್ಶಕಾಗಿ ಕಾದೆ 
ನಿನ್ನ ಕಾಣದೆ ನಾ ಕಂಗಾಲಾದೆ 

ಬರಿ ಕಲ್ಲು ಮುಳ್ಳುಗಳ ತುಳಿದು ಬಂದೆ 
ಹೂ ಹಾಸಿನ ದಾರಿ ಕಾಣದಾದೆ 
ಕೈ ಹಿಡಿದು ಕರೆದುಕೋ ನಿನ್ನ ಬಳಿಗೆ 

ಕನವರಿಕೆಯ ಬದುಕಾಗಿದೆ 
ಕಣ್ಣಾಲಿಗಳು ಮಂಜಾಗಿವೆ
ಈ ನಂಜನು ನೀಗಿಸು 

ಅಂತರಂಗವೀಗ ಶುದ್ದಿಯಾಗುತ್ತಿದೆ 
ಅಹಂಕಾರವೆಲ್ಲ ಕಮರಿಹೋಗಿದೆ 
ಶರಣಾಗತಿಯೊಂದೇ ನಿನ್ನ ತೋರಿದೆ 

ಆತ್ಮದೊಂದಿಗೆ ಪರಮಾತ್ಮ ನೀ ಬೆರೆತು ಹೋಗು 
ದೈವ ಸಾನಿಧ್ಯದಲ್ಲಿ ನಾ ನಿನ್ನ ಮಗು 
ಕರಪಿಡಿದು ನಿನ್ನ ಮಡಿಲಲ್ಲಿ ಮಲಗಿಸು 

ಬವಣೆಗಳ ಸಮರ ನಿಲ್ಲಲಿ 
ಪ್ರೀತಿಯ ಪ್ರಕಾರ ಎಚ್ಚಲಿ 
ನೋವಿಗೆ ನೀ ನೀಡು ಮದ್ದು 

ನಿನ್ನಾಲಯಕ್ಕೆ ಬಂದಿರುವೆ 
ನಿನ್ನ ಕಣ್ಮುಂದೆ ಪೊಡಮಟ್ಟಿರುವೆ
ಪೊರೆಯುವ ಹೊಣೆ ನಿನ್ನದು ದೇವ

೦೬೧೮ಎಎಂ೦೮೧೨೨೨೪
*ಅಪ್ಪಾಜಿ ಎ ಮುಸ್ಟೂರು* 

#ಎಲ್ಲಾ #ಪಾತ್ರಕೂ #ಹೊಂದುವ #ಪಡಿಯಚ್ಚು 

ಅಂತರಂಗ ನೋಯುತ್ತಿದೆ 
ಅನುಬಂಧ ಕಳಚುತಿದೆ 
ಏಕೆ ಹೀಗೆ ಎನ್ನುವುದು 
ಅರಿಯದಾಗಿ ಹೋಗಿದೆ 

ಪ್ರೀತಿ ಬೆಸೆದ ಬಾಂಧವ್ಯ 
ನೋವ ನೀಡುವುದು ಸಂಭಾವ್ಯ 
ಕಾರಣ ಏನೇ ಇದ್ದರೂ 
ನೋವಿಗೆ ಮದ್ದು ನೀನೇ ಇನಿಯ 

ಎದೆಯ ಭಾವಗಳ ಬೆಳಕಿಗೆ 
ಗ್ರಹಣ ಬಡಿದು ಕತ್ತಲಾಗಿ 
ಕಣ್ಣೀರಿನ ಹನಿಗಳ ಸಾಲು 
ಬತ್ತಿ ಹೋಗಿದೆ ವೇದನೆಗೆ 

ನನ್ನವರೆಂಬುವರೆಲ್ಲರೂ ದೂರ 
ನನ್ನವರೆಂದು ಕೊಂಡವರಿಗೆಲ್ಲ ನಾ ಭಾರ 
ಬದುಕಿನ ಯಾನಕ್ಕೆ ತಿರುವುಗಳು ನೂರು 
ದಿಕ್ಕು ತಪ್ಪಿದೆ ಗುರಿ ತೋರುವರಾರು 

ಹೆಣ್ಣಿನ ಬಾಳೆ ಹೀಗೆ 
ಸ್ವಂತಿಕೆ ಇಲ್ಲದ ಮಣ್ಣಿನ ಹಾಗೆ 
ಬೇಕಾದವರು ಬೇಕಾದ ರೂಪ ನೀಡಿ 
ಹೆಣ್ಣಿನ ಬದುಕಿಗೆ ಕೊಟ್ಟರು ಬೇಕಾದ ಹೆಸರು 

ತಾಯಿ ಮಡದಿ ಮಗಳು ಸೋದರಿ 
ಗೆಳತಿ ಗುರು ಇನ್ನು ಏನೇನು ಹೆಸರು 
ಎಲ್ಲ ಪಾತ್ರಗಳಿಗೂ ಹೊಂದುವ ಪಡಿಯಚ್ಚು
ಹೆಣ್ಣೆಂಬ ದೇಹಕ್ಕೆ ಕಣ್ಣಾಗರು ಯಾರು 

೦೮೨೧ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಕಶನ

*ನಿನ್ನ ಮಡಿಲಲಿ*

ಈ ಕೋಪ ಸರಿಯಿಲ್ಲ 
ಆ ರೂಪ ತಾಳಿರುವೆಯಲ್ಲ
ದೂರುವ ನಿನ್ನ ಕೋರುವೆ 
ಮುದ್ದಾಗಿ ಮಾತಾಡು ಚೆಲುವೆ

ಮುನಿಸು ತರವೇ ಮುಗುದೆ
ನಕ್ಕಾಗ ನೀ ನಮ್ಮ ಹೊಲದ ಗದ್ದೆ
ತಂಗಾಳಿ ನೀಡುವಂತೆ ಮುಂಗುರುಳು 
ಹೂವಾಗಿ ಅರಳಿದವು ಸುಮಗಳು 

ಏಕಾಂಗಿ ಚಂದಿರನಿಗೆ ನೀ ಜೊತೆಯಾಗು 
ಮಿನುಗುವ ತಾರೆಗಳೊಂದಿಗೆ ನೀ ಸೇರಿ ಹೋಗು 
ಹೊಳೆವ ಹೊಂಗೆರೆಯ  ಕಿರಣ ನಿನ್ನ ನಗು 
ನಿನ್ನ ಮಡಿಲಲ್ಲಿ ನಾನಾಗುವೆ ಮಗು 

ನಿನ್ನ ಪ್ರೀತಿಯ ಮಾತು ಜೇನಂತೆ 
ಕೋಪದಿ ನುಡಿದರೆ ಗುಡುಗು ಸಿಡಿಲಂತೆ 
ಆ ನೋಟವು ಕೋಲ್ಮಿಂಚಂತೆ
ನಿನ್ನೊಲವು ಸೋನೆ ಮಳೆಯಂತೆ 

ಸಾಗರ ಕಿನಾರೆಯಲಿ ನಾ ಕಾಯುವೆ 
ಅಲೆಯಾಗಿ ನೀ ಉಕ್ಕಿ ಬರುವ ರಭಸಕೆ
ನಿನ್ನೊಳಗೆ ನಾ ಬೆರೆತು ಹೋಗಿ 
ಮುತ್ತಾಗಿ ಕೊಡುವೆ ನಿನಗೆ ಕಾಣಿಕೆ 

೦೪೫೧ಪಿಎಂ೩೦೧೧೨೦೨೪
*ಅಪ್ಪಾಜಿ ಎ ಮುಸ್ಟೂರು*

ಹಾಕದಿರು ನೀ ಕಣ್ಣೀರು 
ನನ್ನಾಸೆಗದು ತಣ್ಣೀರು 
ನಗುನಗುತ ನೀನಿರು
ಬದುಕಲಿ ಆನಂದದ ಸೊಡರು 

ನಲ್ಮೆಯ ಗೆಳತಿಯೆ ನೀನು 
ನನ್ನ ಪಾಲಿಗೆ ಸವಿ ಜೇನು 
ನೀನಾಡುವ ಮಾತೆಲ್ಲ ನನಗೆ 
ಸ್ಪೂರ್ತಿಯ ಚಿಮ್ಮು ಹಲಗೆ 

ಹೃದಯಕ್ಕೆ ನೀ ಹೇಳು ಸಾಂತ್ವನ 
ಪ್ರೀತಿಯಲಿ ಬರೆವೆನಾಗ ಕವನ
ಖುಷಿ ಖುಷಿಯಾಗಿದ್ದರೆ ಜೀವನ
ಸದಾ ಸಂಭ್ರಮದ ಹೂಬನ

ನೀನಿಲ್ಲದ ಈ ಬಾಳು ಸೆರೆವಾಸ 
ನೀನಲ್ಲವೇ ನನ್ನ ಬಾಳ ವಿಶೇಷ 
ಆರಾಧಸುವೆ ನಿನ್ನ ಪ್ರೇಮ ಪೂಜೆಯಲ್ಲಿ
ಆಲಂಗಿಸು ನನ್ನ ನಿನ್ನೀ ತೋಳಬಂದಿಯಲಿ

ನೂರಾರು ಕನಸುಗಳು ನನಸಾಗಲಿ 
ಹೃದಯದ ಬಯಕೆಗಳೆಲ್ಲ ಕೈಗೂಡಲಿ
ಪ್ರೀತಿಯ ಈ ಸಂದೇಶ ಚಿರಾಯುವಾಗಲಿ 
ನಮ್ಮಿಬ್ಬರ ಅನುಬಂಧ ಅಮರವಾಗಲಿ

೦೩೩೨ಪಿಎಂ೦೧೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ನೊಂದಿದೆ ಜೀವ 
ಬೆಂದಿದೆ ಭಾವ
ಸಾವು ಬಯಸೋದು ಸಹಜ
ಬದುಕ ಗೆಲ್ಲು ಓ ಮನುಜ

ಅಮ್ಮ ಕಷ್ಟಪಟ್ಟು ಕೊಟ್ಟ ಜೀವ 
ಅಪ್ಪ ದುಡಿದು ದಣಿದು ನೀಡಿ ಜೀವನ 
ಸಣ್ಣದೊಂದು ಕಾರಣಕ್ಕೆ 
ಸತ್ತು ಬಿಡುವ ಮನಸು ದುರ್ಬಲ 

ಸ್ನೇಹದ ನಂಬಿಕೆಯಾಗು 
ಪ್ರೀತಿಯ ಬೆಂಬವಾಗು
ಬದುಕಿನ ಪ್ರತಿ ಕ್ಷಣವೂ 
ಆನಂದದಿ ಮುಂದೆ ಸಾಗಲಿ 

ಯಾರಿಗಿಲ್ಲ ಇಲ್ಲಿ ನೋವು 
ಯಾರಿಗಿಲ್ಲ ಇಲ್ಲಿ ಸಾವು 
ಹಿಂದೆ ಮುಂದೆ ಹಾದಿಹೋಕರು
ಸರತಿ ಸಾಲಿನಲ್ಲಿ ನಾನು ನೀನು 

ಸಾವೇ ಬಂದು ಕರೆದರೂ 
ಹೋಗದ ವಿಶ್ವಾಸವಿರಲಿ
ಸಾವು ಕೂಡ ಹೆಮ್ಮೆ ಪಡುವ 
ಹಾಗೆ ಈಸಬೇಕು ಇದ್ದು ಜೈಸಬೇಕಿಲ್ಲಿ

ಬಿಡು ಬಿಡು ಚಿಂತೆಯ ಓ ಜೀವವೇ 
ನಡುವೆ ಎದ್ದು ಹೋಗುವುದು ತರವೇ
ನಾಳೆಯ ಭರವಸೆ ಇರಲಿ 
ಇಂದಿನ ಹಂಬಲ ಹೆಚ್ಚಾಗಲಿ 

೩೧೫ಪಿಎಂ೦೨೧೨೨೦೨೪
ಅಪ್ಪಾಜಿ ಎ ಮುಸ್ಟೂರು 

#ಒಲವಿನ #ಭಜನೆ 

ಮೋಡಗಳು ಮುಸುಕಿದ ರಾತ್ರಿಯಲಿ 
ತಂಗಾಳಿ ಬೀಡುವ ಹೊತ್ತಿನಲ್ಲಿ 
ನಿನ್ನ ನೆನಪು ತೇಲಿ ಬಂತು ಮತ್ತಿನಲ್ಲಿ 
ಎದೆಯ ಭಾವಗಳ ನೀರವತೆ 
ವಿರಹ ವೇದನೆಯ ಕವಿತೆ 
ಮರುಕದಲ್ಲಿ ಮುಲುಕುತ್ತಾ ಮಲಗಿದೆ 

ನಿದ್ರೆಯು ಹತ್ತದ ಕಣ್ಗಳಲ್ಲಿ 
ಮದ್ಯಧೂಮಪಾನಗಳ ಜೊತೆಯಲ್ಲಿ 
ಕಥೆಯ ಹೇಳುತ ವ್ಯಥೆಯಲಿ ಓಲಾಡಿದೆ
ಪಾಪಿ ಹೃದಯವ ಕೆರೆದು
ಗಾಯ ಘಾಸಿಗೊಳಿಸಿದ ನೆನಪು 
ಮರೆತರೂ ಮರುಕಳಿಸಿ ಅಣಕಿಸುತ್ತಿದೆ

ಕಪ್ಪೆಗಳ ವಟಗುಟ್ಟುವ ಶಬ್ದ 
ನರಿಗಳು ಕೂಗುವ ಸದ್ದು 
ಓ ಎನ್ನುವ ನಾಯಿಗಳ ಆಕ್ರಂದನ 
ಪ್ರೀತಿಯ ಜೀವವ ಒದ್ದು
ಒಂಟಿ ಬಿಟ್ಟಿರಲು ಇಲ್ಲ ಮದ್ದು 
ಏಕಾಂತವೂ ಇಲ್ಲಿ ನಿತ್ಯ ಬಂಧನ 

ತಬ್ಬಲಿಯು ನೀನಾದೆ ಹೃದಯವೇ 
ನಾ ಒಬ್ಬಂಟಿಯಾದೆ ಓ ಸಮಯವೇ 
ಬೆಳಕು ಹರಿಯುವ ತನಕ ಒಲವಿನದೇ ಭಜನೆ 
ದಕ್ಕಿದ ದಾರಿದ್ರೆಲ್ಲ ನೀಗಿ 
ಮತ್ತೆ ಹೊಸತನದ ಪ್ರೇಮಿಯಾಗಿ 
ದಿನವನ್ನಾರಂಭಿಸುವುದೆನ್ನ ಚಿಂತನೆ 

೧೦೧೨ಪಿಎಂ೦೪೧೨೨೦೨೪
ಅಪ್ಪಾಜಿ ಎ ಮುಸ್ಟೂರು 

*ಬಾಳ ಯಾತ್ರೆಯ ದಿಬ್ಬಣ* 
ನೀಲ ನಭದ ನಿನ್ನ ನಲ್ಮೆಯಲ್ಲಿ 
ಮೂಡಿ ಬಂದ ಚಂದ್ರ ಬಿಂಬ 
ನಿನ್ನ ತಾರುಣ್ಯಕ್ಕೆ ತಲೆಬಾಗಿತು 

ಹಸಿರ ಮಡಿಲ ತೊಟ್ಟಿನಲ್ಲಿ 
ಬಿರಿದ ಮೊಗ್ಗು ಅರಳುವಲ್ಲಿ 
ನಿನ್ನ ರೂಪದ ಗಂಧ ಹೊಮ್ಮಿತು 

ಮುಸ್ಸಂಜೆಯ ರಂಗಲ್ಲಿಯೂ
ಗೋಧೂಳಿಯ ಚಿತ್ರಾವಳಿಯು 
ನಿನ್ನನ್ನೇ ಅಲ್ಲಿ ಚಿತ್ರಿಸಿತ್ತು 

ರಾತ್ರಿ ಕೂಡ ರಮ್ಯವಾಗಿ
ಬೆಳದಿಂಗಳು ಹಿತವಾಗಿ 
ನಿನ್ನನ್ನೇ ಮೋಹಿಸುತ್ತಿತ್ತು 

ನೈದಿಲೆ ಅರಳುವ ಹೊತ್ತು 
ಪೌರ್ಣಿಮೆಯು ಹಾಲು ಚೆಲ್ಲಿತ್ತು 
ನಿನ್ನ ಬರುವಿಕೆಗಾಗಿ ಕಾಯುತ 

ನಲ್ಲ ನಲ್ಲೆಯರ ಸರಸ ಸಲ್ಲಾಪ 
ಇರಹವಿರದ ಸಂತೃಪ್ತ 
ಇಲಿಯಳಧರ ಸವಿಯುತ 

ಮಧುಚಂದ್ರದ ಈ ಮಿಲನ 
ಮಧುಬಟ್ಟಲ ಸವಿ ಪಾನ 
ಬದುಕಿಗೆ ರಸದೌತಣ 

ಬದುಕು ನಿತ್ಯ ನೂತನ 
ಭರವಸೆ ತುಂಬಿದ ಈ ಬಂಧನ 
ಬಾಳಯಾತ್ರೆಯ ದಿಬ್ಬಣ 

೦೫೦೬೦೫೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
*ಒಲವ ಆರಾಧನೆ* 

ಬಾನ ಅಂಚಲ್ಲಿ ಮೂಡಿದ 
ಚಿತ್ತಾರದ ಸವಿ ರೂಪ ನೀನು 
ಇರುಳ ಬಾಂದಳದಲ್ಲಿ ಮಿನುಗುವ 
ತಾರೆಗಳ ಗೆಳತಿಯೇ ನೀನು 

ತಂಗಾಳಿ ತೀಡುವಾಗ ಸಂಭ್ರಮಿಸೋ
ಮುಂಗುರುಳ ಒಡತಿ ನೀನು 
ಬೆಳದಿಂಗಳಗೆ ಉಕ್ಕುವ ಅಲೆಯಂತ
ತಾರುಣ್ಯ ತುಂಬಿದ ತರುಣಿ ನೀನು 

ಹೂ ಬಿಟ್ಟು ಬಳುಕುವ ಲತೆಯಂತೆ
ಸುಮಬಾಲೆ ನಿನ್ನೀ ತನುವ ಸಂಭ್ರಮ 
ಮಧುವನರಸಿ ಬರುವ ದುಂಬಿಯಂತೆ 
ಮುದ್ದಿಸಿ ಮೈ ಮರೆಸಲಿ ನಮ್ಮ ಸಂಗಮ

ಹದವಾಗಿ ನೆನೆದ ಮಣ್ಣಿಂದ ಮೂಡಿದ 
ಸೊಬಗ ಶೃಂಗಾರದ ಪ್ರತಿಮೆ ನೀನು 
ಏನೆಂದು ಬಣ್ಣಿಸಲಿ ನಿನ್ನ ರೂಪ 
ಯಾವ ಉಪಮೆಯು ಸಾಲದು ಇನ್ನು 

ಅಂತರಂಗದ ಭಾಷೆಗೆ ನೀ ನುಡಿಯಾಗು 
ಕವಿ ಭಾವದ ತುಡಿತಕೆ ಮಿಡಿತವಾಗು 
ಎಂದೆಂದಿಗೂ ಅಳಿಯದ ಒಲವಿನ ಚೆಲುವೆ ನೀನು 
ಉಸಿರಿರುವ ತನಕ ಆ ಚೆಲುವಿನ ಆರಾಧಕ ನಾನು 

೦೫೨೧ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಅಂಜಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ 
ಕರ್ನಾಟಕ ರಾಜ್ಯ ಘಟಕ 

ದತ್ತಪದ:- *ಹಸಿವು* 
ಶೀರ್ಷಿಕೆ:- *ಹಸಿದ ಜೀವ* 

ಒಡಲ ಕಡಲು ಬತ್ತಿ
ಎಲುಬು ಮೂಳೆಗೆ ತೊಗಲು ಹತ್ತಿ 
ಚಿಂದಿ ಹುಟ್ಟ ದೇಹದೊಳಗೆ 
ಹಸಿವು ಸಮರ ಸಾರಿದೆ 

ಅಲ್ಲೆಲ್ಲೋ ಮದುವೆ ಮುಂಜಿಗಳಲ್ಲಿ 
ಬಗೆ ಬಗೆಯ ಭಕ್ಷ್ಯ ಭೋಜ್ಯಗಳೆಲ್ಲ
ಹಸಿವಿಲ್ಲದವರ ಎಲೆಯ ಮೇಲೆ 
ಅಸುನೀಗಿ ಮೋರಿ ಸೇರುತ್ತಿದೆ 

ಮುಸುರೆ ಸೇರುವ ಹಳಸಿದನ್ನವ
ಮನೆ ಬಾಗಿಲಿಗೆ ಬಂದವನಿಗಿಕ್ಕುವ
ಹೊಟ್ಟೆ ತುಂಬಿದವರ ಅಟ್ಟಹಾಸಕೆ 
ಮಮ್ಮಲ ಮರುಗಿದೆ ಹಸಿದ ಜೀವ

ಅನ್ನ ದೇವರು ಎಂದು ಹೇಳುವರೆಲ್ಲ 
ನಂಜಿನಂತೆ ಎಂಜಲು ಬಿಟ್ಟು ಹೋಗುವರು
ಹಸಿದವನಿಗೆ ರುಚಿ ತಿಳಿಯುವುದಿಲ್ಲ 
ಹೊಟ್ಟೆ ತುಂಬಿದರೆ ಸಾಕು ಬೇರೇನು ಬೇಕಿಲ್ಲ

ವ್ಯರ್ಥ ಮಾಡುವಿರೇಕೆ ಅನ್ನವನ್ನು 
ಅದರ ಹಿಂದಿನ ಶ್ರಮಿಕರ ಅರಿತಿರುವರೇ ನೀವು 
ಪೈರು ಅನ್ನವಾಗುವವರೆಗೆ 
ಬೆವರು ಸುರಿಸಿದವರೆಷ್ಟೋ ಬಲ್ಲಿರೇನು

೦೫೩೫ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಬೆಳಕೇ ಇರದ ಕಪ್ಪು ಕತ್ತಲ ಹಾದಿ 
ಕಸಿದುಕೊಂಡಿದ್ದು ಬಾಳಿನೆಲ್ಲ ನೆಮ್ಮದಿ 
ಕಷ್ಟಗಳ ಕಾರಿರುಳು ಕವಿದು 
ಹೊಸ ಬೆಳಕಿಗಾಗಿ ಹಂಬಲಿಸುತ್ತಿದೆ ಮನ 

ಹೆಜ್ಜೆ ಹೆಜ್ಜೆಗೂ ಇಲ್ಲಿ ಕಲ್ಲು ಮುಳ್ಳುಗಳದೆ ಪಾರಮ್ಯ 
ಇಂಥ ಸಂಕಷ್ಟದಲ್ಲಿ ಹೇಗೆ ಮುಟ್ಟುವುದು ಗಮ್ಯ 
ಆದರೂ ಎದೆಗುಂದದೆ ಎಚ್ಚರಿಕೆಯ ಹೆಜ್ಜೆನಿಟ್ಟು 
ಗುರಿ ಮುಟ್ಟುವತ್ತ ಸಾಗಿದೆ ಪಯಣ 

ಹಾದಿ ತೋರುವ ಮಾರ್ಗದರ್ಶಕರೆಲ್ಲ 
ಅಲ್ಲಲ್ಲೆ ನಡುವೆ ಬಿಟ್ಟು ಹೋದರು 
ಮನವೆಂಬ ದಿಗ್ದರ್ಶಕನ ಆತ್ಮವಿಶ್ವಾಸ 
ಒಬ್ಬಂಟಿಯಲ್ಲಿ ಛಲ ತುಂಬುತ್ತಿದೆ 

ಏನೇ ಆದರೂ ಗೆಲ್ಲಬೇಕು ಬದುಕನ್ನು 
ಕೊಲ್ಲುವ ಆಯುಧಗಳಿದ್ದರೇನು ಕಾಯುವ ಕೈಗಳಿವೆ 
ಎಂಬ ಭರವಸೆಯ ಈ ಹೋರಾಟ 
ತೆರೆಯುವುದು ಮುಂದೊಂದು ದಿನ ಸಾಧನೆಯ ಸಂಪುಟ 

ಅಂಜದಿರು ಮನವೇ ಮುನ್ನುಗ್ಗು ನೀನು 
ಉಳಿವಿಗಾಗಿ ಇಲ್ಲಿ ಹೋರಾಟ ಅನಿವಾರ್ಯ 
ಗೆಲ್ಲುವ ತನಕ ನೀನಾರಿಗೂ ಗೊತ್ತಾಗದು 
ಗೆದ್ದ ಮೇಲೆ ಜಗವೇ ನಿನ್ನ ಹಿಂದಿಂದೆ ಬರುವುದು

೦೫೫೯ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಎಲ್ಲೆಲ್ಲಿಯೂ ನೀನಿರುವೆ ಎಂದು 
ಹುಡುಕುತ್ತಾ ಅಲೆಯುತ್ತಿರುವೆ 
ಕಾಣದೆ ನೀನು ಎಲ್ಲಿ ಹೋದೆ 

ಬದುಕಿನಲ್ಲಿ ಬಳಲಿ ಬಂದೆ 
ನಿನ್ನ ಪಾದ ಸ್ಪರ್ಶಕಾಗಿ ಕಾದೆ 
ನಿನ್ನ ಕಾಣದೆ ನಾ ಕಂಗಾಲಾದೆ 

ಬರಿ ಕಲ್ಲು ಮುಳ್ಳುಗಳ ತುಳಿದು ಬಂದೆ 
ಹೂ ಹಾಸಿನ ದಾರಿ ಕಾಣದಾದೆ 
ಕೈ ಹಿಡಿದು ಕರೆದುಕೋ ನಿನ್ನ ಬಳಿಗೆ 

ಕನವರಿಕೆಯ ಬದುಕಾಗಿದೆ 
ಕಣ್ಣಾಲಿಗಳು ಮಂಜಾಗಿವೆ
ಈ ನಂಜನು ನೀಗಿಸು 

ಅಂತರಂಗವೀಗ ಶುದ್ದಿಯಾಗುತ್ತಿದೆ 
ಅಹಂಕಾರವೆಲ್ಲ ಕಮರಿಹೋಗಿದೆ 
ಶರಣಾಗತಿಯೊಂದೇ ನಿನ್ನ ತೋರಿದೆ 

ಆತ್ಮದೊಂದಿಗೆ ಪರಮಾತ್ಮ ನೀ ಬೆರೆತು ಹೋಗು 
ದೈವ ಸಾನಿಧ್ಯದಲ್ಲಿ ನಾ ನಿನ್ನ ಮಗು 
ಕರಪಿಡಿದು ನಿನ್ನ ಮಡಿಲಲ್ಲಿ ಮಲಗಿಸು 

ಬವಣೆಗಳ ಸಮರ ನಿಲ್ಲಲಿ 
ಪ್ರೀತಿಯ ಪ್ರಕಾರ ಎಚ್ಚಲಿ 
ನೋವಿಗೆ ನೀ ನೀಡು ಮದ್ದು 

ನಿನ್ನಾಲಯಕ್ಕೆ ಬಂದಿರುವೆ 
ನಿನ್ನ ಕಣ್ಮುಂದೆ ಪೊಡಮಟ್ಟಿರುವೆ
ಪೊರೆಯುವ ಹೊಣೆ ನಿನ್ನದು ದೇವ

೦೬೧೮ಎಎಂ೦೮೧೨೨೨೪
*ಅಪ್ಪಾಜಿ ಎ ಮುಸ್ಟೂರು* 

#ಎಲ್ಲಾ #ಪಾತ್ರಕೂ #ಹೊಂದುವ #ಪಡಿಯಚ್ಚು 

ಅಂತರಂಗ ನೋಯುತ್ತಿದೆ 
ಅನುಬಂಧ ಕಳಚುತಿದೆ 
ಏಕೆ ಹೀಗೆ ಎನ್ನುವುದು 
ಅರಿಯದಾಗಿ ಹೋಗಿದೆ 

ಪ್ರೀತಿ ಬೆಸೆದ ಬಾಂಧವ್ಯ 
ನೋವ ನೀಡುವುದು ಸಂಭಾವ್ಯ 
ಕಾರಣ ಏನೇ ಇದ್ದರೂ 
ನೋವಿಗೆ ಮದ್ದು ನೀನೇ ಇನಿಯ 

ಎದೆಯ ಭಾವಗಳ ಬೆಳಕಿಗೆ 
ಗ್ರಹಣ ಬಡಿದು ಕತ್ತಲಾಗಿ 
ಕಣ್ಣೀರಿನ ಹನಿಗಳ ಸಾಲು 
ಬತ್ತಿ ಹೋಗಿದೆ ವೇದನೆಗೆ 

ನನ್ನವರೆಂಬುವರೆಲ್ಲರೂ ದೂರ 
ನನ್ನವರೆಂದು ಕೊಂಡವರಿಗೆಲ್ಲ ನಾ ಭಾರ 
ಬದುಕಿನ ಯಾನಕ್ಕೆ ತಿರುವುಗಳು ನೂರು 
ದಿಕ್ಕು ತಪ್ಪಿದೆ ಗುರಿ ತೋರುವರಾರು 

ಹೆಣ್ಣಿನ ಬಾಳೆ ಹೀಗೆ 
ಸ್ವಂತಿಕೆ ಇಲ್ಲದ ಮಣ್ಣಿನ ಹಾಗೆ 
ಬೇಕಾದವರು ಬೇಕಾದ ರೂಪ ನೀಡಿ 
ಹೆಣ್ಣಿನ ಬದುಕಿಗೆ ಕೊಟ್ಟರು ಬೇಕಾದ ಹೆಸರು 

ತಾಯಿ ಮಡದಿ ಮಗಳು ಸೋದರಿ 
ಗೆಳತಿ ಗುರು ಇನ್ನು ಏನೇನು ಹೆಸರು 
ಎಲ್ಲ ಪಾತ್ರಗಳಿಗೂ ಹೊಂದುವ ಪಡಿಯಚ್ಚು
ಹೆಣ್ಣೆಂಬ ದೇಹಕ್ಕೆ ಕಣ್ಣಾಗರು ಯಾರು 

೦೮೨೧ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಕವನ

*ನಿನ್ನ ಮಡಿಲಲಿ*

ಈ ಕೋಪ ಸರಿಯಿಲ್ಲ 
ಆ ರೂಪ ತಾಳಿರುವೆಯಲ್ಲ
ದೂರುವ ನಿನ್ನ ಕೋರುವೆ 
ಮುದ್ದಾಗಿ ಮಾತಾಡು ಚೆಲುವೆ

ಮುನಿಸು ತರವೇ ಮುಗುದೆ
ನಕ್ಕಾಗ ನೀ ನಮ್ಮ ಹೊಲದ ಗದ್ದೆ
ತಂಗಾಳಿ ನೀಡುವಂತೆ ಮುಂಗುರುಳು 
ಹೂವಾಗಿ ಅರಳಿದವು ಸುಮಗಳು 

ಏಕಾಂಗಿ ಚಂದಿರನಿಗೆ ನೀ ಜೊತೆಯಾಗು 
ಮಿನುಗುವ ತಾರೆಗಳೊಂದಿಗೆ ನೀ ಸೇರಿ ಹೋಗು 
ಹೊಳೆವ ಹೊಂಗೆರೆಯ  ಕಿರಣ ನಿನ್ನ ನಗು 
ನಿನ್ನ ಮಡಿಲಲ್ಲಿ ನಾನಾಗುವೆ ಮಗು 

ನಿನ್ನ ಪ್ರೀತಿಯ ಮಾತು ಜೇನಂತೆ 
ಕೋಪದಿ ನುಡಿದರೆ ಗುಡುಗು ಸಿಡಿಲಂತೆ 
ಆ ನೋಟವು ಕೋಲ್ಮಿಂಚಂತೆ
ನಿನ್ನೊಲವು ಸೋನೆ ಮಳೆಯಂತೆ 

ಸಾಗರ ಕಿನಾರೆಯಲಿ ನಾ ಕಾಯುವೆ 
ಅಲೆಯಾಗಿ ನೀ ಉಕ್ಕಿ ಬರುವ ರಭಸಕೆ
ನಿನ್ನೊಳಗೆ ನಾ ಬೆರೆತು ಹೋಗಿ 
ಮುತ್ತಾಗಿ ಕೊಡುವೆ ನಿನಗೆ ಕಾಣಿಕೆ 

೦೪೫೧ಪಿಎಂ೩೦೧೧೨೦೨೪
*ಅಪ್ಪಾಜಿ ಎ ಮುಸ್ಟೂರು*

ಹಾಕದಿರು ನೀ ಕಣ್ಣೀರು 
ನನ್ನಾಸೆಗದು ತಣ್ಣೀರು 
ನಗುನಗುತ ನೀನಿರು
ಬದುಕಲಿ ಆನಂದದ ಸೊಡರು 

ನಲ್ಮೆಯ ಗೆಳತಿಯೆ ನೀನು 
ನನ್ನ ಪಾಲಿಗೆ ಸವಿ ಜೇನು 
ನೀನಾಡುವ ಮಾತೆಲ್ಲ ನನಗೆ 
ಸ್ಪೂರ್ತಿಯ ಚಿಮ್ಮು ಹಲಗೆ 

ಹೃದಯಕ್ಕೆ ನೀ ಹೇಳು ಸಾಂತ್ವನ 
ಪ್ರೀತಿಯಲಿ ಬರೆವೆನಾಗ ಕವನ
ಖುಷಿ ಖುಷಿಯಾಗಿದ್ದರೆ ಜೀವನ
ಸದಾ ಸಂಭ್ರಮದ ಹೂಬನ

ನೀನಿಲ್ಲದ ಈ ಬಾಳು ಸೆರೆವಾಸ 
ನೀನಲ್ಲವೇ ನನ್ನ ಬಾಳ ವಿಶೇಷ 
ಆರಾಧಸುವೆ ನಿನ್ನ ಪ್ರೇಮ ಪೂಜೆಯಲ್ಲಿ
ಆಲಂಗಿಸು ನನ್ನ ನಿನ್ನೀ ತೋಳಬಂದಿಯಲಿ

ನೂರಾರು ಕನಸುಗಳು ನನಸಾಗಲಿ 
ಹೃದಯದ ಬಯಕೆಗಳೆಲ್ಲ ಕೈಗೂಡಲಿ
ಪ್ರೀತಿಯ ಈ ಸಂದೇಶ ಚಿರಾಯುವಾಗಲಿ 
ನಮ್ಮಿಬ್ಬರ ಅನುಬಂಧ ಅಮರವಾಗಲಿ

೦೩೩೨ಪಿಎಂ೦೧೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ನೊಂದಿದೆ ಜೀವ 
ಬೆಂದಿದೆ ಭಾವ
ಸಾವು ಬಯಸೋದು ಸಹಜ
ಬದುಕ ಗೆಲ್ಲು ಓ ಮನುಜ

ಅಮ್ಮ ಕಷ್ಟಪಟ್ಟು ಕೊಟ್ಟ ಜೀವ 
ಅಪ್ಪ ದುಡಿದು ದಣಿದು ನೀಡಿ ಜೀವನ 
ಸಣ್ಣದೊಂದು ಕಾರಣಕ್ಕೆ 
ಸತ್ತು ಬಿಡುವ ಮನಸು ದುರ್ಬಲ 

ಸ್ನೇಹದ ನಂಬಿಕೆಯಾಗು 
ಪ್ರೀತಿಯ ಬೆಂಬವಾಗು
ಬದುಕಿನ ಪ್ರತಿ ಕ್ಷಣವೂ 
ಆನಂದದಿ ಮುಂದೆ ಸಾಗಲಿ 

ಯಾರಿಗಿಲ್ಲ ಇಲ್ಲಿ ನೋವು 
ಯಾರಿಗಿಲ್ಲ ಇಲ್ಲಿ ಸಾವು 
ಹಿಂದೆ ಮುಂದೆ ಹಾದಿಹೋಕರು
ಸರತಿ ಸಾಲಿನಲ್ಲಿ ನಾನು ನೀನು 

ಸಾವೇ ಬಂದು ಕರೆದರೂ 
ಹೋಗದ ವಿಶ್ವಾಸವಿರಲಿ
ಸಾವು ಕೂಡ ಹೆಮ್ಮೆ ಪಡುವ 
ಹಾಗೆ ಈಸಬೇಕು ಇದ್ದು ಜೈಸಬೇಕಿಲ್ಲಿ

ಬಿಡು ಬಿಡು ಚಿಂತೆಯ ಓ ಜೀವವೇ 
ನಡುವೆ ಎದ್ದು ಹೋಗುವುದು ತರವೇ
ನಾಳೆಯ ಭರವಸೆ ಇರಲಿ 
ಇಂದಿನ ಹಂಬಲ ಹೆಚ್ಚಾಗಲಿ 

೩೧೫ಪಿಎಂ೦೨೧೨೨೦೨೪
ಅಪ್ಪಾಜಿ ಎ ಮುಸ್ಟೂರು 

#ಒಲವಿನ #ಭಜನೆ 

ಮೋಡಗಳು ಮುಸುಕಿದ ರಾತ್ರಿಯಲಿ 
ತಂಗಾಳಿ ಬೀಡುವ ಹೊತ್ತಿನಲ್ಲಿ 
ನಿನ್ನ ನೆನಪು ತೇಲಿ ಬಂತು ಮತ್ತಿನಲ್ಲಿ 
ಎದೆಯ ಭಾವಗಳ ನೀರವತೆ 
ವಿರಹ ವೇದನೆಯ ಕವಿತೆ 
ಮರುಕದಲ್ಲಿ ಮುಲುಕುತ್ತಾ ಮಲಗಿದೆ 

ನಿದ್ರೆಯು ಹತ್ತದ ಕಣ್ಗಳಲ್ಲಿ 
ಮದ್ಯಧೂಮಪಾನಗಳ ಜೊತೆಯಲ್ಲಿ 
ಕಥೆಯ ಹೇಳುತ ವ್ಯಥೆಯಲಿ ಓಲಾಡಿದೆ
ಪಾಪಿ ಹೃದಯವ ಕೆರೆದು
ಗಾಯ ಘಾಸಿಗೊಳಿಸಿದ ನೆನಪು 
ಮರೆತರೂ ಮರುಕಳಿಸಿ ಅಣಕಿಸುತ್ತಿದೆ

ಕಪ್ಪೆಗಳ ವಟಗುಟ್ಟುವ ಶಬ್ದ 
ನರಿಗಳು ಕೂಗುವ ಸದ್ದು 
ಓ ಎನ್ನುವ ನಾಯಿಗಳ ಆಕ್ರಂದನ 
ಪ್ರೀತಿಯ ಜೀವವ ಒದ್ದು
ಒಂಟಿ ಬಿಟ್ಟಿರಲು ಇಲ್ಲ ಮದ್ದು 
ಏಕಾಂತವೂ ಇಲ್ಲಿ ನಿತ್ಯ ಬಂಧನ 

ತಬ್ಬಲಿಯು ನೀನಾದೆ ಹೃದಯವೇ 
ನಾ ಒಬ್ಬಂಟಿಯಾದೆ ಓ ಸಮಯವೇ 
ಬೆಳಕು ಹರಿಯುವ ತನಕ ಒಲವಿನದೇ ಭಜನೆ 
ದಕ್ಕಿದ ದಾರಿದ್ರೆಲ್ಲ ನೀಗಿ 
ಮತ್ತೆ ಹೊಸತನದ ಪ್ರೇಮಿಯಾಗಿ 
ದಿನವನ್ನಾರಂಭಿಸುವುದೆನ್ನ ಚಿಂತನೆ 

೧೦೧೨ಪಿಎಂ೦೪೧೨೨೦೨೪
ಅಪ್ಪಾಜಿ ಎ ಮುಸ್ಟೂರು 

*ಬಾಳ ಯಾತ್ರೆಯ ದಿಬ್ಬಣ* 
ನೀಲ ನಭದ ನಿನ್ನ ನಲ್ಮೆಯಲ್ಲಿ 
ಮೂಡಿ ಬಂದ ಚಂದ್ರ ಬಿಂಬ 
ನಿನ್ನ ತಾರುಣ್ಯಕ್ಕೆ ತಲೆಬಾಗಿತು 

ಹಸಿರ ಮಡಿಲ ತೊಟ್ಟಿನಲ್ಲಿ 
ಬಿರಿದ ಮೊಗ್ಗು ಅರಳುವಲ್ಲಿ 
ನಿನ್ನ ರೂಪದ ಗಂಧ ಹೊಮ್ಮಿತು 

ಮುಸ್ಸಂಜೆಯ ರಂಗಲ್ಲಿಯೂ
ಗೋಧೂಳಿಯ ಚಿತ್ರಾವಳಿಯು 
ನಿನ್ನನ್ನೇ ಅಲ್ಲಿ ಚಿತ್ರಿಸಿತ್ತು 

ರಾತ್ರಿ ಕೂಡ ರಮ್ಯವಾಗಿ
ಬೆಳದಿಂಗಳು ಹಿತವಾಗಿ 
ನಿನ್ನನ್ನೇ ಮೋಹಿಸುತ್ತಿತ್ತು 

ನೈದಿಲೆ ಅರಳುವ ಹೊತ್ತು 
ಪೌರ್ಣಿಮೆಯು ಹಾಲು ಚೆಲ್ಲಿತ್ತು 
ನಿನ್ನ ಬರುವಿಕೆಗಾಗಿ ಕಾಯುತ 

ನಲ್ಲ ನಲ್ಲೆಯರ ಸರಸ ಸಲ್ಲಾಪ 
ಇರಹವಿರದ ಸಂತೃಪ್ತ 
ಇಲಿಯಳಧರ ಸವಿಯುತ 

ಮಧುಚಂದ್ರದ ಈ ಮಿಲನ 
ಮಧುಬಟ್ಟಲ ಸವಿ ಪಾನ 
ಬದುಕಿಗೆ ರಸದೌತಣ 

ಬದುಕು ನಿತ್ಯ ನೂತನ 
ಭರವಸೆ ತುಂಬಿದ ಈ ಬಂಧನ 
ಬಾಳಯಾತ್ರೆಯ ದಿಬ್ಬಣ 

೦೫೦೬೦೫೧೨೨೦೨೪
*ಅಪ್ಪಾಜಿ ಎ ಮುಸ್ಟೂರು*
*ಒಲವ ಆರಾಧನೆ* 

ಬಾನ ಅಂಚಲ್ಲಿ ಮೂಡಿದ 
ಚಿತ್ತಾರದ ಸವಿ ರೂಪ ನೀನು 
ಇರುಳ ಬಾಂದಳದಲ್ಲಿ ಮಿನುಗುವ 
ತಾರೆಗಳ ಗೆಳತಿಯೇ ನೀನು 

ತಂಗಾಳಿ ತೀಡುವಾಗ ಸಂಭ್ರಮಿಸೋ
ಮುಂಗುರುಳ ಒಡತಿ ನೀನು 
ಬೆಳದಿಂಗಳಗೆ ಉಕ್ಕುವ ಅಲೆಯಂತ
ತಾರುಣ್ಯ ತುಂಬಿದ ತರುಣಿ ನೀನು 

ಹೂ ಬಿಟ್ಟು ಬಳುಕುವ ಲತೆಯಂತೆ
ಸುಮಬಾಲೆ ನಿನ್ನೀ ತನುವ ಸಂಭ್ರಮ 
ಮಧುವನರಸಿ ಬರುವ ದುಂಬಿಯಂತೆ 
ಮುದ್ದಿಸಿ ಮೈ ಮರೆಸಲಿ ನಮ್ಮ ಸಂಗಮ

ಹದವಾಗಿ ನೆನೆದ ಮಣ್ಣಿಂದ ಮೂಡಿದ 
ಸೊಬಗ ಶೃಂಗಾರದ ಪ್ರತಿಮೆ ನೀನು 
ಏನೆಂದು ಬಣ್ಣಿಸಲಿ ನಿನ್ನ ರೂಪ 
ಯಾವ ಉಪಮೆಯು ಸಾಲದು ಇನ್ನು 

ಅಂತರಂಗದ ಭಾಷೆಗೆ ನೀ ನುಡಿಯಾಗು 
ಕವಿ ಭಾವದ ತುಡಿತಕೆ ಮಿಡಿತವಾಗು 
ಎಂದೆಂದಿಗೂ ಅಳಿಯದ ಒಲವಿನ ಚೆಲುವೆ ನೀನು 
ಉಸಿರಿರುವ ತನಕ ಆ ಚೆಲುವಿನ ಆರಾಧಕ ನಾನು 

೦೫೨೧ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು* 

ಅಂಜಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ 
ಕರ್ನಾಟಕ ರಾಜ್ಯ ಘಟಕ 

ದತ್ತಪದ:- *ಹಸಿವು* 
ಶೀರ್ಷಿಕೆ:- *ಹಸಿದ ಜೀವ* 

ಒಡಲ ಕಡಲು ಬತ್ತಿ
ಎಲುಬು ಮೂಳೆಗೆ ತೊಗಲು ಹತ್ತಿ 
ಚಿಂದಿ ಹುಟ್ಟ ದೇಹದೊಳಗೆ 
ಹಸಿವು ಸಮರ ಸಾರಿದೆ 

ಅಲ್ಲೆಲ್ಲೋ ಮದುವೆ ಮುಂಜಿಗಳಲ್ಲಿ 
ಬಗೆ ಬಗೆಯ ಭಕ್ಷ್ಯ ಭೋಜ್ಯಗಳೆಲ್ಲ
ಹಸಿವಿಲ್ಲದವರ ಎಲೆಯ ಮೇಲೆ 
ಅಸುನೀಗಿ ಮೋರಿ ಸೇರುತ್ತಿದೆ 

ಮುಸುರೆ ಸೇರುವ ಹಳಸಿದನ್ನವ
ಮನೆ ಬಾಗಿಲಿಗೆ ಬಂದವನಿಗಿಕ್ಕುವ
ಹೊಟ್ಟೆ ತುಂಬಿದವರ ಅಟ್ಟಹಾಸಕೆ 
ಮಮ್ಮಲ ಮರುಗಿದೆ ಹಸಿದ ಜೀವ

ಅನ್ನ ದೇವರು ಎಂದು ಹೇಳುವರೆಲ್ಲ 
ನಂಜಿನಂತೆ ಎಂಜಲು ಬಿಟ್ಟು ಹೋಗುವರು
ಹಸಿದವನಿಗೆ ರುಚಿ ತಿಳಿಯುವುದಿಲ್ಲ 
ಹೊಟ್ಟೆ ತುಂಬಿದರೆ ಸಾಕು ಬೇರೇನು ಬೇಕಿಲ್ಲ

ವ್ಯರ್ಥ ಮಾಡುವಿರೇಕೆ ಅನ್ನವನ್ನು 
ಅದರ ಹಿಂದಿನ ಶ್ರಮಿಕರ ಅರಿತಿರುವರೇ ನೀವು 
ಪೈರು ಅನ್ನವಾಗುವವರೆಗೆ 
ಬೆವರು ಸುರಿಸಿದವರೆಷ್ಟೋ ಬಲ್ಲಿರೇನು

೦೫೩೫ಪಿಎಂ೦೬೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಬೆಳಕೇ ಇರದ ಕಪ್ಪು ಕತ್ತಲ ಹಾದಿ 
ಕಸಿದುಕೊಂಡಿದ್ದು ಬಾಳಿನೆಲ್ಲ ನೆಮ್ಮದಿ 
ಕಷ್ಟಗಳ ಕಾರಿರುಳು ಕವಿದು 
ಹೊಸ ಬೆಳಕಿಗಾಗಿ ಹಂಬಲಿಸುತ್ತಿದೆ ಮನ 

ಹೆಜ್ಜೆ ಹೆಜ್ಜೆಗೂ ಇಲ್ಲಿ ಕಲ್ಲು ಮುಳ್ಳುಗಳದೆ ಪಾರಮ್ಯ 
ಇಂಥ ಸಂಕಷ್ಟದಲ್ಲಿ ಹೇಗೆ ಮುಟ್ಟುವುದು ಗಮ್ಯ 
ಆದರೂ ಎದೆಗುಂದದೆ ಎಚ್ಚರಿಕೆಯ ಹೆಜ್ಜೆನಿಟ್ಟು 
ಗುರಿ ಮುಟ್ಟುವತ್ತ ಸಾಗಿದೆ ಪಯಣ 

ಹಾದಿ ತೋರುವ ಮಾರ್ಗದರ್ಶಕರೆಲ್ಲ 
ಅಲ್ಲಲ್ಲೆ ನಡುವೆ ಬಿಟ್ಟು ಹೋದರು 
ಮನವೆಂಬ ದಿಗ್ದರ್ಶಕನ ಆತ್ಮವಿಶ್ವಾಸ 
ಒಬ್ಬಂಟಿಯಲ್ಲಿ ಛಲ ತುಂಬುತ್ತಿದೆ 

ಏನೇ ಆದರೂ ಗೆಲ್ಲಬೇಕು ಬದುಕನ್ನು 
ಕೊಲ್ಲುವ ಆಯುಧಗಳಿದ್ದರೇನು ಕಾಯುವ ಕೈಗಳಿವೆ 
ಎಂಬ ಭರವಸೆಯ ಈ ಹೋರಾಟ 
ತೆರೆಯುವುದು ಮುಂದೊಂದು ದಿನ ಸಾಧನೆಯ ಸಂಪುಟ 

ಅಂಜದಿರು ಮನವೇ ಮುನ್ನುಗ್ಗು ನೀನು 
ಉಳಿವಿಗಾಗಿ ಇಲ್ಲಿ ಹೋರಾಟ ಅನಿವಾರ್ಯ 
ಗೆಲ್ಲುವ ತನಕ ನೀನಾರಿಗೂ ಗೊತ್ತಾಗದು 
ಗೆದ್ದ ಮೇಲೆ ಜಗವೇ ನಿನ್ನ ಹಿಂದಿಂದೆ ಬರುವುದು

೦೫೫೯ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*

ಎಲ್ಲೆಲ್ಲಿಯೂ ನೀನಿರುವೆ ಎಂದು 
ಹುಡುಕುತ್ತಾ ಅಲೆಯುತ್ತಿರುವೆ 
ಕಾಣದೆ ನೀನು ಎಲ್ಲಿ ಹೋದೆ 

ಬದುಕಿನಲ್ಲಿ ಬಳಲಿ ಬಂದೆ 
ನಿನ್ನ ಪಾದ ಸ್ಪರ್ಶಕಾಗಿ ಕಾದೆ 
ನಿನ್ನ ಕಾಣದೆ ನಾ ಕಂಗಾಲಾದೆ 

ಬರಿ ಕಲ್ಲು ಮುಳ್ಳುಗಳ ತುಳಿದು ಬಂದೆ 
ಹೂ ಹಾಸಿನ ದಾರಿ ಕಾಣದಾದೆ 
ಕೈ ಹಿಡಿದು ಕರೆದುಕೋ ನಿನ್ನ ಬಳಿಗೆ 

ಕನವರಿಕೆಯ ಬದುಕಾಗಿದೆ 
ಕಣ್ಣಾಲಿಗಳು ಮಂಜಾಗಿವೆ
ಈ ನಂಜನು ನೀಗಿಸು 

ಅಂತರಂಗವೀಗ ಶುದ್ದಿಯಾಗುತ್ತಿದೆ 
ಅಹಂಕಾರವೆಲ್ಲ ಕಮರಿಹೋಗಿದೆ 
ಶರಣಾಗತಿಯೊಂದೇ ನಿನ್ನ ತೋರಿದೆ 

ಆತ್ಮದೊಂದಿಗೆ ಪರಮಾತ್ಮ ನೀ ಬೆರೆತು ಹೋಗು 
ದೈವ ಸಾನಿಧ್ಯದಲ್ಲಿ ನಾ ನಿನ್ನ ಮಗು 
ಕರಪಿಡಿದು ನಿನ್ನ ಮಡಿಲಲ್ಲಿ ಮಲಗಿಸು 

ಬವಣೆಗಳ ಸಮರ ನಿಲ್ಲಲಿ 
ಪ್ರೀತಿಯ ಪ್ರಕಾರ ಎಚ್ಚಲಿ 
ನೋವಿಗೆ ನೀ ನೀಡು ಮದ್ದು 

ನಿನ್ನಾಲಯಕ್ಕೆ ಬಂದಿರುವೆ 
ನಿನ್ನ ಕಣ್ಮುಂದೆ ಪೊಡಮಟ್ಟಿರುವೆ
ಪೊರೆಯುವ ಹೊಣೆ ನಿನ್ನದು ದೇವ

೦೬೧೮ಎಎಂ೦೮೧೨೨೨೪
*ಅಪ್ಪಾಜಿ ಎ ಮುಸ್ಟೂರು* 

#ಎಲ್ಲಾ #ಪಾತ್ರಕೂ #ಹೊಂದುವ #ಪಡಿಯಚ್ಚು 

ಅಂತರಂಗ ನೋಯುತ್ತಿದೆ 
ಅನುಬಂಧ ಕಳಚುತಿದೆ 
ಏಕೆ ಹೀಗೆ ಎನ್ನುವುದು 
ಅರಿಯದಾಗಿ ಹೋಗಿದೆ 

ಪ್ರೀತಿ ಬೆಸೆದ ಬಾಂಧವ್ಯ 
ನೋವ ನೀಡುವುದು ಸಂಭಾವ್ಯ 
ಕಾರಣ ಏನೇ ಇದ್ದರೂ 
ನೋವಿಗೆ ಮದ್ದು ನೀನೇ ಇನಿಯ 

ಎದೆಯ ಭಾವಗಳ ಬೆಳಕಿಗೆ 
ಗ್ರಹಣ ಬಡಿದು ಕತ್ತಲಾಗಿ 
ಕಣ್ಣೀರಿನ ಹನಿಗಳ ಸಾಲು 
ಬತ್ತಿ ಹೋಗಿದೆ ವೇದನೆಗೆ 

ನನ್ನವರೆಂಬುವರೆಲ್ಲರೂ ದೂರ 
ನನ್ನವರೆಂದು ಕೊಂಡವರಿಗೆಲ್ಲ ನಾ ಭಾರ 
ಬದುಕಿನ ಯಾನಕ್ಕೆ ತಿರುವುಗಳು ನೂರು 
ದಿಕ್ಕು ತಪ್ಪಿದೆ ಗುರಿ ತೋರುವರಾರು 

ಹೆಣ್ಣಿನ ಬಾಳೆ ಹೀಗೆ 
ಸ್ವಂತಿಕೆ ಇಲ್ಲದ ಮಣ್ಣಿನ ಹಾಗೆ 
ಬೇಕಾದವರು ಬೇಕಾದ ರೂಪ ನೀಡಿ 
ಹೆಣ್ಣಿನ ಬದುಕಿಗೆ ಕೊಟ್ಟರು ಬೇಕಾದ ಹೆಸರು 

ತಾಯಿ ಮಡದಿ ಮಗಳು ಸೋದರಿ 
ಗೆಳತಿ ಗುರು ಇನ್ನು ಏನೇನು ಹೆಸರು 
ಎಲ್ಲ ಪಾತ್ರಗಳಿಗೂ ಹೊಂದುವ ಪಡಿಯಚ್ಚು
ಹೆಣ್ಣೆಂಬ ದೇಹಕ್ಕೆ ಕಣ್ಣಾಗರು ಯಾರು 

೦೮೨೧ಎಎಂ೦೮೧೨೨೦೨೪
*ಅಪ್ಪಾಜಿ ಎ ಮುಸ್ಟೂರು*