Thursday, February 27, 2025

ಕವನ

ಕನ್ನಡ ನನ್ನುಸಿರು
ಕರುನಾಡು ನನ್ನ ಹೆಸರು
ಪ್ರೀತಿ ಕೊಟ್ಟ ನಾಡಿಗೆ
ಜೀವ ಕೊಡುವೆ ಭಾಷೆಗೆ

ತಾಯ ಗರ್ಭದಿಂದ ಬಂದ
ತಾಯ್ನುಡಿಯ ನಂಟಿದು
ಉಸಿರಿರುವ ತನಕ ಜೊತೆ ಬರುವ
ಅಕ್ಷರದನುಬಂಧವಿದು

ಕಬ್ಬಿಗರೆದೆಯಲಿ ಬಿದ್ದ ಭಾವ
ಅಕ್ಕರದ ರೆಕ್ಕೆ ಬಿಚ್ಚಿ ಹಾರಿದೆ
ನಾಡು ನುಡಿಯ ನಲುಮೆ ಸಿರಿಯ
ಧಾರೆಯೆರೆದು ನನ್ನ ಸೇರಿದೆ

ಕೆಂಪು ಹಳದಿ ತೊಟ್ಟು
ಅಭಿಮಾನದಿ ಹಾರಾಡುವೆ
ಭಾಷೆಗಾಗಿ ಎಂದೆಂದಿಗೂ
ಈ ಜೀವನ ಮುಡಿಪಿಡುವೆ

ಹರಸು ತಾಯಿ ಭುವನೇಶ್ವರಿ
ಕುವರ ನಾ ತೋರು ಸರಿದಾರಿ
ಸಿರಿಗನ್ನಡ ನುಡಿಯಲಿ ನಾಲಿಗೆ
ಸಿರಿ ತುಂಬಲಿ ನನ್ನೀ ನಾಡಿಗೆ

೦೪೦೩ಪಿಎಂ೦೫೧೧೨೦೨೨
*ಅಮುಭಾವಜೀವಿ ಮುಸ್ಟೂರು*

No comments:

Post a Comment