Saturday, November 26, 2016
Sunday, November 20, 2016
ಬದುಕಿನ ತಿರುಳು
ಪಂಥೀಯ ಭೇದ ನನಗೇಕೆ
ನಾ ಬಂದಿಹೆ ಸಹಪಂಕ್ತಿ ಭೋಜನ ಮಾಡೋಕೆ
ಯೋಚನೆಗಳಾಚೆಗೆ ಬದುಕಬೇಕು
ನಾ ಸಮಾಜದೊಳಗೆ ಇರಬೇಕು
ಅವನೂ ಬೇಕು ಇವನೂ ಬೇಕು
ಮೊದಲು ನಾನು ನಾನಾಗಿರಬೇಕು
ಎಡಗಡೆ ಬಂಧು ಬಲಗಡೆ ಗೆಳೆಯ
ಎರಡರ ನೋಟ ಒಂದಾಗದೇ ಪ್ರಳಯ
ಕರಿಯನಲ್ಲ ನಾನು ಬಿಳಿಯನಲ್ಲ
ಮೊದಲು ಮಾನವನಾಗಬೇಕು ನಾನು ಸ್ಪೃಶ್ಯನೋ ಅಸ್ಪೃಶ್ಯನೋ
ಈ ತಾರತಮ್ಯ ನಿಲ್ಲಲೇಬೇಕು
ನಡೆವ ದಾರಿಗೆ ಕಾಲೇ ಮುಖ್ಯ
ಅರಿತು ನಡೆಯೆ ಸೌಖ್ಯ
ಎಡಬಲದ ಹಂಗೇಕೆ
ಬಂದು ಬದುಕಿ ಹೋಗೋಕೆ
ಗುಡಿ ಗೋಪುರವಿರಲಿ
ಚರ್ಚು ಮಸೀದಿಯೇ ಇರಲಿ
ನಂಬಿಕೆಯಲಿ ದೇವರು ಒಬ್ಬನೇ
ದಾರಿ ಬೇರೆಯಾದರೂ ಒಂದೇ ಚಿಂತನೆ
ನನಗಿಲ್ಲ ಅವರವರ ಪಂಥೀಯ ಗೀಳು ಸರ್ವರಿಗೆ ಸಮಪಾಲು ಸರ್ವರಿಗೆ ಸಮಬಾಳು
ಇದೇ ನನ್ನ ಬದುಕಿನ ತಿರುಳು ಅದನುಳಿದೆಲ್ಲಾ ಮರುಳು
0924ಪಿಎಂ111116
ಅಮುಭಾವಜೀವಿ
ಪವನ್ ಕುಮಾರ್ ಅವರ ವಾದ ಕಾವ್ಯಕ್ಕೆ ವಿಷಯದ ಸರಕು ಯಾವುದೂ ಸಿಗಲಿಲ್ಲವೇ ಬೌದ್ಧಿಕ ಧಾರಿದ್ರ್ಯವೇ? ವಗ೯ ಸಂಘರ್ಷದಿಂದ ಹೊರ ಬನ್ನಿ ಜನಾಂಗೀಯ ಏಕ ಮುಖ ಬಾವ ಪೂರ್ವಗ್ರವ ಪೀಡಿತ ಸಂಕುಚಿತ ಮನೋಭಾವದಿಂದ ಹೊರಬನ್ನಿ ಎಂದು ಅರ್ಥ.
ನನ್ನ ಪ್ರತಿಕ್ರಿಯೆ
ಸಂಕುಚಿತ ಇಲ್ಲ ನನ್ನದು ವಿಶಾಲ ಮನೋಭಾವ. ಸರ್ವರೊಳಗಿದ್ದು ಬಾಳಬೇಕು