*ಅದಾವ ಶಕ್ತಿ ಕಾಪಾಡಬೇಕೋ*
ಭ್ರಷ್ಟ ದುಷ್ಟರು ಎಲ್ಲಾ
ಕೈಗೆ ಸಿಗದೆ ಮೆರೆಯುತಿಹರು
ದಕ್ಷ ಅಧಿಕಾರಿಗಳೆಲ್ಲಾ
ಅನುಮಾನಾಸ್ಪವಾಗಿ ಸಾಯುತಿಹರು
ಸ್ವಾತಂತ್ರ್ಯದ ಸಮಾನತೆ ಎಂಬುದು
ಸಂವಿಧಾನದ ಆಶಯವಾದರೆ
ಅಧಿಕಾರದಮಲೇರಿದ ನಾಯಕರು
ಅಧಿಕಾರಿಗಳ ಹಿಂಸಿಸಿ ದೌರ್ಜನ್ಯವೆಸಗುತಿಹರು
ಭ್ರಷ್ಟಾಚಾರದ ಕಬಂಧ ಬಾಹು
ಎಲ್ಲವನ್ನೂ ಕಬಳಿಸುತ್ತಿದೆ
ಸಾಮಾಜಿಕ ನ್ಯಾಯಕ್ಕೆ ಹೋರಾಡುವ
ಅಧಿಕಾರಿಗಳ ಬಲಿಯಾಗುತಿದೆ
ಮಾಫಿಯಾಗಳೇ ಇಂದು ಆಳುತಿವೆ
ಅಮಾಯಕರ ಹೆಣ ಬೀಳುತಿವೆ
ಕಾನೂನು ಕಣ್ಮುಚ್ಚಿ ಕೂತಿದೆ
ಪ್ರಾಮಾಣಿಕತೆ ಬೇಸತ್ತು ಸೋತಿದೆ
ನಿಷ್ಟಾವಂತರಿಗೆ ರಕ್ಷಣೆಯೇ ಇಲ್ಲ
ಕಳ್ಳ ಖದೀಮರಿಗೆ ಶಿಕ್ಷೆಯೇ ಆಗುತಿಲ್ಲ
ಅಧರ್ಮದ ಕರ್ಮ ಕಳೆವುದು ಯಾವಾಗ
ಧರ್ಮ ಸಂಸ್ಥಾಪನೆಗೊಳ್ಳುವುದೇ ಈಗ
ದಕ್ಷತೆ ಮೆರೆದವರು ರಕ್ಷಿಸಲು
ಅದಾವ ಶಕ್ತಿ ಕಾಪಾಡಬೇಕೋ
ಅದೇ ಭ್ರಷ್ಟರನು ಬಚ್ಚಿಟ್ಟಿದೆ
ಅಮಾಯಕರ ದಮನ ಮಾಡುತಿದೆ.
1242ಪಿಎಂ20052916
*ಅಮುಭಾವಜೀವಿ*
No comments:
Post a Comment