Sunday, September 20, 2020

ಕವನ

*ಪ್ರವಾಹ ಫಜೀತಿ*

ಈ ಬದುಕನ್ನೇ ಕೊಚ್ಚಿ
ಹೊರಟಿದೆ ಪ್ರವಾಹ
ನೆಲೆಯಿಲ್ಲದೆ ನರಳುತ್ತಿದೆ
ಸಂತೃಪ್ತ ಬದುಕಿನ ವಿನಾಶ

ಮನೆ ಮಠಗಳ ತೊರೆದು
ಕಾಳುಕಡಿಯನೆಲ್ಲ ಬಿಟ್ಟು
ಬಡಜೀವವ ಬದುಕಿಸಿಕೊಳ್ಳಲು
ಯುದ್ಧಕ್ಕೂ ಮಿಗಿಲಾದ ಹೋರಾಟವಿದು

ಹೊಲ ಗದ್ದೆಗಳೆಲ್ಲ ಮುಳುಗಿ
ದನಕರುಗಳು ಕೊಚ್ಚಿಹೋಗಿ
ನರಕದ ದರ್ಶನವಾಯಿತು
ಮಹಾ ಮಳೆಯು ತಂದ ಪ್ರವಾಹದಿಂದ

ಮಕ್ಕಳುಮರಿ ಕಟ್ಟಿಕೊಂಡು
ಗಂಜಿ ಕೇಂದ್ರದಲ್ಲಿ ಉಳಿದುಕೊಂಡು
ಅವರೆಸೆಯುವ ಭಿಕ್ಷೆಗಾಗಿ
ಕೈಚಾಚಿ ಕೂರುವಂತಾಗಿದೆ ದೈನೇಸಿ ಬದುಕು

ಉಳ್ಳವರ ಅಟ್ಟಹಾಸ
ಕಳ್ಳಕಾಕರ ನಿತ್ಯ ಕೆಲಸ
ವಿಷಜಂತುಗಳ ವರ್ತುಲದಾಚೆ
ಬದುಕು ಕಟ್ಟಿಕೊಳ್ಳಬೇಕಿದೆ

4.50 ಪಿಎಂ 18 09 2020

*ಅಮುಭಾವಜೀವಿ ಮುಸ್ಟೂರು*

No comments:

Post a Comment