Thursday, March 28, 2024

ಕವಿತೆ

ಬತ್ತದಿರಲಿ ಭರವಸೆ
ಬದುಕಲಿ ಬೇಡ ಹತಾಶೆ

ನಡೆವ ಹಾದಿಯಲ್ಲಿ ಕಲ್ಲು ಮುಳ್ಳು
ಸಹಜವಾದರೂ ಸಾಗಬೇಕು
ಅಂಜಿ ಹಿಂದಡಿ ನೀ ಇಟ್ಟರೆ
ನೋಡುವವರು ಆಡಿ ನಗುತ್ತಾರೆ

ಉರಿ ಬಿಸಿಲು ಸುರಿಯುತ್ತಿದ್ದರು
ಒಣಗದೆ ಮರ ಮತ್ತೆ ಚಿಗುರುವಂತೆ
ಬತ್ತಿ ಹೋದ ನದಿತೊರೆಗಳೆಲ್ಲ
ಮಳೆ ಬರಲು ಮತ್ತೆ ಹೊಕ್ಕುವಂತೆ

ಎದ್ದು ನಡೆ ನೀ ಬಿದ್ದ ಜಾಗದಿಂದ ಮತ್ತೆ
ಗುರಿಯ ಗಮ್ಯ ಬದಲಾಗದಂತೆ
ದಣಿದರು ಮಣಿಯದ ಛಲವಿರಲಿ
ಸಾಧನೆಯ ಸಂತೃಪ್ತಿಗಾಗಿ ಸಾಗುತ್ತಿರಲಿ

ಬೆನ್ನ ಹಿಂದೆ ಆಡಿಕೊಳ್ಳುವರು ನೂರು ಜನ
ಮುಂದೆ ಬಂದು ಯಾರು ಸಹಾಯ ನೀಡರು
ಅನುಭವವೇ ನಮಗೆ ಮಾರ್ಗದರ್ಶಕ
ಆತ್ಮವಿಶ್ವಾಸವೇ ಅತ್ತ ತಳ್ಳುವ ಪ್ರೇರಕ

ಗೆಲ್ಲದೆ ಮರಳಬಾರದು ಬದುಕಿನಲ್ಲಿ
ಸೋಲುವ ಭೀತಿ ಇರಬಾರದು ಎದೆಯಲ್ಲಿ
ಗೆದ್ದೆ ಗೆಲ್ಲುವೆ ಒಂದು ದಿನ
ಎಂದೆಂದೂ ನಿನ್ನಲ್ಲಿರಲಿ ಒಳ್ಳೆತನ
೦೩೫೦ಪಿಎಂ೨೮೦೩೨೦೨೪
*ಅಮು ಭಾವಜೀವಿ ಮುಸ್ಟೂರು*

No comments:

Post a Comment