ಬತ್ತದಿರಲಿ ಭರವಸೆ
ಬದುಕಲಿ ಬೇಡ ಹತಾಶೆ
ನಡೆವ ಹಾದಿಯಲ್ಲಿ ಕಲ್ಲು ಮುಳ್ಳು
ಸಹಜವಾದರೂ ಸಾಗಬೇಕು
ಅಂಜಿ ಹಿಂದಡಿ ನೀ ಇಟ್ಟರೆ
ನೋಡುವವರು ಆಡಿ ನಗುತ್ತಾರೆ
ಉರಿ ಬಿಸಿಲು ಸುರಿಯುತ್ತಿದ್ದರು
ಒಣಗದೆ ಮರ ಮತ್ತೆ ಚಿಗುರುವಂತೆ
ಬತ್ತಿ ಹೋದ ನದಿತೊರೆಗಳೆಲ್ಲ
ಮಳೆ ಬರಲು ಮತ್ತೆ ಹೊಕ್ಕುವಂತೆ
ಎದ್ದು ನಡೆ ನೀ ಬಿದ್ದ ಜಾಗದಿಂದ ಮತ್ತೆ
ಗುರಿಯ ಗಮ್ಯ ಬದಲಾಗದಂತೆ
ದಣಿದರು ಮಣಿಯದ ಛಲವಿರಲಿ
ಸಾಧನೆಯ ಸಂತೃಪ್ತಿಗಾಗಿ ಸಾಗುತ್ತಿರಲಿ
ಬೆನ್ನ ಹಿಂದೆ ಆಡಿಕೊಳ್ಳುವರು ನೂರು ಜನ
ಮುಂದೆ ಬಂದು ಯಾರು ಸಹಾಯ ನೀಡರು
ಅನುಭವವೇ ನಮಗೆ ಮಾರ್ಗದರ್ಶಕ
ಆತ್ಮವಿಶ್ವಾಸವೇ ಅತ್ತ ತಳ್ಳುವ ಪ್ರೇರಕ
ಗೆಲ್ಲದೆ ಮರಳಬಾರದು ಬದುಕಿನಲ್ಲಿ
ಸೋಲುವ ಭೀತಿ ಇರಬಾರದು ಎದೆಯಲ್ಲಿ
ಗೆದ್ದೆ ಗೆಲ್ಲುವೆ ಒಂದು ದಿನ
ಎಂದೆಂದೂ ನಿನ್ನಲ್ಲಿರಲಿ ಒಳ್ಳೆತನ
೦೩೫೦ಪಿಎಂ೨೮೦೩೨೦೨೪
*ಅಮು ಭಾವಜೀವಿ ಮುಸ್ಟೂರು*
No comments:
Post a Comment