ಅಬ್ಬಬ್ಬಾ ಎಂಥಾ ಭೀಕರ ಬಿಸಿಲು
ಬೇಡವೇ ಬೇಡ ಎನಿಸಿದೆ ಹಗಲು
ಬೆಂಕಿಯನ್ನೇ ಉಗುಳುತಿಹನು ಸೂರ್ಯ
ನಿಷ್ಪ್ರಯೋಜಕವಾಗುತ್ತಿದೆ ಸೌಕರ್ಯ
ಭೂಮಿ ಮೇಲಿನದೆಲ್ಲ ಹಾಗೆಯೇ
ಒಣಗಿ ಹೋಗುತಿದೆ ಕ್ಷಣಮಾತ್ರದಲ್ಲಿ
ಬೇಸಿಗೆಯೆಂದು ಎಲೆಯುದುರಿಸಿ ಮರಗಳೆಲ್ಲಾ ಬರಡಾಗಿ ಹೋಗಿವೆ ಇಲ್ಲಿ
ಮಳೆ ಎಂಬ ಆಸರೆಯೊಂದು
ಇನ್ನು ಮರೀಚಿಕೆಯಾಗಿದೆ
ಬೀಸುವ ಗಾಳಿ ಕೂಡ ಬಿಸಿಯಾಗಿ
ಉರಿಯುವ ಬೆಂಕಿಯಲ್ಲಿ ಬಿದ್ದ ಅನುಭವ ತಂದಿದೆ
ತಣ್ಣನೆಯ ನೆರಳು ಬಯಸುತ್ತಿದೆ ಬದುಕು
ಈ ಉರಿ ತಾಪವಿನ್ನೇನು ತರುವುದೋ ಕೆಡುಕು
ಪರಿಸರದ ಮೇಲೆ ದೌರ್ಜನ್ಯ ಮಾಡಿದ ತಪ್ಪಿಗೆ
ಬೆಂಕಿಯುಂಡೆಯಂತಾಗೆರಗಿದೆ ಬೇಸಿಗೆ
ಅಲ್ಲಿ ಇಲ್ಲಿ ಇದ್ದ ನೀರೆಲ್ಲ ಆವಿಯಾಗಿದೆ
ಒಳಗಿದ್ದ ಅಂತರ್ಜಲ ಮೊದಲೇ ಖಾಲಿಯಾಗಿದೆ
ಈ ಧಗೆಯಿಂದ ತಪ್ಪಿಸಿಕೊಳ್ಳಲು ಪರದಾಡಿದೆ
ಜಗದ ಬದುಕೀಗ ನರಕವಾಗುತ್ತಿದೆ
ಇನ್ನಾದರೂ ಅರಿತುಕೊಳ್ಳಬೇಕಿದೆ ನಾವು
ಓಡುವ ನೀರನ್ನು ನಿಲ್ಲಿಸಿ ಸಂಗ್ರಹಿಸಬೇಕು ನಿತ್ಯವು
ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಾಡು ಬೆಳೆಸಬೇಕು
ನಾಶವಾಗುತ್ತಿರುವ ಪರಿಸರವನ್ನು ರಕ್ಷಿಸಬೇಕು
0411 ಪಿಎಂ30032024
*ಅಮು ಭಾವಜೀವಿ ಮುಸ್ಟೂರು*
No comments:
Post a Comment