Thursday, November 14, 2019
ಮಕ್ಕಳು ಮಾನವ ತೋಟದ ಸುಂದರ ಸುಮಗಳು
Saturday, September 28, 2019
ಕವಿತೆ
*ಮನದ ಮಾತುಗಳ ಹೇಳಿಬಿಡು*
ಏಕೆ ನೋಯುವೆ ಹೆಗಲಾಗಿರುವೆ
ಈ ಪಯಣದುದ್ದಕ್ಕೂ ನಾನಿರುವೆ
ಯಾರಿಗಿಲ್ಲ ಇಲ್ಲಿ ನೋವು ಸಾವು
ಎಲ್ಲಾ ಸಹಿಸಿ ಬಾಳಬೇಕು ನಾವು
ಇಂದು ನಿನಗೆ ನಾಳೆ ನನಗೆ
ಎಲ್ಲಾ ಇಲ್ಲಿ ನಾವು ಪಡೆದು ಬಂದಂತೆ
ಹೂವು ನಗುತ ಇದ್ದರೂ ಕೂಡ
ಸಂಜೆಗೆ ಬಾಡುವುದಿಲ್ಲವೇ
ಹಾಗೆ ನಮ್ಮ ಬದುಕು
ಇಂದಿನ ನೋವು ನಾಳೆಗಿರದು
ಒಂಟಿಯಲ್ಲ ನೀನು ಇಲ್ಲಿ
ಎಲ್ಲರೂ ತಬ್ಬಲಿಗಳೇ ಬಾಳಲಿ
ಹಂಚಿಕೊಂಡರೆ ಎಲ್ಲಾ ನಮ್ಮವರು
ಮುಚ್ಚಿಟ್ಟರೆ ಅವರೇ ಹೊರಗಿನವರು
ಊರಿಗೊಂದು ಮನೆಕಟ್ಟಲಾಗದು
ಮನಸುಗಳ ನಾವು ಮುಟ್ಟಬೇಕು
ನಾಳೆಯ ಬದುಕಿಗೆ ಹೆದರದೆ
ಇಂದಿನ ಖುಷಿಯ ಸಂಭ್ರಮಿಸಬೇಕು
ಕೈಯ ಮೇಲೆ ಕೈಯಿಟ್ಟು
ಬಾಷೆ ಕೊಡು ನೋಯುವುದಿಲ್ಲೆಂದು
ಮನದ ಮಾತುಗಳ ಹೇಳಿಬಿಡು
ಕೇಳುವ ಕಿವಿ ಬೇಸರಿಸದು ಎಂದೂ
0459ಪಿಎಂ25092019
*ಅಮು ಭಾವಜೀವಿ*
ಮಕ್ಕಳನ್ನು ಬೆಳೆಸುವಲ್ಲಿ ತಂದೆ ತಾಯಿಗಳ ಪಾತ್ರ
ಲೇಖನ
*ಮಕ್ಕಳನ್ನು ಬೆಳೆಸುವಲ್ಲಿ ತಂದೆ ತಾಯಿಗಳ ಪಾತ್ರ*
ಮಕ್ಕಳಿಸ್ಕೂಲ್ ಮನೇಲಲ್ವೇ ಎಂಬಂತೆ ಮಕ್ಕಳ ವ್ಯಕ್ತಿತ್ವ ಅರಳಬಲ್ಲದೆ ಎಂದರೆ ಅದು ಮನೆ. ಅದಕ್ಕೆ ಮನೆಯೇ ಮೊದಲ ಶಾಲೆ ಜನನಿ ತಾನೆ ಮೊದಲ ಗುರು ಎಂಬ ಮಾತು ಸಾಮಾನ್ಯವಾಗಿದೆ. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಮನೆಯ ವಾತಾವರಣ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ. ಅದರಲ್ಲೂ ತಂದೆ ತಾಯಿ ಇಬ್ಬರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಹೆಚ್ಚಿನ ಹೊಣೆಗಾರರಾಗಿರುತ್ತಾರೆ. ಇಲ್ಲಿ ಯಾರೊಬ್ಬರೂ ವಿಮುಖರಾದರು ಕೂಡ ಮಕ್ಕಳ ಭವಿಷ್ಯದ ಅಭದ್ರವಾಗುತ್ತದೆ. ಅಲ್ಲದೆ ಮಕ್ಕಳು ತಮ್ಮ ಹೆತ್ತವರನ್ನು ಅವಲಂಬಿಸಿರುವುದರಿಂದ ಮತ್ತು ಅನುಕರಣೆ ಮಾಡುವುದರಿಂದ ಅವರ ವ್ಯಕ್ತಿತ್ವ ಉತ್ತಮವಾಗಿರಬೇಕು. ಹೆತ್ತವರ ಭಾಷೆ, ನಡೆನುಡಿ , ಜೀವನಶೈಲಿ , ತಿಳುವಳಿಕೆ, ಪಾಲ್ಗೊಳ್ಳುವಿಕೆ ಎಲ್ಲವೂ ಮಕ್ಕಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
*ತಾಯಿಯ ಪಾತ್ರ* :-
ಮಕ್ಕಳು ಹೆಚ್ಚು ಹೊತ್ತು ತಾಯಿಯ ಮಡಿಲಲ್ಲಿ ಕಳೆಯುತ್ತಾರೆ. ತಾಯಿಯಾದವಳು ತನ್ನ ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು ಹೇಳುತ್ತಾ ಅವರ ಮನಸ್ಸಿನಲ್ಲಿ ಉತ್ತಮ ಅಂಶಗಳನ್ನು ಬಿತ್ತುತ್ತಾ ಹೋಗಬೇಕು. ಜೀಜಾಬಾಯಿ ವಹಿಸಿದ ಜವಾಬ್ದಾರಿಯಿಂದ ಶಿವಾಜಿಯಂತಹ ಮಹಾನ್ ಶೂರನನ್ನು ರೂಪಿಸಲು ಸಾಧ್ಯವಾಯಿತು. ಹಾಗೆ ತಾಯಿ ತನ್ನ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಈ ಕೆಳಗಿನ ಅಂಶಗಳನ್ನು ಗಮನಿಸುವುದು ಮುಖ್ಯ.
* ತಾಯಿತನ ಮಕ್ಕಳ ಬೇಕು-ಬೇಡಗಳನ್ನು ಅರ್ಥಮಾಡಿಕೊಂಡು ಅವರನ್ನು ಪ್ರೀತಿಯಿಂದ ಬೆಳೆಸಬೇಕು.
* ಮಕ್ಕಳ ವೈಯಕ್ತಿಕ ಸ್ವಚ್ಛತೆಯಿಂದ ಹಿಡಿದು ಅವರ ಜೀವನ ರೂಪಿಸುವಲ್ಲಿ ತಾಯಿಯು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
* ಮಕ್ಕಳಿಗೆ ಒತ್ತಡದ ತಂತ್ರವನ್ನು ಅನುಸರಿಸಿದೆ ಅಕ್ಕರೆಯಿಂದ ಮೆದು ಮಾತುಗಳಿಂದ ಅವರನ್ನು ಪ್ರೋತ್ಸಾಹಿಸಬೇಕು.
* ಕಾಲಕ್ಕೆ ಮಕ್ಕಳ ಹಸಿವನ್ನು ನೀಗಿಸುವ ಜೊತೆಗೆ ಜ್ಞಾನದ ಹಸಿವನ್ನು ನೀಗಿಸುವ ಗಮನಹರಿಸಬೇಕು.
* ತನ್ನ ಕಷ್ಟ ನೋವು ಹತಾಶೆ ಅಸಹಾಯಕತೆಗಳನ್ನು ಮಕ್ಕಳ ಮುಂದೆ ಪ್ರದರ್ಶಿಸಿದೆ ಗೆಲ್ಲುವ ಛಲವನ್ನು ತುಂಬಬೇಕು.
* ಮಕ್ಕಳ ಬಗ್ಗೆ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳದೆ ಅವರ ಶಕ್ತಿಯನುಸಾರ ಬೆಳೆಯುವಂತೆ ನೋಡಿಕೊಳ್ಳಬೇಕು.
* ತನ್ನಿಂದ ಸಾಧ್ಯವಾಗದ್ದನ್ನು ನೀವು ಸಾಧ್ಯ ಮಾಡಲೇಬೇಕೆಂದು ಒತ್ತಡ ಹೇರಬಾರದು.
* ತನ್ನ ಬಗ್ಗೆ ಹಾಗೂ ಇತರರ ಬಗ್ಗೆ ಗೌರವವನ್ನು ಬೆಳೆಸುವ ಕೊಳ್ಳುವಂತೆ ಮಗುವಿಗೆ ಮಾರ್ಗದರ್ಶನ ನೀಡಬೇಕು.
*ತಂದೆಯ ಪಾತ್ರ* :-
ತಂದೆ ಮಕ್ಕಳ ಭವಿಷ್ಯದ ಆಧಾರಸ್ತಂಭ. ಆದರೆ ಮಕ್ಕಳು ತಂದೆಯ ಬಳಿ ಬರುವುದು ಮುಕ್ತವಾಗಿ ಹಂಚಿಕೊಳ್ಳುವುದು ಕಡಿಮೆ. ಹಾಗಾಗಿ ತಂದೆಯಾದವನು ತನ್ನ ಮಕ್ಕಳ ಬೆಳವಣಿಗೆಯ ಬಗ್ಗೆ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ.
* ಮಕ್ಕಳಿಗೆ ಉತ್ತಮವಾದ ಅವಕಾಶಗಳನ್ನು ಒದಗಿಸಿ ಕೊಡಬೇಕಾಗುತ್ತದೆ.
* ದುಶ್ಚಟಗಳ ದಾಸನಾದ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸಬೇಕು.
* ಮಕ್ಕಳ ಬೇಡಿಕೆಗಳನ್ನು ಅಗತ್ಯಕ್ಕನುಸಾರವಾಗಿ ಪೂರೈಸುತ್ತಾ ಹೊರಗಿನ ಪ್ರಪಂಚದ ಅರಿವನ್ನು ಮೂಡಿಸುವುದು.
* ಮಕ್ಕಳ ಮನಸ್ಸಿನಲ್ಲಿ ಭಯ ಮೂಡಿಸಿದೆ ಅಂತರ್ಗತ ಪ್ರೀತಿ ಅನಾವರಣಕ್ಕೆ ಅವಕಾಶ ನೀಡಬೇಕು.
* ಸಾಧಕರ ದಾರ್ಶನಿಕರ ಕಥೆಗಳನ್ನು ಹೇಳುವುದು ಮತ್ತು ಪುಸ್ತಕಗಳನ್ನು ತಂದು ಓದಿಸುವುದನ್ನು ರೂಢಿಸಬೇಕು.
* ದುಡಿಯುವೆ ನೆಂಬ ಅಹಂಕಾರಕ್ಕಿಂತ ಹೊಣೆಗಾರಿಕೆ ಮಹತ್ವವನ್ನು ಅರಿತು ಕರ್ತವ್ಯ ನಿಭಾಯಿಸಬೇಕು.
,* ಮಕ್ಕಳಿಗೆ ಒಳ್ಳೆಯ ಸ್ನೇಹಿತ ಮಾರ್ಗದರ್ಶಕನಾಗಿರಬೇಕು.
ತಂದೆ ತಾಯಿ ಇಬ್ಬರು ಎರಡು ಕಣ್ಣುಗಳಾಗಿ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕು. ಎತ್ತು ಏರಿಗೆ ಕೋಣ ನೀರಿಗೆ ಎಂಬಂತಾಗಿದೆ ಸಮಭಾವದಿ ಹೊಣೆಗಾರಿಕೆಯನ್ನು ಹೊತ್ತು ಮಕ್ಕಳನ್ನು ಬೆಳೆಸಬೇಕು
*ತಂದೆ-ತಾಯಿಗಳ ಜಂಟಿ ಪಾತ್ರ* :-
* ಮಕ್ಕಳ ಎದುರುಗಡೆ ಪರಸ್ಪರ ಜಗಳವಾಡುವುದು ಅಸಹಕಾರ ತೋರಿಸುವುದನ್ನು ಮಾಡಬಾರದು.
* ಹೊಣೆಗಾರಿಕೆಯ ಪರಭಾರೆ ಮಾಡಬಾರದು.
* ತಮ್ಮ ಪಾಲಿನ ಕರ್ತವ್ಯವನ್ನು ತುಂಬಾ ಪ್ರಾಮಾಣಿಕತೆಯಿಂದ ನಿರ್ವಹಿಸುವುದು.
* ವೈಯಕ್ತಿಕ ಬಿನ್ನಬಿಪ್ರಾಯ ಏನೇ ಇದ್ದರೂ ಮಕ್ಕಳ ವಿಷಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು.
* ಮಕ್ಕಳಲ್ಲಿ ತಾರತಮ್ಯ ಮಾಡದೆ ಸಮಾನ ಪ್ರೀತಿಯನ್ನು ಹಂಚಬೇಕು.
* ನಮ್ಮ ಸಮಾಜ ಸಂಸ್ಕೃತಿ ಸಂಪ್ರದಾಯ ವೈಜ್ಞಾನಿಕ ಅನ್ವೇಷಣೆಗಳ ಬಗ್ಗೆ ಮಕ್ಕಳಿಗೆ ಸೂಕ್ತ ತಿಳುವಳಿಕೆ ನೀಡಬೇಕು.
* ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಇಬ್ಬರೂ ಸಮ ಪಾಲುದಾರರು ಎಂಬುದನ್ನು ಅರಿತು ಅದರಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡದೆ ಇಬ್ಬರು ಮಕ್ಕಳ ಭವಿಷ್ಯವನ್ನು ರೂಪಿಸಬೇಕು.
ಒಟ್ಟಿನಲ್ಲಿ ಮಗುವಿನ ಉತ್ತಮ ಭವಿಷ್ಯ ರೂಪಿಸುವಲ್ಲಿ ವ್ಯಕ್ತಿತ್ವವನ್ನು ಕಲ್ಪಿಸಿಕೊಡುವಲ್ಲಿ ತಂದೆ-ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾವು ಬದುಕುತ್ತಿರುವುದೇ ಮಕ್ಕಳಿಗಾಗಿ ಎಂದ ಮೇಲೆ ಅವರನ್ನು ಬೆಳೆಸುವಲ್ಲಿಯೂ ಆ ಕಾಳಜಿಯನ್ನು ವಹಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಹೊಣೆಗಾರಿಕೆ ಇಬ್ಬರದ್ದೂ ಆಗಿರುತ್ತದೆ. ಏನೇ ಸಮಸ್ಯೆಗಳಿದ್ದರೂ ಯಾವುದೇ ಕೊರತೆಗಳಾಗದಂತೆ ಎಚ್ಚರವಹಿಸಬೇಕು. ಅನುಕಂಪ ಅಸಹಾಯಕತೆಗಳನ್ನು ಬಂಡವಾಳ ವಹಿಸಿಕೊಳ್ಳದೆ ಮಾನವೀಯ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸಬೇಕು. ಹೀಗಾದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಮಕ್ಕಳು ಉತ್ತಮರಾದರೆ ತಂದೆತಾಯಿಗಳ ಶ್ರಮ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ಪೋಷಕರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ತಮ್ಮ ತ್ಯಾಗವನ್ನು ಸಾರ್ಥಕಪಡಿಸಿಕೊಳ್ಳಬೇಕು ಆಗಿದೆ.
ಅಮು ಭಾವಜೀವಿ
ಮಕ್ಕಳಲ್ಲಿ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಮೂಡಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ
ಲೇಖನ :-
*ಮಕ್ಕಳಲ್ಲಿ ಸ್ವಚ್ಛ ಭಾರತ ಅಭಿಯಾನದ ಜಾಗೃತಿ ಮೂಡಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರ* :-
ಸ್ವಚ್ಛತೆ ಪ್ರತಿ ವ್ಯಕ್ತಿಯ ಅಗತ್ಯ. ಎಲ್ಲಿ ಸ್ವಚ್ಛತೆ ಇರುತ್ತದೆಯೋ ಸ್ವಸ್ಥ ಮನಸ್ಸು ಇರುತ್ತದೆ. ಸ್ವಸ್ಥ ಮನಸ್ಸಿರುವ ಕಡೆ ಸಮೃದ್ಧಿ ಇರುತ್ತದೆ. ತನ್ನ ಸತ್ಯತೆಯ ಬಗ್ಗೆ ಗಮನ ಕೊಡುವ ಮನುಷ್ಯ ತನ್ನ ಸುತ್ತಮುತ್ತಲ ಪ್ರದೇಶವನ್ನು ಸಹ ಸ್ವಚ್ಛವಾಗಿಟ್ಟುಕೊಳ್ಳಲು ಪ್ರಯತ್ನ ಮಾಡುತ್ತಾನೆ. ಆದರಿಂದ ತನ್ನ ಪರಿಸರದ ಜೊತೆಗೆ ದೇಶವು ಕೂಡ ಸ್ವಚ್ಛ ಮತ್ತು ಸ್ವಸ್ಥ ವಾಗಿರುತ್ತದೆ.
ಸ್ವಚ್ಛತೆಯ ಪಾಠ ಶುರುವಾಗುವುದು ಮಗುವಿನ ಮನೆಯಿಂದ ಹಾಗೂ ಓದುವ ಶಾಲೆಯಿಂದ. ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಹೊಣೆಗಾರಿಕೆ ಪೋಷಕರು-ಶಿಕ್ಷಕರು ಇಬ್ಬರದು ಇರುತ್ತದೆ. ಮನೇಲಿ ಮಗು ಎದ್ದಾಗಿನಿಂದ ಮಲಗುವವರೆಗೆ ಸ್ವಚ್ಛತೆಯನ್ನು ಪಾಲಿಸುವಂತೆ ನೋಡಿಕೊಳ್ಳುವುದು ಪೋಷಕರ ಕರ್ತವ್ಯವಾಗಿದೆ. ವೈಯಕ್ತಿಕ ಸ್ವಚ್ಛತೆಯ ಜೊತೆಗೆ ತನ್ನ ಮನೆಯ ಪರಿಸರ ತನ್ನ ಓಣಿ ತನ್ನ ಊರು ಸ್ವಚ್ಛತೆಯ ಬಗ್ಗೆ ತಿಳುವಳಿಕೆಯನ್ನು ನೀಡಬೇಕಾಗುತ್ತದೆ.ಮಕ್ಕಳು ಪಾಲಕರು ಹಾಗೂ ಶಿಕ್ಷಕರನ್ನು ಅನುಕರಣೆ ಮಾಡುವುದರಿಂದ ಅವರು ಅನುಕರಣೀಯ ವಾಗಿರಬೇಕು. ಮಕ್ಕಳಿಗೆ ಹೇಳುವ ಮುನ್ನ ತಾವು ಮೊದಲು ಅನುಸರಿಸಬೇಕು. ಆಗ ಮಕ್ಕಳು ಅವರನ್ನು ನೋಡಿ ಕಲಿಯುತ್ತಾರೆ.
*ಪೋಷಕರ ಪಾತ್ರ* :-
* ಮಕ್ಕಳಿಗೆ ನಿತ್ಯ ಸ್ವಚ್ಛತೆಯ ಬಗ್ಗೆ ತಿಳಿಸಿ ಕೊಡುವುದರ ಜೊತೆಗೆ ಮನೆಯ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು.
* ಮನೆಯ ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ನಿರ್ದಿಷ್ಟಪಡಿಸಿದ ಸ್ಥಳದಲ್ಲಿ ಅದನ್ನು ನಿರ್ವಹಣೆ ಮಾಡುವುದನ್ನು ಕಲಿಸುವುದು.
* ನಮ್ಮ ಮನೆ ಸ್ವಚ್ಛ ವಿದ್ದರೆ ನಮ್ಮ ದೇಶ ಸ್ವಚ್ಛವಾಗಿರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕು
* ಪೋಷಕರು ಹೆಚ್ಚಾಗಿ ಪರಿಸರಕ್ಕೆ ಹಾನಿಯಾಗದಂತಹ ವಸ್ತುಗಳನ್ನು ಬಳಸಬೇಕು
* ಹಸಿ ಕಸ ಒಣ ಕಸ ಇತ್ಯಾದಿಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದು
* ತಮ್ಮದೇ ಮನೆಯ ತ್ಯಾಜ್ಯಗಳಿಂದ ಸಾವಯವ ಗೊಬ್ಬರವನ್ನು ತಯಾರಿಸಿ ತಮ್ಮ ಮನೆಯ ಸುತ್ತಮುತ್ತ ಬೆಳೆದ ಗಿಡ-ಮರಗಳಿಗೆ ಬಳಸುವುದು
* ಸ್ವಚ್ಚ ಭಾರತ ಅಭಿಯಾನದಲ್ಲಿ ಎಲ್ಲರೂ ಭಾಗಿದಾರರು ಎಂಬುದನ್ನು ಮನವರಿಕೆ ಮಾಡಿಕೊಡಬೇಕು.
* ಶಿಕ್ಷಕರ ಪಾತ್ರ* :-
* ಶಿಕ್ಷಕರು ತಮ್ಮ ಶಾಲೆಯ ಸುತ್ತಮುತ್ತಲ ಪರಿಸರದ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜಾಗೃತಿ ಮೂಡಿಸುವುದು
* ಸ್ವಚ್ಛ ಪರಿಸರದಲ್ಲಿ ಸ್ವಸ್ಥ ಮನಸ್ಸಿರುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಬೇಕು
* ತನ್ನ ಶಾಲೆ, ಮನೆ, ನೆರೆಹೊರೆ ಸ್ವಚ್ಛವಾಗಿಟ್ಟುಕೊಳ್ಳುವಂತೆ ಪ್ರೇರಣೆ ನೀಡಬೇಕು.
* ಸ್ವಚ್ಛತೆಗೆ ಸಂಬಂಧಿಸಿದಂತೆ ಕಥೆ ಕವನ ಲೇಖನ ಪ್ರಬಂಧ ಆಶುಭಾಷಣ ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ಮಕ್ಕಳಲ್ಲಿ ಅರಿವು
ಮೂಡಿಸುವುದು.
* ಸ್ವಚ್ಛ ಭಾರತ ಅಭಿಯಾನದ ಹೆಸರಿನಲ್ಲಿ ಆಗಾಗ್ಗೆ ಜಾಥಗಳು, ಕಿರು ನಾಟಕ, ಚರ್ಚೆ ಭಾಷಣಗಳನ್ನು ಆಯೋಜಿಸುವುದು.
* ಸ್ವಚ್ಛತೆ ಕುರಿತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಸೂಕ್ತ ಬಹುಮಾನ ನೀಡಿ ಪ್ರೇರೇಪಿಸುವುದು
* ಶಾಲಾ ಪರಿಸರವನ್ನು ಆಕರ್ಷಣೀಯವಾಗಿಸಲು ಗಿಡಮರ ತರಕಾರಿ ಮುಂತಾದವುಗಳನ್ನು ಬೆಳೆಸುವುದು.
* ಶಾಲೆ ಮನೆ ಸಮಾಜದಲ್ಲಿ ಶ್ರಮದಾನದ ಮೂಲಕ ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.
* ಆಗಿಂದಾಗ್ಗೆ ಮಕ್ಕಳಿಗೆ ಪ್ರವಾಸ ಹೊರಸಂಚಾರ ಕರೆದುಕೊಂಡು ಹೋಗಿ ಅಲ್ಲಿನ ಪರಿಸರದ ಸ್ವಚ್ಛತೆಯ ಬಗ್ಗೆ ತಿಳುವಳಿಕೆ ನೀಡುವುದು ಹಾಗೂ ತಾವು ಅದನ್ನು ಅಳವಡಿಸಿಕೊಳ್ಳುವಂತೆ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.
ಒಟ್ಟಿನಲ್ಲಿ ಭಾರತದ ಮುಂದಿನ ಪ್ರಜೆಗಳಲ್ಲಿ ಇಂದಿನ ಸ್ವಚ್ಛತೆ ಅಗತ್ಯವನ್ನು ಮನಗಾಣಿಸಬೇಕು. ಅಲ್ಲದೆ ತಮ್ಮ ವಯಕ್ತಿಕ ಜೀವನದಲ್ಲಿ ಸ್ವಚ್ಛತೆಯ ಅನಿವಾರ್ಯತೆ ಮತ್ತು ಅವಶ್ಯಕತೆಯನ್ನು ಅರ್ಥ ಮಾಡಿಸುವ ಮೂಲಕ ತನ್ನ ಮನೆ ಶಾಲೆ ಊರು ರಾಜ್ಯ ದೇಶಗಳ ಸ್ವಚ್ಛತೆಯ ಬಗ್ಗೆ ಕಾಳಜಿ ಮೂಡಿಸುವುದು ಪೋಷಕರು ಮತ್ತು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಆ ಮೂಲಕ ಸ್ವಚ್ಛ ಭಾರತ ಅಭಿಯಾನದ ಮಹತ್ವವನ್ನು ತಿಳಿಸಿಕೊಡಬೇಕಾಗಿದೆ. ಪ್ರತಿಯೊಬ್ಬ ನಾಗರಿಕನಿಗೂ ತನ್ನ ಪರಿಸರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಇದೆ ಎಂಬುದನ್ನು ಮನಗಾಣಿಸಬೇಕು. ಚಿಕ್ಕವಯಸ್ಸಿನಲ್ಲಿ ಮಕ್ಕಳ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳಾದ ಪೋಷಕರು ಮತ್ತು ಶಿಕ್ಷಕರು ಸ್ವಚ್ಛತೆಯ ಬಗ್ಗೆ ಕಟ್ಟುನಿಟ್ಟಾಗಿ ಅನುಸರಿಸುತ್ತಾ ಹೋದಲ್ಲಿ ಮಕ್ಕಳು ಕೂಡ ಅವರನ್ನು ಅನುಸರಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರೂ ಸ್ವಚ್ಛತೆಯ ಬಗ್ಗೆ ಗಮನಕೊಡುವುದರಿಂದ ಸ್ವಚ್ಛ ಮತ್ತು ಸ್ವಸ್ಥ ಭಾರತ ಕಟ್ಟಲು ಸಹಾಯವಾಗುತ್ತದೆ.
*ಅಮು ಭಾವಜೀವಿ*
ವಾಸ್ತವ ಸತ್ಯ
*ವಾಸ್ತವ ಸತ್ಯ*
ಈ ಜನ ಈಗೇಕೆ ಮಾಡ್ತಾರೆ. ಒಬ್ಬ ಮನುಷ್ಯನನ್ನು ಕೇವಲ ಅವನ ಭಾವನೆಗಳಿಂದ ಅಳೆಯುವುದು ಎಷ್ಟು ಸರಿ? ತಿಳಿಗೊಳ ದಡಿಯ ಕೆಸರಿನಿಂದಲೇ ಸುಂದರವಾದ ತಾವರೆಯು ಅರಳಿದಾಗ ಅದನ್ನು ನೋಡಿ ಸಂತೋಷ ಪಡುವ ಈ ಮನುಷ್ಯ ಈ ರೀತಿಯ ಕೆಟ್ಟ ಆಲೋಚನೆಗಳನ್ನು ಏಕೆ ಮಾಡುತ್ತಾನೆ. ಈ ವಿಚಾರವನ್ನು ಪ್ರಸ್ತಾಪಿಸಲು ಪ್ರಮುಖ ಕಾರಣವೆಂದರೆ ಕೆಲವರು ನಾನು ಬರೆದಿರುವ ಕವನಗಳನ್ನು ಕೇವಲ ಮೇಲ್ನೋಟಕ್ಕೆ ನನ್ನನ್ನು ಇಂತಹ ಮನುಷ್ಯ ಎಂದು ಅಳೆದದ್ದು ನನಗೆ ತುಂಬಾ ಬೇಜಾರು ಎನಿಸಿತು. ವಾಸ್ತವವಾಗಿ ನಾನು ಆ ರೀತಿಯ ಮನುಷ್ಯನಲ್ಲ. ನಾನು ಬರೆದ ಕವನಗಳಲ್ಲಿ ಪ್ರತಿಯೊಬ್ಬ ಯುವ ಪೀಳಿಗೆಯವರ ಮನದ ತುಡಿತ ಮಿಡಿತಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ನನ್ನ ಅನುಭವಕ್ಕೆ ನಿಲುಕಿದಷ್ಟು ಅದನ್ನು ಅಕ್ಷರ ರೂಪದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದರೂ, ಒಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣ ತಿಳಿಯದೆ ಮಾತನಾಡುವುದು ಮನಸ್ಸಿಗೆ ತುಂಬಾ ನೋವಾಗುತ್ತದೆ. ಪ್ರೀತಿಸುವ ಪ್ರತಿಯೊಬ್ಬನು ಪ್ರೇಮಿ ನಿಜ ಆದರೆ ಪ್ರತಿಯೊಬ್ಬ ಪ್ರೇಮಿಯೂ ಕವಿಯಾಗಲಾರ ಈ ಸತ್ಯವನ್ನು ನಾವು ಅರಿತಾಗ ಇನ್ನೊಬ್ಬರ ಬಗ್ಗೆ ಕ್ಷುಲ್ಲಕ ಅಭಿಪ್ರಾಯ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ.
ಯಾವುದೇ ವ್ಯಕ್ತಿಯ ಭಾವನೆಗಳಿಗೆ ಬಂಧನವಿಲ್ಲ. ಆದರೆ ಅವನ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಮುಕ್ತ ಅವಕಾಶ ಇದೆ. ಭಾವನೆಗಳು ಒಳ್ಳೆಯ ಅಥವಾ ಕೆಟ್ಟವು ಎಂಬುದರ ಬಗ್ಗೆ ಜಿಜ್ಞಾಸೆ ಬೇಕಾಗಿಲ್ಲ. ಅಂದರೆ ಭಾವನೆಗಳೇ ಬದುಕು ಎಂಬುದು ನಂಬಲರ್ಹವಲ್ಲ. ಏಕೆಂದರೆ ಮನುಷ್ಯನ ಭಾವನೆಗಳಿಗೂ ಅವನು ವಾಸ್ತವ ಬದುಕಲ್ಲಿ ಇರುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪ್ರತಿಯೊಬ್ಬರ ಬದುಕಿನಲ್ಲೂ ಭಾವನೆಗಳ ಇರಬೇಕು, ಆಗಲೇ ಅವನ ಜೀವನದಲ್ಲಿ ಆಸೆ ಇರಲು ಸಾಧ್ಯ. ಹಾಗೆ ನೋಡಿದರೆ ಕವಿ ಎಂದರೆ ಎಲ್ಲರ ಮನೋಭಾವಗಳನ್ನು ತನ್ನದೇ ಮನದ ಆಲೋಚನೆಗಳ ನೆಲೆಗಟ್ಟಿನ ಮೇಲೆ ಹೆಣೆಯುತ್ತಾನೆ. ಅವನು ತನ್ನ ಜೀವನದಲ್ಲಿ ಅದನ್ನು ಅನುಭವಿಸಿ ಇರಬೇಕೆಂಬ ನಿಯಮವಿಲ್ಲ. ಜಗತ್ತಿನಲ್ಲಿ ತಾನು ನೋಡುವ ಕೇಳುವ ಅನೇಕ ವಿಚಾರಗಳನ್ನು ತನ್ನದೇ ವಿಮರ್ಶಾತ್ಮಕ ದೃಷ್ಟಿಯಲ್ಲಿ ವಿಶ್ಲೇಷಿಸಿ ಆ ಬಗ್ಗೆ ತನ್ನ ಅಭಿಪ್ರಾಯಗಳನ್ನು ಬೆರೆಸುತ್ತಾ ಅವರ ಭಾವನೆಗಳನ್ನು ಬೆಳೆಸುತ್ತಾ ಸಾಗಿ ಒಂದು ಮುತ್ತಿನಂತಹ ಕವನ ಕತೆ-ಕಾದಂಬರಿಗಳ ಹಂದರವನ್ನು ನಿರ್ಮಿಸುತ್ತಾನೆ. ಆ ಮೂಲಕ ಮುಂದಿನ ಜನಾಂಗಕ್ಕೆ ಮೈಲುಗಲ್ಲುಗಳನ್ನು ಸ್ಥಾಪಿಸುತ್ತಾ ಹೋಗುತ್ತಾನೆಯೇ ವಿನಹ ಅದಕ್ಕೆ ಕಥಾವಸ್ತು ಕಥಾನಾಯಕ ಆಗಲಾರ ಬದಲಾಗಿ ಆ ಪಾತ್ರದ ರೂವಾರಿ ಅಷ್ಟೇ.
ನಮ್ಮ ಜನ ಮೊದಲು ಯೋಚಿಸುವುದು ಬರೀ ಕೆಟ್ಟದ್ದನ್ನೇ. ಯಾವುದೇ ಒಬ್ಬ ಮನುಷ್ಯನ ಬಗ್ಗೆ ಒಂದು ಒಳ್ಳೆಯ ಭಾವನೆಯನ್ನು ಇಟ್ಟುಕೊಳ್ಳಲು ಇವರ ಗಂಟೇನು ಹೋಗುತ್ತದೆ ಅಂತ. ಏಕೆಂದರೆ ಒಬ್ಬ ಅಂತರಂಗದ ಭಾವನೆಗಳಲ್ಲಿ ಒಳಿತು ಕೆಡಕುಗಳ ತುಲನಾತ್ಮಕ ವಿಮರ್ಶೆ ಅವನಿಂದಲೇ ಆಗುತ್ತಿರುತ್ತದೆ. ಹಾಗಾಗಿ ಯಾರು ಉತ್ತಮ ವಿಮರ್ಶಕ ಆಗಿರುತ್ತಾನೋ ಅವನೊಬ್ಬ ಉತ್ತಮ ಬರಹಗಾರನಾಗಿರುತ್ತಾನೆ. ಅವನ ಬದುಕನ್ನು ಒಳ್ಳೆಯ ಪಥದಲ್ಲಿ ಸಾಗಿಸಲು ಶ್ರಮ ಪಡುತ್ತಾನೆ. ಹಾಗೆಯೇ ಅವನು ಎಲ್ಲರ ಭಾವನೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿದಾಗ ಮಾತ್ರ ನಿಜವಾಗಲೂ ಅವನನ್ನು ಎಲ್ಲರೂ ಇಷ್ಟಪಡುತ್ತಾರೆ . ಹಾಗೂ ಅವನ್ನು ಅವರೆಲ್ಲರ ಅನುಭವಗಳನ್ನು ತನ್ನದೇ ಶೈಲಿಯಲ್ಲಿ ನಿರೂಪಿಸುತ್ತಾ ಹೋಗುತ್ತಾನೆ . ಇಲ್ಲಿ ಯಾವುದೋ ಸಂಕುಚಿತ ಭಾವನೆಯಿಂದ ನೋಡದೆ ವಿಶಾಲ ದೃಷ್ಟಿಯಿಂದ ಅವಲೋಕಿಸಿದಾಗ ನಿಜವಾಗಲೂ ಆ ವ್ಯಕ್ತಿಯ ಕಳಕಳಿಯ ಏನಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ.
ನನಗನ್ನಿಸಿದ ಒಂದು ಸಂಗತಿಯೆಂದರೆ ನಾವು ಏನೇ ಕೆಲಸ ಮಾಡಿದರು ಅದು ಅದರ ಬಗ್ಗೆ ಆಸಕ್ತಿ ತಿಳುವಳಿಕೆ ಇದ್ದವರಿಗೆ ಮಾತ್ರ ಅದರ ಬೆಲೆ ಗೊತ್ತಾಗುತ್ತದೆ. ಅಂತಹ ವ್ಯಕ್ತಿ ಅವನನ್ನು ತೇಜೋವಧೆ ಮಾಡದೆ ಅವನ ಕೆಲಸವನ್ನು ಶ್ಲಾಘಿಸಿ ಪ್ರೋತ್ಸಹವನ್ನು ನೀಡುತ್ತಾನೆ. ಅದನ್ನು ಬಿಟ್ಟು ಅದರ ಗಂಧಗಾಳಿ ಗೊತ್ತಿಲ್ಲದವರು ಅಂತಹ ವಿಚಾರಗಳ ಬಗ್ಗೆ ಕ್ಷುಲ್ಲಕ ಮಾತುಗಳನ್ನಾಡಿ ನಮ್ಮ ಏಳಿಗೆಗೆ ಮುಳ್ಳು ಆಗುತ್ತಾರೆ. ಆದ್ದರಿಂದ ಅಂತಹ ಕ್ಷುಲ್ಲಕ ಮಾತು ಚರ್ಚೆಗಳಿಗೆ ತಲೆಕೆಡಿಸಿಕೊಳ್ಳದಿರುವುದೇ ಬುದ್ಧಿವಂತಿಕೆ.
ಭಾವನೆಗಳಿಗಿಂತ ಅನುಭವ ದೊಡ್ಡದು. ಒಂದಿದ್ದರೆ ಎಂತಹ ಭಾವನೆಗಳನ್ನು ಬೇಕಾದರೂ ಸುಲಭವಾಗಿ ವ್ಯಕ್ತ ಪಡಿಸಬಹುದು.4 ಜನರೊಳಗೆ ಬರುವ ಅನುಭವದ ಮಾತುಗಳನ್ನು ಕೇಳಿ ಹಾಗಾಗಿ ತನ್ನ ವಿಚಾರ ಚಿಂತನೆಗಳನ್ನು ಗುರುತಿಸಿಕೊಳ್ಳುವಂತಹ ವ್ಯಕ್ತಿ ನಾನು ಆಗಿದ್ದರೂ ನನ್ನ ವ್ಯಕ್ತಿತ್ವಕ್ಕೆ ವಿರುದ್ಧವಾದ ಇಂತಹ ಕೀಳು ವಿಚಾರಗಳು ಬಂದಾಗ ನನಗೆ ತುಂಬಾ ನೋವಾಯ್ತು. ಅದಕ್ಕಾಗಿ ನಾನು ಹೇಳುವುದಿಷ್ಟೇ ಕೇವಲ ಭಾವನೆಗಳಿಂದಲೇ ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ಧರಿಸುವ ಬದಲು ನಿಜವಾಗಿಯೂ ಆ ಭಾವನೆಗಳಲ್ಲಿರುವ ಸತ್ಯಾಂಶಗಳ ಬಗ್ಗೆ ಅವಲೋಕಿಸಿ ಆಲೋಚಿಸಬೇಕು. ಆಗ ಮಾತ್ರ ವಾಸ್ತವದ ಗುರುತು ಅವರಿಗೆ ಸಿಗುತ್ತದೆ. ಅಂತಹ ಸನ್ನಿವೇಶದಲ್ಲಿ ಅವನ ಕೆಲಸ ಎಷ್ಟೇ ಕೆಟ್ಟದಿರಲಿ ಅವರ ಪ್ರಯತ್ನಕ್ಕೆ ಒಂದು ಒಳ್ಳೆಯ ಮಾತನಾಡುವ ಮನೋಭಾವ ಬಂದೇ ಬರುತ್ತದೆ. ಯಾವುದೇ ವಿಚಾರವನ್ನು ತನ್ನ ಮೂಗಿನ ನೇರಕ್ಕೆ ನೋಡದೆ ಸಾರ್ವತ್ರಿಕವಾಗಿ ಅದರ ಹೊಳಹುಗಳನ್ನು ಅರ್ಥಮಾಡಿಕೊಂಡಾಗ ಬರಹಗಾರನ ಬರಹಕ್ಕೆ ನಿಜವಾದ ಬೆಲೆ ಸಿಗುತ್ತದೆ. ಇಲ್ಲದಿದ್ದರೆ ಬರಹಗಾರನಿಗೆ ಬರಹವೇ ಬೇಡವೆಂಬ ಮನಸ್ಥಿತಿ ಬಂದರೂ ಅಚ್ಚರಿಯಿಲ್ಲ.
*ಅಮು ಭಾವಜೀವಿ*
*04042002ರಲ್ಲಿ ಪಡೆದ ಲೇಖನ ಹಿಂತಿರುಗಿ ನೋಡಿದಾಗ*
ಸ್ರೀ ಶೋಷಣೆಗೆ ಕೊನೆ ಇಲ್ಲವೇ?
ಸ್ತ್ರೀ ಶೋಷಣೆಗೆ ಕೊನೆಯಿಲ್ಲವೇ ?
ಎಲ್ಲಿ ಸ್ತ್ರೀಯರನ್ನು ಗೌರವದಿಂದ ನೋಡುತ್ತಾರೋ, ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ಬಲವಾಗಿ ನಂಬಿರುವ ನಮ್ಮ ಭಾರತದ ಸಂಸ್ಕೃತಿ ಸ್ತ್ರೀಕುಲದ ಮುಕುಟಮಣಿಯಾದ ತಾಯಿಯಲ್ಲಿ ದೇವರು ತೋರಿದ ಸಂಸ್ಕೃತಿ. ಭಾರತದ ಈ ನಿಲುವಿಗೆ ಜನರು ಕೂಡ ಸಮ್ಮತಿ ಸೂಚಿಸಿ ಇತ್ತೀಚಿನ ದಿನಗಳಲ್ಲಿ ಭಾರತ ಸಂಸ್ಕೃತಿ ಆಚಾರ-ವಿಚಾರ ವೇಷಭೂಷಣಗಳಿಗೆ ಮಾರುಹೋಗಿದೆ . ಇಂತಹ ಮಹೋನ್ನತ ಸಂಸ್ಕೃತಿಯ ನೆಲದಲ್ಲಿ ಅದೇ ಸ್ತ್ರೀಯನ್ನು ಶೋಷಣೆ ಮಾಡುತ್ತಿರುವುದು ಈ ನಾಡಿನ ಸಂಸ್ಕೃತಿಗೆ ಕಪ್ಪುಮಸಿ ರಾಚುವ ಕೆಲಸ. ಅದು ಇಂಥ ಪ್ರಜ್ಞಾವಂತ ಸಮಾಜ ಅಂತ ಅಮಾನವೀಯ ಕೃತ್ಯ ಎಸಗಿರುವುದು ನಿಜಕ್ಕೂ ತಗ್ಗಿಸುವಂತಹ ವಿಚಾರ.
ಪ್ರಕೃತಿಯಲ್ಲಿ ಮಾನವ ಆವತರಿಸಿರುವುದು ಅದನ್ನು ಅನುಭವಿಸಲು ಅಲ್ಲ, ಅದನ್ನು ಆಳಲು ಎಂಬ ವಾಣಿಯನ್ನು ಗಮನಿಸಿದರೆ ಮಾನವಕುಲಕ್ಕೆ ಸಿಕ್ಕಿರುವ ಅಂತಹ ಮಹೋನ್ನತ ಸ್ಥಾನ ಇಂದಿನ ನಾಗರೀಕ ಮಾನವನ ಪೈಶಾಚಿಕ ವರ್ತನೆಗಳಿಂದ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಆಗಲೇ ಹೇಳಿದಂತೆ ತಾಯಿಯನ್ನು ದೇವರೆಂದು ಪೂಜಿಸುವ ಈ ನೆಲದಲ್ಲಿ ಸ್ತ್ರೀಯರನ್ನು ಶೋಷಿಸುವ, ಅತ್ಯಾಚಾರವೆಸಗುವ ಹೇಯ ಕೃತ್ಯಗಳನ್ನು ನಡೆಸುತ್ತಿರುವುದು ತುಂಬಾ ಖೇದದ ಸಂಗತಿ.
ಶತಮಾನಗಳು ಗತಿಸಿದರು , ಎಲ್ಲ ರಂಗದಲ್ಲಿ ಸ್ತ್ರೀ ತಾನು ಗಂಡಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟರು ಪುರುಷ ಪ್ರಧಾನ ಸಮಾಜದಲ್ಲಿ ಅವಳಿಗಿನ್ನೂ ಸೂಕ್ತ ಸ್ವಾತಂತ್ರ್ಯ ಸಿಕ್ಕಿಲ್ಲ. ಕ್ರೂರ ಸಮಾಜದಲ್ಲಿ ಅವರು ಪ್ರತಿಕ್ಷಣವೂ ಭಯದಿಂದ ಬದುಕುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ವಿಚಾರವಾಗಿದೆ. ಹೆಣ್ಣಿಂದಲೇ ಹುಟ್ಟಿ ಬಂದವರೆಲ್ಲ ಕುಲವನ್ನು ಈರೀತಿ ಶೋಷಣೆಗೆ ಗುರಿ ಪಡಿಸುವುದನ್ನು ನೋಡಿದರೆ ನಿಜಕ್ಕೂ ಅಂತಹವರಿಗೆ ಕ್ಷಮೆ ಇರದ ಶಿಕ್ಷೆಯನ್ನು ನೀಡಬೇಕೆಂದು ಅನಿಸುತ್ತದೆ. ಆದರೆ ಆ ಶಿಕ್ಷೆಯನ್ನು ನೀಡುವವರು ಯಾರು? ಕಾನೂನು ನಂಬಿದರೆ ಇಂದು ಆ ಕೆಲಸ ಆಗುವುದು ಸಾಧ್ಯವಿಲ್ಲ ಎನಿಸುತ್ತದೆ. ಏಕೆಂದರೆ ನಮ್ಮ ಕಾನೂನಿನ ಪ್ರಕ್ರಿಯೆ ತುಂಬಾ ನಿಧಾನ. ಅಷ್ಟರೊಳಗೆ ಆಗಲೇ ಆರೋಪಿ ಹಣ ಅಧಿಕಾರ ರಾಜಕೀಯ ಪ್ರಭಾವ ಬಳಸಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅನುವು ಆಗುವುದೇ ವಿನಹ ಸಂತ್ರಸ್ತರಿಗೆ ನ್ಯಾಯ ದೊರಕುವುದು ಕಷ್ಟಸಾಧ್ಯ.
ಇಂತಹ ಕೃತ್ಯಗಳು ಎಸಗದಂತೆ ಮುಂಜಾಗ್ರತೆಯ ಬಯಸಬೇಕು. ಅಲ್ಲದೆ ಇಂತಹ ಸಂತ್ರಸ್ತರಿಗೆ ಪ್ರಜ್ಞಾವಂತ ನಾಗರೀಕರು, ಸ್ತ್ರೀ ಸಂಘಟನೆಗಳು ಬೆಂಬಲವಾಗಿ ನಿಂತು ಅವರಿಗೆ ನ್ಯಾಯ ದೊರಕಿಸಿ ಕೊಡಬೇಕಾಗುತ್ತದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ದುಷ್ಕರ್ಮಿಗಳಿಗೆ ಸರಿಯಾದ ಪಾಠ ಕಲಿಸಲು ಪ್ರತಿಯೊಬ್ಬರು ಪಣತೊಟ್ಟು ಹೋರಾಟಕ್ಕಿಳಿದರೆ ಇಂತಹ ಶೋಷಣೆಗಳಿಗೆ
ಮುಕ್ತಿ ಸಿಗಬಹುದೇನೋ.
ಕಳೆದ ಶತಮಾನದಲ್ಲಿ ವರದಕ್ಷಿಣೆ ಸಾವಿನಿಂದ ತತ್ತರಿಸಿ ಹೋಗಿದ್ದ ಸ್ತ್ರೀ ಕುಲ ಇಂದಿನ ಆಧುನಿಕ ಯುಗದಲ್ಲಿ ಅದಕ್ಕಿಂತಲೂ ಭಿನ್ನವಾದ ಜೀವಂತ ಶವವಾಗಿಸುವ ಅಥವಾ ಜೀವವನ್ನೇ ತೆಗೆಯುವ ಕೃತ್ಯಗಳು ನಡೆಯುತ್ತಿವೆ. ಅದಕ್ಕೆ ಉದಾಹರಣೆಗಳನ್ನು ದೆಹಲಿಯ ನಿರ್ಭಯಳಿಂದ ಹಿಡಿದು ಇತ್ತೀಚಿನ ದಲಿತ ಯುವತಿಯ ಘಟನೆಗಳನ್ನು ನೋಡಿದಾಗ ಈ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತದೆ.
ಹೆಣ್ಣು ಸಕಲ ಜೀವರಾಶಿಯ ತಾಯಿಬೇರು. ಹೆಣ್ಣಿಗಾಗಿ ಈ ಶತಮಾನದ ಇತಿಹಾಸಗಳಲ್ಲಿ ಏನೆಲ್ಲ ಘಟನೆಗಳು ನಡೆದು ಹೋಗಿವೆ. ಆದರೆ ಕರುಣಮೂರ್ತಿ ಸಹನಶೀಲ ಹೆಣ್ಣು ತನ್ನ ಮೇಲಾದ ದೌರ್ಜನ್ಯಗಳನ್ನು ಸಾರ್ವಜನಿಕವಾಗಿ ಹೇಳಿಕೊಳ್ಳಲು ಹಿಂಜರಿಯುತ್ತಾಳೆ. ಕಾರಣ ತನ್ನ ಮೇಲಾದ ದೌರ್ಜನ್ಯವನ್ನು ಮತ್ತದೇ ಸಮಾಜ ಹೀನ ದೃಷ್ಟಿಯಿಂದ ನೋಡೀತು ಎಂಬ ಭಯ. ನಿನ್ನಿಂದ ಇಂದಿನವರೆಗೂ ಈ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಪುರುಷ ಪ್ರಧಾನ ಸಮಾಜದ ಹಿಡಿತಕ್ಕೆ ಸಿಕ್ಕ ಸ್ತ್ರೀಕುಲ ನಿಜಕ್ಕೂ ಶೋಚನೀಯ ಸ್ಥಿತಿ ತಲುಪುವುದರಲ್ಲಿ ಎರಡು ಮಾತಿಲ್ಲ. ಆಗಲೇ ಹೇಳಿದ ಹಾಗೆ ಹಿಂದೂ ಹೆಣ್ಣು ಎಲ್ಲಾ ಕ್ಷೇತ್ರದಲ್ಲೂ ಸಬಲಳಾಗುತ್ತಾ ಇದ್ದಾಳೆ. ಮನೆಯಲ್ಲಿ ಮಕ್ಕಳನ್ನು ಹೆತ್ತು ಹೊತ್ತು ಸಲವುದರಿಂದ ಹಿಡಿದು ಪುರುಷರಿರುವ ಎಲ್ಲಾ ಕ್ಷೇತ್ರಗಳಲ್ಲೂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಾ ತಾನು ಆರ್ಥಿಕವಾಗಿ ಸಾಮಾಜಿಕವಾಗಿ ಸಾಂಸಾರಿಕವಾಗಿ ಸಮರ್ಥರು ಎಂಬುದನ್ನು ತೋರ್ಪಡಿಸಿದರು ಅಲ್ಲೂ ಅವಳಿಗೆ ಈ ಶೋಷಣೆಯ ಪಿಡುಗು ತಪ್ಪಿದ್ದಲ್ಲ. ಇದನ್ನು ನಿವಾರಿಸಬೇಕಾದರೆ ನಮ್ಮ ಕಾನೂನು ಇನ್ನಷ್ಟು ಬಿಗಿಯಾಗಬೇಕು. ಶೋಷಿಸುವವರನ್ನು ತಕ್ಷಣ ಹಿಡಿದು ಶಿಕ್ಷಿಸುವಂತೆ, ಮತ್ತೆ ಇನ್ನೊಬ್ಬರು ಇಂತಹ ಕೃತ್ಯಗಳನ್ನು ಎಸಗದಂತೆ ಎಚ್ಚರಿಕೆಯ ಗಂಟೆಯಾಗಿ ಕಾನೂನು ತನ್ನ ತೀರ್ಪನ್ನು ನೀಡಬೇಕಾಗಿದೆ.
ಈ ನಿಟ್ಟಿನಲ್ಲಿ ಸಮಾಜ ಸಂಘ ಸಂಸ್ಥೆಗಳು ಸರ್ಕಾರ ಕಾನೂನು ಎಲ್ಲವೂ ಎಚ್ಚೆತ್ತುಕೊಂಡು ಪಾರದರ್ಶಕವಾಗಿ ಸತ್ಯದ ತಳಹದಿಯಲ್ಲೇ ಅಂತಹ ಕೃತ್ಯ ಎಸಗಿದವರನ್ನು ಶಿಕ್ಷಿಸುವ ಮೂಲಕ ಎಲ್ಲಿ ನಲುಗುತ್ತಿರುವ ದೇಗುಲವನ್ನು ರಕ್ಷಿಸಿದ್ದ ಆದರೆ ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳುವುದು ಎಂಬುದನ್ನು ಸಾಬೀತುಪಡಿಸುವಲ್ಲಿ ಎರಡು ಮಾತಿಲ್ಲ.
*ಅಮು ಭಾವಜೀವಿ*
Tuesday, September 24, 2019
ಶರಣರ ನಲ್ನುಡಿ
[9/22, 7:12 PM] ಅಮು ಭಾವಜೀವಿ ಮುಸ್ಟೂರು: ಶರಣರ ನಲ್ನುಡಿ 1
ಮಾನವನಿಗೆ ಎರಡು ಬಟ್ಟೆಗಳು. ಒಂದು ಹೊಟ್ಟೆಯ ಬಟ್ಟೆ ಇನ್ನೊಂದು ನೆತ್ತಿಯ ಬಟ್ಟೆ . ಹೊಟ್ಟೆಗೆ ಅನ್ನ ನೆತ್ತಿಗೆ ಜ್ಞಾನ ಹಾಕಬೇಕಾಗುತ್ತದೆ . ಹೊಟ್ಟೆ ಖಾಲಿ ಇದ್ದಾಗ ಅಸಿಡಿಟಿ, ಅಲ್ಸರ್ ಇತ್ಯಾದಿ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ . ಅದರಂತೆ ಖಾಲಿ ತಲೆಯಲ್ಲಿಯೂ ಕೆಲವೊಂದು ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಏಕೆಂದರೆ ಖಾಲಿ ತಲೆ ಸೈತಾನನ ಕಾರ್ಯಾಗಾರ, ಎಂಟಿ ಮೈಂಡ್ ಈಸ್ ಡೆವಿಲ್ಸ್ ವರ್ಕ್ಸ್ ಶಾಪ್. ನೆತ್ತಿಯ ಕಾಯಿಲೆಗಳೆಂದರೆ ಚಿಂತೆ, ಭ್ರಮೆ, ದುರ್ಭಾವನೆ ದುರಾಲೋಚನೆ ಇತ್ಯಾದಿಗಳು . ಕಾರಣ ಖಾಲಿ ಇರುವ ನೆತ್ತಿಯಲ್ಲಿ ಚಿಂತನೆಗಳನ್ನು ತುಂಬಿ ಕೊಳ್ಳಬೇಕಾಗುತ್ತದೆ . ಚಿಂತನ ಅದು ಅದ್ಭುತವಾದ ಶಕ್ತಿ. ಅದನ್ನು ರಭಸವಾಗಿ ಹರಿಯುವಂತಹ ವಾಹಿನಿಗೆ ಹೋಲಿಸಬಹುದು. ಹೀಗೆ ನಿರಂತರವಾಗಿ ಅದು ಹರಿಯುತ್ತಿದ್ದರೆ ಚಿಂತನ ವಾಹಿನಿ ಅನಿಸಿ ಕೊಳ್ಳುತ್ತದೆ. ಚಿಂತನೆಗಳು ಜಡವಾಗುತ್ತಿರುವ ಬದುಕನ್ನು ಚೈತನ್ಯ ಗೊಳಿಸುತ್ತವೆ. ಅನ್ನದಿಂದಲೂ ಚೈತನ್ಯ ಚಿಂತನೆಯಿಂದಲೂ ಚೈತನ್ಯ. ಅನ್ನ ಅಥವಾ ಆಹಾರ ಕೆಲವು ಗಂಟೆಗಳ ನಂತರ ಕರಗಿಹೋಗುತ್ತದೆ ಆದರೆ ಚಿಂತನೆ ಎಂಬ ಅನ್ನದ ರಾಶಿ ಕರಗುವುದೇ ಇಲ್ಲ . ಚಿಂತನೆಗಳು ಸ್ಪಷ್ಟತೆಯನ್ನು ಗಟ್ಟಿತನವನ್ನು ಮತ್ತು ಉತ್ತಮ ಬದುಕನ್ನು ಕಟ್ಟಿಕೊಡುತ್ತವೆ. ಬುದ್ಧಿಜೀವಿಗಳ ನಿಜವಾದ ಆಹಾರವೆಂದರೆ ಚಿಂತನೆಗಳೇ ಆಗಿರುತ್ತೇವೆ . ಚಿಂತಕರ ಶರೀರ ಕೆಲವೊಮ್ಮೆ ಕೃಶವಾಗಿ ಕಾಣುತ್ತಿರಬಹುದು, ಆದರೆ ಅವರ ಚಿಂತನಾ ಶಕ್ತಿ ಅದ್ಭುತವಾಗಿರುತ್ತದೆ . ಅವರು ಚಿಂತನೆ ಆಗಿರುತ್ತಾರೆ. ಚಿಂತನೆ ಅವರ ಶಕ್ತಿಯಾಗಿರುತ್ತದೆ. ಗಟ್ಟಿ ಚಿಂತನೆಗಳು ಜಗತ್ತಿಗೆ, ಜೀವನಕ್ಕೆ ಬೇಕಾಗುತ್ತವೆ ಅಂತಹ ಚಿಂತನೆಗಳೇ ಜಗತ್ತನ್ನು ಆಳುತ್ತವೆ. ಅನ್ನಕ್ಕಾಗಿ ಪರಿತಪಿಸುವವರ ಸಂಖ್ಯೆ ಬಹಳ, ಆದರೆ ಚಿಂತನೆಗಾಗಿ ಕಾತರಿಸುವವರ ಸಂಖ್ಯೆ ವಿರಳ ಹಾಗೆಂದು ಜಗತ್ತಿನಲ್ಲಿ ಚಿಂತಕರೆ ಇಲ್ಲ , ಚಿಂತನೆಗಳೇ ಇಲ್ಲ ಎನ್ನಲಾಗದು. ಪ್ರತಿಯೊಂದು ಚಿಂತನೆಯಲ್ಲಿಯೂ ಮಿಂಚು ಇದೆ , ಹೊಳಪು ಇದೆ. ಮೆದುಳೆಂಬ ಆಗಸದಲ್ಲಿ ಮಿಂಚಿ ಹೋಗುವ ಚಿಂತನೆಗಳನ್ನು ಸೆರೆ ಹಿಡಿಯಬೇಕಾಗುತ್ತದೆ . ಇಲ್ಲದಿದ್ದರೆ ಅವು ಕೈಗೆ ಸಿಗದಂತೆ ಮಿಂಚಿ ಮಾಯವಾಗುತ್ತವೆ.
[9/22, 9:42 PM] ಅಮು ಭಾವಜೀವಿ ಮುಸ್ಟೂರು: ಶರಣರ ನಲ್ನುಡಿ 2
ಸರಕು ಸಾಮಗ್ರಿಗಳಲ್ಲಿ ಸುಖವನ್ನು ಕಾಣಬಯಸುವ ಇಂದಿನ ಮಾನವ ತುಮುಲಗಳಲ್ಲಿ ತೊಳಲಾಡುತ್ತಿದ್ದಾನೆ. ಕೊನೆಯಿರದ ಬಯಕೆಗಳ ಬೆನ್ನು ಹತ್ತಿ ಬದುಕಬೇಕೆನ್ನುವ ಇಂದಿನ ಮಾನವ ಗೊಂದಲದ ಮಡುವಾಗಿದ್ದಾನೆ. ಅವನಿಗೆ ಅವನ ಬಗ್ಗೆಯೇ ನಂಬಿಕೆ ಇಲ್ಲ . ಪರಿಸ್ಥಿತಿ ಹೀಗಿರುವಾಗ ಇತರರನ್ನು ಅರ್ಥಮಾಡಿಕೊಳ್ಳುವುದಿರಲಿ , ತನ್ನ ಮೇಲೆ ತನಗೇ ನಂಬಿಕೆ ಇಲ್ಲ . ತನ್ನನ್ನು ತಾನು ಅರಿಯದವನು ಬದುಕಿನ ಸತ್ಯವನ್ನು ತಿಳಿಯಬೇಕೆಂದು ಬಯಸುವುದಾದರೂ ಹೇಗೆ ? ಹಾಗಾಗಿ ಮಾನವನಿಂದು ಅಸ್ಪಷ್ಟತೆಯಲ್ಲಿ ಮುಳುಗಿಹೋಗಿದ್ದಾನೆ. ಅವನ ಆಲೋಚನೆಯಲ್ಲಿ , ನಿರ್ಧಾರಗಳಲ್ಲಿ ಅಸ್ಪಷ್ಟತೆ ಆವರಿಸಿಕೊಂಡಿದೆ . ಅವನ ನಿರ್ಧಾರಗಳಲ್ಲಿ ನಿಖರತೆ ಇಲ್ಲವಾಗಿದೆ. ನಿರ್ದಿಷ್ಟ ಗುರಿಯ ಕೊರತೆಯೂ ಎದುರಾಗಿದೆ . ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಹ ಸ್ಥಿತಿ ಅವನದು . ಇದಕ್ಕೆ ಕಾರಣವೂ ಇಲ್ಲದಿಲ್ಲ ಒಂದು ಕಡೆ ಸಂಪ್ರದಾಯದ ಸೆಳೆತ ಇನ್ನೊಂದು ಕಡೆ ವೈಚಾರಿಕತೆಯ ಮೊರೆತ ಎರಡನ್ನೂ ಕಟ್ಟಿಕೊಳ್ಳುವಂತಿಲ್ಲ ಬಿಡುವಂತೆಯೂ ಇಲ್ಲ. ಇದಾವುದನ್ನು ಆಲೋಚಿಸದವನು ಭೌತಿಕ ವಸ್ತುಗಳಲ್ಲಿ ಸುಖವನ್ನು ಅರಸುತ್ತ ಮುನ್ನಡೆದಿದ್ದಾನೆ. ಅರಿವಿನ ಕೊರತೆ ಇರುವವರು ಒತ್ತಟ್ಟಿಗಿರಲಿ ಪ್ರಜ್ಞಾವಂತರು ವಿವೇಕವಂತರು ವಿಚಾರವಂತರು ಎಂದು ಹಣೆಪಟ್ಟಿ ಹಚ್ಚಿಕೊಂಡವರೂ ಕೂಡ ಗೊಂದಲದ ಗೂಡಾಗಿದ್ದಾರೆ. ಜನರನ್ನು ಜಾಗೃತಿಯತ್ತ ಒಯ್ಯಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವವರು ಅಸ್ಪಷ್ಟತೆಯ ಪರಿಧಿಗೆ ಸಿಕ್ಕಿ ನರಳುತ್ತಿದ್ದಾರೆ. ಇದು ದೊಡ್ಡ ದುರಂತ ತಿಳಿ ಹೇಳುವವನೇ ತಿರುಗುವ ಕಲ್ಲೆಸೆಯುವ ಕೆಲಸ ಮಾಡುತ್ತಿದ್ದಾರೆನೆಂದರೆ ತಿಳುವಳಿಕೆ ಇಲ್ಲದವರ ಪಾಡೇನು? ಅಸ್ಪಷ್ಟತೆ ಮುತ್ತಿ ಕೊಂಡಾಗ ಸ್ಪಷ್ಟ ಮಾರ್ಗದರ್ಶನ ಮಾಡಲು ಅಸಾಧ್ಯ . ಸ್ಪಷ್ಟ ಮಾರ್ಗದರ್ಶನ ಸಾಧ್ಯವಾಗದಿದ್ದಾಗ ಸಮರ್ಥ ನಾಯಕತ್ವವನ್ನು ರೂಪಿಸಲು ಅಸಾಧ್ಯ . ಎಲ್ಲಾ ಕ್ಷೇತ್ರದಲ್ಲೂ ಸಮರ್ಥ ನಾಯಕತ್ವ ಧರ್ಮಗುರು ರಾಜಕಾರಣಿ ಸಾಹಿತಿ-ಕಲಾವಿದ ವಿಜ್ಞಾನಿ ಹೀಗೆ ಜಗತ್ತಿಗೆ ಈಗ ಬೇಕಾಗಿರುವುದು ಸ್ಪಷ್ಟ ಮಾರ್ಗದರ್ಶನ . ಇದು ಸಾಧ್ಯವಾದರೆ ಮಾತ್ರ ಜಗತ್ತು ನೆಮ್ಮದಿಯಿಂದ ಇರಲು ಸಾಧ್ಯ. ಎಲ್ಲಿ ಸ್ಪಷ್ಟತೆ ಇರುತ್ತದೆಯೋ ಅಲ್ಲಿ ಸ್ಪಷ್ಟ ಗುರಿ, ಸ್ಪಷ್ಟ ಗಮನ, ಸ್ಪಷ್ಟ ಉದ್ದೇಶ ಬದುಕಿನ ಪರಮಸುಖ ಯಾವುದೆಂಬುದು ಸ್ಪಷ್ಟವಾಗುತ್ತದೆ . ಆಗ ಮಾನವನ ದಾರಿಯೇ ಬದಲಾಗುತ್ತದೆ. ಅವನು ಸತ್ಯದತ್ತ , ಸರಳತೆಯತ್ತ , ಸಭ್ಯತೆಯತ್ತ ಸೌಹಾರ್ದತೆಯತ್ತ ಸಾಕಾರದತ್ತ ನಡೆಯಬಲ್ಲವನಾಗುತ್ತಾನೆ. ಹೀಗಾಗಿ ಸ್ಪಷ್ಟತೆಯ ಕಡೆಗೆ ಸಮಾಜ ಚಲಿಸಬೇಕಾಗಿದೆ.
[9/22, 10:22 PM] ಅಮು ಭಾವಜೀವಿ ಮುಸ್ಟೂರು: ಶರಣರ ನಲ್ನುಡಿ 3
ಬದುಕನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ದೃಷ್ಟಾಂತಗಳು, ನಿದರ್ಶನಗಳು ,ಕಾದಂಬರಿಗಳು, ಕಥೆಗಳು ಮತ್ತು ಅನುಭವಗಳು ಬೇಕಾಗುತ್ತವೆ. ಕಥೆಗಳು ನಮಗೆ ಭೂತದ ದರ್ಶನವನ್ನು ಮಾಡಿಸುತ್ತವೆ, ಅವು ನಮ್ಮನ್ನು ಕಲ್ಪನಾ ಲೋಕಕ್ಕೆ ಕರೆದುಕೊಂಡು ಹೋಗುತ್ತವೆ . ಅನುಭವಗಳು ವರ್ತಮಾನದಲ್ಲಿ ಘಟಿಸುತ್ತಾ ಪಕ್ವಗೊಳಿಸುತ್ತಾ ಹೋಗುತ್ತವೆ. ಹಿಂದಿನ ದೃಷ್ಟಾಂತಗಳನ್ನು ಇಂದಿನ ಅನುಭವಗಳನ್ನು ವರ್ತಮಾನಕ್ಕೆ ಅನ್ವಯಿಸುವಂತೆ ಮಾಡುವುದೇ ಒಂದು ಸಾಹಸ. ಇಲ್ಲದಿದ್ದರೆ ಘಟನೆಗಳು ಘಟನೆಗಳಾಗಿ, ನಿದರ್ಶನಗಳು ನಿದರ್ಶನಗಳಾಗಿ ಕಥೆಗಳು ಕಥೆಗಳಾಗಿ ಉಳಿಯುತ್ತವೆ. ಇವುಗಳನ್ನು ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿ ಒಂದು ಸೂಕ್ತವಾದ ಸತ್ಯವನ್ನು ಸಿದ್ಧಾಂತವನ್ನು ಮೌಲ್ಯವನ್ನು ಹೇಳುವುದರಿಂದ ಎಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ. ಹೀಗೆ ಹೇಳುವಾಗ ಅವು ಎಷ್ಟು ಸಮಂಜಸ ಅನ್ನುವುದನ್ನು ಗಮನಿಸಬೇಕಾಗುತ್ತದೆ . ಸ್ಥಾಪಿತ ಸತ್ಯಗಳಿಗಿಂತ ಸಮಕಾಲಿನ ಸತ್ಯಗಳು ನಮ್ಮ ಸಂಗಡ ಸದಾ ಇರುತ್ತವೆ ಎಂಬ ಅರಿವು ಇರಬೇಕಾಗುತ್ತದೆ ಕೇವಲ ಸ್ಥಾಪಿತ ಮೌಲ್ಯಗಳನ್ನು ಪ್ರತಿಪಾದಿಸುವುದಕ್ಕಿಂತ ಸಮಕಾಲಿನ ಸತ್ಯವನ್ನು ಶೋಧಿಸುವ ಮತ್ತು ಅದನ್ನು ಪುನರ್ ಪ್ರತಿಷ್ಠಾಪಿಸುವ ಪ್ರಯತ್ನಗಳು ನಡೆಯಬೇಕಾಗುತ್ತದೆ ಇಲ್ಲದಿದ್ದರೆ ಸ್ಥಾಪಿತ ಮೌಲ್ಯಗಳನ್ನು ಹೇಳಿಕೊಂಡು ಒಂದಷ್ಟು ಹೊಟ್ಟೆಹೊರೆಯುವ ಪ್ರಯತ್ನಕ್ಕೆ ಸೀಮಿತವಾದಂತೆ . ಸ್ಥಾಪಿತ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಹೋಗುವುದು ಪ್ರಸ್ತುತ ಸಂದರ್ಭದಲ್ಲಿ ಅದೇನು ದೊಡ್ಡ ಸಾಹಸ ಅನ್ನಿಸಿಕೊಳ್ಳುವುದಿಲ್ಲ. ಸ್ಥಾಪಿತ ಮೌಲ್ಯಗಳತ್ತ ಗಮನ ಹರಿಸುವವರು ಆಗಿ ಹೋದವರ ಉದಾಹರಣೆಗಳನ್ನು ನೀಡುತ್ತಾ ಹೋಗುತ್ತಾರೆ. ಅವರ ಬೋಧನೆಗಳನ್ನು ಮತ್ತೆ ಮತ್ತೆ ಬೋಧಿಸುತ್ತಾ ಹೋಗುತ್ತಾರೆ. ಉದಾಹರಣೆಗೆ ಬುದ್ದ ಹಾಗೆ ಹೇಳಿದ್ದಾನೆ ಬಸವಣ್ಣ ಹೀಗೆ ಹೇಳಿದ್ದಾನೆ ಇತ್ಯಾದಿ. ಅವರು ಅಂದಿನ ಸಂದರ್ಭಗಳನ್ನು ಕುರಿತು ಹೇಳಿದ್ದಾರೆ. ನಾವು ಇಷ್ಟಕ್ಕೆ ನಿಂತು ಬಿಡುವುದೇ ? ಹೀಗಾದಾಗ ಪ್ರಸ್ತುತ ಸಂದರ್ಭಗಳು ಸತ್ತು ಹೋಗುತ್ತವೆ. ನಾನು ಬುದ್ಧ ಬಸವಣ್ಣ ಗಾಂಧಿ ಅಂಬೇಡ್ಕರ್ ಅವರ ವಿಚಾರಗಳನ್ನು ಮತ್ತೆ ಮತ್ತೆ ಪ್ರತಿಪಾದಿಸಬಾರದೆಂದು ಹೇಳುತ್ತಿಲ್ಲ, ಮೇಲಾಗಿ ಅವುಗಳನ್ನು ಇವತ್ತಿನ ಜಗತ್ತಿಗೆ ಅನ್ವಯಿಸುತ್ತಾ ಇಂದಿನ ಅನುಭವಗಳನ್ನು ಸೇರಿಸುತ್ತಾ ಹೋದಾಗ ಅವರ ವಿಚಾರಗಳು ಹೆಚ್ಚು ಪ್ರಸ್ತುತ ಆಗುತ್ತವೆ. ಇಲ್ಲದಿದ್ದರೆ ಒಂದು ರೀತಿಯಲ್ಲಿ ಕ್ಲೀಷೆಯಾಗುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ನಾವುಗಳು ಚಿಂತನೆ ಮಾಡಬೇಕಾಗುತ್ತದೆ
[9/23, 9:19 PM] ಅಮು ಭಾವಜೀವಿ ಮುಸ್ಟೂರು: ಶ್ರೀ ಶಿವಮೂರ್ತಿ ಮುರುಘಾ ಶರಣರು ನಲ್ನುಡಿ 1. 10 2018
ನಾಡಿನಾದ್ಯಂತ ಬಸವ ಕೇಂದ್ರಗಳ ಮುಖಾಂತರವಾಗಿ ಮತ್ತು ಮುರುಘಾಮಠದ ಮುಖಾಂತರವಾಗಿ ಶರಣ ಸಂಗಮ, ಅಂತಹ ಶರಣ ಸಂಗಮ ಕಳೆದ 28 ವರ್ಷಗಳಿಂದ ನಾಡಿನಾದ್ಯಂತ ನಡೆಯುತ್ತಾ ಬಂದಿರುತ್ತದೆ. ಬೆಂಗಳೂರಿನಲ್ಲಿ ಒಂದು ಶರಣ ಸಂಗಮ ಸ್ವತಂತ್ರ ಹೋರಾಟಗಾರರಾದ ಎಚ್ಎಸ್ ದೊರೆಸ್ವಾಮಿ , ಸಾಹಿತಿ ಸುಮತೀಂದ್ರ ನಾಡಿಗರು ಭೇಟಿಯಾದರು. ನಾಡಿಗರು ನನ್ನನ್ನು ಕುರಿತು ನಿಮ್ಮ ಥೀಸಿಸ್ ವಿಷಯ ಏನು ಎಂದು ಕೇಳಿದರು ನಾನು ನನ್ನ ಥೀಸಿಸ್ ವಿಷಯ ಮಾನವೀಯತೆ ಮತ್ತು ಆಚರಣೆ ಎಂದೆ, ಮುಖ್ಯ ವಿಷಯವೊಂದಿರಬೇಕಲ್ಲ ಎಂದರು. ನಾನು ನಸುನಗುತ್ತಾ ನಾನು ಯಾವ ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತಿದವನಲ್ಲ ಅಂದೆ ,ಅವರು ಸಂಸ್ಕೃತ ಭಾಷೆಯ ಪರಿಚಯ ಇದೆಯೇ ಎಂದರು. ಅಲ್ಪಸ್ವಲ್ಪ ಸಂಪೂರ್ಣವಾಗಿ ಅಧ್ಯಯನ ಮಾಡಿಲ್ಲ ಅಂದೆ ನನ್ನಿಂದ ಸ್ಪಷ್ಟ ನುಡಿಗಳು. ಒಂದು ಭಾಷೆಯನ್ನು ಕಲಿಯುವುದರಿಂದ ಭಾಷೆಗೇನೂ ತೊಂದರೆ ಇಲ್ಲ. ನನಗೆ ಎಂದಿಗೂ ಅದು ಕೀಳರಿಮೆಯಾಗಿ ಕಾಡಲಿಲ್ಲ . ನಾನು ಯಾವುದೇ ಗುರುಕುಲದಲ್ಲಿ ಓದಲಿಲ್ಲ, ವಿಶ್ವವಿದ್ಯಾಲಯಗಳಲ್ಲಿ ಅಭ್ಯಸಿಸಲಿಲ್ಲ. ಮಠ ಪರಂಪರೆಯಂತೆ ಕಾಶಿಗೆ ಹೋಗಿ ಕಲಿಯಲಿಲ್ಲ. ಯಾವುದೇ ಮಂದಿರದಲ್ಲಿ ಅಧ್ಯಯನ ಮಾಡಲಿಲ್ಲ . ಜೀವನದಿಂದ ಕಲಿಯುತ್ತಾ ಹೋಗಿದ್ದೇನೆ ಅದುವೇ ನನ್ನ ಪಾಲಿನ ಪರಮ ಗುರು . ವಿಶ್ವವಿದ್ಯಾಲಯ ಅದು ಮುಕ್ತ ವಿಶ್ವವಿದ್ಯಾಲಯ. ಬದುಕಿನ ಮೂಲದ್ರವ್ಯ ಅನುಭವ ಕಲಿಸುವ ಕ್ರಿಯೆಯಲ್ಲಿ ಅದು ದಿವ್ಯಜ್ಞಾನಿಗಿಂತ ಅಥವಾ ಸಮರ್ಥ ಗುರುವಿಗಿಂತ ಕಡಿಮೆಯೇನಲ್ಲ ಎಂಬುದು ನನ್ನ ಖಚಿತ ಅಭಿಪ್ರಾಯ . ಪಂಡಿತರು ಮಾತ್ರ ಧಾರ್ಮಿಕ ಪೀಠಗಳಿಗೆ ಅಧಿಪತಿಗಳು ಆಗುವ ಪರಂಪರೆ ಬೆಳೆದುಬಂದಿದೆ . ನನಗಾವ ಪಾಂಡಿತ್ಯವೂ ಇರಲಿಲ್ಲ , ಆದರೂ ನಾನು ಉಜ್ವಲ ಪರಂಪರೆಯ ಪೀಠಯೇರಿದೆ. ನಾನು ಸಮಾಜವೆಂಬ ಗ್ರಂಥವನ್ನು ಸದಾ ಅಭ್ಯಸಿಸುವ ನಿಷ್ಠಾವಂತ ವಿದ್ಯಾರ್ಥಿ, ಇದನ್ನು ತಿಳಿದ ನನ್ನ ಗುರುಗಳು ನನ್ನನ್ನು ಈ ಪೀಠಕ್ಕೆ ಆರಿಸಿದರು. ನನಗೆ ಒಂದು ಪೀಠವನ್ನು, ಸಮಾಜವನ್ನು ಮುನ್ನಡೆಸುವ ಶಕ್ತಿ ಸಾಮರ್ಥ್ಯಗಳು ಎಲ್ಲಿಂದಲೋ ಬಂದವೆಂದು ಭಾವಿಸುವ ಅಗತ್ಯವಿಲ್ಲ . ನಾನು ಹೆಚ್ಚು ಹೆಚ್ಚು ಜನಮುಖಿಯಾಗುತ್ತಾ ಹೋದಂತೆ ಅನುಭವಗಳು ಉಂಟಾಗುತ್ತಾ ಹೋದವು . ನನ್ನ ಬದುಕಿನಲ್ಲಿ ಯಾವುದಾದರೂ ಒಂದು ಶಕ್ತಿ ಕೆಲಸ ಮಾಡಿದೆ ಎಂದು ಭಾವಿಸುವುದಾದರೆ ಅದು ಅನುಭವ ಬಲ, ಅದಕ್ಕೆ ಪೂರಕವಾಗಿ ನಿಂತದ್ದು ಅಧ್ಯಯನ ಬಲ ಇದರೊಂದಿಗೆ ಆಧ್ಯಾತ್ಮಿಕ ಬಲ. ಇವು ನನಗೆ ಶಕ್ತಿಯನ್ನು ತಂದುಕೊಟ್ಟವು. ಈ ಅರ್ಥದಲ್ಲಿ ನಾನು ಸ್ವ ನಿರ್ಮಿತ ವ್ಯಕ್ತಿ ,ಅಂದರೆ self-made ಮಾಸ್ಟರ್. ಪ್ರಯತ್ನ ಪಟ್ಟರೆ ಹಣವನ್ನು ದೊರಕಿಸಿಕೊಳ್ಳಬಹುದು ಆದರೆ ಅನುಭವ ಅದಕ್ಕಾಗಿ ಏನೆಲ್ಲ ಪ್ರಯತ್ನ ಮಾಡಬೇಕಾಗುತ್ತದೆ. ಜೀವನವು ಉನ್ನತಮಟ್ಟಕ್ಕೆರುವುದೇ ಅನುಭವಗಳಿಂದ. ನನ್ನ ದೃಷ್ಟಿಯಲ್ಲಿ ಅನುಭವಗಳಿಗಿಂತ ಮಿಗಿಲಾದುದು ಯಾವುದೂ ಇಲ್ಲ . ಮಾನವನ ಬದುಕಿನಲ್ಲಿ ಅತ್ಯಂತತಿಕವಾದುದು ಯಾವುದು ಎಂಬ ಹೇಗೆ ಅನುಭವ ಎಂದು ಧೈರ್ಯವಾಗಿ ಸಮರ್ಥಿಸಬಹುದು . ಶರಣರು ಸಂತರು ಸಮಾಜಸುಧಾರಕರು ಇವರಿಗೆಲ್ಲಾ ಅನುಭವವೇ ಮಾರ್ಗದರ್ಶಕ . ಯಾರ ಬದುಕಿನಲ್ಲಿ ಹೆಚ್ಚು ಅನುಭವಗಳಾಗಿದ್ದಾವೆಯೋ ಅವರು ಸೃಜನಶೀಲರಾಗಿರುತ್ತಾರೆ . ಸಮಾಜ ಸುಧಾರಕರೆನಿಸಿಕೊಳ್ಳುತ್ತಾರೆ. ಅವರೇ ಭವಿತವ್ಯದ ಮಾರ್ಗದರ್ಶಕರು. ನನ್ನ ಬದುಕಿನ ಪ್ರತಿ ಕ್ಷಣವನ್ನು ನಾನು ಲೋಕಾನುಭವ ಸಂಗ್ರಹಕ್ಕಾಗಿ ಖರ್ಚು ಮಾಡಿದ್ದೇನೆ ಒಂದು ಕಡೆ ಕುಳಿತಿದ್ದರೆ ಲೋಕಾನುಭವ ಆಗುತ್ತಿರಲಿಲ್ಲ. ಬದುಕು ಅನಾವರಣಗೊಳ್ಳುತ್ತಿರಲಿಲ್ಲ. ಬದುಕನ್ನು ಅನಾವರಣಗೊಳಿಸಿದ ಶಕ್ತಿಯೇ ಈ ಲೋಕಾನುಭವ ಅದಕ್ಕಾಗಿ ಹಾತೊರೆದಿದ್ದೇನೆ ಹಂಬಲಿಸಿದ್ದೇನೆ.
[9/24, 7:24 PM] ಅಮು ಭಾವಜೀವಿ ಮುಸ್ಟೂರು: 17 10 2011
ಶರಣರ ನಲ್ನುಡಿ
ನನ್ನ ಗೆಳತಿ ಪಿಯುಸಿ ಪರೀಕ್ಷೆ ಬರೆಯುತ್ತಿದ್ದಳು. ಐದು ಪ್ರಶ್ನೆಗಳಿಗೆ ಉತ್ತರ ಬರೆದಾಗಿತ್ತು. ಆರನೆಯ ಮತ್ತು ಕಟ್ಟಕಡೆಯ ಪ್ರಶ್ನೆಗೆ ಉತ್ತರಿಸುವಾಗ ಜಾಗೃತದಳದ ಅವರ ಕೈಗೆ ಸಿಕ್ಕಿಬಿಟ್ಟಳು. ಕೂಡಲೇ ಅವರು ಆಕೆಯನ್ನು ಡಿಬಾರ್ ಮಾಡಿದರು. ಆಕೆ ಚಿಂತಾಕ್ರಾಂತರಾಗಿದ್ದಾಳೆ, ತನ್ನ ಮನೆಯವರಿಗೆ ತಾನು ಡಿಬಾರ್ ಆದ ವಿಚಾರವನ್ನು ಹಾಗೆ ತಿಳಿಸಿರುವುದಿಲ್ಲ . ಸತ್ತ ಬಿಟ್ಟರೆ ನನ್ನ ಸಮಸ್ಯೆ ಶಾಶ್ವತವಾಗಿ ಪರಿಹಾರ ಆಗುತ್ತದೆ ಎಂದು ಭಾವಿಸಿದ್ದಾಳೆ. ಇದಕ್ಕೆ ನಿಮ್ಮ ಪರಿಹಾರವೇನು ಎಂದು ಡಿಬಾರ್ ಆದ ವಿದ್ಯಾರ್ಥಿನಿಯ ಗೆಳತಿ ನನ್ನ ಮೊಬೈಲಿಗೆ ಕರೆಮಾಡಿ ಕೇಳಿದಳು . ಸಾಯುವ ತೀರ್ಮಾನ ಕೈಬಿಡಲು ನಾನು ಯುವತಿಗೆ ಸೂಚಿಸಿದೆ. ಅವರ ತಂದೆ ತಾಯಿಗಳಿಗೆ ನಾನು ಸಮಾಧಾನ ಹೇಳುತ್ತೇನೆಂದೆ. ವಿದ್ಯಾರ್ಥಿನಿಗೆ ಮತ್ತೊಂದು ಅವಕಾಶ ತೆಗೆದುಕೊಂಡು ಪಾಸು ಮಾಡಲು ಸೂಚಿಸಿದೆ.
ಅವನೊಬ್ಬ ಎಂಜಿನಿಯರಿಂಗ್ ವಿದ್ಯಾರ್ಥಿ ಸಂಪೂರ್ಣವಾಗಿ ತನ್ನ ಅಧ್ಯಯನವನ್ನು ಮುಗಿಸಿದ್ದಾನೆ. ಅಧ್ಯಯನ ಮುಗಿಸಿದ್ದರೂ ಆತಂಕದ ಸ್ಥಿತಿಯನ್ನು ಅನುಭವಿಸುತ್ತಿದ್ದಾನೆ. ಆತನಿಗಿನ್ನೂ ನೌಕರಿ ಸಿಕ್ಕಿಲ್ಲ, ನೌಕರಿಯನ್ನು ಹುಡುಕಿಕೊಂಡು ತನ್ನ ಜೀವನವನ್ನು ಸುಸೂತ್ರವಾಗಿ ನಿರ್ವಹಿಸುವುದರಿಂದ ವಂಚಿತನಾಗಿದ್ದಾನೆ. ಅವನು ತುಸು ವಿಚಿತ್ರವಾಗಿ ಆಲೋಚಿಸುವ ಸ್ವಭಾವದವನಾಗಿದ್ದಾನೆ. ಆತ ಒಂದು ದಿನ ದಾವಣಗೆರೆಯಲ್ಲಿ ನಾನು ಉಳಿದುಕೊಂಡಿದ್ದ ಮನೆಗೆ ಬಂದ, ನನ್ನೊಟ್ಟಿಗೆ ಖಾಸಗಿಯಾಗಿ ಭೇಟಿ ಮಾಡಲು ಇಚ್ಛಿಸಿದ ನಾನು ಅದಕ್ಕೆ ಅವಕಾಶ ಕಲ್ಪಿಸಿಕೊಟ್ಟೆ. ಅವನು ಹೀಗೆ ಹೇಳುತ್ತಾ ಹೋದ, ಭಾರತದ ಶಕ್ತಿ ತಟಸ್ಥವಾಗಿದೆ, ಇದಕ್ಕೆ ಕಾರಣವೇನೆಂದರೆ ಶತ್ರು ರಾಷ್ಟ್ರದವರು ನಮ್ಮ ರಾಷ್ಟ್ರಕ್ಕೆ ಮಾಟ ಮಾಡಿಸಿದ್ದಾರೆ. ಆದ್ದರಿಂದ ನಮ್ಮ ದೇಶದಲ್ಲಿ ಭಯೋತ್ಪಾದನೆ, ವಿಛಿದ್ರಕಾರಿ ಶಕ್ತಿಗಳು ಅಟ್ಟಹಾಸ ನಡೆಸಿವೆ ಎಂದ. ನನಗೆ ಅವನ ವಿಚಾರವನ್ನು ಕೇಳಿ ವಿಚಿತ್ರವೆನಿಸಿತು. ನೀನೊಬ್ಬ ತಂತ್ರಜ್ಞಾನದ ವಿದ್ಯಾರ್ಥಿಯಾಗಿದ್ದು ಇಷ್ಟೊಂದು ಅತಾರ್ಕಿಕವಾಗಿ ಅವೈಜ್ಞಾನಿಕವಾಗಿ ಆಲೋಚಿಸುತ್ತಿರುವೆಯಲ್ಲಾ ಎಂದು ಆತನನ್ನು ಪ್ರಶ್ನಿಸಿದೆ . ಆತ ಕೊಟ್ಟ ಉತ್ತರ ನಾನು ಇಂತಿಂಥ ಸಂದರ್ಭದಲ್ಲಿ ಹೀಗೀಗೆ ಆಗುತ್ತದೆ ಎಂದು ಅಧಿಕಾರಿಗಳು ಮತ್ತು ಧಾರ್ಮಿಕ ವ್ಯಕ್ತಿಗಳಿಗೆ ತಿಳಿಸಿದ್ದೆ. ಅದರಂತೆ ದುರ್ಘಟನೆಗಳು ನಡೆದಿವೆ. ಇದು ನಡೆಯಬಾರದು ಎಂದರೆ ಮಠಾಧೀಶರೆಲ್ಲಾ ಸೇರಿಕೊಂಡು ಇದರ ಉಪಶಮನಕ್ಕಾಗಿ ಬಹುದೊಡ್ಡ ಯಜ್ಞವನ್ನು ಮಾಡಿಸಬೇಕಾಗುತ್ತದೆ ಎಂದು ತಿಳಿಸಿದ. ಇದೆಂಥಾ ಭ್ರಮೆ, ಇಂದಿನ ಯುವ ಪೀಳಿಗೆ ಇಂತಹ ತೊಳಲಾಟದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಆಧುನಿಕ ಮಾನವ ಹತ್ತು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾನೆ. ದೂರದರ್ಶನ ನೋಡುತ್ತಾ ಅತಿಯಾದ ವರ್ತನೆಗೆ ಒಳಗಾಗುವುದು , ಒಂದೇ ಒಂದು ನಿಂದನೆಯ ನುಡಿಗೆ ನಿದ್ರೆಯನ್ನು ಕೆಡಿಸಿಕೊಳ್ಳುವುದು, ಬೇರೆಯವರ ವರ್ತನೆಯಿಂದ ಉದ್ವೇಗಕ್ಕೆ ಒಳಗಾಗುವುದು, ನಡೆದು ಹೋದ ಘಟನೆಯನ್ನು ನೆನೆಸಿಕೊಳ್ಳುತ್ತಾ ನಿರಾಸೆಯ ಅಂಚಿಗೆ ಬದುಕನ್ನು ತಳ್ಳಿ ಕೊಳ್ಳುವುದು, ಕೆಲಸದಲ್ಲಿ ಸಫಲತೆ ಸಿಗಲಿಲ್ಲವೆಂದು ಸಾವಿಗೆ ಒಳಗಾಗುವುದು, ಶರೀರವನ್ನು ಕಾಡುತ್ತಿರುವ ಯಾವುದೋ ಒಂದು ವೇದನೆಯಿಂದ ಜೀವನೋತ್ಸಾಹವನ್ನು ಕಳೆದುಕೊಳ್ಳುವುದು ಮುಂತಾಗಿ. ಮುಖಂಡರಾದವರಿಗೆ ಹಿಂಬಾಲಕರಿಲ್ಲವೆಂಬ ಹತಾಶೆ, ತಮಗಿಂತ ಸ್ಥಿತಿವಂತರನ್ನು ನೋಡಿ ತಾನು ಅವರಂತೆ ಆಗಲಿಲ್ಲ ಎಂಬ ಕೊರಗು ಒಂದಲ್ಲ ಎರಡಲ್ಲ ನೂರಾರು ಸಮಸ್ಯೆಗಳು. ಇವುಗಳ ಸುಳಿಯಲ್ಲಿ ಬದುಕನ್ನು ಬಂಧಿಸಿ ಕೊಂಡವರಿದ್ದಾರೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇದೆ ಆದರೆ ತಮ್ಮ ಮೇಲೆ ತಮಗೆ ಭರವಸೆ ಇಲ್ಲ. ಆ ಭರವಸೆ ಬೇಕಾಗುತ್ತದೆ.
[9/24, 7:45 PM] ಅಮು ಭಾವಜೀವಿ ಮುಸ್ಟೂರು: 18 10 2018
ಶರಣರ ನಲ್ನುಡಿ
ಸರಕು ಸಾಮಗ್ರಿಗಳಲ್ಲಿ ಸುಖವನ್ನು ಕಾಣಬಯಸುವ ಇಂದಿನ ಮಾನವ ತುಮುಲಗಳಲ್ಲಿ ತೊಳಲಾಡುತ್ತಿದ್ದಾನೆ. ಕೊನೆಯಿರದ ಬಯಕೆಗಳ ಬೆನ್ನು ಹತ್ತಿ ಬದುಕಬೇಕೆನ್ನುವ ಇಂದಿನ ಮಾನವ ಗೊಂದಲದ ಮಡುವಾಗಿದ್ದಾನೆ. ಅವನಿಗೆ ಅವನ ಬಗ್ಗೆ ನಂಬಿಕೆ ಇಲ್ಲ. ಪರಿಸ್ಥಿತಿ ಹೀಗಿರುವಾಗ ಇತರರನ್ನು ಅರ್ಥಮಾಡಿಕೊಳ್ಳುವುದಿರಲಿ ತನ್ನ ಮೇಲೆ ತನಗೆ ನಂಬಿಕೆ ಇಲ್ಲ. ತನ್ನನ್ನು ತಾನು ಅರಿಯದವನು ಬದುಕಿನ ಸತ್ಯವನ್ನು ತಿಳಿಯಬೇಕೆಂದು ಬಯಸುವುದಾದರೂ ಹೇಗೆ. ಹಾಗಾಗಿ ಮಾನವನಿಂದು ಅಸ್ಪಷ್ಟತೆಯಲ್ಲಿ ಮುಳುಗಿಹೋಗಿದ್ದಾನೆ. ಅವನ ಆಲೋಚನೆಯಲ್ಲಿ, ನಿರ್ಧಾರಗಳಲ್ಲಿ ಅಸ್ಪಷ್ಟತೆ ಆವರಿಸಿಕೊಂಡಿದೆ. ಅವನು ನಿರ್ಧಾರಗಳಲ್ಲಿ ನಿಖರತೆ ಇಲ್ಲವಾಗಿದೆ. ನಿರ್ದಿಷ್ಟ ಗುರಿಯ ಕೊರತೆಯು ಎದುರಾಗಿದೆ. ಒಂದು ರೀತಿಯಲ್ಲಿ ಅಡಕತ್ತರಿಯಲ್ಲಿ ಸಿಲುಕಿಕೊಂಡಂತಹ ಸ್ಥಿತಿ ಅವನದು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಒಂದು ಕಡೆ ಸಂಪ್ರದಾಯದ ಸೆಳೆತ, ಇನ್ನೊಂದುಕಡೆ ವೈಚಾರಿಕತೆಯ ಮೊರೆತ, ಎರಡನ್ನು ಕಟ್ಟಿಕೊಳ್ಳುವಂತೆಯೂ ಇಲ್ಲ ಬಿಡುವಂತೆಯೂ ಇಲ್ಲ. ಇದಾವುದನ್ನು ಆಲೋಚಿಸದವನು ಭೌತಿಕ ವಸ್ತುಗಳಲ್ಲಿ ಸುಖವನ್ನು ಅರಸುತ್ತಾ ಮುನ್ನಡೆದಿದ್ದಾನೆ. ಅರಿವಿನ ಕೊರತೆ ಇರುವವರು ಒತ್ತಟ್ಟಿಗಿರಲಿ, ಪ್ರಜ್ಞಾವಂತರು, ವಿವೇಕವಂತರು, ವಿಚಾರವಂತರು ಎಂದು ಹಣೆಪಟ್ಟಿ ಹಚ್ಚಿಕೊಂಡವರೂ ಕೂಡ ಗೊಂದಲದ ಗೂಡಾಗಿದ್ದಾರೆ. ಜನರನ್ನು ಜಾಗೃತಿಯತ್ತ ಕೊಂಡಯ್ಯ ಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವವರು, ಅಸ್ಪಷ್ಟತೆಯ ಪರಿಧಿಗೆ ಸಿಕ್ಕು ನರಳುತ್ತಿದ್ದಾರೆ. ಇದು ದೊಡ್ಡ ದುರಂತ. ತಿಳಿ ಹೇಳುವವನೇ ತಿಳಿಗೊಳಕ್ಕೆ ಕಲ್ಲೆಸೆಯುವ ಕೆಲಸ ಮಾಡುತ್ತಿದ್ದಾನೆ ಎಂದರೆ ತಿಳುವಳಿಕೆ ಇಲ್ಲದವರ ಪಾಡೇನು. ಅಸ್ಪಷ್ಟತೆ ಮುತ್ತಿ ಕಂಡಾಗ ಸ್ಪಷ್ಟ ಮಾರ್ಗದರ್ಶನ ಮಾಡಲು ಅಸಾಧ್ಯ. ಸ್ಪಷ್ಟ ಮಾರ್ಗದರ್ಶನ ಸಾಧ್ಯವಾಗದಿದ್ದಾಗ ಸಮರ್ಥ ನಾಯಕತ್ವವನ್ನು ರೂಪಿಸಲು ಅಸಾಧ್ಯ. ಎಲ್ಲಾ ಕ್ಷೇತ್ರದಲ್ಲೂ ಸಮರ್ಥ ನಾಯಕತ್ವ, ಧರ್ಮಗುರು, ರಾಜಕಾರಣಿ ಸಾಹಿತಿ ವಿಜ್ಞಾನಿ ಹೀಗೆ ಜಗತ್ತಿಗೆ ಬೇಕಾಗಿರುವುದು ಸ್ಪಷ್ಟ ಮಾರ್ಗದರ್ಶನ. ಇದು ಸಾಧ್ಯವಾದರೆ ಮಾತ್ರ ಜಗತ್ತು ನೆಮ್ಮದಿಯಿಂದ ಇರಲು ಸಾಧ್ಯ. ಎಲ್ಲಿ ಸ್ಪಷ್ಟತೆ ಇರುತ್ತದೆಯೋ ಅಲ್ಲಿ ಸ್ಪಷ್ಟ ಗುರಿ , ಸ್ಪಷ್ಟ ಗಮನ ಸ್ಪಷ್ಟ ಉದ್ದೇಶ ಬದುಕಿನ ಪರಮಸುಖ ಯಾವುದೆಂಬುದು ಸ್ಪಷ್ಟವಾಗುತ್ತದೆ. ಆಗ ಮಾನವನ ದಾರಿಯೇ ಬದಲಾಗುತ್ತದೆ. ಅವನು ಸತ್ಯದತ್ತ, ಸರಳತೆಯತ್ತ, ಸಭ್ಯತೆಯತ್ತ, ಸೌಹಾರ್ದತೆಯತ್ತ, ಸಹಕಾರದತ್ತ ನಡೆಯಬಲ್ಲವನಾಗಿರುತ್ತಾನೆ. ಹೀಗಾಗಿ ಸ್ಪಷ್ಟತೆಯ ಕಡೆಗೆ ಸಮಾಜ ಚಲಿಸಬೇಕಾಗಿದೆ.
[9/24, 8:02 PM] ಅಮು ಭಾವಜೀವಿ ಮುಸ್ಟೂರು: 19 10 2018
ಶರಣರ ನಲ್ನುಡಿ
ಹೊರ ಜಗತ್ತಿಗೆ ಬೆಳಕನ್ನು ನೀಡಲು ಪ್ರಕೃತಿದತ್ತವಾದ ಸೂರ್ಯ-ಚಂದ್ರ ಹಾಗು ನಕ್ಷತ್ರಗಳಿವೆ. ಇವುಗಳು ಇಲ್ಲದ ಸಂದರ್ಭದಲ್ಲಿ ಬೆಳಕಿಗಾಗಿ ಮಾನವನು ಹಣತೆ, ಮೊಂಬತ್ತಿ, ವಿದ್ಯುತ್ ಬಲ್ಬು ಇತ್ಯಾದಿಗಳನ್ನು ಸೃಷ್ಟಿಸಿಕೊಂಡಿದ್ದಾನೆ. ಪ್ರಕೃತಿದತ್ತವಾದ ಮತ್ತು ಮಾನವ ನಿರ್ಮಿತವಾದ ಬೆಳಕಿನ ವ್ಯವಸ್ಥೆಯಿಂದ ಜಗತ್ತಿನ ಜೀವನ ಪರಿಪೂರ್ಣವಾಗುತ್ತದೆ ಎಂದು ಭಾವಿಸುವುದು ಸೂಕ್ತವಲ್ಲ. ಏಕೆಂದರೆ ನಮ್ಮ ಕಣ್ಣಿಗೆ ಕಾಣದ ಒಳಜಗತ್ತು ಒಂದಿದೆ. ಅದನ್ನು ಬೆಳಗಿಸಲು ಬೆಳಕು ಬೇಕು. ಆ ಬೆಳಕೇ ಚಿಂತನೆಗಳು. ಅಂತರಂಗದ ಅರಿವಿಗೆ ದಾರಿದೀಪವಾಗಬಲ್ಲ ಸಾಮರ್ಥ್ಯ ಚಿಂತನೆಗಳಿಗೆ ಇದೆ. ಸಮಯಸ್ಫೂರ್ತಿಯಿಂದಲೂ ಜೀವನದಲ್ಲಿ ಎದುರಾಗುವ ಅಂತಹ ವಿವಿಧ ಅನುಭವಗಳಿಂದಲೂ ವಿಚಾರಗಳು ತೂರಿಬರುತ್ತವೆ. ತೂರಿಬಂದ ಚಿಂತನೆಗಳು ಮಾನವನ ಅಂತರಂಗದ ವಿಕಾಸಕ್ಕೆ ಸೂಕ್ತವಾದ ಬೆಳಕಿನ ಕಿರಣಗಳಾಗುತ್ತವೆ.ಇಂತ ಚಿಂತನೆಗಳು ಇಲ್ಲದಿರುವಂತಹ ಸಂದರ್ಭದಲ್ಲಿ ಅವನ ಬದುಕು ತುಂಬಾ ಸಂಕೀರ್ಣವಾಗುತ್ತದೆ. ಮಾನವ ಸದಾ ಒಂದು ಕಡೆಯಿಂದ ಮತ್ತೊಂದು ಕಡೆಗೆ ನಡೆದು ಹೋಗುವಾಗ ಅವನ ಒಡಲಾಳದಿಂದ ವಿಚಾರ ವಾಹಿನಿ ಹರಿಯುತ್ತಾ ಹೋಗುತ್ತದೆ. ಹರಿದುಬಂದ ಗಟ್ಟಿ ಚಿಂತನೆಗಳು ಧರ್ಮ, ನ್ಯಾಯ, ಸತ್ಯ ಅಹಿಂಸೆ, ಹೀಗೆ ಯಾವುದೇ ವಿಚಾರಕ್ಕೆ ಸಂಬಂಧ ಪಟ್ಟಿದ್ದರೂ ಅವು ಒಂದೊಂದು ಸಂದೇಶವನ್ನು ನೀಡುತ್ತವೆ. ಈ ಸಂದೇಶಗಳು ಮಾನವ ಬದುಕಿಗೆ ಸಹಕಾರಿಯಾಗುತ್ತವೆ. ಮಾರ್ಗದರ್ಶನ ನೀಡುತ್ತವೆ. ಒಮ್ಮೊಮ್ಮೆ ಸ್ನೇಹಿತರು ನಮ್ಮನ್ನು ಅಗಲುವಂತಹ ಸಂದರ್ಭವಿದ್ದರೂ, ನಮ್ಮೊಳಗೆ ವಿಚಾರ ವಾಹಿನಿ ಹರಿಯುತ್ತಿದ್ದರೆ ಆ ಚಿಂತನೆಗಳೇ ನಮ್ಮ ಒಡನಾಡಿಗಳಾಗುವ ಸಾಧ್ಯತೆಗಳಿವೆ. ಒಬ್ಬರೇ ಇದ್ದರೆ ಅದು ಒಂಟಿತನ ಎನಿಸಿಕೊಳ್ಳುತ್ತದೆ. ನಾನು ಒಂಟಿ ಆಗಿದ್ದೇನೆ ಒಂಟಿತನ ನನ್ನನ್ನು ಕಾಡುತ್ತದೆ ಎಂದು ಭಾವಿಸಿ ಕೊಳ್ಳುವುದಕ್ಕಿಂತಲೂ ನನ್ನ ಜೊತೆಯಲ್ಲಿ ಸದಾಕಾಲ ವಿಚಾರಗಳು ಇರುತ್ತವೆ, ಅವನು ನನ್ನ ಬದುಕಿಗೆ ಪ್ರೇರಣೆ ನೀಡುತ್ತವೆ ಎಂಬ ಆಲೋಚನೆ ಮೂಡಿದಾಗ ಈ ಜಗತ್ತಿನಲ್ಲಿ ಯಾರೂ ಒಂಟಿಯಲ್ಲ. ಒಂಟಿತನದ ಬದುಕು ಅವರದ್ದಾಗುವುದಿಲ್ಲ. ವಿಚಾರಗಳು ಮತ್ತು ಚಿಂತನೆಗಳು ಯಾವುದೇ ವ್ಯಕ್ತಿಯನ್ನು ಒಂಟಿಯಾಗಿಸುವುದಿಲ್ಲ. ಚಿಂತನೆಗಳು ಮೂಡದ ವ್ಯಕ್ತಿಯು ಚಿಂತೆಯ ದಾಸನಾಗಿ ಬದುಕನ್ನು ಬರಡಾಗಿಸಿಕೊಳ್ಳುತ್ತಾನೆ. ವಿಚಾರಗಳು ಅಥವಾ ಚಿಂತನೆಗಳು ಸಲಹೆಗಾರರಾಗಿ, ಸಂಬಂಧಿಕರಾಗಿ, ಒಡನಾಡಿಗಳಾಗಿ ನಮ್ಮನ್ನು ಕೈಹಿಡಿದು ನಡೆಸುತ್ತವೆ. ಯಶಸ್ವಿ ಬದುಕಿನ ಗುಟ್ಟನ್ನು ಉಸುರುತ್ತವೆ. ಲವಲವಿಕೆಯಿಂದ ಕ್ರಿಯಾಶೀಲತೆಯಿಂದ ಅತ್ಯುತ್ಸಾಹದಿಂದ ಬದುಕನ್ನು ಗಟ್ಟಿಗೊಳಿಸುತ್ತವೆ.
[9/24, 8:23 PM] ಅಮು ಭಾವಜೀವಿ ಮುಸ್ಟೂರು: ವೇಷ್ಟಿ ಮತ್ತು ಸಮಷ್ಟಿ ಜೀವನದಲ್ಲಿ ಸಮಾಧಾನ ಪಟ್ಟುಕೊಳ್ಳಬಹುದಾದದ್ದು ಎಂದರೆ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ತರುವುದು. ಒಂದು ಉದಾಹರಣೆ ನಮ್ಮ ಶ್ರೀಮಠದಲ್ಲಿ ಪ್ರತಿ ತಿಂಗಳು 5ನೇ ತಾರೀಖಿನಂದು ಒಬ್ಬೊಬ್ಬ ಶರಣರ ಸ್ಮರಣೋತ್ಸವ ಅದರೊಟ್ಟಿಗೆ ಸರಳ ಸಾಮೂಹಿಕ ವಿವಾಹಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.5 ನೇ ತಾರೀಖಿನಂದು ಅಮಾವಾಸ್ಯೆ ಬಂದುಬಿಟ್ಟಿತ್ತು. ನಾವು ಏರ್ಪಡಿಸುವ ಮದುವೆ ಸಮಯಕ್ಕೆ ರಾಹುಕಾಲವೂ ಸೇರಿಕೊಂಡಿತು. ಕಾರ್ಯಕ್ರಮದಲ್ಲಿ ಯಾವ ಬದಲಾವಣೆಯನ್ನೂ ಮಾಡಲಿಲ್ಲ. ಜನರಿಗೆ ಇದೆಲ್ಲ ಗೊತ್ತಿದ್ದೂ ಯಾವ ಅಂಜಿಕೆಯಿಲ್ಲದೆ ಮದುವೆಗೆ ಸಿದ್ಧರಾದರು. ಆ ದಿನ 103 ಜೋಡಿಗಳ ಮದುವೆ ಇದು ಸಾಮಾನ್ಯ ಮಾತಲ್ಲ. ಒಬ್ಬಿಬ್ಬ ಪ್ರಜ್ಞಾವಂತರು, ಪಂಚಾಂಗ ಪ್ರಜ್ಞೆಯನ್ನು ಮೀರಿ ಮದುವೆಯಾದ ಪ್ರಸಂಗ. ಜನಸಾಮಾನ್ಯರು ಮತ್ತು ಮೂಢನಂಬಿಕೆಗಳಲ್ಲಿ ತೊಳಲಾಡುತ್ತಿರುವವರು ಬಸವಾದಿ ಶರಣರ ಧೋರಣೆಯ ವಚನ ಮಾಂಗಲ್ಯಕ್ಕೆ ಬದ್ಧರಾದದ್ದು ಆಶಾದಾಯಕ. ನಾನು ನಾಡಿನಾದ್ಯಂತ ಸುತ್ತಿದ್ದೇನೆ, ಜನಸಾಮಾನ್ಯರೊಡನೆ ಬೆರೆತಿದ್ದೇನೆ, ಅವರ ಸುಖ-ದುಃಖವನ್ನು ಹಂಚಿಕೊಂಡಿದ್ದೇನೆ ಇದು ಹೇಳಿಕೆಯ ಮಾತಲ್ಲ, ನಮ್ಮ ಜನಕ್ಕೆ ಜ್ಞಾನದ ಮತ್ತು ವೈಚಾರಿಕತೆಯ ಹಸಿವು ಇದೆ. ಅವರು ಬಡವರಿರಬಹುದು, ಅನಕ್ಷರಸ್ಥರಿರಬಹುದು ಆದರೆ ಅವರ ಅರಿವಿನ ದಾಹಕ್ಕೆ ಬಡತನವಿಲ್ಲ. ಹೇಳಿದ ವಿಚಾರಗಳನ್ನು ಸಂಗ್ರಹಿಸುತ್ತಾರೆ, ಸಾಧ್ಯವಾದ ಮಟ್ಟಿಗೆ ಸರಿದಾರಿಯಲ್ಲಿ ನಡೆಯುತ್ತೇವೆ ಎಂದು ಭಾವಿಸುತ್ತಾರೆ ಸದ್ಯಕ್ಕೆ ಇಷ್ಟು ಸ್ಪಂದನ ಸಾಕು. ಏಕೆಂದರೆ ಬದಲಾವಣೆ ಎಂಬುದು ಪವಾಡವಲ್ಲ. ಬದಲಾವಣೆ ಪವಾಡ ವಾಗಲೂಬಾರದು. ಜನರು ವಚನ ಕೊಟ್ಟಾಕ್ಷಣ ಬದಲಾವಣೆ ಆಗಿಯೇ ಬಿಟ್ಟಿತು ಎಂದು ಭ್ರಮಿಸಬಾರದು. ನಾವು ಮಾಡಬೇಕಾದದ್ದು ಇಷ್ಟೇ ಜನರನ್ನು ಕೈಹಿಡಿದು ಮುನ್ನಡೆಸ ಬೇಕಾದುದು. ಆ ಜವಾಬ್ದಾರಿ ಪ್ರಜ್ಞಾವಂತ ಮಠಾಧೀಶರು ಮತ್ತು ವಿಚಾರವಂತರ ಮೇಲೆ ಇದೆ. ಧರ್ಮಗುರುಗಳಾದವರು ತಿಳಿ ಹೇಳಿದಾಗ ಜನರು ಒಲ್ಲೆನೆನ್ನುವುದಿಲ್ಲ. ಅದನ್ನು ಅರ್ಥ ಮಾಡಿಕೊಂಡು ಧರ್ಮಗುರುಗಳಾದವರು ಜನರನ್ನು ಸರಿದಾರಿಗೆ ಹಚ್ಚುವ ಕಳಕಳಿಯನ್ನು ಹಾಗೂ ಉತ್ಸಾಹವನ್ನು ತೋರಬೇಕಾಗುತ್ತದೆ. ವಿಮರ್ಶೆ ಮಾಡುತ್ತಲೇ ಸಮಾಜದ ಓರೆ ಕೋರೆಗಳನ್ನು ತಿದ್ದುವ ತೀಡುವ ಪ್ರಯತ್ನ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಬಸವತತ್ವ ಮಹಾವಿದ್ಯಾಲಯದ ಸ್ಥಾಪನೆ. ತತ್ವದ ಆಧಾರದ ಮೇಲೆ ಸಾಧಕರನ್ನು ತರಬೇತಿಗೊಳಿಸುವ ಪ್ರಯತ್ನ ನೂರಾರು ಸಾಧಕರು ಇದರಿಂದ ಹೊರಬಂದಿದ್ದಾರೆ. ಜನಾಂಗದ ಸಂಘಟನೆಯನ್ನು ಮಾಡುತ್ತಿದ್ದಾರೆ. ತಮ್ಮ ಜನಾಂಗಕ್ಕೆ ಬೇಕಾಗುವಂತಹ ಅಕ್ಷರವನ್ನು ಸ್ವಾಭಿಮಾನವನ್ನು ತುಂಬುವ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದಾರೆ. ಒಂದು ಹಂತದಲ್ಲಿ ಧಾರ್ಮಿಕ ವಿಕೇಂದ್ರಿಕರಣ ಬಸವಣ್ಣನವರ ಕಾಲದಲ್ಲಿ ಜಾತಿಗಳ ಧ್ರುವೀಕರಣ ನಡೆಯಿತು 21ನೇ ಶತಮಾನದಲ್ಲಿ ಈ ರೀತಿಯಾಗಿರುವಂತಹ ಧಾರ್ಮಿಕ ವಿಕೇಂದ್ರಿಕರಣ ನಡೆಯುತ್ತಿರುವುದಕ್ಕೆ ಸಂತೋಷವೆನಿಸುತ್ತದೆ.
[9/24, 8:49 PM] ಅಮು ಭಾವಜೀವಿ ಮುಸ್ಟೂರು: 21 10 2018
ಶರಣರ ನಲ್ನುಡಿ
ಯಾವುದೇ ಧರ್ಮ ತನ್ನ ನೈಜ ಮತ್ತು ಸರಳ ಆಚರಣೆಗಳನ್ನು ಕಳೆದುಕೊಂಡಾಗ ಅದು ನೆಪ ಮಾತ್ರ ಧರ್ಮವಾಗಿ ಜಡತ್ವಕ್ಕೆ ಸರಿಯುತ್ತದೆ.ಅದರ ಸುತ್ತ ಮೂಢನಂಬಿಕೆಗಳು ಕಂದಾಚಾರಗಳು ವಿಜೃಂಭಿಸುತ್ತವೆ. ಅದು ಸಾಮಾನ್ಯರನ್ನು ವ್ಯವಸ್ಥಿತವಾಗಿ ತುಳಿಯುವ ಸಾಧನವಾಗುತ್ತದೆ. ಧರ್ಮದ ಮೂಲ ಆಶಯ ಮೂಲೆಗುಂಪಾಗುತ್ತದೆ. ಹೀಗಾಗಿ ಅರ್ಥವಿರದ ಆಚರಣೆ ವ್ಯರ್ಥವಾಗುತ್ತದೆ. ಶರಣರು ಹೇಳುವಂತೆ ಅರಿವಿಲ್ಲದವನಿಗೆ ಅರ್ಚನೆ ಸಲ್ಲದು. ಅರ್ಚನೆಗಾಗಿಯೇ ಅರಿವು ಅಲ್ಲ, ಅರ್ಚನೆ ಮತ್ತು ಅರಿವು ಎರಡೂ ಸೇರಿದಾಗ ಬದುಕು ಆನಂದಮಯ. ಜಗತ್ತಿನಲ್ಲಿ ಹಲವಾರು ಸ್ವತಂತ್ರ ಧರ್ಮಗಳಿವೆ. ಅವು ತಮ್ಮ ಅಸ್ತಿತ್ವವನ್ನು ಕಾಯ್ದುಕೊಂಡು ಹೋಗುತ್ತಿವೆ. ಅವುಗಳಲ್ಲಿ ಬಸವಾದಿ ಶರಣ ಪ್ರಣೀತವಾದ ಲಿಂಗಾಯತ ಧರ್ಮ. 12ನೇ ಶತಮಾನದಲ್ಲಿ ಬಸವಣ್ಣನವರು ಧರ್ಮದಲ್ಲಿನ ಅರ್ಥವಿಲ್ಲದ ಆಚರಣೆಗಳನ್ನು ವಿರೋಧಿಸಿ ನೈಜವಾದ, ಸರಳವಾದ ತತ್ವ ಸಿದ್ಧಾಂತವನ್ನು ಪ್ರತಿಪಾದಿಸಿದರು. ಬಸವಣ್ಣನವರು ಶೈವೋಪಾಸನೆಯಿಂದ ಪ್ರಭಾವಿತರಾಗಿ ಬಯಲರೂಪಿ ಶಿವತ್ವದ ಪರಿಕಲ್ಪನೆಯನ್ನು ಕೊಡುತ್ತಾರೆ. ಅದು ಮುಂದೆ ಧರ್ಮದ ಸ್ವರೂಪವನ್ನು ನಂತರದಲ್ಲಿ ಸ್ವತಂತ್ರ ಧರ್ಮದ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಪ್ರಗತಿಪರ ವಿಚಾರಗಳನ್ನು ಒಳಗೊಂಡಿರುವ ಈ ಧರ್ಮದ ಮುಖ್ಯ ಉದ್ದೇಶವೆಂದರೆ ಧರ್ಮ ದೇವರುಗಳ ಗುಡಿಗುಂಡಾರಗಳ ಹೆಸರಿನಲ್ಲಿ ನಡೆಯುತ್ತಿದ್ದ ಶೋಷಣೆಯನ್ನು ತಪ್ಪಿಸುವುದೇ ಆಗಿದೆ. ಲಿಂಗಾಯತ ಎಂದರೆ ಜಾತಿಯಲ್ಲ, ಅದು ಬದುಕುವ ವಿಧಾನ. ಅಂಗದ ಮೇಲೆ ಲಿಂಗವನ್ನು ಆಯತ ಮಾಡಿಕೊಂಡು ಆ ಲಿಂಗದ ಗುಣಗಳೊಂದಿಗೆ ಯಾವಾತ ಬದುಕುತ್ತಾನೋ ಅವನೇ ಲಿಂಗಾಯತ. ಇಂತಹವರೇ ಲಿಂಗವನ್ನು ಧರಿಸಬೇಕೆಂಬ ಕಟ್ಟುಪಾಡು ಇಲ್ಲ. ಯಾವುದೇ ದೇಶದವರಾದರೂ, ವರ್ಣದವರಾದರೂ, ಯಾವ ಭಾಷೆಯವರಾದರೂ ಇದನ್ನು ಧರಿಸಿಕೊಳ್ಳಬಹುದಾಗಿದೆ. ಇಷ್ಟಲಿಂಗವು ಜಾತಿಯ ಸಂಕೇತವಲ್ಲ. ಸಮಾಜದಲ್ಲಿ ಮನೆ ಮಾಡಿಕೊಂಡಿದ್ದ ತರತಮ ಭಾವಗಳನ್ನು ನಿವಾರಿಸಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಬಸವಾದಿ ಶರಣರ ಉದ್ದೇಶ ಮತ್ತೊಂದು ಜಾತಿಯನ್ನು ಸೃಷ್ಟಿಸುವುದು ಆಗಿರಲಿಲ್ಲ, ಬದಲಾಗಿ ಜಾತಿ, ವರ್ಗ, ವರ್ಣ, ವಯಸ್ಸು ಮತ್ತು ಲಿಂಗಭೇದಗಳನ್ನು ಮೀರಿದಂತಹ ಒಂದು ವ್ಯವಸ್ಥೆಯ ನಿರ್ಮಾಣ ಅವರದಾಗಿತ್ತು. ಈ ಆಶಯವೇ ಅಧರ್ಮದ ಮೂಲಧಾತು. ಶರಣರು ಮತ್ತು ಜಗತ್ತಿನ ಕೆಲವು ದಾರ್ಶನಿಕರು ಜಾತಿಯನ್ನು ಧರ್ಮವನ್ನಾಗಿಸಿದರೆ ಕೆಲವು ಮೂಲಭೂತವಾದಿಗಳು ಧರ್ಮವನ್ನು ಜಾತಿಯಾಗಿಸಿದರು. ಈ ವಿಪರ್ಯಾಸದಿಂದಾಗಿ ಧರ್ಮವು ಎಷ್ಟು ಬೆಳೆಯಬೇಕಾಗತ್ತೋ ಅಷ್ಟು ಬೆಳೆಯಲಾಗಲಿಲ್ಲ . ಕರ್ಮಠರ ಕೈಗೆ ಸಿಕ್ಕು ಧರ್ಮದಲ್ಲಿನ ಜಾಗತಿಕ ಸತ್ಯ ಪ್ರಗತಿಪರ ಹಾಗೂ ಸಮಾಜವಾದಿ ಚಿಂತನೆಗಳು ಮಸುಕಾದವು. ಶೋಷಣೆಯ ವಿರುದ್ಧವಾಗಿ ಹುಟ್ಟಿದಂತಹ ಒಂದು ಧರ್ಮ ಮತ್ತೆ ಶೋಷಣೆಯ ಕಡೆಗೆ ಮುಖ ಮಾಡಿದ್ದು ಒಂದು ವಿಪರ್ಯಾಸ. ಇದರಿಂದಾಗಿ ಲಿಂಗಾಯತ ಧರ್ಮವು ಯಾರೋ ಕೆಲವರ ಧರ್ಮ ಎಂದು, ಅದೊಂದು ಜಾತಿ ಎಂಬ ಸಂಕುಚಿತ ಭಾವನೆ. ಅಂತ ಸಂಕುಚಿತತೆಯನ್ನು ಕಿತ್ತೊಗೆದರೆ ಧರ್ಮದ ಸಾರ್ವತ್ರೀಕರಣ ಸಾಧ್ಯ. ಯಾವುದೇ ಧರ್ಮ ಜನಪ್ರಿಯ ಧರ್ಮ ಅನಿಸಿಕೊಳ್ಳಬೇಕಾದರೆ ಅದು ತುಂಬಾ ಸರಳವಾದ ಆಚರಣೆಗಳನ್ನು ಒಳಗೊಂಡಿರಬೇಕಾಗುತ್ತದೆ. ಅಂತ ಆಚರಣೆಗಳು ಸತ್ಯಕ್ಕೆ ಸಮೀಪವಾಗಿರಬೇಕು. ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿರಬೇಕು. ಸರ್ವರೂ ಆಚರಿಸುವಂತಿರಬೇಕು. ಆಗ ಆ ಧರ್ಮ ಜಾಗತಿಕ ಧರ್ಮ. ಒಬ್ಬ ವ್ಯಕ್ತಿ ಇಚ್ಚಿಸಿದರೆ ತಾನೇ ಆ ಧರ್ಮದ ಆಚರಣೆಗಳನ್ನು ನಿರ್ವಹಿಸುವಂತೆ ಇರಬೇಕು. ಈ ಎಲ್ಲಾ ಅಂಶಗಳನ್ನು ಒಳಗೊಂಡ ವಿಚಾರ ಪ್ರಧಾನವಾದ ಧರ್ಮವನ್ನು ಬಸವಣ್ಣನವರು ನೀಡಿದರು.
[9/24, 9:11 PM] ಅಮು ಭಾವಜೀವಿ ಮುಸ್ಟೂರು: 22 10 2018
ಶರಣರ ನಲ್ನುಡಿ
ಈ ಬ್ರಹ್ಮಾಂಡದಲ್ಲಿ ಜನಿಸಿದ ಪ್ರತಿಯೊಂದು ಜೀವಿಗೂ ತನ್ನದೇ ಆದ ಜೀವನ ಇದೆ. ಆದರೆ ಒಂದು ಜೀವಿಯಂತೆ ಮತ್ತೊಂದು ಜೀವಿಯ ಜೀವನ ಇರುವುದಿಲ್ಲ. ಒಂದಕ್ಕಿಂತ ಒಂದು ವಿಭಿನ್ನ. ಅದರಂತೆ ಮಾನವ ಜೀವಿಯ ಬದುಕು. ಜೀವನ ಒಂದೇ ಆದರೂ ಜೀವನಶೈಲಿ ವಿಭಿನ್ನವಾದದ್ದು. ಒಬ್ಬರ ಬದುಕಿನಲ್ಲಿ ಒಂದೊಂದರ ಮಹತ್ವ, ನಾವು ಯಾವುದಕ್ಕೆ ಮಹತ್ವ ಕೊಡುತ್ತೇವೆ ಅನ್ನುವುದರ ಮೇಲೆ ಜೀವನಾನುಭವಗಳು ಉಂಟಾಗುತ್ತವೆ. ಕೆಲವರ ದೃಷ್ಟಿಯಲ್ಲಿ ಬದುಕು ಅಮಲು, ಕೆಲವರ ದೃಷ್ಟಿಯಲ್ಲಿ ಮಜಲು, ಕೆಲವರ ದೃಷ್ಟಿಯಲ್ಲಿ ಅದು ಬುಗುಲು, ಇನ್ನು ಕೆಲವರಿಗಂತೂ ಅದು ಎಲ್ಲಿಲ್ಲದ ದಿಗಿಲು ಆದರೆ ನನ್ನಂತಹವರಿಗೆ ಅದು ಸವಾಲು ಸವಾಲು ಸವಾಲು. ಹಣ ಅಧಿಕಾರ ಅಂತಸ್ತುಗಳು ಜೀವನವನ್ನು ಅರಳಿಸುತ್ತದೆ ಎಂಬ ಭ್ರಮೆ ನನಗಿಲ್ಲ. ಪ್ರಗತಿಗಾಗಿ ಒಂದಷ್ಟು ಭೌತಿಕ ಬೆಳವಣಿಗೆ ಬೇಕು ನಿಜ ಆದರೆ ಭೌತಿಕ ದಾಸ್ಯಕ್ಕೆ ನನ್ನನ್ನು ಬಂಧಿಸಿ ಕೊಳ್ಳಬೇಕೆಂಬ ಇಚ್ಛೆ ನನಗಿಲ್ಲ. ಬದುಕಿಗೆ ಅನೇಕರು ಬಂಡವಾಳವನ್ನು ಬಯಸುತ್ತಾರೆ. ನನ್ನದು ಶೂನ್ಯ ಬಂಡವಾಳ ಶೂನ್ಯದಿಂದ ಎದ್ದು ಬಂದವ. ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ನಾನು ಬಡತನದಿಂದ, ಅಜ್ಞಾನದಿಂದ ದರಿದ್ರ ತನದಿಂದ ಮತ್ತು ದಡ್ಡತನದಿಂದ ಎದ್ದು ಬಂದವನು. ಬಹಳಷ್ಟು ವ್ಯಕ್ತಿತ್ವಗಳು ಬುದ್ಧಿವಂತಿಕೆಯಿಂದ ಶ್ರೀಮಂತಿಕೆಯಿಂದ ಎದ್ದು ಬರುತ್ತವೆ ಎಂದು ಕೇಳಿದ್ದೀರಿ. ಕೆಲವರಾದರೂ ನಾನು ಹೇಳಿದಂತೆ ಅಜ್ಞಾನದಿಂದ ಎದ್ದುಬಂದು ಅಚ್ಚರಿ ಮೂಡಿಸುತ್ತಾರೆ. ಹಾಗಾದರೆ ನಾನು ಶೂನ್ಯದಿಂದ ಎದ್ದು ಬಂದಿರುವುದರ ರಹಸ್ಯವೇನು ಎಂಬ ಪ್ರಶ್ನೆ . ಸವಾಲಿನ ಹಾದಿಯಲ್ಲಿ ಕಲ್ಲುಮುಳ್ಳುಗಳು ನಿಂದೆ ಮತ್ತು ಅವಮಾನ, ಅವು ನನಗೆ ಒಂದಷ್ಟು ಗಟ್ಟಿತನವನ್ನು ಕಟ್ಟಿಕೊಟ್ಟಿವೆ. ಬಂದೆರಗುವ ಸಮಸ್ಯೆಗಳನ್ನು ಎದುರಿಸುವ ಧೈರ್ಯವನ್ನು ನೀಡಿವೆ . ಸಂಪ್ರದಾಯಬದ್ಧವಾದ ಬದುಕು ಆಗಿದ್ದಿದ್ದರೆ ಸಲೀಸಾಗಿ ಸಾಗಬಹುದಿತ್ತು. ಇದಕ್ಕೆ ವಿರುದ್ಧವಾದ ದಾರಿ. ಕತ್ತಲೆಯನ್ನು ಕಪ್ಪುಬಣ್ಣವನ್ನು ಕಷ್ಟವನ್ನು ಯಾರೂ ಇಷ್ಟಪಡುವುದಿಲ್ಲ. ನಾನೊಬ್ಬ ಸಹಜವಾದಿ, ಆಶಾವಾದಿ, ಸಮಾಜವಾದಿ, ಸಮತಾವಾದಿ. ಎರಡು ಇರುಳುಗಳ ನಡುವೆ ಒಂದು ಹಗಲು ಉಂಟಾಗುತ್ತದೆ ಎಂಬ ಸತ್ಯ ನನಗೆ ಅರ್ಥವಾಗಿದೆ. ಇದನ್ನು ಅರ್ಥಮಾಡಿಕೊಳ್ಳದ ವರು ಹಗಲನ್ನು ಮಾತ್ರ ಬಯಸುತ್ತಾರೆ. ಇರುಳು ಇಲ್ಲದೆಯೇ ಹಗಲು ಆಗಲು ಸಾಧ್ಯವೇ? ಅದರಂತೆ ಕೆಲವರು ಸುಖವನ್ನು ಮಾತ್ರ ಇಚ್ಛಿಸುತ್ತಾರೆ. ಸುಖದೊಂದಿಗೆ ದುಃಖ ಇರುತ್ತದೆ ಎಂಬುದನ್ನು ಮರೆತೇ ಬಿಡುತ್ತಾರೆ. ಸುಖ ಕಲಿಸಿದ ಪಾಠಕ್ಕಿಂತ ದುಃಖ ಅಥವಾ ಕಷ್ಟವು ಕಲಿಸಿದ ಪಾಠದಿಂದ ಜೀವನವು ವಿಸ್ತೃತ ರೂಪವನ್ನು ಪಡೆದುಕೊಳ್ಳುತ್ತಾ ಹೋಗುತ್ತದೆ. ನನ್ನ ದೃಷ್ಟಿಯಲ್ಲಿ ಜೀವನವು ದೊಡ್ಡದು ಅನ್ನುವುದಕ್ಕಿಂತ ಅದು ನೀಡುವ ಅನುಭವ ದೊಡ್ಡದು. ಜೀವನಾನುಭವಗಳು ಉಂಟಾಗುತ್ತಾ ಹೋದಂತೆ ಪ್ರಬುದ್ಧತೆ ಪ್ರಾಪ್ತವಾಗುತ್ತದೆ. ಬದುಕಿನಲ್ಲಿ ಬದ್ಧತೆ ಮತ್ತು ಪ್ರಬುದ್ಧತೆ ಬಹಳ ಮುಖ್ಯ. ಆರಂಭದಲ್ಲಿ ಬದುಕಿಗಾಗಿ ಬದುಕು ಎಂಬ ವಿಚಾರವಿತ್ತು, ಆದರೆ ಬರುಬರುತ್ತಾ ಬದ್ಧತೆಗಾಗಿ ಬದುಕು, ಪ್ರಬುದ್ಧತೆಗಾಗಿ ಬದುಕು, ಅನುಭವಕ್ಕಾಗಿ ಬದುಕು, ಹೋರಾಟಕ್ಕಾಗಿ ಬದುಕು, ಸಂಕಷ್ಟಗಳ ನಿವಾರಣೆಗಾಗಿ ಬದುಕು, ಪರಿವರ್ತನೆಗಾಗಿ ಬದುಕು, ಪ್ರಯೋಗಕ್ಕಾಗಿ ಬದುಕು ಎಂಬುದು ನನಗೆ ಅರ್ಥವಾಯಿತು. ನನ್ನ ಇಡೀ ಬದುಕಿನಲ್ಲಿ ಪರಿವರ್ತನೆ ಆಗಬೇಕು ಮತ್ತು ಪರಿವರ್ತನೆ ತರಬೇಕು ಎಂಬ ಹಂಬಲ ಎದ್ದುಕಾಣುತ್ತದೆ. ಆ ದೃಷ್ಟಿಯಲ್ಲಿ ಬದುಕೊಂದು ಪ್ರಯೋಗಶಾಲೆ. ಹೊಸ ಹೊಸ ವಿಚಾರಗಳನ್ನು ಸಮಾಜದಲ್ಲಿ ಪ್ರಯೋಗಿಸುತ್ತಾ ಹೋದಂತೆ ಪ್ರತಿಭಟನೆ, ಪ್ರತಿರೋಧ ಎದುರಾದವು. ಆ ಪ್ರತಿಭಟನೆ ಪ್ರತಿರೋಧಗಳು ನನ್ನಲ್ಲಿ ಒಂದು ಗಟ್ಟಿ ವ್ಯಕ್ತಿತ್ವವನ್ನು ನಿರ್ಮಾಣ ಮಾಡಲು ಕಾರಣವಾಗಿವೆ.