Sunday, October 9, 2022

ಕವಿತೆ

ಒಂದೊಂದೇ ಹನಿಗಾಗಿ ಕಾದುಕುಳಿತ
ಬಯಲ ಬವಣೆಯ ಬದುಕು ನನ್ನದು
ಮೋಡ ಕಟ್ಟಿದರು ಮಳೆ ಸುರಿಯಲಾರದು
ಬಾಯಾರಿದ ಒಡಲು ಬಿರುಕು ಬಿಟ್ಟಿಹುದು

ಅದೇಕೋ ಕಾಣೆ ಬಯಲೆಂದರೆ
ಮಳೆಗೇಕೋ ಅಷ್ಟಕ್ಕಷ್ಟೇ
ಬಂದದ್ದಕ್ಕಷ್ಟೇ ತೃಪ್ತಿಗೊಳ್ಳದೆ ವಿಧಿಯಿಲ್ಲ
ಬಿರುಕು ಮುಚ್ಚಲು ಅದು ಸಾಕಾಗೋಲ್ಲ

ಬತ್ತಿದ ಕೆರೆ ಕಟ್ಟೆಗಳ ಅಸ್ತಿತ್ವವೇ
ಇಲ್ಲದಂತೆ ಮಾಯವಾಗಿದೆ
ಅಂತರ್ಜಲವೆಂಬ ಜೀವಜಲ
ಸಿಕ್ಕುವುದು ಕೂಡ ದುರ್ಲಭವಾಗಿದೆ

ಮನುಜನ ಅಟ್ಟಹಾಸದ ಪರಮಾವಧಿಗೆ
ಶಿಕ್ಷೆ ಮಾತ್ರವೇ ಏಕೆ ನನಗೆ
ಎಲ್ಲ ಜೀವಗಳ ಸ್ವತ್ತು ನಾನೆಂಬುದ 
ಮರೆತ ಮಾನವ ಹಾಳಾಗೈದ ಆಸೆಗೆ

ಬಿಕ್ಕಳಿಕೆಗೂ ಸಾಕಾಗದು ಈ ತುಂತುರು
ಬಾಯಾರಿಕೆ ಕಟ್ಟುತ್ತಿದೆ ಉಸಿರು
ಬಸಿರು ಬಂಜೆಯಾಗುತ್ತ ಸಾಗಿದರೆ
ಬದುಕಿನಸ್ತಿತ್ವಕೆ  ಕುತ್ತು ತಂದಿದೆ

0253ಪಿಎಂ09102022
*ಅಮುಭಾವಜೀವಿ ಮುಸ್ಟೂರು*

No comments:

Post a Comment