Friday, October 18, 2024

ಕವನ

ಚಿತ್ತ ಮಳೆಯೇ 
__RECORD__
ಅದೇಕೆ 
ಚಿತ್ತ ಸ್ವಾಸ್ಥ್ಯ ಕಳೆದುಕೊಂಡಿರುವೆ 
ಊರುಕೇರಿ ನಾಡು ಹೊಲಗದ್ದೆ 
ಎಲ್ಲೆಲ್ಲೂ ನೀನೇ ತುಂಬಿ ಹೋಗಿರುವೆ 

ಬೇಕು ಮಳೆ ಭೂಮಿಗೆ 
ಆದರೆ ಕೊಚ್ಚಿಕೊಂಡು ಹೋಗುವುದೇತಕೆ 
ಜನಜಾನುವಾರು ರೈತರಿಗೆ 
ಬದುಕಿಗೆ ಸಂಕಷ್ಟ ತಂದಿರುವೇತಕೆ

ಎಲ್ಲೆಲ್ಲೂ ನೀರು ನೀರು ನೀರು 
ನಿನ್ನನ್ನು ತಡೆಯುವವರಿಲ್ಲ ಯಾರು 
ರಸ್ತೆಗಳೆಲ್ಲಾ ಹೊಳೆಯಾಗಿವೆ 
ಸಂಚಾರಕ್ಕೆ ಅಡಚಣೆ ಉಂಟಾಗಿದೆ 
ಏಕೆ ಹೀಗೆ ಉಗ್ರ ರೂಪ ತಾಳಿರುವೆ 

ಮನೆ ಮಠಗಳೆಲ್ಲ ನೀರಲ್ಲಿ ಮುಳುಗಿ 
ಬೆಳೆದ ಪಸಲೆಲ್ಲ ಕೊಚ್ಚಿ ಹೋಗಿ 
ಹಿಡಿ ಶಾಪ ಹಾಕುತ್ತಿದೆ ನಿನಗೆ 
ಕೊಂಚ ತಗ್ಗಿಸು ನಿನ್ನ ಆರ್ಭಟ 

ಈಗ ನೀ ಬಂದರಿಲ್ಲ ಪ್ರಯೋಜನ
ಎಲ್ಲೆಲ್ಲೂ ಕೇಳಿಸುತ್ತಿದೆ ರೋಧನ 
ಭೋರ್ಗರೆವ ಪ್ರವಾಹಕ್ಕೆ ಸಿಕ್ಕಿ ಜೀವನ 
ತತ್ತರಿಸಿ ಹೋಗಿದೆ ಕಡಿಮೆ ಮಾಡಿಕೋ ಕೋಪಾನ 
೦೨೦೪ಪಿಎಂ೧೬೧೦೨೦೨೪
ಅಪ್ಪಾಜಿ ಎ ಮುಸ್ಟೂರು 

ಶ್ರೀಮಂತ ಸಾಮ್ರಾಜ್ಯದ ಕಥೆ ಕೇಳಿಲ್ಲವೇ
ಹಾಳು ಹಂಪೆಯ ಗೋಳು ಕೇಳುವವರಿಲ್ಲವೇ 

ರೂಪವೇ ತಿಳಿಯದಷ್ಟು ಕುರೂಪವಾದ
ಕಾದು ಕಾದು ಕಲ್ಲಾದ ವ್ಯಥೆಯ 
ಮುತ್ತು ರತ್ನಗಳ ಅಲೆದು ಮಾರಿದ 
ಹೆಮ್ಮೆಯ ಸಾಮ್ರಾಜ್ಯ ಹಂಪೆಯದು 

ವಿಜಯನಗರ ಸಾಮ್ರಾಜ್ಯದ ಕುಲತಿಲಕ 
ತುಳುವ ವಂಶದ ವೀರ ನಾಯಕ 
ಮೂರು ರಾಯರ ಗಂಡ ಈ ಆಂಧ್ರಭೋಜ
ಕನ್ನಡ ರಾಜ್ಯರಮಾರಮಣ ಕೃಷ್ಣದೇವರಾಯ 

ಕಲೆ ಸಾಹಿತ್ಯ ಸಂಸ್ಕೃತಿಗಳ ಪೋಷಕ 
ಹಂಪೆವಿರುಪಾಕ್ಷನ ಆರಾಧಕ 
ತಿಮ್ಮರಸರ ಪಟ್ಟ ಶಿಷ್ಯ 
ಅಷ್ಟ ದಿಗ್ಗಜರ ಪಟ್ಟದರಸ 

ಅಮುಕ್ತ ಮಾಲ್ಯದ ಕೃತಿಯ ಕರ್ತೃ 
ವಿಜಯನಗರ ಸಾಮ್ರಾಜ್ಯ ಚಕ್ರವರ್ತಿ
ಶಿಲೆಗಳು ಸಂಗೀತ ನುಡಿದ ತಾಣ 
ಪ್ರತಿಕಲ್ಲು ತೋರಿದೆ ಸಮೃದ್ಧಿ ದರ್ಪಣ 

ಕಾವೇರಿಯಿಂದ ಗೋದಾವರಿಯವರೆಗೆ 
ವಿಜಯನಗರ ಸಾಮ್ರಾಜ್ಯದ ವಿಸ್ತಾರ 
ಬಹುಮನಿ ಸುಲ್ತಾನರ ಹುಟ್ಟಡಗಿಸಿದ 
ಕನ್ನಡಾಂಬೆಯ ಹೆಮ್ಮೆಯ ಕುವರ 

೦೫೧೦ಪಿಎಂ೧೭೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

ಬಯಲು ಸೀಮೆಯ 
ಒಡಲ ತುಂಬಿದರು 
ತುಂಗಭದ್ರೆಯರು
ಬರದ ನಾಡಿನ ಬರಿದಾದ ಕೆರೆಗಳ 
ಒಡಲು ತುಂಬಿ ಹರಿಸಿ
ಹಸಿರ ಚಿಲುಮೆ ಹೊಮ್ಮಿಸಿದರು 

ದಶಕಗಳ ಕನಸು ನನಸಾಗಿ 
ಬತ್ತಿದ ಕೆರೆಗಳ ಬಾಯಾರಿಕೆ ನೀಗಿಸಿ 
ತುಂಬಿ ತುಳುಕಿದರೂ ಖುಷಿಯಲಿ 
ಬರಿ ಬರಗಾಲಗಳನ್ನೇ ಕಂಡುಂಡ 
ಚರಿತ್ರೆಯ ಬದಲಾಯಿಸಿದರು 
ಮಲೆನಾಡಿನಿಂದ ಹರಿದು ಬಂದ ಸೋದರಿಯರು 

ಅಂತರ್ಜಲಕ್ಕೆ ಅಂತ ಸತ್ವ ತಂದು 
ಬಾಯಾರಿದ ಭೂಮಿಗೆ ಬಾಗಿನ ನೀಡಿ 
ಜನರಲಿ ಮಂದಹಾಸ ತಂದರು 
ಬೀಗುತಿದೆ ತುಂಬಿ ಕೆರೆ ಕಟ್ಟೆಗಳು 
ಬಲಗೊಂಡಿವೆ ರೈತನ ರಟ್ಟೆಗಳು 
ಹಸಿವ ನೀಡಲು ಕಸುವು ತುಂಬಿದೆ 

ಕಿತ್ತೊಗೆಯಲಿ ಇನ್ನು 
ಬರಪೀಡಿತ ಹಣೆಪಟ್ಟಿ 
ಸಮೃದ್ಧಗೊಳ್ಳಲಿ ಈ ಬಯಲು ಸೀಮೆ 
ನಾಯಕರ ದೂರ ದೃಷ್ಟಿ 
ಸಾಧು ಸಂತರ ಸಮಗ್ರ ದೃಷ್ಟಿ 
ಬರದ ನಾಡಲ್ಲುಕ್ಕಿದೆ ಬಂಗಾರದ ಚಿಲುಮೆ 

೧೨೫೯ಪಿಎಂ೧೮೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

ಈ ಬಾಳ ನೆಲದಲ್ಲಿ 
ನೀ ತಂದೆ ಪ್ರೀತಿ ಸೋನೆ
ಎಲ್ಲೆಲ್ಲೂ ಖುಷಿ ಆರಾಧನೆ 
ಒಂಟಿಯಾನದ ಜೊತೆಯಾಗಿ 
ಒಲವ ನಂಟಲಿ ಒಂದಾಗಿ 
ಸಾಗುವ ಹಾದಿಯಲ್ಲೀಗ ವಿಜೃಂಭಣೆ 

ಸತತ ಸೋಲುಗಳಲ್ಲಿ ಸಿಕ್ಕಿಕೊಂಡು 
ಭರವಸೆಯನಿಲ್ಲ ಕಳೆದುಕೊಂಡು 
ಸತ್ವಹೀನ ಎಂದುಕೊಂಡ ಬಾಳಲಿ
ನೂರು ನೋವುಗಳ ಎಲ್ಲೆ ಮೀರಿ 
ಎಲ್ಲ ನಲಿವುಗಳ ಜೊತೆ ಸೇರಿ 
ನಲ್ಲೆ ನೀ ಭಾರಿಸಿದೆ ಜಯಭೇರಿ 

ಬತ್ತಿದ ನಾಳೆಗಳಿಗೆ ಜೀವ ತುಂಬಿ 
ಸೊರಗಿದ ಇಂದಿಗೆ ಚೈತನ್ಯ ತಂದು 
ಈಗ ಸಾಗಲು ಶಕ್ತಿಯಾದೆ 
ನೀ ತೋರಿದ ಈ ಕಾಳಜಿಗೆ 
ನಾ ಬೆಳೆದೆ ಆಕಾಶದೆತ್ತರಕ್ಕೆ 
ಅಳಿಯದ ಆತ್ಮವಿಶ್ವಾಸ ನೀನಾದೆ 

ಕಳೆಯಿತು ಇನ್ನು ಬೇಸಿಗೆ
ಮುಂದೆ ಇನ್ನೆಲ್ಲ ವರ್ಷದ ಒಸಗೆ
ಮಾಗಿಯ ಕನಸು ನನಸಾಯಿತು 
ಹಸಿರ ಸಂಭ್ರಮದಲ್ಲಿ ಮೀಯೋಣ
ಹೊಸ ಇತಿಹಾಸ ಸೃಷ್ಟಿಸೋಣ 
 ಸಂತೃಪ್ತ ದಿನ ಅನುಭವಿಸೋಣ

೦೧೩೦ಪಿಎಂ೧೮೧೦೨೦೨೪
*ಅಪ್ಪಾಜಿ ಎ ಮುಸ್ಟೂರು* 

__END_OF_PART__IMG_20241018_13391855_gallery.jpg__END_OF_PART__
ಬಾಳಸಂಧ್ಯೆಯಲಿ ಒಂದು 
ಬದುಕಿಗೆ ಆಧಾರದ ಗೂಡು 
ಓದುವ ಭರವಸೆಯೊಂದಿಗೆ 
ಸಾಗಿದೆ ಜೀವನ ಪಾಡು 

ಸಲಹೆಂದು ಬೇಡಬೇಕು ದೇವರ ಹತ್ರ 
ಆದರೆ ವ್ಯಾಪಾರದ ಸರಕು ದೇವರ ಚಿತ್ರ 
ಬದುಕಿದು ಅದೆಷ್ಟೊಂದು ವಿಚಿತ್ರ 
ದುಡಿದು ತಿನ್ನುವ ಸೂತ್ರ 

ಬಯಕೆಗಳ ದಿನಸಿಗಳ ಜೋಡಿಸಿ 
ಬಂದ ಬಂದವರಿಗದನು ವಿತರಿಸಿ 
ಸಿಕ್ಕ ಪುಡಿಗಾಸಲಿ ಬದುಕು ಕಟ್ಟಿಕೊಂಡು 
ವೃದ್ಧಾಪ್ಯದಲ್ಲೂ ಸ್ವಾಭಿಮಾನದ ಸಾಹಸಿ 

ಹಣ್ಣು ಕಾಯಿ ಧೂಪದ ಕಡ್ಡಿ 
ಮಾರುತಿಹ ಸಾಗಿಸಲು ಜೀವನ ಬಂಡಿ 
ದಿನದ ವಿದ್ಯಮಾನದ ಅರಿವು 
ದಿನಪತ್ರಿಕೆಯಂತಲ್ಲವೇ ನಾವು ನೀವು 

ಇಂದು ನಮ್ಮ ಕೈಯಲ್ಲಿ ಜ್ಞಾನದ ಪಾತ್ರ 
ನಾಳೆ ಏನೇನೋ ರೂಪ ಇನ್ನೊಬ್ಬರ ಹತ್ರ 
ನಿಲ್ಲದೆ ಓಡುತಿದೆ ಕಾಲಚಕ್ರ 
ಅಲ್ಲಿ ಗೆಲ್ಲಲು ತಿರುಗಬೇಕು ಜೀವನ ಚಕ್ರ 

ಮುಪ್ಪು ವಯಸ್ಸಿನ ಸೂಚಕ 
ಜೀವನದ ತಿರುಗುಗಳು ಬಲು ರೋಚಕ 
ದುಡಿಮೆಯಿಂದ ಬದಲಾಗುವುದು ಜಾತಕ 
ಸಾಯೋ ತನಕ ಸಂಗಾತಿಯಾಗಿರಲಿ ಕಾಯಕ 
೦೧೫೪ಪಿಎಂ೧೮೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

ತಂಗಾಳಿ ಬೀಸುತ್ತಿದೆ 
ಮುಂಗುರುಳು ಹಾರುತಿದೆ 
ಈ ಮೌನದ ನಡಿಗೆ ಭಾರವಾಗಿದೆ
ಸಾಗರದ ತೀರದಲ್ಲಿ 
ಬಯಕೆಗಳು ತೀರದಲ್ಲಿ 
ಮರಳ ಮೇಲೆ ಬರೆ ಗೆದ ಹೆಸರು ಮಾಯವಾಗಿದೆ 

ಪ್ರೀತಿ ತುಂಬಿದ ಅಲೆಗಳು 
ಮತ್ತೆ ಮತ್ತೆ ನೆನಪಾಗಿ ಕಾಡಿರಲು 
ಅದೇಕೆ ನೀ ಮೌನದಿ ಕಳೆದು ಹೋದೆ 
ಭಾವವಿರದ ಹಾಡಿನಂತೆ 
ಬಾಡಿಹೋದ ಹೂವಿನಂತೆ 
ನಿನ್ನ ಮೌನ ನನ್ನ ಅದೇಕೋ ಕಾಡಿದೆ 

ಅಂದು ಕಳೆದ ದಿನಗಳೆಲ್ಲ 
ಇಂದು ನೆನಪಾಗಿ ಉಳಿದವಲ್ಲ 
ಆ ನೆನಪಲ್ಲಿ ನೀನು ಕೂಡ ಸೇರಿರುವೆ 
ಎಂದೋ ಬರೆದ ಹಾಡಿಗೆ 
ನೀನಿಂದು ಸಿಕ್ಕ ಈ ಗಳಿಗೆ 
ನನಗೆ ಕಾಕತಾಳಿಯವೇ 

ಶಾಂತ ಸಾಗರದಂತೆ ನಿನ್ನ ಮೌನ 
ಕೊಂಚ ಕೊಂಚ ಕಾಡಿದೆ ನನ್ನ 
ಹಂಚು ಮನದ ನೋವನ್ನೆಲ್ಲ 
ಪ್ರೀತಿಯ ಜೀವವು ನೀನು 
ಈ ಸಂಕೋಚವೇಕಿನ್ನು
ನನ್ನೊಳಗೆ ಸೇರಿಕೋ ಉಪ್ಪಿನಂತೆ 

1113ಪಿಎಂ18102024
*ಅಪ್ಪಾಜಿ ಎ ಮುಸ್ಟೂರು*

Monday, October 14, 2024

ಕವನ

ಪ್ರೀತಿಯ ಬಾಂಧವ್ಯ 
ಈ ನಮ್ಮ ಸಾಂಗತ್ಯ 
ಯೌವನದ ರಮ್ಯತೆಯು
ನಿಸರ್ಗದ ಮಡಿಲಲ್ಲಿ 
ಕುಳಿತ ಈ ಜಾಗವಿದು 
ಸ್ವರ್ಗ ಸಮಾನ 

ಅಂತರಂಗ ತೆರೆದು 
ನಮ್ಮನು ಇಲ್ಲಿ ಕರೆತಂದು 
ಬಂಧಿಸಿದ ಅನುಬಂಧ ಪ್ರೀತಿ 
ಸಾಮಪ್ಯವೇ ಹಿತವಾಗಿದೆ
ಪಿಸುಮಾತು ಜೇನಾಗಿದೆ
ಹೃದಯಗಳು ಒಂದಾದವಿಲ್ಲಿ

ಗಿರಿಕಣಿವೆಗಳು ಹಸಿರಾಗಿ 
ಬಾನು ಭೂಮಿಗಳು ಒಂದಾಗಿ 
ಹರಸಿದೆ ನಮ್ಮನು 
ತರುಲತೆಗಳ ಸಂಬಂಧದಂತೆ
ನಾವಿಬ್ಬರೂ ಮಿಂದು ಒಂದಾಗಲು
ಪ್ರಕೃತಿಯು ಆಹ್ವಾನಿಸಿದೆ ನಮ್ಮನು 

0116ಪಿಎಂ02102024
*ಅಪ್ಪಾಜಿ ಎ ಮುಸ್ಟೂರು*

ಬಾನಲ್ಲಿ ಹಾರುವ ಹಕ್ಕಿಗಳಂತೆ 
ನಾನು ನೀನು ಬಾಳಲಿ 
ಪ್ರೀತಿಯ ಕಾಳನು ಹೆಕ್ಕಿ ತಂದು 
ಒಟ್ಟಾಗಿ ಸವಿಯೋಣ ಗೂಡಲಿ 

ಅಕ್ಕರೆ ತುಂಬಿದ ನಿನ್ನ ದನಿಯ
ಪ್ರೀತಿಯ ಮಾತೆ ಸವಿ ಜೇನು 
ಎಂದೆಂದಿಗೂ ನಿನ್ನ ಜೊತೆ ಇದ್ದರೆ ಸಾಕು 
ಬಾಳಲಿ ಬೇಡನು ಮತ್ತೇನು 

ಸಕ್ಕರೆ ಮಾತಿನ ಸವಿಬೆಲ್ಲದ ನಲ್ಲ 
ನೀನಲ್ಲದೆ ಜಗದಿ ಬೇರೆ ಬೇಕಿಲ್ಲ 
ನಿನ್ನಾಲಿಂಗನವೇ ಬೆಚ್ಚನೆಗೂಡು 
ಸದಾ ಹೊಮ್ಮಿದೆ ಅಲ್ಲಿ ಪ್ರೀತಿಯ ಹಾಡು 

ನನ್ನಯ ಕನಸಿಗೆ ನಿನ್ನದೇ ಆಸರೆ 
ನೀನೇ ಸ್ಪೂರ್ತಿ ದಿನವೆಲ್ಲ 
ನೀ ಕೊಟ್ಟ ಪ್ರೀತಿಯ ಕಾಣಿಕೆಗೆ 
ಬೆಲೆ ಕಟ್ಟಲು ಎಂದಿಗೂ ಆಗಲ್ಲ 

ನಾನು ನೀನು ಹೀಗೆ ಕೂಡಿ 
ಬಾಳುವ ಮನೆಯೇ ಗಂಧದ ಗುಡಿ 
ಪ್ರೀತಿಯ ಅಲ್ಲಿ ಶ್ರೀಗಂಧ 
ನಂಬಿಕೆಯಲ್ಲಿ ಬೆಸೆದಿದೆ ನಮ್ಮನುಬಂಧ 

೧೨೫೭ಪಿಎಂ೦೫೧೦೨೦೨೪
ಅಮು ಭಾವಜೀವಿ ಮುಸ್ಟೂರು 

ಎಲ್ಲಿಗೆ ಬಂದು ಮುಟ್ಟಿದೆ 
ಪ್ರಜಾಪ್ರಭುತ್ವದ ಈ ವ್ಯವಸ್ಥೆ 
ಕಾಳಜಿ ಇಲ್ಲದ ಆಳುವವರಿಂದ 
ಅತಿಯಾಗಿದೆ ಈ ದುರವಸ್ಥೆ 

ದೊರೆಯೇ ಭ್ರಷ್ಟನಾಗಿ ಕುಂತರೆ 
ದೂರು ನೀಡುವುದು ಯಾರಿಗೆ 
ಲಂಚದ ಘಮಲು ಅಮಲೇರಿರುವಾಗ
ಸೌಲಭ್ಯವಿನ್ನೆಲ್ಲಿ ಸಾಮಾನ್ಯರಿಗೆ 

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ 
ಎಂಬುದೆಲ್ಲ ಶಾಲಾ ಪಟ್ಟಕ್ಕೆ ಸೀಮಿತ 
ವಾಸ್ತವದಲ್ಲಿ ಪ್ರಜೆಗಳೆಲ್ಲರನ್ನು 
**************************
ಎಂಥೆಂಥವರು ಇರುವರು 
ಈ ಜಗದಲಿ ಅರಿತವರಾರು
ಸ್ನೇಹದ ಮರೆಯಲಿ ಪ್ರೀತಿಯ
ಬಯಸಿ ಬಳಸಿ ಎಸೆಯುವರು

ಗೆದ್ದೆತ್ತಿನ ಬಾಲವ ಹಿಡಿದು 
ಎದ್ದೆದ್ದು ಕುಣಿಯುವರು
ಪ್ರತ್ಯಕ್ಷವಾಗಿ ಕಂಡರೂ 
ಪ್ರಮಾಣಿಸಿ ನೋಡದ ಕುರುಡರು 

ತನ್ನವರಿಗಾಗಿ ಇತರರ 
ಬಲಿ ಕೊಡುವವರ
ಬೆಂಬಲವಾಗಿ ನಿಂತು 
ಚೇಲಾಗಳಂತಾಡುವರು

ಕಾಮಾಲೆ ಕಣ್ಣಿನಿಂದ ನೋಡಿ 
ಕೊಚ್ಚೆಯಲ್ಲಿದ್ದವರ ಜೊತೆ ಸೇರಿ 
ಪ್ರಾಮಾಣಿಕರ ದೂರುವ ಲಜ್ಜೆಗೇಡಿ 
ಜನರುಂಟು ಈ ಜಗದಾಗೆ

ಎಚ್ಚರದಿಂದಿರಬೇಕು ದುಷ್ಟರಕೂಟ
ಅಮಾಯಕರ ತಿಂದು ಮುಕ್ಕಿ 
ತಾವೇ ಗೆದ್ದವರೆಂದು ಬೀಗುವರ
ದೂರವಿಟ್ಟು ದಾರಿ ಸವೆಸು 
೧೦೧೦ಪಿಎಂ೦೭೧೦೨೦೨೪
ಅಪ್ಪಾಜಿ ಎ ಮುಸ್ಟೂರು 

*ಗೋಡೆ ಕಟ್ಟದಿರಲಿ*

ಬಂಡೆಗಳ ಒಡೆದು 
ಹಾದಿ ಮಾಡುವ ನೆಪದಲ್ಲಿ 
ಅದೇ ಕಲ್ಲಿಂದ ಗೋಡೆ ಕಟ್ಟದಿರಲಿ 

ಸ್ನೇಹದ ಕಡಲಲ್ಲಿ 
ಪ್ರೀತಿಯ ಸುಳಿಯಲ್ಲಿ ಸಿಲುಕಿ 
ದ್ವೇಷದ ಸಾವು ತರದಿರಲಿ 

ಉಳ್ಳವರ ಓಲೈಸುತ
ಇಲ್ಲದವರ ಹಂಗಿಸುವ ಬದಲು 
ಹೊಂದಿಸುವ ಪ್ರಯತ್ನ ಸಾಗಲಿ 

ಪ್ರತ್ಯಕ್ಷವಾಗಿ ಕಂಡರೂ 
ಪ್ರಮಾಣಿಸಿ ನೋಡದೆ
ಪ್ರಾಮಾಣಿಕರ ಅವಮಾನಿಸದಿರಲಿ

ತಪ್ಪುಗಳ ಎತ್ತಿ ಕಟ್ಟಿ 
ಸತ್ಯವನು ತುಳಿಯದೆ
ಬದ್ಧತೆಯ ತೋರಲಿ 

೦೯೨೪ಪಿಎಂ೦೮೧೦೨೦೨೪
ಅಮು ಭಾವಜೀವಿ ಮುಸ್ಟೂರು 


*ಉಳಿದ ಶೇಷ*
ಬದುಕು ಕಲಿಸಿದ ಪಾಠ 
ನೋವು ನಲಿವಿನ ಆಟ
ಸೋಲು ಗೆಲುವಿನ ಸಂಪುಟ 
ಸ್ನೇಹ ಪ್ರೀತಿಗಳೇ ಬಾಳ ಮುಖಪುಟ 

ಎಲ್ಲಿಂದಲೋ ಬಂದವರು ಇಲ್ಲಿ 
ಜೊತೆಯಾಗಿ ಸೇರುವರು 
ಇಲ್ಲೇ ಇದ್ದವರು ಇಲ್ಲಸಲ್ಲದ ಕಾರಣಕೆ
ಬಿಟ್ಟು ಎದ್ದು ಹೋಗುವರು 

ಅವಮಾನಿಸಿ ದೂರ ಉಳಿದು 
ಅಪಪ್ರಚಾರ ಮಾಡಿ ಮಸಿ ಬಳಿವರು
ಸ್ವಾಭಿಮಾನದಿ ಬದುಕಲು 
ಬೆನ್ತಟ್ಟಿ ಮರೆಯಲಿ ಉಳಿವರು 

ಯಾರು ಶತ್ರುಗಳಲ್ಲ ಇಲ್ಲಿ 
ಯಾರು ಮಿತ್ರರೂ ಅಲ್ಲ 
ಅವರವರ ಪಾತ್ರ ಬಂದಂತೆ ನಟಿಸಿ
ಸೂತ್ರ ಹರಿದುಕೊಂಡು ಹೋದರು 

ಬದುಕೆಂದರೆ ಹೀಗೆ ಕೂಡಿ ಕಳೆದು 
ಗುಣಿಸಿ ಭಾಗಿಸಿ ಉಳಿದ ಶೇಷವು
ಬಂದಂತೆ ಬದುಕುತ್ತಾ ಸಾಗುವ 
ನಮಗೊಲಿವುದು ಈ ಸಂತೋಷವು

೧೦೧೭ಪಿಎಂ೦೯೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

ತಪ್ಪೇ ಮಾಡದವರು ಯಾರುಂಟು 
ಮಾಡಿದ ತಪ್ಪನ್ನು ಒಪ್ಪಿಕೊಂಡವರು 
ನಿಜದಲ್ಲಿ ಪ್ರಾಮಾಣಿಕರು 
ತಿದ್ದಿ ನಡೆಯುವ ಬುದ್ಧಿವಂತರು 

ಗೊತ್ತಿದ್ದೋ ಗೊತ್ತಿಲ್ಲದೆಯೋ 
ತಪ್ಪು ಮಾಡಿ ಗೊತ್ತಾದ ಕ್ಷಣವೇ 
ಕ್ಷಮೆಯ ಕೋರಿ ಹೆಮ್ಮೆಪಡುವ 
ಪಾರದರ್ಶಕ ವ್ಯಕ್ತಿತ್ವ ಉಳ್ಳವರು 

ಎಲ್ಲವೂ ಸರಿ ಇದ್ದರೆ ಜಗ ನಡೆವುದು ಹೇಗೆ 
ತಪ್ಪಿದ್ದರೆ ತಾನೇ ಸರಿಗೆ ಬೆಲೆ 
ತಪ್ಪನ್ನೇ ಎತ್ತಿ ತೋರಿಸುವ ಬದಲು 
ತಿದ್ದಿಕೊಳ್ಳಲು ಒಂದು ಅವಕಾಶ ನೀಡಬೇಕು 

ತಪ್ಪುಗಳ ಪರಿಶ್ರಮದಿಂದಲೇ 
ಸರಿಯ ಗುರಿ ಕೈಗೆಟುಕುವುದು 
ತಪ್ಪು ಒಪ್ಪಿತವಾಗದೆ 
ಯಾವ ಸಮಸ್ಯೆಯೂ ಬಗೆಹರಿಯದು 

ತಪ್ಪು ತಪ್ಪು ಎಂದು ಬೊಬ್ಬೆ ಹೊಡೆಯುವವರು 
ಯಾರು ತಪ್ಪೇ ಮಾಡುವುದಿಲ್ಲವೇನು 
ಮಾಡಿದ ತಪ್ಪಿನ ಅರಿವಾದವರೇ 
ಗೆಲುವಿನ ರೂವಾರಿಯಾಗುವ ಸಾಧಕರು

ಬರಿ ತಪ್ಪನ್ನೇ ಹುಡುಕುತ್ತಾ ಹೋಗುವವರು 
ಎಲ್ಲಾ ತಪ್ಪುಗಳಿಗೆ ಮೂಲವಾದವರು 
ತಪ್ಪಿನಿಂದ ಪಾಠ ಕಲಿತವರು 
ಮುಂದಿನದನೆಲ್ಲ ಗೆದ್ದು ಬೀಗುವರು

೧೨೫೭ಪಿಎಂ೧೦೧೦೨೦೨೪
ಅಪ್ಪಾಜಿ ಎ ಮುಸ್ಟೂರು 

*ಹೆಣ್ಣುಳ್ಳ ಮನೆಯಾಗಲಿ*
ಹೆಣ್ಣೆಂದು ಸಣ್ಣದಾಗಿ 
ಮಾತನಾಡುವರು ಜಗದಲ್ಲಿ 
ಹೆಣ್ಣಿಲ್ಲದೆ ಜಗವಿಲ್ಲ ಎಂಬುದನ್ನೇ 
ಮರೆತರೇಕೆ ಜನರಿಲ್ಲಿ

ಬೆಳಗಿನ ರಾತ್ರಿವರೆಗೆ 
ದುಡಿಯುವವಳು ಹೆಣ್ಣು 
ಹಸಿವು ನಿದ್ರೆ ತ್ಯಾಗದ ಆಚೆ 
ಶ್ರಮವಿರದೆ ಬದುಕಳು ಹೆಣ್ಣು 

ತಾಯಿ ಸೋದರಿ ಮಡದಿಯಲ್ಲದೆ 
ಗೆಳತಿಯಾಗಿ ಮಗಳಾಗಿ 
ಬದುಕಿನ ಪ್ರತಿ ಹಂತದಲ್ಲೂ 
ಜೊತೆಯಾಗಿ ಸಲಹುವ ಶಕ್ತಿ ಅವಳು 

ತಾಯಿಯಾಗಿ ಪ್ರೀತಿಯನ್ನು 
ಮಡದಿಯಾಗಿ ಸರ್ವಸ್ವವನ್ನು 
ಮಗಳಾಗಿ ಕೀರ್ತಿಯನ್ನು 
ಕೊಡುವ ಹೆಣ್ಣು ದೈವ ಸ್ವರೂಪಿ 

ಅವಳ ಹೆಸರಿನ ದೇವರ ಪೂಜಿಸಿ 
ಅವಳನ್ನು ಚಿತ್ರವಿಚಿತ್ರವಾಗಿ ಶೋಷಿಸಿ 
ಕೀಳಾಗಿ ಕಾಣುವವರ ಮೆಚ್ಚುವುದುಂಟೆ 
ನಿಜದಿ ಆರಾಧಿಸಿದರೆ ಸುಭಿಕ್ಷ ಜಗವು 

ಹೆಣ್ಣು ಮಕ್ಕಳೆ ಬದುಕಿನ ಆಧಾರ 
ಹೆಣ್ಣು ಜೀವವೇ ಬಾಳಿನ ಸಂಸ್ಕಾರ 
ನಿಲ್ಲಲಿ ಅವಳ ಮೇಲಿನ ಅಧಿಕಾರ 
ಹೆಣ್ಣುಳ್ಳ ಮನೆಯಾಗಲಿ ದೇವ ಮಂದಿರ 

೦೩೦೧ಪಿಎಂ೧೧೧೦೨೦೨೪
*ಅಪ್ಪಾಜಿ ಎ ಮುಸ್ಟೂರು*

Tuesday, October 1, 2024

ಕವನ

ಬದುಕಿನ ಹಾದಿಗೆ ಬೆಳಕನ್ನು ನೀಡಿದೆ
ಹರೆಯದ ಮನಸ್ಸಿಗೆ ಪ್ರೀತಿಯ ನೀಡಿದೆ
ಒಲವಿನ ಗೆಳತಿ ನಿನಗೆ ಏನು ನೀಡಲಿ ಕಾಣಿಕೆ
ಏಕಾಂಗಿತನಕೆ ಸಂಗಾತಿ ನೀನಾಗಿ ಬಂದೆ
ಹೋರಾಟದ ಈ ಪಯಣದಲ್ಲಿ ಜೊತೆಯಾದೆ
ಸಹಜೀವನಕೆ ಪಯಣಿಗಳಾಗು ಅದೇ ಕೋರಿಕೆ

ನನ್ನವರೆಂಬುವರೆಲ್ಲ ತೊರೆದು ಹೋದರು
ನನ್ನದೆಂಬುದನ್ನೆಲ್ಲ ಕಳೆದುಕೊಂಡೆ ಆದರೂ
ನೀ ಸಿಕ್ಕ ಈ ಘಳಿಗೆ ಇನ್ನು ಬರೆದಾಗದು ಬಾಳಜೋಳಿಗೆ
ಆಸೆಗಳ ಚಕ್ರವ್ಯೂಹದೊಳಗೆ ಸಿಲುಕಿ
ನೋವುಗಳ ನೆರಳಲ್ಲಿಯೇ ನಿತ್ಯ ಬದುಕಿ
ನೆಮ್ಮದಿಯ ಅರಸುವಾಗ ನೀ ಬಂದೆ ಬಳಿಗೆ

ಈಗಿಲ್ಲ ಇನ್ನಾವ ಬೇಡಿಕೆ ನನ್ನೊಳಗೆ
ನೀನಿರುವ ಪ್ರತಿಕ್ಷಣವೇ ಹೋಳಿಗೆ
ಬದುಕೆಲ್ಲ ಇನ್ನು ಹಾಯಾದ ಸಂಜೆ ನನಗೆ
ಅಕ್ಕರೆ ತುಂಬಿದ ಮಡಿಲು ಈ ನಿನ್ನದು
ಸವಿಜೇನಿನ ಅಕ್ಷಯ ಪಾತ್ರೆ ಸಿಕ್ಕಿದೆ ಇನ್ನು
ಕಹಿಯನೆಲ್ಲ ಮರೆತು ಬಾಳುವೆ ಇನ್ನು ನಿನ್ನೊಂದಿಗೆ

೦೨೦೫ ಪಿಎಂ ೦೧೦೯೨೦೨೪The 

ಕವನ

ಬದುಕಿನ ಹಾದಿಗೆ ಬೆಳಕನ್ನು ನೀಡಿದೆ
ಹರೆಯದ ಮನಸ್ಸಿಗೆ ಪ್ರೀತಿಯ ನೀಡಿದೆ
ಒಲವಿನ ಗೆಳತಿ ನಿನಗೆ ಏನು ನೀಡಲಿ ಕಾಣಿಕೆ
ಏಕಾಂಗಿತನಕೆ ಸಂಗಾತಿ ನೀನಾಗಿ ಬಂದೆ
ಹೋರಾಟದ ಈ ಪಯಣದಲ್ಲಿ ಜೊತೆಯಾದೆ
ಸಹಜೀವನಕೆ ಪಯಣಿಗಳಾಗು ಅದೇ ಕೋರಿಕೆ

ನನ್ನವರೆಂಬುವರೆಲ್ಲ ತೊರೆದು ಹೋದರು
ನನ್ನದೆಂಬುದನ್ನೆಲ್ಲ ಕಳೆದುಕೊಂಡೆ ಆದರೂ
ನೀ ಸಿಕ್ಕ ಈ ಘಳಿಗೆ ಇನ್ನು ಬರೆದಾಗದು ಬಾಳಜೋಳಿಗೆ
ಆಸೆಗಳ ಚಕ್ರವ್ಯೂಹದೊಳಗೆ ಸಿಲುಕಿ
ನೋವುಗಳ ನೆರಳಲ್ಲಿಯೇ ನಿತ್ಯ ಬದುಕಿ
ನೆಮ್ಮದಿಯ ಅರಸುವಾಗ ನೀ ಬಂದೆ ಬಳಿಗೆ

ಈಗಿಲ್ಲ ಇನ್ನಾವ ಬೇಡಿಕೆ ನನ್ನೊಳಗೆ
ನೀನಿರುವ ಪ್ರತಿಕ್ಷಣವೇ ಹೋಳಿಗೆ
ಬದುಕೆಲ್ಲ ಇನ್ನು ಹಾಯಾದ ಸಂಜೆ ನನಗೆ
ಅಕ್ಕರೆ ತುಂಬಿದ ಮಡಿಲು ಈ ನಿನ್ನದು
ಸವಿಜೇನಿನ ಅಕ್ಷಯ ಪಾತ್ರೆ ಸಿಕ್ಕಿದೆ ಇನ್ನು
ಕಹಿಯನೆಲ್ಲ ಮರೆತು ಬಾಳುವೆ ಇನ್ನು ನಿನ್ನೊಂದಿಗೆ

೦೨೦೫ ಪಿಎಂ ೦೧೦೯೨೦೨೪The