Friday, September 3, 2021

#ಅಮುಭಾವದೂಟ ೦೩

  *ಜೀವನ ಸತ್ಯ*

ಮರವಾಗಲಿಲ್ಲ
ನೇರಳೀಯಲಿಲ್ಲ
ಬರೀ ಬದುಕಿ ಹೊರಟೆ
ನನ್ನವರೆನ್ನಲ್ಲಿಲ್ಲ
ಯಾರೂ ನನ್ನ ನಂಬಲಿಲ್ಲ
ವ್ಯರ್ಥ ಬದುಕಿದು ಸ್ವಾರ್ಥಕ್ಕೆ ಬಲಿಯಾಯ್ತು

ಬಯಸಿದಂತೆ ಬದುಕು ಸಾಗದು
ಸಾಧಿಸದೆ ಕುರುಹು ಉಳಿಯದು
ಸ್ವಂತದ್ಯಾವುದೂ ಇಲ್ಲಿ ನನ್ನದಿಲ್ಲ
ಜನರನೆಂದೂ ನಂಬಿಸಲಾಗದು
ನನಗೆ ಬೇಕಾದಂತೆ ಬದುಕಲು ಬಿಡದು
ಸಾಕ್ಷಿ ಇರೋ ಸತ್ಯಕ್ಕೆ ಸಾವಿಲ್ಲ

ತುಳಿಯಲೆಂದೇ ಕಾಯುತಿಹರು
ಬೆಳೆವ ಚಿಗುರನು ಚಿವುಟುವರು
ಪೋಷಿಸದೆ ಬೆಳೆಯಬೇಕು ಅದೇ ಜೀವನ
ಕಳಕಳಿಯ ಕೇಳರು ಯಾರು
ಎಲ್ಲ ಕಬಳಿಸುತ್ತ ಹೊರಟಿಹರು
ಬರಿಗೈಯಲ್ಲಿ ಮುಗಿಸಬೇಕು ಪಯಣ

೦೪೨ಪಿಎಂ೨೮೦೪೨೦೨೧
*ಅಪ್ಪಾಜಿ ಎ ಮುಸ್ಟೂರು*

       


  

No comments:

Post a Comment