Thursday, May 18, 2023

ಕವನ

ಬರೆದಷ್ಟು ಬಲವಾಯ್ತು
ನನ್ನ ಕವಿತೆ ಬರೆವ ಗೀಳು
ಆದರೂ ಯಾರೂ ನನ್ನನ್ನು 
ಗುರುತಿಸಲೇ ಇಲ್ಲ  ಅದೇ ನನ್ನ   ಗೋಳು

ಆದರೇನಂತೆ ಬರೆದುಕೊಳ್ಳುವೆ
ನನ್ನ  ಆತ್ಮದ ತೃಪ್ತಿಗೆ
ಒಂದಲ್ಲ ಒಂದು ದಿನ 
ಕವಿಯಾಗುವೆನೆಂಬ ಆಸೆಗೆ

ಮರುಭೂಮಿಯ ಓಯಸೀಸ್ನಂತೆ
ಹಾಗೋಹೀಗೋ ಕಾಣಿಸಿಕೊಂಡೆ
ಚಿಗುರಿದಾಗ ಆಸೆಗಳೆಲ್ಲಾ
ಬಬಿತ್ತುವ ಮತ್ತೆ ಬರ ಬಂದಂತೆ

ಏನೇ ಆಗಲಿ ಏನೇ ಹೋಗಲಿ
ಬರೆಯುವುದ ನಿಲ್ಲಿಸಲಾರೆ
ನೀವಿರುವಿರಿ ಬೆಳೆಸುವಿರಿ
ಎಂಬ ಆ ಸ್ಪೂರ್ತಿಯಿಂದೆ.

ಉತ್ತಿ ಬಿತ್ತುವೆ ಭಾವಗಳ
ಎದೆಗುಂದದೆ ರೈತನಾಗಿ
ಫಸಲು ಬರಲಿ ಬಿಡಲಿ
ಕಾಯಕ ಮಾಡಿವೆ ತೃಪ್ತಿಗಾಗಿ

0933ಪಿಎಂ26092016

*ಅಮುಭಾವಜೀವಿ*

No comments:

Post a Comment