Saturday, June 22, 2024

ಕವನ

ಆಕಾಶದಷ್ಟು ಎತ್ತರ 
ಸಾಗರದಷ್ಟು ವಿಶಾಲ 
ಭೂಮಿಯಷ್ಟು ಸಮೃದ್ಧ 
ಪ್ರೀತಿಯ ನನ್ನಪ್ಪ 

ಶಿಲೆಯಂತೆ ಕಠೋರ 
ಶಿಲ್ಪ ಮಾಡಿದ ಶಿಲ್ಪಿಕಾರ 
ಬದುಕು ಕಲಿಸಿದ ಗುರಿಕಾರ 
ಶ್ರಮದ ಹೆಸರು ನನ್ನಪ್ಪ 

ಮರಕ್ಕೆ ಆಸರೆ ಬೇರು 
ಲೆಕ್ಕವಿಲ್ಲ ಸುರಿಸಿದ ಬೆವರು 
ಅಮರ ಅಮರ ಆ ಹೆಸರು 
ಬದುಕಿನ ಆಧಾರ ನನ್ನಪ್ಪ 

ಪ್ರೀತಿ ತೋರದ ಭಾವ 
ನಮಗಾಗಿ ದುಡಿಯುವ ಜೀವ 
ಹೆಗಲಲ್ಲಿ ಹೊತ್ತರು ತೋರನು ನೋವ 
ಹಸಿವಿಗೆ ಅವಕಾಶ ನೀಡದ ನನ್ನಪ್ಪ 

ದುಡಿಮೆಯ ನಂಬಿದ ಕೃಷಿಕ 
ಎಂದೆಂದಿಗೂ ಅವನೇ ನಮ್ಮ ನಾಯಕ 
ಜೀವನ ಗುರಿ ಸೇರಿಸಿದ ಮಾರ್ಗದರ್ಶಕ 
ಬೆನ್ನ ಹಿಂದೆ ನಿಂತ ಬೆಂಗಾವಲು ನನ್ನಪ್ಪ 

ಹೇಳ ಹೊರಟರೆ ಪದಗಳು ಕಡಿಮೆ 
ದೇವರಿಗೂ ಮೀರಿದ್ದು ಅವನ ಹಿರಿಮೆ 
ಮಕ್ಕಳಿಗಾಗಿ ನಿತ್ಯ ಮಾಡುತ ದುಡಿಮೆ 
ಬದುಕಿನ ಭರವಸೆ ನನ್ನಪ್ಪ 

೧೦೫೦ಎಎಂ೧೬೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*

ಮಗಳೆಂದರೆ ಅಮ್ಮನ ಹಾಗೆ 
ಅಪ್ಪನ ಪಾತ್ರಕ್ಕೆ ಜೀವ ಕೊಟ್ಟವಳು 
ಮಗಳೆಂದರೆ ವರ್ಣಿಸಲಿ ಹೇಗೆ 
ಬದುಕಿಗೆ ಭರವಸೆ ತುಂಬಿದವಳು 

ತಾಯಿಯಂತೆ ಸಲಹುವಳು 
ಗೆಳತಿಯಂತೆ ಸಂತೈಸುವಳು 
ಮಗಳಿವಳು ಮಮತೆಯ ರೂಪ 
ಮನೆ ಮನಗಳ ಬೆಳಗುವ ದೀಪ 

ಅಂಗೈಯಲ್ಲಿ ಆಡಿದ ಮಗಳು 
ಎದೆ ಮೇಲೆ ಕೂತ ಮಗಳು 
ಭುಜದೆತ್ತರ ಬೆಳೆದು ನಿಂತಿಹಳು 
ಬದುಕಿಗೆ ಜವಾಬ್ದಾರಿ ತಂದಳು 

ಅಪ್ಪನಾಸೆಗೆ ಬೆಂಬಲವಾಗಿ ನಿಲ್ಲುವಳು 
ಅಮ್ಮನ ಕನಸು ನನಸಾಗಿಸುವಳು 
ಅನುಬಂಧದ ಆನಂದ ಮಗಳಿಂದ 
ಹೆತ್ತವರ ಅಕ್ಕರೆಯ ಮುದ್ದು ಕಂದ 

ಮಗಳು ಹುಟ್ಟಿದಾಗಲೇ 
ಅಪ್ಪ ಅಮ್ಮ ಹುಟ್ಟಿದ್ದು 
ಅವಳಿಗಷ್ಟೇ ಅಲ್ಲ ನಮಗೂ 
ಜನ್ಮದಿನ ಸಂಭ್ರಮ ತಂದದ್ದು 

ಬೆಳೆದು ಬಾಳು ಮಗಳೇ ಎತ್ತರಕ್ಕೆ 
ನೆರಳಾಗು ದಣಿದು ಬಂದವರ ಪಾಲಿಗೆ 
ಸಾಧನೆಯ ಸಾಧ್ಯವಾಗಿಸಿಕೊಂಡು ಬಾ 
ನಿನ್ನ ಬದುಕಾಗಲಿ ನಿತ್ಯ ಹಬ್ಬ 

೦೨೦೮ಪಿಎಂ೧೮೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*

ಕಣ್ಣ ಮುಂದಿದ್ದಾಗ ದೂರುವಿರೇಕೆ
ಹೋದಾಗ ಹೊಗಳುವಿರೇತಕೆ 
ಇದ್ದಾಗ ತಿದ್ದುವ ಬದಲು 
ಹೋದಾಗ ಮತ್ತೆ ಹುಟ್ಟಿ ಬಾ ಎನ್ನುವಿರೇಕೆ 

ಹಾರತುರಾಯಿಗಳನೇನು ನಾ ಕೇಳಲಿಲ್ಲ 
ನಿಮ್ಮ ಬೈಗುಳದ ಹೂಮಳೆ ಸುರಿಸಿದ್ದೀರಿ 
ಬೆನ್ನು ತಟ್ಟುವ ಒಂದೇ ಒಂದು ಪ್ರಯತ್ನ ಮಾಡಲಿಲ್ಲ 
ಸಣ್ಣ ತಪ್ಪನೆ ದೊಡ್ಡದು ಮಾಡಿ ಬಹಿಷ್ಕರಿಸಿದಿರಿ 

ಯಾರ ಹಾದಿಗು ನಾ ಹೂ ಹಾಸಲಾಗಲಿಲ್ಲ
ಆದರೂ ನಾನು ಯಾರಿಗೂ ಮುಳ್ಳಾಗಿರಲಿಲ್ಲ 
ಬೇಕಾದಾಗ ಬಳಸಿಕೊಂಡೆವರೇ ಎಲ್ಲಾ 
ಬೇಡವಾದಾಗ ಈಗ ಎಲ್ಲ ದೂಷಿಸುವಿರಲ್ಲ 

ಮರವಾಗಿ ನೆರಳೀಯಬೇಕೆಂದುಕೊಂಡಿದ್ದೆ
ಬೆಳೆಯುವುದ ಕಂಡು ಚಿವುಟಿದವರು ನೀವಲ್ಲವೇ 
ಎಲೆ ಮರೆಯ ಕಾಯಾಗಿ ಮಾಗಬೇಕೆಂದುಕೊಂಡಿದ್ದೆ
ಕಲ್ಲು ಹೊಡೆದು ಕೆಳಗೆ ಬೀಳಿಸಿದವರು ನೀವಲ್ಲವೇ 

ಕಣ್ಣೀರ ಕಥೆಗೆ ಕಿವಿಯಾಗಿ ಮರುಗಿದ್ದೆ 
ನನ್ನ ಕಣ್ಣೀರಿಗೆ ನೀವೇ ಕಾರಣವಾದಿರೇಕೆ 
ತಪ್ಪಲಿಯ ಭಾವದಲು ಹಬ್ಬಿ ಬೆಳೆವೆ
ಬೆಳೆಸಿದವರ ಅಡಿಯಲ್ಲಿ ಕುಡಿ ಚಾಚುವೆ 

0303ಪಿಎಂ18062024
ಅಪ್ಪಾಜಿ ಅಮು ಮುಸ್ಟೂರು 

ಬೆಳದಿಂಗಳ ಚೆಲ್ಲಿದ ರಾತ್ರಿಯಲಿ 
ತಂಗಾಳಿಯು ತೀಡುವ ಹೊತ್ತಿನಲ್ಲಿ 
ಮತ್ತೇರಿಸುವಂತೆ ಕಾಡಿತ್ತು ನಿನ್ನ ನೆನಪು 
ಮಿನುಗುವ ಚುಕ್ಕಿಗಳ ಜೊತೆಯಲಿ 
ತೇಲುವ ಮೋಡಗಳ ಮರೆಯಲಿ 
ಕಣ್ಣ ಮುಚ್ಚಾಲೆ ಆಡುತ್ತಿತ್ತು ನಿನ್ನ ನೆನಪು 

ಹುಣ್ಣಿಮೆ ಸುರಿವ ತಣ್ಣನೆ ಹೊತ್ತು 
ನೈದಿಲೆ ಅರಳಿ ಘಮಘಮ ಘಮ್ಮತ್ತು
ಆವರಿಸಿ ಮೈ ಮರೆಸಿತು ನಿನ್ನ ನೆನಪು 
ಆಷಾಢದ ಗಾಳಿಯ ಬಿರುಸು 
ಬಯಸಿದರು ಬಾರದ ಮಳೆಯ ಮುನಿಸು 
ಬರಡಾದ ಎದೆಗೆ ನಾಲ್ಕು ಹನಿ ನಿನ್ನ ನೆನಪು 

ಒಂಟಿ ಪಯಣಕ್ಕೆ ಇಲ್ಲ ಆಸರೆ 
ಸಂಪೂರ್ಣ ನಾನೀಗ ನಿನ್ನ ಕೈಸೆರೆ 
ಋತುಗಳು ಜಾರುವಂದದಿ ನಿನ್ನ ನೆನಪು 
ತಲ್ಲಣಿಸುವ ಮನಸ ಸಂತೈಸಿ 
ಏಕಾಂತಕ್ಕೆ ಸಂಗಾತಿಯ ಜೊತೆ ಏರಿಸಿ 
ತಂಪಿರುಳಿಗೆ ಮುದ ತಂತು ನಿನ್ನ ನೆನಪು 

ಎಲ್ಲೆಲ್ಲೋ ಹುಡುಕುವ ಅಗತ್ಯವಿಲ್ಲ 
ನನ್ನೊಳಗೆ ಅವಿತಿರುವೆ ನೀನೆ ಎಲ್ಲ 
ನಡುರಾತ್ರಿ ಮೀರಿದರು ಇನ್ನು ಗಡುವಿದೆ 
ಅಂತರಂಗದ ಭಾವ ವಿಹಾರಿಗೆ
ನವನವೋನ್ಮೇಶ ಶಾಲಿನಿ 
ನಂಬಿಕೆಯ ನಂದಾದೀಪ ನಿನ್ನ ನೆನಪು 
೧೦೧೭ಪಿಎಂ೨೦೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*

ಹುಣ್ಣಿಮೆ ಚಂದ್ರನ ಹೊಳಪು 
ಹರೆಯದ ಹೆಣ್ಣಿನ ಒನಪು 
ನೋಡಲು ಕಣ್ಣಿಗೆ ಹಬ್ಬ 
ತಂಗಾಳಿಯ ಸ್ಪರ್ಶದ ಹಿತ 
ತಣ್ಣನೆ ಹೊತ್ತಿನ ಸಂಗೀತ 
ವರ್ಣಿಸಲು ಸಿಗುತ್ತಿಲ್ಲ ಶಬ್ದ 

ಪ್ರೀತಿಸೋ ಹೃದಯಕೆ ಇನ್ನೇನು ಬೇಕು 
ನಿತ್ಯವೂ ಇಂತಹ ಘಳಿಗೆಯೊಂದು ಸಾಕು 
ಸ್ವರ್ಗಕ್ಕೆ ಕಿಚ್ಚು ಹಚ್ಚಿ ಬದುಕಲು 
ಎದೆಯ ಭಾವಕೆ ಹದವಾದ ಸನ್ನಿವೇಶ 
ಒಲವ ಜೀವದ ಮಿದುವಾದ ಉಪದೇಶ 
ಇಷ್ಟೇ ಸಾಕು ಬದುಕನ್ನು ಬದುಕಿಗಾಗಿ ಬದುಕಲು 

ಚಂದ್ರನಿಗೆ ಚುಕ್ಕಿಗಳ ಸ್ನೇಹ ದೊರೆತಂತೆ 
ನನಗಾಗಿ ಮೀಸಲಿದೆ ನಿನ್ನೊಡನಾಟವಂತೆ 
ಸಾಗರ ನಾನು ತೀರ ನೀನು ಬೇಡ ಇನ್ನೇನು 
ಹಕ್ಕಿಯಂತೆ ಹಾರುತಿದೆ ಮನಸ್ಸು 
ಅಲ್ಲಿ ಕಳೆದೋಯ್ತು ವಯಸ್ಸು 
ಕಳೆದುಕೊಂಡೆ ಅಲ್ಲಿ ನಾನು ನನ್ನನ್ನು 

೧೦೪೧ಪಿಎಂ೨೨೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*

ಮಾತು ಕೂಡ ಮೌನವಾಯಿತು
ಪ್ರೀತಿ ಅಲ್ಲಿ ಜ್ಯೋತಿಯಾಯ್ತು 
ಹೃದಯದಲ್ಲಿ ಕತ್ತಲೆ ಮಾಯವಾಯಿತು 
ಮೌನ ಕೂಡ ಮೌನ ತಡೆಯಿತು 
ಹೃದಯಗಳ ಮಾತಿಗೆ ಕಿವಿಯಾಯಿತು 
ಪ್ರೀತಿಯ ಸಂದೇಶಕ್ಕೆ ವಶವಾಯಿತು 

ತುಸು ಸಣ್ಣ ಕಲಹ ತಂದ ವಿರಹ 
ಹೃದಯದೊಳಗೆ ಬೇರೆನಿಲ್ಲ ಪ್ರೀತಿ ವಿನಹ 
ಬದುಕಿನ ಏರಿಳಿತಕ್ಕೆ ಅದುವೇ ಸಂಗೀತ 
ಅಕ್ಕರೆಯ ಮಾತುಗಳು ಬಿರುಸಾದ ಕಾರಣ 
ಅಲ್ಲಿ ಬಾಡುವುದಲ್ಲವೇ ಪ್ರೀತಿಯ ತೋರಣ 
ಭೂಮಿ ಬಾನು ಒಂದಾಗಿಸಿದ ದಿಗಂತ

ಹೃದಯ ಹಿಂಡುವಷ್ಟು ನೋವಿರಲಿ 
ನೋವಿನ ಉಪಶಮನಕ್ಕೆ ಮೌನವಿರಲಿ 
ದಾಂಪತ್ಯದ ಈ ಅನುಸಂಧಾನದಲ್ಲಿ 
ಏರಿಗೆ ನೀರಿಗೆ ಎಳೆಯದಂತೆ ಬಂಡಿಗೆ 
ಒಲವ ಕೀಲು ಭದ್ರವಿರಲಿ ಕೊನೆಗೆ 
ಒಮ್ಮನದಿ ಖುಷಿಯ ಹಾದಿ ಸವೆಸಲಿ

ನಾನೆಂಬ ಅಹಮಿನ ರಾಜ್ಯವನ್ನು 
ನಾವೆಂಬ ಬಂಧ ಆಳಲಿ 
ಈ ಪ್ರೀತಿಯ ದರ್ಬಾರಿನಲ್ಲಿ 
ಮೌನ ಮಾತಾಗಿ ಮಾತು ಮೌನವಾಗಿ 
ಕ್ಷಣ ಕ್ಷಣವೂ ಅನುಸರಣೆಯಲ್ಲಿ ಸಾಗಿ 
ಬಾಳ ಸಂಪುಟ ಸಮೃದ್ಧಿಯಗೊಳ್ಳಲಿ 

೧೧೦೯ಪಿಎಂ೨೨೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*
*ತನಗ*

ಪದಕ್ಕೆ ಹೊಳಪಿಲ್ಲ
ಲೇಖನಿ ಹಿಡಿದಿಲ್ಲ 
ಪ್ರೀತಿ ಸ್ಪರ್ಶವಿರದೆ 
ಕಾವ್ಯಕ್ಕೆ ಜೀವವಿಲ್ಲ 

೧೧೧೪ಪಿಎಂ೨೨೦೬೨೦೨೪
*ಅಪ್ಪಾಜಿ ಅಮು ಮುಸ್ಟೂರು*

Tuesday, June 11, 2024

ಲೇಖನ

*ಭ್ರಮೆಯಿಂದ ಆಚೆ ಬನ್ನಿ*

ಸಾಮಾಜಿಕ ಜಾಲತಾಣ ಮಾಧ್ಯಮದ ದುರ್ಬಳಕೆಯಿಂದ ಅದೆಷ್ಟೋ ಜೀವಗಳು ಅಪಾಯಕ್ಕೆ ಸಿಲುಕಿವೆ. ಅದೆಷ್ಟೋ ಸಂಸಾರಗಳು ಬೀದಿಗೆ ಬಂದಿವೆ. ಕೆಲವರಂತೂ ಸಾಮಾಜಿಕ ಮಾಧ್ಯಮಗಳಲ್ಲಿ ಇರುವುದೇ ಒಂದು ವಾಸ್ತವದಲ್ಲಿ ತಾವೇರುವುದೇ ಒಂದು. ಅದರ ಆಕರ್ಷಣೆಗೆ ಬಲಿಯಾಗಿ ಅದೆಷ್ಟೋ ಅಮಾಯಕ ಯುವಕ ಯುವತಿಯರು ನಂಬಿ ಮೋಸ ಹೋಗಿದ್ದುಂಟು. ಅಂತಹ ನೂರಾರು ಘಟನೆಗಳು ಸನ್ನಿವೇಶಗಳು ಪ್ರತಿನಿತ್ಯ ನಡೆಯುತ್ತಿದ್ದರು ಅದಕ್ಕೂ ತಮಗೂ ಏನು ಸಂಬಂಧವಿಲ್ಲ ಎಂಬಂತೆ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದೇವೆ. ಇದರಲ್ಲಿ ಉಪಯೋಗಕ್ಕಿಂತ ಅಪಾಯವೇ ಪ್ರಧಾನವಾಗಿರುತ್ತದೆ. ಆದರೆ ಅದು ತಮ್ಮ ಅರಿವಿಗೆ ಬಂದಾಗ ಮಾತ್ರ ಅದು ಕೆಡುಕು ಎಂದು ಗೊತ್ತಾಗುತ್ತದೆ. ಬೇರೆ ಸಮಯಗಳಲ್ಲಿ ಅದರ ಪ್ರಬಂಧ ಬಾಹುಗಳಲ್ಲಿ ಬಂಧಿಯಾಗಿ ತಾವೇನು ಮಾಡುತ್ತಿದ್ದೇವೆ ಎಂಬುದನ್ನೇ ಮರೆತು ತಾವು ಮಾಡುತ್ತಿರುವುದೇ ಸರಿ ಎಂಬಂತೆ ನಡೆದುಕೊಳ್ಳುತ್ತಾರೆ. ಕೊನೆಗೆ ತಾವು ಮೋಸ ಹೋದಾಗ ಅಥವಾ ಮೋಸ ಹೋಗುತ್ತಿದ್ದೇವೆ ಎಂದು ಗೊತ್ತಾದಾಗ ಕೆಲವರು ಅದರಿಂದ ಹೊರಬರಲಾಗದೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಮತ್ತೆ ಕೆಲವರು ತಮ್ಮ ಹೊಸ ಬಾಂಧವ್ಯಗಳ ಹಸಿ ಬಿಸಿ ದಾಖಲೆಗಳನ್ನು ಇಟ್ಟುಕೊಂಡು ಹೆದರಿಸುವ ಹಣ ಮಾಡುವ ದಂಧೆಯಲ್ಲಿ ತೊಡಗುತ್ತಾರೆ. ಕೆಲವೊಮ್ಮೆ ಹೆದರಿಸುವ ಬರದಲ್ಲಿ ತಮ್ಮ ತಮ್ಮಗಳ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಎದುರಾಳಿ ಪ್ರಬಲವಾಗಿದ್ದರೆ ತಾವೇ ಬಲಿಯಾಗುತ್ತಾರೆ. ಎದುರಾಳಿ ದುರ್ಬಲವಾಗಿದ್ದರೆ ಬಲಿ ಹಾಕುತ್ತಾರೆ. 

ಜೀವನ ಬಹಳ ವಿಶಾಲವಾಗಿದೆ ಅಷ್ಟೇ ಅಲ್ಲ ಅತ್ಯಂತ ಮಹತ್ವಪೂರ್ಣವಾದದ್ದು ಆಗಿದೆ. ಜೀವನದಲ್ಲಿ ನಮ್ಮನ್ನು ನಂಬಿಕೊಂಡು ಹತ್ತಾರು ಜನ ಬದುಕುತ್ತಿರುತ್ತಾರೆ. ಅವರೆಲ್ಲರ ಯೋಗಕ್ಷೇಮವನ್ನು ಮರೆತು ಯಾವುದೋ ಕಾಣದ ಮೋಸದ ಜಾಲದಲ್ಲಿ ಸಿಲುಕಿ ಒದ್ದಾಡುತ್ತಾ ಅದರಿಂದ ಹೊರಬರಲಾಗದೆ ಅದನ್ನು ಎದುರಿಸಲು ಆಗದೆ ಅನ್ಯ ದಾರಿಗಳನ್ನು ಹಿಡಿದು ಇಡೀ ಬದುಕನ್ನೇ ಸರ್ವನಾಶ ಮಾಡಿಕೊಂಡುಬಿಡುತ್ತಾರೆ. ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಇರುವವರೆಲ್ಲ ಒಳ್ಳೆಯವರು ಅಲ್ಲ ಕೆಟ್ಟವರು ಅಲ್ಲ. ಈ ಸತ್ಯವನ್ನು ಅರಿತುಕೊಂಡು ನಮ್ಮ ಪಾಡಿಗೆ ನಾವು ಅದನ್ನು ವಿವೇಚನೆಯಿಂದ ಬಳಸಿದಾಗ ಮಾತ್ರ ಅದರಿಂದ ಎದುರಾಗ ಬಹುದಾದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ಆದರೆ ಈ ಮಾಯಾವಿಯ ಬಲೆಗೆ ಸಿಲುಕಿದ ಯಾರೂ ಕೂಡ ವಾಸ್ತವದ ಬಗ್ಗೆ ಎಚ್ಚರ ವಹಿಸದೆ ಕೇವಲ ಆ ಮಾಯಾಜಾಲದ ಮೂಡಿಗೆ ವಶವಾಗಿ ತಮ್ಮತನವನ್ನೇ ಕಳೆದುಕೊಂಡು ತಮ್ಮ ಸುಖವನ್ನು ನಾಶ ಮಾಡಿಕೊಂಡು ಇತರರ ಎದುರು ತಾನೇ ಸರ್ವ ಶ್ರೇಷ್ಠ ಎಂದು ತೋರಿಸಿಕೊಳ್ಳಲು ಹೋಗಿ ಅಪಾಯಕ್ಕೆ ಸಿಲುಕಿ ಹೊರಬರುವ ಉಪಾಯವಿಲ್ಲದೆ ನರಳಿ ನರಳಿ ಖಿನ್ನತೆ ಒಳಗಾಗಿ ಬದುಕಿನ ಸವಿಯನ್ನೇ ಕಳೆದುಕೊಂಡು ಬಿಡುತ್ತಾರೆ. 

  ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಕಿರಿಯರಿಂದ ಹಿರಿಯರವರೆಗೆ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಭಾಗಿಯಾಗಿರುತ್ತಾರೆ. ಅವರವರ ಪ್ರವೃತ್ತಿಗಳಿಗನುಸಾರವಾಗಿ ಸಮಾನ ಮನಸ್ಕರ ಗುಂಪುಗಳನ್ನು ಮಾಡಿಕೊಂಡು ಅದರ ಮೂಲಕ ಪರಸ್ಪರ ಪರಿಚಿತರಾಗಿರುತ್ತಾರೆ. ಆದರೆ ಕೆಲವೊಂದು ಬಾರಿ ಅವರನ್ನು ನಿಜವಾಗಿಯೂ ಒಮ್ಮೆಯೂ ಭೇಟಿಯಾಗದಿದ್ದರೂ ಕೂಡ ಅತ್ಯಂತ ಆತ್ಮೀಯತೆಯಿಂದ ತನ್ನೆಲ್ಲ ಭಾವನೆಗಳನ್ನು ಹಂಚಿಕೊಂಡು ಕಲ್ಪನಾ ಲೋಕದಲ್ಲಿ ವಿವರಿಸುತ್ತಿರುತ್ತಾರೆ. ಅವರಿಗೂ ಸಂಸಾರಗಳಿರುತ್ತವೆ, ಇವರಿಗೂ ಸಂಸಾರಗಳಿರುತ್ತವೆ, ಆದರೂ ಈರ್ವರು ಹೊಸ ಜೋಡಿಗಳಾಗಿ ಹೊಸತನದ ಮೋಡಿಯೊಳೆಗೆ ಸಿಲುಕಿ ತಮ್ಮತನವನ್ನೇ ಕಳೆದುಕೊಂಡು ಮೋಸ ಹೋಗಿಬಿಡುತ್ತಾರೆ. ಪರಸ್ಪರ ಭೇಟಿಯಾಗಲು ಸಾಧ್ಯವಿಲ್ಲದ ಒಟ್ಟಿಗೆ ಬದುಕಲು ಅಸಾಧ್ಯವಾದ ಈ ಕಪೋಲ ಕಲ್ಪಿತ ಮಿಥ್ಯ ಜಗತ್ತಿನಲ್ಲಿ ಸತ್ಯದ ಅರಿವಿಲ್ಲದೆ ನಿತ್ಯ ವ್ಯರ್ಥ ಆಕರ್ಷಣೆಗೆ ತಮ್ಮನ್ನೇ ತಾವು ಅರ್ಪಿಸಿಕೊಂಡು ಕಳೆದು ಹೋಗಿಬಿಡುತ್ತಾರೆ. ಕೊನೆಗೊಂದು ದಿನ ಇದು ಒಬ್ಬರಿಗೊಬ್ಬರು ಮಾಡಿಕೊಂಡ ಮೋಸ ಎಂದು ಗೊತ್ತಾದ ಕೂಡಲೇ ಪ್ರಬಲರಾದವರು ತನ್ನವರ ಪ್ರಾಬಲ್ಯದಿಂದ ಹೆದರಿಸಿ ಬೆದರಿಸಿ ದೂರವಿಡುವ ಪ್ರಯತ್ನ ಮಾಡುತ್ತಾರೆ. ಇನ್ನು ಕೆಲವರು ಪೊಲೀಸು ಕೇಸು ಎಂದೆಲ್ಲ ಹೋಗಿ ಸಾಕ್ಷಿಗಳ ಆಧಾರದ ಮೇಲೆ ಸಂಕಷ್ಟಕ್ಕೆ ಸಿಲುಕಿ ನಿಜವಾಗಿಯೂ ತನ್ನನ್ನು ನಂಬಿದವರಿಗೆ ಅನ್ಯಾಯ ಮಾಡಿ ತಾವು ಸಹ ಸಮಾಜದಲ್ಲಿ ಛೀಮಾರಿಗೆ ಗುರಿಯಾಗಿ ಮುಖ ತೋರಿಸಲು ಆಗದೆ ಬದುಕಲು ಆಗದೆ ಅಪಾಯಗಳನ್ನು ತಂದೊಡ್ಡಿಕೊಂಡು ಜೀವನದ ಮಧ್ಯೆ ಎಲ್ಲ ತೊರೆದು ಹೊರಟು ಹೋಗಿಬಿಡುತ್ತಾರೆ. 

     ಸಾಮಾಜಿಕ ಜಾಲತಾಣಗಳು ಬಂದ ಮೇಲೆ ಆ ಬಾಲ ವೃದ್ಧರಾಧಿಯಾಗಿಯೂ ವಾಸ್ತವವನ್ನು ಮರೆಮಾಚಿ ಕಲ್ಪನಾ ಲೋಕದಲ್ಲಿ ತಮಗೆ ಹೇಗೆ ಬೇಕೋ ಹಾಗೆ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಅದಕ್ಕೆ ಮಾರುಹೋದ ವ್ಯಕ್ತಿಗಳೊಡನೆ ಸಂಬಂಧಗಳನ್ನು ಬೆಳೆಸಿಕೊಂಡು ಅದುವೇ ಮಹತ್ ಸಾಧನೆ ಎಂಬಂತೆ ಸಾಮಾಜಿಕ ಜಾಲತಾಣ ಮಾಧ್ಯಮದಲ್ಲಿ ಬಿಂಬಿಸಿಕೊಂಡು ಭ್ರಮೆಯಲ್ಲಿ ಬದುಕುತ್ತಿರುತ್ತಾರೆ. ಎಷ್ಟೇ ಗೌಪ್ಯತೆಯನ್ನು ಕಾಪಾಡಿಕೊಂಡು ಬಂದರೂ ಒಂದಲ್ಲ ಒಂದು ದಿನ ಅದು ಬಟಾ ಬಯಲಾಗಿ ವ್ಯಕ್ತಿಗಳ ಮಧ್ಯೆ ಬಿರುಕು ಉಂಟಾಗಿ ಆ ಮಾಧ್ಯಮದಲ್ಲಿ ಗಲಾಟೆಗಳು ನಡೆಯುತ್ತವೆ. ಅದರ ಆಚೆಗೂ ಅವರಿರುವ ಕಡೆ ಹುಡುಕಿ ಬಂದು ಹೊಡೆದು ಬಡಿದು ಹೆದರಿಸುವ ಅದಕ್ಕೂ ಮೀರಿ ಜೀವಗಳನ್ನೆ ತೆಗೆಯುವ ಕ್ರೌರ್ಯ ಮೆರೆಯುತ್ತಾರೆ. ಇಲ್ಲಿ ತಪ್ಪು ಒಪ್ಪುಗಳಿಗಿಂತ ಯಾರು ಸಂತ್ರಸ್ತರು ಎಂಬುದನ್ನು ಅರ್ಥಮಾಡಿಕೊಳ್ಳಲು ಅಸಾಧ್ಯವಾದಂತಹ ಒಂದು ವಿಷ ವರ್ತುಲದಲ್ಲಿ ಸಿಕ್ಕಿಕೊಂಡು ವಿಲವಿಲ ಒದ್ದಾಡುತ್ತಾರೆ. ಕೆಲವರು ತಮ್ಮ ಸಂಸಾರದ ವಿಫಲತೆಗಳನ್ನು ಈ ಹೊಸ ಸಂಬಂಧಗಳಲ್ಲಿ ಕಾಣಲು ಹಾತೊರೆಯುತ್ತಾರೆ. ಅದಕ್ಕಾಗಿ ತನ್ನದೆಲ್ಲವನ್ನು ಬಿಚ್ಚಿಡುವ ಕೊಟ್ಟು ಕೊಳ್ಳುವ ಬಯಸಿದ್ದನ್ನು ಪಡೆದುಕೊಳ್ಳಲು ಬಣ್ಣದ ಮಾತುಗಳನ್ನು ಆಡುವ ಮೂಲಕ ಪರಸ್ಪರರು ಕಳೆದು ಹೋಗಿಬಿಟ್ಟಿರುತ್ತಾರೆ. ತಮ್ಮ ತಮಗೆ ಬೇರೆ ಬೇರೆಯದ್ದೆ ಬದುಕಿದ್ದರೂ ಕೂಡ ಇಲ್ಲಿ ಪರಿಚಿತರಾದವರೇ ತಮ್ಮ ಇಡೀ ಬದುಕಿನ ಅವಿಭಾಜ್ಯ ಅಂಗವಾಗಿ ತಮ್ಮ ಸರ್ವಸ್ವವನ್ನು ಕೊಟ್ಟುಕೊಳ್ಳುವ ಒಬ್ಬರಿಗಾಗಿ ಇನ್ನೊಬ್ಬರು ಎಂಬಂತೆ ಬಿಂಬಿಸಿಕೊಂಡು ಆ ಭ್ರಮೆಯಲ್ಲಿ ತೇಲುತ್ತಿರುತ್ತಾರೆ. ಇವರ ಈ ಆಟಗಳು ಸಂಬಂಧಪಟ್ಟವರಿಗೆ ತಿಳಿದ ಕೂಡಲೇ ಅವರು ತಾಳ್ಮೆಯನ್ನು ಕಳೆದುಕೊಂಡು ಮಾನವೀಯತೆಯನ್ನು ಮರೆತು ಅಕ್ಷರಶಃ  ಮೃಗಗಳಾಗಿ ದಾಳಿ ಮಾಡಿ ದೌರ್ಜನ್ಯ ಮಾಡುತ್ತಾರೆ. ಇಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ ಗೋಜಲಿಗೆ ಯಾರು ಹೋಗುವುದಿಲ್ಲ. ಬದಲಾಗಿ ತಾವು ಕಂಡದ್ದೇ ಸತ್ಯ ಎಂದು ನಂಬಿ ಅದನ್ನೇ ಸಾಧಿಸಲು ಸಾಬೀತುಪಡಿಸಲು ಬೇಕಾದ ಎಲ್ಲ ಆಯಾಮಗಳನ್ನು ಬಳಸಿಕೊಂಡು ಕ್ರೌರ್ಯ ಹಿಂಸೆಗಳ ಮೊರೆ ಹೋಗಿ ಕಾನೂನನ್ನು ಕೈಗೆ ತೆಗೆದುಕೊಂಡು ಕೊನೆಗೆ ಈರ್ವರನ್ನು ನಾಶ ಮಾಡಿ ತಾವು ಕಾನೂನಿನ ಚೌಕಟ್ಟಿನಲ್ಲಿ ಬಂದ್ಯಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. 

    ಪ್ರಜ್ಞಾವಂತರದ ಪ್ರತಿಯೊಬ್ಬರು ಸಾಮಾಜಿಕ ಜಾಲತಾಣಗಳನ್ನು ತುಂಬಾ ಜವಾಬ್ದಾರಿಯಿಂದ ತಮಗೆಷ್ಟು ಬೇಕೋ ಅಷ್ಟಕ್ಕೆ ತಮ್ಮ ಜ್ಞಾನದ ವೃದ್ಧಿಗೆ ತಮ್ಮ ಏಳಿಗೆಗೆ ಬಳಸಿಕೊಂಡು ಅದರಿಂದ ಬದುಕನ್ನು ಹಸನು ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚಿಸಿದಾಗ ಮಾತ್ರ ಸಾಮಾಜಿಕ ಜಾಲತಾಣ ಒಂದು ಅಗಾಧ ಅವಕಾಶಗಳನ್ನು ತೆರೆದಿಡುತ್ತದೆ. ಯಾವುದೋ ಮೂಲೆಯಲ್ಲಿರುವ ನಾವು ಜಗತ್ತಿನ ಎಲ್ಲಾ ಜನರ ಅಂಗೈಮೇಲೆ ನಮ್ಮ ಸಾಧನೆಯನ್ನು ಪ್ರಚುರಪಡಿಸಿ ಅದರಿಂದ ನಮ್ಮ ನಮ್ಮ ಉನ್ನತಿಯನ್ನು ಕಂಡುಕೊಳ್ಳಬಹುದು. ಅದನ್ನು ಬಿಟ್ಟು ಇತರರ ಬದುಕಿನಲ್ಲಿ ಹೋಗಿ ಅದನ್ನು ಹಾಳು ಮಾಡುವ ಅದರಿಂದ ಪೈಶಾಚಿಕ ಖುಷಿಯನ್ನು ಅನುಭವಿಸುವ ದುರುಳತನವನ್ನು ಯಾರು ಮಾಡಬಾರದು. ಆದರೆ ಇಂದಿನ ಸಾಮಾಜಿಕ ಜಾಲತಾಣ ಮಾಧ್ಯಮವು ಒಳ್ಳೆಯದಕ್ಕಿಂತಲೂ ಕೆಟ್ಟದ್ದರಿಂದಾಗಿಯೇ ಹೆಚ್ಚು ಹೆಚ್ಚು ಪ್ರಚಲಿತದಲ್ಲಿದೆ. ಸಂಬಂಧ ಪಡೆದ ವಿಚಾರಗಳಿಂದಲೇ ಅದೆಷ್ಟೋ ಜೀವಹಾನಿ ಮಾನಹಾನಿ ಅಷ್ಟೇ ಅಲ್ಲ ಆಸ್ತಿಪಾಸ್ತಿಗಳ ಹಾನಿ ಉಂಟಾಗಿ ಇಡೀ ಸಮಾಜವೇ ನಿಬ್ಬೆರಗಾಗುವಂತೆ ಮಾಡುತ್ತಿರುವುದು ಇಂದಿನ ದುರಂತವೇ ಸರಿ. ಸಾಮಾಜಿಕ ಜಾಲತಾಣಗಳಲ್ಲಿ ಬಂದಿದ್ದುದೆಲ್ಲ ಸತ್ಯವೂ ಅಲ್ಲ ನಿತ್ಯವೂ ಅಲ್ಲ. ಅದನ್ನು ಪರಾಮರ್ಶಿಸುವ ಅದರ ಸತ್ಯಾಸತ್ಯತೆಗಳನ್ನು ಅರ್ಥ ಮಾಡಿಕೊಂಡು ತಮಗೆ ಎಷ್ಟಕ್ಕೆ ಬೇಕೋ ಅಷ್ಟನ್ನು ಮಾತ್ರ ಬಳಕೆ ಮಾಡಿಕೊಂಡಾಗ ಎಲ್ಲರ ಬದುಕು ಹಸನಾಗುತ್ತದೆ. ಇಲ್ಲದೆ ಹೋದರೆ ಬೇರೊಬ್ಬರ ಬದುಕಿನಲ್ಲಿ ಇಣುಕಿ ನೋಡುವ ಅವರ ಸ್ವಚ್ಛಂದ ಬದುಕನ್ನು ಕದಡುವ ಬೇಕೋ ಬೇಡವೋ ಅವರಿಗೆ ತೊಂದರೆ ಕೊಡುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಅದೆಷ್ಟೋ ಸ್ವಾರ್ಥಿಗಳ ಮಾತುಗಳಿಗೆ ಕಿವಿ ಕೊಡಬಾರದು. 

ಆಧುನಿಕ ಜಗತ್ತಿನ ಕ್ರಾಂತಿಯಾದ ಈ ಮಾಧ್ಯಮಗಳನ್ನು ಅತ್ಯಂತ ಎಚ್ಚರಿಕೆಯಿಂದ ಜವಾಬ್ದಾರಿಯಿಂದ ಅದರ ಸಂಪೂರ್ಣ ಆಗುಹೋಗುಗಳನ್ನು ಅರ್ಥ ಮಾಡಿಕೊಂಡು ಬದುಕು ರೂಪಿಸಿಕೊಳ್ಳುವ ವೇದಿಕೆಯನ್ನಾಗಿ ಮಾಡಿಕೊಳ್ಳುವ ಚಾಕ ಚಕ್ಯತೆ ಬಳಸುವ ಪ್ರತಿಯೊಬ್ಬರಲ್ಲೂ ಬರಬೇಕಾಗಿರುವುದು ಇಂದಿನ ಜರೂರಾಗಿದೆ. ಸೈಬರ್ ಅಪರಾಧಗಳು ಎಂಬ ಅಣೆಪಟ್ಟಿಗೆ ನಾವು ಕೊಡುಗೆ ನೀಡುವ ಬದಲು ಅಪರಾಧಗಳು ಮೊಳೆಕೆಯೊಡೆಯದಂತೆ ಬೆಳೆಯದಂತೆ ಬಳಕೆ ಮಾಡಿಕೊಂಡು ಇರುವ ಮೂರು ದಿನದ ಬದುಕನ್ನು ಸ್ವಚ್ಛಂದವಾಗಿ ಹರಿಯ ಬಿಡುವ ಬದಲು ಒಂದು ಬೇಲಿಯಲ್ಲಿ ಕಟ್ಟಿ ಹಾಕಿಕೊಂಡು ಗುರಿ ಮುಟ್ಟಿ ಸಾರ್ಥಕ ಜೀವನದ ಪಾಠವನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಜವಾಬ್ದಾರಿ ನಮ್ಮೆಲ್ಲರದಾಗಿರುತ್ತದೆ. ಬದುಕಿನ ಪ್ರೀತಿ ನಮ್ಮೆಲ್ಲರನ್ನು ವಾಸ್ತವದಲ್ಲಿ ಬದುಕಿಸಿ ಬೆಳೆಸಿ ಉಳಿಸುವ ಕೆಲಸ ಮಾಡಬೇಕು. ಭ್ರಮೆಯಲ್ಲಿ ತೇಲಿಸಿ ಮುಳುಗಿಸುವ ಇಂತಹ  ಮಾಧ್ಯಮಗಳಿಂದ ಆದಷ್ಟು ದೂರವಿದ್ದು ನಮ್ಮ ನಮ್ಮ ಬದುಕುಗಳನ್ನು ನಮ್ಮ ಹತ್ತಿರದವರ ನಮ್ಮ ಒಡನಾಡಿಗಳ ನಮಗೆ ಜೀವ ಕೊಟ್ಟವರ ನಮ್ಮ ಜೀವನದಲ್ಲಿ ನಮ್ಮನ್ನೇ ನಂಬಿಕೊಂಡು ಬಂದವರ ಸುಖ ಶಾಂತಿ, ನೆಮ್ಮದಿಗಾಗಿ ಅವರೇ ಹೇಳಿಗಾಗಿ ನಮ್ಮ ಬದುಕು ಅತ್ಯಂತ ಉಪಯುಕ್ತವಾಗಿ ಉಳಿಯುವಂತೆ ಮಾಡಿಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಆ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಿ ಯೋಚಿಸಿ ಪ್ರಜ್ಞಾ ಪೂರ್ವಕವಾಗಿ ಬಳಸುವ ಮೂಲಕ ಸಿಕ್ಕ ಮೂರು ದಿನದ ಬದುಕನ್ನು ಮುಕ್ಕಾಗಲು ಬಿಡದಂತೆ ಎತ್ತರಕ್ಕೆ ಕೊಂಡೊಯ್ಯುವ ಆಶಯದೊಂದಿಗೆ ನಾವೆಲ್ಲ ಬದುಕಿ ಬಾಳೋಣ.

1113ಪಿಎಂ11062024
*ಅಪ್ಪಾಜಿ ಅಮು ಮುಸ್ಟೂರು*

Monday, June 10, 2024

ದಾರಿ ದೂರ ಸವೆಯತಿಹುದು
ಒಲವ ಹಾದಿ ನೆರಳಲ್ಲಿ
ನನ್ನ ನಿನ್ನ ಬಂಧವಿದು
ಅನುಬಂಧವಾಯಿತು ಬಾಳಿನಲ್ಲಿ

ಎದೆಗೆ ಒರಗಿ ಕೂತರೆ
ಎಲ್ಲ ನೋವಿಗೆ ಆಸರೆ
ಪ್ರೀತಿಯ ಜೀವ ನೀನು ನನಗೆ
ಈ ಬಾಂಧವ್ಯ ಬೆಸೆದ ಬೆಸುಗೆ

ತೋಳುಗಳು ಬಳಸಿ ನಿಂತು
ಆಪ್ತವಾಗಿದೆ ಜೀವನ
ತೊಂದರೆಗಳೇನೇ ಬಂದರು
ಕಳಚಲಾರದು ಈ ಬಂಧನ

ಈ ಬದುಕಿಗೆ ಜೊತೆಯಾದೆ
ನನ್ನೊಲವಿನ ಕಥೆಯಾದೆ
ಅಂತರಂಗದ ಭಾವಗಳಿಗೆ
ಪ್ರತಿಬಿಂಬದ ರೂಪ ನೀನಾದೆ

ಹದವಾಗಿ ನೆನೆದ ಒಲವ ಭೂಮಿಗೆ
ಅನುರಾಗದ ಬೀಜ ಬಿತ್ತು ಬಾ
ಸುಖದ ಮಳೆಗರೆದು ಫಲಿಸಲಿ ಫಸಲು
ಒಲವ ಜೀವಗಳಿಲ್ಲಿ ಒಂದಾಗಿರಲು

ಎಲ್ಲೋ ಇದ್ದವರ ಸೇರಿಸಿದ ಬದುಕು
ಸಂತೃಪ್ತಿಯ ತಂದಿದೆ ಎಲ್ಲ ಕಾಲಕ್ಕೂ
ಸಂಗಾತಿ ನೀನಾಗಿ ಸಂಪ್ರೀತಿ ಹರಿಸಿದೆ
ಸಹಬಾಳ್ವೆಗೆ ಹೊಸ ಬಾಷ್ಯ ಬರೆದು

೦೫೪೬ಎಎಂ೨೮೦೪೨೦೨೪
*ಅಮು ಭಾವಜೀವಿ ಮುಸ್ಟೂರು*

ಮೂಡಣದ ಕೆಂಪಂತೆ
ತಂಗಾಳಿಯ ತಂಪಂತೆ
ಕೋಗಿಲೆಯ ದನಿ ಇಂಪಂತೆ
ಮನಕ್ಕೆ ಮುದ ನೀಡಿದೆ ನಿನ್ನ ನೆನಪು

ಮೊಗ್ಗು ಅರಳಿ ನಲಿವಾಗ
ತುಂಬಿ ಹಾಡಿಗೆ ತಲೆದೂಗಿ
ಆನಂದದ ಜೇನು ಇರುವಾಗ
ಹೃದಯ ಬಡಿತ ಹೆಚ್ಚಿಸಿತು ನಿನ್ನ ನೆನಪು

ಬಿರು ಬೇಸಿಗೆಯಲ್ಲಿ ನೆರಳಂತೆ
ಬಾಯಾರಿದ ಜೀವಕ್ಕೆ ಹನಿ ನೀರಂತೆ
ಸೋತ ಜೀವಕ್ಕೆ ಸ್ಪೂರ್ತಿ ತುಂಬುವಂತೆ
ಸದಾ ಜೀವ ಚೇತನ ನಿನ್ನ ನೆನಪು

ಹರಿಯುವ ನೀರ ಹೊಸತನ
ಗುಡುಗು ಮಿಂಚಿನ ಗೆಳೆತನ
ಮುಂಗಾರು ಮಳೆ ಸಿಂಚನ
ಎದೆಯ ತಣಿಸುವ ನಿನ್ನ ನೆನಪು

ಬಿಟ್ಟೆನೆಂದರೂ ಬಿಡದ ಸೋನೆಯಂತೆ
ದಟ್ಟಡವಿಯಲಿ ಸಾಗುವ ಹಾದಿಯಂತೆ
ಸದಾ ಬೆಳಗುತಿರುವ ನಂದಾದೀಪದಂತೆ
ಹೃದಯದ ಸಂವೇದನೆ ಈ ನಿನ್ನ ನೆನಪು

ಪ್ರೀತಿಯ ಹಂಬಲದಲ್ಲಿ ಬದುಕುವ
ಜೀವದ ಅನುಸಂಧಾನ ನಿನ್ನ ನೆನಪು
ವಶವಾದ ಎದೆಯ ಖುಷಿಯ
ಮಿದುವಾಗಿಸಿತು ಈ ನಿನ್ನ ನೆನಪು

೦೬೦೮ಎಎಂ೦೫೦೫೨೦೨೪
*ಅಮು ಭಾವಜೀವಿ ಮುಸ್ಟೂರು*

ದೂರುವವರು ದೂರುತಲೆ
ದೂರಬಿಟ್ಟರು ದಾರಿದ್ರ್ಯವಿದೆಯೆಂದು
ಹೃದಯದ ಭಾವಗಳ ಅವಮಾನಿಸಿ
ಎದೆಯ ನಂಬಿಕೆಗಳ ಚುಚ್ಚಿ ಕೊಂದರು

ಹೂವು ಅರಳಿದರೇನೇ ದುಂಬಿ ಬರುವುದು
ಸಕ್ಕರೆ ಚೆಲ್ಲಿದರೇನೇ ಇರುವೆ ಮುತ್ತುವುದು
ಬರಿ ಕೈಯಲ್ಲಿ ನೊಂದು ಬೆಂದವನೆದುರು
ಉಳ್ಳವರ ಅಟ್ಟಹಾಸ ಮಿತಿ ಮೀರುವುದು

ಎಡವಿ ಬಿದ್ದವನ ಎತ್ತದ ಜನ
ಚುಚ್ಚಿ ಚುಚ್ಚಿ ಮಾತನಾಡುವರು ದಿನ
ಮೆಚ್ಚುಗೆಯ ಮಾತಿಲ್ಲ ತುಚ್ಚಿಕರಿಸುವರು
ನೆಚ್ಚಿಕೊಂಡವರು ಹೆಜ್ಜೆ ದೂರ ಸರಿವರಾ ಕ್ಷಣ

ಬಡತನದ ಬೇಗೆಯಲ್ಲಿ ಬೆಂದು
ಚಿನ್ನವಾಗುವ ಹಂಬಲ ಸ್ವಾಭಿಮಾನದ್ದು
27 May 2024
ಆಡುವವರ ಮಾತುಗಳು ಅಡಕತ್ತರಿಯಲಿ ಸಿಕ್ಕಿದರೂ
ಎದ್ದು ಬಂದು ಗೆದ್ದು ತೋರುವ ಛಾತಿ ಬಡತನದ್ದು

ಆಡುವ ಒಂದೇ ಒಂದು ಮಾತು ತಪ್ಪಾಗುವುದು
ಬಡವನ ಗುಡಿಸಲ ಗೆದ್ದಲು ತಿನ್ನುವಂತೆ
ಆಡುವ ಮಾತುಗಳೆಲ್ಲ ಒಪ್ಪಿತವಾಗುವುದು
ಪ್ರಪಾತಕ್ಕೆ ಧುಮುಕುವ ಜಲಪಾತದಂತೆ

ಸೋತು ಬಿದ್ದಾಗ ಎತ್ತುವರು ಯಾರಿಲ್ಲ
ಹಣವೇ ಮಾನದಂಡ ಜನರಿಗೆಲ್ಲ
ದೂರವಿಟ್ಟರೇನಂತೆ ದಾರಿ ತಪ್ಪದೆ ನಡೆಯಬೇಕು
ನಕ್ಕವರೆದುರು ಗೆದ್ದು ನಿಂತು ತೋರಬೇಕು

10:36 ಪಿಎಂ 11052024
*ಅಮು ಭಾವಜೀವಿ ಮುಸ್ಟೂರು*




    

ಕವನ

ಎಡವಿ ಬಿದ್ದಿದೆ ಬದುಕು
ಕೈ ಹಿಡಿದು ಎತ್ತಲು ಯಾರಿಲ್ಲ
ಬಿದ್ದ ರಭಸಕ್ಕೆ ತುಂಬಾ ನೋವು
ಸಂತೈಸಲು ಯಾರಿಲ್ಲ ಅದು ಇನ್ನೂ ನೋವು

ನೋಡುತ್ತಾ ಓಡುವವರು ನಗುವಾಗ
ಅವಮಾನದಿಂದ ತಲೆ ತಗ್ಗಿಸುವುದೋ
ಸಾಂತ್ವನ ಹೇಳದ ಮೇಲೆ ನಗುವ
ಕುಹಕದ ಇರಿತ ಅತಿ ಘೋರ ಯಾತನೆ

ನಡೆಯುವವನು ಎಡುವುದು ಸಹಜ
ಬಿದ್ದದ್ದೇ ತಪ್ಪೆನ್ನುವ ಮನುಜ
ಸೋಲನ್ನು ಸಂಭ್ರಮಿಸುವರು
ಮನದ ವೇದನೆಗೆ ಮುಲಾಮು ಹಚ್ಚರು

ಬಿದ್ದವನಿಗೆ ಗೊತ್ತು ಎದ್ದು ನಿಲ್ಲುವ ತಾಕತ್ತು
ಯಾರು ಇಲ್ಲ ಎಂಬ ಸತ್ಯ ಅರಿವಾದಾಗ
ಕ್ಷಣ ನಿಮಿಷ ನಂತರ ಎದ್ದೇಳಲೇ ಬೇಕು
ಬಿದ್ದ ಜಾಗದಲ್ಲಿ ಇದ್ದುಬಿಡಲಾಗದಲ್ಲ

ಮಾನವೀಯತೆ ಮರೆತವರೆದುರು
ಮೌನವಾಗಿ ಯುದ್ಧ ಮಾಡಿ ಗೆಲ್ಲಬೇಕು
ಅವಮಾನಕಿಂತ ನೋವೆಲ್ಲಾ ಲೆಕ್ಕವಲ್ಲ
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು

1234ಪಿಎಂ16052024
*ಅಮು ಭಾವಜೀವಿ ಮುಸ್ಟೂರು*

ತುಮಕೂರು 

ಒಣಗಿ ನಿಂತ ಮರದಲಿ
ಗೂಡು ಹೇಗೆ ಕಟ್ಟಲಿ
ನೆರಳಿಲ್ಲದೆ ನರಳುತಿರುವೆ
ಬಿಸಿಲ ಬೇಗೆ ತಂದವರಾರೋ ?

ಹಿಂದೆ ಎಷ್ಟು ಹಸಿರಿತ್ತು
ಬುವಿಯಲ್ಲಿ ಕಾನನವೇ ತುಂಬಿತ್ತು
ನೆನೆದಾಗಲೆಲ್ಲ ಮಳೆ ಬರುತ್ತಿತ್ತು
ಈಗ ಬರೀ ಬಿಸಿಲೊಂದು ಉಳಿಯಿತು

ದಾರಿಹೋಕರು ದಣಿದು ಕುಳಿತು

ಎಲ್ಲೆಲ್ಲೂ ಹಚ್ಚ ಹಸಿರಿನ ಉಡುಗೆ ತೊಟ್ಟು
ಸಂಭ್ರಮಿಸುತಿಹಳು ಪ್ರಕೃತಿ ದೇವತೆ
ಮುಂಗಾರಿನಭಿಷೇಕಕ್ಕೆ ಪುಳಕಗೊಂಡು
ನಲಿಯುತಿಹಳು ಧರಣಿ ಮಾತೆ

ಬೇಸಿಗೆಯ ಉರಿತಾಪಕ್ಕೆ ನಲುಗಿ
ದಣಿದು ಕೂತಿದ್ದು ನಿಸರ್ಗದ ಮಡಿಲು


*ಹಾಯ್ಕು*

ಬಿಸಿಲು ಈಗ
ತಣ್ಣಗಾಯ್ತು; ಖುಷಿಯೋ
ಭೂಮಿ ಬದುಕು

ಮೊದಲ ಮಳೆ
ತಣಿಸಿತು;ಧರೆಯು
ಸಮೃದ್ಧ ತಾಣ

ಸುಮವರಳಿ
ದುಂಬಿ ದಂಡು; ಭ್ರಮಿಸಿ 
ಜೇನು ಹೀರಿತು

ಬಿರಿದ ನೆಲ
ಮೈದುಂಬಿ; ಹಸಿರುಟ್ಟ
ದಿನ ಹಬ್ಬವು 

ಬಿಸಿಲ ಭಯ
ಇನ್ನಿಲ್ಲ; ಭೂತಾಯಿಗೆ
ಮಳೆಯೊಸಗೆ

ಖಗಮೃಗಕೆ
ಬಾಯಾರಿಕೆ ಇನ್ನಿಲ್ಲ
ಸಂತೃಪ್ತ ಭಾವ

೧೨೨೭ಪಿಎಂ೧೯೦೫೨೦೨೪
*ಅಮು ಭಾವಜೀವಿ ಮುಸ್ಟೂರು*

ಕವನ

ಎಡವಿ ಬಿದ್ದಿದೆ ಬದುಕು
ಕೈ ಹಿಡಿದು ಎತ್ತಲು ಯಾರಿಲ್ಲ
ಬಿದ್ದ ರಭಸಕ್ಕೆ ತುಂಬಾ ನೋವು
ಸಂತೈಸಲು ಯಾರಿಲ್ಲ ಅದು ಇನ್ನೂ ನೋವು

ನೋಡುತ್ತಾ ಓಡುವವರು ನಗುವಾಗ
ಅವಮಾನದಿಂದ ತಲೆ ತಗ್ಗಿಸುವುದೋ
ಸಾಂತ್ವನ ಹೇಳದ ಮೇಲೆ ನಗುವ
ಕುಹಕದ ಇರಿತ ಅತಿ ಘೋರ ಯಾತನೆ

ನಡೆಯುವವನು ಎಡುವುದು ಸಹಜ
ಬಿದ್ದದ್ದೇ ತಪ್ಪೆನ್ನುವ ಮನುಜ
ಸೋಲನ್ನು ಸಂಭ್ರಮಿಸುವರು
ಮನದ ವೇದನೆಗೆ ಮುಲಾಮು ಹಚ್ಚರು

ಬಿದ್ದವನಿಗೆ ಗೊತ್ತು ಎದ್ದು ನಿಲ್ಲುವ ತಾಕತ್ತು
ಯಾರು ಇಲ್ಲ ಎಂಬ ಸತ್ಯ ಅರಿವಾದಾಗ
ಕ್ಷಣ ನಿಮಿಷ ನಂತರ ಎದ್ದೇಳಲೇ ಬೇಕು
ಬಿದ್ದ ಜಾಗದಲ್ಲಿ ಇದ್ದುಬಿಡಲಾಗದಲ್ಲ

ಮಾನವೀಯತೆ ಮರೆತವರೆದುರು
ಮೌನವಾಗಿ ಯುದ್ಧ ಮಾಡಿ ಗೆಲ್ಲಬೇಕು
ಅವಮಾನಕಿಂತ ನೋವೆಲ್ಲಾ ಲೆಕ್ಕವಲ್ಲ
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು

1234ಪಿಎಂ16052024
*ಅಮು ಭಾವಜೀವಿ ಮುಸ್ಟೂರು*

ತುಮಕೂರು 

ಒಣಗಿ ನಿಂತ ಮರದಲಿ
ಗೂಡು ಹೇಗೆ ಕಟ್ಟಲಿ
ನೆರಳಿಲ್ಲದೆ ನರಳುತಿರುವೆ
ಬಿಸಿಲ ಬೇಗೆ ತಂದವರಾರೋ ?

ಹಿಂದೆ ಎಷ್ಟು ಹಸಿರಿತ್ತು
ಬುವಿಯಲ್ಲಿ ಕಾನನವೇ ತುಂಬಿತ್ತು
ನೆನೆದಾಗಲೆಲ್ಲ ಮಳೆ ಬರುತ್ತಿತ್ತು
ಈಗ ಬರೀ ಬಿಸಿಲೊಂದು ಉಳಿಯಿತು

ದಾರಿಹೋಕರು ದಣಿದು ಕುಳಿತು

ಎಲ್ಲೆಲ್ಲೂ ಹಚ್ಚ ಹಸಿರಿನ ಉಡುಗೆ ತೊಟ್ಟು
ಸಂಭ್ರಮಿಸುತಿಹಳು ಪ್ರಕೃತಿ ದೇವತೆ
ಮುಂಗಾರಿನಭಿಷೇಕಕ್ಕೆ ಪುಳಕಗೊಂಡು
ನಲಿಯುತಿಹಳು ಧರಣಿ ಮಾತೆ

ಬೇಸಿಗೆಯ ಉರಿತಾಪಕ್ಕೆ ನಲುಗಿ
ದಣಿದು ಕೂತಿದ್ದು ನಿಸರ್ಗದ ಮಡಿಲು


*ಹಾಯ್ಕು*

ಬಿಸಿಲು ಈಗ
ತಣ್ಣಗಾಯ್ತು; ಖುಷಿಯೋ
ಭೂಮಿ ಬದುಕು

ಮೊದಲ ಮಳೆ
ತಣಿಸಿತು;ಧರೆಯು
ಸಮೃದ್ಧ ತಾಣ

ಸುಮವರಳಿ
ದುಂಬಿ ದಂಡು; ಭ್ರಮಿಸಿ 
ಜೇನು ಹೀರಿತು

ಬಿರಿದ ನೆಲ
ಮೈದುಂಬಿ; ಹಸಿರುಟ್ಟ
ದಿನ ಹಬ್ಬವು 

ಬಿಸಿಲ ಭಯ
ಇನ್ನಿಲ್ಲ; ಭೂತಾಯಿಗೆ
ಮಳೆಯೊಸಗೆ

ಖಗಮೃಗಕೆ
ಬಾಯಾರಿಕೆ ಇನ್ನಿಲ್ಲ
ಸಂತೃಪ್ತ ಭಾವ

೧೨೨೭ಪಿಎಂ೧೯೦೫೨೦೨೪
*ಅಮು ಭಾವಜೀವಿ ಮುಸ್ಟೂರು*

ಕc

ಎಡವಿ ಬಿದ್ದಿದೆ ಬದುಕು
ಕೈ ಹಿಡಿದು ಎತ್ತಲು ಯಾರಿಲ್ಲ
ಬಿದ್ದ ರಭಸಕ್ಕೆ ತುಂಬಾ ನೋವು
ಸಂತೈಸಲು ಯಾರಿಲ್ಲ ಅದು ಇನ್ನೂ ನೋವು

ನೋಡುತ್ತಾ ಓಡುವವರು ನಗುವಾಗ
ಅವಮಾನದಿಂದ ತಲೆ ತಗ್ಗಿಸುವುದೋ
ಸಾಂತ್ವನ ಹೇಳದ ಮೇಲೆ ನಗುವ
ಕುಹಕದ ಇರಿತ ಅತಿ ಘೋರ ಯಾತನೆ

ನಡೆಯುವವನು ಎಡುವುದು ಸಹಜ
ಬಿದ್ದದ್ದೇ ತಪ್ಪೆನ್ನುವ ಮನುಜ
ಸೋಲನ್ನು ಸಂಭ್ರಮಿಸುವರು
ಮನದ ವೇದನೆಗೆ ಮುಲಾಮು ಹಚ್ಚರು

ಬಿದ್ದವನಿಗೆ ಗೊತ್ತು ಎದ್ದು ನಿಲ್ಲುವ ತಾಕತ್ತು
ಯಾರು ಇಲ್ಲ ಎಂಬ ಸತ್ಯ ಅರಿವಾದಾಗ
ಕ್ಷಣ ನಿಮಿಷ ನಂತರ ಎದ್ದೇಳಲೇ ಬೇಕು
ಬಿದ್ದ ಜಾಗದಲ್ಲಿ ಇದ್ದುಬಿಡಲಾಗದಲ್ಲ

ಮಾನವೀಯತೆ ಮರೆತವರೆದುರು
ಮೌನವಾಗಿ ಯುದ್ಧ ಮಾಡಿ ಗೆಲ್ಲಬೇಕು
ಅವಮಾನಕಿಂತ ನೋವೆಲ್ಲಾ ಲೆಕ್ಕವಲ್ಲ
ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು

1234ಪಿಎಂ16052024
*ಅಮು ಭಾವಜೀವಿ ಮುಸ್ಟೂರು*

ತುಮಕೂರು 

ಒಣಗಿ ನಿಂತ ಮರದಲಿ
ಗೂಡು ಹೇಗೆ ಕಟ್ಟಲಿ
ನೆರಳಿಲ್ಲದೆ ನರಳುತಿರುವೆ
ಬಿಸಿಲ ಬೇಗೆ ತಂದವರಾರೋ ?

ಹಿಂದೆ ಎಷ್ಟು ಹಸಿರಿತ್ತು
ಬುವಿಯಲ್ಲಿ ಕಾನನವೇ ತುಂಬಿತ್ತು
ನೆನೆದಾಗಲೆಲ್ಲ ಮಳೆ ಬರುತ್ತಿತ್ತು
ಈಗ ಬರೀ ಬಿಸಿಲೊಂದು ಉಳಿಯಿತು

ದಾರಿಹೋಕರು ದಣಿದು ಕುಳಿತು

ಎಲ್ಲೆಲ್ಲೂ ಹಚ್ಚ ಹಸಿರಿನ ಉಡುಗೆ ತೊಟ್ಟು
ಸಂಭ್ರಮಿಸುತಿಹಳು ಪ್ರಕೃತಿ ದೇವತೆ
ಮುಂಗಾರಿನಭಿಷೇಕಕ್ಕೆ ಪುಳಕಗೊಂಡು
ನಲಿಯುತಿಹಳು ಧರಣಿ ಮಾತೆ

ಬೇಸಿಗೆಯ ಉರಿತಾಪಕ್ಕೆ ನಲುಗಿ
ದಣಿದು ಕೂತಿದ್ದು ನಿಸರ್ಗದ ಮಡಿಲು


*ಹಾಯ್ಕು*

ಬಿಸಿಲು ಈಗ
ತಣ್ಣಗಾಯ್ತು; ಖುಷಿಯೋ
ಭೂಮಿ ಬದುಕು

ಮೊದಲ ಮಳೆ
ತಣಿಸಿತು;ಧರೆಯು
ಸಮೃದ್ಧ ತಾಣ

ಸುಮವರಳಿ
ದುಂಬಿ ದಂಡು; ಭ್ರಮಿಸಿ 
ಜೇನು ಹೀರಿತು

ಬಿರಿದ ನೆಲ
ಮೈದುಂಬಿ; ಹಸಿರುಟ್ಟ
ದಿನ ಹಬ್ಬವು 

ಬಿಸಿಲ ಭಯ
ಇನ್ನಿಲ್ಲ; ಭೂತಾಯಿಗೆ
ಮಳೆಯೊಸಗೆ

ಖಗಮೃಗಕೆ
ಬಾಯಾರಿಕೆ ಇನ್ನಿಲ್ಲ
ಸಂತೃಪ್ತ ಭಾವ

೧೨೨೭ಪಿಎಂ೧೯೦೫೨೦೨೪
*ಅಮು ಭಾವಜೀವಿ ಮುಸ್ಟೂರು*

Friday, June 7, 2024

ಕವನ

#ಮರೆತೇ #ಬಿಡುವರು 

ಬಡವ ನಿನ್ನ ಹೆಸರ ಹೇಳಿಕೊಂಡು
ಅವರೆಲ್ಲ ತಮ್ಮ 
ಬಡತನವ ನೀಗಿಸಿಕೊಂಡು
ನಿನ್ನನ್ನು ಮರೆತೇಬಿಟ್ಟರು 
ಅಧಿಕಾರದ ಮದವೇರಿಸಿಕೊಂಡು

ಮತ್ತೊಮ್ಮೆ ನಿನ್ನ ನೆನಪಾಗುವುದು 
ಚುನಾವಣೆಯ ಹಿಂದೆ ಮುಂದೆ 
ಅಲ್ಲಿಯವರೆಗೂ ನಿನ್ನ ಕೂಳು
ನೀನೇ ದುಡಿದು ತಿನ್ನಬೇಕು 
ಬಿಸಿಲಾದರೇನು ಮಳೆ ಚಳಿಗಳ ಹಂಗು ತೊರೆದು 

ಮತ್ತೆ ನಿನ್ನೆದುರು ಬಂದು ಕೈಮುಗಿಯುವರು 
ಕಾಲಿಗೆ ಬಿದ್ದು ನಮಸ್ಕರಿಸುವರು 
ನೀ ಕೊಡುವ ಮತ ಬಿಕ್ಷೆ ಪಡೆದು ಮತ್ತೆ 
ಸುಲಿಗೆಗೆ ನಿಲ್ಲುವರು ನಿನ್ನದೇ ಹೆಸರೇಳಿಕೊಂಡು 

ರಾಜಕೀಯದ ದೊಂಬರಾಟದಲ್ಲಿ 
ಬಡವ ಬಡತನವೆಂಬ ದಾಳಗಳು 
ಉರುಳುತ್ತ ಉರುಳಿಸುತ್ತಾ ಕಾಯಿ ನಡೆದರೇನೇ
ಅವರ ಕಮಾಯಿ ಹೆಚ್ಚುವುದು ಖಜಾನೆ ಖಾಲಿಯಾಗುವುದು 

ಇಲ್ಲಿ ನಿಜ ಬಡವರಿಗಿಂತ 
ಬಡತನದ ಸೋಗಿನಲ್ಲಿರುವವರಿಗೆ 
ಎಲ್ಲವೂ ಸಿಕ್ಕುವುದು ದಕ್ಕುವುದು 
ಪ್ರಾಮಾಣಿಕರು ಇಲ್ಲಿ ಯಾರಿಲ್ಲ 
ಅಮಾಯಕರ ಯಾಮಾರಿಸುವವರೇ ಎಲ್ಲ

೧೦೩೬ಪಿಎಂ೦೭೦೬೨೦೨೪
#ಅಪ್ಪಾಜಿ #ಅಮು #ಮುಸ್ಟೂರು