Sunday, June 17, 2018

*ಭಾವವು ಅರಳಿ*

ಕಾರ್ಮೋಡ ಕವಿದು
ನೆನಪ ಸೋನೆ ಸುರಿದು
ಎದೆ ತಣಿಸಿದೆ ಮುಂಗಾರು

ಮಣ್ಣೊಳಗಿನ ಕನಸು
ಮೊಳಕೆಯೊಡೆಯಲು ಸೊಗಸು
ಬದುಕೆಲ್ಲವು ಹಸಿರುಮಯ

ಒಲವ ತಂಗಾಳಿ ತೀಡಿ
ಮನದ ಪೈರು ನಲಿದಾಡಿ
ಸಂಭ್ರಮಿಸಿದೆ ಹೃದಯ

ಭಾವಗಳ ಹೂವರಳಿ
ಕಲ್ಪನೆಯ ದುಂಬಿ ಬಂದು
ಕವಿತೆ ಹಾಡಿದೆ ಮನಸು

ಖುಷಿಯ ನದಿಯು ಉಕ್ಕಿ
ಸುಖದ ಸರೋವರ ತುಂಬಿ
ನೆಮ್ಮದಿಯ ತಾವರೆ ನಲಿದಿದೆ

ಬದುಕೊಂದು ಪ್ರಕೃತಿ ಧಾಮ
ಅದರ ಚೆಲುವೆ ನಮ್ಮ ಈ ಪ್ರೇಮ
ನೋವೆಂಬುದಿಲ್ಲ ಅನುಬಂಧಕೆ

0631ಪಿಎಂ10062018
*ಅಮು ಭಾವಜೀವಿ*
ಚಿತ್ರದುರ್ಗ

*ಅಮ್ಮನೆಂಬ ದೇವತೆ ಇರಲು*

ಅಮ್ಮನೆಂಬ ನೆರಳಿನ
ಅಡಿಯಲಿ ನಾನೊಂದು ಚಿಗುರು
ಈ ಬದುಕು ಕೊಟ್ಟ ದೇವತೆಗೆ
ನಾವಿಟ್ಟಿಹೆವು ಅಮ್ಮ ಎಂಬ ಹೆಸರು

ಎಲ್ಲಾ ನೋವು ತಾನೆ ನುಂಗಿ
ನಗುತಲಿರುವ ಮಗುವಿನಂಹವಳು
ತನ್ನ ಹಸಿವ ತೋರಗೊಡದೆ
ಎಲ್ಲರ ಹಸಿವ ನೀಗೋ ಅನ್ನಪೂರ್ಣೆ ಅವಳು

ಏನೇ ಕಷ್ಟ ಬಂದರೂ ಮೊದಲು
ನುಡಿವ ಮಾತೇ ಅಮ್ಮ
ಬೇಗ ಎದ್ದು ಕೊನೆಗೆ ಮಲಗುವ
ನಿಸ್ವಾರ್ಥದ ಕೆಲಸಗಾರ್ತಿ ಅಮ್ಮ

ಗಂಡ ಮನೆ ಮಕ್ಕಳನ್ನು
ಸಲಹುವ ಶಕ್ತಿಯೇ ಅಮ್ಮ
ಬಡತನವಿರಲಿ ಸಿರಿತನವಿರಲಿ
ಅವಳದೊಂದೇ ರೀತಿಯ ಪ್ರೇಮ

ಬೆಟ್ಟದಂತ ಕಷ್ಟವನ್ನು ಕರಗಿಸುವುದು
ಅಮ್ಮನೊಲುಮೆಯ ಮಡಿಲು
ಅವಳ ಪ್ರೀತಿಯ ವಿಸ್ತಾರ ಕಂಡು
ಚಿಕ್ಕದಾಯ್ತು ಆ ಮಹಾ ಕಡಲು

ಅಮ್ಮನಂತಹ ದೇವತೆ ಇರಲು
ಬೇರೆ ದೇವರ ಬೇಡುವುದೇಕೆ
ಅಮ್ಮನನ್ನೊಮ್ಮೆ ಖುಷಿ ಪಡಿಸಲು
ಸಾಕವಳಿಗೆ ಅದುವೆ ಕಾಣಿಕೆ

0519ಪಿಎಂ14052018

*ಅಮು ಭಾವಜೀವಿ*

*ಮುಂಗಾರಿನ ಸ್ಪರ್ಶಕೆ*

ಜಗವೇ ನಲಿಯುತಿದೆ
ಮುಂಗಾರಿನ ಸ್ಪರ್ಶಕೆ
ನದಿ ತೊರೆಗಳು ಉಕ್ಕುತಿವೆ
ಮಳೆ ಬಂದ ಹರ್ಷಕೆ

ಭೂತಾಯಿಯ ಒಡಲೀಗ
ಹಸಿರೊದ್ದು ಸಂಭ್ರಮಿಸಿದೆ
ಜಲಪಾತಗಳ ಆ ಸೌಂದರ್ಯಕೆ
ಇಲ್ಲಿ ಸಾಟಿ ಯಾವುದಿದೆ

ಉರಿ ಬಿಸಿಲು ಮರೆಯಾಗಿ
ತಣ್ಣನೆಯ ಗಾಳಿ ತೀಡಿ
ನವೋನ್ಮೇಶಶಾಲಿಯಾಗಿ
ಪ್ರಕೃತಿ ನಲಿದಿದೆ ನೋಡಿ

ಅಹಂಕಾರ ಅದಕಿಲ್ಲ
ಅಲಂಕಾರವೇ ಅದಕೆಲ್ಲ
ನಿಸರ್ಗದ ಮನೆಯಲ್ಲಿ
ಸ್ವರ್ಗಮಯ ಎಲ್ಲ

ಇಳೆ ಮಳೆಯ ಅನುಬಂಧ
ಸಕಲ ಜೀವಕೂ ಆನಂದ
ಮಳೆಯೇ ಬದುಕಿನ ಆಧಾರ
ಅದು ಇರಲಿ ಹೀಗೆ ನಿರಂತರ

0649ಎಎಂ12062018
*ಅಮು ಭಾವಜೀವಿ*
ಶಶಿ ವಸಂತ ಅವರ ಪ್ರತಿಕ್ರಿಯೆ

ಅಮು ಭಾವಜೀವಿ ಅವರ ಮುಂಗಾರಿನ ಸ್ಪರ್ಶಕೆ....
ಓದಿದ ತಕ್ಷಣ ನಮ್ಮಲಿಹ ಕೊಂಚ ಅಹಂ ಕೂಡ ನಾಚುವಂತ ಕವನ. ಬಹಳ ಸೊಗಸಾಗಿ ಬರೆದಿರುವಿರಿ.👌👌👌

ಪ್ರಕೃತಿಯಲಿ ನಿತ್ಯ ನಡೆಯುವ ಅನೇಕ ವಿಸ್ಮಯಗಳಿಗೆ ಯಾವ ಅಹಂಕಾರವೂ ಇಲ್ಲ.
ನಿಮ್ಮ ಭಾವ ಸುಂದರ.
ಶುಭವಾಗಲಿ🌷🌷🌷🌷

ಗಜಲ್

ಗಜಲ್

ಒಡಲ ವೇದನೆ ಕಡಲಾಗಿದೆ ನನ್ನೊಳಗೆ
ಮುಂಗಾರು ಸುರಿದರೂ ಬರವಿದೆ ನನ್ನೊಳಗೆ

ಎಲ್ಲ ಹಸಿರಾಗಿ ನಲಿಯುತಿರುವಾಗ
ಹಸಿವು ನೀಗದಾಗಿದೆ ನನ್ನೊಳಗೆ

ಒಂಟಿ ಹಕ್ಕಿ ಕೂಗುವ ಹಾಡು
ನೋವನ್ನು ಹೆಕ್ಕಿ ಹೆಕ್ಕಿ ತೆಗೆದಿದೆ ನನ್ನೊಳಗೆ

ಉಕ್ಕಿ ಹರಿಯುವ ನೀರಿನ ಪ್ರವಾಹಕೆ
ಉತ್ಸಾಹವೇ ಕೊಚ್ಚಿ ಹೋಗಿದೆ ನನ್ನೊಳಗೆ

ಅಮುವಿನ ಆತ್ಮವಿಶ್ವಾಸವನೇ
ಕಳೆದು ಶ್ವಾಸವಿರದಂತಾಗಿದೆ ನನ್ನೊಳಗೆ

1238ಪಿಎಂ12062018

*ಅಮು ಭಾವಜೀವಿ*


*ಹೇಗೆ ಸಾಗಲಿ ಮುಂದೆ*

ಇಂದೇಕೋ ಮನ ನೊಂದಿದೆ
ಬದುಕನ್ನೇ ಕಷ್ಟ ಎಂದಿದೆ

ಏಕೋ ಎಂದಿನ ಲವಲವಿಕೆ
ಇಂದು ಈ ಮನಕಿಲ್ಲ
ಸೋಲಿನ ಭೀತಿಯಲ್ಲಿಯೇ
ದಿನ ಪ್ರಾರಂಭವಾಯ್ತಲ್ಲ

ಹಂಗಿಸುವ ಮಾತುಗಳು
ಮತ್ತೆ ಮತ್ತೆ ಚುಚ್ಚುತಿವೆ
ಕಂಡ ಕನಸುಗಳ್ಯಾವವೂ
ನನಸಾಗದೇ ಸೊರಗಿವೆ

ಒತ್ತಡದ ಬದುಕಿನಲ್ಲಿ
ಸಡಗರವದು ಏಕಿಲ್ಲ
ಸಂಗಡಿಗರ ಪಿತೂರಿಗೆ
ಎದೆಬಡಿತವೇ ನಿಲ್ಲುವಂತಾಯ್ತಲ್ಲ

ಕರ್ತವ್ಯ ಜವಾಬ್ದಾರಿಗಳ
ಜಂಜಾಟದಲ್ಲಿ ನಗುವೇ ಮರೆತೋಯ್ತು
ನಡೆವ ಹಾದಿಯ ಏಳುಬೀಳು
ಜೀವನೋತ್ಸಾಹವನೇ ನುಂಗಿತು

ಹೇಗೆ ಸಾಗಲಿ ಮುಂದೆ ನಾನು
ಯಾರ ಬೆಂಬಲವಿಲ್ಲದೆ ಇನ್ನು
ಸೋಲುಗಳನೇ ಸವಾಲಾಗಿಸಿಕೊಳ್ಳಲೇ
ಸೋಲಿಗೆ ಬದುಕ ಸಮಾಪ್ತಿಗೊಳಿಸಲೇ

0842ಎಎಂ13062018

*ಅಮು ಭಾವಜೀವಿ*
ಚಿತ್ರದುರ್ಗ

[6/13, 5:04 PM] ‪+91 97408 27761‬: Haag madbedi sir, mumnuggi, mumde jayavide...👌👌👌👍🏻
[6/13, 5:06 PM] ‪+91 79758 35266‬: ಸೋಲು ಗೆಲುವಿನ ಸೋಪಾನ ವಾಗಬೇಕೆ ವಿನಹ ಸೋಲಿಗೆ ಶರಣಾಗಿ ಬದುಕು ಬಲಿಯಾಗಬಾರದು..
[6/13, 6:16 PM] ‪+91 79758 35266‬: ಪ್ರತಿ ಒಬ್ಬರಿಗು ಇರುತ್ತೆ ಸರ್ ಅದ್ನ ಹೆದರ್ಸ್ಬೇಕು.
[6/13, 6:17 PM] ‪+91 79758 35266‬: ಸತ್ತರೆ ಎಲ್ಲ ಪರಿಹಾರ ಸಿಗುತ್ತಾ. ಹೇಡಿ ಅಂತಾರೆ.. ಸೋ ಬಂದದ್ದೆಲ್ಲ ಬರಲಿ ಭಗವಂತನ ದಯೆ ಒಂದಿರಲಿ ಅಂತ ಮುನ್ನಡೆಯಿರಿ
[6/13, 6:31 PM] ‪+91 79758 35266‬: ಧನ್ಯವಾದಗಳು ಸರ್ ನಿಮ್ಮ ನಿರ್ಧಾರ ಬದಲಾಯಿಸಿ ಮತ್ತು ಭಾವನಾತಿತ ವಾಗಿ ಯೋಚಿಸಿ ನಿಮ್ಮನಂಬಿ ಇರೋ ಜೀವಗಳ ಬಗ್ಗೆ ಯೋಚನೆ ಮಾಡಿ.. ಮತ್ತು ದೃಢ ಸಂಕಲ್ಪ ಮಾಡಿ ಯಾವ ಕಷ್ಟ ಬಂದ್ರು ಕುಗ್ಗಲ್ಲ ಎನ್ ಬಂದ್ರು ಹೆದರಿಸ್ತೀನಿ ಮತ್ತು ಕಷ್ಟ ಗಳೇ ನನ್ನ ನೋಡಿ ದೂರ ಹೋಗುತ್ತೆ
[6/13, 6:34 PM] ಭುವನ ಬೈಲಹೊಂಗಲ: ಅಣ್ಣ ಏನಾಯ್ತು?
[6/13, 6:35 PM] ‪+91 90367 44678‬: ನಿಂದಕರಿರ ಬೇಕಯ್ಯ ನಿಂದಕರು ಹಂದಿಯಾಗೆ ಅಂತ ಹೇಳಿಲ್ವ ಸಾರ್, ನೀವು ನಗುನ ಬೇರೆ ಅವರ ಬಳಿ ಕೆಳೋಕಿಂತ, ನಿಮ್ಮಲ್ಲಿ ನಿಮ್ಮನೆಯವರಲ್ಲಿ ಹುಡುಕಿ. ಕಣ್ಣೀರು ಕಾಣದ ಕಣ್ಣಿಇದೆಯೇ, ನೆರಳು ನೀಡದ ಮರವಿದೆಯೇ
[6/13, 6:36 PM] ‪+91 90367 44678‬: Sir aagle Namma usiraatada pakvate namage gottagodu, samsyena solve maadokade hodaaga aduke oarihaara naavu samasye baggene yochane maadtidre adu innu doddadaagutte gaayada tara
[6/13, 6:39 PM] ‪+91 90367 44678‬: ಕುಲುಮೆಯಲ್ಲಿ ಬೆಂದಾಗಲೇ ಚಿನ್ನಕ್ಕೆ, ಕಬ್ಬಿಣಕ್ಕೆ ರೂಪ, ನೂರಾರು ಪೆಟ್ಟು ಬಿದ್ದರೇನೇ ಕಲ್ಲು ಕೂಡ ದೇವ, ಇನ್ನು ದೆವಾರನ್ನೇ ಕೆತ್ತುವ ಮಾನವ ತನ್ನ ತಾನು ಕೆತ್ತಿಕೋ ಬೇಕು ಎಷ್ಟೇ ಪೆಟ್ಟಾದರೂ
[6/13, 6:39 PM] ಭುವನ ಬೈಲಹೊಂಗಲ: ಆ ಒತ್ತಡ ಶಾಶ್ವತ ಅಲ್ಲ ಅಲ್ವಾ? ನಾನು ನಿಮ್ಮ ತರ ಯೋಚನೆ ಮಾಡಿದ್ದರೆ ಈ ದಿನ ನಿಮ್ಮ ತಂಗಿಯಾಗಿ ಇರ್ತಾ ಇರಲಿಲ್ಲ.ಮೋಡ ಸರಿದ ಮೇಲೆ ಸೂರ್ಯ ಹೊರಬರಲೇ ಬೇಕು.ನೀವು ಆ ಸೂರ್ಯನ ತರಹ
[6/13, 6:41 PM] ಭುವನ ಬೈಲಹೊಂಗಲ: ನಾವೆಲ್ಲರೂ ಯಾವತ್ತು ನಿಮ್ಮ ಜೊತೆ ಸದಾ ಇದ್ದೆವೆ.

[6/13, 5:28 PM] ಪರ್ವೀನ್ ತಾಜ್: ಸೂಪರ್ ಸರ್
[6/13, 5:28 PM] ಪರ್ವೀನ್ ತಾಜ್: ಕೊನೆಯ ಸಾಲು ಬದಲಾಯಿಸಿ ಸರ್
[6/13, 6:17 PM] ಪರ್ವೀನ್ ತಾಜ್: ಅದು ಎಲ್ಲರ ಜೀವನದಲ್ಲೂ ಇರುತ್ತೆ ಸರ್
ಬೇಜಾರು ಮಾಡಿಕೊಳ್ಳಬೇಡಿ
[6/13, 6:17 PM] ಪರ್ವೀನ್ ತಾಜ್: ಬೇಜಾರಾದಾಗ ಕವಿತೆ ಬರೆಯಿರಿ ಸರ್
[6/13, 6:17 PM] ಪರ್ವೀನ್ ತಾಜ್: ಮನಸ್ಸು ಪ್ರಶಾಂತವಾಗಿರುತ್ತೆ
[6/13, 7:08 PM] ಪರ್ವೀನ್ ತಾಜ್: ನನ್ನ ಬೆಂಬಲ ನಿಮಗೆ ಸದಾ ಇರುತ್ತೆ ಸರ್

ಕವನ

*ಎಣ್ಣೆ ಖಾಲಿಯಾದ ದೀಪ*

ಈ ಸಂಜೆ ಅದೇಕೋ ಕೆಂಪಾಗಿದೆ
ಅದೇನು ಬೇಸರವೋ ತಿಳಿಯದಾಗಿದೆ

ದಿನವೆಲ್ಲ ದುಡಿದು ದಣಿದು
ಮರಳುವಾಗ ಗೂಡಿಗೆ
ಇರುಳು ಆವರಿಸುವ
ಭಯವಿರುವುದೇನೋ ಅದಕೆ

ಹಗಲೆಲ್ಲ ಉರಿದ ಸೂರ್ಯನ
ಕೋಪ ಕೆಂಪಾಗಿ ಹರಡಿತೇನೋ
ಬಿರಿದ ಒಡಲಲ್ಲಿ ಎದ್ದ ಕೆಂಧೂಳು
ನಭಕೇರಿ ಹೀಗೆ ಕಂಡಿತೇನೋ

ಬುವಿಯ ಒಳಗೆ ಹಸಿರ ಕನಸಿದ್ದರೂ
ಕವಿವ ಕತ್ತಲೆಯ ಭೀತಿ ಮೂಡಿದೆ
ಚಿಗುರು ಮೂಡುವ ಮೊದಲೇ
ಹೆಸರು ಇರದೇ ಮರೆವು ಕಾಡಿದೆ

ನಿಸರ್ಗದ ನೀರವ ಮೌನ
ಮತ್ತೊಂದು ಹೊಸತಿಗಿರಬಹುದೇ ಧ್ಯಾನ
ಆದರೂ ಮುಸ್ಸಂಜೆಯ ಯಾನ
ಬೇಸರವು ಹಡೆದ ಕವನ

ಯಾರು ತಡೆವರೋ ಅದನು
ಏಕೆ ತಂದಿತೋ ಇದನು
ಬದುಕು ಈ ಸಂಜೆಯ ರೂಪ
ಚೇತನ ಎಣ್ಣೆ ಖಾಲಿಯಾದ ದೀಪ

0618ಪಿಎಂ13062018

*ಅಮು ಭಾವಜೀವಿ*

ಕವನ

*ಕವಿ ಕಳೆದು ಹೋಗಲು*

ಕಲ್ಪನೆಯ ಅಮಲೇರಿದಾಗ
ಭಾವದ ನಶೆಯಲ್ಲಿ ತೇಲಿ
ಕವಿ ಕಳೆದು ಹೋಗಲು
ಕವಿತೆಗಾಯ್ತು ಜನನ

ತಾ ಕಂಡ ಅನುಭವವ
ತನ್ನದೇ ಧಾಟಿಯಲಿ ಮಿಡಿವ
ಅತಿವೃಷ್ಟಿ ಅನಾವೃಷ್ಟಿ ಎಲ್ಲಕೂ
ಕವಿತೆ ಕಟ್ಟುವ ಸಮರ್ಥನೀತ

ಅವಳೊಲವಿನ ನಶೆಯೇರಲು
ಸೌಂದರ್ಯವೂ ನಾಚುವಂತೆ
ಪದಲಾಲಿತ್ಯದಿ ಸಿಂಗರಿಸುವ
ನಿಪುಣ ರಸಿಕ ಮಹಾಶಯನೀತ

ಕುಂಚದ ಚಿತ್ರಗಳಿಗೂ
ಶಿಲ್ಪದ ಭಾವಗಳಿಗೂ
ವರ್ಣನೆಯ ಮತ್ತಷ್ಟು
ಬಣ್ಣ ಬಳಿವ ಚಿತ್ರಕಾರನೀತ

ಎಲ್ಲ ನೋವುಗಳಿಗೆ ದನಿಯಾಗಿ
ಈ ಸೃಷ್ಟಿ ಸಂಭ್ರಮದ ಪ್ರತಿಧ್ವನಿಯಾಗಿ
ಎಲ್ಲ ತಲ್ಲಣಗಳ ತಳಮಳ ನಡುವೆಯೂ
ಭಾವದಿಬ್ಬಣ ಹೊರಟ ದಾರ್ಶನಿಕನೀತ

ಆಸ್ವಾದಿಸುವ ಮನಗಳೆದೆಯಲಿ
ಭಾವನಶೆಯೇರಿಸುವ ಪ್ರಚೋದಕನೀತ
ಅದಕೆ ಕಾವ್ಯಮಯ ಜಗವೆಲ್ಲ
ಕವಿಭಾವಕೆ ಕೊನೆಯಿಲ್ಲ

0857ಎಎಂ15062018

*ಅಮು ಭಾವಜೀವಿ*
ಚಿತ್ರದುರ್ಗ
ಉಮ ಒಡೆಯರ್ ಅವರ ಪ್ರತಿಕ್ರಿಯೆ

ವ್ಹಾ ಅದ್ಭುತವಾದ ರಚನೆ 👌👌👌👌👌💐💐💐💐
ವಿಶ್ವನಾಥ ಅವರ ಪ್ರತಿಕ್ರಿಯೆ

ಕವಿಯ ಸುಂದರವಾದಂತಹ ಬಾವನೆಗಳೆ ಕವಿತೆಗಳು

ಪ್ರೇಮಾರ್ಜುನ ಐರಣಿ ಅವರ ಪ್ರತಿಕ್ರಿಯೆ

ನಮಸ್ತೇ ಭಾವಜೀವಿ ಸರ್

ಕವಿಯ ಕಲ್ಪನೆಯನ್ನು ಸುಂದರವಾಗಿ ಚಿತ್ರಣ ಮಾಡಿದ್ದಿರಿ 👌👌👌

ಕವಿಗೆ ಕವಿತೆ ಬರೆಯುವ ಅಮಲು ಬಂದಾಗ ಮಾತ್ರ ರಸ ಭರಿತವಾದ ಕವಿತೆಗಳು ಹೊರ ಬರಲು ಸಾದ್ಯ
ಆವಗಲೆ ಕವಿತೆಗಳ ಜನನ👌👌👌

ಕವಿ ಪಟ್ಟ ಅನುಭವಗಳನ್ನು ಬರವಣಿಗೆ ಮೂಲಕ
ತಂದರೆ ಮುಂದಿನ ಪೀಳಿಗೆಗೆ ಸಹಕಾರಿ ಅಲ್ವಾ ಸರ್

ಕವಿಯಾದವರು ಹೇಗೆ ಬರೆಯಬೇಕು ಎಂಬುದನ್ನು ಸುಂದರವಾಗಿ ತಿಳಿಸಿಕೊಟ್ಟಿದ್ದಿರಿ ಸರ್ ಧನ್ಯವಾದಗಳು

🌹 *ಪ್ರೇಮಾರ್ಜುನ* 🌹

ಶೇಖ್ ಸರ್ ಅವರ ಪ್ರತಿಕ್ರಿಯೆ

ಕವಿಯನ್ನು ಕವಿಯಾಗಿ ಕವಿಗಳಿಗೆ  ಕಾವ್ಯ ರೂಪದಲ್ಲಿ ರೂಪಿಸಿ ತೋರಿಸಿದ್ದೀರಿ,
ಧನ್ಯವಾದಗಳು ಅಮುಭಾವಜೀವಿಯವರೆ...👌👌💐💐👍👍

ಗಿರೀಶ್ ಸಿ ಅವರ ಪ್ರತಿಕ್ರಿಯೆ
ಅಮು ಅವರ ಕಲ್ಪನೆಗೆ ಅವರೇ ಸಾಟಿ.. ಅದೂ ನಶೆಯಂತ ವಿಷಯ ಸಿಕ್ಕರೆ...😇😇.
ಕವನ ಸೂಪರ್ರಾಗಿದೆ. 👏👏👏

ಶಶಿರೇಖ ಮೇಡಂ ಅವರ ಪ್ರತಿಕ್ರಿಯೆ

ಕವಿತೆಯ ಅಮಲಲಿ ತೇಲಿ ಭಾವದ ನಶೆಯಲಿ ಮಿಂದು ಕವಿತೆಗೆ ಜನುಮ ನೀಡಿದ ಭಾವ ಸೂಪರ್ ಅಮು ಸರ್ ನಿಮ್ ಬರಹಗಳು ನಂಗ್ ತುಂಬಾ ಇಷ್ಟ ಆಗ್ತವೆ ಸರ್👌👌

ಚಂದ್ರು ನಿಟ್ಟೂರು ಅವರ ಪ್ರತಿಕ್ರಿಯೆ

*ನಶೆಯ ವಿಷಯಕ್ಕೆ ಅಮುಭಾವ ಜೀವಿ...ಹೀಗೆ ಬರೆಯುವರಲ್ಲ..ಇನ್ನೂ ನಶೆಯೇ ಏರಿದರೆ ಮತ್ತೇಗೆ ಬರೆಯಬಲ್ಲರು.....ಲೀಲಜಾಲ ಬರಹ..ಅಭಿನಂದನೆಗಳು*

ದೇವಿದಾಸ್ ಅವರ ಪ್ರತಿಕ್ರಿಯೆ

*ಅಮು ಸರ್* ಕವಿ ಕಳೆದು ಹೋಗಲು..ಕಲ್ಪನೆಯ ಅಮಲು ಎನ್ನುತ್ತ...ಕವಿಭಾವಕ್ಕೆ ಕೊನೆಯಿಲ್ಲ..ಎಂಬ ಸಾರವಿರುವ ಕವನ ಉತ್ತಮ ಸಾಲುಗಳನ್ನು ಹೊಂದಿದೆ.

🙏

ಶರಶ್ಚಂದ್ರ ಕುಪ್ಪಿಗುಡ್ಡರ ಅವರ ಪ್ರತಿಕ್ರಿಯೆ
ಕವಿಯ ಕಲ್ಪನೆಯು ಅದಮ್ಯವಿರುವ ಕುರಿತು ಚಿತ್ರಣ ಮೂಡಿಸಿದ್ದು,ಅತ್ಯಂತ ಕಾಳಜೀಯ ಕವಿತೆ.