Friday, February 10, 2023

ಕವನ

ಅರುಣ ಕಿರಣ ಸೂಸಲು
ತೆರೆಯಿತು ಹಗಲ ಬಾಗಿಲು
ಬಿರಿದ ಮೊಗ್ಗು ಅರಳುವ ಸಮಯ
ಅನಾವರಣಗೊಂಡಿತು ಜಗದ ವಿಸ್ಮಯ

ಚಿಲಿಪಿಲಿ ಕಲರವ ಗಾನ
ಎಲೆ ಮೇಲೆ ಇಬ್ಬನಿಯ ಕವನ
ಮೈದಡವಿದೆ ತಂಗಾಳಿಯ ಬೆರಳು
ಮೈಮುರಿದೆದ್ದವು ಮುದುಡಿದ ಮನಗಳು

ಹರಿವ ನೀರಿನ ಜುಳುಜುಳು ನಿನಾದ
ನೂರು ಭಾವ ಮೂಡಿಸಿತು ಮೌನ ಸಂವಾದ
ಕ್ಷಣ ಕ್ಷಣವೂ ಹೊಸತನ ತಂದಿತು
ನವೋನ್ಮೈಷಶಾಲಿ ಪ್ರಕೃತಿಯ ಸಂದೇಶ

ಮುಂಜಾನೆಯ ಹೂಬಿಸಿಲ ಹೊಂಗಿರಣ
ದಿನದಂಗಳದಿ ನಳನಳಿಸುವ ತೋರಣ
ದುಡಿಯುವ ಕೈಗಳಿಗೆ ಕೆಲಸವನಿತ್ತು
ತಂತು ಹಸಿದ ಹೊಟ್ಟೆಗೆ ಅನ್ನದ ತುತ್ತು

ಸೋಮಾರಿತನವ ದೂರ ತಳ್ಳಿ
ಶ್ರಮದ ಬದುಕಿನ ಪಾಠ ಹೇಳಿ
ದಿನದ ಅವಕಾಶವ ನೀಡಿದ
ದಿನಕರನೆಂಬ ಮಹಾಬೋಧಕ

0೬೩೭ಎಎಂ೧೧೦೨೨೦೨೩
*ಅಮುಭಾವಜೀವಿ ಮುಸ್ಟೂರು*

No comments:

Post a Comment