Thursday, November 30, 2023

ಲೇಖನ

*ಸಂಜೆ ಎಂಬ ವಿಸ್ಮಯ*

ಈ ಸಂಜೆ ಪ್ರಕೃತಿಯ ಒಂದು ವಿಸ್ಮಯ. ಹಗಲೆಲ್ಲ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿಕೊಂಡು ದಣಿದು ತಮ್ಮ ತಮ್ಮ ಗೂಡುಗಳನ್ನು ಸೇರುವ ಧಾವಂತದಲ್ಲಿದ್ದರೆ, ಧನ್ಯವಾದಗಳಿಗೆ ಭಾಜನನಾದ ಸೂರ್ಯನೂ ಕೂಡ ತನ್ನ ಕೆಲಸ ಮುಗಿಸಿ ಹೊರಡುವ ವೇಳೆ. 
  ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ಹೊಂಬಣ್ಣದ ಆಗಸದ ರಂಗೆಲ್ಲ ಮರೆಯಾಗಿ ಕತ್ತಲೆಯು ಆವರಿಸಿ ಎಲ್ಲ ಜೀವಿಗಳು ವಿಶ್ರಾಂತಿ ಪಡೆಯುವ ಸಲುವಾಗಿ ವಿರಮಿಸುತ್ತವೆ. ಈ ಸಂಜೆ ಇರುವುದು ಕೇವಲ ಸ್ವಲ್ಪ ಹೊತ್ತು ಮಾತ್ರ. ಅಷ್ಟರಲ್ಲಿ ಇಡೀ ಆಕಾಶ ಹರೆಯದ ಪೋರಿ ನಾಚುವಂತೆ ಕೆಂಪಾಗಿ, ಹಕ್ಕಿಗಳ ಕಲರವ ಮುಗಿಲು ಮುಟ್ಟಿ, ತಾಯಿಯನರಸುತ್ತ ಕರು ಓಡೋಡಿ ಬಂದು ಕೆಚ್ಚಲಿಗೆ ಬಾಯಿ ಹಾಕಿ ನೊರೆಯುಕ್ಕುವಂತೆ ಹಾಲು ಕುಡಿವಾಗ  ಸಂಭ್ರಮಕೆ ಎಣೆಯುಂಟೇ?!. ಹಿಂಡಿನಲಿ ಹೋಗಿದ್ದ ಕುರಿಯ ದಂಡು ಹಟ್ಟಿಯ ಬಳಿ ಬರುತ್ತಿದ್ದಂತೆ ಬೆಳಿಗ್ಗೆಯಿಂದ ಹಟ್ಟಿಯಲೇ ಇದ್ದ ಮರಿಗಳೆಲ್ಲ ತನ್ನ ತಾಯಿಯ ಹುಡುಕಲೂ ಅರಚುತ್ತ ಬರುವಾಗ ಅಷ್ಟೊಂದು ಮರಿಗಳಲ್ಲಿ ತನ್ನ ಮರಿಯನ್ನು ಹುಡುಕಿಕೊಳ್ಳಲು ತಾಯಿ ಪರದಾಡುವ ರೀತಿ , ತನ್ನ ಮರಿ ಸಿಕ್ಕ ಸಂಭ್ರಮದಲ್ಲಿ ಸಂತೃಪ್ತಿಯಿಂದ ಹಾಲನುಣಿಸುವ ಪರಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಹೊಟ್ಟೆ ತುಂಬಿದ ಖುಷಿಯಲ್ಲಿ ಕಿವಿನಿಮಿರಿಸಿ ಚಂಗನೆ ನೆಗೆದು ಹಾರಿ ಕುಣಿದು ಕುಪ್ಪಳಿಸುತ್ತಾ ಖುಷಿ ಪಡುವ ಸನ್ನಿವೇಶ ಮನುಜನಿಗಿಲ್ಲ. 

    ಇಂದು ಮನುಷ್ಯ ಪ್ರಕೃತಿಯಿಂದ ದೂರವಾಗಿ ತನ್ನದೇ ಕೃತಕ ವರ್ತುಲಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಇಲ್ಲಿ ಅವನಿಗೆ ಸಂಪಾದನೆಯ ಆಮಿಷ ಸಂತೋಷ, ಸಂಭ್ರಮಗಳನ್ನು ಅನೂಭವಿಸಲೂ ಆಗದಷ್ಟು ತೊಡಗಿಸಿಬಿಟ್ಟಿದೆ. ಹಗಲು ರಾತ್ರಿಗಳ ಪರಿವೇ ಇಲ್ಲದಂತೆ ದೂಡಿಯುತ್ತಿದ್ದಾನೆ. ಮುಂಜಾನೆ ಮುಸ್ಸಂಜೆಗಳ ಚೆಲುವನ್ನು ಆಸ್ವಾದಿಸಲಾಗದಷ್ಟು ಬಿಜಿಯಾಗಿಬಿಟ್ಟಿದ್ದಾನೆ. ತನ್ನವರಿಗಾಗಿ ಸಮಯ ಮೀಸಲಿಡಲಾಗದೆ ಏಕಾಂಗಿಯಗಿ ದುಡಿಮೆಯ ದಾಸನಾಗಿಬಿಟ್ಟಿದ್ದಾನೆ. ಮನುಷ ತಾಂತ್ರಿಕವಾಗಿ ಮುಂದುವರೆದಂತೆಲ್ಲ ಪ್ರಕೃತಿಯಿಂದ ತನ್ನ ಸಂಬಂಧವನ್ನು ಕಳಚಿಕೊಂಡು ಯಂತ್ರಗಳ ಗುಲಾಮನಾಗಿ ಭಾವನಗಳೇ ಇಲ್ಲದಂತೆ ಬದುಕುತ್ತಿದ್ದಾನೆ. 

   ಈ ಸಂಜೆಯಾಗುತ್ತಲೇ ಮರಗಿಡಬಳ್ಳಿಯ ಎಲೆಗಳು ಮುದುಡಿ ಮರಳುತ್ತವೆ. ಚಂದ್ರನ ಬೆಳದಿಂಗಳಲಿ ತಾರೆಗಳ ಹೊಳಪಿನಲಿ ಇರುಳೆಂಬುದು ವಿಶ್ರಾಂತಿಯ ಜೊತೆಗೆ ಜೀವಚೈತನ್ಯವನ್ನು ನೀಡುತ್ತದೆ. ದಣಿದ ಶ್ರಮವೆಲ್ಲವೂ ಮುಂಜಾನೆ ವೇಳೆಗೆ ಕಳೆದು ಮತ್ತೊಂದು ಹೊಸತನದ ಮಹಾ ಸಂಭ್ರಮಕೆ ನಾಂದಿ ಹಾಕುತ್ತದೆ. ಪ್ರಕೃತಿಯ ಈ ಗಡಿಯಾರ ಕ್ಷಣವೂ ಏರುಪೇರಾಗಂತೆ ನಡೆದುಕೊಂಡು ಬರುತ್ತದೆ. ಅದರೊಂದಿಗೆ ನೆಡೆಯುವ ಪ್ರತಿಯೊಂದು ಜೀವವೂ ಸಂತೃಪ್ತಿಯಿಂದ ಬದುಕುತ್ತವೆ. ಮಾನವ ಮಾತ್ರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ದುಡಿಮೆ ಮತ್ತು ವಿಶ್ರಾಂತಿಗಳ ಅಸಮತೋಲನದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಅನುಭವಿಸಿ ಅನೇಕ ಖಾಯಿಲೆಗಳಿಗೆ ತುತ್ತಾಗಿ ನರಳುತಿದ್ದಾನೆ. ಯಾಂತ್ರಿಕ ಗಡಿಯಾರದ ನಾಗಾಲೋಟದಲ್ಲಿ ಜೈವಿಕ ಗಡಿಯಾರದ ದಿಕ್ಕು ತಪ್ಪಿಸಿ ಅನೇಕ ಅನರ್ಥಗಳಿಗೆ ಎಡೆಮಾಡಿಕೊಟ್ಟಿದ್ದಾನೆ. ಅವನ ಜೀವನ ಶೈಲಿ ಪ್ರಕೃತಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಮನುಜ ಮತ್ತು ಇತರೆ ಜೀವಸಂಕುಲದ ನಡುವೆ ಅಂತರ ಸೃಷ್ಟಿಯಾಗಿ ನಿತ್ಯ ಸಂಘರ್ಷ ಏರ್ಪಡುತ್ತಿದೆ. ಮಾನಸಿಕ ನೆಮ್ಮದಿ ದೈಹಿಕ ಆರೋಗ್ಯ ಎರಡೂ ಇಲ್ಲದೆ ಪರಿತಪಿಸುತ್ತಿದ್ದಾನೆ. 

  ಒಟ್ಟಿನಲ್ಲಿ ಪ್ರಕೃತಿಯ ಸಹಜ ಬೆಳವಣಿಗೆಯೊಂದಿಗೆ ಬದುಕುತ್ತ ಅದು ನೀಡುವ ಆಹ್ಲಾದಕರ ವಾತಾವರಣದಲ್ಲಿ ತನ್ಮಯನಾಗಿ ಭಾಗಿಯಾಗಿ ಬದುಕನ್ನು ನಿಜಕ್ಕೂ ಅರ್ಥಪೂರ್ಣ ಸಂತೃಪ್ತ ಭಾವದಲ್ಲಿ ಆಸ್ವಾದಿಸಿದಾಗ ಮಾತ್ರ ಬದುಕು ಸುಂದರವಾಗಿರುತ್ತದೆ. 

0624ಪಿಎಂ01122018
*ಅಮುಭಾವಜೀವಿ ಮುಸ್ಟೂರು*

Saturday, November 25, 2023

ಕವನ

ನಾನಲ್ಲ , ಬರೀ ಭಾವಜೀವಿ!!!

ಎದೆಯ ಭಾವಗಳ ಹಡೆದು
ಮನದ ನೋವುಗಳ ನೆನೆದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ನೂರು ನೆನಪುಗಳ ಸವಿದು
ಸೂರು ಕಾಣದೆ ನೊಂದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!

ಅಕ್ಕರೆಯ ಮಾತುಗಳಿಗೆ ಹಂಬಲಿಸಿ
ಬಿಕ್ಕುವ ಭಾವನೆಗಳ ಹೆಕ್ಕಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಕನಿಕರದ ಹೃದಯವೇ ಪಡೆದು
ಮುನಿಸಿರದ ಮೌನದ ಕುರಿತು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!

ಕಂಡ ಕಷ್ಟಗಳ ಸರಮಾಲೆ
ಸಹಿಸಿ ಪಡೆದ ಅನುಭವದಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಚಂದ ನಿಸರ್ಗದ ಚೆಲುವಿಗೆ
ಮನಸೋತು ಕುಣಿ ಕುಣಿದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!

ಅಕ್ಷರಗಳ ಸಾಕ್ಷಾತ್ಕಾರದಲ್ಲಿ
ಪ್ರೀತಿಯ ಪುರಸ್ಕಾರ ಬಯಸಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ನಿನ್ನೆ ನಾಳೆಗಳ ಪಯಣದಲಿ
ಇದ್ದು ಹೋಗಲು ಬಂದವ ನಾನು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!

೦೪೧೧ಪಿಎಂ೦೭೧೧೨೦೨೩
*ಅಮುಭಾವಜೀವಿ ಮುಸ್ಟೂರು*
[11/9, 10:16 AM] +91 94493 36793: ನಮಸ್ತೆ, ನಾನು ಕವಿಯಲ್ಲ, ಭಾವಜೀವಿ ಅಷ್ಟೇ, ಎನ್ನುವ ಮನದ ಸೂಪ್ತ ಚೇತನದ ಪದಗುಚ್ಛದ ಅಕ್ಷರ ದಾಸೋಹವನನ್ನೇ ಬಡಿಸಿ ಕವನದ ಮೆರುಗನ್ನು ನೀಡಿದ್ದೀರಿ, ಅಭಿನಂದನೆ



*ಬರದ ತನಗ*

ಮಳೆ ಬರದೆ ಬರ
ಜಗವಾಗಿ ತತ್ತರ
ಜೀವನವೇ ದುಸ್ತರ
ಇನ್ನಿಲ್ಲ ಆ ಚಿತ್ತಾರ

ಕೆರೆ ಪಳೆಯುಳಿಕೆ
ಬಾಯಾರಿ ಬಿಕ್ಕಳಿಕೆ
ಏನಿಲ್ಲ ಹೆಗ್ಗಳಿಕೆ
ಬಿಸಿಲ ಬಾಯಾರಿಕೆ

ಒಣಗಿದ ಬೆಳೆಯು
ಕಿಡಿಸೋಕಿ ಸುಟ್ಟಾಯ್ತು
ಹಿಡಿ ಕಾಳು ಬೇಡಲು
ಸುಡುಗಾಡ ಕಾವಲು

ಗುಟುಕು ನೀರಿಲ್ಲಿಲ್ಲ
ಕುಟುಕು ಜೀವವಿಲ್ಲ
ಕಟುಕ ಬರಗಾಲ
ಸಂಕಷ್ಟ ಕಳಿಲಿಲ್ಲ

ಬಂಜೆ ಮೋಡದ ಗರ್ಭ
ಸಂಜೆ ಮಳೆ ತರ್ಲಿಲ್ಲ
ಬರಿದು ಬದುಕಲಿ
ನೆಮ್ಮದಿಯು ಇನ್ನೆಲ್ಲಿ

೦೯೧೪ಪಿಎಂ೦೭೧೧೨೦೨೩
*ಅಮುಭಾವಜೀವಿ ಮುಸ್ಟೂರು*

ಏಕೆ ಬಿಟ್ಟು ಹೋದೆ ಪ್ರಭುವೇ
ಮೊರೆಯನೇಕೆ ಕೇಳಿದಿರುವೆ

ದಟ್ಟ ಕಾನನದಲಿ ಒಂಟಿ ಬಿಟ್ಟು ಹೋದೆ
ಹೀಗೆ ಮಾಡುವಂತ ಪಾಪ ನಾನೇನು ಮಾಡಿದೆ
ಕೂಗಿ ಕರೆಯಲು ಧ್ವನಿ ಮೊದಲಿಲ್ಲ
ಅಳುವ ಶಕ್ತಿ ನನ್ನೊಳಗೆ ಕೊಂದಿದೆಯಲ್ಲ
ದಾರಿ ತೋರಲು ಬೇಗ ಬಾ ಗುರುವೇ
ನಿನ್ನ ಕಂದನಾ ರೋದನೆ ಕೇಳುತ್ತಿಲ್ಲವೇ

ನೀ ತೋರಿದ ದಾರಿಯಲ್ಲಿ ನಾ ನಡೆದು ಬಂದೆ
ಇದ್ದಲ್ಲೇ ಅಳಿದುಳಿದೆ ಯಾಕಯ್ಯ ತಂದೆ
ಕರುಣೆ ಬಾರದೆ ನನ್ನ ಕಂಬನಿಧಾರೆ ಕಂಡು
ಕರಪಿಡಿದು ನನ್ನನೆತ್ತಿಕೊ ಕಂದ ಎಂದು
ಸಾಕಯ್ಯ ನನಗೀ ಭವದ ಬಂಧನ
ನೀಡಯ್ಯ ಮಲಗುವೆ ನಿನ್ನ ಮಡಿಲನ್ನ
 
ಕಷ್ಟಗಳ ಕ್ರೂರ ಮೃಗಗಳು ಕಾದು ಕುಳಿತಿವೆ
ಜೀವವಿದು ಬಾಯಿಗೆ ಬಂದು ನರಳುತ್ತಿದೆ
ಹುಲ್ಲು ಕಡ್ಡಿಯ ಆಸರೆಯೊಂದ ಕಾಣದೆ
ಕಲ್ಲಾಗಿ ಕುಳಿತೆ ಏಕೆ ನನ್ನ ಕಾಪಾಡದೆ
ನಾ ಬೇಡುವ ಪರಿ ಸಾಲದಾಯಿತೆ
ನನಗೆ ಕಷ್ಟ ಕೊಡುವುದೇ ನಿನಗಿಷ್ಟವಾಯಿತೆ

೦೬೫೬ಎಎಂ೦೮೧೧೨೦೨೩
ಅಮುಭಾವಜೀವಿ ಮುಸ್ಟೂರು 

ಬದಲಾಗದಿರು ಸಖ ನೀ ಎಂದೆಂದಿಗೂ 

ಜೀವ ವೀಣೆ ಮಿಡಿವ ಭಾವ
ನೀನೆ ನಲ್ಲ ಎಂದೆಂದಿಗೂ
ನಿನ್ನನೇ ನಂಬಿ ಬಂದಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ 

ಕಣ್ಣು ಕಣ್ಣು ಕಲೆತ ಭಾವ
ಹೃದಯ ತಂತಿ ಮೀಟುವ
ಒಲವ ಬಯಸುತಲಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ 

ಹೆತ್ತವರ ಬಿಟ್ಟು ಬಂದೆ ನಿನ್ನೊಂದಿಗೆ
ಒಡನಾಡಿಗಳ ಒಡನಾಟ ತೊರೆದಿರುವೆ
ನೀನೇ ನನಗೆಲ್ಲವೆಂದು ಬಾಳುತಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ 

ಒಡಲೊಳಗೆ ಬಯಕೆ ಮೊಳೆತು
ಎದೆಯೊಳಗೆ ನಿನ್ನ ರೂಪ ನಿಂತು
ಬಾಳಿನಾಸರೆ ನೀನೆಂದು ನಂಬಿಹೆ
ಬದಲಾಗದಿರು ಸಖ ನೀ ಎಂದೆಂದಿಗೂ 

ನಿನ್ನೆಗಳ ನಾ ಹೇಗೋ ಕಳೆದೆ
ನಾಳೆಗಳು ಹೇಗೋ ಗೊತ್ತಿಲ್ಲ
ಇಂದಿನ ಖುಷಿ ನಿನ್ನ ಕೈಲಿದೆ
ಬದಲಾಗದಿರು ಸಖ ನೀ ಎಂದೆಂದಿಗೂ 

ಜೀವವಿರುವವರೆಗೆ ನೀನೇ ನಲ್ಲ
ನೀನಲ್ಲದೆ ಬೇರೇನೂ ಬೇಕಿಲ್ಲ
ಉಸಿರೊಂದಿಗೆ ಉಸಿರಾಗಿ ಬೆರೆತಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ 

೦೭೫೩ಪಿಎಂ೦೮೧೧೨೦೨೩
*ಅಮುಭಾವಜೀವಿ ಮುಸ್ಟೂರು*
[11/9, 4:08 PM] +91 94493 36793: ನಮಸ್ತೆ, ನನ್ನ ಬಾಳಿಗೆ ನಿನ್ನ ಸರ್ವಸ್ವವೇ ಬಿಟ್ಟು , ನನ್ನ ಜೀವನದ ಕಣ್ಣು,ಮನದ ಹೊನ್ನು, ಇವೆಲ್ಲವೂ ನಿನ್ನದೇ ಎನ್ನುವ ಮೂಲಕ ಕವನದ ಚೆಂದದ ಸಾಲುಗಳು, ಅಭಿನಂದನೆ
[11/9, 4:32 PM] +91 94493 36793: ನಮಸ್ತೆ, ಎಲ್ಲರನ್ನೂ ಬಿಟ್ಟು ನಿನ್ನಲ್ಲಿ ಗೆ ಬಂದಿರುವೆ, ಅಂದು-ಇಂದು ನಿನ್ನಲ್ಲಿಯೇ ಇದೆಯೆಂದು ಕವನ ದಾಖಲಿಸಿದೆ, ಅಭಿನಂದನೆ
*ತನಗ*

ಯುದ್ದದ ಕರಾಳತೆ
ಹಿಂಸೆಯ ಅಟ್ಟಹಾಸ
ರಕ್ತ ಪಿಪಾಸು ಅದು
ಬೇಕಿಲ್ಲ ಮಂದಹಾಸ

೦೧೩೬ಪಿಎಂ೦೯೧೧೨೦೨೩
*ಅಮುಭಾವಜೀವಿ ಮುಸ್ಟೂರು* .

*ತನಗ*

ಯುದ್ದ ರಕ್ಕಸಿ ದಾಹ
ಜೀವಹರಣ ಮೋಹ
ಕರುಣೆ ತೋರಲಿಲ್ಲ
ಉನ್ಮತ್ತರ ವ್ಯಾಮೋಹ

೦೨೪೦ಪಿಎಂ೦೯೧೧೨೦೨೩
*ಅಮುಭಾವಜೀವಿ ಮುಸ್ಟೂರು*

ನೀ ನನ್ನ ಬೆಳಕಲ್ಲ ಬಿರುಗಾಳಿ 

ಮೆತ್ತಿದ ಮಂಜಿನ ಹನಿ ಕರಗಿ
ಭರವಸೆ ಬತ್ತಿ ಹೋಗಿವೆ
ನಂಬಿಕೆ ದ್ರೋಹದ ಸುಳಿ
ಬಾಳ ಕತ್ತಲಿಗೆ ತಳ್ಳಿಯಾಯ್ತು

ನೀ ನನ್ನ ಬೆಳಕಲ್ಲ ಬಿರುಗಾಳಿ
ಆ ಬಿರುಸಿಗೆ ಸಿಕ್ಕು ಬರಿದಾದೆ
ಹಣತೆ ಹಚ್ಚುವೆ ಎಂದುಕೊಂಡಿದ್ದೆ
ಕಾಡ್ಗಿಚ್ಚಿಗೆ ಸಿಕ್ಕು ಬೆಂದು ಹೋದೆ

ಬಳಿ ಬಂದೆ ಬೆಳದಿಂಗಳಂತೆ
ಸುಳಿಯಂತೆ ಪಾತಾಳಕೆ ತಳ್ಳಿದೆ
ತೀರದಲಿ ವಿರಮಿಸುವಾಸೆಗೆ
ಸುನಾಮಿಯಂತೆರಗಿ ಆಘಾತ ನೀಡಿದೆ

ಒಲವ ದೀಪಾವಳಿ ಹಬ್ಬದಿ
ಬಿರುಸಾಗಿ ಆರ್ಭಟಿಸಿ ಭಸ್ಮಗೈದೆ
ದೀಪ ದೀಪವ ಬೆಳಗುವ ಮೊದಲೆ
ನಂದುವ ಆತಂಕ ತಂದೊಡ್ಡಿದೆ

ಬೆಳಕ ಬಯಸಿ ಬಂದವಳು
ಪತಂಗದಂತೆ ರೆಕ್ಕೆ ಸುಟ್ಟು ಕೊಂಡೆ
ಬಾನಿಗೆ ಹಾರುವ ಭ್ರಮೆಯಲ್ಲಿ
ಆಸರೆ ಕಾಣದೆ ಕಂಗಾಲಾದೆ

ಬೇಡ ಬಿಡು ಇನಿಯ
ನಮ್ಮಂತೆ ನಡೆಯದು ಸಮಯ
ಸೇರದ ತೀರದ ಬಾಳು ನಮ್ಮದು
ಇನ್ನು ಒಲವ ಗೂಡು ಸೇರದು

೦೭೪೩ಪಿಎಂ೦೯೧೧೨೦೨೨
*ಅಮುಭಾವಜೀವಿ ಮುಸ್ಟೂರು*

ಹೂಬನ

ಎದೆಯ ಹೊಲದಲ್ಲಿ
ಭಾವಗಳು ಅರಳಿ
ಒಲವ ಹೂಬನವು
ನಳನಳಿಸಿಹುದು

ಯುದ್ಧಗಳು 

ಮನುಕುಲದ ನಾಶ
ಯುದ್ಧದ ಈ ಉನ್ಮಾದ
ನರ ರಕ್ತ  ಪಿಪಾಸು
ಮದವೇರಿದ ಜನ



ಹೂಬನ

ಎದೆಯ ಹೊಲ
ಹಸಿರು ಸಿರಿಯಲ್ಲಿ
ಹೂಬನದಂತೆ
ನಳನಳಿಸುತ್ತಿದೆ

ಕಾಯುವ ಕರುಣೆ

ಬಳಲಿ ಜೀವ
ಅಳಿದುಳಿದ ಭಾವ
ಬೊಗಸೆ ಜಾರಿ
ಕಾಯುವ ಕರುಣೆಯ
ಹಂಬಲದ ಭಿಕ್ಷುಕ

ಯುದ್ಧಗಳು

ನರ ಮಾನವ
ಯುದ್ಧೋನ್ಮಾದದಿ ಕುದ್ದು
ರಕ್ತ ಮಜ್ಜನ
ನಿಲ್ಲದ ಹಿಂಸೆ ನಿತ್ಯ
ಸಾವಿನ ಸರದಾರ

ಭಯದ ಕಾರ್ಮೋಡ

ನಿಂತಲ್ಲೇ ನೆಲ
ಕುಸಿವ ವೇಳೆಯಲ್ಲಿ
ಭಯದ ಕಾರ್ಮೋಡವು
ನೆಮ್ಮದಿಯ ಕಸಿದು
ಕೈಚೆಲ್ಲಿದೆ ಬಯಕೆ
೧೦೧೨ಪಿಎಂ೦೯೧೧೨೦೨೩
ಅಮುಭಾವಜೀವಿ ಮುಸ್ಟೂರು
ಶಿಕ್ಷಕರು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ


ಸಿರಿಯ ನಾ ಬೇಡಲಿಲ್ಲ 

ಎಡವಿ ಬಿದ್ದಿದೆ ಬದುಕು
ದಡ ಸೇರುವೆ ಅಭಯ ನೀಡು
ಬರುವ ಸಂಕಷ್ಟ ನೂರಿರಲಿ
ಎದುರಿಸುವ ಶಕ್ತಿ ಕೊಡು

ಬಡತನದ ಬೇಗೆಯಲಿ ಬೆಂದಿರುವೆ
ಸಿರಿಯ ನಾ ಎಂದು ನಿನ್ನ ಬೇಡಲಿಲ್ಲ
ಖುಷಿಯ ಕಳೆದುಕೊಂಡು ಬಳಲಿರುವೆ
ಆಸರೆಯ ಬಯಸಿಹೆ ಸಿಗದೇ ಹೋಯ್ತಲ್ಲ

ಬಂಧುಗಳೆಲ್ಲ ಕೈ ಬಿಟ್ಟು ಹೋದರು
ಬಾಳಲಿ ನನ್ನವರೆಂಬುವರಾರಿಲ್ಲ
ನನ್ನದೆನ್ನುವುದೆಲ್ಲ ಇಲ್ಲದೆ ಹೋದರೂ
ಗೆಲ್ಲುವ ಭರವಸೆಯ ಕಳೆದುಕೊಂಡಿಲ್ಲ

ಒಂಟಿ ಪಯಣದ ಹಾದಿಯಲ್ಲಿ
ನಂಬಿಕೆಯ ನಿಟ್ಟುಸಿರು ಬಿಟ್ಟು
ಹಂಬಲಿಸುತಿರುವೆ ಬಾಳಲಿ
ಯಶಸ್ಸು ಸಾಧಿಸುವ ಛಲದಿ

ಬಲವ ಕೊಡು ಎದ್ದು ನಿಲ್ಲಲು
ಗೆಲುವು ಕೊಡು ಜಗಕೆ ಸಾರಿ ಹೇಳಲು
ಸಿರಿಯ ಬೇಡುವುದಿಲ್ಲ ಹರಿಯೇ
ಗುರಿಯೆಡೆಗೆ ನನ್ನ ನಡೆಸಿಬಿಡು

೦೯೫೪ಪಿಎಂ೧೦೧೧೨೦೨೩
*ಅಮುಭಾವಜೀವಿ ಮುಸ್ಟೂರು*

ಅಮಾವಾಸ್ಯೆಯ ಕತ್ತಲಲ್ಲಿ

ಬಾಳ ದಾರಿಯಲ್ಲಿ
ಚಂದ್ರನ ತೇರಿನಲ್ಲಿ
ಒಲವಿನ ಜೋಡಿ ನಾವು
ಕಾಣುವ ಬಿಂಬದಲ್ಲಿ
ಕಣ್ಣಿನ ರೆಪ್ಪೆಯಂತೆ
ನಾ ಕಾಯುವೆ ಇರಲಿ ವಿಶ್ವಾಸವು

ಅಮಾವಾಸ್ಯೆಯ ಕತ್ತಲಲ್ಲಿ
ಕಣ್ಬೆಳಕಾಗಿ ಉಳಿಯುವೆ
ಬಾಳ ದಡ ಸೇರಲು
ಹುಣ್ಣಿಮೆಯ ರಾತ್ರಿಯಲ್ಲಿ
ಉಕ್ಕೋ ಸಾಗರಕೆ ತೀರವಾಗುವೆ
ಒಲವ ಅಮೃತ ನಿನಗೆ ಕುಡಿಸಲು

ಹೂವಂತೆ ನೀನು ಬಾಳಲಿ
ದುಂಬಿಯಂತೆ ನಾ ನಿನ್ನ ಜೊತೆಯಲ್ಲಿ
ಮಧು ಹೀರುವೆ ಹದ ಪ್ರೀತಿಯಲ್ಲಿ
ಧಾವಂತದ ಈ ಬದುಕಿನಲ್ಲಿ
ಏಕಾಂತದ ಈ ಸಮಯದಲ್ಲಿ
ಸುಖಾಂತದ ಒಲವ ಬೇಡುವೆ ನಿಲ್ಲಿ

ಕೈ ಮೇಲೆ ಕೈ ಇಟ್ಟು ಆಣೆ ಮಾಡು
ಎಂದೆಂದೂ ನಿನ್ನವನಾಗಿರುವೆ ನೋಡು
ಜಗಕ್ಕೆ ಮಾದರಿಯಾಗದೆ ನಮ್ಮೀ ಪಾಡು
ಚಂದಿರನೂರಲಿ ಕಟ್ಟೋಣ ಪುಟ್ಟಗೂಡು
ಸದಾ ಬೆಳಕಾಗಿರಲಿ ಬೆಳದಿಂಗಳ ಮಾಡು
ಎಲ್ಲ ಮರೆತು ಹಾಯಾಗಿ ಗುನುಗೋಣ ಹಾಡು

0532ಪಿಎಂ೧೧೧೧೨೦೨೩
*ಅಮುಭಾವಜೀವಿ ಮುಸ್ಟೂರು*

ಕನ್ನಡ ಕವನ ಸಂಚಲನ ಬಳಗದ ಸ್ಪರ್ಧೆಗಾಗಿ

ವಿಷಯ:- *ದೀಪದಿಂದ ದೀಪವ ಹಚ್ಚುವ ದೀಪಾವಳಿ*

ಶೀರ್ಷಿಕೆ :- *ದಾರಿದೀಪ*

ಕತ್ತಲಿಂದ ಬೆಳಕಿನೆಡೆಗೆ
ಸಾಗಬೇಕು ನಮ್ಮ ನಡಿಗೆ

ಸಾಲು ದೀಪಗಳ ಸಂಸಾರ
ಎಣ್ಣೆ ಬತ್ತಿಗಳೇ ಅದಕಾಧಾರ
ದೀಪದಿಂದ ದೀಪ ಹಚ್ಚುವ
ಸಂಸ್ಕಾರವೇ ಬೆಳಕಿನ ದೀಪಾವಳಿ

ಒಂದು ಸಣ್ಣ ಹಣತೆ
ಕೋಣೆಯ ಕತ್ತಲೆ ಕಳೆಯುವುದು
ಜ್ಞಾನದ ಜ್ಯೋತಿ ಮನದ
ಅಜ್ಞಾನವ ತೊಳೆಯುವುದು

ಯಾರೂ ಇಲ್ಲಿ ಪರಿಪೂರ್ಣರಿಲ್ಲ
ಒಬ್ಬರಿಗೊಬ್ಬರು ಇಲ್ಲಿ ದಾರಿದೀಪ
ಜ್ಯೋತಿ ಬೆಳಗೋ ಪ್ರೀತಿ ಬೇಕು
ಕಳೆಯಲು ಮನದ ದ್ವೇಷದ ಶಾಪ

ಸ್ನೇಹದ ಎಣ್ಣೆ ಬೇಕು
ಪ್ರೀತಿಯ ಬತ್ತಿ ಸಾಕು
ಅನುಬಂಧದ ಹಣತೆ ಬೆಳಗಲು
ಅಂತರಂಗ ಬೆಳಕಾಗಲು

ಬಾಳ ಕತ್ತಲಿಗೆ ಹಣತೆ ಹಚ್ಚಿ
ಒಬ್ಬರ ಮುಖ ಒಬ್ಬರು ನೋಡೋಣ
ಒಲವಿನ ಪ್ರಣತಿ ಬೆಳಗುವ ತನಕ
ಬಾಳ ಪಯಣ ಸವೆಸೋಣ

೦೮೧೨ಪಿಎಂ೧೨೧೧೨೦೨೩
*ಅಮುಭಾವಜೀವಿ ಮುಸ್ಟೂರು*


ಮಗುವಾಗಿ ನಿನ್ನ ಕೈ ತುತ್ತು ತಿನ್ನುವಾಸೆ ಇನಿಯ 

ಒಂದು ಅಪರೂಪದ ಬಂಧ
ನನ್ನ ನಿನ್ನ ಈ ಸಂಬಂಧ
ಹೂವೊಳಗೆ ಸೇರಿದಂತೆ ಮಕರಂದ
ಬಡತನದೊಳಗೂ ಒಲವಿದೆ
ಆ ಪ್ರೀತಿಯ ನೆರಳಲಿ ಬಾಳಿದೆ
ಜೇನಾಗುವ ಸವಿದು ಸೌಗಂಧ

ಸಿರಿಯ ಬೇಡುವುದಿಲ್ಲ ಬಾಳಲಿ
ನಿನ್ನೊಲವೊಂದು ಸಾಕು ನನಗೆ
ಮಗುವಾಗಿ ನಿನ್ನ ಕೈ ತುತ್ತು ತಿನ್ನುವಾಸೆ ಇನಿಯ 
ಎದೆಯ ಭಾವಗಳ ಗೊಂಚಲು
ನಲ್ಲ ನಿನ್ನ ಈ ಚಂದದ ಮಡಿಲು
ಸಿರಿವಂತಿಕೆ ಬೇಡದ ಒಲವೇ ವಿಸ್ಮಯ

ಜೊತೆ ಜೊತೆಯಲಿ ಸಾಗಲಿ ಜೀವನ
ನಗುನಗುತ ಬಾಳಾಗಲಿ ಹೂಬನ
ಅದರಲಿ ನೀ ತುಂಬಿದೆ ಒಲವ ಹೂರಣ
ಅನುದಿನ ಹಿತ ತರಲಿ ಆಲಿಂಗನ
ಅನುಕ್ಷಣವೂ ಆಪ್ಯಾಯಮಾನ
ನಿನ್ನ ಬಾಳಿಗೆ ನಾನಾಗುವೆ ತೋರಣ

ಬಡತನವಿಲ್ಲ ನಿನ್ನೊಲುಮೆಯಲಿ 
ಶ್ರೀಮಂತಿಕೆ ಬೇಕಿಲ್ಲ ಬಾಳಿನಲಿ
ಗಂಜಿ ಕುಡಿದರೂ ನಂಜಿಲ್ಲ ಅದರಲಿ
ಪ್ರೀತಿಯ ಕೈ ತುತ್ತು ಬಾಳ ಸಂಪತ್ತು
ಸಂಗಾತಿ ನೀ ತೋರಿದೆ ಸಂಪ್ರೀತಿ
ಸಂತೃಪ್ತೆ ನಾ ನಿನ್ನ ಒಲವ ಸುಧೆಯಲಿ

೦೭೪೨ಪಿಎಂ೧೩೧೧೨೦೨೩
*ಅಮುಭಾವಜೀವಿ ಮುಸ್ಟೂರು*










ಹಚ್ಚಿದ ಹಣತೆ ಬೆಳಕಿನಲ್ಲಿ ಹೊಸತು ಕರೆಯಬಾರದೇ ಇಂದು 

ಲೇಖನ

*ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಭಾಗಿದಾರರ ಪಾತ್ರ*

ಮಕ್ಕಳು ಮನುಕುಲದ ಕುಸುಮಗಳು, ಅವುಗಳನ್ನು ಪ್ರೀತಿಯಿಂದ ಪೋಷಿಸಬೇಕು, ಮನಸ್ಸು ನಿಷ್ಕಲ್ಮಶ ಬಿಳಿ ವಸ್ತ್ರದಂತೆ ಅಲ್ಲಿ ನಕಾರಾತ್ಮಕತೆಯ ಕರಿ ಛಾಯೆ ಮೂಡದಂತೆ ಎಚ್ಚರ ವಹಿಸಬೇಕು. ಮಕ್ಕಳ ವ್ಯಕ್ತಿತ್ವ ಗೋಡೆಗೆ ಎಸೆದ ಚಂಡಿನಂತೆ. ಅದಕ್ಕೆ ನಾವೇನನ್ನು ತುಂಬುತ್ತೇವೆಯೋ ಪಲಿತಾಂಶವನ್ನು ಕೊಡುತ್ತದೆ. ಯಾವ ಮಗು ಬಲಹೀನವಲ್ಲ ಯಾವ ಮಗು ನಿಷ್ಪ್ರಯೋಜಕವಲ್ಲ. ಹಿರಿಯರ ನಡೆ ನುಡಿಗಳು ಮಗುವಿನ ಮನಸ್ಸಿನಲ್ಲಿ ಪ್ರತಿಫಲನಗೊಂಡು ಸಾಕ್ಷಾತ್ಕಾರಗೊಳ್ಳುತ್ತದೆ. ಹಾಗಾಗಿ ನಾವು ಮಕ್ಕಳ ಮುಂದೆ ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ತಂದೆ ತಾಯಿ ಮತ್ತು ಗುರುಗಳ ಮಾರ್ಗದರ್ಶನ ಮಕ್ಕಳಿಗೆ ಅತಿ ಅವಶ್ಯಕ. ಈ ಮೂರು ಸ್ಥರಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಹಾದಿ ತಪ್ಪುತ್ತದೆ. ತಂದೆ ತಾಯಿ ಮತ್ತು ಗುರುಗಳನ್ನು ಹಿಂಬಾಲಿಸುತ್ತದೆ. ಮಗುವಿಗೆ ಈ ಮೂವರ ಮಾತು ಭೇದ ವಾಕ್ಯ.

ಮಗು ಗೆಳೆಯರೊಂದಿಗೆ ಆಟಿಕೆಗಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಯಾರೊಂದಿಗೆ ಬೆರೆಯುತ್ತಾರೆ ಯಾವ ವಸ್ತುಗಳೊಂದಿಗೆ ಆಡುತ್ತಾರೆ ಎಂಬುದನ್ನು ಗಮನಿಸಬೇಕು. ವ್ಯಕ್ತಿ ಮತ್ತು ಒಳ್ಳೆಯ ವಸ್ತುಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗುತ್ತವೆ. ಹಂತದಲ್ಲಿ ಮಕ್ಕಳಿಗೆ ಒತ್ತಾಯದ ಓದಿಗಿಂತ ಆಸಕ್ತಿಯನ್ನು ಕೆರಳಿಸುವಂತಹ ವಿಚಾರಗಳ ಪುಸ್ತಕಗಳನ್ನು ಓದಲು ಮಾರ್ಗದರ್ಶನ ಮಾಡಬೇಕು ಹಾಗೂ ಕಲಿತದ್ದನ್ನು ಓದಿದ್ದನ್ನು ಗೆಳೆಯರೊಂದಿಗೆ ಹಂಚಿಕೊಂಡು ಅವರನ್ನು ಸಹ ತನ್ನ ಓದಿನ ಅನುಭವವನ್ನು ಇಮ್ಮಡಿಗೊಳಿಸುವಂತಹ ವಾತಾವರಣವನ್ನು ಮಗು ಸೃಷ್ಟಿ ಮಾಡಿಕೊಳ್ಳಲು ಪ್ರೇರೇಪಿಸಬೇಕು. ಮಗು ಕೇಳುತ್ತದೆ ಎಂದು ಎಲ್ಲವನ್ನೂ ಖರೀದಿಸಿ ಕೊಡುವ ಗೀಳಿಗೆ ಬೀಳಬಾರದು. ಆ ವಸ್ತುವಿನ ಮೌಲ್ಯ ಗೊತ್ತಾಗಬೇಕೆಂದರೆ ಅದನ್ನು ಪಡೆಯುವ ಕಷ್ಟವೂ ಆ ಮಗುವಿಗೆ ಗೊತ್ತಿರಬೇಕು ಆಗ ಆ ವಸ್ತುಗಳನ್ನು ಅತ್ಯಂತ ಜಾಗರೂಕತೆಯಿಂದ ಅಷ್ಟೇ ಆಸ್ತೆಯಿಂದ ಕಾಪಾಡಿಕೊಂಡು ಬರುತ್ತದೆ. ಕೇಳಿದ್ದನ್ನೆಲ್ಲ ಕೊಡಿಸುವ ಬದಲು ಅವಶ್ಯಕತೆ ವಾಗಿರುವುದನ್ನು ಮಾತ್ರ ಮಕ್ಕಳಿಗೆ ಕೊಡಿಸಬೇಕು.

   ಮಕ್ಕಳಿಗೆ ಮೌಲ್ಯಗಳ ಪರಿಚಯವಾಗಬೇಕು. ನೈತಿಕ ಮೌಲ್ಯಗಳನ್ನು ಎಳವೆಯಿಂದಲೇ ಅದರ ಮನಸ್ಸಿನೊಳಗೆ ಬಿತ್ತಬೇಕು. ಮೌಲ್ಯಗಳನ್ನು ಬಿತ್ತುವ ಜನರ ವ್ಯಕ್ತಿತ್ವ ಸಹ ಮೌಲ್ಯಯುತವಾಗಿರಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಆದರೆ ಮಗುವಿನ ಮನಸ್ಸಿನಲ್ಲಿ ಗೊಂದಲ ಉಂಟಾಗಿ ಅದು ಬೇರೊಂದು ಹಾದಿ ಹಿಡಿಯುವ ಪ್ರಮೇಯ ಬರುತ್ತದೆ. ಅದನ್ನೇ ಆದರೂ ಮಕ್ಕಳಿಗೆ ಒತ್ತಾಯ ಪೂರಕವಾಗಿ ತುರುಕುವ ಬದಲು ಮಗುವಿನ ಆಸಕ್ತಿಗನುಗುಣವಾದ ಮೌಲ್ಯಗಳನ್ನು ತಿಳಿಸುತ್ತಾ ಹೋಗಬೇಕು. ಕೆಲವು ಮಕ್ಕಳು ಸೌಮ್ಯವಾಗಿರುತ್ತವೆ ಇನ್ನೂ ಕೆಲವು ಮಕ್ಕಳು ಅಸಹಜವಾಗಿ ವರ್ತಿಸುತ್ತಿರುತ್ತವೆ. ಸಂದರ್ಭದಲ್ಲಿ ಮಕ್ಕಳನ್ನು ತಾರತಮ್ಯ ಮಾಡದೆ ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಒಳ್ಳೆಯ ಮಕ್ಕಳು ಕೆಟ್ಟ ಮಕ್ಕಳು ಎಂದು ಬೇರ್ಪಡಿಸಿ ಆ ಕೀಳರಿಮೆ ಮನಸ್ಸಿನಲ್ಲಿ ಬೇರೂರುವಂತೆ ಮಾಡುವ ಬದಲು ಒಳ್ಳೆಯವರನ್ನು ಹೊಗಳದೇ ಕೆಟ್ಟವರನ್ನು ತೆಗಳದೇ ಆಯಾ ಸನ್ನಿವೇಶಕ್ಕೆ ತಕ್ಕಂತೆ ಮಕ್ಕಳಲ್ಲಿ ನೈತಿಕ ಮೌಲ್ಯಗಳ ತಿಳುವಳಿಕೆ ನೀಡುವ ಮೂಲಕ ಅವರ ವ್ಯಕ್ತಿತ್ವದಲ್ಲಿ ಆಗಬಹುದಾದ ಆ ಬದಲಾವಣೆಗಳನ್ನು ಸರಿದಾರಿಯಲ್ಲಿ ಮುನ್ನಡೆಸುವ ಚಾಣಾಕ್ಷತೆ ಅವರನ್ನು ಮಾರ್ಗದರ್ಶಿಸುವವರಲ್ಲಿ ಇರಬೇಕಾಗುತ್ತದೆ.

ಮನೆಯಲ್ಲಿ ತಂದೆ ತಾಯಿಗಳು ಶಾಲೆಯಲ್ಲಿ ಶಿಕ್ಷಕರು ಸಮಾಜದಲ್ಲಿ ಹಿರಿಯರು ಪ್ರತಿಯೊಂದು ಮಗುವಿನ ಚಲನವಲನಗಳ ಬಗ್ಗೆ ಗಮನಹರಿಸಿ ಯಾವ ಮಗುವಿಗೆ ಯಾವ ರೀತಿಯ ಮಾರ್ಗದರ್ಶನ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಅದನ್ನು ಪೂರೈಸಲು ಆಗುತ್ತದೆ ಶ್ರಮಿಸಬೇಕಾಗುತ್ತದೆ. ನಮ್ಮಗಳ ಕಾರ್ಯದೊತ್ತಡದಿಂದಾಗಿ ಮಕ್ಕಳನ್ನು ನಿರ್ಲಕ್ಷಿಸುವ ಅವರಿಗಾಗಿ ಸಮಯ ಮೀಸಲಿಡುವ ಪ್ರಕ್ರಿಯೆಯಿಂದ ಹಿಂದೆ ಸರಿಯಬಾರದು. ಇದರಿಂದ ಮಗು ತನಗೆ ಅವಶ್ಯಕತೆ ಇರುವಾಗ ಅದನ್ನು ಕೇಳುವವರಿಲ್ಲ ಎಂಬ ಕಾರಣಕ್ಕೆ ತನಗೆ ತೋಚಿದಂತೆ ಬೆಳೆಯುತ್ತೆ. ಅದಕ್ಕಾಗಿ ಪ್ರತಿಯೊಬ್ಬರೂ ಮಗು ನಮ್ಮ ಬಳಿ ಬಂದಾಗ ನಮ್ಮ ಎಲ್ಲ ಒತ್ತಡಗಳನ್ನು ಬದುಕಿಟ್ಟು ಅದರ ಮಾತುಗಳನ್ನು ಕೇಳಿ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದಾಗ ಮಾತ್ರ ಮಗು ಸಚ್ಚಾರಿತ್ರ್ಯವಂತನಾಗುತ್ತಾನೆ ಅಲ್ಲದೆ ಅವನ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಗೌರವ ಕೊಡುವುದನ್ನು ಕಲಿಯುತ್ತಾನೆ. ನಮ್ಮ ಕನಸುಗಳು ಮಗುವಿನ ಮೇಲೆ ಹೇರಿಕೆಯಾಗದಂತೆ ಎಚ್ಚರಿಕೆವಹಿಸಿ, ಹೇಳುವುದನ್ನೇ ಪ್ರೀತಿಯಿಂದ ಸ್ನೇಹಪರತೆಯಿಂದ ಮಗುವಿಗೆ ಹತ್ತಿರವಾಗುವ ಮೂಲಕ ಅವರಲ್ಲಿ ನಮ್ಮ ಅಪೇಕ್ಷಿತ ಬದಲಾವಣೆಗಳನ್ನು ತರಲು ಪ್ರಯತ್ನಿಸಬೇಕು.

   ಹುಟ್ಟಿದ ಪ್ರತಿಯೊಂದು ಮಗು ತನ್ನೊಳಗೆ ಅಸಾಮಾನ್ಯವಾಗಿರುವ ಪ್ರತಿಭೆಯನ್ನು ಪಡೆದುಕೊಂಡೆ ಬಂದಿರುತ್ತದೆ. ಅದನ್ನು ಗುರುತಿಸುವ ಪರೀಕ್ಷಿಸುವ ಪ್ರಶಂಶಿಸುವ ತಾಳ್ಮೆ ಗುರು ಹಿರಿಯರಲ್ಲಿ ಇರಬೇಕಾಗುತ್ತದೆ. ಯಾವ ಮಗು ವ್ಯರ್ಥ ಕಾಲ ಕಳೆಯಲು ಇಲ್ಲಿಗೆ ಬಂದಿಲ್ಲ. ಪ್ರಕೃತಿಗೆ ಸಮಾಜಕ್ಕೆ ಅನುಕೂಲವಾಗುವ ಯಾವುದೋ ಒಂದು ಗುಣವನ್ನು ಅದರೊಳಗೆ ತುಂಬಿ ಕಳಿಸಿರುತ್ತದೆ. ಅದನ್ನು ಗುರುತಿಸಿ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡುವುದು ಮಾತ್ರ ಶಿಕ್ಷಣದ ಕರ್ತವ್ಯವಾಗಿದೆ.ಆದರೆ ಇಂದಿನ ಶಿಕ್ಷಣ ಮಕ್ಕಳಲ್ಲಿ ಮೌಲ್ಯಗಳನ್ನು ಬಿಟ್ಟು ಬರಿ ಅಂಕಗಳು ಗ್ರೇಡ್ ಗಳಿಗೆ ಮಹತ್ವ ನೀಡಿ ಮಗುವಿನ ಪ್ರತಿಭೆಗೆ ಯಾವುದೇ ಅವಕಾಶ ನೀಡದಿರುವುದು ದುರಂತವೇ ಸರಿ. ಯಾವುದೋ ಒಂದು ಸರ್ಕಾರಿ ಹುದ್ದೆ ಪಡೆಯುವುದಕ್ಕೋಸ್ಕರ ಹತ್ತಾರು ವರ್ಷಗಳಿಂದ ಒಂದೇ ರೀತಿಯ ಪಠ್ಯಕ್ರಮವನ್ನು ಓದಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಅವನೊಳಗಿನ ಪ್ರತಿಭೆಯನ್ನು ಪ್ರೇರೇಪಿಸುವ ,ಪುರಸ್ಕರಿಸುವ ಅದಕ್ಕೆ ಇನ್ನಷ್ಟು ಹೆಚ್ಚಿನ ಅನುಭವಗಳನ್ನು ನೀಡುವಲ್ಲಿ ವಿಫಲವಾಗಿದೆ. ಅದಕ್ಕಾಗಿ ಇಂದು ನಿರುದ್ಯೋಗ ಸಮಸ್ಯೆ ಹೆಮ್ಮರವಾಗಿ ಬೆಳೆದು ನಿಂತಿದೆ. ಮಗು ತನ್ನ ಕಲಿಕೆಯ ಮತ್ತು ಪ್ರತಿಭೆಯ ಸಮ್ಮೇಳತದಿಂದ ಬದುಕು ಉಪವಾಸ ಅನ್ವೇಷಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುವ ಪರಿಸರವನ್ನು ಶಾಲಾ ಶಿಕ್ಷಣ ಕೊಡಬೇಕಾಗಿರೋದು ಇಂದಿನ ಅಗತ್ಯ. ಮಗು ಮಗುವಿನ ಬದುಕಿಗೆ ಹತ್ತಿರವಿರದ ಪಾಠಗಳು, ಜೀವನದ ಸಮಸ್ಯೆಗಳನ್ನು ಬಗೆಹರಿರಿಸಲಾಗದ ಸಮೀಕರಣಗಳು, ವಾಸ್ತವಕ್ಕೆ ಹತ್ತಿರವಿರದ ಪ್ರಯೋಗಗಳನ್ನು ಓದಿ ಕಲಿಯುವುದರಿಂದ ಮಗುವಿಗೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಬದುಕಿನಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮಗುವಿಗೆ ಸೂಕ್ತ ಮಾರ್ಗಗಳನ್ನು ಹುಡುಕಿ ಕೊಡುವ ವ್ಯವಸ್ಥೆ ಬೇಕಾಗಿದೆ. ಇಲಾಖೆಗಳು ನಿಗದಿಪಡಿಸುವ ಪಠ್ಯಕ್ರಮ, ಸರ್ಕಾರಗಳು ನಿಗದಿಪಡಿಸುವ ನೀತಿ ನಿಯಮಗಳು, ಅಕರ್ಷಣೀಯವಾಗಿಲ್ಲದ ಮತ್ತು ಸುಸಜ್ಜಿತವಲ್ಲದ ಶಾಲಾ ಕೊಠಡಿಗಳು, ಸಂಬಳಕ್ಕಾಗಿ ಬಂದು ಸಹಿ ಮಾಡಿ ಹೋಗುವ ಶಿಕ್ಷಕರು, ಕಲಿಸುವವರ ಮೇಲೆ ಸರ್ಕಾರ ಇಲಾಖೆ ಸಮುದಾಯಗಳ ಒತ್ತಡಗಳು ಮಗುವಿನ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿವೆ. ದೋಣಿ ಒಳಗಿನ ಶಿಕ್ಷಣಕ್ಕಿಂತ ಬಯಲಿನಲ್ಲಿ ದೊರೆಯುವ ಶಿಕ್ಷಣ ಹೆಚ್ಚು ಮೂರ್ತ ಸ್ವರೂಪವಾಗಿರುತ್ತದೆ. ಅಂತಹ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮೇಲಿನ ಎಲ್ಲ ಹೊಣೆಗಾರರು ಚಿಂತಿಸಿ ಸನ್ನಿವೇಶಗಳನ್ನು ಒದಗಿಸಿಕೊಡಬೇಕು. ಮಕ್ಕಳು ಬಯಸಿದ್ದನ್ನು ಕೊಡುವ ಬದಲು ಅದನ್ನೇ ಬಯಸಬೇಕು ಎಂಬ ಬೇಲಿ ಹಾಕಿ ಅವರ ಪ್ರತಿಭೆಯನ್ನು ಮೊಟಕುಗೊಳಿಸಲಾಗುತ್ತಿದೆ.
ಕಟ್ಟು ನಿಟ್ಟಿನ ವಾತಾವರಣದಿಂದ ಮಕ್ಕಳ ಮನಸ್ಸಿನಲ್ಲಿ ಘಾತುಕತೆ ಹೆಚ್ಚಾಗುತ್ತದೆ. ನನಗೆ ಬೇಕಾದನ್ನು ಕೊಡದ ಸಮಾಜದ ವಿರುದ್ಧ ತಿರುಗಿ ಬೀಳುವ ಮನಸ್ಥಿತಿ ಬಲಗೊಳ್ಳುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾರು ಯಾರು ಬಾಗಿದಾರರು ಇರುತ್ತಾರೆಯೋ ಅವರೆಲ್ಲರ ವಿರುದ್ಧವಾಗಿ ಮಗು ತನ್ನೊಳಗೆ ರೂಪಿತಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಎಲ್ಲಾ ಭಾಗಿದಾರರು ಕೃತ್ರಿಮವಾದ ಬುದ್ಧಿ ಮತ್ತೆ ಬೆಳೆಸುವ ಬದಲು ಸ್ವಂತಿಕೆಯ ಕೌಶಲ್ಯ ಅಭಿವೃದ್ಧಿ ಹಾಗೂ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಾಗ ಮಾತ್ರ ಇಂದಿನ ಮಗು ನಾಡಿನ ದೇಶದ ಭವಿಷ್ಯವಾಗಿ ಹೊರಹೊಮ್ಮುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ನಮ್ಮ ಎಲ್ಲ ಭಿನ್ನತೆಗಳನ್ನು ಬದುಕಿಟ್ಟು ಬೇಕಾದನ್ನು ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು.

    ಆಧುನಿಕ ಜಗತ್ತು ಮಕ್ಕಳ ಮೇಲೆ ತುಂಬಾ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸಿಗಬೇಕಾಗಿದ್ದ ವಸ್ತುಗಳು ತಂತ್ರಜ್ಞಾನಗಳು ಇಂದು ಮಕ್ಕಳ ಕೈಗೆ ಲೀಲಾಜಾಲವಾಗಿ ಸಿಗುತ್ತಿವೆ. ಮಕ್ಕಳು ಅಡ್ಡ ದಾರಿ ಹಿಡಿಯುವ ಸುಲಭ ಮಾರ್ಗಗಳು ಅರಿವಿಗೆ ಬಾರದೆ ತೆರೆದುಕೊಂಡು ಮಕ್ಕಳ ಮನಸ್ಸಿನಲ್ಲಿ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸುತ್ತಿವೆ. ತಂತ್ರಜ್ಞಾನದ ಬಳಕೆಯಲ್ಲಿ ಒಳಿತು ಕೆಡುಕುಗಳೆರಡು ಇವೆಯಾದರೂ ಕೆಡುಕು ಅತಿ ಶೀಘ್ರವಾಗಿ ಮಕ್ಕಳನ್ನು ಆಕರ್ಷಿಸಿ ಆವರಿಸಿಬಿಡುತ್ತದೆ. ಇದರ ಹಿಡಿತಕ್ಕೆ ಸಿಕ್ಕ ಮಕ್ಕಳು ಒಂಟಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸಲು ಬಯಸುತ್ತಾರೆ. ಹಾಗಾಗಿ ಮಕ್ಕಳು ಬಳಸುವ ತಂತ್ರಜ್ಞಾನಗಳು ಅವರ ಎಂತಹ ಉದ್ದೇಶಗಳನ್ನು ಈಡೇರಿಸುತ್ತದೆ ಎಂಬುದನ್ನು ಹಿರಿಯರಾದ ನಾವು ಮನಗಂಡು ಅದರ ಒಳಿತು ಕೆಡುಕುಗಳ ಬಗ್ಗೆ ಅದು ಬಳಸಿ ಹಾಳಾಗುವ ಮೊದಲೇ ನಾವು ಅದಕ್ಕೆ ಮಾರ್ಗದರ್ಶನ ನೀಡಿರಬೇಕು. ಆಗ ಮಾತ್ರ ಮಗು ಅಂತಹ ಅಪಾಯಗಳನ್ನು ದೂರವಿಟ್ಟು ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತನ್ನ ಪ್ರತಿಭೆಯನ್ನು ಹೊಂದಿಸಿ ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡುವುದರಲ್ಲಿ ಸಂಶಯವಿಲ್ಲ. ವಿಶ್ವೇಶ್ವರಯ್ಯ ಅಬ್ದುಲ್ ಕಲಾಂ ರಂತಹವರು ಬಾಲ್ಯದಲ್ಲಿ ಕಂಡ ಕನಸುಗಳನ್ನು ತಮ್ಮ ಅಗಾಧ ಪ್ರತಿಭೆಯ ಸಹಾಯದಿಂದ ಇಡೀ ಸಮಾಜಕ್ಕೆ ದೇಶಕ್ಕೆ ಸದುಪಯೋಗವಾಗುವಂತಹ ತಂತ್ರಜ್ಞಾನಗಳನ್ನು ವಸ್ತುಗಳನ್ನು ನೀಡಿದ ಹಾಗೆ ಈಗಿನ ಮಕ್ಕಳು ಕೂಡ ಅಂತಹದ್ದೇ ದಾರಿಯಲ್ಲಿ ಸಾಗುವಂತೆ ನಾವು ಅವರಿಗೆ ದಾರಿ ತೋರಿಸಬೇಕು. ಕೀಳು ಅಭಿವ್ಯಕ್ತಿ ಅಭಿರುಚಿ ಹೊಂದಿರುವ ಮಾಧ್ಯಮಗಳಿಂದ ಮಕ್ಕಳನ್ನು ದೂರವಿಟ್ಟು ಸಬ್ಯ ನಾಗರೀಕನನ್ನು ಸೃಷ್ಟಿ ಮಾಡುವ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಮಗು ಸಮಾಜಕ್ಕೆ ಹೆಮ್ಮೆ ತರುವಂತಾಗಬೇಕೆ ಹೊರತು ಹೊರೆಯಾಗುವಂತಹ ವ್ಯಕ್ತಿ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು.


      ಮಗುವಿನ ಮನಸ್ಸು ತುಂಬಾ ಮೃದು ಎಂಬುದು ಎಲ್ಲರಿಗೂ ಗೊತ್ತು. ಅದನ್ನು ಅಷ್ಟೇ ನಾಜೂಕಾಗಿ ನಿರ್ವಹಣೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕ ಪ್ರಜ್ಞೆ ಮಕ್ಕಳಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು. ಅದೇ ಸನ್ನಿವೇಶವನ್ನು ಎದುರಿಸಿ ಮಗು ಗೆದ್ದು ಬರಬೇಕು ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಎಂಬ ಕಲ್ಪನೆ ಮಗುವಿನಲ್ಲಿರಬೇಕು. ದಿನಾಚರಣೆ ಈ ಸಂದರ್ಭದಲ್ಲಿ ಎಲ್ಲಾ ಭಾಗಿದಾರರು ತಮ್ಮ ಜವಾಬ್ದಾರಿಗಳನ್ನು ಅರಿತು ಮುಂದಿನ ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ಸಮರ್ಥರನ್ನಾಗಿಸಿ ಅವರನ್ನು ಸಮಾಜ ಸದ್ವಿನಿಯೋಗಪಡಿಕೊಳ್ಳುವಂತಾಗಬೇಕು. ಮಕ್ಕಳನ್ನು ದ್ವೇಷಿಸುವ ಹಿಂಸಿಸುವ ಸಮಾಜಘಾತುಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದನ್ನು ನಿಷೇಧಿಸಬೇಕು. ಸ್ವಾಸ್ಥ್ಯ ಸಮಾಜಕ್ಕೆ ಮಕ್ಕಳು ಉತ್ಕೃಷ್ಟ ಫಸಲಾಗಬೇಕು. ಹುಟ್ಟಿದ ಪ್ರತಿ ಮಗು ಸಮಾಜದ ಆಸ್ತಿಯಾಗಬೇಕು ಎಂಬ ಆಶಯದೊಂದಿಗೆ ಈ ಬಾರಿಯ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಲಿ.

೦೧೫೪ಪಿಎಂ೧೪೧೧೨೦೨೩
ಅಮುಭಾವಜೀವಿ ಮುಸ್ಟೂರು 

ನಲ್ಲೆ ನಿನ್ನ ಸ್ನೇಹ
ಬೆಳಗುವಂತೆ ನಂದಾದೀಪ
ಆ ಬೆಳಕಲಿ ನಾನು
ನಿನ್ನ ಮುಂದಿಟ್ಟೆ ಒಲವ ಪ್ರಸ್ತಾಪ

ನಿನ್ನ ಪ್ರೀತಿಯೊಂದು ಹಣತೆ
ಅಲ್ಲಿ ಬೆಳಗುವ ಜ್ಯೋತಿ ಮಮತೆ
ಜೊತೆ ನೀನಿರಲು ಇಲ್ಲ ಕತ್ತಲು
ನಿನ್ನ ನಗುವ ಕಣ್ಣ ಹೊಳಪು ಹಣತೆ ಸಾಲು

ಬೆಳದಿಂಗಳೇಕೆ ನೀನಿಲ್ಲರಲು
ಕ್ಷೀರ ಧಾರೆ ಸುರಿದಂತೆ ಮುಗಿಲು
ನಲಿವ ಗುಲಾಬಿ ನಗುವ ನಿನ್ನೀ ಅಧರ
ಒಲಿದ ಗೆಳತಿ ನಿನ್ನ ಮಾತು ಸುಮಧುರ

ಸುದ್ದಿ ಮಾಡದೆ ಶುದ್ಧಿ ಮಾಡಿದೆ
ಪ್ರೀತಿಯೊಳಿರುವ ಚಂದ ನಾ ನೋಡಿದೆ
ನನ್ನೆದೆಯ ಬಯಕೆಗಳರಳಿ
ತವಕಿಸುತಿವೆ ಸೇರಲು ನಿನ್ನ ಬಳಿ

ಜೊತೆಗಾತಿ ನೀನೆಂಬ ಹೆಮ್ಮೆ ನನಗೆ
ನಗುವ ಬೆಳಕು ಚೆಲ್ಲು ಕೊನೆವರೆಗೆ
ನನ್ನ ಬಾಳ ಬಂಧು ನೀನೆ ತಾನೆ
ನಿನಗೆ ನೀಡುವೆ ನನ್ನೊಲವ ಸಂಭಾವನೆ

ನಿನ್ನಿಂದ ಈ ಹಬ್ಬವಾಯ್ತು
ಸಂಭ್ರಮದ ರಸಗಳಿಗೆ
ಜೋಡಿ ಹಣತೆಗಳಂತೆ
ಬೆಳಗತಲಿರೋಣ ಬಾಳಿಗೆ

೦೯೦೩ಪಿಎಂ೧೪೧೧೨೦೨೩
*ಅಮುಭಾವಜೀವಿ ಮುಸ್ಟೂರು*

*ತನಗ*

ಕತ್ತಲು ಕಳೆಯಿತು
ಹಣತೆ ಬೆಳಗಿತು
ದೀಪಗಳ ಸಂದೇಶ
ದೀಪಾವಳಿ ವಿಶೇಷ

೦೯೪೧ಪಿಎಂ೧೪೧೧೨೦೨೩
*ಅಮುಭಾವಜೀವಿ ಮುಸ್ಟೂರು*

ನಂಬಿಸಿ ಕತ್ತು ಕೊಯ್ದಳಾಕೆ
ಪ್ರೀತಿಯ ಆಟವಾಡ
 ಸಲುಗೆಯ ಸಂಗಬೇಡಿ
ವಶವಾದ ಎದೆಗೆ ತಿವಿದಳು

ಬೇಕಿರುವಾಗ ಬೆಣ್ಣೆಯಾಗಿತ್ತು ಮಾತು ಬೇಡವಾದಾಗ ಸಲ್ಲದ ಕೊಂಕು ಹುಡುಕಿತ್ತು
ಅವಳ ಮರ್ಮ ಅರಿಯದೆ ಹುಡುಗ ಕಳೆದು ಹೋದ
ಕಣ್ಣಿಲ್ಲದ ಪ್ರೀತಿಯ ನಂಬಿ ಕುರುಡಾದ

ಪ್ರೀತಿ ಸಿಗದ ಹುಡುಗನರಳುತ್ತಿದ್ದ
ಪ್ರೀತಿಯ ನಾಟಕವಾಡಿ ಅವಳು ನಲಿಯುತಿಹಳು
ಹೊಣೆ ಯಾರು ಹುಡುಗನ ಈ ಸ್ಥಿತಿಗೆ
ಮೋಸ ಮಾಡಿದವಳ ಸ್ನೇಹ ಮಾಡಿದ ತಪ್ಪಿಗೆ

ವಿಷ ಕುಡಿದಾದರೂ ಬದುಕಬಹುದು
ಅವಳ ಹುಸಿ ನಗೆಯ ಹಿಡಿತದಿಂದ ತಪ್ಪಿಸಿಕೊಳ್ಳಲಾಗದು
ದಿನದಿಂದ ದಿನಕ್ಕೆ ಕೃಷವಾಯಿತು ಬದುಕು
ಬಾಳಲಿ ಅವಳಿಂದ ಒಳಿತಿಗಿಂತ ಹೆಚ್ಚು ಕೆಡುಕು



ಕವನ

ಬದುಕು ಕಲಿಸಿದ ಪಾಠ ನೂರಾರು

ಬದುಕು ನಿತ್ಯ ಹೋರಾಟ
ಎಂದಿಗೂ ಮುಗಿಯದ ಸಂಪುಟ
ಪದೇ ಪದೇ ಎದುರಾಗುವುದು ಸಂಕಷ್ಟ
ಅದುವೇ ಬದುಕು ಆಡುವ ಚೆಲ್ಲಾಟ

ಹೆಜ್ಜೆ ಹೆಜ್ಜೆಗೂ ಇಲ್ಲಿ  ತಿರುವು ಹತ್ತಾರು
ಗೆಲ್ಲದೇ ಸೋತವರು ಹಲವರು
ಬಾಣಲೆಯಿಂದ ಬೆಂಕಿಗೆ ಬೀಳಿಸುವ ಬದುಕು




ಸನಿಹ ನೀನಿರೆ ಸಾಕು
ಬಾಳು ಬಲು ಸುಂದರ
ಹೃದಯ ಹೃದಯ ಬೆಸೆದ ಮೇಲೆ
ಕಂಗೆಡಿಸದು ತುಸು ಅಂತರ

ನಿನ್ನ ಪ್ರತಿರೂಪವಿದೆ 
ನನ್ನೆದೆಯ ಗುಡಿಯಲಿ
ರವಿಗಿಂತಲೂ ಶಶಿಯೇ ಬಲು
ಚೆಲುವ ತಾರೆಗಳೆದೆಯಲಿ

ಈ ಸುರಿಯುವ ಬೆಳದಿಂಗಳಲ್ಲಿ
ಒಂಟಿತನಕೆ ನೀ ಜೊತೆಯಾದ ಅನುಭವ
ಮನದ ಮುಗಿಲಲಿ ಕಾಣದಿರೆ ಚಂದ್ರಮ
ಕನಸಿನ ಲೋಕದಲಿ ಬಿಗಿದಪ್ಪಿದ ಭಾವ

ನೋವಿಗಿಲ್ಲಿ ಜಾಗವಿಲ್ಲ
ನೀನಿರಲು ನನ್ನ ಈ ಸನಿಹ
ಬಳಿ ಬಂದು ನನ್ನ ಸೇರು
ಬೇರೆಬೇಕಿಲ್ಲ ನಿನ್ನ ವಿನಹ

ಓಡೋಡಿ ಬಾ ಚಂದಿರ 
ಕಾದಿದೆ ಎನ್ನ ಹೃನ್ಮಂದಿರ
ನೀ ಸುರಿವ ಚಂದ್ರಿಕೆಯ ವಿಸ್ತಾರ
ಅದು ನಮ್ಮೊಲವಿನ ವಿಶಾಲ ಸಾಗರ

೦೬೫೩ಎಂ೧೬೧೧೨೦೨೩
ಅಮುಭಾವಜೀವಿ ಮುಸ್ಟೂರು 


    
ಕಾದು ಕೆಂಡವಾದ ಇಳೆಗೆ
ಮುಂಗಾರು ಮಳೆ ಸಿಂಚನ ಸಂಭ್ರಮ
ಬಳಲಿದ ನೈದಿಲೆಯೆಗೆ
ಚಂದ್ರಿಕೆ ಸುರಿದ ಪ್ರೇಮಚಂದ್ರಮ

ಒಂಟಿತನದ ದಣಿವ ನೀಗಲು
ನೀ ಬಂದೆ ನಲ್ಲ ಸನಿಹಕೆ
ಎದೆಯ ಹೊಲವ ನಾ ಉತ್ತಿದೆ
ಒಲವ ಬೀಜವನಲ್ಲಿ ನೀ ಬಿತ್ತಿದೆ

ಬಿಸಿಯಪ್ಪುಗೆಯ ಬಾಹು ಬಂಧನ
ಬಂಧಿಯಾಗಿ ಕರಗಿ ನೀರಾದೆ ನಾ
ನನಗಾಗಿ ಮುಡುಪಿಟ್ಟೆ ಹೃದಯ ಸಿಂಹಾಸನ
ಸುಖದ ಖುಷಿಯಲಿ ತೇಲಿದೆ ಅಲ್ಲಿ ನಾ

ನೀಗಿಸಿದೆ ಬಡತನದ ಎಲ್ಲ ನೋವ
ಈ ಒಡಲಿಗೆ ನೀ ತುಂಬಿದೆ ಜೀವ
ಬೇರೆಯಾಗದ ನಮ್ಮೀ ಸಂಬಂಧ
ಕೊರತೆಯಿರದ ಪ್ರೇಮಾನುಬಂಧ

ನನ್ನಲ್ಲಿ ನೀನೊಂದಾದೆ ಎಂಥಾ ಸುಯೋಗ
ನನ್ನೊಲವ ಗೀತೆಗೆ ನೀ ಬೆರೆತ ರಾಗ
ಬಾಳ ಪಯಣದಿ ಇನ್ನಿಲ್ಲ ಚಿಂತೆ
ನೀ ಬಂದೆ ನೀಗಿತೆಲ್ಲ ಆ ಕೊರತೆ

೦೧೩೩ಪಿಎಂ೧೬೧೧೨೦೨೩
*ಅಮುಭಾವಜೀವಿ ಮುಸ್ಟೂರು*



ಬರೀ ಹೆಣ್ಣಿಗಲ್ಲ ಗಂಡಿಗೂ ಒಂದು ಮನಸಿದೆ

ಯಾರು ಇಲ್ಲಿ ಹೆಚ್ಚು ಅಲ್ಲ
ಯಾರು ಇಲ್ಲಿ ಕಡಿಮೆ ಅಲ್ಲ
ಬಾಳ ನದಿಗೆ ಎರಡು ತೀರ
ಬಾನ ಬೆಳಗಲು ಸೂರ್ಯ ಚಂದಿರ

ಹೆಣ್ಣು ಗಂಡು ಇಬ್ಬರು
ಸೃಷ್ಟಿಯಲ್ಲಿ ಸಮಾನರು
ತಾಳ್ಮೆ ಅವಳ ಸ್ವತ್ತು ಅಲ್ಲ
ಮುಂಗೋಪ ಇವನ ಆಸ್ತಿಯಲ್ಲ

ಅವಳು ಮೃದುವೆಂದೆಲ್ಲ ಬಲ್ಲರು
ಇವನು ಒರಟನೆಂದುಕೊಂಡಿಹರು
ಬರೀ ಹೆಣ್ಣಿಗಲ್ಲ ಗಂಡಿಗೂ ಒಂದು ಮನಸಿದೆ
ಕರುಣೆ ಪ್ರೀತಿ ತಾಳ್ಮೆ ಸಹನೆ ಅವನಿಗೂ ಇದೆ

ಹೊಗಳಿ ಹೊಗಳಿ ಹೆಣ್ಣು ಮೆತ್ತೆಯಾದಳು
ತೆಗಳಿ ತೆಗಳಿ ಗಂಡು ಕಠಿಣ ಶಿಲೆಯಂತಾದನು
ಪ್ರೀತಿಗವನು ಕರಗದಿರನು ತೋರುವವರಿಲ್ಲ
ಕನಿಕರಿಸೊ ಮಾತೃ ಹೃದಯವುಂಟು ಬಲ್ಲವರಿಲ್ಲ

ಹೆಣ್ಣು ಅತ್ತು ಹಗುರಾಗುವಳು
ಗಂಡು ನೋವ ನುಂಗಿ ಕೊರಗುವನು
ಹೆಣ್ಣ ಪರವಾಗಿ ಎಲ್ಲ ನಿಲ್ಲುವರು
ಗಂಡಿನ ಮೇಲೆಯೆಲ್ಲರು ದಂಡೆತ್ತಿ ಬರುವರು

ಪುರುಷ ಪ್ರಧಾನ ಸಮಾಜವಾದರೂ
ಹೆಣ್ಣಿಗಿರುವ ಸೌಮ್ಯತೆ ಮಾನ್ಯತೆ ಅವನಿಗಿಲ್ಲ
ಎಲ್ಲಾ ಅನಿಷ್ಟಕೂ ಅವನ ಹೊಣೆಯಾಗಿಸಿ
ದಂಡಿಸುವರು ಇದು ಹೊಸದೇನಲ್ಲ

೦೯೪೫ಪಿಎಂ೧೬೧೧೨೦೨೩
*ಅಮುಭಾವಜೀವಿ ಮುಸ್ಟೂರು*


ಓಂ ಕಾವೇರಿ ಸಾಹಿತ್ಯ ಬಳಗದ ಸ್ಪರ್ಧೆಗಾಗಿ

ಪ್ರಕಾರ :- *ರುಬಾಯಿ*

ದತ್ತ ಪದ:- *ಛೀಮಾರಿ*

ನಾಯಿ ಬಾಲ ಎಂದಿದ್ದರೂ ಡೊಂಕು
ಛೀಮಾರಿ ಹಾಕಿದರೂ ವಾಸಿಯಾಗದ ಸೋಂಕು
ತಿದ್ದಿದರೆ ಅದು ಎಂದು ಶುದ್ಧವಾಗದಂತೆ
ಬುದ್ಧಿ ಹೇಳುವಂತೆ ನುಡಿಯುವರು ಕೊಂಕು

೧೧೫೯ಪಿಎಂ೧೭೧೧೨೦೨೩
*ಅಮುಭಾವಜೀವಿ ಮುಸ್ಟೂರು*

*ಪೋಷಿಸುವ ನೆಪದಲ್ಲಿ*
ಬೆಳೆವ ಸಿರಿ ಮೊಳಕೆಯಲ್ಲಿ 
ಆದರೆ ಚಿವುಟೋ ನೂರು ಕೈಗಳಿವೆ ಇಲ್ಲಿ
ಪ್ರತಿಭೆಯ ಗುರುತಿಸುವರಿಲ್ಲ
ತುಳಿಯಲು ಹವಣಿಸುವರೇ ಇಲ್ಲೆಲ್ಲ

ಸಮರ್ಥರೇ ಇಲ್ಲಿ ಉಳಿಯುವುದು
ಸ್ವಾರ್ಥಿಗಳೇ ಎಲ್ಲರ ತುಳಿಯುವುದು
ಬೆಳೆಸುವವರು ಒಬ್ಬರು ಇಲ್ಲಿಲ್ಲ
ಬೇಳೆ ಬೇಯಿಸಿಕೊಳ್ಳುವವರೇ ಎಲ್ಲ

ಅವರವರ ಮೂಗಿನ ನೇರಕ್ಕೆ ಮಾತು
ಎಲ್ಲರ ಮನೆ ದೋಸೆಯೊಳಗೂ ತೂತು
ಪೋಷಿಸುವ ನೆಪದಲ್ಲಿ ಆಪೋಷನಗೈವರು
ಅಸಹಾಯಕರ ತೇಜೋವಧೆ ಮಾಡುವರು

ಎಲ್ಲರೂ ದೊಡ್ಡವರೇ ಬೆಳೆದ ಮೇಲೆ
ಸಣ್ಣತನ ತೋರುವರು ಆಮೇಲೆ
ಎಕ್ಕಡ ನೆಕ್ಕುವವರ ಉಡುದಾರಕೆ ಕಟ್ಟಿಕೊಳ್ಳುವರು
ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದಕ್ಕೆ ಸುಣ್ಣ ಮೆತ್ತಿ ಮೆರೆವರು

ಉಳಿವಿಗಾಗಿ ಹೋರಾಟ ಇಲ್ಲಿ ನಿರಂತರ
ಬೆಳೆವ ಪೈರಿಗೆ ಪೀಡೆಯಾಗಿ ಕಾಡುವರು
ಅಳಿಯದೆ ಉಳಿದರೇನೆ ಬಹುಮಾನ
ಅದಕಾಗಿ ಸಹಿಸಬೇಕು ಸಹಸ್ರ ಅವಮಾನ

ವ್ಯಕ್ತಿತ್ವಕ್ಕೆ ಮಸಿ ಬಳಿಯುವರು
ಅಸ್ತಿತ್ವಕ್ಕೆ ಬಾರಿ ಪೆಟ್ಟು ಕೊಡುವರು
ಅಂಜದೆ ನಂಜುಂಡು ಜಯಿಸಬೇಕು
ಅವಮಾನಿಸುವವರೆದುರು ಅಭಿಮಾನ ಗಳಿಸಬೇಕು

೦೯೦೬ಪಿಎಂ೧೭೧೧೨೦೨೩
*😘ಅಮುಭಾವಜೀವಿ ಮುಸ್ಟೂರು*
ಸತ್ಯದ ಅರಿವಿಲ್ಲದವರು ಮಿಥ್ಯವರು ನಂಬುವರು


ಬರಿದಾಗಿಲ್ಲ ಇನ್ನು ನನ್ನ 
ಬತ್ತಳಿಕೆಯಲ್ಲಿ ಬಾಣ
ಬಡಬಡಿಸುವುದಿಲ್ಲ
ನನ್ನ ಭಾವಗಳು ಗೌಣ

ಕವಿ ಸಾಯುವ ತನಕ 
ಅವನ ಕಲ್ಪನೆಗೆ ಸಾವಿಲ್ಲ
ಬೆಲೆ ಸಿಗದೆ ಹೋದರು 
ಕವಿಯ ಭಾವಗಳಿಗೆ ನೋವಿಲ್ಲ

ಕವಿತ್ವಕ್ಕೆಲ್ಲ ಖಾಲಿ ತನ
ಕದ್ದು ಬರೆದದ್ದಲ್ಲ ಕವನ
ಮುದ್ದು ಮಾಡಿ ಎದೆಗೆ ಬಿದ್ದ
ಸುಂದರಾಕ್ಷರಗಳ ಬಾಗಿನ

ಟೀಕಿಸುವವರು ಟೀಕಿಸಿಕೊಳ್ಳಲಿ
ಹುರುಳಿಲ್ಲವೆನ್ನುವವರ ತಿರುಳು ಬೇಕಿಲ್ಲ
ಹೃದಯ ಹಾಡಿದ ಮಾತು ಅಕ್ಷರ ರೂಪ
ಮನದಿ ಬೆಳಗುವುದು ನಿತ್ಯ ಭಾವದೀಪ

ಬೆನ್ತಟ್ಟದವರ ಅಟ್ಟಹಾಸದ ಮುಂದೆ
ಮುದುರಿ ಮಲಗಿಕೊಂಡಿದೆ ಕವಿತೆ
ಬಾಯಿ ಬಿಟ್ಟು ಆಡಬೇಕಿಲ್ಲ
ಮೌನ ತಳೆಯುವುದೇ ಘನತೆ

೦೩೧೦ಪಿಎಂ೧೮೧೧೨೦೨೩
ಅಮುಭಾವಜೀವಿ ಮುಸ್ಟೂರು

ಜಾಣ್ಮೆಯಿಂದ ಸಂಬಾಳಿಸಬೇಕು
ಯಾವುದೇ ವಿಷಯವನ್ನು
ತುಸು ಮೈಮರೆತರೆ ಸಾಕು
ಮುಕ್ಕಿ ತಿನ್ನುವರು ನಿನ್ನನ್ನು
ನೀ ಬೀಳುವುದನ್ನೇ ಕಾಯುತ್ತಾರೆ ಜನ
ಆಳಿಗೊಂದು ಕಲ್ಲೆಸೆದು ನಾಶಗೈಯಲು
ಜೋರಿಗಿಂತ ಜಾಣ್ಮೆ ಮುಖ್ಯ
ಮಾತಿಗಿಂತ ನಡೆಯು ಮುಖ್ಯ
ಜಯದ ಗುಂಗು ಬಿಡು
ಚಾತುರ್ಯದಿ ಅಡಿ ಇಡು

೦೩೪೮ಪಿಎಂ೧೮೧೧೨೦೨೩
ಅಪ್ಪಾಜಿ ಎ ಮುಸ್ಟೂರು 

ನಿಮ್ಮ ಸಂತೋಷಕ್ಕಾಗಿ ಜೀವಿಸಿ
ಕಾಲೆಳೆಯುವರನ್ನು ನಿರ್ಲಕ್ಷಿಸಿ
ಬೆಳೆಯುವವರ ಬೆಳೆಸುವುದಿಲ್ಲ ಜಗತ್ತು
ಬೇಯಿಸಿಕೊಳ್ಳುವ ಕಾಯುತ್ತಿರುವುದು ಯಾವತ್ತು
ನಂಬಿದವರೆ ಎಳೆದೊಯ್ದು ಕತ್ತು ಕೊಯ್ಯುವರು
ಕೊಂದ ಪಾಪದ ಹಂಗಿಲ್ಲದೆ ತಿಂದು ಮುಕ್ಕುವರು
ಸಿಕ್ಕವರ ಸಕ್ಕರೆ ಮಾತಿಗೆ ಮರುಳಾಗದಿರು
ಅಕ್ಕರೆ ತೋರುವ ಠಕ್ಕರನೆಂದು ನಂಬದಿರು
ಖುಷಿಯ ಕಸಿಯುವವರಿಂದ ದೂರವಿರು
ಹುಸಿ ಪ್ರೀತಿಯ ನಂಬಿ ಮೋಸ ಹೋಗದಿರು
ನಿನ್ನ ನಂಬಿಕೆ ನಿನ್ನ ಕಾಯುವುದು
ಬೇರೆಯವರ ಅಂಜಿಕೆ ನಿನ್ನ ಸಾಯಿಸುವುದು
ಹರ್ಷದ ಸಾಕ್ಷಾತ್ಕಾರ ನಿನಗೊಲಿಯಲಿ
ಮೋಹದ ಅಂಧಕಾರ ಕಳೆಯಲಿ

೦೪೦೪ಪಿಎಂ೧೮೧೧೨೦೨೩
ಅಪ್ಪಾಜಿ ಎ ಮುಸ್ಟೂರು 

ಎಲ್ಲಾ ಆಸೆಗಳನೊಮ್ಮೆ ಬದಿಗೊತ್ತಿ ಬಿಡು

ಕೈ ಮೀರಿ ಹೋಗುವುದೇ 
ಇಲ್ಲಿ ನಡೆಯುವುದು
ಬರಿ ನೋವುಗಳಷ್ಟೇ 
ನಿನಗುಳಿಯುವುದು

ಎಲ್ಲಾ ಆಸೆಗಳನೊಮ್ಮೆ 
ಬದಿಗೊತ್ತಿ ಬಿಡು
ಸಿಗುವ ಸಂತೃಪ್ತಿಯ
ಆಗ ನೀ ನೋಡು

ಜೀವನವಿದು ಹೋರಾಟ
ಪ್ರಾಬಲ್ಯವಿದ್ದವನೆ ಗೆಲ್ಲುವುದು
ಸೋತರೆ ಅವಮಾನ ಖಚಿತ
ನಿನ್ನಂತೆ ಇಲ್ಲಿ ಏನು ನಡೆಯದು

ಬೆಂಬಲಿಗರಿಲ್ಲದಿರೆ ನಂಬಿಕೆ ಇಲ್ಲ
ಹಂಬಲಿಸುವವರನಾರು ಬೆಂಬಲಿಸುವುದಿಲ್ಲ
ಬಿದ್ದ ನೀನು ಎದ್ದು ನಡೆ ಮುಂದೆ
ಆಗ ನಿನ್ಹಿಂದೆ ಬರುವುದು ಕುರಿಮಂದೆ

ನಿರೀಕ್ಷೆಗಳು  ಸುಳ್ಳಾಗುವುದು
ಪರೀಕ್ಷೆಗಳೇ ಗೆಲ್ಲಿಸುವುದು
ಆಸೆಪಡದೆ ಬಂದಂತೆ ನಡೆ
ಆಗ ಜಯ ನಿಲ್ಲುವುದು ನಿನ್ನೆದುರುಗಡೆ

ಏರಬೇಕೆಂದರೆ ಇಲ್ಲಿ 
ಕಾಲೆಳೆಯುವವರು ನೂರು ಮಂದಿ
ಹೆಜ್ಜೆ ಹೆಜ್ಜೆಗೂ ಎಡೆತಾಕುವರು 
ಕಳೆಯಲು ನಿನ್ನ ನೆಮ್ಮದಿ

ಎಚ್ಚರಿಕೆಯಿಂದ ಸಾಗಲಿ ಪಯಣ
ನಿನಗೆ ನೀನೇ ನಿಜ ಪ್ರೇರಣ
ಬಯಕೆಗಳ ಬೇಲಿ ದಾಟದಿರು
ನಿಂದಿಸುವವರೆದುರೆಂದು ಸೋಲದಿರು

೦೪೪೪ಪಿಎಂ೧೮೧೧೨೦೨೩
ಅಮುಭಾವಜೀವಿ ಮುಸ್ಟೂರು 

ಕವನ

ಮಂಜಿನ ತೆರೆ ಸರಿಸಿ
ಹೊಂಗಿರಣಗಳ ಹರಿಸಿ
ಮುಂಜಾನೆಯ ಮುಖ ಒರೆಸಿ
ಶುಭೋದಯ ಮೂಡಿ ಬಂತು

ಕತ್ತಲ ಮೆಲ್ಲ ಕರಗಿಸಿ
ಜಗವ ಜಾಗೃತಗೊಳಿಸಿ
ಖಗಮೃಗಾದಿಗಳ ದಿಗ್ದರ್ಶಿಸಿ
ಕಾಯಕ್ಕಣಿಗೊಳಿಸಿದ ಮುಂಜಾವು

ಹರಿವ ನೀರನಾದಕೆ ತಲೆ ತೂಗಿ
ಸಾಗರದಲೆಗಳಿಗೆ ಹೊಂಬಣ್ಣ ಹಚ್ಚಿ
ಸುಮರಾಶಿಗಳಿಗೆ ಮೆರುಗು ತಂದು
ದುಂಬಿಗಳ ಗಾನಕ್ಕೆ ಮಾರುಹೋದ ಬೆಳಗು

ಸಣ್ಣ ತನದವರನ್ನು ಕ್ಷಮಿಸಿ
ಹಿರಿತನದವರ ಪ್ರಶಂಸಿಸಿ
ಸಂಭಾವಿತ್ಯಕ್ಕೆ ಸಂಸ್ಕಾರ ನೀಡಿ
ಸಮಾನತೆಯ ಸದ್ಭಾವ ಮೂಡಿಸಿದ ಬೆಳಗು

ಕವಿ ಭಾವಕ್ಕೆ ಹೊಸತನ ನೀಡಿ
ಚಿತ್ರಕಾರನ ಕುಂಚದಿಂದ ತೀಡಿ
ಗಾನ ಕೋಗಿಲೆಯ ಕಂಠದೊಳು ಹಾಡಿ
ದಿನವ ಸ್ವಾಗತಿಸಿದ ಮಧುರ ಮುಂಜಾವು

0823ಎಎಂ23112023
ಅಮುಭಾವಜೀವಿ ಮುಸ್ಟೂರು

ಬೆಳ್ಳಿ ಮೋಡದ ಮರೆಯಿಂದ
ಹೊನ್ನ ಕಿರಣಗಳ ಏರಿ ಬಂದ
ಇನಾಗಮನಕೆ ದಿನೋದಯ
ಕವಿಭಾವದ ಶುಭೋದಯ

ಮಂಜಿನ ಮುಸುಕೊದ್ದ ಧರೆಗೆ
ತಂದ ಸುಮರಾಜಿಯ ಒಸಗೆ
ಕಣ್ಣು ಕೋರೈಸುವ ಬೆಳಕಿಗೆ
ಬಿಸಿಲಿನ ಶಾಖ ನೀಡಿದ ಜಗದ ಮೈಗೆ

ಹಕ್ಕಿ ಹಾಡಿನ ದನಿಯೊಂದಿಗೆ ಬೆರೆತು
ಅಂಧಕಾರ ನೀಗಿ ತಂದ ಹೊಸತು
ದಿನದ ಆರಂಭವೇ ಮನಮೋಹಕ
ಅದಕ್ಕೆ ಸ್ಪೂರ್ತಿ ಬಾಲ ಭಾಸ್ಕರನ ಕಾಯಕ

ಹರಿವ ನೀರಿನ ಜುಳುಜುಳು ನಾದ
ಮೊರೆವ ಅಲೆಗಳ ಸ್ನೇಹ ಸಂವಾದ
ನಿಸರ್ಗದ ರಮಣೀಯತೆಗೆ ವಶವಾಗಿ
ರವಿ ಕಾಣದ್ದನ್ನು ಕವಿ ಕಂಡು ಬರೆದ

ಇನ್ನೇಕೆ ಈ ಸೋಮಾರಿತನ
ಬೇಗ ಎದ್ದು ಆಸ್ವಾದಿಸಿ ಚೇತನ
ದಿನವೊಂದು ರವಿ ಬರೆದ ಚಂದ ಕವನ
ನಮಗೆಲ್ಲ ಬದುಕು ನೀಡಿದವನಿಗೊಂದು ನಮನ

07:38ಎಎಂ24112023
*ಅಮುಭಾವಜೀವಿ ಮುಷ್ಟೂರು*

* ಬರೀ ಬಡಾಯಿ ಜನ*

ಎಲ್ಲರೂ ಸುಳ್ಳರು ಎಲ್ಲರೂ ಕಳ್ಳರು
ತಮ್ಮ ಬೇಳೆ ಬೇಯಿಸಿಕೊಳ್ಳಲು
ಎಲ್ಲರೂ ಸಾಚಾಗಳು ಅವರಿಗೊಂದಿಷ್ಟು ಚಮಚಗಳು
ಆಡಿ ಹೊಗಳಿಸಿಕೊಳ್ಳಲು

ಒಂದಷ್ಟು ಒಳ್ಳೆಯ ಮಾತುಗಳು ಬರುವವು
ವೇದಿಕೆಯ ಮೇಲೆ ನಿಂತು ನೋಡಿವಾಗ
ಕೆಳಗಿಳಿದ ಮರುಕ್ಷಣವೇ ಬಣ್ಣ ಬಯಲು
ತಮ್ಮ ಹಳೆ ವರಸೆ ತೆಗೆಯುವರು ಆಗ

ಪ್ರಬಲರ ಚೋರತನ ಮರೆಯಾಗುವುದು
ಅವನ ಹಣ ಅಧಿಕಾರಗಳ ದರ್ಬಾರಿನ ಹಿಂದೆ
ಅವಲರ ಸಣ್ಣ ತಪ್ಪು ಬೆಟ್ಟವಾಗುವುದು
ಎಲ್ಲ ಮುಗಿಬಿದ್ದು ತುಳಿಯುವ ಕುರಿಮಂದೆ

ಅವರವರ ಮೂಗಿನ ನೇರಕ್ಕೆ 
ಇಲ್ಲಿ ನ್ಯಾಯ ತೀರ್ಮಾನ
ಒಮ್ಮೆ ಸರಿ ಕಂಡರೆ ಮುಗಿಯಿತು
ಎಲ್ಲೆಲ್ಲೂ ಹಾರ ತುರಾಯಿ ಸನ್ಮಾನ

ತೋರಿಕೆಗೆಂದು ಬರುವುದಿಲ್ಲ ಒಳ್ಳೆತನ
ಅದು ನಿತ್ಯ ಕರ್ಮದ ಸಹಜ ಗುಣ
ಇಕಿಲ್ಲ ಯಾರಿಗೂ ಅಂತಹ ಒಳ್ಳೆತನ
ಎಲ್ಲರದು ಮುಖವಾಡ ಕಳಚಿದ ಬಣ್ಣ

ಮಹೋನ್ನತ ಕಾರ್ಯ ಮಾಡಿದವರಲ್ಲಿ
ಎಂದೆಂದಿಗೂ ಆಗಿರುವರು ಎಲೆ ಮರೆಯ ಕಾಯಿ
ಉಗುರ ಮಣ್ಣಷ್ಟು ಚಿಗುರಿ ಮೆರೆವರು
ಜಗದಲಿ ಕೊಚ್ಚಿಕೊಂಡು ಬಡಾಯಿ

6:40 ಎಎಂ 25.11.2023
*ಅಮುಭಾವಜೀವಿ ಮುಷ್ಟೂರು*

*ದೂರುವವರ ದಾರಿ ತೊರೆ*

ಕಾಣದ್ದನ್ನು ನಂಬುವ ಜನ
ಸತ್ಯವನ್ನು ಅರಿಯುವುದಾದರೂ ಹೇಗೆ
ಕೇಳಿದ್ದೇ ಸರಿಯನ್ನುವ ಜನ
ನಂಬಿದ್ದೆಲ್ಲ ಸತ್ಯ ಎಂದು ತಿಳಿಯುವುದು ಹೇಗೆ

ಗಂಡಿನ ಪ್ರಾಮಾಣಿಕತೆಗಿಂತ
ಹೆಣ್ಣಿನ ಕಣ್ಣೀರಿಗೆ ಕರಗುವರು ಜನ
ಕುಣಿಸಿದವರನ್ನು ಬಿಟ್ಟು
ಕುಣಿಯುವವನ ಹಣಿಯುವರು ಜನ

ಪ್ರೀತಿಯ ಆಟವಾಡಿದವಳ 
ಖ್ಯಾತಿಯ ಕೊಂಡಾಡುವ ಜನ
ಪ್ರೀತಿಯಲ್ಲಿ ಮೋಸ ಹೋದವನ 
ಹಿಡಿದು ಬಡಿಯವರು ಜನ

ಕದ್ದವನ ಎಡೆಮುರಿ ಕಟ್ಟಿ
ಅವಮಾನಿಸಿ ದಂಡಿಸುವ ಜನ
ಕದಿಯಲು ಪ್ರೇರಣೆಯಾದವಳ 
ಆರಾಧಿವೇ ಬಹುಮಾನಿಸುವುದು ಜನ

ಗಂಡನ ತೊರೆದು ಪ್ರಿಯಕರನ
ತೆಕ್ಕೆಯೊಳಗಿರುವವಳ ಸೌಖ್ಯ ಕೇಳುವ ಜನ
ಗರತಿಯ ಕಂಡು ಗಹಸಿ ನಕ್ಕು
ಆಡಿಕೊಂಡು ದಿನ ದೂಡುವರು ಜನ

ನಂಬಲಾಗದು ದರೆಯ ಜನರನ್ನು
ಹೇಗಿದ್ದರೂ ಕಷ್ಟ ಮುಚ್ಚಲಾಗದು ಬಾಯನ್ನು
ದೂರುವವರ ದಾರಿ ತೊರೆದು
ಗೌರವಿಸುವವರ ಗರಡಿ ಸೇರಬೇಕೆನ್ನು

0151 ಪಿಎಂ 25.11.2023
ಅಮುಭಾವಜೀವಿ ಮುಸ್ಟೂರು



*'ತನಗ' ಜೀವನ ಯಾನ*

ಜೀವನದ ಯಾನವು
ನಗುತಿರೆ ಚೆನ್ನವು
ನೋವಿನ ಬಿಸಿಲಾರಿ
ನಲಿವ ಸಹಚಾರಿ

ಕಷ್ಟಗಳು ಬಂದಾಗ
ಕುಗ್ಗದೆ ಮುನ್ನಡೆಯೆ
ಸುಖವು ಜೊತೆಯಾಗಿ
ಬದುಕು ಸಹಜವು

ಅಂದವರು ನಿನ್ನೋರು
ತಪ್ಪುಗಳ ತಿದ್ದೋರು
ಒಪ್ಪದಿ ಕಾಯ್ದುಕೊಂಡು
ಬಾಳ ದೋಣಿ ಸಾಗಿಸು

ಸ್ನೇಹ ಜೊತೆಗಿರಲಿ
ಪ್ರೀತಿ ಸ್ಪೂರ್ತಿಯಾಗಲಿ 
ಬಾಳ ರಥ ಸಾರಥಿ
ಒಲವಿನ ಸಂಗಾತಿ

ಎದೆಗುಂದದೆ ಸಾಗು
ಎದುರೀಜಿ ದಡಸೇರು
ಎಂದೆಂದೂ ನಿನಗಾಗಿ
ಎದೆ ಭಾವ ಹಾಡಲಿ

0306ಪಿಎಂ25112023
*ಅಮುಭಾವಜೀವಿ ಮುಸ್ಟೂರು*

ಅವಳ ನೋವಿನ ವಿಸ್ತಾರ
ಅಳಿಸಿ ಹಾಕಿದೆ ಸಂಸಾರ
ಏನೇ ಬಂದರೂ ನುಂಗಿ ಕೊಂಡಳು
ತನ್ನವರಿಗಾಗಿ ತಾನೇ ಸಹಿಸಿಕೊಂಡಳು

ದುಡಿದು ದುಡಿದು ದಣಿದ ಜೀವಕ್ಕೆ
ಕುಗ್ಗಿ ಹೋದಳು ಕೂಡಿದ ಗಂಡನ ಹೊಡೆತಕ್ಕೆ
ಮಕ್ಕಳಿಗಾಗಿ ಜೀವ ಬಿಗಿ ಹಿಡಿದಳು
ಎಲ್ಲ ಹಿಂಸೆ ಅವಮಾನಗಳಿಗೆ ಬಂಡೆಯಾದಳು

ಅಮ್ಮನಾಗದ  ಅತ್ತೆಯ ಕಿರುಕುಳ
ವಾರಗಿತ್ತಿಯರ ಅಸಹನೆ ಉಪಟಳ
ಬೇಸತ್ತು ಸುಸ್ತಾಗಿ ಕುಳಿತಳು
ಹಸಿದ ಹೊಟ್ಟೆಗಾಗಿ ಮತ್ತೆ ದುಡಿಯ ಹೊರಟಳು

ಕೂಲಿಯಿಂದ ಮನೆಗೆ ಬರುವ ಮುಂಚೆ
ಕುಡುಕ ಗಂಡನ ಕೈ ಸೇರಿ ಖಾಲಿಯಾಗಿತ್ತು
ಹರಿದ ರವಿಕೆ ಗಂಟು ಸೀರೆ
ಎಣ್ಣೆ ಕಾಣದ ಕೂದಲು ಅವಳ ಸ್ಥಿತಿಗೆ ಸಾಕ್ಷಿಯಾಗಿತ್ತು

ತಾಯಿಲ್ಲದ ತವರಿನ ತಬ್ಬಲಿ ಈಕೆ
ಎಷ್ಟೇ ದುಡಿದರು ಕೈ ಸೇರದ ಸಿರಿವಂತಿಕೆ
ಬಡತನ ಹೆಣ್ಣಿಗೊಂದು ಶಾಪ
ತನ್ನ ದಂಡನೆಗೆ ಸೀಮಿತ ಅವಳ ಕೋಪ

ಬೇಡದ ಬದುಕಲಿ ಸಾಯಲು ಇಷ್ಟವಿಲ್ಲ
ಏನೇ ಆದರೂ ಗೆಲ್ಲಬೇಕೆಂಬ ಹಂಬಲ ಕಮ್ಮಿಯಾಗಿಲ್ಲ
ಬಡ ಹೆಂಗಳೆಯರ ಅಂತ‌ಸತ್ವವಿದು
ಅದಾವ ದೈವ ಶಕ್ತಿ ಅವರ ಸಲಹುವುದೋ

431 ಪಿಎಂ 25.11.2023
*ಅಮುಭಾವಜೀವಿ ಮುಷ್ಟೂರು*

*ಬೆಳಗಿಗೆ 'ತನಗೋ"ಪಾಸನೆ*

ಇನನ ಆಗಮನ
ದಿನದ ಆರಂಭವು
ಮುಂಜಾನೆಯ ಬೆಳಕು
ಅರಳಿದವು ಹೂವು

ಮಂಜಿನ ಹನಿ ಸಾಲು
ಕಣ್ತೆರೆದ ಹಗಲು
ದಿನಪೂರ್ತಿ ಚೇತನ
ಕಾಯಕ ದೀಕ್ಷೆ ತೊಡು

ಇರುಳು ಕಳೆಯಿತು
ಬೆಳಕು ತಾ ಮೂಡಿತು
ದಣಿವೆಲ್ಲ ನೀಡಿತು
ಭರವಸೆಯ ತಂತು

ಹಕ್ಕಿ ಹಾಡಲು ಗಾನ
ನಕ್ಕು ನಲಿಯೆ ಬನ
ಹೊಳೆವ ಹೊಂಗಿರಣ
ದುಡಿಮೆಯ ಪ್ರೇರಣ

ಎದ್ದೇಳು ಅಣಿಯಾಗು
ದುಡಿಯಲು ಸಜ್ಜಾಗು
ಮಡಿ ಮೈಲಿಗೆ ಬಿಡು
ಶುದ್ಧ ಮನದಿ ನಡೆ

೦೬೫೬ಎಎಂ೨೬೧೧೨೦೨೩
*ಅಮುಭಾವಜೀವಿ ಮುಷ್ಟೂರು*

ಅದೇಕೋ ಗೊತ್ತಿಲ್ಲ
ಎಲ್ಲರಿಂದಲೂ ತಿರಸ್ಕೃತಗೊಂಡು
ಎಲ್ಲರ ಮಾತಿಗೂ ಆಹಾರವಾಗಿ
ಮೆಲ್ಲಿದವರೆಲ್ಲ ಉಗಿದು ಹೋದರು

ಅದೇಕೋ ಗೊತ್ತಿಲ್ಲ
ನಿನ್ನೆಗಳು ಓಡುತಿದೆ ದೂರ
ನಾಳೆಗಳ ನೆನೆದರೆ ಘೋರ
ಇಂದೆಂಬುದು ತಡೆಯಲು ಬಲು ಬಾರ

ಅದೇಕೋ ಗೊತ್ತಿಲ್ಲ
ಸ್ನೇಹ ಬಲು ದುಬಾರಿ
ಪ್ರೀತಿ ಅಲೆಮಾರಿ
ಸಂಬಂಧಗಳು ಭದ್ರ ತಿಜೋರಿ

ಅದೇಕೋ ಗೊತ್ತಿಲ್ಲ
ಶುದ್ಧ ಹಸ್ತರು ಯಾರಿಲ್ಲ
ಕದ್ದು ಗೆದ್ದವರೇ ಎಲ್ಲ
ನಂಬಿಕೆಗೆ ಅರ್ಹರು ಇಲ್ಲಿ ಯಾರಿಲ್ಲ

ಅದೇಕೋ ಗೊತ್ತಿಲ್ಲ
ಅವಳ ಮಾತು ನಂಬಿದರು
ಇವನ ಮಾತ ಅಲ್ಲಗಳೆದರು
ಇಬ್ಬರ ಮಧ್ಯೆ ಮೂರನೆಯವರೇಕೆ ಬಂದರು

ಅದೇಕೋ ಗೊತ್ತಿಲ್ಲ
ಎಲ್ಲ ನನ್ನ ಮರೆತರು
ಯಾರು ನನ್ನ ಕರೆಯದಾದರೂ
ಮುಗಿದುಹೋಯಿತೇ ನನ್ನ ಖದರು

೦1೦2 ಪಿಎಂ 26.11.2023
*ಅಮುಭಾವಜೀವಿ ಮುಷ್ಟೂರು*

ಕವನ

ಮಂಜಿನ ತೆರೆ ಸರಿಸಿ
ಹೊಂಗಿರಣಗಳ ಹರಿಸಿ
ಮುಂಜಾನೆಯ ಮುಖ ಒರೆಸಿ
ಶುಭೋದಯ ಮೂಡಿ ಬಂತು

ಕತ್ತಲ ಮೆಲ್ಲ ಕರಗಿಸಿ
ಜಗವ ಜಾಗೃತಗೊಳಿಸಿ
ಖಗಮೃಗಾದಿಗಳ ದಿಗ್ದರ್ಶಿಸಿ
ಕಾಯಕ್ಕಣಿಗೊಳಿಸಿದ ಮುಂಜಾವು

ಹರಿವ ನೀರನಾದಕೆ ತಲೆ ತೂಗಿ
ಸಾಗರದಲೆಗಳಿಗೆ ಹೊಂಬಣ್ಣ ಹಚ್ಚಿ
ಸುಮರಾಶಿಗಳಿಗೆ ಮೆರುಗು ತಂದು
ದುಂಬಿಗಳ ಗಾನಕ್ಕೆ ಮಾರುಹೋದ ಬೆಳಗು

ಸಣ್ಣ ತನದವರನ್ನು ಕ್ಷಮಿಸಿ
ಹಿರಿತನದವರ ಪ್ರಶಂಸಿಸಿ
ಸಂಭಾವಿತ್ಯಕ್ಕೆ ಸಂಸ್ಕಾರ ನೀಡಿ
ಸಮಾನತೆಯ ಸದ್ಭಾವ ಮೂಡಿಸಿದ ಬೆಳಗು

ಕವಿ ಭಾವಕ್ಕೆ ಹೊಸತನ ನೀಡಿ
ಚಿತ್ರಕಾರನ ಕುಂಚದಿಂದ ತೀಡಿ
ಗಾನ ಕೋಗಿಲೆಯ ಕಂಠದೊಳು ಹಾಡಿ
ದಿನವ ಸ್ವಾಗತಿಸಿದ ಮಧುರ ಮುಂಜಾವು

0823ಎಎಂ23112023
ಅಮುಭಾವಜೀವಿ ಮುಸ್ಟೂರು

ಬೆಳ್ಳಿ ಮೋಡದ ಮರೆಯಿಂದ
ಹೊನ್ನ ಕಿರಣಗಳ ಏರಿ ಬಂದ
ಇನಾಗಮನಕೆ ದಿನೋದಯ
ಕವಿಭಾವದ ಶುಭೋದಯ

ಮಂಜಿನ ಮುಸುಕೊದ್ದ ಧರೆಗೆ
ತಂದ ಸುಮರಾಜಿಯ ಒಸಗೆ
ಕಣ್ಣು ಕೋರೈಸುವ ಬೆಳಕಿಗೆ
ಬಿಸಿಲಿನ ಶಾಖ ನೀಡಿದ ಜಗದ ಮೈಗೆ

ಹಕ್ಕಿ ಹಾಡಿನ ದನಿಯೊಂದಿಗೆ ಬೆರೆತು
ಅಂಧಕಾರ ನೀಗಿ ತಂದ ಹೊಸತು
ದಿನದ ಆರಂಭವೇ ಮನಮೋಹಕ
ಅದಕ್ಕೆ ಸ್ಪೂರ್ತಿ ಬಾಲ ಭಾಸ್ಕರನ ಕಾಯಕ

ಹರಿವ ನೀರಿನ ಜುಳುಜುಳು ನಾದ
ಮೊರೆವ ಅಲೆಗಳ ಸ್ನೇಹ ಸಂವಾದ
ನಿಸರ್ಗದ ರಮಣೀಯತೆಗೆ ವಶವಾಗಿ
ರವಿ ಕಾಣದ್ದನ್ನು ಕವಿ ಕಂಡು ಬರೆದ

ಇನ್ನೇಕೆ ಈ ಸೋಮಾರಿತನ
ಬೇಗ ಎದ್ದು ಆಸ್ವಾದಿಸಿ ಚೇತನ
ದಿನವೊಂದು ರವಿ ಬರೆದ ಚಂದ ಕವನ
ನಮಗೆಲ್ಲ ಬದುಕು ನೀಡಿದವನಿಗೊಂದು ನಮನ

07:38ಎಎಂ24112023
*ಅಮುಭಾವಜೀವಿ ಮುಷ್ಟೂರು*

* ಬರೀ ಬಡಾಯಿ ಜನ*

ಎಲ್ಲರೂ ಸುಳ್ಳರು ಎಲ್ಲರೂ ಕಳ್ಳರು
ತಮ್ಮ ಬೇಳೆ ಬೇಯಿಸಿಕೊಳ್ಳಲು
ಎಲ್ಲರೂ ಸಾಚಾಗಳು ಅವರಿಗೊಂದಿಷ್ಟು ಚಮಚಗಳು
ಆಡಿ ಹೊಗಳಿಸಿಕೊಳ್ಳಲು

ಒಂದಷ್ಟು ಒಳ್ಳೆಯ ಮಾತುಗಳು ಬರುವವು
ವೇದಿಕೆಯ ಮೇಲೆ ನಿಂತು ನೋಡಿವಾಗ
ಕೆಳಗಿಳಿದ ಮರುಕ್ಷಣವೇ ಬಣ್ಣ ಬಯಲು
ತಮ್ಮ ಹಳೆ ವರಸೆ ತೆಗೆಯುವರು ಆಗ

ಪ್ರಬಲರ ಚೋರತನ ಮರೆಯಾಗುವುದು
ಅವನ ಹಣ ಅಧಿಕಾರಗಳ ದರ್ಬಾರಿನ ಹಿಂದೆ
ಅವಲರ ಸಣ್ಣ ತಪ್ಪು ಬೆಟ್ಟವಾಗುವುದು
ಎಲ್ಲ ಮುಗಿಬಿದ್ದು ತುಳಿಯುವ ಕುರಿಮಂದೆ

ಅವರವರ ಮೂಗಿನ ನೇರಕ್ಕೆ 
ಇಲ್ಲಿ ನ್ಯಾಯ ತೀರ್ಮಾನ
ಒಮ್ಮೆ ಸರಿ ಕಂಡರೆ ಮುಗಿಯಿತು
ಎಲ್ಲೆಲ್ಲೂ ಹಾರ ತುರಾಯಿ ಸನ್ಮಾನ

ತೋರಿಕೆಗೆಂದು ಬರುವುದಿಲ್ಲ ಒಳ್ಳೆತನ
ಅದು ನಿತ್ಯ ಕರ್ಮದ ಸಹಜ ಗುಣ
ಇಕಿಲ್ಲ ಯಾರಿಗೂ ಅಂತಹ ಒಳ್ಳೆತನ
ಎಲ್ಲರದು ಮುಖವಾಡ ಕಳಚಿದ ಬಣ್ಣ

ಮಹೋನ್ನತ ಕಾರ್ಯ ಮಾಡಿದವರಲ್ಲಿ
ಎಂದೆಂದಿಗೂ ಆಗಿರುವರು ಎಲೆ ಮರೆಯ ಕಾಯಿ
ಉಗುರ ಮಣ್ಣಷ್ಟು ಚಿಗುರಿ ಮೆರೆವರು
ಜಗದಲಿ ಕೊಚ್ಚಿಕೊಂಡು ಬಡಾಯಿ

6:40 ಎಎಂ 25.11.2023
*ಅಮುಭಾವಜೀವಿ ಮುಷ್ಟೂರು*

*ದೂರುವವರ ದಾರಿ ತೊರೆ*

ಕಾಣದ್ದನ್ನು ನಂಬುವ ಜನ
ಸತ್ಯವನ್ನು ಅರಿಯುವುದಾದರೂ ಹೇಗೆ
ಕೇಳಿದ್ದೇ ಸರಿಯನ್ನುವ ಜನ
ನಂಬಿದ್ದೆಲ್ಲ ಸತ್ಯ ಎಂದು ತಿಳಿಯುವುದು ಹೇಗೆ

ಗಂಡಿನ ಪ್ರಾಮಾಣಿಕತೆಗಿಂತ
ಹೆಣ್ಣಿನ ಕಣ್ಣೀರಿಗೆ ಕರಗುವರು ಜನ
ಕುಣಿಸಿದವರನ್ನು ಬಿಟ್ಟು
ಕುಣಿಯುವವನ ಹಣಿಯುವರು ಜನ

ಪ್ರೀತಿಯ ಆಟವಾಡಿದವಳ 
ಖ್ಯಾತಿಯ ಕೊಂಡಾಡುವ ಜನ
ಪ್ರೀತಿಯಲ್ಲಿ ಮೋಸ ಹೋದವನ 
ಹಿಡಿದು ಬಡಿಯವರು ಜನ

ಕದ್ದವನ ಎಡೆಮುರಿ ಕಟ್ಟಿ
ಅವಮಾನಿಸಿ ದಂಡಿಸುವ ಜನ
ಕದಿಯಲು ಪ್ರೇರಣೆಯಾದವಳ 
ಆರಾಧಿವೇ ಬಹುಮಾನಿಸುವುದು ಜನ

ಗಂಡನ ತೊರೆದು ಪ್ರಿಯಕರನ
ತೆಕ್ಕೆಯೊಳಗಿರುವವಳ ಸೌಖ್ಯ ಕೇಳುವ ಜನ
ಗರತಿಯ ಕಂಡು ಗಹಸಿ ನಕ್ಕು
ಆಡಿಕೊಂಡು ದಿನ ದೂಡುವರು ಜನ

ನಂಬಲಾಗದು ದರೆಯ ಜನರನ್ನು
ಹೇಗಿದ್ದರೂ ಕಷ್ಟ ಮುಚ್ಚಲಾಗದು ಬಾಯನ್ನು
ದೂರುವವರ ದಾರಿ ತೊರೆದು
ಗೌರವಿಸುವವರ ಗರಡಿ ಸೇರಬೇಕೆನ್ನು

0151 ಪಿಎಂ 25.11.2023
ಅಮುಭಾವಜೀವಿ ಮುಸ್ಟೂರು



*'ತನಗ' ಜೀವನ ಯಾನ*

ಜೀವನದ ಯಾನವು
ನಗುತಿರೆ ಚೆನ್ನವು
ನೋವಿನ ಬಿಸಿಲಾರಿ
ನಲಿವ ಸಹಚಾರಿ

ಕಷ್ಟಗಳು ಬಂದಾಗ
ಕುಗ್ಗದೆ ಮುನ್ನಡೆಯೆ
ಸುಖವು ಜೊತೆಯಾಗಿ
ಬದುಕು ಸಹಜವು

ಅಂದವರು ನಿನ್ನೋರು
ತಪ್ಪುಗಳ ತಿದ್ದೋರು
ಒಪ್ಪದಿ ಕಾಯ್ದುಕೊಂಡು
ಬಾಳ ದೋಣಿ ಸಾಗಿಸು

ಸ್ನೇಹ ಜೊತೆಗಿರಲಿ
ಪ್ರೀತಿ ಸ್ಪೂರ್ತಿಯಾಗಲಿ 
ಬಾಳ ರಥ ಸಾರಥಿ
ಒಲವಿನ ಸಂಗಾತಿ

ಎದೆಗುಂದದೆ ಸಾಗು
ಎದುರೀಜಿ ದಡಸೇರು
ಎಂದೆಂದೂ ನಿನಗಾಗಿ
ಎದೆ ಭಾವ ಹಾಡಲಿ

0306ಪಿಎಂ25112023
*ಅಮುಭಾವಜೀವಿ ಮುಸ್ಟೂರು*

ಅವಳ ನೋವಿನ ವಿಸ್ತಾರ
ಅಳಿಸಿ ಹಾಕಿದೆ ಸಂಸಾರ
ಏನೇ ಬಂದರೂ ನುಂಗಿ ಕೊಂಡಳು
ತನ್ನವರಿಗಾಗಿ ತಾನೇ ಸಹಿಸಿಕೊಂಡಳು

ದುಡಿದು ದುಡಿದು ದಣಿದ ಜೀವಕ್ಕೆ
ಕುಗ್ಗಿ ಹೋದಳು ಕೂಡಿದ ಗಂಡನ ಹೊಡೆತಕ್ಕೆ
ಮಕ್ಕಳಿಗಾಗಿ ಜೀವ ಬಿಗಿ ಹಿಡಿದಳು
ಎಲ್ಲ ಹಿಂಸೆ ಅವಮಾನಗಳಿಗೆ ಬಂಡೆಯಾದಳು

ಅಮ್ಮನಾಗದ  ಅತ್ತೆಯ ಕಿರುಕುಳ
ವಾರಗಿತ್ತಿಯರ ಅಸಹನೆ ಉಪಟಳ
ಬೇಸತ್ತು ಸುಸ್ತಾಗಿ ಕುಳಿತಳು
ಹಸಿದ ಹೊಟ್ಟೆಗಾಗಿ ಮತ್ತೆ ದುಡಿಯ ಹೊರಟಳು

ಕೂಲಿಯಿಂದ ಮನೆಗೆ ಬರುವ ಮುಂಚೆ
ಕುಡುಕ ಗಂಡನ ಕೈ ಸೇರಿ ಖಾಲಿಯಾಗಿತ್ತು
ಹರಿದ ರವಿಕೆ ಗಂಟು ಸೀರೆ
ಎಣ್ಣೆ ಕಾಣದ ಕೂದಲು ಅವಳ ಸ್ಥಿತಿಗೆ ಸಾಕ್ಷಿಯಾಗಿತ್ತು

ತಾಯಿಲ್ಲದ ತವರಿನ ತಬ್ಬಲಿ ಈಕೆ
ಎಷ್ಟೇ ದುಡಿದರು ಕೈ ಸೇರದ ಸಿರಿವಂತಿಕೆ
ಬಡತನ ಹೆಣ್ಣಿಗೊಂದು ಶಾಪ
ತನ್ನ ದಂಡನೆಗೆ ಸೀಮಿತ ಅವಳ ಕೋಪ

ಬೇಡದ ಬದುಕಲಿ ಸಾಯಲು ಇಷ್ಟವಿಲ್ಲ
ಏನೇ ಆದರೂ ಗೆಲ್ಲಬೇಕೆಂಬ ಹಂಬಲ ಕಮ್ಮಿಯಾಗಿಲ್ಲ
ಬಡ ಹೆಂಗಳೆಯರ ಅಂತ‌ಸತ್ವವಿದು
ಅದಾವ ದೈವ ಶಕ್ತಿ ಅವರ ಸಲಹುವುದೋ

431 ಪಿಎಂ 25.11.2023
*ಅಮುಭಾವಜೀವಿ ಮುಷ್ಟೂರು*

*ಬೆಳಗಿಗೆ 'ತನಗೋ"ಪಾಸನೆ*

ಇನನ ಆಗಮನ
ದಿನದ ಆರಂಭವು
ಮುಂಜಾನೆಯ ಬೆಳಕು
ಅರಳಿದವು ಹೂವು

ಮಂಜಿನ ಹನಿ ಸಾಲು
ಕಣ್ತೆರೆದ ಹಗಲು
ದಿನಪೂರ್ತಿ ಚೇತನ
ಕಾಯಕ ದೀಕ್ಷೆ ತೊಡು

ಇರುಳು ಕಳೆಯಿತು
ಬೆಳಕು ತಾ ಮೂಡಿತು
ದಣಿವೆಲ್ಲ ನೀಡಿತು
ಭರವಸೆಯ ತಂತು

ಹಕ್ಕಿ ಹಾಡಲು ಗಾನ
ನಕ್ಕು ನಲಿಯೆ ಬನ
ಹೊಳೆವ ಹೊಂಗಿರಣ
ದುಡಿಮೆಯ ಪ್ರೇರಣ

ಎದ್ದೇಳು ಅಣಿಯಾಗು
ದುಡಿಯಲು ಸಜ್ಜಾಗು
ಮಡಿ ಮೈಲಿಗೆ ಬಿಡು
ಶುದ್ಧ ಮನದಿ ನಡೆ

೦೬೫೬ಎಎಂ೨೬೧೧೨೦೨೩
*ಅಮುಭಾವಜೀವಿ ಮುಷ್ಟೂರು*

ಅದೇಕೋ ಗೊತ್ತಿಲ್ಲ
ಎಲ್ಲರಿಂದಲೂ ತಿರಸ್ಕೃತಗೊಂಡು
ಎಲ್ಲರ ಮಾತಿಗೂ ಆಹಾರವಾಗಿ
ಮೆಲ್ಲಿದವರೆಲ್ಲ ಉಗಿದು ಹೋದರು

ಅದೇಕೋ ಗೊತ್ತಿಲ್ಲ
ನಿನ್ನೆಗಳು ಓಡುತಿದೆ ದೂರ
ನಾಳೆಗಳ ನೆನೆದರೆ ಘೋರ
ಇಂದೆಂಬುದು ತಡೆಯಲು ಬಲು ಬಾರ

ಅದೇಕೋ ಗೊತ್ತಿಲ್ಲ
ಸ್ನೇಹ ಬಲು ದುಬಾರಿ
ಪ್ರೀತಿ ಅಲೆಮಾರಿ
ಸಂಬಂಧಗಳು ಭದ್ರ ತಿಜೋರಿ

ಅದೇಕೋ ಗೊತ್ತಿಲ್ಲ
ಶುದ್ಧ ಹಸ್ತರು ಯಾರಿಲ್ಲ
ಕದ್ದು ಗೆದ್ದವರೇ ಎಲ್ಲ
ನಂಬಿಕೆಗೆ ಅರ್ಹರು ಇಲ್ಲಿ ಯಾರಿಲ್ಲ

ಅದೇಕೋ ಗೊತ್ತಿಲ್ಲ
ಅವಳ ಮಾತು ನಂಬಿದರು
ಇವನ ಮಾತ ಅಲ್ಲಗಳೆದರು
ಇಬ್ಬರ ಮಧ್ಯೆ ಮೂರನೆಯವರೇಕೆ ಬಂದರು

ಅದೇಕೋ ಗೊತ್ತಿಲ್ಲ
ಎಲ್ಲ ನನ್ನ ಮರೆತರು
ಯಾರು ನನ್ನ ಕರೆಯದಾದರೂ
ಮುಗಿದುಹೋಯಿತೇ ನನ್ನ ಖದರು

೦1೦2 ಪಿಎಂ 26.11.2023
*ಅಮುಭಾವಜೀವಿ ಮುಷ್ಟೂರು*

Tuesday, November 14, 2023

ಮಕ್ಕಳ ದಿನಾಚರಣೆಯ ವಿಶೇಷ ಲೇಖನ

*ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಭಾಗಿದಾರರ ಪಾತ್ರ*

ಮಕ್ಕಳು ಮನುಕುಲದ ಕುಸುಮಗಳು, ಅವುಗಳನ್ನು ಪ್ರೀತಿಯಿಂದ ಪೋಷಿಸಬೇಕು, ಮನಸ್ಸು ನಿಷ್ಕಲ್ಮಶ ಬಿಳಿ ವಸ್ತ್ರದಂತೆ ಅಲ್ಲಿ ನಕಾರಾತ್ಮಕತೆಯ ಕರಿ ಛಾಯೆ ಮೂಡದಂತೆ ಎಚ್ಚರ ವಹಿಸಬೇಕು. ಮಕ್ಕಳ ವ್ಯಕ್ತಿತ್ವ ಗೋಡೆಗೆ ಎಸೆದ ಚಂಡಿನಂತೆ. ಅದಕ್ಕೆ ನಾವೇನನ್ನು ತುಂಬುತ್ತೇವೆಯೋ ಪಲಿತಾಂಶವನ್ನು ಕೊಡುತ್ತದೆ. ಯಾವ ಮಗು ಬಲಹೀನವಲ್ಲ ಯಾವ ಮಗು ನಿಷ್ಪ್ರಯೋಜಕವಲ್ಲ. ಹಿರಿಯರ ನಡೆ ನುಡಿಗಳು ಮಗುವಿನ ಮನಸ್ಸಿನಲ್ಲಿ ಪ್ರತಿಫಲನಗೊಂಡು ಸಾಕ್ಷಾತ್ಕಾರಗೊಳ್ಳುತ್ತದೆ. ಹಾಗಾಗಿ ನಾವು ಮಕ್ಕಳ ಮುಂದೆ ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ತಂದೆ ತಾಯಿ ಮತ್ತು ಗುರುಗಳ ಮಾರ್ಗದರ್ಶನ ಮಕ್ಕಳಿಗೆ ಅತಿ ಅವಶ್ಯಕ. ಈ ಮೂರು ಸ್ಥರಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಹಾದಿ ತಪ್ಪುತ್ತದೆ. ತಂದೆ ತಾಯಿ ಮತ್ತು ಗುರುಗಳನ್ನು ಹಿಂಬಾಲಿಸುತ್ತದೆ. ಮಗುವಿಗೆ ಈ ಮೂವರ ಮಾತು ಭೇದ ವಾಕ್ಯ.

ಮಗು ಗೆಳೆಯರೊಂದಿಗೆ ಆಟಿಕೆಗಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಯಾರೊಂದಿಗೆ ಬೆರೆಯುತ್ತಾರೆ ಯಾವ ವಸ್ತುಗಳೊಂದಿಗೆ ಆಡುತ್ತಾರೆ ಎಂಬುದನ್ನು ಗಮನಿಸಬೇಕು. ವ್ಯಕ್ತಿ ಮತ್ತು ಒಳ್ಳೆಯ ವಸ್ತುಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗುತ್ತವೆ. ಹಂತದಲ್ಲಿ ಮಕ್ಕಳಿಗೆ ಒತ್ತಾಯದ ಓದಿಗಿಂತ ಆಸಕ್ತಿಯನ್ನು ಕೆರಳಿಸುವಂತಹ ವಿಚಾರಗಳ ಪುಸ್ತಕಗಳನ್ನು ಓದಲು ಮಾರ್ಗದರ್ಶನ ಮಾಡಬೇಕು ಹಾಗೂ ಕಲಿತದ್ದನ್ನು ಓದಿದ್ದನ್ನು ಗೆಳೆಯರೊಂದಿಗೆ ಹಂಚಿಕೊಂಡು ಅವರನ್ನು ಸಹ ತನ್ನ ಓದಿನ ಅನುಭವವನ್ನು ಇಮ್ಮಡಿಗೊಳಿಸುವಂತಹ ವಾತಾವರಣವನ್ನು ಮಗು ಸೃಷ್ಟಿ ಮಾಡಿಕೊಳ್ಳಲು ಪ್ರೇರೇಪಿಸಬೇಕು. ಮಗು ಕೇಳುತ್ತದೆ ಎಂದು ಎಲ್ಲವನ್ನೂ ಖರೀದಿಸಿ ಕೊಡುವ ಗೀಳಿಗೆ ಬೀಳಬಾರದು. ಆ ವಸ್ತುವಿನ ಮೌಲ್ಯ ಗೊತ್ತಾಗಬೇಕೆಂದರೆ ಅದನ್ನು ಪಡೆಯುವ ಕಷ್ಟವೂ ಆ ಮಗುವಿಗೆ ಗೊತ್ತಿರಬೇಕು ಆಗ ಆ ವಸ್ತುಗಳನ್ನು ಅತ್ಯಂತ ಜಾಗರೂಕತೆಯಿಂದ ಅಷ್ಟೇ ಆಸ್ತೆಯಿಂದ ಕಾಪಾಡಿಕೊಂಡು ಬರುತ್ತದೆ. ಕೇಳಿದ್ದನ್ನೆಲ್ಲ ಕೊಡಿಸುವ ಬದಲು ಅವಶ್ಯಕತೆ ವಾಗಿರುವುದನ್ನು ಮಾತ್ರ ಮಕ್ಕಳಿಗೆ ಕೊಡಿಸಬೇಕು.

   ಮಕ್ಕಳಿಗೆ ಮೌಲ್ಯಗಳ ಪರಿಚಯವಾಗಬೇಕು. ನೈತಿಕ ಮೌಲ್ಯಗಳನ್ನು ಎಳವೆಯಿಂದಲೇ ಅದರ ಮನಸ್ಸಿನೊಳಗೆ ಬಿತ್ತಬೇಕು. ಮೌಲ್ಯಗಳನ್ನು ಬಿತ್ತುವ ಜನರ ವ್ಯಕ್ತಿತ್ವ ಸಹ ಮೌಲ್ಯಯುತವಾಗಿರಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಆದರೆ ಮಗುವಿನ ಮನಸ್ಸಿನಲ್ಲಿ ಗೊಂದಲ ಉಂಟಾಗಿ ಅದು ಬೇರೊಂದು ಹಾದಿ ಹಿಡಿಯುವ ಪ್ರಮೇಯ ಬರುತ್ತದೆ. ಅದನ್ನೇ ಆದರೂ ಮಕ್ಕಳಿಗೆ ಒತ್ತಾಯ ಪೂರಕವಾಗಿ ತುರುಕುವ ಬದಲು ಮಗುವಿನ ಆಸಕ್ತಿಗನುಗುಣವಾದ ಮೌಲ್ಯಗಳನ್ನು ತಿಳಿಸುತ್ತಾ ಹೋಗಬೇಕು. ಕೆಲವು ಮಕ್ಕಳು ಸೌಮ್ಯವಾಗಿರುತ್ತವೆ ಇನ್ನೂ ಕೆಲವು ಮಕ್ಕಳು ಅಸಹಜವಾಗಿ ವರ್ತಿಸುತ್ತಿರುತ್ತವೆ. ಸಂದರ್ಭದಲ್ಲಿ ಮಕ್ಕಳನ್ನು ತಾರತಮ್ಯ ಮಾಡದೆ ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಒಳ್ಳೆಯ ಮಕ್ಕಳು ಕೆಟ್ಟ ಮಕ್ಕಳು ಎಂದು ಬೇರ್ಪಡಿಸಿ ಆ ಕೀಳರಿಮೆ ಮನಸ್ಸಿನಲ್ಲಿ ಬೇರೂರುವಂತೆ ಮಾಡುವ ಬದಲು ಒಳ್ಳೆಯವರನ್ನು ಹೊಗಳದೇ ಕೆಟ್ಟವರನ್ನು ತೆಗಳದೇ ಆಯಾ ಸನ್ನಿವೇಶಕ್ಕೆ ತಕ್ಕಂತೆ ಮಕ್ಕಳಲ್ಲಿ ನೈತಿಕ ಮೌಲ್ಯಗಳ ತಿಳುವಳಿಕೆ ನೀಡುವ ಮೂಲಕ ಅವರ ವ್ಯಕ್ತಿತ್ವದಲ್ಲಿ ಆಗಬಹುದಾದ ಆ ಬದಲಾವಣೆಗಳನ್ನು ಸರಿದಾರಿಯಲ್ಲಿ ಮುನ್ನಡೆಸುವ ಚಾಣಾಕ್ಷತೆ ಅವರನ್ನು ಮಾರ್ಗದರ್ಶಿಸುವವರಲ್ಲಿ ಇರಬೇಕಾಗುತ್ತದೆ.

ಮನೆಯಲ್ಲಿ ತಂದೆ ತಾಯಿಗಳು ಶಾಲೆಯಲ್ಲಿ ಶಿಕ್ಷಕರು ಸಮಾಜದಲ್ಲಿ ಹಿರಿಯರು ಪ್ರತಿಯೊಂದು ಮಗುವಿನ ಚಲನವಲನಗಳ ಬಗ್ಗೆ ಗಮನಹರಿಸಿ ಯಾವ ಮಗುವಿಗೆ ಯಾವ ರೀತಿಯ ಮಾರ್ಗದರ್ಶನ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಅದನ್ನು ಪೂರೈಸಲು ಆಗುತ್ತದೆ ಶ್ರಮಿಸಬೇಕಾಗುತ್ತದೆ. ನಮ್ಮಗಳ ಕಾರ್ಯದೊತ್ತಡದಿಂದಾಗಿ ಮಕ್ಕಳನ್ನು ನಿರ್ಲಕ್ಷಿಸುವ ಅವರಿಗಾಗಿ ಸಮಯ ಮೀಸಲಿಡುವ ಪ್ರಕ್ರಿಯೆಯಿಂದ ಹಿಂದೆ ಸರಿಯಬಾರದು. ಇದರಿಂದ ಮಗು ತನಗೆ ಅವಶ್ಯಕತೆ ಇರುವಾಗ ಅದನ್ನು ಕೇಳುವವರಿಲ್ಲ ಎಂಬ ಕಾರಣಕ್ಕೆ ತನಗೆ ತೋಚಿದಂತೆ ಬೆಳೆಯುತ್ತೆ. ಅದಕ್ಕಾಗಿ ಪ್ರತಿಯೊಬ್ಬರೂ ಮಗು ನಮ್ಮ ಬಳಿ ಬಂದಾಗ ನಮ್ಮ ಎಲ್ಲ ಒತ್ತಡಗಳನ್ನು ಬದುಕಿಟ್ಟು ಅದರ ಮಾತುಗಳನ್ನು ಕೇಳಿ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದಾಗ ಮಾತ್ರ ಮಗು ಸಚ್ಚಾರಿತ್ರ್ಯವಂತನಾಗುತ್ತಾನೆ ಅಲ್ಲದೆ ಅವನ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಗೌರವ ಕೊಡುವುದನ್ನು ಕಲಿಯುತ್ತಾನೆ. ನಮ್ಮ ಕನಸುಗಳು ಮಗುವಿನ ಮೇಲೆ ಹೇರಿಕೆಯಾಗದಂತೆ ಎಚ್ಚರಿಕೆವಹಿಸಿ, ಹೇಳುವುದನ್ನೇ ಪ್ರೀತಿಯಿಂದ ಸ್ನೇಹಪರತೆಯಿಂದ ಮಗುವಿಗೆ ಹತ್ತಿರವಾಗುವ ಮೂಲಕ ಅವರಲ್ಲಿ ನಮ್ಮ ಅಪೇಕ್ಷಿತ ಬದಲಾವಣೆಗಳನ್ನು ತರಲು ಪ್ರಯತ್ನಿಸಬೇಕು.

   ಹುಟ್ಟಿದ ಪ್ರತಿಯೊಂದು ಮಗು ತನ್ನೊಳಗೆ ಅಸಾಮಾನ್ಯವಾಗಿರುವ ಪ್ರತಿಭೆಯನ್ನು ಪಡೆದುಕೊಂಡೆ ಬಂದಿರುತ್ತದೆ. ಅದನ್ನು ಗುರುತಿಸುವ ಪರೀಕ್ಷಿಸುವ ಪ್ರಶಂಶಿಸುವ ತಾಳ್ಮೆ ಗುರು ಹಿರಿಯರಲ್ಲಿ ಇರಬೇಕಾಗುತ್ತದೆ. ಯಾವ ಮಗು ವ್ಯರ್ಥ ಕಾಲ ಕಳೆಯಲು ಇಲ್ಲಿಗೆ ಬಂದಿಲ್ಲ. ಪ್ರಕೃತಿಗೆ ಸಮಾಜಕ್ಕೆ ಅನುಕೂಲವಾಗುವ ಯಾವುದೋ ಒಂದು ಗುಣವನ್ನು ಅದರೊಳಗೆ ತುಂಬಿ ಕಳಿಸಿರುತ್ತದೆ. ಅದನ್ನು ಗುರುತಿಸಿ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡುವುದು ಮಾತ್ರ ಶಿಕ್ಷಣದ ಕರ್ತವ್ಯವಾಗಿದೆ.ಆದರೆ ಇಂದಿನ ಶಿಕ್ಷಣ ಮಕ್ಕಳಲ್ಲಿ ಮೌಲ್ಯಗಳನ್ನು ಬಿಟ್ಟು ಬರಿ ಅಂಕಗಳು ಗ್ರೇಡ್ ಗಳಿಗೆ ಮಹತ್ವ ನೀಡಿ ಮಗುವಿನ ಪ್ರತಿಭೆಗೆ ಯಾವುದೇ ಅವಕಾಶ ನೀಡದಿರುವುದು ದುರಂತವೇ ಸರಿ. ಯಾವುದೋ ಒಂದು ಸರ್ಕಾರಿ ಹುದ್ದೆ ಪಡೆಯುವುದಕ್ಕೋಸ್ಕರ ಹತ್ತಾರು ವರ್ಷಗಳಿಂದ ಒಂದೇ ರೀತಿಯ ಪಠ್ಯಕ್ರಮವನ್ನು ಓದಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಅವನೊಳಗಿನ ಪ್ರತಿಭೆಯನ್ನು ಪ್ರೇರೇಪಿಸುವ ,ಪುರಸ್ಕರಿಸುವ ಅದಕ್ಕೆ ಇನ್ನಷ್ಟು ಹೆಚ್ಚಿನ ಅನುಭವಗಳನ್ನು ನೀಡುವಲ್ಲಿ ವಿಫಲವಾಗಿದೆ. ಅದಕ್ಕಾಗಿ ಇಂದು ನಿರುದ್ಯೋಗ ಸಮಸ್ಯೆ ಹೆಮ್ಮರವಾಗಿ ಬೆಳೆದು ನಿಂತಿದೆ. ಮಗು ತನ್ನ ಕಲಿಕೆಯ ಮತ್ತು ಪ್ರತಿಭೆಯ ಸಮ್ಮೇಳತದಿಂದ ಬದುಕು ಉಪವಾಸ ಅನ್ವೇಷಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುವ ಪರಿಸರವನ್ನು ಶಾಲಾ ಶಿಕ್ಷಣ ಕೊಡಬೇಕಾಗಿರೋದು ಇಂದಿನ ಅಗತ್ಯ. ಮಗು ಮಗುವಿನ ಬದುಕಿಗೆ ಹತ್ತಿರವಿರದ ಪಾಠಗಳು, ಜೀವನದ ಸಮಸ್ಯೆಗಳನ್ನು ಬಗೆಹರಿರಿಸಲಾಗದ ಸಮೀಕರಣಗಳು, ವಾಸ್ತವಕ್ಕೆ ಹತ್ತಿರವಿರದ ಪ್ರಯೋಗಗಳನ್ನು ಓದಿ ಕಲಿಯುವುದರಿಂದ ಮಗುವಿಗೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಬದುಕಿನಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮಗುವಿಗೆ ಸೂಕ್ತ ಮಾರ್ಗಗಳನ್ನು ಹುಡುಕಿ ಕೊಡುವ ವ್ಯವಸ್ಥೆ ಬೇಕಾಗಿದೆ. ಇಲಾಖೆಗಳು ನಿಗದಿಪಡಿಸುವ ಪಠ್ಯಕ್ರಮ, ಸರ್ಕಾರಗಳು ನಿಗದಿಪಡಿಸುವ ನೀತಿ ನಿಯಮಗಳು, ಅಕರ್ಷಣೀಯವಾಗಿಲ್ಲದ ಮತ್ತು ಸುಸಜ್ಜಿತವಲ್ಲದ ಶಾಲಾ ಕೊಠಡಿಗಳು, ಸಂಬಳಕ್ಕಾಗಿ ಬಂದು ಸಹಿ ಮಾಡಿ ಹೋಗುವ ಶಿಕ್ಷಕರು, ಕಲಿಸುವವರ ಮೇಲೆ ಸರ್ಕಾರ ಇಲಾಖೆ ಸಮುದಾಯಗಳ ಒತ್ತಡಗಳು ಮಗುವಿನ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿವೆ. ದೋಣಿ ಒಳಗಿನ ಶಿಕ್ಷಣಕ್ಕಿಂತ ಬಯಲಿನಲ್ಲಿ ದೊರೆಯುವ ಶಿಕ್ಷಣ ಹೆಚ್ಚು ಮೂರ್ತ ಸ್ವರೂಪವಾಗಿರುತ್ತದೆ. ಅಂತಹ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮೇಲಿನ ಎಲ್ಲ ಹೊಣೆಗಾರರು ಚಿಂತಿಸಿ ಸನ್ನಿವೇಶಗಳನ್ನು ಒದಗಿಸಿಕೊಡಬೇಕು. ಮಕ್ಕಳು ಬಯಸಿದ್ದನ್ನು ಕೊಡುವ ಬದಲು ಅದನ್ನೇ ಬಯಸಬೇಕು ಎಂಬ ಬೇಲಿ ಹಾಕಿ ಅವರ ಪ್ರತಿಭೆಯನ್ನು ಮೊಟಕುಗೊಳಿಸಲಾಗುತ್ತಿದೆ.
ಕಟ್ಟು ನಿಟ್ಟಿನ ವಾತಾವರಣದಿಂದ ಮಕ್ಕಳ ಮನಸ್ಸಿನಲ್ಲಿ ಘಾತುಕತೆ ಹೆಚ್ಚಾಗುತ್ತದೆ. ನನಗೆ ಬೇಕಾದನ್ನು ಕೊಡದ ಸಮಾಜದ ವಿರುದ್ಧ ತಿರುಗಿ ಬೀಳುವ ಮನಸ್ಥಿತಿ ಬಲಗೊಳ್ಳುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾರು ಯಾರು ಬಾಗಿದಾರರು ಇರುತ್ತಾರೆಯೋ ಅವರೆಲ್ಲರ ವಿರುದ್ಧವಾಗಿ ಮಗು ತನ್ನೊಳಗೆ ರೂಪಿತಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಎಲ್ಲಾ ಭಾಗಿದಾರರು ಕೃತ್ರಿಮವಾದ ಬುದ್ಧಿ ಮತ್ತೆ ಬೆಳೆಸುವ ಬದಲು ಸ್ವಂತಿಕೆಯ ಕೌಶಲ್ಯ ಅಭಿವೃದ್ಧಿ ಹಾಗೂ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಾಗ ಮಾತ್ರ ಇಂದಿನ ಮಗು ನಾಡಿನ ದೇಶದ ಭವಿಷ್ಯವಾಗಿ ಹೊರಹೊಮ್ಮುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ನಮ್ಮ ಎಲ್ಲ ಭಿನ್ನತೆಗಳನ್ನು ಬದುಕಿಟ್ಟು ಬೇಕಾದನ್ನು ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು.

    ಆಧುನಿಕ ಜಗತ್ತು ಮಕ್ಕಳ ಮೇಲೆ ತುಂಬಾ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸಿಗಬೇಕಾಗಿದ್ದ ವಸ್ತುಗಳು ತಂತ್ರಜ್ಞಾನಗಳು ಇಂದು ಮಕ್ಕಳ ಕೈಗೆ ಲೀಲಾಜಾಲವಾಗಿ ಸಿಗುತ್ತಿವೆ. ಮಕ್ಕಳು ಅಡ್ಡ ದಾರಿ ಹಿಡಿಯುವ ಸುಲಭ ಮಾರ್ಗಗಳು ಅರಿವಿಗೆ ಬಾರದೆ ತೆರೆದುಕೊಂಡು ಮಕ್ಕಳ ಮನಸ್ಸಿನಲ್ಲಿ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸುತ್ತಿವೆ. ತಂತ್ರಜ್ಞಾನದ ಬಳಕೆಯಲ್ಲಿ ಒಳಿತು ಕೆಡುಕುಗಳೆರಡು ಇವೆಯಾದರೂ ಕೆಡುಕು ಅತಿ ಶೀಘ್ರವಾಗಿ ಮಕ್ಕಳನ್ನು ಆಕರ್ಷಿಸಿ ಆವರಿಸಿಬಿಡುತ್ತದೆ. ಇದರ ಹಿಡಿತಕ್ಕೆ ಸಿಕ್ಕ ಮಕ್ಕಳು ಒಂಟಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸಲು ಬಯಸುತ್ತಾರೆ. ಹಾಗಾಗಿ ಮಕ್ಕಳು ಬಳಸುವ ತಂತ್ರಜ್ಞಾನಗಳು ಅವರ ಎಂತಹ ಉದ್ದೇಶಗಳನ್ನು ಈಡೇರಿಸುತ್ತದೆ ಎಂಬುದನ್ನು ಹಿರಿಯರಾದ ನಾವು ಮನಗಂಡು ಅದರ ಒಳಿತು ಕೆಡುಕುಗಳ ಬಗ್ಗೆ ಅದು ಬಳಸಿ ಹಾಳಾಗುವ ಮೊದಲೇ ನಾವು ಅದಕ್ಕೆ ಮಾರ್ಗದರ್ಶನ ನೀಡಿರಬೇಕು. ಆಗ ಮಾತ್ರ ಮಗು ಅಂತಹ ಅಪಾಯಗಳನ್ನು ದೂರವಿಟ್ಟು ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತನ್ನ ಪ್ರತಿಭೆಯನ್ನು ಹೊಂದಿಸಿ ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡುವುದರಲ್ಲಿ ಸಂಶಯವಿಲ್ಲ. ವಿಶ್ವೇಶ್ವರಯ್ಯ ಅಬ್ದುಲ್ ಕಲಾಂ ರಂತಹವರು ಬಾಲ್ಯದಲ್ಲಿ ಕಂಡ ಕನಸುಗಳನ್ನು ತಮ್ಮ ಅಗಾಧ ಪ್ರತಿಭೆಯ ಸಹಾಯದಿಂದ ಇಡೀ ಸಮಾಜಕ್ಕೆ ದೇಶಕ್ಕೆ ಸದುಪಯೋಗವಾಗುವಂತಹ ತಂತ್ರಜ್ಞಾನಗಳನ್ನು ವಸ್ತುಗಳನ್ನು ನೀಡಿದ ಹಾಗೆ ಈಗಿನ ಮಕ್ಕಳು ಕೂಡ ಅಂತಹದ್ದೇ ದಾರಿಯಲ್ಲಿ ಸಾಗುವಂತೆ ನಾವು ಅವರಿಗೆ ದಾರಿ ತೋರಿಸಬೇಕು. ಕೀಳು ಅಭಿವ್ಯಕ್ತಿ ಅಭಿರುಚಿ ಹೊಂದಿರುವ ಮಾಧ್ಯಮಗಳಿಂದ ಮಕ್ಕಳನ್ನು ದೂರವಿಟ್ಟು ಸಬ್ಯ ನಾಗರೀಕನನ್ನು ಸೃಷ್ಟಿ ಮಾಡುವ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಮಗು ಸಮಾಜಕ್ಕೆ ಹೆಮ್ಮೆ ತರುವಂತಾಗಬೇಕೆ ಹೊರತು ಹೊರೆಯಾಗುವಂತಹ ವ್ಯಕ್ತಿ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು.


      ಮಗುವಿನ ಮನಸ್ಸು ತುಂಬಾ ಮೃದು ಎಂಬುದು ಎಲ್ಲರಿಗೂ ಗೊತ್ತು. ಅದನ್ನು ಅಷ್ಟೇ ನಾಜೂಕಾಗಿ ನಿರ್ವಹಣೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕ ಪ್ರಜ್ಞೆ ಮಕ್ಕಳಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು. ಅದೇ ಸನ್ನಿವೇಶವನ್ನು ಎದುರಿಸಿ ಮಗು ಗೆದ್ದು ಬರಬೇಕು ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಎಂಬ ಕಲ್ಪನೆ ಮಗುವಿನಲ್ಲಿರಬೇಕು. ದಿನಾಚರಣೆ ಈ ಸಂದರ್ಭದಲ್ಲಿ ಎಲ್ಲಾ ಭಾಗಿದಾರರು ತಮ್ಮ ಜವಾಬ್ದಾರಿಗಳನ್ನು ಅರಿತು ಮುಂದಿನ ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ಸಮರ್ಥರನ್ನಾಗಿಸಿ ಅವರನ್ನು ಸಮಾಜ ಸದ್ವಿನಿಯೋಗಪಡಿಕೊಳ್ಳುವಂತಾಗಬೇಕು. ಮಕ್ಕಳನ್ನು ದ್ವೇಷಿಸುವ ಹಿಂಸಿಸುವ ಸಮಾಜಘಾತುಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದನ್ನು ನಿಷೇಧಿಸಬೇಕು. ಸ್ವಾಸ್ಥ್ಯ ಸಮಾಜಕ್ಕೆ ಮಕ್ಕಳು ಉತ್ಕೃಷ್ಟ ಫಸಲಾಗಬೇಕು. ಹುಟ್ಟಿದ ಪ್ರತಿ ಮಗು ಸಮಾಜದ ಆಸ್ತಿಯಾಗಬೇಕು ಎಂಬ ಆಶಯದೊಂದಿಗೆ ಈ ಬಾರಿಯ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಲಿ.

೦೧೫೪ಪಿಎಂ೧೪೧೧೨೦೨೩
ಅಮುಭಾವಜೀವಿ ಮುಸ್ಟೂರು 

ಲೇಖನ

*ಮಗು ಮಾನವ ಕುಲದ ಕುಸುಮ*

ಮಗು ಮಾನವ ಕುಲದ ಚಂದದ ಕುರುಹು. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳು ಭವಿಷ್ಯದ ಮನುಕುಲಕೆ ಮುನ್ನುಡಿ. ಮಗುವಿನ ಬಾಲ್ಯವನ್ನು ಅತ್ಯಂತ ಸಂಸ್ಕಾರಯುತವಾಗಿ, ಅಷ್ಟೇ ಜವಾಬ್ದಾರಿಯುತವಾಗಿ ರೂಪಿಸುವ ಹೊಣೆಗಾರಿಕೆ ತಂದೆ ತಾಯಿ ಪೋಷಕರು ಹಾಗೂ ಶಿಕ್ಷಕರದ್ದಾಗಿದೆ. 

      ಪ್ರತಿಯೊಂದು ಮಗುವೂ ಕೂಡ ಅಗಾಧ ಪ್ರತಿಭೆಯನ್ನು ತನ್ನೊಳಗೆ ಇರಿಸಿಕೊಂಡೇ ಜನ್ಮ ಪಡೆದಿರುತ್ತದೆ. ಆದರೆ ಅದನ್ನು ಸರಿಯಾದ ರೀತಿಯಲ್ಲಿ ಗುರುತಿಸಿ ಪ್ರೋತ್ಸಾಹಿಸುವ ಸೂಕ್ತ ವ್ಯಕ್ತಿ ಸಿಕ್ಕಾಗ ಮಾತ್ರ 
ಆ ಪ್ರತಿಭೆ ಅನಾವರಣಗೊಳ್ಳುತ್ತದೆ. ಇಲ್ಲವಾದಲ್ಲಿ ಅದು ಅಲ್ಲೇ ಕಮರಿಹೋಗುತ್ತದೆ. ಭವಿಷ್ಯದ ಮನುಕುಲದ ಭವಿಷ್ಯ ಏನಾಗಬೇಕು ಎಂಬುದರ ಪರಿಣಾಮ ಇಂದು ನಾವು ಮಕ್ಕಳನ್ನು ಬೆಳೆಸುವ ರೀತಿಯ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಎಲ್ಲರೂ ಸೇರಿ ಮಕ್ಕಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಮೌಲ್ಯಯುತ ಬದುಕನ್ನು ಕಟ್ಟಿಕೊಡಬೇಕಾದುದು ಇಂದಿನ ಅಗತ್ಯ ಮತ್ತು ಅನಿವಾರ್ಯ. ನಮ್ಮ ಜೀವನ ಮೌಲ್ಯಯುತವಾಗಿದ್ದಾಗ ಮಾತ್ರ ಮಕ್ಕಳು ಅದನ್ನು ಅನುಸರಿಸುವಂತೆ ನಾವು ಮಾರ್ಗದರ್ಶನ ಮಾಡಬಹುದು. ನಾವೇ ಹಾದಿ ತಪ್ಪಿದರೆ ಮಕ್ಕಳು ಭವಿಷ್ಯದ ಗತಿಯನ್ನೇ ಬದಲಿಸಿಕೊಂಡು ಬಿಡುವ ಅಪಾಯ ಇದೆ. 

    '' ಮಕ್ಕಳಿಸ್ಕೂಲ್ ಮನೇಲಲ್ವೇ"" ಎಂಬ ಮಾತಿನಂತೆ ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಇಲ್ಲಿ ಕಲಿಯುವ ಬಾಲ್ಯದ ಅನುಭವಗಳೇ ಮೇರು ವ್ಯಕ್ತಿತ್ವವನ್ನು ರೂಪಿಸುವಲ್ಲಿ ಸಹಕಾರಿಯಾಗುತ್ತದೆ. ಇಲ್ಲಿನ ಕೊರತೆಗಳು ಒಮ್ಮೊಮ್ಮೆ ಮಗುವನ್ನು ಹಾದಿ ತಪ್ಪಿಸುವ ಅಪಾಯವಿದೆ. ಹಾಗಾಗಿ ಪ್ರತಿಯೊಬ್ಬರೂ ಆ ಕೊರತೆಯನ್ನು ನಿವಾರಿಸಲು, ಮಕ್ಕಳ ಗುರಿಯ ಗತಿಯನ್ನು ಅವಲೋಕಿಸಿ ಅದಕ್ಕೆ ಸೂಕ್ತವಾದ ಮಾರ್ಗದರ್ಶನ ಮಾಡಬೇಕು. ಹೆತ್ತವರು ,ಪೋಷಕರು, ನೆರೆಹೊರೆ, ಸಮಾಜದ ಪ್ರತಿಯೊಂದು ಹಂತದಲ್ಲೂ ಅವರನ್ನು ತರಬೇತಿಗೊಳಿಸಿದಾಗ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ. 

          ಶಾಲಾ ಪರಿಸರ ಸ್ನೇಹಮಯವಾದ, ಆಹ್ಲಾದಕರವಾದ, ಆಕರ್ಷಣೀಯವಾಗಿದ್ದಾಗ ಮಾತ್ರ ಮಗು ಆಸಕ್ತಿಯಿಂದ ಕಲಿಕೆಯಲ್ಲಿ ತೊಡಗುತ್ತದೆ. ಭಯದ ವಾತಾವರಣ, ಅಸುರಕ್ಷತೆ, ಅತಿಯಾದ ಶಿಸ್ತು ಅವರ ಮನಸನ್ನು ಘಾಸಿಗೊಳಿಸಿದರೆ ಆ ಮಗು ಖಂಡಿತ ಉತ್ತಮ ವ್ಯಕ್ತಿ ಆಗಲ್ಲ. ಮಕ್ಕಳು ತರಗತಿಯ ಚಟುವಟಿಕೆಗಳಲ್ಲಿ ಸ್ವಾಭಾವಿಕವಾಗಿ ಮತ್ತು ಸ್ವಚ್ಚಂದವಾಗಿ ಕಲಿಯುವಂತಹ ವಾತಾವರಣ ಕಲ್ಪಿಸಿ ಕೊಡಬೇಕಾದ ಹೊಣೆಗಾರಿಕೆ ಶಿಕ್ಷಕರು ಹಾಗೂ ಸಂಬಂಧಿತ ವ್ಯವಸ್ಥೆಯ ಮೇಲೆ ಇದೆ. ಆದ್ದರಿಂದ ಇಲ್ಲಿ ಯಾರೂ ಯಾವ ಕಾರಣಕ್ಕೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ತುಂಬಾ ಶ್ರದ್ಧೆಯಿಂದ ನಿಭಾಯಿಸಬೇಕು. ಮಕ್ಕಳ ಬಾಲ್ಯ ಅರಳಬೇಕೇ ಹೊರತು ಕೆರಳಬಾರದು, ಕೊರಗಬಾರದು. ಆ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಯ ಮೂಲಕ ಮಕ್ಕಳ ಭವಿಷ್ಯವನ್ನು ರೂಪಿಸಬೇಕು. 

            ಬಾಲ್ಯದಲ್ಲಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ತಾರತಮ್ಯ ಮಾಡಬಾರದು. ಅದು ಹೆಣ್ಣಿರಲಿ, ಗಂಡಿರಲಿ  ಮಗುವಿನ ಬಾಲ್ಯವನ್ನು ಕಸಿದುಕೊಳ್ಳುವ, ಕಮರಿಸುವ,ಅವರ ಆಸೆಆಕಾಂಕ್ಷೆಗಳಿಗೆ ತಣ್ಣೀರೆರಚುವ, ಆಸಕ್ತಿಯನ್ನು ಕುಂದಿಸುವ ಕೆಲಸ ಆಗಬಾರದು. ಎಳವೆಯಲ್ಲಿಯೇ ಮಗುವಿನ ಆಸಕ್ತಿ ಅಭಿರುಚಿಗಳನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಒದಗಿಸಿದ್ದೇ ಆದರೆ ಈ ಸಮಾಜಕ್ಕೆ ಒಬ್ಬ ಅದ್ಬುತ ವ್ಯಕ್ತಿಯನ್ನು ಕೊಡುಗೆಯಾಗಿ ನೀಡುವುದರಲ್ಲಿ ಅನುಮಾನವಿಲ್ಲ. ಮಕ್ಕಳಿಗೆ ಸೋಲುಗಳನ್ನು ಗೆಲುವಾಗಿಸಿಕೊಳ್ಳುವ, ಅವಮಾನಗಳನ್ನು ಅಭಿಮಾನವಾಗಿಸಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಬೇಕು. ಈ ಸಮಾಜಕ್ಕೆ ತನ್ನ ಅಗತ್ಯ ಏನು ಎಂಬುದನ್ನು ಮನವರಿಕೆ ಮಾಡಿಕೊಡಬೇಕು. ನೋವು,ದುಃಖ, ಕಷ್ಟ, ಹಿಂಸೆ, ಸೋಲು ,ಅವಮಾನ, ಅಸಮಾಧಾನ, ಅಸಮಾನತೆ , ಅಮಾನವೀಯತೆ ಮುಂತಾದ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು, ಅವುಗಳನ್ನು ತನ್ನ ಬದುಕಿನಲ್ಲಿ ಹೇಗೆ ದಾಟಿ ಮುಂದೆ ಹೋಗಬೇಕೆಂಬುದನ್ನು ಕಲಿಸುವ ಜವಾಬ್ದಾರಿ ಎಲ್ಲರ ಮೇಲೂ ಇದೆ. 

        ಮಕ್ಕಳು ಮಾನವ ತೋಟದ ಸುಂದರ ಕುಸುಮಗಳು. ಅಕ್ಕರೆಯಿಂದ ಅವನ್ನು ಸಂರಕ್ಷಿಸುವ,ಸಂಸ್ಕಾರಯುತವಾಗಿ ಬೆಳೆಸುವ, ಬೆಂಬಲಿಸುವ ಮನಸ್ಥಿತಿ ನಮ್ಮದಾಗಬೇಕು. ಹೂವು ಬಾಡದಂತೆ ಸದಾ ತನ್ನ ತಾಜಾ ತನವನ್ನು ಜಗತ್ತಿಗೆ  ಉಣಬಡಿಸಿ ಉಲ್ಲಸಿತವಾಗಿರುವಂತೆ ನೋಡಿಕೊಳ್ಳಬೇಕು. ಕೀಳುವ ಕೈಗಳಿಂದ ರಕ್ಷಿಸಬೇಕು. ಧಮನಗೈಯುವ ವ್ಯವಸ್ಥೆಯಿಂದ ದೂರವಿರಿಸಬೇಕು. ಸಾಮಾಜಿಕ ಪಿಡುಗುಗಳು ಬಾಧಿಸದಂತೆ ಎಚ್ಚರಿಕೆ ವಹಿಸಬೇಕು. ಆಗ ಮಾತ್ರ ಮನಕುಲ ಸುಭಿಕ್ಷವಾಗಿ, ಸುಭದ್ರವಾಗಿ, ಸಂತೃಪ್ತಿಯಿಂದ ಬದುಕಲು ಸಾಧ್ಯವಾಗದು. ಎಲ್ಲಾ ಮಕ್ಕಳೂ ಆರೋಗ್ಯವಂತರಾಗಿ, ಸುಶಿಕ್ಷಿತರನ್ನಾಗಿ ಮಾಡಿ ಸಮಾಜದ ಅಗತ್ಯಗಳಿಗೆ ತಕ್ಕಂತೆ ರೂಪಿಸಿದಾಗ ಮಾತ್ರ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಸಾಧ್ಯ. ಈ ಸಂದರ್ಭದಲ್ಲಿ ಅಂತಹ ಮಹೋನ್ನತ ಕಾರ್ಯ ನಿರ್ವಹಿಸುವ ಮೂಲಕ ಮನುಕಲದ ಧಾವಂತದ ಬದುಕಿನಲ್ಲಿ ದಾರಿ ತಪ್ಪಿ ದಂಗುಬಡಿಸುವ ಸ್ಥಿತಿ ನಿರ್ಮಾಣ ಆಗದಂತೆ ಎಚ್ಚರ ವಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. 

0417ಎಎಂ14112019
*ಮಕ್ಕಳ ದಿನಾಚರಣೆಯ ಶುಭಾಶಯಗಳೊಂದಿಗೆ*
*ಅಮು ಭಾವಜೀವಿ*