Thursday, December 28, 2023

ಕವಿತೆ

ಬಂತು ಬಂತು ರಾಜ್ಯೋತ್ಸವ
ಬಡಿದೆಬ್ಬಿಸಲು ಸ್ವಾಭಿಮಾನವ

ಹೆಮ್ಮೆಯ ನಾಡಿನ
ನಲ್ಮೆಯ ನುಡಿಯ
ಎಲ್ಲೆಡೆ ಸಾರುವ
ಅಭಿಮಾನದ ಉತ್ಸವ

ಸಾಹಿತ್ಯದ ಕುಸುರಿಯಲಿ
ಕಲೆಯ ಬಸಿರಿನಿಂದ
ಹುಟ್ಟಿದ ಸಂಸ್ಕೃತಿಗೆ
ಹಬ್ಬದ ಕಳೆ ಬಂದಿದೆ

ಜನಪದದ ಗೂಡಿನಲ್ಲಿ
ವಚನಗಳ ಹಾಡಿನಲ್ಲಿ
ನವ್ಯನವೋದಯ ದಲಿತ
ಬಂಡಾಯ ಸಾಹಿತ್ಯಗಳ ಕುಣಿತ

ಮಲೆನಾಡ ಹಚ್ಚ ಹಸಿರಿನಲಿ
ಬಯಲು ಸೀಮೆಯ ಕರಿ ಮಣ್ಣಲಿ
ಅನ್ಯರ ದಾಳಿಗೂ ಜಗ್ಗದೆ
ಕನ್ನಡ ನುಡಿ ತೇರು ಮುನ್ನುಗ್ಗಿದೆ

ನಗರ ಸಂಸ್ಕೃತಿಯ ಆಕ್ರಮಣಕ್ಕೆ 
ಗ್ರಾಮೀಣ ಸೊಗಡಿನ ಸಂಕ್ರಮಣ
ಎಲ್ಲ ಸಹಿಸಿ ಭರವಸೆ ಮೂಡಿಸಿ
ಶತಶತಮಾನದಿ ಉಳಿದು ಬಂದಿದೆ

ಕನ್ನಡಕ್ಕಾಗಿ ಎತ್ತಿದ ಕೈ ಕಲ್ಪವೃಕ್ಷ
ಕನ್ನಡದಿ ಬದುಕ ಕಟ್ಟಿಕೊಂಡವನೇ ದಕ್ಷ
ಬನ್ನಿರಿ ಬನ್ನಿರಿ ಎಲ್ಲರೂ ಸೇರಿರಿ
ಕನ್ನಡ ತಾಯಿಗೆ ಜೈ ಎನ್ನಿರಿ

10 56 ಎಎಂ 31 10 2014
*ಅಮುಭಾವಜೀವಿ ಮುಸ್ಟೂರು*

ನನ್ನ ನಾಡು ನನ್ನ ನುಡಿ
ನನ್ನ ಬಾಳ ಮುನ್ನುಡಿ
ಭಾಷೆ ಕೊಟ್ಟ ಭರವಸೆ
ನನಗೆ ತೋರಿತು ಹೊಸ ದಿಸೆ

ಕಬ್ಬಿಗರ ನುಡಿಗಳೆ ದಾರಿದೀಪ
ಕನ್ನಡಮ್ಮನೊಲವೇ ದಿವ್ಯ ರೂಪ
ನದಿ ಕಾನನ ಗುಡಿ ಗೋಪುರ
ಹೆಸರ ಪಡೆದಿವೆ ಶಿಖರದೆತ್ತರ

ಮಣ್ಣ ಕಂಪು ನುಡಿಯ ಇಂಪು
ನಾಡಿನಲ್ಲಡೆ ತುಂಬಿದೆ
ಕಪ್ಪು ಮಣ್ಣು ಬಗೆಬಗೆ ಹಣ್ಣ
ಈ ತಾಯಿ ತನ್ನ ಮಕ್ಕಳಿಗೆಲ್ಲ ನೀಡಿದೆ

11 50 ಪಿಎಂ 31.10.2014


#ಅಮುಭಾವದೂಟ 152

ಮಯೂರನ ಸ್ವಾಭಿಮಾನದ ನಾಡು
ನೃಪತುಂಗನ ನೆಚ್ಚಿನ ಬೀಡು
ಪಂಪನ ಪರಮಾಪ್ತತೆಯ ಗೂಡು 
ಈ ನಮ್ಮ ಕನ್ನಡನಾಡು 

 ರಾಜ ಮಹಾರಾಜರು ಕಟ್ಟಿದ
ಅಭಿಮಾನದ  ಕರುನಾಡು 
ಕವಿಪುಂಗವರ ಲೇಖನಿಯಲಿ
ಮೆರೆದ ಕನ್ನಡದ ಸೊಗಡು 

ಪುಲಿಕೇಶಿಯ ಸಾಹಸಕೆ
ಹೆಸರಾದ ಹೊನ್ನಾಡು
ಕೃಷ್ಣ ದೇವರಾಯರು ಕಟ್ಟಿದ 
ಕಲೆಸಾಹಿತ್ಯ ಸಮೃದ್ಧಿಯ ಬೀಡು

ನಿತ್ಯಹರಿದ್ವರ್ಣದ ಪ್ರಕೃತಿಯ
ಸ್ವರ್ಗ ನಮ್ಮ  ಈ ಮಲೆನಾಡು
ನದಿ ನೀರ್ಝರಿಗಳು ತುಂಬಿತುಳುಕುವ
ಪರಿಶುದ್ಧ ಪ್ರೀತಿ ಹಂಚುವ ಸಿರಿನಾಡು

ಕಣ್ತುಂಬುವ ಕರಾವಳಿಯ
ಮುತ್ತು ಮಾಣಿಕ್ಯದ ಚೆನ್ನಾಡು
 ಯಕ್ಷಗಾನ ಬಯಲಾಟದಂತಹ
ಗಂಡು ಕಲೆ ನೃತ್ಯದ ಹೆಗ್ಗೂಡು

ದಾಸರು ಶರಣರು ಸಂತರು
ಜನಿಸಿದ ಸುಸಂಸ್ಕೃತರ ತಾಯ್ನಾಡು
ಹಳೆ ನವೋದಯ ನವ್ಯ ಕಾವ್ಯ 
ಪರಂಪರೆಯ ಶ್ರೀಗಂಧದ ಬೀಡು 

ಸಂಗೀತ ಸಾಹಿತ್ಯ ಸಂಸ್ಕೃತಿಗಳ
ಸಮ್ಮಿಲನದ ನಲುನಾಡು
ಮಾಹಿತಿ ತಂತ್ರಜ್ಞಾನದ 
ವಿಜ್ಞಾನ ಸುಜ್ಞಾನದ ಸವಿನಾಡು

ಸಿರಿಪಗ್ನಡನಾಡಿಲಿ ಹುಟ್ಟಿದ ನಾವೇ ಧನ್ಯರು
ಕರುಣೆ ಮಮತೆ ಮಾನವೀಯತೆಯ ತವರು

0400ಎಎಂ01112021
 *ಅಪ್ಪಾಜಿ ಸುಧಾ ಮುಸ್ಟೂರು*
ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ
 
    

ಕವನ

ಬಂತು ಬಂತು ರಾಜ್ಯೋತ್ಸವ
ಬಡಿದೆಬ್ಬಿಸಲು ಸ್ವಾಭಿಮಾನವ

ಹೆಮ್ಮೆಯ ನಾಡಿನ
ನಲ್ಮೆಯ ನುಡಿಯ
ಎಲ್ಲೆಡೆ ಸಾರುವ
ಅಭಿಮಾನದ ಉತ್ಸವ

ಸಾಹಿತ್ಯದ ಕುಸುರಿಯಲಿ
ಕಲೆಯ ಬಸಿರಿನಿಂದ
ಹುಟ್ಟಿದ ಸಂಸ್ಕೃತಿಗೆ
ಹಬ್ಬದ ಕಳೆ ಬಂದಿದೆ

ಜನಪದದ ಗೂಡಿನಲ್ಲಿ
ವಚನಗಳ ಹಾಡಿನಲ್ಲಿ
ನವ್ಯನವೋದಯ ದಲಿತ
ಬಂಡಾಯ ಸಾಹಿತ್ಯಗಳ ಕುಣಿತ

ಮಲೆನಾಡ ಹಚ್ಚ ಹಸಿರಿನಲಿ
ಬಯಲು ಸೀಮೆಯ ಕರಿ ಮಣ್ಣಲಿ
ಅನ್ಯರ ದಾಳಿಗೂ ಜಗ್ಗದೆ
ಕನ್ನಡ ನುಡಿ ತೇರು ಮುನ್ನುಗ್ಗಿದೆ

ನಗರ ಸಂಸ್ಕೃತಿಯ ಆಕ್ರಮಣಕ್ಕೆ 
ಗ್ರಾಮೀಣ ಸೊಗಡಿನ ಸಂಕ್ರಮಣ
ಎಲ್ಲ ಸಹಿಸಿ ಭರವಸೆ ಮೂಡಿಸಿ
ಶತಶತಮಾನದಿ ಉಳಿದು ಬಂದಿದೆ

ಕನ್ನಡಕ್ಕಾಗಿ ಎತ್ತಿದ ಕೈ ಕಲ್ಪವೃಕ್ಷ
ಕನ್ನಡದಿ ಬದುಕ ಕಟ್ಟಿಕೊಂಡವನೇ ದಕ್ಷ
ಬನ್ನಿರಿ ಬನ್ನಿರಿ ಎಲ್ಲರೂ ಸೇರಿರಿ
ಕನ್ನಡ ತಾಯಿಗೆ ಜೈ ಎನ್ನಿರಿ

10 56 ಎಎಂ 31 10 2014
*ಅಮುಭಾವಜೀವಿ ಮುಸ್ಟೂರು*

ನನ್ನ ನಾಡು ನನ್ನ ನುಡಿ
ನನ್ನ ಬಾಳ ಮುನ್ನುಡಿ
ಭಾಷೆ ಕೊಟ್ಟ ಭರವಸೆ
ನನಗೆ ತೋರಿತು ಹೊಸ ದಿಸೆ

ಕಬ್ಬಿಗರ ನುಡಿಗಳೆ ದಾರಿದೀಪ
ಕನ್ನಡಮ್ಮನೊಲವೇ ದಿವ್ಯ ರೂಪ
ನದಿ ಕಾನನ ಗುಡಿ ಗೋಪುರ
ಹೆಸರ ಪಡೆದಿವೆ ಶಿಖರದೆತ್ತರ

ಮಣ್ಣ ಕಂಪು ನುಡಿಯ ಇಂಪು
ನಾಡಿನಲ್ಲಡೆ ತುಂಬಿದೆ
ಕಪ್ಪು ಮಣ್ಣು ಬಗೆಬಗೆ ಹಣ್ಣ
ಈ ತಾಯಿ ತನ್ನ ಮಕ್ಕಳಿಗೆಲ್ಲ ನೀಡಿದೆ

11 50 ಪಿಎಂ 31.10.2014


#ಅಮುಭಾವದೂಟ 152

ಮಯೂರನ ಸ್ವಾಭಿಮಾನದ ನಾಡು
ನೃಪತುಂಗನ ನೆಚ್ಚಿನ ಬೀಡು
ಪಂಪನ ಪರಮಾಪ್ತತೆಯ ಗೂಡು 
ಈ ನಮ್ಮ ಕನ್ನಡನಾಡು 

 ರಾಜ ಮಹಾರಾಜರು ಕಟ್ಟಿದ
ಅಭಿಮಾನದ  ಕರುನಾಡು 
ಕವಿಪುಂಗವರ ಲೇಖನಿಯಲಿ
ಮೆರೆದ ಕನ್ನಡದ ಸೊಗಡು 

ಪುಲಿಕೇಶಿಯ ಸಾಹಸಕೆ
ಹೆಸರಾದ ಹೊನ್ನಾಡು
ಕೃಷ್ಣ ದೇವರಾಯರು ಕಟ್ಟಿದ 
ಕಲೆಸಾಹಿತ್ಯ ಸಮೃದ್ಧಿಯ ಬೀಡು

ನಿತ್ಯಹರಿದ್ವರ್ಣದ ಪ್ರಕೃತಿಯ
ಸ್ವರ್ಗ ನಮ್ಮ  ಈ ಮಲೆನಾಡು
ನದಿ ನೀರ್ಝರಿಗಳು ತುಂಬಿತುಳುಕುವ
ಪರಿಶುದ್ಧ ಪ್ರೀತಿ ಹಂಚುವ ಸಿರಿನಾಡು

ಕಣ್ತುಂಬುವ ಕರಾವಳಿಯ
ಮುತ್ತು ಮಾಣಿಕ್ಯದ ಚೆನ್ನಾಡು
 ಯಕ್ಷಗಾನ ಬಯಲಾಟದಂತಹ
ಗಂಡು ಕಲೆ ನೃತ್ಯದ ಹೆಗ್ಗೂಡು

ದಾಸರು ಶರಣರು ಸಂತರು
ಜನಿಸಿದ ಸುಸಂಸ್ಕೃತರ ತಾಯ್ನಾಡು
ಹಳೆ ನವೋದಯ ನವ್ಯ ಕಾವ್ಯ 
ಪರಂಪರೆಯ ಶ್ರೀಗಂಧದ ಬೀಡು 

ಸಂಗೀತ ಸಾಹಿತ್ಯ ಸಂಸ್ಕೃತಿಗಳ
ಸಮ್ಮಿಲನದ ನಲುನಾಡು
ಮಾಹಿತಿ ತಂತ್ರಜ್ಞಾನದ 
ವಿಜ್ಞಾನ ಸುಜ್ಞಾನದ ಸವಿನಾಡು

ಸಿರಿಪಗ್ನಡನಾಡಿಲಿ ಹುಟ್ಟಿದ ನಾವೇ ಧನ್ಯರು
ಕರುಣೆ ಮಮತೆ ಮಾನವೀಯತೆಯ ತವರು

0400ಎಎಂ01112021
 *ಅಪ್ಪಾಜಿ ಸುಧಾ ಮುಸ್ಟೂರು*
ಕನ್ನಡ ರಾಜ್ಯೋತ್ಸವದ ಶುಭಾಶಯಗಳೊಂದಿಗೆ
 
    

ಕವನ

ನನ್ನೆದೆಯ ಗಡಿ ದಾಟಿ
ನನ್ನೊಲವ ಅಪಹರಿಸಿ
ಭವಿಷ್ಯವ ಕತ್ತಲಾಗಿಸಿದ
ಉಗ್ರವಾದಿಯೋ ನೀನು

ಮರಳು ಮಾತಲ್ಲಿ ನಂದಿಸಿ
ಮನವ ನಿನ್ನೆಡೆ ತಿರುಗಿಸಿ
ಈ ಬದುಕನೇ ನನ್ನಿಂದಲೇ ಆಸ್ಪೋಟಿಸಿದ
ಭಯೋತ್ಪಾದಕನೇನೋ ನೀನು

ಆಸರೆಗೆ ಕೈಯ ಹಿಡಿದು
ಅನುಬಂಧವ ನನ್ನಲ್ಲಿ ಬೆಸೆದು
ವಶವಾದ ನನ್ನ ಬದುಕಿನಿಂದ
ಹತ್ಯಗೈದ ಹಿಂಸಾಚಾರಿಯೋ ನೀನು

ಕೈಹಿಡಿದೆನೆಂದು ಕನಿಕರಿಸದೆ
ಬಳಸಿಕೊಂಡೆ ನಿನ್ನ ಲಾಭಕ್ಕೆ
ಭಾವಗಳ ಸೀಮಿತ ದಾಳಿಗೆ
ನನ್ನ ದೂಡಿದ ಆತಂಕವಾದಿಯೋ ನೀನು

ಆಸೆಯನ್ನು ತೋರಿಸಿ
ಅವಿತ ಕಾಮನೆಗಳ ಪ್ರಚೋದಿಸಿ
ಆತ್ಮಾಹುತಿಗೈದು ನನ್ನಿಡಿ ಬಾಳ
ನಾಶ ಮಾಡಿದ ಹತಾಶವಾದಿಯೋ ನೀನು

ನಿನಗೊಲಿದ ನನ್ನ ತಪ್ಪಿಗೆ
ಬಲಿಯಾದೆ ನಾ ನೀ ಪಾಪ ಕೃತ್ಯಕ್ಕೆ
ಪ್ರೀತಿಯ ಈ ಹೋರಾಟದಿ
ಸಾವಿನ ಕುಣಿಕೆಗೆ ನೀ ತಳ್ಳಿದೆ

೦೭೦೯ಎಎಂ೦೧೧೨೨೦೧೫
ಅಮುಭಾವಜೀವಿ ಮುಸ್ಟೂರು


ಎಲ್ಲಾ ಖಾಲಿ
***********

ಎದೆಯ ಭಾವವೆಲ್ಲಾ
ಹರಡಿವೆ ಚುಕ್ಕಿಯಾಗಿ
ಒಂದು ಬೆಳಗಲಿಲ್ಲ
ಬೆಳದಿಂಗಳ ಚಂದಿರನಾಗಿ

ಬಂದ ಭಾವಗಳೆಲ್ಲ
ಹರಿದು ಹೋದವು ವ್ಯರ್ಥವಾಗಿ
ಒಂದು ನಿಂತು ಮನದಿ
ಇಂಗಲಿಲ್ಲ ಸಮರ್ಥವಾಗಿ

ಎಲ್ಲಾ ಖಾಲಿ ಈಗೀಗ
ಬರದ ಛಾಯೆಯಂತೆ
ಒಂದೊಮ್ಮೆ ಕಂಡಿದ್ದವು
ನನ್ನೊಳಗೆ ಮರೀಚಿಕೆಯಂತೆ

ಅರಳಿದ ಸುಮಗಳೆಲ್ಲ
ಪೂಜೆಗರ್ಪಿತವಾಗುವುದಿಲ್ಲ
ಯಾವೊಂದು ಭಾವವು
ನನ್ನಲ್ಲಿ ಸಮರ್ಪಿತಗೊಳ್ಳಲಿಲ್ಲ

ಹುಟ್ಟಿದ ಒಂದೊಂದು ಭಾವಕ್ಕೂ
ಕವಿತೆ ಕಟ್ಟಿ ನಾ ಬರೆದಿಟ್ಟಿ
ನನ್ನೊಳಗೆ ಉಳಿದು ಬೆಳೆದ
ಅವುಗಳನ್ನೆಲ್ಲ ತೆರೆದಿಟ್ಟೆ

ಓದಿದ ಮನಗಳೆಲ್ಲ
ಮುದಗೊಂಡವು
ನನ್ನ ಬೆನ್ತಟ್ಟಿದ ರೀತಿಗೆ ಮತ್ತೆ
ಸಾವಿರ ಭಾವ ಹೊಮ್ಮಿದವು

೦೫೨೧ಎಎಂ೦೨೦೧೨೦೧೫

ಬೆಳಗಿನ ಸ್ವಾಗತ
**********""

ಮಲಗಿದ್ದ ಮುಗ್ಧ ಜಗವ
ಹಕ್ಕಿ ಕೂಗಿನ ಕರೆಗಂಟೆ
ಇಂಪಾಗಿ ಮಾರ್ದನಿಸಿ
ಬೆಳಗಾಯ್ತೇಳೆಂದುಲಿಯಿತು 

ತನ್ನ ಮೈ ಮೆತ್ತಿದ ಇಬ್ಬನಿಯ
ಮೆಲ್ಲ ಮೆಲ್ಲನೆ ಒರೆಸಿಕೊಳ್ಳುತ
ಮೈ ಮುರಿದು ಎಲೆ ತೆರೆದು
ಪ್ರಕೃತಿಯು ಬೆಳಕ ಸ್ವಾಗತಿಸಿತು


ಸವಿಗನಸು ಕಾಣುವ ಮಗು
ಮೌನದಲ್ಲೇ ಪಕಳೆಗಳ ಬಿಚ್ಚಿ
ನಗುದ ತನ್ನ ಚೆಲುವ ವೈಯಾರವ
ಬಾನ ಅತಿಥಿಗೆ ಮುದದಿ ಅರ್ಪಿಸಿತು

ಹರಿವ ನೀರಿನ ನಾದ
ಗುಡಿಯ ಗಂಟೆಯ ಶಬ್ದ
ಪ್ರಶಾಂತ ಮುಂಜಾವಲಿ
ಸುತ್ತೆಲ್ಲ ಪ್ರತಿದ್ವನಿಸುತ್ತಿತ್ತು
.
ಇರುಳ ಬೆರಳನ್ನು ಹಿಡಿದು
ಉಷೆಯ ಹಸೆಯೇನೇರಿ
ಹೊಸ ಹುರುಪಿನ ಹರೆಯಕೆ
ಅಣಿಯಾಗಿ ಬಂದ ಬಾಲ ನೇಸರ

ಜಗವೆಲ್ಲ ಝಗಮಗಿಸಿ
ಈ ಬೆಳಗ ಸಂಭ್ರಮಿಸಿ ಹೊಸ
ಲವಲವಿಕೆಯಿಂದಲಿ ಓಡುತಲಿತ್ತು
ಕಾಯಕವನಾಧರಿಸಿ ಕಾಲದ ಬೆನ್ನೇರಿ

೦೬೧೪ಎಎಂ೦೨೧೨೨೦೧೬


ಹೆಸರಲ್ಲಿ ಏನಿದೆ
*************

ಹೆಸರಲ್ಲಿ ಏನಿದೆ ಬರಿ ಕೆಸರು
ನಿತ್ಯ ಹೊರಳಾಡಬೇಕಿಲ್ಲಿ
ಉಳಿಸಲು ಅದರ ಹೆಸರು
ಹೆಜ್ಜೆಹೆಜ್ಜೆಗೂ ಸವಾಲಾಗಿ
ಸಜ್ಜನಿಕೆಯ ಕುರುಹಾಗಿ
ಉಳಿಸಬೇಕು ಹೆಸರು
ಕೂಗಿ ಕರೆಯಲೊಂದು
ಕರೆದು ಗುರುತಿಸಲೆಂದು
ಗುರುತಿಸಿ  ಗೌರವಿಸಲೆಂದು
ಹೆಸರಿರಬೇಕು ಮನುಜಗೆ

ಹೂವು ಹೆಸರ ಬಯಸದು
ಹಸಿರ ಉಸಿರೇ ಆಗಿಹುದು
ದುಂಬಿ ಬಿನ್ನವೆಣಸದು
ಜೇನ ಸವಿಯ ಜಗಕೆಲ್ಲ ಹಂಚುವುದು
ಬಣ್ಣಗಳ ಭಿನ್ನವತ್ತಳೆಯಲ್ಲೆಲ್ಲ ಹೇಳುವುದು
ಹೆಸರಿನ ಗುಂಗು ಅದಕ್ಕಿರದು
ಮನುಜನಷ್ಟೇ ಹೆಸರಿಗೆ ಹಂಬಲಿಸುವುದು

ಹರಿವ ನೀರಿಗಿಲ್ಲ ಹೆಸರ ಹಂಗು
ಎಲ್ಲ ಶೋಕಿ ಪಾವನಗೈದು
ಜೀವಜಲದ ಒಲವೇಕೆ
ನಿಮ್ಮಗರಿ ವಾಗದು
ಮನುಜನಷ್ಟೇ ಹೆಸರ ಹಿಂದೆ ಓಡುವುದು

೦೬೪೫ಎಎಂ೦೨೧೨೨೦೧೬

ನಮನ
*****

ಮನಸು ಮೂಕವಾದ ಕ್ಷಣ
ಹೆಮ್ಮೆಗೂ ಹೆಮ್ಮೆ ಎನಿಸುವ ದಿನ
ಅದಕ್ಕೆ ಕಾರಣ ಈ ಸಮರ್ಪಣ
ಸಲ್ಲಿಸುವೆ ಅಭಿನಂದನ

ರಾಜ್ಯದ ಮೂಲೆ ಮೂಲೆಯಿಂದ
ಕವಿ ಗೋಷ್ಠಿಗೆಂದು ಬಂದ
ನಮ್ಮನೆಲ್ಲ ಆಧರಿಸಿ ಸ್ವಾಗತಿಸಿ
ಸನ್ಮಾನಿಸಿದ ಸಮರ್ಪಣ ಕೊಂದು ನಮನ

ಅಚ್ಚು ಕಟ್ಟು ಕಾರ್ಯಕ್ರಮ
ಅಚ್ಚುಮೆಚ್ಚಿನ ಸಮಾಗಮ
ನಾಡು ನುಡಿ ನೆಲ ಜಲಕ್ಕೆ ಮಿಡಿದ
ಕವಿ ಮನದ ಕವಿತೆಗಳಿಗೆ ವಂದನ

ಕಾರ್ಯಕರ್ತರ ಅಮಿತೋತ್ಸಾಹ
ಕವಿಗಳಿಗಿಂತ ಈ ಪ್ರೋತ್ಸಾಹ
ಮರೆಯದಂತಹ ಕ್ಷಣವಾಗುಳಿದ
ಸಮರ್ಪಣದ ಮೊದಲ ಪ್ರಯತ್ನ

ಹಿರಿಯರ ಮಾರ್ಗ ದರ್ಶನ
ಸ್ನೇಹ ಮನಗಳ ಆತ್ಮೀಯಾಲಿಂಗನ
ಹಿತಮಿತ ರುಚಿ ಬೆರೆತ ಭೋಜನ
ಮಾರುಹೋದೆ ಆ ಪ್ರೀತಿಗೆ ನಾ

ಮೈಸೂರಿನ ಈ ಸಂಪ್ರದಾಯಕ್ಕೆ
ನಾ ಶರಣು ಶರಣು
ಅವಕಾಶದ ಕದ ತೆರೆದವರ
ನೆನೆದು ಆನಂದ ಭಾಷ್ಪ ತಂತು ಕಣ್ಣು

ಸಾರ್ಥಕ ಭಾವ ಮೂಡಿತು
ಜವಾಬ್ದಾರಿಯ ಹೊಣೆ ಹೆಚ್ಚಿತು
ಸಮರ್ಪಣಗೊಂದು ಸಮರ್ಪಣೆ
ನನ್ನ ಈ ಮೂಕ ಮನದ ಅಭಿನಂದನೆ

೧೦೩೫ಎಎಂ೦೫೧೨೨೦೧೬

ಸಾಧಕೀಯ ಸಾವು
*************

ಕಣ್ಣು ಹನಿಗರೆದಿದೆ
ಮನವು ಮರುಗಿದೆ
ಸಾಧಕಿ ಒಬ್ಬಳ ಸಾವು
ನೋವು ತಂದಿದೆ

ತಾನು ನಡೆದ ಹಾದಿಯಲ್ಲಿ 
ತನ್ನ ಸಾಧನೆಯ ಹೆಜ್ಜೆಯೊತ್ತಿ
ನಾಡಿಗೆ ಹೆಮ್ಮೆ ಎನಿಸಿದ
ಅಮ್ಮ ಪದದ ಅನ್ವರ್ಥವಾಗಿ

ಬಡವರ ಪಾಲಿನ ಮಹಾತಾಯಿ
ರೈತರ ಪಾಲಿನ ಕರುಣಾಮಯಿ
ನಿಲ್ಲುವ ನೆಲೆಗೊಳಿಸುವ ಗಟ್ಟಿಗಿತ್ತಿ
ಸ್ತ್ರೀ ಕುಲದ ಹೆಮ್ಮೆ ಈ ನಾರಿ

ಕಲೆಯಲ್ಲಿ ನಾಯಕಿಯಾಗಿ ಮೆರೆದು
ರಾಜಕೀಯದಲ್ಲಿ ಮುಖ್ಯಮಂತ್ರಿ ಯಾಗಿ
ನಂಬಿದವರ ನಂಬಿಕೆಗರ್ಹವಾಗಿ
ಬದುಕಿದ ಛಲಗಾತಿ

ವಿವಾದಗಳೇನಿರಲಿ
ಈಗೆಲ್ಲವೂ ಗೌಣ
ಆ ಸಾಧಕೀಯ ಸಾಧನೆಗೆ
ಕಂಪನಿ ಕರೆದಿದೆ ಮನ

೧೧೪೮ಎಎಂ೦೬೧೩೨೦೧೬


ಬೆನ್ತಟ್ಟಿದ ಕೈಗಳು
************

ತಿರಸ್ಕಾರದ ನೋವಲಿ ಬೆಂದು
ಪುರಸ್ಕಾರದ ನಲಿವ ಉಂಡು
ಸಾರ್ಥಕಯಹತೆಯ ಭಾಷ್ಪ ಸುರಿದು
ಕವಿ ಉಳಿದನಿಂದು ನೋಡು

ಬರೆದ ಭಾವ ಮೆರೆಯಲು
ಬೇಕು ಬೆನ್ತಟ್ಟುವ ಕೈಗಳು
ಕವಿಯ ಕಲ್ಪನೆ ವಾಸ್ತವವಾಗಲು
ಬೇಕು ಓದಿ ಓದಿಸುವ ಮನಗಳು

ಪ್ರಶಸ್ತಿಗಾಗಿಯೇ ಎಂದು
ಕವಿತೆ ಹುಟ್ಟುವುದಿಲ್ಲ
ಓದುಗನ ಮನ ತಣಿಯೇ
ಅದಕ್ಕಿಂತ ಪುರಸ್ಕಾರ ಬೇಕಿಲ್ಲ

ಬರೆಯಲೆಂದೇ ಕೂರಲು
ಹುಟ್ಟದು ಕವಿತೆ
ತಾನಾಗಿಯೇ ಹುಟ್ಟಿ ಬರಲು
ಇರುಳಲು ಬೆಳಗುವ ಹಣತೆ

ಬೆಳೆಯಬೇಕು ಕಾವ್ಯ
ಬೆಳಗಬೇಕು ಕವಿ ಭವಿಷ್ಯ
ಕವಿ ಅಳಿದರು ಕವಿತೆ ಉಳಿದು
ಉಲಿಯಬೇಕದು ನಿತ್ಯ

೦೭೧೨ಪಿಎಂ೦೬೧೨೨೦೧೬

ಓ ಪ್ರೇಮಿ
*****₹**

ಓ ಪ್ರೇಮಿ ಓ ಪ್ರೇಮಿ
ನೀ ಮೌನಿಯಾದೆ ಅದೇಕೆ
ಓ ಧ್ಯಾನಿ ಓ ಧ್ಯಾನಿ
ಪ್ರೀತಿಯ ಮೇಲಿಡು ನೀ ನಂಬಿಕೆ
ಒಲವೊಂದು ತಪವು ನೀ ಕೇಳು
ಒಲವನ್ನು ನಂಬಿ ನೀ ಬಾಳು

ಪ್ರೀತಿಯಲ್ಲಿ ಎಂದೆಂದೂ ಮಾಮೂಲು
ಈ ವಿರಹ ಎಂಬ ಅಮಲು
ಪ್ರೇಮಿಗಳು ಒಂದು ಕ್ಷಣ ಸೇರಲು
ಈ ಸನಿಹ ತೆರವಂತೆ ಸ್ವರ್ಗದ ಬಾಗಿಲು
ಯುವ ಆ ನೋವೆಲ್ಲ ಮಾಯ
ಯುಗ ಒಂದು ಕ್ಷಣ ವಾಗ ಸಮಯ

ಪ್ರೀತಿಯ ಗೆಲುವಿಗಾಗಿ
ಇಲ್ಲಿ ನಿತ್ಯ ನೂರು ಹೋರಾಟ
ನರಳಿ ಅರಳಿ ಬಾಳುವುದರಲ್ಲಿ
ಯಾರಿಗೂ ಕಾಣದು ಆ ಸಂಕಟ
ಮೌನವೇ ಪ್ರೇಮಿಯ ಉತ್ತರ
ತ್ಯಾಗವೇ ಪ್ರೇಮವು ನೀಡಿದ ಸಂಸ್ಕಾರ

೦೩೦೯ಪಿಎಂ೦೭೧೨೨೦೧೬

ಹುಟ್ಟಬೇಕಿದೆ ಕವಿತೆ
####೨#######

ಹುಟ್ಟಬೇಕಿದೆ ಕವಿತೆ
ಅಂಧಕಾರದೊಳಿರುವ
ಮೂಢ ಜನರ ನಂಬಿಕೆಯ
ಕಳೆವ ಬೆಳಕಾಗಿ ಬೆಳಗಲು

ಹುಟ್ಟಬೇಕಿದೆ ಕವಿತೆ
ನೊಂದವರ ನೋವ ಮರೆಸಿ
ಎದೆಯಲ್ಲಿ ಒಲವೇ ಮೂಡಿಸಿ
ಮತ್ತೆ ಹೋರಾಟದ ಹುರುಪು ತುಂಬಲು

ಹುಟ್ಟಬೇಕಿದೆ ಕವಿತೆ
ದೌರ್ಜನ್ಯ ದಬ್ಬಾಲಿಕೆಯ ಮೆಟ್ಟಿ
ನಿರಾಶ್ರಿತರಿಗೆ ಆಶ್ರಯವಿತ್ತು
ಬದುಕಲಿ ನೆಲೆಗೊಳಿಸಲು

ಹುಟ್ಟಬೇಕಿದೆ ಕವಿತೆ
ದೌರ್ಭಾಗ್ಯರ ಸೌಭಾಗ್ಯವಾಗಿ
ದೌರ್ಬಲ್ಯವ ಕಿತ್ತು ಪ್ರಾಬಲ್ಯರಾಗಿಸಿ
ದಾರಿದ್ರ್ಯವನು ಹೊಡೆದೋಡಿಸಲು

ಹುಟ್ಟಬೇಕಿದೆ ಕವಿತೆ
ಪೊಳ್ಳು ಭರವಸೆಯ ನೀಡುವವರ
ಕಳ್ಳ ಬುದ್ದಿಯನ್ನು ಕೊಳ್ಳೆ ಹೊಡೆದು
ಸ್ವಚ್ಛಗೈವ ಕಸಪೊರಿಕೆಯಾಗಲು

ಹುಟ್ಟಬೇಕಿದೆ ಕವಿತೆ
ನಾಡು ಕಟ್ಟಿದವರ ನೆನೆದು
ನಾಡಿಗಾಗಿ ಮಡಿದವರತ್ತ ನಡೆದು
ವೀರ ಚರಿತ್ರೆಯ ಸಾರಲು

ಹುಟ್ಟಬೇಕಿದೆ ಕವಿತೆ
ನನ್ನದೆಂಬುದನ್ನೆಲ್ಲ ಅಳಿಸಿ
ದೈವತ್ವದ ಎದುರಲ್ಲಿ ಸಮರ್ಪಿಸಿ
ಅಹಮಿನ ಧೂಪವಾಗಲು

ಹುಟ್ಟಬೇಕಿದೆ ಕವಿತೆ
ಅವಮಾನಗಳ ಸಹಿಸಿ
ಅಭಿಮಾನವ ಸಂಪಾದಿಸುವ
ಸ್ವಾಭಿಮಾನವಾಗಿ ಹೊಮ್ಮಲು

ಹುಟ್ಟಬೇಕಿದೆ ಕವಿತೆ
ಅಕ್ಷರದ ಸತ್ವ ಮಹತ್ವ ಸಾರಿ
ಅನಕ್ಷರತೆಯ ಬುಡ ಸಮೇತ ಕಿತ್ತು
ಸಾಕ್ಷರತೆಯ ಪಟವ ಹಾರಿಸಲು

ಹುಟ್ಟಬೇಕಿದೆ ಕವಿತೆ
ಹೆತ್ತವರ ಬೀದಿಗೆ ತಳ್ಳಿ
ಉದ್ದುದ್ದ ವೇದಾಂತ ನುಡಿಯುವವರ
ನಡೆ ಬದಲಾಸಲು

ಹುಟ್ಟಬೇಕಿದೆ ಕವಿತೆ
ಅಬಲೆಯರ ಮೇಲ್ನಡೆಯುವ
ಅತ್ಯಾಚಾರವ ಹಿಮ್ಮೆಟ್ಟಿ
ಸಬಲ ಸಾಮ್ರಾಜ್ಯ ಕಟ್ಟಲು

ಹುಟ್ಟಬೇಕಿದೆ ಕವಿತೆ
ವರದಕ್ಷಿಣೆಯ ಭೂತ ಬಿಡಿಸಿ
ನಮ್ಮ ಬಾಳು ಸಮಪಾಲು ಮಂತ್ರಪಟಿಸಿ
ಸಮಾನತೆಯ ಸವಿ ಉಣಿಸಲು

ಹುಟ್ಟಬೇಕಿದೆ ಕವಿತೆ.
ಕಲೆ ಸಾಹಿತ್ಯ ಸಂಸ್ಕೃತಿಗಳ
ಮರೆತ ಈ ಜನಗಳ
ಮನದೊಳಗೆ ಮತ್ತೆ ಮೇಲೆಸಲು

ಹುಟ್ಟಬೇಕಿದೆ ಕವಿತೆ
ನಮ್ಮವರ ಬದುಕಿನ ರೀತಿ ನೀತಿಯ
ಮುಂದಿನವರಿಗೆ ತಲುಪಿಸುವ
ಪ್ರಭಾವ ವಾಹಕವಾಗಲು

೦೬೦೦ಎಎಂ೦೭೧೨೨೦೧೬

ಸೂರು ಕಟ್ಟಬೇಕಿದೆ
**************

ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

ನೊಂದ ಜೀವಗಳ
ನೆಮ್ಮದಿಯ ನೆರಳ
ಬೆರಳ ಹಿಡಿದು ಕರೆದು
ಮರೆಸುವ ಸಾಂತ್ವಾನದ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

ಅಸಹಾಯಕ ಬದುಕಿಗೆ
ಆಸರೆಯ ಕೈಚಾಚಿ
ಅನುಬಂಧ ಬೆಸೆಯುವ
ಅನುಕಂಪದ ಅಪ್ಯಾಯತೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

ಅಬಲರ ಬೆಂಬಲವಾಗಿ
ಬದುಕುವ ಹಂಬಲ ತುಂಬಿ
ಕನಸುಗಳ ಬಿತ್ತುತ
ಭರವಸೆಯ ಹೊಸ ನಿರೀಕ್ಷೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

ಪ್ರೀತಿಗಾಗಿ ಹಲುಬುವ
ಅಸಂಖ್ಯಾತ ಜೀವಸಂಕುಲವ
ಅಪ್ಪುಗೆಯ ಆಶಯ ನೀಡಿ
ಪೊರೆವ ಪರಂಪರೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

೧೧೩೩ಎಎಂ೦೮೧೨೨೦೧೬

ಅರ್ಥಹೀನ ಬದುಕು
""""""""""""""""""''

ನಾನು ನೀನು ಬೆಸೆದರು
ಮನಸು ಮತೆಲ್ಲೋ ಹರಿದು
ದೇಹ ಸೇರುವುದಾದರೂ
ಭಾವವಿರದ ಬದುಕು ಅರ್ಥಹೀನ

ಮಾತನಾಡಬೇಕಾದ ಹೊತ್ತು
ಮೌನವನ್ನೆಲ್ಲ ನುಂಗಿತ್ತು
ಒಂದು ಸಾಧನದೊಂದಿಗೆ
ಕಳೆದೆ ಹೋದೆ ಮಾತನಾಡದೆ ನನ್ನೊಂದಿಗೆ

ಆಡುವ ಮಾತು ನೂರಿದ್ದರು
ಆಡುವ ತುಟಿಗಳು ಬಿಗಿದಿವೆ ಈಗ
ಕಣ್ಣು ಕಣ್ಣು ಸೇರುವ ಬದಲು
ಏನೇನೋ ನೋಡಿ ದಣಿಯುತ್ತಿವೆ

ಹೃದಯದ ಭಾವ ಬೆರಳ
ತುದಿಯೊಳು ಆಡಿ ಮೂಡಿವೆ
ಮತ್ತೊಂದರಲ್ಲಿ ಸಂದೇಶವಾಗಿ
ಬಿಸಿಯಪ್ಪಿಗೆ ಹಿತ ನೀಡದೆ
ತಾವು ಹಾರಿದೆ ಸೂಕಿಸದೆ

೦೯೪೫ಪಿಎಂ೦೮೧೨೨೦೧೬

ನೀನಿರದ ಬೇಸರ
************

ನಡೆಯಲಾರೆ ದೂರ
ನೀನಿರದ ಬೇಸರ
ಚೇತನವನೇ ಕಸಿದಿದೆ
ಶಾಂತಿಯನ್ನು ಕದಡಿದೆ

ತಂಗಾಳಿಯು ಕೂಡ ನನಗೀಗ
ಕಿರಿಕಿರಿಯ ಮಾಡುತ್ತಿದೆ
ಮಧುರ ನಾದವು ಕೂಡ
ಕರ್ಕಶವಾಗಿದೆ ನೀನಿಲ್ಲದೆ

ಒಣಹುಲ್ಲಲು ಹಸಿರ ಕಾಣುವಾಸೆ
ನೀನಿರದ ಕಿಡಿಸೋಕೆ ತಂತು ಈ ಹತಾಶೆ
ಬರದ ಗರ ಬಡಿದಿದೆ ಈಗ
ನಿನ್ನೊಲವ ಸೋನೆ ಸುರಿಯದೆ

ಭಾವಗಳ ಅಂತರ್ಜಲ ಬತ್ತಿ
ನಿರ್ಜೀವವಾಗಿದ ಬದುಕು
ವಿರಹದ ಬೇ(ಸಿ)ಗೆಯಲ್ಲಿ ಬೆಂದು
ಬಸವಳಿದಿದೆ ಚಂದ ಬದುಕು

ಮನದಾಗಸವು ಬಿಕ್ಕುತಿದೆ
ನಿನ್ನ ನಗು ಮೇಘ ಸಂದೇಶವಿರದೆ
ಜೀವನವೇ ನರಳುತಿದೆ
ನಿನ್ನ ಉಪಸ್ಥಿತಿ ಇರದೆ

ಬಂದು ಬಿಡು ನಲ್ಲ
ಇನ್ನು ಕಾಯಿಸುವುದು ತರವಲ್ಲ
ಇರುವ ಸುಖವನ್ನೇ ಹಂಚಿ ತಿಂದು
ಮೆರೆಯೋಣ ಹೊಸ ಜೀವನದಿ

8:38 ಎಎಂ 9.12.2016

ಬಾನತಿಥಿಯ ಸ್ವಾಗತ
***************

ಮಬ್ಬು ಕರಗುತ್ತಿದೆ
ಜಗವೆದ್ದು ಕೂರುತಿದೆ
ಮೂಡಣದ ಬಾನತಿಥಿಯ
ಸ್ವಾಗತಿಸುತಿದೆ

ಇಬ್ಬನಿ ಮೆತ್ತಿದ ಪ್ರಕೃತಿಯು
ಮೋರೆಯನೊರೆಸಿಕೊಳ್ಳುತಲಿ
ಹಕ್ಕಿ ಗಾನಕ್ಕೆ ಕೊಳಕಿತಗೊಂಡು
ಲವಲವಿಕೆಯ ಹೂ ಅರಳಿಸಿದೆ

ಮುಚ್ಚಿದ ಕಣ್ಣ ತೆರೆದ
ಎಲೆಗಳ ಹಸಿರು ವರ್ಣ
ಭಾಸ್ಕರನ ಆಗಮನವ ಸಾರಿ
ಸ್ವರ್ಗವನ್ನೇ ಧರೆಗಿಳಿಸಿದೆ

ಹರಿವ ನೀರ ಸುನಾದ
ಉಕ್ಕುವ ಅಲೆಗಳ ಆನಂದ
ಬೆಳಕಿನ ಈ ಸೆಳೆತಕ್ಕೆ ಸಿಕ್ಕು
ತೋರಿದ ಕ್ರಿಯಾಶೀಲ ದಿಕ್ಕು

ತಂಪಿನ ಇಂಪಿನ ಮುಂಜಾನೆ
ತೆರೆಯಿತು ಹೊಸ ಭಾವದ ಖಜನೆ
ಏಳಿರಿಯೆಲ್ಲ ಕಾರ್ಯೋನ್ಮುಖರಾಗಿ
ದುಡಿಯುತ ಕಾಲನೊಂದಿಗೆ ಜೊತೆಯಾಗಿ

0618 ಎಎಂ 10.12.2016

ಹೊಸ ಕನಸ ಹೊತ್ತು
*******-*******

ಹೊಸ ಕನಸುಗಳ ಹೊತ್ತು
ಹೊಸ ಜೀವನಕ್ಕೆ ಅಡಿಯಿತ್ತು
ಹೊಸತನದ ತುಡಿತ ಮಿಡಿತಗಳ
ಹೊಸ ಜೋಡಿಗೆ ಶುಭಾಶಯ

ಬಾಳ ಹಾದಿಯ ತುಂಬಾ ನಗುವಿರಲಿ
ಬದುಕಿನ ಅಂತ್ಯದವರೆಗೂ ಒಲವಿರಲಿ
ಏಳು ಬೀಳು ಸಹಜ ಬಾಳಿನಲ್ಲಿ
ಏರು ಗತಿಯು ನಿಮ್ಮದಾಗಿರಲಿ

ಪ್ರೀತಿಸುವ ಜೀವಗಳು ನೀವು
ಸಿಹಿಯೊಂದಿರಲಿ ಬೇಡ ಬೇವು
ಸರಿ ಮಾತು ಸಾವಿರಾಗಲಿ
ಒಮ್ಮತದ ನಿಲುವು ನಿಮ್ಮಿಬ್ಬರದಾಗಲಿ

ಹಿರಿಯರ ಹರಕೆ ನಿಮಗಿದೆ
ಕಿರಿಯರಿಗೆ ಆದರ್ಶ ನೀವಾಗಿರಿ
ಸಂಸಾರದ ಈ ಬಂಧನ
ಆಗಲಿ ಮನಗಳ ಮಧುರ ಮಿಲನ

ಸುಖದ ನೆರಳು ಸದಾ
ನಿಮ್ಮ ಬೆರಳ ಹಿಡಿದು ನಡೆಸಲಿ
ನೂರು ಕಾಲ ಬಾಳಿರೆಂದು
ನಾನು ಈ ಕವಿತೆಯಿಂದ ಹರಸುವೆ

12 12 ಪಿಎಂ 11 12 2018

ಬಾಳ ಹೆಗ್ಗುರುತು.
************

ಬೇಕಿಲ್ಲ ನನಗೇನು ನಿನ್ನ ಹೊರತು
ನೀನೆ ನನ್ನ ಬಾಳ ಹೆಗ್ಗುರುತು

ಒಲವಿಗಾಗಿ ಹಂಬಲಿಸುವ
ಜೀವಕ್ಕೆ ನೀ ತಾಯಾದೆ
ಚೆಲುವಿಗೆ ಮನವ ಬೆಂಬಲಿಸಿ
ನೋವಲ್ಲು ಔದಾರ್ಯ ಮೆರೆದೆ

ಹಸಿವು ಎನ್ನಲು ಕರೆದು
ನಿನ್ನ ಹಸಿವು ಲೆಕ್ಕಿಸದೆ ಕೈತುತ್ತನಿತ್ತೆ
ದಣಿದು ಬಂದಾಗ ನಿನ್ನ ಬಳಲಿಕೆಯನು
ತೋರ್ಪಡಿಸದೆ ಸಂತೈಸಿದೆ

ಅಮ್ಮ ಎಂಬೊಂದು ಕೂಗಿಗೆ
ನಿನ್ನ ಇಡೀ ಬದುಕನ್ನೇ ಮೀಸಲಿಟ್ಟೆ
ಯಾವ ಪ್ರತಿಫಲವ ಬೇಡದೆ
ನಿನ್ನೊಡಲಲ್ಲಿ ನನಗೆ ಜೀವವ ಕೊಟ್ಟೆ

ಸಾವಿನಾಚೆಗೂ ಉಳಿಯುವ ಬಂಧ ನಿನ್ನದು
ನೋವಿನಲ್ಲೂ ಮೊದಲು ಕರವ ಹೆಸರದು
ನನಗೆಲ್ಲ ಪುಕ್ಕಟೆ ಕೊಟ್ಟ ದೈವ ನೀನು
ನಿನ್ನನೇ ನಂಬಿದ ಅಪ್ಪಟ ಭಕ್ತ ನಾನು

6 21 ಎ ಎಂ 12 12 2016

ಎಲ್ಲ ಮುಗಿದಿರುವಾಗ
****************

ಎಲ್ಲ ಮುಗಿದಿರುವಾಗ 
ಈಗ ಬಂದರೇನು ಪ್ರಯೋಜನ
ಗರಬಡಿಸಿತು ಬರ ಬಂದು
ತತ್ತರಿಸಿದೆ ರೈತಾಪಿ ಜೀವನ

ಬತ್ತಿ ಹೋಗಿದೆ ಬಿತ್ತುವ ಕಾಲ
ಉಳಿದಿದೆ ಬರೀ ಬೇಸಿಗೆಕಾಲ
ಬಿರುಗಾಳಿಯಬ್ಬರದಿ ಬಂದರೆ
ಅಳಿದು ಉಳಿದ ಬದುಕಿಗೂ ತೊಂದರೆ

ಬರಿಗೈಲಿ ಕೂತು ಕರುಗುತಿಹ
ಬಡಪಾಯಿ ಈ ರೈತ
ಈಗ ಸುರಿಯುವ ಬದಲು ಮಳೆ
ಮುಂಗಾರಿಗೆ ಬರಬಾರದಿತ್ತಾ

ಒಣಗಿದ ಒಡಲನು
ತಣಿಸಲು ಬಂದಿಹುದು
ಸತ್ತ ಭರವಸೆಯ ಮತ್ತೆ
ಚಿಗುರಿಸಲು ಸೋತಿಹುದು

ಏನಾಯಿತು ಈ ಪ್ರಕೃತಿಗೆ
ದಿಕ್ಕೆಟ್ಟು ಓಡಿದೆ ಅದ್ಯಾವ ಕಡೆಗೆ
ಏರುಪೇರಿನ ಈ ಕಾಲಘಟ್ಟ
ಕಟ್ಟಿತು ರೈತ ಬದುಕಿಗೆ ಚಟ್ಟ

0452 ಪಿಎಂ 13 12 2016

ಧಗೆಯಾರಿದೆ ಜೀವ
**************

ನೋವಿನ ಆಕಂದನ
ಸೋಲಿನ ಆಕ್ರಮಣ
ಭಗ್ನಗೊಂಡ ಕನಸುಗಳ
ನೆನೆದು ರೋಧಿಸಿದೆ ಮನ

ಹೆಜ್ಜೆ ಹೆಜ್ಜೆಗೂ ಕಟ್ಟಿಹಾಕಿ
ಕಾಮ ಕೊಚ್ಚೆಯಲ್ಲಿ ನೂಕಿ
ಕರುಬುವ ನನ್ನ ಕಂಡು ನಗುವ
ಜನರೊಂದಿಗೆ ನಾ ಹೇಗೆ ಹೇಗಲಿ

ಕಟ್ಟಿದ ಗೆಜ್ಜೆ ಸವೆವಾ ಮುನ್ನವೇ
ಮುಟ್ಟಿದ ಕೈಗಳು ಮೈಲಿಗೆ ಮಾಡಿ
ಕತ್ತಲ ಜಗದೀ ಬೆತ್ತಲೆ ಬಿಸುಟಿ
ಹುಸಿನಗುತಿದೆ ಹಸಿ ಮೈಯನುಂಡು

ಯೌವ್ವನದ ಕನಸುಗಳ ಕೊಂದು
ಮೈಮನಗಳ ಘಾಸಿಗೊಳಿಸಿ.
ಆ ಗಾಯದ ಮೇಲೀಗ ನಿರ್ಲಕ್ಷದ
ಬರೆಯೆಳಿದು ಭೀಭತ್ಸ್ಯ ಮೆರೆದಿದೆ

ಭರವಸೆಗಳನೆಲ್ಲ ಅಳಿಸಿ
ಬದುಕನ್ನೇ ಸಾಯಿಸಿದರು
ಉಳಿದ ದೇಹವನ್ನುಂಡು
ಜಗದಿ ಗಣ್ಯತೆಯ ಮೆರೆದವರು

ಮೃಗಗಳಿಗೆ ಸುಖವ ನೀಡಿ
ಬಳಲಿ ಬಸವಳಿದಿರುವೆ
ಧಗೆಯಾರಿದ ಜೀವನವು
ಸಾಕಾಗಿ ಸತಾಯಿಸಿದೆ ಸಾವು

7 7 ಪಿಎಂ 11.12.2016

ಬಣಗುಡುವ ಒಡಲು
****************

ಬಣಗುಡುತಿದೆ ಒಡಲು
ಬುವಿಯಲ್ಲಿ ಬರ ಬಂದಿರಲು
ಹನಿ ನೀರಿಗೂ ಪರದಾಡುವ
ಹೈರಾಣ ಸ್ಥಿತಿ ಇದು

ಮಳೆಯಾಗದೆ ಕೆಂಡದ
ಉಂಡೆಯಾಗಿ ಬೆಂದಿದೆ
ಒಣಗಿದ ಬದುಕನ್ನು ಕಂಡು
ಈ ಪ್ರಕೃತಿ ಮರುಗದಾಗಿದೆ

ತುಂಬಿ ಹರಿಯುತ್ತಿದ್ದವು
ನದಿ ತೊರೆಗಳ ಆಗ ಮೈದುಂಬಿ
ಬರಿ ದಾಗಿ ಬಾಯ್ಬಿರುಕು ಬಿಟ್ಟಿದೆ
ಏಕೊದಗಿತೋ ಈ ದುರ್ಗತಿ

ಪರದಾಡುತ್ತಿವೆ ಖಗಮೃಗ
ಬಾಯಾರಿಕೆಗೆ ದಿಕ್ಕು ತಪ್ಪಿ
ಕೊಳೆಯದೆ ಹಾಗೆ ಒಣಗಿದೆ
ದೇಹ ಧಾರುಣ ಸಾವನಪ್ಪಿ

ಯುದ್ಧಕ್ಕೆ ಮುನ್ನುಡಿ ಬರೆದಿದೆ
ನೀರಿನ ಈ ದಾಹವೆಚ್ಚಿ
ಜೀವಜಲದ ಅಸ್ತಿತ್ವಕ್ಕಾಗಿ
ಜೀವ ಹೋಗುತ್ತಿದೆ ಈ ಬರದಿ

ಯಾವಾಗ ಬರುವುದು
ಆ ಭರವಸೆಯ ಮಳೆ
ಮತ್ತೆ ಹೇಗೆ ಮೈದುಂಬುವುದು
ಹಸಿರಿನ ಈ ಜೀವಕಳೆ

01 23 ಪಿಎಂ 10.12.2016

ನಮ್ಮಿಬ್ಬರ ನಡುವೆ
**************

ಇರಲಿ ಬಿಡು ನೀ ತೊರೆದು
ಹೋದಷ್ಟೇ ನೋವು
ಬಂದರೆ ಭಯವಿಲ್ಲ ನನ್ನ
ಹುಡುಕಿಕೊಂಡು ಆ ಸಾವು

ಆಗಸದ ರವಿ ಚಂದ್ರರಿಗೂ
ತಪ್ಪಿಲ್ಲ ಆ ಕಪ್ಪು ಗ್ರಹಣ
ನಮ್ಮಿಬ್ಬರ ನಡುವೆ ಬಂದ
ವಿರಸವೆ ಅದಕ್ಕೆ ಕಾರಣ

ನಮ್ಮೊಳಗಿನ ಹಮ್ಮಿಗಾಗಿ
ಬರವು ಎರಗಿದೆ ಬಾಳಿಗೆ
ಧರೆಯೊತ್ತಿ ಉರಿದಿರಲು
ನೆಮ್ಮದಿ ಇಲ್ಲವೋ ನಾಳೆಗೆ

ಕಾರ್ಮೋಡ ಕರಗಿ 
ಮಳೆಯು ಸುರಿದಂತೆ
ನಮ್ಮಿಬ್ಬರ ಮುನಿಸ ತೆರೆ
ತಾ ದೂರ ಸರಿದಂತೆ

ಬಾಳ ಬಂದಿಲ್ಲಿ ನಾವೇಕೆ
ಈ ಅಂತರವನ್ನು ತಂದುಕೊಂಡೆವು
ಬಿಸಿಲ ಬೇಗೆಗೆ ಮರೀಚಿಕೆಯೇ
ನೀರಿನ ಅಗರವೆಂದುಕೊಂಡೆವು

ಸಾಕಿನ್ನು ಈ ಬೇಸರ
ಬೆಳಗಲಿ ಒಲವನೇಸರ
ನಿನ್ನ ಈ ಅಂತರ
ತಂತು ತುದಿಕಾಲಲಿ ಸೇರುವ ಕಾತರ

350 ಪಿಎಂ 15.11.2016

ನನ್ನನು ಬಿಡಲಿಲ್ಲ
************

ಶ್ರದ್ಧಾಂಜಲಿಗೆ ಅರ್ಹನಾಗಿ
ತಿಲಾಂಜಲಿ ಇತ್ತೆ ಗರ್ವಕ್ಕೆ
ಜನನದಿಂದ ಬಂದ ನಾನೆಂಬ
ಅಹಂಗೆ ಸಾವಾಯ್ತು ಉತ್ತರ

ನನ್ನದೆಂದು ಎಲ್ಲದರಲ್ಲೂ
ಅಧಿಪತ್ಯದ ಮದವೇರಿ ನಡೆದೆ
ಬದುಕಿರುವವರೆಗೂ ನನಗಾಗಿಯೇ
ಎಲ್ಲರ ಬದುಕ ಸುಖ ಕಿತ್ತುಕೊಂಡೆ

ಪ್ರೀತಿಗಿಷ್ಟು ಜಾಗವೀಯದೆ
ಅಧಿಕಾರದ ದರ್ಪದಲ್ಲೇ ಮೆರೆದೆ
ಸೇವಕನ ಅಸಹಾಯಕತೆಯನ್ನೇ
ನನ್ನ ಬಲದ ಪ್ರಭಾವವೆಂದು ಬೀಗಿದೆ

ಹಣ ಅಂತಸ್ತುಗಳಿಂದ
ನನ್ನ ಗುಣವನ್ನು ಮಣ್ಣಾಗಿಸಿದೆ
ಇಲ್ಲದವರ ಹೆಣಗಳ ಮೇಲೆ
ಸಿರಿತನದ ದಬ್ಬಾಳಿಕೆ ನಡೆಸಿದೆ

ಸಾವಿರಂಬುದು ನನ್ನನ್ನು ಬಿಡಲಿಲ್ಲ
ಹೆಣವಾದ ಗಳಿಗೆ ಏನು ಜೊತೆ ಬರಲಿಲ್ಲ
ಮಣ್ಣಾಗುವ ಈ ದೇಹಕ್ಕೆ ಮನದರ್ಪ
ಜೀವ ಹೋದ ಮೇಲೆ ಹಲ್ಲಿಲ್ಲದ ಸರ್ಪ

ಇದ್ದಾಗ ಕಾಡಿಸಿಕೊಂಡವರೇ
ಸತ್ತಾಗ ಹೊತ್ತು ಮುಕ್ತಿಯಿತ್ತರು
ಹಣ ಅಧಿಕಾರವನ್ನೆಲ್ಲ ಮರೆತು
ಸಂಸ್ಕಾರಗೈದು ಮಾನವೀಯತೆ ಮೆರೆದರು

1228 ಪಿಎಂ 1612 2016

ಮುಂಜಾನೆಯ ದೀಪ
***************

ಮಾಗಿ ಚಳಿಯ ಬೀದಿಯಲ್ಲಿ
ಕಾರ್ತಿಕ ಮಾಸದ ದೀಪದಲ್ಲಿ
ಶಿಶಿರ ಋತುವ ಪರ್ವದಲ್ಲಿ
ಹೊಸತನಕ್ಕೆ ತುಡಿವ ವೇಳೆಯಲ್ಲಿ
ಮೂಡಿತು ಮುಂಜಾನೆಯ ಈ ದೀಪ

ಕಳೆದ ಕತ್ತಲೆಯ ಭಿತ್ತಿಯಲ್ಲಿ
ಜಗದ ಸವಿಗನಸ ನಿದಿರೆಯಲಿ
ಪ್ರಕೃತಿ ಚೆಲುವ ಅನಾವರಣದಲ್ಲಿ
ಮೊಳಗೋ ಸುಪ್ರಭಾತದಲ್ಲಿ
ಮಂಜಿನ ತೆರೆ ಸರಿಸಿ ಬಂದ ನೇಸರ

ಬೆಳಕ ಬೀರುವ ಕಾಯಕದಲ್ಲಿ
ಕವಿದ ಕತ್ತಲೆ ಓಡಿಸುವಲ್ಲಿ
ಜಗವ ನಡೆಸೋ ನಾಯಕತ್ವದಲ್ಲಿ
ಯಶಸ್ಸಿನ ಆ ಗತಿಯಲ್ಲಿ
ಕಾಲರೂಢನಾಗಿ ಬಂದ ಆನೆಸರ

6:43 ಪಿಎಂ 17 12 2018

ಸತತ ಸೋಲಿನಿಂದ
++++++---+++++

ಮೋಹ ಬತ್ತಿತು
ಮನಸ್ಸು ಸತ್ತಿತು
ಸತತ ಸೋಲಿನಿಂದ

ಮಾತು ತಪ್ಪಿತು
ಮೌನ ಗೆದ್ದಿತು
ಸೋತ ಭೀತಿಯಿಂದ

ನೀತಿ ಕೈಕಟ್ಟಿ ಬಿಟ್ಟಿತು
ಪ್ರೀತಿ ಕಂಗೆಟ್ಟಿತು
ನಂಬಿಕೆ ಇಲ್ಲದ್ದರಿಂದ

ಭಾವ ಕುಸಿಯಿತು
ನೋವು ಹೆಚ್ಚಿತು
ಸ್ಪೂರ್ತಿಯ ಅಭಾವದಿಂದ

ಜಗವು ನ್ನಕ್ಕಿತು
ಮನವು ಬಿಕ್ಕಿತು
ಈ ಹುಚ್ಚಾಟದಿಂದ

ದಾರಿ ಸವಿಯಿತು
ಗುರಿಯು ಮಾಸಿತು
ಈ ನಿರಾಸೆಯಿಂದ

ಭರವಸೆಯು ಸೋತು
ಬದುಕು ಕೈತಪ್ಪಿತು
ಬರೀ ನಿರೀಕ್ಷೆಯಿಂದ

ಎಲ್ಲ ಹುಸಿ ಆಯ್ತು
ಬೆಲ್ಲ ಕಹಿಯಾಯಿತು
ಗೆಲ್ಲದ ನೆಲವಿನಿಂದ

02 14 ಎಎಂ 18 12 2016
 
ವಿಶ್ವಮಾನವ
**********

ಕನ್ನಡಕ್ಕಾಗಿ ಎತ್ತಿದ ಕೈ
ಕಲ್ಪವೃಕ್ಷವಾಯಿತು
ಕನ್ನಡ ಡಿಂಡಿಮ ಬಾರಿಸಿ
ಕನ್ನಡಿಗರನ್ನೆಚ್ಚರಿಸಿತು

ಮಲೆನಾಡ ಕಾನನದ
ಸಹ್ಯಾದ್ರಿಯ ಮಡಿಲಲ್ಲಿ
ಅವತರಿಸಿದ ಕನ್ನಡದ ಕಂಪು
ಕನ್ನಡದ ಹೆಮ್ಮರವಾದರು ಈ ಕುವೆಂಪು

ರಾಮಕೃಷ್ಣಾಶ್ರಮದಾಸರೆಯಲ್ಲಿ
ಹುಲಸಾಗಿ ಬೆಳೆದ ಪ್ರತಿಭೆ
ಆಂಗ್ಲ ಸಾಹಿತ್ಯಕ್ಕೆ ಮಾರುಹೋಗಿತ್ತು
ಅಪ್ಪಟ ಕನ್ನಡದ ಪ್ರಭೆ

ದಿಗ್ಗಜರ ಗರಡಿಯಲ್ಲಿ ಪಳಗಿ
ಸಾಹಿತ್ಯ ಲೋಕದ ತಾರೆಯಂತೆ ಮಿರುಗಿ
ರಾಮಾಯಣದ ದರ್ಶನ ಮಾಡಿಸಿ
ಕನ್ನಡಕ್ಕೆ ಜ್ಞಾನಪೀಠದ ಮುಕುಟವಿತ್ತರು

ನಾಡು ನುಡಿಗೆ ದುಡಿದ ಕವಿಗೆ
ರಾಷ್ಟ್ರಕವಿಯ ಅಭಿಮಾನದ ಗೌರವ
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು
ಎಂದು ಸಾರಿದ ವಿಶ್ವಮಾನವ

ಭಾರತ ಜನನಿಯ
ಕನ್ನಡ ತನುಜಾತೆಯ
ಹೆಮ್ಮೆಯ ಈ ಕುವರ
ಕನ್ನಡದ ಕಂಪ ಹರಡಿದ ಧೀರ

0425 ಎಎಂ 20 12 2018

ಮಧುರ ಪೇಯ
************



ಎಲ್ಲಿಯ ನೀರೋ
ಎಲ್ಲಿಯ ಹಸಿರಲಿಯೋ
ಯಾವ ಹಸುವಿನ ಹಾಲೋ
ಯಾವ ನೆಲದ ಸಕ್ಕರೆ ಸವಿಯೋ
ಹದವಾಗಿ ಕೂಡಿದ ಮಿಶ್ರಣ
ಸವಿವ ಮನದ ಮುದಕೆ ಕಾರಣ

ಉರಿವ ಬೆಂಕಿಯ ಸಹಿಸಿ
ಪಾತ್ರೆಯಲ್ಲಿ ಎಲ್ಲ ಸೇರಿಸಿ
ತಮ್ಮ ತಮ್ಮ ಗುಣಗಳ ನೀಡಿ
ಮಧುರ ಪೇಯವಾಯಿತು ನೋಡಿ
ಜಗದೆಲ್ಲ ಮನಗಳೊಂದಾಗಿ
ಬೇರೆತರೆ ಅದೇನು ಸವಿಯೋ

ಬೆಂಕಿ ಉರಿದು ಹೋಗುವುದು
ಪಾತ್ರೆ ಕರಗದೆ ಉಳಿಯುವುದು
ಹಾಲು ನೀರು ಸಕ್ಕರೆ ಬೆರೆತು
ಚಹಾದೆಲೆ ರಸ ಬಿಟ್ಟು ಉಳಿಯಿತು
ತನ್ನೆಲ್ಲ ಗುಣಗಳ ಪಸರಿಸಿ
ಸೊಪ್ಪು ಸಪ್ಪೆಯಾಗಿ ತಿಪ್ಪೆ ಸೇರಿತ್ತು

0214 ಪಿಎಂ 20 12 2018

ನೀನಿರದೆ
*******

ಬೇಸರವೂ ಬರವಾಗಿ ಎರೆಗಿದೆ
ನೀನಿರದೆ ಈ ಬಾಳು ಸೊರಗಿದೆ
ಬೇಸಿಗೆಯ ಈ ಉರಿತಾಪ
ಎದೆಯ ಭಾವಗಳ ಸುಡುತಿದೆ

ಕನಸುಗಳೆಲ್ಲ ಎಲೆಯುದುರಿ
ಕಲ್ಪನೆಯು ಅಲ್ಲಲ್ಲಿ ಚಿಗುರಿ
ಕರೆಯುತ್ತಿದೆ ನಿನ್ನೊಲವ ಮಳೆಯ
ತಣಿದು ಕುಣಿದು ಮೆರೆಯಲು

ಒಂಟಿತನದ ಒಣ ಹುಲ್ಲಿಗೆ
ಬೇಜಾರಿನ ಕಿಡಿಸೋಕಿ
ಬೇಕಾಗಿದೆ ಭಾವವೆಲ್ಲಾ
ಕಿತ್ತು ತಿನ್ನುತ್ತಿವೆ ನೆನಪೆಲ್ಲ

ನಿನ್ನ ನೆರಳಿಲ್ಲದೆ ನರಳಿದೆ
ಜೀವ ಹಸಿದು ನಿತ್ರಾಣಗೊಂಡಿದೆ
ಬಿದ್ದಲ್ಲಿ ಬಿದ್ದು ಬಳಲಿದೆ
ಯಾವ ಹಾಡು ಹಿಡಿಸುತ್ತಿಲ್ಲ

ನವಭಾವ ಯಾವುದು ಮೂಡುತ್ತಿಲ್ಲ
ಹಸಿ ಗೋಡೆಯ ಹುಸಿ ಹೋಗುವ
ಕಸಿವಿಸಿಯಲ್ಲಿ ತೊಳಲಾಡಿದ ಜೀವ
ಕಾದು ಕೆಂಡವಾಗುವ ಮೊದಲು
ಬಂದು ಜ್ಯೋತಿಯಾಗು ಒಲವೇ

3:47 ಪಿಎಂ 2012 2018

ಒಲವಿಗಾಗಿ
*********

ವಿರಹದ ನೋವು ದೂರವಾಯಿತು
ಮರೆವು ಈಗ ವರವಾಯಿತು
ಎದೆಯಲೊಂದು ಹೊಸ ಭಾವ
ಮೂಡಿ ಮರೆಸಿದೆಲ್ಲ ನೋವ

ಹೂವು ಅರಳಿತು ರವಿಗಾಗಿ
ಭಾವ ಮೂಡಿತು ಪ್ರೇಮಿಗಾಗಿ
ಮಳೆ ಸುರಿಯಿತು ಇಳಿಗಾಗಿ
ಮೌನ ಮುರಿಯಿತು ಒಲವಿಗಾಗಿ

ನನಗಿಲ್ಲ ಇನ್ನು ಬರದ ಚಿಂತೆ
ಒಲವ ವರವಿದೆ ನನ್ನ ಜೊತೆ
ಮೂಡುವ ಭಾವಗಳೆಲ್ಲ ಈಗ
ಹಾಡಾಗಿ ನಲಿಯುತ್ತಿವೆ ನನ್ನಲ್ಲಿ

ಏಕಾಂತ ಹಿತವೆನಿಸಿದೆ
ಗೆಳತಿ ನಿನ್ನ ನೆನಪಿಂದ
ಬೇಸರವು ನೀನಿಲ್ಲದೆ ಓಡಿತು
ನೀನಿರುವ ಭಾವದಿಂದ

ನವಚೇತನ ನನ್ನ ಎದೆಯಲಿ
ಹೊಸ ಆಸೆಗಳ ಸೃಷ್ಟಿಸಿದೆ
ಈ ಪ್ರೀತಿಯು ನನ್ನ
ಬದುಕಿಗೀಗ ಪುಷ್ಟಿ ನೀಡಿದೆ

436 ಪಿಎಂ 20 12 2016

ಮಾನವಿಯತೆ ಸತ್ತಿತು
***************

ಎಳೆಯ ಬಾಲೆಯ ಮೇಲೆ
ದುರುಳ ಕಾಮುಕ ನೆರಗಿ
ಅತ್ಯಾಚಾರ ಗೈಯುವಾಗ
ಮಾನವೀಯತೆ ಸತ್ತಿತು

ತನ್ನನ್ನು ನಂಬಿ ಬಂದ
ತನ್ನ ಮನೆ ಮನ ಬೆಳಗುವಳನ್ನು
ವರದಕ್ಷಿಣೆಗಾಗಿ ಹಿಂತಿಸುವಾಗ
ಮಾನವೀಯತೆ ಸತ್ತಿತು

ಮುದ್ದಿನಿಂದ ಸಲಹಿದ
ಮಗ ನಡು ರಾತ್ರಿಯಲಿ
ನಡು ಬೀದಿಗೆ ತಳ್ಳುವಾಗ
ಮಾನವೀಯತೆ ಸತ್ತಿತು

ಹಸಿವಿನಿಂದ ಜನ ತತ್ತರಿಸಿರಲು
ಉಳ್ಳವರು ಪ್ರತಿಷ್ಠೆಗಾಗಿ
ಅನ್ನವನ್ನು ತೊಟ್ಟಿಗಿಸೆವಾಗ
ಮಾನವೀಯತೆ ಸತ್ತಿತು

ತನ್ನ ನಂಬಿದ ಜೀವವನ್ನು
ಬಾಯಿ ಚಪಲಕ್ಕಾಗಿ
ದೇವರ ಹೆಸರಲ್ಲಿ ಬಲಿ ನೀಡುವಾಗ
ಮಾನವೀಯತೆ ಸತ್ತಿತು

ಅಸಹಾಯಕರ ಮೇಲೆ
ಅಟ್ಟಹಾಸ ಮೆರೆದು
ಅವಹೇಳನಗೈಯುವಾಗ
ಮಾನವೀಯತೆ ಸತ್ತಿತು

624 ಎಎಂ 21.12/2016

ಬಲಿಗೈದರು
*********

ಜಾತಿ ಧರ್ಮಗಳ ಹೆಸರಲ್ಲಿ
ಬೇಲಿಯ ಹಾಕಿ ಬಲಿಗೈದರು
ಹುಟ್ಟು ಒಂದೆ ರೀತಿ
ಸಾವು ಒಂದೇ ರೀತಿ
ನಡುವೆ ಬದುಕುತ್ತಿರುವಾಗ ಏಕೆ
ಈ ಮೇಲು ಕೀಳುಗಳ ಗೊಡವೆ

ಹಾರುವನಾದರೇನು ಹೊಲೆಯನಾದರೇನು
ಉಸಿರಾಡುವ ಗಾಳಿ ಒಂದೇ
ತಿನ್ನುವ ಅನ್ನವು ಒಂದೇ
ದೇಹದೊಳಗಿನ ಚಯಾಪಚಯವು ಒಂದೇ

ಹುಟ್ಟಿನ ಓಣಿಯ ಏಣಿಯ
ಹಿಡಿದು ಹತ್ತುವರುಂಟು
ಸಾಧನೆಯ ಶಿಖರವೇರಿ
ಅವರು ಇಲ್ಲಿ ಉಂಟು

ಒಂದೇ ಜಾಗದಿಂದ ಬಂದವರ
ಭಿನ್ನಗೈದವರು ಯಾರು
ಒಂದೇ ಜಾಗಕ್ಕೆ ಹೋಗುವವರ
ಮಣ್ಣು ಜಾತಿ ಕೇಳಿ ಕೊಳೆಸುವುದೇನು
ಶಾಸ್ತ್ರಗಳ ಅಸ್ತ್ರವು ಬಳಸಿ
ಬಾಳ ಸೂತ್ರದ ನಿಯಮ ನಂಬಿ
ಮೇಲು ಕೀಳಿನ ಅಂತರವ ದೂಡಿ
ಸಮಾನತೆಯ ಜ್ಯೋತಿ ಬೆಳಗಲಿ ಇಂದು

439 ಪಿಎಂ 21.12.2016

ಹತಭಾಗ್ಯಳು
*********

ಪೂಜೆಯ ಹೆಸರೇಳಿ
ಈಗ ಪೂಜೆಗರ್ಹವಲ್ಲದವಳು
ಪಲ್ಲಂಗವನು ಅಲ್ಲದೆ ಏರಿ
ಪಲ್ಲಕ್ಕಿಗೆ ಸಲ್ಲದ ಹತಭಾಗ್ಯಳು

ಅರಿಯದ ಹೊತ್ತಲ್ಲಿ ಮುತ್ತು ಕಟ್ಟಿ
ಹರೆಯದ ಮತ್ತಲ್ಲಿ ಮೈಯ ಮುಟ್ಟಿ
ದೇವರ ದಾಸಿ ಎಂದು ನಂಬಿಸಿ
ವೇಶ್ಯೆ ಪಟ್ಟ ಕಟ್ಟಿದ ಕಾಮಾಧಮರು

ಹಸಿದ ಎಲ್ಲರೂ ಉಂಡವರೇ
ನನ್ನ ಬಳಿದ ದೇಹವನ್ನು
ಬಸುರಿಗೆ ಹೊಣೆಯಾಗಿದ
ಢಾಂಬಿಕ ಈ ದುರುಳರು

ಕೀಳು ಜಾತಿಯವರ ಕಾಲಿಗೆ
ಗೆಜ್ಜೆ ಕಟ್ಟಿ ತಣಿದರು
ಸೂಳೆ ಎಂದು ಕರೆದು
ನನ್ನ ನಾಳೆಯ ಕೊಂದರು

ದೇವರ ಹೆಸರಿಲ್ಲಿ ದಂಧೆಯ
ಮಾಡುವ ನೀಚರಿವರು
ಮೈ ನೆರೆದ ಹಸಿ ಮೈ ಎಂದು
ನೋಡದ ವಾಂಚೆಗೆಲ್ಲದವರು

ಹಿಂಡಿ ಹಿಂಡಿ ಬಸಿದರು
ನನ್ನ ಈ ಯೌವ್ವನವನು
ಹಾದಿಬೀದಿಯ ಅನಾಥವಾಗಿಸಿದರು
ಇಡೀ ನನ್ನ ಬಡ ಬದುಕನು

3 1 ಪಿಎಂ 22.12.2016

ಗುಟ್ಟೇನು
*******

ಕೋಟಿಗಳ ಲೂಟಿ ಹೊಡೆದು
ಮಹಾನುಗಳ ಮೇಲ್ಮಹಲುಗಳ
ಕಟ್ಟಿಕೊಂಡವರನ್ನು ಹಾಗೆ ಬಿಟ್ಟು
ಅಸಹಾಯಕ ಅಮಾಯಕರ
ಒಕ್ಕಲಿಬ್ಬಿಸುವ ಗುಟ್ಟೆನು?

ಪ್ರಕೃತಿಯ ಮೇಲೆ ಅತ್ಯಾಚಾರ ಗೈಯುವವರ
ರಕ್ಷಣೆಗೆ ಮಣೆ ಹಾಕಿ
ಪ್ರಕೃತಿಯೊಂದಿಗೆ ಬದುಕುವವರ
ಬಂಧ ಕಡಿದುದರ ಹಿಂದೆ
ನಡೆದಿರುವ ಲಾಬಿಯಾದರೂ ಏನು?

ಕಾನನದಿ ಪ್ರಾಣಿಗೂ ಕೀಳಾಗಿ
ಬದುಕುವ ನಿರ್ಗತಿಕರ ಬದುಕನು
ಬರ್ಬರವಾಗಿ ಹತ್ಯೆಗೆಯುವ
ಅಧಿಕಾರ ಶಾಹಿಯ ಆದ್ಯತೆ
ಕಾನೂನೋ ಇಲ್ಲ ಮಾನವೀಯತೆಯೋ?

ಆಳುಗರ ಅಟ್ಟಹಾಸದ ಮುಂದೆ
ಚಟ್ಟವೇರುತಿದೆ ಇವರ ಪುಟ್ಟ ಬದುಕು
ಸ್ವಾತಂತ್ರ್ಯದ ಸವಿಯುಂಡವರಿಗೇಕೋ
ಕಾಣದು ಇವರ ಅತಂತ್ರದ ಬದುಕು
ಏನಿದು ಈ ಕಾನೂನಿನ ತೊಡಕು?

ಸರ್ಕಾರಗಳ ಈ ಧೋರಣೆ
ಮುಗಿಲು ಮುಟ್ಟಿದೆ ಶೋಷಣೆ
ಅಂತ್ಯವಿಲ್ಲವೇ ಬಡವರ ಕಷ್ಟಕೆ
ಮನುಷ್ಯತ್ವ ಮರೆತ ದಬ್ಬಾಳಿಕೆಗೆ

೩25 ಎಎಂ 22 12 2016


ಸತತ ಸೋಲುಗಳು
""""""""""""""""""""

ಸತತ ಸೋಲುಗಳು
ನನ್ನ ಕಂಗಡಿಸಿವೆ
ಕದಡಿದವು ಎದೆಯ
ಮುದ್ದು ಭಾವಗಳ
ನಿದ್ರೆ ಕೆಡಿಸಿದವು
ಆಳಕ್ಕೆ ಬೀಳುವ ಭಯದಿಂದ 
ಸೋತಮೇಲು ಹಾದಿ ತಪ್ಪದೇ
ಅನುಭವವಾಗಿಸಿಕೊಂಡೆ
ಆಕ್ರಂದನದೊಳಗೂ
ಆನಂದ ಕಾಣಲು ಹೊರಟೆ
ಸೋತ ಸಾವಿರ ಮುಖ ದರ್ಶನದಿ
ನನ್ನ ಸೋಲನ್ನೆಲ್ಲ ಮರೆತೆ ಬಿಟ್ಟೆ
ಹೋರಾಟದ ಈ ಬದುಕಿನಲ್ಲಿ
ಅಲೆದಾಟದ ಅಲೆಮಾರಿ ನಾನಿಲ್ಲಿ
ಕಾಲವನು ಕೊಲ್ಲದೆ ಗೆಲ್ಲುವ
ಹಠಕ್ಕೆ ನಾ ಬಿದ್ದೆ
ಎದ್ದು ಬರುವೆನೆಂಬ ವಿಶ್ವಾಸದಿಂದ
ಸೋಲುಗಳೇ ಸವಾಲಾಗಿ
ನಂಬಿಕೆಗಳೇ ಕಾವಲಾಗಿ
ಮುದುಡಿದ ಮನೆಕೆ ಬೆಂಬಲವಾಗಿ
ಬದುಕಿದೆ ಸೋಲಿಗೊಂದು ಪಾಠವಾಗಿ

236 ಎಎಂ 22 12 2016

ಬೆಳವ ಮುನ್ನವೇ
*************

ನೀ ನೆಟ್ಟ ಪ್ರೀತಿ ಸಸಿ
ಮರವಾಗಿ ಬೆಳೆಯುವ ಮುನ್ನವೇ
ಬರವಾಗಿ ಎರೆಗಿತ್ತು
ನೀ ತಂದ ವಿರಹ

ಜಾತಿ ಗೋಡೆಯ ಕೆಡವಿ
ಪ್ರೀತಿ ಸುತ್ತಾ ವ್ಯಾಪಿಸುವ
ಮೊದಲೇ ಬೇಲಿ ಬಿತ್ತು
ಕಿತ್ತೊಗೆಯುವ ಆ ತಾಕತ್ತು
ನೀನಿಲ್ಲದೆ ನನಗೆ ಎಲ್ಲಿದೆ

ಕಂಬನಿಯ ಕೋಡಿ ಹರಿದು
ವೇದನೆಯ ಸಾಗರ ಸೇರಿ
ಆ ನೆನಪು ಮತ್ತೆ ಮತ್ತೆ
ಅಲೆಯಾಗಿ ತೀರ ಸವರಿತ್ತು
ಎದೆಯ ಭಾವದ ಬಿಸಿಗೆ
ಒಲವ ತೇವ ಆರಿತ್ತು

ಕಣ್ಣ ಕೊಳದಲ್ಲೀಗ ಹಂಸೆಯಾಡದೆ
ಮರೆವಿರದ ಹಿಂಸೆ ಕಾಡಿತ್ತು
ಮುರಿದ ರೆಕ್ಕೆಯ ನಂಬಿ
ಹಾರಿದೆ ನಾ ಬಾಳನಭಕೆ
ಉರಿವ ಝಳಕೆ ಕಣ್ಣು
ಮಂಜಾಗಿ ನಂಜೇರಿತು ಜೀವಕೆ
ಪ್ರೀತಿ ಇರದ ಬದುಕೇಕೆ
ನೋವು ಸಹಿಸುವ ಮನಕೆ 
ಬದುಕು ಶೂನ್ಯ ಸಾವು ಮಾನ್ಯ
ಅಂತ್ಯ ಹಾಡಿದ ಕವಿತೆಗೆ

533 ಪಿಎಂ 22.12.2016

ಬೆಳಗಾಯಿತು
**********

ಕವನ

ನನ್ನೆದೆಯ ಗಡಿ ದಾಟಿ
ನನ್ನೊಲವ ಅಪಹರಿಸಿ
ಭವಿಷ್ಯವ ಕತ್ತಲಾಗಿಸಿದ
ಉಗ್ರವಾದಿಯೋ ನೀನು

ಮರಳು ಮಾತಲ್ಲಿ ನಂದಿಸಿ
ಮನವ ನಿನ್ನೆಡೆ ತಿರುಗಿಸಿ
ಈ ಬದುಕನೇ ನನ್ನಿಂದಲೇ ಆಸ್ಪೋಟಿಸಿದ
ಭಯೋತ್ಪಾದಕನೇನೋ ನೀನು

ಆಸರೆಗೆ ಕೈಯ ಹಿಡಿದು
ಅನುಬಂಧವ ನನ್ನಲ್ಲಿ ಬೆಸೆದು
ವಶವಾದ ನನ್ನ ಬದುಕಿನಿಂದ
ಹತ್ಯಗೈದ ಹಿಂಸಾಚಾರಿಯೋ ನೀನು

ಕೈಹಿಡಿದೆನೆಂದು ಕನಿಕರಿಸದೆ
ಬಳಸಿಕೊಂಡೆ ನಿನ್ನ ಲಾಭಕ್ಕೆ
ಭಾವಗಳ ಸೀಮಿತ ದಾಳಿಗೆ
ನನ್ನ ದೂಡಿದ ಆತಂಕವಾದಿಯೋ ನೀನು

ಆಸೆಯನ್ನು ತೋರಿಸಿ
ಅವಿತ ಕಾಮನೆಗಳ ಪ್ರಚೋದಿಸಿ
ಆತ್ಮಾಹುತಿಗೈದು ನನ್ನಿಡಿ ಬಾಳ
ನಾಶ ಮಾಡಿದ ಹತಾಶವಾದಿಯೋ ನೀನು

ನಿನಗೊಲಿದ ನನ್ನ ತಪ್ಪಿಗೆ
ಬಲಿಯಾದೆ ನಾ ನೀ ಪಾಪ ಕೃತ್ಯಕ್ಕೆ
ಪ್ರೀತಿಯ ಈ ಹೋರಾಟದಿ
ಸಾವಿನ ಕುಣಿಕೆಗೆ ನೀ ತಳ್ಳಿದೆ

೦೭೦೯ಎಎಂ೦೧೧೨೨೦೧೫
ಅಮುಭಾವಜೀವಿ ಮುಸ್ಟೂರು


ಎಲ್ಲಾ ಖಾಲಿ
***********

ಎದೆಯ ಭಾವವೆಲ್ಲಾ
ಹರಡಿವೆ ಚುಕ್ಕಿಯಾಗಿ
ಒಂದು ಬೆಳಗಲಿಲ್ಲ
ಬೆಳದಿಂಗಳ ಚಂದಿರನಾಗಿ

ಬಂದ ಭಾವಗಳೆಲ್ಲ
ಹರಿದು ಹೋದವು ವ್ಯರ್ಥವಾಗಿ
ಒಂದು ನಿಂತು ಮನದಿ
ಇಂಗಲಿಲ್ಲ ಸಮರ್ಥವಾಗಿ

ಎಲ್ಲಾ ಖಾಲಿ ಈಗೀಗ
ಬರದ ಛಾಯೆಯಂತೆ
ಒಂದೊಮ್ಮೆ ಕಂಡಿದ್ದವು
ನನ್ನೊಳಗೆ ಮರೀಚಿಕೆಯಂತೆ

ಅರಳಿದ ಸುಮಗಳೆಲ್ಲ
ಪೂಜೆಗರ್ಪಿತವಾಗುವುದಿಲ್ಲ
ಯಾವೊಂದು ಭಾವವು
ನನ್ನಲ್ಲಿ ಸಮರ್ಪಿತಗೊಳ್ಳಲಿಲ್ಲ

ಹುಟ್ಟಿದ ಒಂದೊಂದು ಭಾವಕ್ಕೂ
ಕವಿತೆ ಕಟ್ಟಿ ನಾ ಬರೆದಿಟ್ಟಿ
ನನ್ನೊಳಗೆ ಉಳಿದು ಬೆಳೆದ
ಅವುಗಳನ್ನೆಲ್ಲ ತೆರೆದಿಟ್ಟೆ

ಓದಿದ ಮನಗಳೆಲ್ಲ
ಮುದಗೊಂಡವು
ನನ್ನ ಬೆನ್ತಟ್ಟಿದ ರೀತಿಗೆ ಮತ್ತೆ
ಸಾವಿರ ಭಾವ ಹೊಮ್ಮಿದವು

೦೫೨೧ಎಎಂ೦೨೦೧೨೦೧೫

ಬೆಳಗಿನ ಸ್ವಾಗತ
**********""

ಮಲಗಿದ್ದ ಮುಗ್ಧ ಜಗವ
ಹಕ್ಕಿ ಕೂಗಿನ ಕರೆಗಂಟೆ
ಇಂಪಾಗಿ ಮಾರ್ದನಿಸಿ
ಬೆಳಗಾಯ್ತೇಳೆಂದುಲಿಯಿತು 

ತನ್ನ ಮೈ ಮೆತ್ತಿದ ಇಬ್ಬನಿಯ
ಮೆಲ್ಲ ಮೆಲ್ಲನೆ ಒರೆಸಿಕೊಳ್ಳುತ
ಮೈ ಮುರಿದು ಎಲೆ ತೆರೆದು
ಪ್ರಕೃತಿಯು ಬೆಳಕ ಸ್ವಾಗತಿಸಿತು


ಸವಿಗನಸು ಕಾಣುವ ಮಗು
ಮೌನದಲ್ಲೇ ಪಕಳೆಗಳ ಬಿಚ್ಚಿ
ನಗುದ ತನ್ನ ಚೆಲುವ ವೈಯಾರವ
ಬಾನ ಅತಿಥಿಗೆ ಮುದದಿ ಅರ್ಪಿಸಿತು

ಹರಿವ ನೀರಿನ ನಾದ
ಗುಡಿಯ ಗಂಟೆಯ ಶಬ್ದ
ಪ್ರಶಾಂತ ಮುಂಜಾವಲಿ
ಸುತ್ತೆಲ್ಲ ಪ್ರತಿದ್ವನಿಸುತ್ತಿತ್ತು
.
ಇರುಳ ಬೆರಳನ್ನು ಹಿಡಿದು
ಉಷೆಯ ಹಸೆಯೇನೇರಿ
ಹೊಸ ಹುರುಪಿನ ಹರೆಯಕೆ
ಅಣಿಯಾಗಿ ಬಂದ ಬಾಲ ನೇಸರ

ಜಗವೆಲ್ಲ ಝಗಮಗಿಸಿ
ಈ ಬೆಳಗ ಸಂಭ್ರಮಿಸಿ ಹೊಸ
ಲವಲವಿಕೆಯಿಂದಲಿ ಓಡುತಲಿತ್ತು
ಕಾಯಕವನಾಧರಿಸಿ ಕಾಲದ ಬೆನ್ನೇರಿ

೦೬೧೪ಎಎಂ೦೨೧೨೨೦೧೬


ಹೆಸರಲ್ಲಿ ಏನಿದೆ
*************

ಹೆಸರಲ್ಲಿ ಏನಿದೆ ಬರಿ ಕೆಸರು
ನಿತ್ಯ ಹೊರಳಾಡಬೇಕಿಲ್ಲಿ
ಉಳಿಸಲು ಅದರ ಹೆಸರು
ಹೆಜ್ಜೆಹೆಜ್ಜೆಗೂ ಸವಾಲಾಗಿ
ಸಜ್ಜನಿಕೆಯ ಕುರುಹಾಗಿ
ಉಳಿಸಬೇಕು ಹೆಸರು
ಕೂಗಿ ಕರೆಯಲೊಂದು
ಕರೆದು ಗುರುತಿಸಲೆಂದು
ಗುರುತಿಸಿ  ಗೌರವಿಸಲೆಂದು
ಹೆಸರಿರಬೇಕು ಮನುಜಗೆ

ಹೂವು ಹೆಸರ ಬಯಸದು
ಹಸಿರ ಉಸಿರೇ ಆಗಿಹುದು
ದುಂಬಿ ಬಿನ್ನವೆಣಸದು
ಜೇನ ಸವಿಯ ಜಗಕೆಲ್ಲ ಹಂಚುವುದು
ಬಣ್ಣಗಳ ಭಿನ್ನವತ್ತಳೆಯಲ್ಲೆಲ್ಲ ಹೇಳುವುದು
ಹೆಸರಿನ ಗುಂಗು ಅದಕ್ಕಿರದು
ಮನುಜನಷ್ಟೇ ಹೆಸರಿಗೆ ಹಂಬಲಿಸುವುದು

ಹರಿವ ನೀರಿಗಿಲ್ಲ ಹೆಸರ ಹಂಗು
ಎಲ್ಲ ಶೋಕಿ ಪಾವನಗೈದು
ಜೀವಜಲದ ಒಲವೇಕೆ
ನಿಮ್ಮಗರಿ ವಾಗದು
ಮನುಜನಷ್ಟೇ ಹೆಸರ ಹಿಂದೆ ಓಡುವುದು

೦೬೪೫ಎಎಂ೦೨೧೨೨೦೧೬

ನಮನ
*****

ಮನಸು ಮೂಕವಾದ ಕ್ಷಣ
ಹೆಮ್ಮೆಗೂ ಹೆಮ್ಮೆ ಎನಿಸುವ ದಿನ
ಅದಕ್ಕೆ ಕಾರಣ ಈ ಸಮರ್ಪಣ
ಸಲ್ಲಿಸುವೆ ಅಭಿನಂದನ

ರಾಜ್ಯದ ಮೂಲೆ ಮೂಲೆಯಿಂದ
ಕವಿ ಗೋಷ್ಠಿಗೆಂದು ಬಂದ
ನಮ್ಮನೆಲ್ಲ ಆಧರಿಸಿ ಸ್ವಾಗತಿಸಿ
ಸನ್ಮಾನಿಸಿದ ಸಮರ್ಪಣ ಕೊಂದು ನಮನ

ಅಚ್ಚು ಕಟ್ಟು ಕಾರ್ಯಕ್ರಮ
ಅಚ್ಚುಮೆಚ್ಚಿನ ಸಮಾಗಮ
ನಾಡು ನುಡಿ ನೆಲ ಜಲಕ್ಕೆ ಮಿಡಿದ
ಕವಿ ಮನದ ಕವಿತೆಗಳಿಗೆ ವಂದನ

ಕಾರ್ಯಕರ್ತರ ಅಮಿತೋತ್ಸಾಹ
ಕವಿಗಳಿಗಿಂತ ಈ ಪ್ರೋತ್ಸಾಹ
ಮರೆಯದಂತಹ ಕ್ಷಣವಾಗುಳಿದ
ಸಮರ್ಪಣದ ಮೊದಲ ಪ್ರಯತ್ನ

ಹಿರಿಯರ ಮಾರ್ಗ ದರ್ಶನ
ಸ್ನೇಹ ಮನಗಳ ಆತ್ಮೀಯಾಲಿಂಗನ
ಹಿತಮಿತ ರುಚಿ ಬೆರೆತ ಭೋಜನ
ಮಾರುಹೋದೆ ಆ ಪ್ರೀತಿಗೆ ನಾ

ಮೈಸೂರಿನ ಈ ಸಂಪ್ರದಾಯಕ್ಕೆ
ನಾ ಶರಣು ಶರಣು
ಅವಕಾಶದ ಕದ ತೆರೆದವರ
ನೆನೆದು ಆನಂದ ಭಾಷ್ಪ ತಂತು ಕಣ್ಣು

ಸಾರ್ಥಕ ಭಾವ ಮೂಡಿತು
ಜವಾಬ್ದಾರಿಯ ಹೊಣೆ ಹೆಚ್ಚಿತು
ಸಮರ್ಪಣಗೊಂದು ಸಮರ್ಪಣೆ
ನನ್ನ ಈ ಮೂಕ ಮನದ ಅಭಿನಂದನೆ

೧೦೩೫ಎಎಂ೦೫೧೨೨೦೧೬

ಸಾಧಕೀಯ ಸಾವು
*************

ಕಣ್ಣು ಹನಿಗರೆದಿದೆ
ಮನವು ಮರುಗಿದೆ
ಸಾಧಕಿ ಒಬ್ಬಳ ಸಾವು
ನೋವು ತಂದಿದೆ

ತಾನು ನಡೆದ ಹಾದಿಯಲ್ಲಿ 
ತನ್ನ ಸಾಧನೆಯ ಹೆಜ್ಜೆಯೊತ್ತಿ
ನಾಡಿಗೆ ಹೆಮ್ಮೆ ಎನಿಸಿದ
ಅಮ್ಮ ಪದದ ಅನ್ವರ್ಥವಾಗಿ

ಬಡವರ ಪಾಲಿನ ಮಹಾತಾಯಿ
ರೈತರ ಪಾಲಿನ ಕರುಣಾಮಯಿ
ನಿಲ್ಲುವ ನೆಲೆಗೊಳಿಸುವ ಗಟ್ಟಿಗಿತ್ತಿ
ಸ್ತ್ರೀ ಕುಲದ ಹೆಮ್ಮೆ ಈ ನಾರಿ

ಕಲೆಯಲ್ಲಿ ನಾಯಕಿಯಾಗಿ ಮೆರೆದು
ರಾಜಕೀಯದಲ್ಲಿ ಮುಖ್ಯಮಂತ್ರಿ ಯಾಗಿ
ನಂಬಿದವರ ನಂಬಿಕೆಗರ್ಹವಾಗಿ
ಬದುಕಿದ ಛಲಗಾತಿ

ವಿವಾದಗಳೇನಿರಲಿ
ಈಗೆಲ್ಲವೂ ಗೌಣ
ಆ ಸಾಧಕೀಯ ಸಾಧನೆಗೆ
ಕಂಪನಿ ಕರೆದಿದೆ ಮನ

೧೧೪೮ಎಎಂ೦೬೧೩೨೦೧೬


ಬೆನ್ತಟ್ಟಿದ ಕೈಗಳು
************

ತಿರಸ್ಕಾರದ ನೋವಲಿ ಬೆಂದು
ಪುರಸ್ಕಾರದ ನಲಿವ ಉಂಡು
ಸಾರ್ಥಕಯಹತೆಯ ಭಾಷ್ಪ ಸುರಿದು
ಕವಿ ಉಳಿದನಿಂದು ನೋಡು

ಬರೆದ ಭಾವ ಮೆರೆಯಲು
ಬೇಕು ಬೆನ್ತಟ್ಟುವ ಕೈಗಳು
ಕವಿಯ ಕಲ್ಪನೆ ವಾಸ್ತವವಾಗಲು
ಬೇಕು ಓದಿ ಓದಿಸುವ ಮನಗಳು

ಪ್ರಶಸ್ತಿಗಾಗಿಯೇ ಎಂದು
ಕವಿತೆ ಹುಟ್ಟುವುದಿಲ್ಲ
ಓದುಗನ ಮನ ತಣಿಯೇ
ಅದಕ್ಕಿಂತ ಪುರಸ್ಕಾರ ಬೇಕಿಲ್ಲ

ಬರೆಯಲೆಂದೇ ಕೂರಲು
ಹುಟ್ಟದು ಕವಿತೆ
ತಾನಾಗಿಯೇ ಹುಟ್ಟಿ ಬರಲು
ಇರುಳಲು ಬೆಳಗುವ ಹಣತೆ

ಬೆಳೆಯಬೇಕು ಕಾವ್ಯ
ಬೆಳಗಬೇಕು ಕವಿ ಭವಿಷ್ಯ
ಕವಿ ಅಳಿದರು ಕವಿತೆ ಉಳಿದು
ಉಲಿಯಬೇಕದು ನಿತ್ಯ

೦೭೧೨ಪಿಎಂ೦೬೧೨೨೦೧೬

ಓ ಪ್ರೇಮಿ
*****₹**

ಓ ಪ್ರೇಮಿ ಓ ಪ್ರೇಮಿ
ನೀ ಮೌನಿಯಾದೆ ಅದೇಕೆ
ಓ ಧ್ಯಾನಿ ಓ ಧ್ಯಾನಿ
ಪ್ರೀತಿಯ ಮೇಲಿಡು ನೀ ನಂಬಿಕೆ
ಒಲವೊಂದು ತಪವು ನೀ ಕೇಳು
ಒಲವನ್ನು ನಂಬಿ ನೀ ಬಾಳು

ಪ್ರೀತಿಯಲ್ಲಿ ಎಂದೆಂದೂ ಮಾಮೂಲು
ಈ ವಿರಹ ಎಂಬ ಅಮಲು
ಪ್ರೇಮಿಗಳು ಒಂದು ಕ್ಷಣ ಸೇರಲು
ಈ ಸನಿಹ ತೆರವಂತೆ ಸ್ವರ್ಗದ ಬಾಗಿಲು
ಯುವ ಆ ನೋವೆಲ್ಲ ಮಾಯ
ಯುಗ ಒಂದು ಕ್ಷಣ ವಾಗ ಸಮಯ

ಪ್ರೀತಿಯ ಗೆಲುವಿಗಾಗಿ
ಇಲ್ಲಿ ನಿತ್ಯ ನೂರು ಹೋರಾಟ
ನರಳಿ ಅರಳಿ ಬಾಳುವುದರಲ್ಲಿ
ಯಾರಿಗೂ ಕಾಣದು ಆ ಸಂಕಟ
ಮೌನವೇ ಪ್ರೇಮಿಯ ಉತ್ತರ
ತ್ಯಾಗವೇ ಪ್ರೇಮವು ನೀಡಿದ ಸಂಸ್ಕಾರ

೦೩೦೯ಪಿಎಂ೦೭೧೨೨೦೧೬

ಹುಟ್ಟಬೇಕಿದೆ ಕವಿತೆ
####೨#######

ಹುಟ್ಟಬೇಕಿದೆ ಕವಿತೆ
ಅಂಧಕಾರದೊಳಿರುವ
ಮೂಢ ಜನರ ನಂಬಿಕೆಯ
ಕಳೆವ ಬೆಳಕಾಗಿ ಬೆಳಗಲು

ಹುಟ್ಟಬೇಕಿದೆ ಕವಿತೆ
ನೊಂದವರ ನೋವ ಮರೆಸಿ
ಎದೆಯಲ್ಲಿ ಒಲವೇ ಮೂಡಿಸಿ
ಮತ್ತೆ ಹೋರಾಟದ ಹುರುಪು ತುಂಬಲು

ಹುಟ್ಟಬೇಕಿದೆ ಕವಿತೆ
ದೌರ್ಜನ್ಯ ದಬ್ಬಾಲಿಕೆಯ ಮೆಟ್ಟಿ
ನಿರಾಶ್ರಿತರಿಗೆ ಆಶ್ರಯವಿತ್ತು
ಬದುಕಲಿ ನೆಲೆಗೊಳಿಸಲು

ಹುಟ್ಟಬೇಕಿದೆ ಕವಿತೆ
ದೌರ್ಭಾಗ್ಯರ ಸೌಭಾಗ್ಯವಾಗಿ
ದೌರ್ಬಲ್ಯವ ಕಿತ್ತು ಪ್ರಾಬಲ್ಯರಾಗಿಸಿ
ದಾರಿದ್ರ್ಯವನು ಹೊಡೆದೋಡಿಸಲು

ಹುಟ್ಟಬೇಕಿದೆ ಕವಿತೆ
ಪೊಳ್ಳು ಭರವಸೆಯ ನೀಡುವವರ
ಕಳ್ಳ ಬುದ್ದಿಯನ್ನು ಕೊಳ್ಳೆ ಹೊಡೆದು
ಸ್ವಚ್ಛಗೈವ ಕಸಪೊರಿಕೆಯಾಗಲು

ಹುಟ್ಟಬೇಕಿದೆ ಕವಿತೆ
ನಾಡು ಕಟ್ಟಿದವರ ನೆನೆದು
ನಾಡಿಗಾಗಿ ಮಡಿದವರತ್ತ ನಡೆದು
ವೀರ ಚರಿತ್ರೆಯ ಸಾರಲು

ಹುಟ್ಟಬೇಕಿದೆ ಕವಿತೆ
ನನ್ನದೆಂಬುದನ್ನೆಲ್ಲ ಅಳಿಸಿ
ದೈವತ್ವದ ಎದುರಲ್ಲಿ ಸಮರ್ಪಿಸಿ
ಅಹಮಿನ ಧೂಪವಾಗಲು

ಹುಟ್ಟಬೇಕಿದೆ ಕವಿತೆ
ಅವಮಾನಗಳ ಸಹಿಸಿ
ಅಭಿಮಾನವ ಸಂಪಾದಿಸುವ
ಸ್ವಾಭಿಮಾನವಾಗಿ ಹೊಮ್ಮಲು

ಹುಟ್ಟಬೇಕಿದೆ ಕವಿತೆ
ಅಕ್ಷರದ ಸತ್ವ ಮಹತ್ವ ಸಾರಿ
ಅನಕ್ಷರತೆಯ ಬುಡ ಸಮೇತ ಕಿತ್ತು
ಸಾಕ್ಷರತೆಯ ಪಟವ ಹಾರಿಸಲು

ಹುಟ್ಟಬೇಕಿದೆ ಕವಿತೆ
ಹೆತ್ತವರ ಬೀದಿಗೆ ತಳ್ಳಿ
ಉದ್ದುದ್ದ ವೇದಾಂತ ನುಡಿಯುವವರ
ನಡೆ ಬದಲಾಸಲು

ಹುಟ್ಟಬೇಕಿದೆ ಕವಿತೆ
ಅಬಲೆಯರ ಮೇಲ್ನಡೆಯುವ
ಅತ್ಯಾಚಾರವ ಹಿಮ್ಮೆಟ್ಟಿ
ಸಬಲ ಸಾಮ್ರಾಜ್ಯ ಕಟ್ಟಲು

ಹುಟ್ಟಬೇಕಿದೆ ಕವಿತೆ
ವರದಕ್ಷಿಣೆಯ ಭೂತ ಬಿಡಿಸಿ
ನಮ್ಮ ಬಾಳು ಸಮಪಾಲು ಮಂತ್ರಪಟಿಸಿ
ಸಮಾನತೆಯ ಸವಿ ಉಣಿಸಲು

ಹುಟ್ಟಬೇಕಿದೆ ಕವಿತೆ.
ಕಲೆ ಸಾಹಿತ್ಯ ಸಂಸ್ಕೃತಿಗಳ
ಮರೆತ ಈ ಜನಗಳ
ಮನದೊಳಗೆ ಮತ್ತೆ ಮೇಲೆಸಲು

ಹುಟ್ಟಬೇಕಿದೆ ಕವಿತೆ
ನಮ್ಮವರ ಬದುಕಿನ ರೀತಿ ನೀತಿಯ
ಮುಂದಿನವರಿಗೆ ತಲುಪಿಸುವ
ಪ್ರಭಾವ ವಾಹಕವಾಗಲು

೦೬೦೦ಎಎಂ೦೭೧೨೨೦೧೬

ಸೂರು ಕಟ್ಟಬೇಕಿದೆ
**************

ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

ನೊಂದ ಜೀವಗಳ
ನೆಮ್ಮದಿಯ ನೆರಳ
ಬೆರಳ ಹಿಡಿದು ಕರೆದು
ಮರೆಸುವ ಸಾಂತ್ವಾನದ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

ಅಸಹಾಯಕ ಬದುಕಿಗೆ
ಆಸರೆಯ ಕೈಚಾಚಿ
ಅನುಬಂಧ ಬೆಸೆಯುವ
ಅನುಕಂಪದ ಅಪ್ಯಾಯತೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

ಅಬಲರ ಬೆಂಬಲವಾಗಿ
ಬದುಕುವ ಹಂಬಲ ತುಂಬಿ
ಕನಸುಗಳ ಬಿತ್ತುತ
ಭರವಸೆಯ ಹೊಸ ನಿರೀಕ್ಷೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

ಪ್ರೀತಿಗಾಗಿ ಹಲುಬುವ
ಅಸಂಖ್ಯಾತ ಜೀವಸಂಕುಲವ
ಅಪ್ಪುಗೆಯ ಆಶಯ ನೀಡಿ
ಪೊರೆವ ಪರಂಪರೆಯ
ಸೂರೊಂದನು ಕಟ್ಟಬೇಕಿದೆ
ಕವಿತೆಯೊಳಗೆ ಮುಟ್ಟಬೇಕಿದೆ

೧೧೩೩ಎಎಂ೦೮೧೨೨೦೧೬

ಅರ್ಥಹೀನ ಬದುಕು
""""""""""""""""""''

ನಾನು ನೀನು ಬೆಸೆದರು
ಮನಸು ಮತೆಲ್ಲೋ ಹರಿದು
ದೇಹ ಸೇರುವುದಾದರೂ
ಭಾವವಿರದ ಬದುಕು ಅರ್ಥಹೀನ

ಮಾತನಾಡಬೇಕಾದ ಹೊತ್ತು
ಮೌನವನ್ನೆಲ್ಲ ನುಂಗಿತ್ತು
ಒಂದು ಸಾಧನದೊಂದಿಗೆ
ಕಳೆದೆ ಹೋದೆ ಮಾತನಾಡದೆ ನನ್ನೊಂದಿಗೆ

ಆಡುವ ಮಾತು ನೂರಿದ್ದರು
ಆಡುವ ತುಟಿಗಳು ಬಿಗಿದಿವೆ ಈಗ
ಕಣ್ಣು ಕಣ್ಣು ಸೇರುವ ಬದಲು
ಏನೇನೋ ನೋಡಿ ದಣಿಯುತ್ತಿವೆ

ಹೃದಯದ ಭಾವ ಬೆರಳ
ತುದಿಯೊಳು ಆಡಿ ಮೂಡಿವೆ
ಮತ್ತೊಂದರಲ್ಲಿ ಸಂದೇಶವಾಗಿ
ಬಿಸಿಯಪ್ಪಿಗೆ ಹಿತ ನೀಡದೆ
ತಾವು ಹಾರಿದೆ ಸೂಕಿಸದೆ

೦೯೪೫ಪಿಎಂ೦೮೧೨೨೦೧೬

ನೀನಿರದ ಬೇಸರ
************

ನಡೆಯಲಾರೆ ದೂರ
ನೀನಿರದ ಬೇಸರ
ಚೇತನವನೇ ಕಸಿದಿದೆ
ಶಾಂತಿಯನ್ನು ಕದಡಿದೆ

ತಂಗಾಳಿಯು ಕೂಡ ನನಗೀಗ
ಕಿರಿಕಿರಿಯ ಮಾಡುತ್ತಿದೆ
ಮಧುರ ನಾದವು ಕೂಡ
ಕರ್ಕಶವಾಗಿದೆ ನೀನಿಲ್ಲದೆ

ಒಣಹುಲ್ಲಲು ಹಸಿರ ಕಾಣುವಾಸೆ
ನೀನಿರದ ಕಿಡಿಸೋಕೆ ತಂತು ಈ ಹತಾಶೆ
ಬರದ ಗರ ಬಡಿದಿದೆ ಈಗ
ನಿನ್ನೊಲವ ಸೋನೆ ಸುರಿಯದೆ

ಭಾವಗಳ ಅಂತರ್ಜಲ ಬತ್ತಿ
ನಿರ್ಜೀವವಾಗಿದ ಬದುಕು
ವಿರಹದ ಬೇ(ಸಿ)ಗೆಯಲ್ಲಿ ಬೆಂದು
ಬಸವಳಿದಿದೆ ಚಂದ ಬದುಕು

ಮನದಾಗಸವು ಬಿಕ್ಕುತಿದೆ
ನಿನ್ನ ನಗು ಮೇಘ ಸಂದೇಶವಿರದೆ
ಜೀವನವೇ ನರಳುತಿದೆ
ನಿನ್ನ ಉಪಸ್ಥಿತಿ ಇರದೆ

ಬಂದು ಬಿಡು ನಲ್ಲ
ಇನ್ನು ಕಾಯಿಸುವುದು ತರವಲ್ಲ
ಇರುವ ಸುಖವನ್ನೇ ಹಂಚಿ ತಿಂದು
ಮೆರೆಯೋಣ ಹೊಸ ಜೀವನದಿ

8:38 ಎಎಂ 9.12.2016

ಬಾನತಿಥಿಯ ಸ್ವಾಗತ
***************

ಮಬ್ಬು ಕರಗುತ್ತಿದೆ
ಜಗವೆದ್ದು ಕೂರುತಿದೆ
ಮೂಡಣದ ಬಾನತಿಥಿಯ
ಸ್ವಾಗತಿಸುತಿದೆ

ಇಬ್ಬನಿ ಮೆತ್ತಿದ ಪ್ರಕೃತಿಯು
ಮೋರೆಯನೊರೆಸಿಕೊಳ್ಳುತಲಿ
ಹಕ್ಕಿ ಗಾನಕ್ಕೆ ಕೊಳಕಿತಗೊಂಡು
ಲವಲವಿಕೆಯ ಹೂ ಅರಳಿಸಿದೆ

ಮುಚ್ಚಿದ ಕಣ್ಣ ತೆರೆದ
ಎಲೆಗಳ ಹಸಿರು ವರ್ಣ
ಭಾಸ್ಕರನ ಆಗಮನವ ಸಾರಿ
ಸ್ವರ್ಗವನ್ನೇ ಧರೆಗಿಳಿಸಿದೆ

ಹರಿವ ನೀರ ಸುನಾದ
ಉಕ್ಕುವ ಅಲೆಗಳ ಆನಂದ
ಬೆಳಕಿನ ಈ ಸೆಳೆತಕ್ಕೆ ಸಿಕ್ಕು
ತೋರಿದ ಕ್ರಿಯಾಶೀಲ ದಿಕ್ಕು

ತಂಪಿನ ಇಂಪಿನ ಮುಂಜಾನೆ
ತೆರೆಯಿತು ಹೊಸ ಭಾವದ ಖಜನೆ
ಏಳಿರಿಯೆಲ್ಲ ಕಾರ್ಯೋನ್ಮುಖರಾಗಿ
ದುಡಿಯುತ ಕಾಲನೊಂದಿಗೆ ಜೊತೆಯಾಗಿ

0618 ಎಎಂ 10.12.2016

ಹೊಸ ಕನಸ ಹೊತ್ತು
*******-*******

ಹೊಸ ಕನಸುಗಳ ಹೊತ್ತು
ಹೊಸ ಜೀವನಕ್ಕೆ ಅಡಿಯಿತ್ತು
ಹೊಸತನದ ತುಡಿತ ಮಿಡಿತಗಳ
ಹೊಸ ಜೋಡಿಗೆ ಶುಭಾಶಯ

ಬಾಳ ಹಾದಿಯ ತುಂಬಾ ನಗುವಿರಲಿ
ಬದುಕಿನ ಅಂತ್ಯದವರೆಗೂ ಒಲವಿರಲಿ
ಏಳು ಬೀಳು ಸಹಜ ಬಾಳಿನಲ್ಲಿ
ಏರು ಗತಿಯು ನಿಮ್ಮದಾಗಿರಲಿ

ಪ್ರೀತಿಸುವ ಜೀವಗಳು ನೀವು
ಸಿಹಿಯೊಂದಿರಲಿ ಬೇಡ ಬೇವು
ಸರಿ ಮಾತು ಸಾವಿರಾಗಲಿ
ಒಮ್ಮತದ ನಿಲುವು ನಿಮ್ಮಿಬ್ಬರದಾಗಲಿ

ಹಿರಿಯರ ಹರಕೆ ನಿಮಗಿದೆ
ಕಿರಿಯರಿಗೆ ಆದರ್ಶ ನೀವಾಗಿರಿ
ಸಂಸಾರದ ಈ ಬಂಧನ
ಆಗಲಿ ಮನಗಳ ಮಧುರ ಮಿಲನ

ಸುಖದ ನೆರಳು ಸದಾ
ನಿಮ್ಮ ಬೆರಳ ಹಿಡಿದು ನಡೆಸಲಿ
ನೂರು ಕಾಲ ಬಾಳಿರೆಂದು
ನಾನು ಈ ಕವಿತೆಯಿಂದ ಹರಸುವೆ

12 12 ಪಿಎಂ 11 12 2018

ಬಾಳ ಹೆಗ್ಗುರುತು.
************

ಬೇಕಿಲ್ಲ ನನಗೇನು ನಿನ್ನ ಹೊರತು
ನೀನೆ ನನ್ನ ಬಾಳ ಹೆಗ್ಗುರುತು

ಒಲವಿಗಾಗಿ ಹಂಬಲಿಸುವ
ಜೀವಕ್ಕೆ ನೀ ತಾಯಾದೆ
ಚೆಲುವಿಗೆ ಮನವ ಬೆಂಬಲಿಸಿ
ನೋವಲ್ಲು ಔದಾರ್ಯ ಮೆರೆದೆ

ಹಸಿವು ಎನ್ನಲು ಕರೆದು
ನಿನ್ನ ಹಸಿವು ಲೆಕ್ಕಿಸದೆ ಕೈತುತ್ತನಿತ್ತೆ
ದಣಿದು ಬಂದಾಗ ನಿನ್ನ ಬಳಲಿಕೆಯನು
ತೋರ್ಪಡಿಸದೆ ಸಂತೈಸಿದೆ

ಅಮ್ಮ ಎಂಬೊಂದು ಕೂಗಿಗೆ
ನಿನ್ನ ಇಡೀ ಬದುಕನ್ನೇ ಮೀಸಲಿಟ್ಟೆ
ಯಾವ ಪ್ರತಿಫಲವ ಬೇಡದೆ
ನಿನ್ನೊಡಲಲ್ಲಿ ನನಗೆ ಜೀವವ ಕೊಟ್ಟೆ

ಸಾವಿನಾಚೆಗೂ ಉಳಿಯುವ ಬಂಧ ನಿನ್ನದು
ನೋವಿನಲ್ಲೂ ಮೊದಲು ಕರವ ಹೆಸರದು
ನನಗೆಲ್ಲ ಪುಕ್ಕಟೆ ಕೊಟ್ಟ ದೈವ ನೀನು
ನಿನ್ನನೇ ನಂಬಿದ ಅಪ್ಪಟ ಭಕ್ತ ನಾನು

6 21 ಎ ಎಂ 12 12 2016

ಎಲ್ಲ ಮುಗಿದಿರುವಾಗ
****************

ಎಲ್ಲ ಮುಗಿದಿರುವಾಗ 
ಈಗ ಬಂದರೇನು ಪ್ರಯೋಜನ
ಗರಬಡಿಸಿತು ಬರ ಬಂದು
ತತ್ತರಿಸಿದೆ ರೈತಾಪಿ ಜೀವನ

ಬತ್ತಿ ಹೋಗಿದೆ ಬಿತ್ತುವ ಕಾಲ
ಉಳಿದಿದೆ ಬರೀ ಬೇಸಿಗೆಕಾಲ
ಬಿರುಗಾಳಿಯಬ್ಬರದಿ ಬಂದರೆ
ಅಳಿದು ಉಳಿದ ಬದುಕಿಗೂ ತೊಂದರೆ

ಬರಿಗೈಲಿ ಕೂತು ಕರುಗುತಿಹ
ಬಡಪಾಯಿ ಈ ರೈತ
ಈಗ ಸುರಿಯುವ ಬದಲು ಮಳೆ
ಮುಂಗಾರಿಗೆ ಬರಬಾರದಿತ್ತಾ

ಒಣಗಿದ ಒಡಲನು
ತಣಿಸಲು ಬಂದಿಹುದು
ಸತ್ತ ಭರವಸೆಯ ಮತ್ತೆ
ಚಿಗುರಿಸಲು ಸೋತಿಹುದು

ಏನಾಯಿತು ಈ ಪ್ರಕೃತಿಗೆ
ದಿಕ್ಕೆಟ್ಟು ಓಡಿದೆ ಅದ್ಯಾವ ಕಡೆಗೆ
ಏರುಪೇರಿನ ಈ ಕಾಲಘಟ್ಟ
ಕಟ್ಟಿತು ರೈತ ಬದುಕಿಗೆ ಚಟ್ಟ

0452 ಪಿಎಂ 13 12 2016

ಧಗೆಯಾರಿದೆ ಜೀವ
**************

ನೋವಿನ ಆಕಂದನ
ಸೋಲಿನ ಆಕ್ರಮಣ
ಭಗ್ನಗೊಂಡ ಕನಸುಗಳ
ನೆನೆದು ರೋಧಿಸಿದೆ ಮನ

ಹೆಜ್ಜೆ ಹೆಜ್ಜೆಗೂ ಕಟ್ಟಿಹಾಕಿ
ಕಾಮ ಕೊಚ್ಚೆಯಲ್ಲಿ ನೂಕಿ
ಕರುಬುವ ನನ್ನ ಕಂಡು ನಗುವ
ಜನರೊಂದಿಗೆ ನಾ ಹೇಗೆ ಹೇಗಲಿ

ಕಟ್ಟಿದ ಗೆಜ್ಜೆ ಸವೆವಾ ಮುನ್ನವೇ
ಮುಟ್ಟಿದ ಕೈಗಳು ಮೈಲಿಗೆ ಮಾಡಿ
ಕತ್ತಲ ಜಗದೀ ಬೆತ್ತಲೆ ಬಿಸುಟಿ
ಹುಸಿನಗುತಿದೆ ಹಸಿ ಮೈಯನುಂಡು

ಯೌವ್ವನದ ಕನಸುಗಳ ಕೊಂದು
ಮೈಮನಗಳ ಘಾಸಿಗೊಳಿಸಿ.
ಆ ಗಾಯದ ಮೇಲೀಗ ನಿರ್ಲಕ್ಷದ
ಬರೆಯೆಳಿದು ಭೀಭತ್ಸ್ಯ ಮೆರೆದಿದೆ

ಭರವಸೆಗಳನೆಲ್ಲ ಅಳಿಸಿ
ಬದುಕನ್ನೇ ಸಾಯಿಸಿದರು
ಉಳಿದ ದೇಹವನ್ನುಂಡು
ಜಗದಿ ಗಣ್ಯತೆಯ ಮೆರೆದವರು

ಮೃಗಗಳಿಗೆ ಸುಖವ ನೀಡಿ
ಬಳಲಿ ಬಸವಳಿದಿರುವೆ
ಧಗೆಯಾರಿದ ಜೀವನವು
ಸಾಕಾಗಿ ಸತಾಯಿಸಿದೆ ಸಾವು

7 7 ಪಿಎಂ 11.12.2016

ಬಣಗುಡುವ ಒಡಲು
****************

ಬಣಗುಡುತಿದೆ ಒಡಲು
ಬುವಿಯಲ್ಲಿ ಬರ ಬಂದಿರಲು
ಹನಿ ನೀರಿಗೂ ಪರದಾಡುವ
ಹೈರಾಣ ಸ್ಥಿತಿ ಇದು

ಮಳೆಯಾಗದೆ ಕೆಂಡದ
ಉಂಡೆಯಾಗಿ ಬೆಂದಿದೆ
ಒಣಗಿದ ಬದುಕನ್ನು ಕಂಡು
ಈ ಪ್ರಕೃತಿ ಮರುಗದಾಗಿದೆ

ತುಂಬಿ ಹರಿಯುತ್ತಿದ್ದವು
ನದಿ ತೊರೆಗಳ ಆಗ ಮೈದುಂಬಿ
ಬರಿ ದಾಗಿ ಬಾಯ್ಬಿರುಕು ಬಿಟ್ಟಿದೆ
ಏಕೊದಗಿತೋ ಈ ದುರ್ಗತಿ

ಪರದಾಡುತ್ತಿವೆ ಖಗಮೃಗ
ಬಾಯಾರಿಕೆಗೆ ದಿಕ್ಕು ತಪ್ಪಿ
ಕೊಳೆಯದೆ ಹಾಗೆ ಒಣಗಿದೆ
ದೇಹ ಧಾರುಣ ಸಾವನಪ್ಪಿ

ಯುದ್ಧಕ್ಕೆ ಮುನ್ನುಡಿ ಬರೆದಿದೆ
ನೀರಿನ ಈ ದಾಹವೆಚ್ಚಿ
ಜೀವಜಲದ ಅಸ್ತಿತ್ವಕ್ಕಾಗಿ
ಜೀವ ಹೋಗುತ್ತಿದೆ ಈ ಬರದಿ

ಯಾವಾಗ ಬರುವುದು
ಆ ಭರವಸೆಯ ಮಳೆ
ಮತ್ತೆ ಹೇಗೆ ಮೈದುಂಬುವುದು
ಹಸಿರಿನ ಈ ಜೀವಕಳೆ

01 23 ಪಿಎಂ 10.12.2016

ನಮ್ಮಿಬ್ಬರ ನಡುವೆ
**************

ಇರಲಿ ಬಿಡು ನೀ ತೊರೆದು
ಹೋದಷ್ಟೇ ನೋವು
ಬಂದರೆ ಭಯವಿಲ್ಲ ನನ್ನ
ಹುಡುಕಿಕೊಂಡು ಆ ಸಾವು

ಆಗಸದ ರವಿ ಚಂದ್ರರಿಗೂ
ತಪ್ಪಿಲ್ಲ ಆ ಕಪ್ಪು ಗ್ರಹಣ
ನಮ್ಮಿಬ್ಬರ ನಡುವೆ ಬಂದ
ವಿರಸವೆ ಅದಕ್ಕೆ ಕಾರಣ

ನಮ್ಮೊಳಗಿನ ಹಮ್ಮಿಗಾಗಿ
ಬರವು ಎರಗಿದೆ ಬಾಳಿಗೆ
ಧರೆಯೊತ್ತಿ ಉರಿದಿರಲು
ನೆಮ್ಮದಿ ಇಲ್ಲವೋ ನಾಳೆಗೆ

ಕಾರ್ಮೋಡ ಕರಗಿ 
ಮಳೆಯು ಸುರಿದಂತೆ
ನಮ್ಮಿಬ್ಬರ ಮುನಿಸ ತೆರೆ
ತಾ ದೂರ ಸರಿದಂತೆ

ಬಾಳ ಬಂದಿಲ್ಲಿ ನಾವೇಕೆ
ಈ ಅಂತರವನ್ನು ತಂದುಕೊಂಡೆವು
ಬಿಸಿಲ ಬೇಗೆಗೆ ಮರೀಚಿಕೆಯೇ
ನೀರಿನ ಅಗರವೆಂದುಕೊಂಡೆವು

ಸಾಕಿನ್ನು ಈ ಬೇಸರ
ಬೆಳಗಲಿ ಒಲವನೇಸರ
ನಿನ್ನ ಈ ಅಂತರ
ತಂತು ತುದಿಕಾಲಲಿ ಸೇರುವ ಕಾತರ

350 ಪಿಎಂ 15.11.2016

ನನ್ನನು ಬಿಡಲಿಲ್ಲ
************

ಶ್ರದ್ಧಾಂಜಲಿಗೆ ಅರ್ಹನಾಗಿ
ತಿಲಾಂಜಲಿ ಇತ್ತೆ ಗರ್ವಕ್ಕೆ
ಜನನದಿಂದ ಬಂದ ನಾನೆಂಬ
ಅಹಂಗೆ ಸಾವಾಯ್ತು ಉತ್ತರ

ನನ್ನದೆಂದು ಎಲ್ಲದರಲ್ಲೂ
ಅಧಿಪತ್ಯದ ಮದವೇರಿ ನಡೆದೆ
ಬದುಕಿರುವವರೆಗೂ ನನಗಾಗಿಯೇ
ಎಲ್ಲರ ಬದುಕ ಸುಖ ಕಿತ್ತುಕೊಂಡೆ

ಪ್ರೀತಿಗಿಷ್ಟು ಜಾಗವೀಯದೆ
ಅಧಿಕಾರದ ದರ್ಪದಲ್ಲೇ ಮೆರೆದೆ
ಸೇವಕನ ಅಸಹಾಯಕತೆಯನ್ನೇ
ನನ್ನ ಬಲದ ಪ್ರಭಾವವೆಂದು ಬೀಗಿದೆ

ಹಣ ಅಂತಸ್ತುಗಳಿಂದ
ನನ್ನ ಗುಣವನ್ನು ಮಣ್ಣಾಗಿಸಿದೆ
ಇಲ್ಲದವರ ಹೆಣಗಳ ಮೇಲೆ
ಸಿರಿತನದ ದಬ್ಬಾಳಿಕೆ ನಡೆಸಿದೆ

ಸಾವಿರಂಬುದು ನನ್ನನ್ನು ಬಿಡಲಿಲ್ಲ
ಹೆಣವಾದ ಗಳಿಗೆ ಏನು ಜೊತೆ ಬರಲಿಲ್ಲ
ಮಣ್ಣಾಗುವ ಈ ದೇಹಕ್ಕೆ ಮನದರ್ಪ
ಜೀವ ಹೋದ ಮೇಲೆ ಹಲ್ಲಿಲ್ಲದ ಸರ್ಪ

ಇದ್ದಾಗ ಕಾಡಿಸಿಕೊಂಡವರೇ
ಸತ್ತಾಗ ಹೊತ್ತು ಮುಕ್ತಿಯಿತ್ತರು
ಹಣ ಅಧಿಕಾರವನ್ನೆಲ್ಲ ಮರೆತು
ಸಂಸ್ಕಾರಗೈದು ಮಾನವೀಯತೆ ಮೆರೆದರು

1228 ಪಿಎಂ 1612 2016

ಮುಂಜಾನೆಯ ದೀಪ
***************

ಮಾಗಿ ಚಳಿಯ ಬೀದಿಯಲ್ಲಿ
ಕಾರ್ತಿಕ ಮಾಸದ ದೀಪದಲ್ಲಿ
ಶಿಶಿರ ಋತುವ ಪರ್ವದಲ್ಲಿ
ಹೊಸತನಕ್ಕೆ ತುಡಿವ ವೇಳೆಯಲ್ಲಿ
ಮೂಡಿತು ಮುಂಜಾನೆಯ ಈ ದೀಪ

ಕಳೆದ ಕತ್ತಲೆಯ ಭಿತ್ತಿಯಲ್ಲಿ
ಜಗದ ಸವಿಗನಸ ನಿದಿರೆಯಲಿ
ಪ್ರಕೃತಿ ಚೆಲುವ ಅನಾವರಣದಲ್ಲಿ
ಮೊಳಗೋ ಸುಪ್ರಭಾತದಲ್ಲಿ
ಮಂಜಿನ ತೆರೆ ಸರಿಸಿ ಬಂದ ನೇಸರ

ಬೆಳಕ ಬೀರುವ ಕಾಯಕದಲ್ಲಿ
ಕವಿದ ಕತ್ತಲೆ ಓಡಿಸುವಲ್ಲಿ
ಜಗವ ನಡೆಸೋ ನಾಯಕತ್ವದಲ್ಲಿ
ಯಶಸ್ಸಿನ ಆ ಗತಿಯಲ್ಲಿ
ಕಾಲರೂಢನಾಗಿ ಬಂದ ಆನೆಸರ

6:43 ಪಿಎಂ 17 12 2018

ಸತತ ಸೋಲಿನಿಂದ
++++++---+++++

ಮೋಹ ಬತ್ತಿತು
ಮನಸ್ಸು ಸತ್ತಿತು
ಸತತ ಸೋಲಿನಿಂದ

ಮಾತು ತಪ್ಪಿತು
ಮೌನ ಗೆದ್ದಿತು
ಸೋತ ಭೀತಿಯಿಂದ

ನೀತಿ ಕೈಕಟ್ಟಿ ಬಿಟ್ಟಿತು
ಪ್ರೀತಿ ಕಂಗೆಟ್ಟಿತು
ನಂಬಿಕೆ ಇಲ್ಲದ್ದರಿಂದ

ಭಾವ ಕುಸಿಯಿತು
ನೋವು ಹೆಚ್ಚಿತು
ಸ್ಪೂರ್ತಿಯ ಅಭಾವದಿಂದ

ಜಗವು ನ್ನಕ್ಕಿತು
ಮನವು ಬಿಕ್ಕಿತು
ಈ ಹುಚ್ಚಾಟದಿಂದ

ದಾರಿ ಸವಿಯಿತು
ಗುರಿಯು ಮಾಸಿತು
ಈ ನಿರಾಸೆಯಿಂದ

ಭರವಸೆಯು ಸೋತು
ಬದುಕು ಕೈತಪ್ಪಿತು
ಬರೀ ನಿರೀಕ್ಷೆಯಿಂದ

ಎಲ್ಲ ಹುಸಿ ಆಯ್ತು
ಬೆಲ್ಲ ಕಹಿಯಾಯಿತು
ಗೆಲ್ಲದ ನೆಲವಿನಿಂದ

02 14 ಎಎಂ 18 12 2016
 
ವಿಶ್ವಮಾನವ
**********

ಕನ್ನಡಕ್ಕಾಗಿ ಎತ್ತಿದ ಕೈ
ಕಲ್ಪವೃಕ್ಷವಾಯಿತು
ಕನ್ನಡ ಡಿಂಡಿಮ ಬಾರಿಸಿ
ಕನ್ನಡಿಗರನ್ನೆಚ್ಚರಿಸಿತು

ಮಲೆನಾಡ ಕಾನನದ
ಸಹ್ಯಾದ್ರಿಯ ಮಡಿಲಲ್ಲಿ
ಅವತರಿಸಿದ ಕನ್ನಡದ ಕಂಪು
ಕನ್ನಡದ ಹೆಮ್ಮರವಾದರು ಈ ಕುವೆಂಪು

ರಾಮಕೃಷ್ಣಾಶ್ರಮದಾಸರೆಯಲ್ಲಿ
ಹುಲಸಾಗಿ ಬೆಳೆದ ಪ್ರತಿಭೆ
ಆಂಗ್ಲ ಸಾಹಿತ್ಯಕ್ಕೆ ಮಾರುಹೋಗಿತ್ತು
ಅಪ್ಪಟ ಕನ್ನಡದ ಪ್ರಭೆ

ದಿಗ್ಗಜರ ಗರಡಿಯಲ್ಲಿ ಪಳಗಿ
ಸಾಹಿತ್ಯ ಲೋಕದ ತಾರೆಯಂತೆ ಮಿರುಗಿ
ರಾಮಾಯಣದ ದರ್ಶನ ಮಾಡಿಸಿ
ಕನ್ನಡಕ್ಕೆ ಜ್ಞಾನಪೀಠದ ಮುಕುಟವಿತ್ತರು

ನಾಡು ನುಡಿಗೆ ದುಡಿದ ಕವಿಗೆ
ರಾಷ್ಟ್ರಕವಿಯ ಅಭಿಮಾನದ ಗೌರವ
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು
ಎಂದು ಸಾರಿದ ವಿಶ್ವಮಾನವ

ಭಾರತ ಜನನಿಯ
ಕನ್ನಡ ತನುಜಾತೆಯ
ಹೆಮ್ಮೆಯ ಈ ಕುವರ
ಕನ್ನಡದ ಕಂಪ ಹರಡಿದ ಧೀರ

0425 ಎಎಂ 20 12 2018

ಮಧುರ ಪೇಯ
************



ಎಲ್ಲಿಯ ನೀರೋ
ಎಲ್ಲಿಯ ಹಸಿರಲಿಯೋ
ಯಾವ ಹಸುವಿನ ಹಾಲೋ
ಯಾವ ನೆಲದ ಸಕ್ಕರೆ ಸವಿಯೋ
ಹದವಾಗಿ ಕೂಡಿದ ಮಿಶ್ರಣ
ಸವಿವ ಮನದ ಮುದಕೆ ಕಾರಣ

ಉರಿವ ಬೆಂಕಿಯ ಸಹಿಸಿ
ಪಾತ್ರೆಯಲ್ಲಿ ಎಲ್ಲ ಸೇರಿಸಿ
ತಮ್ಮ ತಮ್ಮ ಗುಣಗಳ ನೀಡಿ
ಮಧುರ ಪೇಯವಾಯಿತು ನೋಡಿ
ಜಗದೆಲ್ಲ ಮನಗಳೊಂದಾಗಿ
ಬೇರೆತರೆ ಅದೇನು ಸವಿಯೋ

ಬೆಂಕಿ ಉರಿದು ಹೋಗುವುದು
ಪಾತ್ರೆ ಕರಗದೆ ಉಳಿಯುವುದು
ಹಾಲು ನೀರು ಸಕ್ಕರೆ ಬೆರೆತು
ಚಹಾದೆಲೆ ರಸ ಬಿಟ್ಟು ಉಳಿಯಿತು
ತನ್ನೆಲ್ಲ ಗುಣಗಳ ಪಸರಿಸಿ
ಸೊಪ್ಪು ಸಪ್ಪೆಯಾಗಿ ತಿಪ್ಪೆ ಸೇರಿತ್ತು

0214 ಪಿಎಂ 20 12 2018

ನೀನಿರದೆ
*******

ಬೇಸರವೂ ಬರವಾಗಿ ಎರೆಗಿದೆ
ನೀನಿರದೆ ಈ ಬಾಳು ಸೊರಗಿದೆ
ಬೇಸಿಗೆಯ ಈ ಉರಿತಾಪ
ಎದೆಯ ಭಾವಗಳ ಸುಡುತಿದೆ

ಕನಸುಗಳೆಲ್ಲ ಎಲೆಯುದುರಿ
ಕಲ್ಪನೆಯು ಅಲ್ಲಲ್ಲಿ ಚಿಗುರಿ
ಕರೆಯುತ್ತಿದೆ ನಿನ್ನೊಲವ ಮಳೆಯ
ತಣಿದು ಕುಣಿದು ಮೆರೆಯಲು

ಒಂಟಿತನದ ಒಣ ಹುಲ್ಲಿಗೆ
ಬೇಜಾರಿನ ಕಿಡಿಸೋಕಿ
ಬೇಕಾಗಿದೆ ಭಾವವೆಲ್ಲಾ
ಕಿತ್ತು ತಿನ್ನುತ್ತಿವೆ ನೆನಪೆಲ್ಲ

ನಿನ್ನ ನೆರಳಿಲ್ಲದೆ ನರಳಿದೆ
ಜೀವ ಹಸಿದು ನಿತ್ರಾಣಗೊಂಡಿದೆ
ಬಿದ್ದಲ್ಲಿ ಬಿದ್ದು ಬಳಲಿದೆ
ಯಾವ ಹಾಡು ಹಿಡಿಸುತ್ತಿಲ್ಲ

ನವಭಾವ ಯಾವುದು ಮೂಡುತ್ತಿಲ್ಲ
ಹಸಿ ಗೋಡೆಯ ಹುಸಿ ಹೋಗುವ
ಕಸಿವಿಸಿಯಲ್ಲಿ ತೊಳಲಾಡಿದ ಜೀವ
ಕಾದು ಕೆಂಡವಾಗುವ ಮೊದಲು
ಬಂದು ಜ್ಯೋತಿಯಾಗು ಒಲವೇ

3:47 ಪಿಎಂ 2012 2018

ಒಲವಿಗಾಗಿ
*********

ವಿರಹದ ನೋವು ದೂರವಾಯಿತು
ಮರೆವು ಈಗ ವರವಾಯಿತು
ಎದೆಯಲೊಂದು ಹೊಸ ಭಾವ
ಮೂಡಿ ಮರೆಸಿದೆಲ್ಲ ನೋವ

ಹೂವು ಅರಳಿತು ರವಿಗಾಗಿ
ಭಾವ ಮೂಡಿತು ಪ್ರೇಮಿಗಾಗಿ
ಮಳೆ ಸುರಿಯಿತು ಇಳಿಗಾಗಿ
ಮೌನ ಮುರಿಯಿತು ಒಲವಿಗಾಗಿ

ನನಗಿಲ್ಲ ಇನ್ನು ಬರದ ಚಿಂತೆ
ಒಲವ ವರವಿದೆ ನನ್ನ ಜೊತೆ
ಮೂಡುವ ಭಾವಗಳೆಲ್ಲ ಈಗ
ಹಾಡಾಗಿ ನಲಿಯುತ್ತಿವೆ ನನ್ನಲ್ಲಿ

ಏಕಾಂತ ಹಿತವೆನಿಸಿದೆ
ಗೆಳತಿ ನಿನ್ನ ನೆನಪಿಂದ
ಬೇಸರವು ನೀನಿಲ್ಲದೆ ಓಡಿತು
ನೀನಿರುವ ಭಾವದಿಂದ

ನವಚೇತನ ನನ್ನ ಎದೆಯಲಿ
ಹೊಸ ಆಸೆಗಳ ಸೃಷ್ಟಿಸಿದೆ
ಈ ಪ್ರೀತಿಯು ನನ್ನ
ಬದುಕಿಗೀಗ ಪುಷ್ಟಿ ನೀಡಿದೆ

436 ಪಿಎಂ 20 12 2016

ಮಾನವಿಯತೆ ಸತ್ತಿತು
***************

ಎಳೆಯ ಬಾಲೆಯ ಮೇಲೆ
ದುರುಳ ಕಾಮುಕ ನೆರಗಿ
ಅತ್ಯಾಚಾರ ಗೈಯುವಾಗ
ಮಾನವೀಯತೆ ಸತ್ತಿತು

ತನ್ನನ್ನು ನಂಬಿ ಬಂದ
ತನ್ನ ಮನೆ ಮನ ಬೆಳಗುವಳನ್ನು
ವರದಕ್ಷಿಣೆಗಾಗಿ ಹಿಂತಿಸುವಾಗ
ಮಾನವೀಯತೆ ಸತ್ತಿತು

ಮುದ್ದಿನಿಂದ ಸಲಹಿದ
ಮಗ ನಡು ರಾತ್ರಿಯಲಿ
ನಡು ಬೀದಿಗೆ ತಳ್ಳುವಾಗ
ಮಾನವೀಯತೆ ಸತ್ತಿತು

ಹಸಿವಿನಿಂದ ಜನ ತತ್ತರಿಸಿರಲು
ಉಳ್ಳವರು ಪ್ರತಿಷ್ಠೆಗಾಗಿ
ಅನ್ನವನ್ನು ತೊಟ್ಟಿಗಿಸೆವಾಗ
ಮಾನವೀಯತೆ ಸತ್ತಿತು

ತನ್ನ ನಂಬಿದ ಜೀವವನ್ನು
ಬಾಯಿ ಚಪಲಕ್ಕಾಗಿ
ದೇವರ ಹೆಸರಲ್ಲಿ ಬಲಿ ನೀಡುವಾಗ
ಮಾನವೀಯತೆ ಸತ್ತಿತು

ಅಸಹಾಯಕರ ಮೇಲೆ
ಅಟ್ಟಹಾಸ ಮೆರೆದು
ಅವಹೇಳನಗೈಯುವಾಗ
ಮಾನವೀಯತೆ ಸತ್ತಿತು

624 ಎಎಂ 21.12/2016

ಬಲಿಗೈದರು
*********

ಜಾತಿ ಧರ್ಮಗಳ ಹೆಸರಲ್ಲಿ
ಬೇಲಿಯ ಹಾಕಿ ಬಲಿಗೈದರು
ಹುಟ್ಟು ಒಂದೆ ರೀತಿ
ಸಾವು ಒಂದೇ ರೀತಿ
ನಡುವೆ ಬದುಕುತ್ತಿರುವಾಗ ಏಕೆ
ಈ ಮೇಲು ಕೀಳುಗಳ ಗೊಡವೆ

ಹಾರುವನಾದರೇನು ಹೊಲೆಯನಾದರೇನು
ಉಸಿರಾಡುವ ಗಾಳಿ ಒಂದೇ
ತಿನ್ನುವ ಅನ್ನವು ಒಂದೇ
ದೇಹದೊಳಗಿನ ಚಯಾಪಚಯವು ಒಂದೇ

ಹುಟ್ಟಿನ ಓಣಿಯ ಏಣಿಯ
ಹಿಡಿದು ಹತ್ತುವರುಂಟು
ಸಾಧನೆಯ ಶಿಖರವೇರಿ
ಅವರು ಇಲ್ಲಿ ಉಂಟು

ಒಂದೇ ಜಾಗದಿಂದ ಬಂದವರ
ಭಿನ್ನಗೈದವರು ಯಾರು
ಒಂದೇ ಜಾಗಕ್ಕೆ ಹೋಗುವವರ
ಮಣ್ಣು ಜಾತಿ ಕೇಳಿ ಕೊಳೆಸುವುದೇನು
ಶಾಸ್ತ್ರಗಳ ಅಸ್ತ್ರವು ಬಳಸಿ
ಬಾಳ ಸೂತ್ರದ ನಿಯಮ ನಂಬಿ
ಮೇಲು ಕೀಳಿನ ಅಂತರವ ದೂಡಿ
ಸಮಾನತೆಯ ಜ್ಯೋತಿ ಬೆಳಗಲಿ ಇಂದು

439 ಪಿಎಂ 21.12.2016

ಹತಭಾಗ್ಯಳು
*********

ಪೂಜೆಯ ಹೆಸರೇಳಿ
ಈಗ ಪೂಜೆಗರ್ಹವಲ್ಲದವಳು
ಪಲ್ಲಂಗವನು ಅಲ್ಲದೆ ಏರಿ
ಪಲ್ಲಕ್ಕಿಗೆ ಸಲ್ಲದ ಹತಭಾಗ್ಯಳು

ಅರಿಯದ ಹೊತ್ತಲ್ಲಿ ಮುತ್ತು ಕಟ್ಟಿ
ಹರೆಯದ ಮತ್ತಲ್ಲಿ ಮೈಯ ಮುಟ್ಟಿ
ದೇವರ ದಾಸಿ ಎಂದು ನಂಬಿಸಿ
ವೇಶ್ಯೆ ಪಟ್ಟ ಕಟ್ಟಿದ ಕಾಮಾಧಮರು

ಹಸಿದ ಎಲ್ಲರೂ ಉಂಡವರೇ
ನನ್ನ ಬಳಿದ ದೇಹವನ್ನು
ಬಸುರಿಗೆ ಹೊಣೆಯಾಗಿದ
ಢಾಂಬಿಕ ಈ ದುರುಳರು

ಕೀಳು ಜಾತಿಯವರ ಕಾಲಿಗೆ
ಗೆಜ್ಜೆ ಕಟ್ಟಿ ತಣಿದರು
ಸೂಳೆ ಎಂದು ಕರೆದು
ನನ್ನ ನಾಳೆಯ ಕೊಂದರು

ದೇವರ ಹೆಸರಿಲ್ಲಿ ದಂಧೆಯ
ಮಾಡುವ ನೀಚರಿವರು
ಮೈ ನೆರೆದ ಹಸಿ ಮೈ ಎಂದು
ನೋಡದ ವಾಂಚೆಗೆಲ್ಲದವರು

ಹಿಂಡಿ ಹಿಂಡಿ ಬಸಿದರು
ನನ್ನ ಈ ಯೌವ್ವನವನು
ಹಾದಿಬೀದಿಯ ಅನಾಥವಾಗಿಸಿದರು
ಇಡೀ ನನ್ನ ಬಡ ಬದುಕನು

3 1 ಪಿಎಂ 22.12.2016

ಗುಟ್ಟೇನು
*******

ಕೋಟಿಗಳ ಲೂಟಿ ಹೊಡೆದು
ಮಹಾನುಗಳ ಮೇಲ್ಮಹಲುಗಳ
ಕಟ್ಟಿಕೊಂಡವರನ್ನು ಹಾಗೆ ಬಿಟ್ಟು
ಅಸಹಾಯಕ ಅಮಾಯಕರ
ಒಕ್ಕಲಿಬ್ಬಿಸುವ ಗುಟ್ಟೆನು?

ಪ್ರಕೃತಿಯ ಮೇಲೆ ಅತ್ಯಾಚಾರ ಗೈಯುವವರ
ರಕ್ಷಣೆಗೆ ಮಣೆ ಹಾಕಿ
ಪ್ರಕೃತಿಯೊಂದಿಗೆ ಬದುಕುವವರ
ಬಂಧ ಕಡಿದುದರ ಹಿಂದೆ
ನಡೆದಿರುವ ಲಾಬಿಯಾದರೂ ಏನು?

ಕಾನನದಿ ಪ್ರಾಣಿಗೂ ಕೀಳಾಗಿ
ಬದುಕುವ ನಿರ್ಗತಿಕರ ಬದುಕನು
ಬರ್ಬರವಾಗಿ ಹತ್ಯೆಗೆಯುವ
ಅಧಿಕಾರ ಶಾಹಿಯ ಆದ್ಯತೆ
ಕಾನೂನೋ ಇಲ್ಲ ಮಾನವೀಯತೆಯೋ?

ಆಳುಗರ ಅಟ್ಟಹಾಸದ ಮುಂದೆ
ಚಟ್ಟವೇರುತಿದೆ ಇವರ ಪುಟ್ಟ ಬದುಕು
ಸ್ವಾತಂತ್ರ್ಯದ ಸವಿಯುಂಡವರಿಗೇಕೋ
ಕಾಣದು ಇವರ ಅತಂತ್ರದ ಬದುಕು
ಏನಿದು ಈ ಕಾನೂನಿನ ತೊಡಕು?

ಸರ್ಕಾರಗಳ ಈ ಧೋರಣೆ
ಮುಗಿಲು ಮುಟ್ಟಿದೆ ಶೋಷಣೆ
ಅಂತ್ಯವಿಲ್ಲವೇ ಬಡವರ ಕಷ್ಟಕೆ
ಮನುಷ್ಯತ್ವ ಮರೆತ ದಬ್ಬಾಳಿಕೆಗೆ

೩25 ಎಎಂ 22 12 2016


ಸತತ ಸೋಲುಗಳು
""""""""""""""""""""

ಸತತ ಸೋಲುಗಳು
ನನ್ನ ಕಂಗಡಿಸಿವೆ
ಕದಡಿದವು ಎದೆಯ
ಮುದ್ದು ಭಾವಗಳ
ನಿದ್ರೆ ಕೆಡಿಸಿದವು
ಆಳಕ್ಕೆ ಬೀಳುವ ಭಯದಿಂದ 
ಸೋತಮೇಲು ಹಾದಿ ತಪ್ಪದೇ
ಅನುಭವವಾಗಿಸಿಕೊಂಡೆ
ಆಕ್ರಂದನದೊಳಗೂ
ಆನಂದ ಕಾಣಲು ಹೊರಟೆ
ಸೋತ ಸಾವಿರ ಮುಖ ದರ್ಶನದಿ
ನನ್ನ ಸೋಲನ್ನೆಲ್ಲ ಮರೆತೆ ಬಿಟ್ಟೆ
ಹೋರಾಟದ ಈ ಬದುಕಿನಲ್ಲಿ
ಅಲೆದಾಟದ ಅಲೆಮಾರಿ ನಾನಿಲ್ಲಿ
ಕಾಲವನು ಕೊಲ್ಲದೆ ಗೆಲ್ಲುವ
ಹಠಕ್ಕೆ ನಾ ಬಿದ್ದೆ
ಎದ್ದು ಬರುವೆನೆಂಬ ವಿಶ್ವಾಸದಿಂದ
ಸೋಲುಗಳೇ ಸವಾಲಾಗಿ
ನಂಬಿಕೆಗಳೇ ಕಾವಲಾಗಿ
ಮುದುಡಿದ ಮನೆಕೆ ಬೆಂಬಲವಾಗಿ
ಬದುಕಿದೆ ಸೋಲಿಗೊಂದು ಪಾಠವಾಗಿ

236 ಎಎಂ 22 12 2016

ಬೆಳವ ಮುನ್ನವೇ
*************

ನೀ ನೆಟ್ಟ ಪ್ರೀತಿ ಸಸಿ
ಮರವಾಗಿ ಬೆಳೆಯುವ ಮುನ್ನವೇ
ಬರವಾಗಿ ಎರೆಗಿತ್ತು
ನೀ ತಂದ ವಿರಹ

ಜಾತಿ ಗೋಡೆಯ ಕೆಡವಿ
ಪ್ರೀತಿ ಸುತ್ತಾ ವ್ಯಾಪಿಸುವ
ಮೊದಲೇ ಬೇಲಿ ಬಿತ್ತು
ಕಿತ್ತೊಗೆಯುವ ಆ ತಾಕತ್ತು
ನೀನಿಲ್ಲದೆ ನನಗೆ ಎಲ್ಲಿದೆ

ಕಂಬನಿಯ ಕೋಡಿ ಹರಿದು
ವೇದನೆಯ ಸಾಗರ ಸೇರಿ
ಆ ನೆನಪು ಮತ್ತೆ ಮತ್ತೆ
ಅಲೆಯಾಗಿ ತೀರ ಸವರಿತ್ತು
ಎದೆಯ ಭಾವದ ಬಿಸಿಗೆ
ಒಲವ ತೇವ ಆರಿತ್ತು

ಕಣ್ಣ ಕೊಳದಲ್ಲೀಗ ಹಂಸೆಯಾಡದೆ
ಮರೆವಿರದ ಹಿಂಸೆ ಕಾಡಿತ್ತು
ಮುರಿದ ರೆಕ್ಕೆಯ ನಂಬಿ
ಹಾರಿದೆ ನಾ ಬಾಳನಭಕೆ
ಉರಿವ ಝಳಕೆ ಕಣ್ಣು
ಮಂಜಾಗಿ ನಂಜೇರಿತು ಜೀವಕೆ
ಪ್ರೀತಿ ಇರದ ಬದುಕೇಕೆ
ನೋವು ಸಹಿಸುವ ಮನಕೆ 
ಬದುಕು ಶೂನ್ಯ ಸಾವು ಮಾನ್ಯ
ಅಂತ್ಯ ಹಾಡಿದ ಕವಿತೆಗೆ

533 ಪಿಎಂ 22.12.2016

ಬೆಳಗಾಯಿತು
**********

ಕವನ

ಪ್ರಾಯ ಬಂದಾಗ ನಿನ್ನ ನೆನಪಾದಾಗ

ಯಾರು ನೀನು ಹೆಸರು ಏನು
ನನ್ನ ಸೆಳೆಯಲು ಕಾರಣವೇನು
ಇದೇನು ಪ್ರೀತಿಯ ಆಕರ್ಷಣೆಯೋ
ಯೌವ್ವನ ಕಾಲದ ಅನ್ವೇಷಣೆಯೋ
ಅರಿಯದಾಗಿದೆ ನನ್ನೀ ಮನ
ನಿನ್ನದೇ ಗುಂಗಲ್ಲಿದೆ ಗಮನ

ಪ್ರಾಯ ಬಂದಾಗ ನಿನ್ನ ನೆನಪಾದಾಗ
ಹೃದಯದೊಳಗೆ ಎಂತದೋ ಉದ್ವೇಗ
ಹಸಿವು ನಿದಿರೆ ಎಲ್ಲ ಮರೆಸಿ ಕಾಡುವೆ
ಒಮ್ಮೆ ಹೇಳಿಬಿಡು ನೀನೆಲ್ಲಿ ಅಡಗಿರುವೆ
ಪ್ರೀತಿಯ ರೂಪವು ನಿನ್ನದೇನು
ನಿನ್ನನೆ ಹುಡುಕುತ್ತಾ ಬಂದಿಹೆನು

ಮತ್ತೆ ಮತ್ತೆ ನಿನ್ನ ನೆನಪು ಕಾಡಲು
ಮರೆತೋಯ್ತು ನನಗೆ ಹಗಲು ಇರುಳು
ಯಾವ ರೂಪದ ಮಾಯಾಂಗನೆ ನೀನು
ಹೀಗೆ ನನ್ನ ಕಾಡುವ ಕಾರಣವೇನು

ಹರೆಯವಿದು ಸೋಲುತಿದೆ
ಮರೆಯದಂತೆ ಜ್ಞಾಪಿಸುತ್ತಿದೆ
ಒಮ್ಮೆ ಮುಖ ತೋರು ಚಂದ್ರ ಚಕೋರಿ
ನಿನಗಾಗಿ ಮಾಡಿಕೊಳ್ಳುವೆ ಜೀವನ ತಯಾರಿ
ಎದುರು ಬಂದು ಪ್ರಾಯದ ಗಾಯಕ್ಕೆ ಮುಲಾಮು ಹಚ್ಚು
ಇನ್ನು ಸಹಿಸಲಾರೆ ನಾ ನಿನ್ನ ಪ್ರೇಮದ ಹುಚ್ಚು

೦೯೪೪ಎಎಂ೧೩೧೦೨೦೨೩
*ಅಮುಭಾವಜೀವಿ ಮುಸ್ಟೂರು*

Friday, December 8, 2023

ಕವನ

ಮುದ್ದಿನ ಬೊಂಬೆ ಅವಳು
ಹದ್ದಾಗಿ ಕುಕ್ಕಿ ಹೋದಳು
ಬುದ್ಧಿಗೆ ಮಂಕು ಎರಚಿ
ಎದೆಗೆ ಗುದ್ದಿ ಓಡಿಹೋದಳು

ಪ್ರೀತಿಯ ಮುಖವಾಡ ಧರಿಸಿ
ಬಾಳಲಿ ಬಂದಳು
ತೀಟೆ ತೀರಿಸಿಕೊಂಡು ಮುಖಕ್ಕೆ
ಮಸಿ ಬಳಿದು ಹೋದಳು

ಹೂವಿಂದ ಹೂವಿಗೆ ಹಾರುವ ಖಯಾಲಿಯ
ನವರಂಗಿ ಪತಂಗ ಅವಳು
ಮೋ(ಸ)ಹದ ಬಲೆಯ ಬೀಸಿ
ಮುಳುಗಿಸಿ ಬಿಟ್ಟಳು

ಹೃದಯ ಕದ್ದ ಚೋರಿ ಈಕೆ
ಹೃದಯಕೆ ಚೂರಿ ಹಾಕಿದಳು
ಕದ್ದು ಬಂದು ಬೆಣ್ಣೆ ತಿಂದು
ಮೂತಿಗೊರಸಿ ಹೋದಳು

ಎಲ್ಲೇ ಸಿಕ್ಕರೂ ನಂಬಬೇಡಿ ಇವಳನು
ಯಾರಿಗೂ ನಿಯತ್ತು ತೋರದವಳನು
ಪ್ರೀತಿಯ ಕಪ್ಪುಚುಕ್ಕೆ ಇವಳಿನ್ನು
ಪ್ರೀತಿ ಬಯಸಿ ಬಂದರೆ ದೂರವಿಸಿ ಅವಳನು

ಅಮುಭಾವಜೀವಿ ಮುಸ್ಟೂರು 

Wednesday, December 6, 2023

ಲೇಖನ

#ಅಮುಭಾವದೂಟ 02

#ಜೀವನ #ಹೂವಿನ #ಹಾಸಿಗೆಯಲ್ಲ #ಸಾಧಿಸಿ   #ಸುಖಮಯವಾಗಿಸಿಕೊಳ್ಳಬೇಕು

ಜೀವನ ಎಂಬುದು ಹೂವಿನ ಹಾಸಿಗೆಯಲ್ಲ.ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ ಎಂಬಂತೆ ಅವರವರ ಪಾಲಿಗೆ ಅವರದೇ ಆದ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕಾಗಿರುತ್ತದೆ. ನಮ್ಮ ಕಷ್ಟ ನಮಗೆ ದೊಡ್ಡದಾಗಿದ್ದರೆ ಇತರರಿಗೆ  ಅದು ಏನೂ ಅಲ್ಲದಿರಬಹುದು. ಇತರರಿಗೆ ಬಂದೊದಗಿರುವ ಸಂಕಷ್ಟ ನಮಗೆ  ಚಿಕ್ಕ ವಿಷಯವಾಗಿರಬಹುದು . ಆದರೆ ಅವರವರ ಪಾಲಿಗೆ ಅದು ಒಂದು ಪಾಠ ಕಲಿಸಿ  ಅನುಭವದ ಮೂಟೆಯನ್ನು ಹೊರಿಸಿಹೋಗಿರುತ್ತದೆ.ಅದಕ್ಕೆ ಹಿರಿಯರು ಹೇಳುವುದು ಜೀವನ ಒಂದು ಪಾಠಶಾಲೆ ಇಲ್ಲಿ ಕಲಿತ  ಅನುಭವ ಎಂದಿಗೂ ನಮ್ಮನ್ನು ಹಾದಿ ತಪ್ಪದಂತೆ ಸರಿದಾರಿಯಲ್ಲಿ ಕರೆದೊಯ್ಯಲು ಸಹಾಯಕವಾಗುವುದೆಂಬುದು ವಾಸ್ತವ ಸತ್ಯವಾಗಿದೆ.

              ಇತರೆ ಪ್ರಾಣಿಗಳು ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು  ತಾವೇ ನಿಭಾಯಿಸುತ್ತವೆ.ಇಲ್ಲಿ ಬಲಾಢ್ಯವಾದದ್ದು ಗೆದ್ದರೆ ಬಲಹೀನವಾದದ್ದು ಸೋತು ಶರಣಾಗಬಹುದು ಅಥವಾ ಸತ್ತುಹೋಗಬಹುದು. ಆದರೆ ಮನುಷ್ಯರ ವಿಚಾರದಲ್ಲಿ ಹಾಗಾದಿರಬಹುದು.ಏಕೆಂದರೆ ಇಲ್ಲಿ ದೈಹಿಕವಾಗಿ ಬಲಾಢ್ಯನಾಗಿದ್ದರೂ ಬೌದ್ಧಿಕವಾಗಿ ಬಲಹೀನನಾಗಿರುವ ಹಾಗೂ ದೈಹಿಕವಾಗಿ ಬಲಹೀನನಾದವನು ಬೌದ್ಧಿಕವಾಗಿ ಬಲಾಢ್ಯನಾಗಿದ್ದು ಪರಿಸ್ಥಿತಿಯನ್ನು ತನ್ನದೇ ಆದ ಚಾಣಾಕ್ಷತೆಯಲ್ಲಿ ನಿಭಾಯಿಸಬಹುದು ಅಥವಾ  ಇತರರ ಸಹಾಯ ಸಹಕಾರದೊಂದಿಗೆ ನಿವಾರಿಸಿಕೊಳ್ಳಲು ಅವಕಾಶವಿದ್ದಾಗ್ಯೂ ಕೆಲವೊಮ್ಮೆ  ಅಸಹಾಯಕನಾಗಿ ಅಪಾಯ ತಂದೊಡ್ಡಿಕೊಳ್ಳವ ಅವಿವೇಕಿಗಳನ್ನೂ ಕಾಣುತ್ತೇವೆ. ಅಂತವರ ಪಾಲಿಗೆ ಕಷ್ಟವೆಂಬುದು ಅನುಭವಿಸಲಾಗದ ಹೊರೆಯಾಗಿರುತ್ತದೆ.ಅದರೊಂದಿಗೆ ಸಮಾಜದಿಂದ   ಉಂಟಾಗಬಹುದಾದ ಪರಿಣಾಮಗಳಿಗೆ ಹೆದರಿ ಬದಕನ್ನು ಕೈಚೆಲ್ಲಿರವರನ್ನು ನಾವು ಕಾಣಬಹುದು. ಆದ್ದರಿಂದ ಕಷ್ಟಗಳು ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯೇ ಎಂಬ ಹಿರಿಯರ ಅನುಭವಾಮೃತದ ಬೆಂಬಲದಿಂದ ಎದುರಿಸುವ ಆತ್ಮವಿಶ್ವಾಸ ಮೂಡಿಸಿಕೊಂಡು ಇರುವುದೊಂದೇ ಜೀವನದಲ್ಲಿ ಪ್ರಾಮಾಣಿಕವಾಗಿ ಖುಷಿಯಿಂದ  ಸಂತೃಪ್ತಿಯಿಂದ ಇತರರಿಗೆ ಮಾದರಿಯಾಗುವಂತೆ ಬದುಕುವುದು ನಮ್ಮ ಕೈಯಲ್ಲೇ ಇದೆ. ಯಾವುದೇ ಕಾರಣಕ್ಕೂ  ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಬದಲು ನಮ್ಮ ಜೀವನ ನಮ್ಮದೇ ಪಯಣ  ಎಂದುಕೊಂಡು ಸಾಗಿದರೆ ಗುರಿಮುಟ್ಟುವುದು ಕಷ್ಟವೇನಲ್ಲ. 

1105ಪಿಎಂ07122021
ಅಮುಭಾವಜೀವಿ ಸುಧಾ ಮುಷ್ಟೂರು

ಲೇಖನ

#ಅಮುಭಾವದೂಟ 

ಬದುಕು ಕಲಿಸುವ ಪಾಠಗಳಿಗೆ  ಅನುಭವದ ಚೌಕಟ್ಟಿದೆ . ಅದು ಕೊಡುವ ಒಂದೊಂದು ಹೊಡೆತಗಳು ಕೂಡ ನಮ್ಮನ್ನು ಜಾಗೃತರನ್ನಾಗಿ ಸುತ್ತದೆ . ಸೋಲುಗಳನ್ನು ಸವಾಲನ್ನಾಗಿಸಿ ಸಂದಿಗ್ಧತೆಯನ್ನು ಎದುರಿಸುವ ಆತ್ಮವಿಶ್ವಾಸ ತುಂಬಿ ನಮ್ಮನ್ನು ಗೆಲುವಿನತ್ತ ಕೊಂಡೊಯ್ಯುತ್ತದೆ .ಬದುಕಿನ ಪ್ರತಿ ಪುಟವೂ ಹೊಸದಾಗಿರುತ್ತದೆ ಅದು ನಮಗೆ ಮಾತ್ರ ಸಂಬಂಧಿಸಿದ್ದಾಗಿರುತ್ತದೆ .ಬೇರೆಯವರು ಅನುಭವಿಸಿದ ಕಷ್ಟ ನೋವುಗಳು ನಮಗೆ ಉದಾಹರಣೆಯಾದರೆ ನಮ್ಮ ಕಷ್ಟ ನೋವುಗಳು ಸ್ವತಃ ಅನುಭವ ಜನ್ಯವಾಗಿ ರುತ್ತದೆ .ಯಾರು ಎಷ್ಟೇ ಬುದ್ಧಿವಾದ ಹೇಳಿದರೂ ಅರ್ಥವಾಗದ ವಿಚಾರಗಳು ಬದುಕಿನ ಅಧ್ಯಾಯಗಳಲ್ಲಿ ಹೆಜ್ಜೆ ಹೆಜ್ಜೆಗೂ ಕಲಿಕೆಯನ್ನು ಉಂಟುಮಾಡುತ್ತದೆ .ನಾನೆಂದು ಮೆರೆದವನನ್ನು ಇಲ್ಲಿ ಬಾಗಿಸಿ ಶಿಕ್ಷಿಸಿ ಸರಿದಾರಿಗೆ ತರಲು ಪ್ರಯತ್ನಿಸುತ್ತದೆ .ಅದಕ್ಕೂ ಜಗ್ಗದೇ ಹೋದಾಗ ಸರಿಯಾದ ಏಟು ನೀಡಿ ನಮ್ಮನ್ನು ನೀಟು ಮಾಡುತ್ತದೆ .ಸೋತು ಶರಣಾದವನನ್ನು ಕೈಹಿಡಿದು ಮೇಲೆತ್ತಿ ಜಗದಲ್ಲಿ ಪೂಜ್ಯನೀಯನನ್ನಾಗಿ ಮಾಡುತ್ತದೆ .

       ನನ್ನೊಳಗಿನ ಅಹಂಕಾರವನ್ನು ತ್ಯಜಿಸಿ ನಾವು ಎಂದು ಬದುಕಿದಾಗ ಕ್ಷಣ ಕಾಲ ಬಾಳಲಿ ಬಿಡುತ್ತದೆ ಈ ಬದುಕು .ಆಗಲೇ ಸಾರ್ಥಕತೆ ನಮ್ಮ ಪಾಲಿಗೆ ಆಗುತ್ತದೆ .ಬೀಗುವ ಬದಲು ಬಾಗುವುದನ್ನು ಕಲಿತಾಗ ಬದುಕು ನಮ್ಮಂತೆಯೇ ನಡೆಯುತ್ತದೆ .ಆಗ ಜೀವನ ಸುಂದರ ಸುಖಮಯ ಸಂತೃಪ್ತಿಯಿಂದ ನಮ್ಮನ್ನು ಬಾಳಗೊಡುತ್ತದೆ .ಆದ್ದರಿಂದ ನಾವೆಲ್ಲರೂ ಆ ನಿಟ್ಟಿನಲ್ಲಿ ಬಾಳ ಹಾದಿಯನ್ನು ಸವೆಸೋಣ .

೦೫೫೩ ಎ ಎಂ ೦೬೧೨೨೦೨೧
ಅಮುಭಾವಜೀವಿ ಸುಧಾ ಮುಷ್ಟೂರು

Monday, December 4, 2023

ಕವನ

ಛಲ ಬೇಕು ಮಾನವನಿಗೆ
ಬದುಕಲು ಅದು ಬಲವಿದ್ದಂತೆ

ಛಲಬೇಕು ನುಡಿದಂತೆ ನಡೆಯಲು
ಛಲಬೇಕು ಪ್ರತಿ ಜೀವಿಗೂ ಪ್ರೀತಿ ಹಂಚಲು
ಛಲಬೇಕು ನಾಡ ಮಾನ ಉಳಿಸಲು
ಛಲಬೇಕು ಜಾತಿ ಸಂಕೋಲೆ ಕಳಚಲು

ಛಲಬೇಕು ಸ್ತ್ರೀ ಕುಲ ರಕ್ಷಿಸಲು 
ಛಲಬೇಕು ನ್ಯಾಯವಾಗಿ ಬಾಳಲು
ಛಲಬೇಕು ಪರಧನ ಬೇಡವೆನ್ನಲು
ಛಲಬೇಕು ಕಾಯಕ ಪೂಜೆಗೈಯಲು

ಛಲಬೇಕು ಹಿರಿಯರೊಳು ಕಿರಿಯನೆನ್ನಲು
ಛಲಬೇಕು ಧರ್ಮದಲಿ ದಯೆ ಕಾಣಲು
ಛಲಬೇಕು ನುಡಿವ ಮಾತಲಿ ಸತ್ಯ ಹೇಳಲು
ಛಲಬೇಕು ಹೊಂದಿಕೊಂಡು ಬಾಳಲು

ಛಲಬೇಕು ಗುರಿ ಸಾಧಿಸಲು
ಛಲಬೇಕು ಮದಗಳ ಬಿಡಲು
ಛಲಬೇಕು ಹೊಗಳಿಕೆಗೆ ಮರುಳಾಗದಿರಲು
ಛಲಬೇಕು ಅನ್ಯಾಯವ ಹೊಡೆದೋಡಿಸಲು

ಛಲಬೇಕು ಬಾಂಧವ್ಯಗಳ ಬೆಸೆಯಲು
ಛಲಬೇಕು ಅಹಿಂಸೆಯ ದಾಸನಾಗಲು
ಛಲಬೇಕು ದುಡಿಮೆಯ ಫಲವುಣ್ಣಲು
ಛಲಬೇಕು ಮೊದಲು ಮಾನವನಾಗಲು

೦೪೦೫೨೦೦೩
*ಅಮುಭಾವಜೀವಿ ಸುಧಾ  ಮುಸ್ಟೂರು*

Thursday, November 30, 2023

ಲೇಖನ

*ಸಂಜೆ ಎಂಬ ವಿಸ್ಮಯ*

ಈ ಸಂಜೆ ಪ್ರಕೃತಿಯ ಒಂದು ವಿಸ್ಮಯ. ಹಗಲೆಲ್ಲ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ತಮ್ಮ ತಮ್ಮ ಕಾರ್ಯದಲ್ಲಿ ತೊಡಗಿಕೊಂಡು ದಣಿದು ತಮ್ಮ ತಮ್ಮ ಗೂಡುಗಳನ್ನು ಸೇರುವ ಧಾವಂತದಲ್ಲಿದ್ದರೆ, ಧನ್ಯವಾದಗಳಿಗೆ ಭಾಜನನಾದ ಸೂರ್ಯನೂ ಕೂಡ ತನ್ನ ಕೆಲಸ ಮುಗಿಸಿ ಹೊರಡುವ ವೇಳೆ. 
  ಇನ್ನೇನು ಕೆಲವೇ ಕೆಲವು ಕ್ಷಣಗಳಲ್ಲಿ ಹೊಂಬಣ್ಣದ ಆಗಸದ ರಂಗೆಲ್ಲ ಮರೆಯಾಗಿ ಕತ್ತಲೆಯು ಆವರಿಸಿ ಎಲ್ಲ ಜೀವಿಗಳು ವಿಶ್ರಾಂತಿ ಪಡೆಯುವ ಸಲುವಾಗಿ ವಿರಮಿಸುತ್ತವೆ. ಈ ಸಂಜೆ ಇರುವುದು ಕೇವಲ ಸ್ವಲ್ಪ ಹೊತ್ತು ಮಾತ್ರ. ಅಷ್ಟರಲ್ಲಿ ಇಡೀ ಆಕಾಶ ಹರೆಯದ ಪೋರಿ ನಾಚುವಂತೆ ಕೆಂಪಾಗಿ, ಹಕ್ಕಿಗಳ ಕಲರವ ಮುಗಿಲು ಮುಟ್ಟಿ, ತಾಯಿಯನರಸುತ್ತ ಕರು ಓಡೋಡಿ ಬಂದು ಕೆಚ್ಚಲಿಗೆ ಬಾಯಿ ಹಾಕಿ ನೊರೆಯುಕ್ಕುವಂತೆ ಹಾಲು ಕುಡಿವಾಗ  ಸಂಭ್ರಮಕೆ ಎಣೆಯುಂಟೇ?!. ಹಿಂಡಿನಲಿ ಹೋಗಿದ್ದ ಕುರಿಯ ದಂಡು ಹಟ್ಟಿಯ ಬಳಿ ಬರುತ್ತಿದ್ದಂತೆ ಬೆಳಿಗ್ಗೆಯಿಂದ ಹಟ್ಟಿಯಲೇ ಇದ್ದ ಮರಿಗಳೆಲ್ಲ ತನ್ನ ತಾಯಿಯ ಹುಡುಕಲೂ ಅರಚುತ್ತ ಬರುವಾಗ ಅಷ್ಟೊಂದು ಮರಿಗಳಲ್ಲಿ ತನ್ನ ಮರಿಯನ್ನು ಹುಡುಕಿಕೊಳ್ಳಲು ತಾಯಿ ಪರದಾಡುವ ರೀತಿ , ತನ್ನ ಮರಿ ಸಿಕ್ಕ ಸಂಭ್ರಮದಲ್ಲಿ ಸಂತೃಪ್ತಿಯಿಂದ ಹಾಲನುಣಿಸುವ ಪರಿಯನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಹೊಟ್ಟೆ ತುಂಬಿದ ಖುಷಿಯಲ್ಲಿ ಕಿವಿನಿಮಿರಿಸಿ ಚಂಗನೆ ನೆಗೆದು ಹಾರಿ ಕುಣಿದು ಕುಪ್ಪಳಿಸುತ್ತಾ ಖುಷಿ ಪಡುವ ಸನ್ನಿವೇಶ ಮನುಜನಿಗಿಲ್ಲ. 

    ಇಂದು ಮನುಷ್ಯ ಪ್ರಕೃತಿಯಿಂದ ದೂರವಾಗಿ ತನ್ನದೇ ಕೃತಕ ವರ್ತುಲಗಳಲ್ಲಿ ಸಿಲುಕಿ ಒದ್ದಾಡುತ್ತಿದ್ದಾನೆ. ಇಲ್ಲಿ ಅವನಿಗೆ ಸಂಪಾದನೆಯ ಆಮಿಷ ಸಂತೋಷ, ಸಂಭ್ರಮಗಳನ್ನು ಅನೂಭವಿಸಲೂ ಆಗದಷ್ಟು ತೊಡಗಿಸಿಬಿಟ್ಟಿದೆ. ಹಗಲು ರಾತ್ರಿಗಳ ಪರಿವೇ ಇಲ್ಲದಂತೆ ದೂಡಿಯುತ್ತಿದ್ದಾನೆ. ಮುಂಜಾನೆ ಮುಸ್ಸಂಜೆಗಳ ಚೆಲುವನ್ನು ಆಸ್ವಾದಿಸಲಾಗದಷ್ಟು ಬಿಜಿಯಾಗಿಬಿಟ್ಟಿದ್ದಾನೆ. ತನ್ನವರಿಗಾಗಿ ಸಮಯ ಮೀಸಲಿಡಲಾಗದೆ ಏಕಾಂಗಿಯಗಿ ದುಡಿಮೆಯ ದಾಸನಾಗಿಬಿಟ್ಟಿದ್ದಾನೆ. ಮನುಷ ತಾಂತ್ರಿಕವಾಗಿ ಮುಂದುವರೆದಂತೆಲ್ಲ ಪ್ರಕೃತಿಯಿಂದ ತನ್ನ ಸಂಬಂಧವನ್ನು ಕಳಚಿಕೊಂಡು ಯಂತ್ರಗಳ ಗುಲಾಮನಾಗಿ ಭಾವನಗಳೇ ಇಲ್ಲದಂತೆ ಬದುಕುತ್ತಿದ್ದಾನೆ. 

   ಈ ಸಂಜೆಯಾಗುತ್ತಲೇ ಮರಗಿಡಬಳ್ಳಿಯ ಎಲೆಗಳು ಮುದುಡಿ ಮರಳುತ್ತವೆ. ಚಂದ್ರನ ಬೆಳದಿಂಗಳಲಿ ತಾರೆಗಳ ಹೊಳಪಿನಲಿ ಇರುಳೆಂಬುದು ವಿಶ್ರಾಂತಿಯ ಜೊತೆಗೆ ಜೀವಚೈತನ್ಯವನ್ನು ನೀಡುತ್ತದೆ. ದಣಿದ ಶ್ರಮವೆಲ್ಲವೂ ಮುಂಜಾನೆ ವೇಳೆಗೆ ಕಳೆದು ಮತ್ತೊಂದು ಹೊಸತನದ ಮಹಾ ಸಂಭ್ರಮಕೆ ನಾಂದಿ ಹಾಕುತ್ತದೆ. ಪ್ರಕೃತಿಯ ಈ ಗಡಿಯಾರ ಕ್ಷಣವೂ ಏರುಪೇರಾಗಂತೆ ನಡೆದುಕೊಂಡು ಬರುತ್ತದೆ. ಅದರೊಂದಿಗೆ ನೆಡೆಯುವ ಪ್ರತಿಯೊಂದು ಜೀವವೂ ಸಂತೃಪ್ತಿಯಿಂದ ಬದುಕುತ್ತವೆ. ಮಾನವ ಮಾತ್ರ ಅದಕ್ಕೆ ವಿರುದ್ಧವಾಗಿ ನಡೆದುಕೊಂಡು ದುಡಿಮೆ ಮತ್ತು ವಿಶ್ರಾಂತಿಗಳ ಅಸಮತೋಲನದಿಂದ ದೈಹಿಕ ಮತ್ತು ಮಾನಸಿಕ ಒತ್ತಡ ಅನುಭವಿಸಿ ಅನೇಕ ಖಾಯಿಲೆಗಳಿಗೆ ತುತ್ತಾಗಿ ನರಳುತಿದ್ದಾನೆ. ಯಾಂತ್ರಿಕ ಗಡಿಯಾರದ ನಾಗಾಲೋಟದಲ್ಲಿ ಜೈವಿಕ ಗಡಿಯಾರದ ದಿಕ್ಕು ತಪ್ಪಿಸಿ ಅನೇಕ ಅನರ್ಥಗಳಿಗೆ ಎಡೆಮಾಡಿಕೊಟ್ಟಿದ್ದಾನೆ. ಅವನ ಜೀವನ ಶೈಲಿ ಪ್ರಕೃತಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಮನುಜ ಮತ್ತು ಇತರೆ ಜೀವಸಂಕುಲದ ನಡುವೆ ಅಂತರ ಸೃಷ್ಟಿಯಾಗಿ ನಿತ್ಯ ಸಂಘರ್ಷ ಏರ್ಪಡುತ್ತಿದೆ. ಮಾನಸಿಕ ನೆಮ್ಮದಿ ದೈಹಿಕ ಆರೋಗ್ಯ ಎರಡೂ ಇಲ್ಲದೆ ಪರಿತಪಿಸುತ್ತಿದ್ದಾನೆ. 

  ಒಟ್ಟಿನಲ್ಲಿ ಪ್ರಕೃತಿಯ ಸಹಜ ಬೆಳವಣಿಗೆಯೊಂದಿಗೆ ಬದುಕುತ್ತ ಅದು ನೀಡುವ ಆಹ್ಲಾದಕರ ವಾತಾವರಣದಲ್ಲಿ ತನ್ಮಯನಾಗಿ ಭಾಗಿಯಾಗಿ ಬದುಕನ್ನು ನಿಜಕ್ಕೂ ಅರ್ಥಪೂರ್ಣ ಸಂತೃಪ್ತ ಭಾವದಲ್ಲಿ ಆಸ್ವಾದಿಸಿದಾಗ ಮಾತ್ರ ಬದುಕು ಸುಂದರವಾಗಿರುತ್ತದೆ. 

0624ಪಿಎಂ01122018
*ಅಮುಭಾವಜೀವಿ ಮುಸ್ಟೂರು*

Saturday, November 25, 2023

ಕವನ

ನಾನಲ್ಲ , ಬರೀ ಭಾವಜೀವಿ!!!

ಎದೆಯ ಭಾವಗಳ ಹಡೆದು
ಮನದ ನೋವುಗಳ ನೆನೆದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ನೂರು ನೆನಪುಗಳ ಸವಿದು
ಸೂರು ಕಾಣದೆ ನೊಂದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!

ಅಕ್ಕರೆಯ ಮಾತುಗಳಿಗೆ ಹಂಬಲಿಸಿ
ಬಿಕ್ಕುವ ಭಾವನೆಗಳ ಹೆಕ್ಕಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಕನಿಕರದ ಹೃದಯವೇ ಪಡೆದು
ಮುನಿಸಿರದ ಮೌನದ ಕುರಿತು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!

ಕಂಡ ಕಷ್ಟಗಳ ಸರಮಾಲೆ
ಸಹಿಸಿ ಪಡೆದ ಅನುಭವದಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ಚಂದ ನಿಸರ್ಗದ ಚೆಲುವಿಗೆ
ಮನಸೋತು ಕುಣಿ ಕುಣಿದು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!

ಅಕ್ಷರಗಳ ಸಾಕ್ಷಾತ್ಕಾರದಲ್ಲಿ
ಪ್ರೀತಿಯ ಪುರಸ್ಕಾರ ಬಯಸಿ
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!
ನಿನ್ನೆ ನಾಳೆಗಳ ಪಯಣದಲಿ
ಇದ್ದು ಹೋಗಲು ಬಂದವ ನಾನು
ಬರೆವ ಕವಿ ನಾನಲ್ಲ , ಬರೀ ಭಾವಜೀವಿ!!!

೦೪೧೧ಪಿಎಂ೦೭೧೧೨೦೨೩
*ಅಮುಭಾವಜೀವಿ ಮುಸ್ಟೂರು*
[11/9, 10:16 AM] +91 94493 36793: ನಮಸ್ತೆ, ನಾನು ಕವಿಯಲ್ಲ, ಭಾವಜೀವಿ ಅಷ್ಟೇ, ಎನ್ನುವ ಮನದ ಸೂಪ್ತ ಚೇತನದ ಪದಗುಚ್ಛದ ಅಕ್ಷರ ದಾಸೋಹವನನ್ನೇ ಬಡಿಸಿ ಕವನದ ಮೆರುಗನ್ನು ನೀಡಿದ್ದೀರಿ, ಅಭಿನಂದನೆ



*ಬರದ ತನಗ*

ಮಳೆ ಬರದೆ ಬರ
ಜಗವಾಗಿ ತತ್ತರ
ಜೀವನವೇ ದುಸ್ತರ
ಇನ್ನಿಲ್ಲ ಆ ಚಿತ್ತಾರ

ಕೆರೆ ಪಳೆಯುಳಿಕೆ
ಬಾಯಾರಿ ಬಿಕ್ಕಳಿಕೆ
ಏನಿಲ್ಲ ಹೆಗ್ಗಳಿಕೆ
ಬಿಸಿಲ ಬಾಯಾರಿಕೆ

ಒಣಗಿದ ಬೆಳೆಯು
ಕಿಡಿಸೋಕಿ ಸುಟ್ಟಾಯ್ತು
ಹಿಡಿ ಕಾಳು ಬೇಡಲು
ಸುಡುಗಾಡ ಕಾವಲು

ಗುಟುಕು ನೀರಿಲ್ಲಿಲ್ಲ
ಕುಟುಕು ಜೀವವಿಲ್ಲ
ಕಟುಕ ಬರಗಾಲ
ಸಂಕಷ್ಟ ಕಳಿಲಿಲ್ಲ

ಬಂಜೆ ಮೋಡದ ಗರ್ಭ
ಸಂಜೆ ಮಳೆ ತರ್ಲಿಲ್ಲ
ಬರಿದು ಬದುಕಲಿ
ನೆಮ್ಮದಿಯು ಇನ್ನೆಲ್ಲಿ

೦೯೧೪ಪಿಎಂ೦೭೧೧೨೦೨೩
*ಅಮುಭಾವಜೀವಿ ಮುಸ್ಟೂರು*

ಏಕೆ ಬಿಟ್ಟು ಹೋದೆ ಪ್ರಭುವೇ
ಮೊರೆಯನೇಕೆ ಕೇಳಿದಿರುವೆ

ದಟ್ಟ ಕಾನನದಲಿ ಒಂಟಿ ಬಿಟ್ಟು ಹೋದೆ
ಹೀಗೆ ಮಾಡುವಂತ ಪಾಪ ನಾನೇನು ಮಾಡಿದೆ
ಕೂಗಿ ಕರೆಯಲು ಧ್ವನಿ ಮೊದಲಿಲ್ಲ
ಅಳುವ ಶಕ್ತಿ ನನ್ನೊಳಗೆ ಕೊಂದಿದೆಯಲ್ಲ
ದಾರಿ ತೋರಲು ಬೇಗ ಬಾ ಗುರುವೇ
ನಿನ್ನ ಕಂದನಾ ರೋದನೆ ಕೇಳುತ್ತಿಲ್ಲವೇ

ನೀ ತೋರಿದ ದಾರಿಯಲ್ಲಿ ನಾ ನಡೆದು ಬಂದೆ
ಇದ್ದಲ್ಲೇ ಅಳಿದುಳಿದೆ ಯಾಕಯ್ಯ ತಂದೆ
ಕರುಣೆ ಬಾರದೆ ನನ್ನ ಕಂಬನಿಧಾರೆ ಕಂಡು
ಕರಪಿಡಿದು ನನ್ನನೆತ್ತಿಕೊ ಕಂದ ಎಂದು
ಸಾಕಯ್ಯ ನನಗೀ ಭವದ ಬಂಧನ
ನೀಡಯ್ಯ ಮಲಗುವೆ ನಿನ್ನ ಮಡಿಲನ್ನ
 
ಕಷ್ಟಗಳ ಕ್ರೂರ ಮೃಗಗಳು ಕಾದು ಕುಳಿತಿವೆ
ಜೀವವಿದು ಬಾಯಿಗೆ ಬಂದು ನರಳುತ್ತಿದೆ
ಹುಲ್ಲು ಕಡ್ಡಿಯ ಆಸರೆಯೊಂದ ಕಾಣದೆ
ಕಲ್ಲಾಗಿ ಕುಳಿತೆ ಏಕೆ ನನ್ನ ಕಾಪಾಡದೆ
ನಾ ಬೇಡುವ ಪರಿ ಸಾಲದಾಯಿತೆ
ನನಗೆ ಕಷ್ಟ ಕೊಡುವುದೇ ನಿನಗಿಷ್ಟವಾಯಿತೆ

೦೬೫೬ಎಎಂ೦೮೧೧೨೦೨೩
ಅಮುಭಾವಜೀವಿ ಮುಸ್ಟೂರು 

ಬದಲಾಗದಿರು ಸಖ ನೀ ಎಂದೆಂದಿಗೂ 

ಜೀವ ವೀಣೆ ಮಿಡಿವ ಭಾವ
ನೀನೆ ನಲ್ಲ ಎಂದೆಂದಿಗೂ
ನಿನ್ನನೇ ನಂಬಿ ಬಂದಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ 

ಕಣ್ಣು ಕಣ್ಣು ಕಲೆತ ಭಾವ
ಹೃದಯ ತಂತಿ ಮೀಟುವ
ಒಲವ ಬಯಸುತಲಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ 

ಹೆತ್ತವರ ಬಿಟ್ಟು ಬಂದೆ ನಿನ್ನೊಂದಿಗೆ
ಒಡನಾಡಿಗಳ ಒಡನಾಟ ತೊರೆದಿರುವೆ
ನೀನೇ ನನಗೆಲ್ಲವೆಂದು ಬಾಳುತಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ 

ಒಡಲೊಳಗೆ ಬಯಕೆ ಮೊಳೆತು
ಎದೆಯೊಳಗೆ ನಿನ್ನ ರೂಪ ನಿಂತು
ಬಾಳಿನಾಸರೆ ನೀನೆಂದು ನಂಬಿಹೆ
ಬದಲಾಗದಿರು ಸಖ ನೀ ಎಂದೆಂದಿಗೂ 

ನಿನ್ನೆಗಳ ನಾ ಹೇಗೋ ಕಳೆದೆ
ನಾಳೆಗಳು ಹೇಗೋ ಗೊತ್ತಿಲ್ಲ
ಇಂದಿನ ಖುಷಿ ನಿನ್ನ ಕೈಲಿದೆ
ಬದಲಾಗದಿರು ಸಖ ನೀ ಎಂದೆಂದಿಗೂ 

ಜೀವವಿರುವವರೆಗೆ ನೀನೇ ನಲ್ಲ
ನೀನಲ್ಲದೆ ಬೇರೇನೂ ಬೇಕಿಲ್ಲ
ಉಸಿರೊಂದಿಗೆ ಉಸಿರಾಗಿ ಬೆರೆತಿರುವೆ
ಬದಲಾಗದಿರು ಸಖ ನೀ ಎಂದೆಂದಿಗೂ 

೦೭೫೩ಪಿಎಂ೦೮೧೧೨೦೨೩
*ಅಮುಭಾವಜೀವಿ ಮುಸ್ಟೂರು*
[11/9, 4:08 PM] +91 94493 36793: ನಮಸ್ತೆ, ನನ್ನ ಬಾಳಿಗೆ ನಿನ್ನ ಸರ್ವಸ್ವವೇ ಬಿಟ್ಟು , ನನ್ನ ಜೀವನದ ಕಣ್ಣು,ಮನದ ಹೊನ್ನು, ಇವೆಲ್ಲವೂ ನಿನ್ನದೇ ಎನ್ನುವ ಮೂಲಕ ಕವನದ ಚೆಂದದ ಸಾಲುಗಳು, ಅಭಿನಂದನೆ
[11/9, 4:32 PM] +91 94493 36793: ನಮಸ್ತೆ, ಎಲ್ಲರನ್ನೂ ಬಿಟ್ಟು ನಿನ್ನಲ್ಲಿ ಗೆ ಬಂದಿರುವೆ, ಅಂದು-ಇಂದು ನಿನ್ನಲ್ಲಿಯೇ ಇದೆಯೆಂದು ಕವನ ದಾಖಲಿಸಿದೆ, ಅಭಿನಂದನೆ
*ತನಗ*

ಯುದ್ದದ ಕರಾಳತೆ
ಹಿಂಸೆಯ ಅಟ್ಟಹಾಸ
ರಕ್ತ ಪಿಪಾಸು ಅದು
ಬೇಕಿಲ್ಲ ಮಂದಹಾಸ

೦೧೩೬ಪಿಎಂ೦೯೧೧೨೦೨೩
*ಅಮುಭಾವಜೀವಿ ಮುಸ್ಟೂರು* .

*ತನಗ*

ಯುದ್ದ ರಕ್ಕಸಿ ದಾಹ
ಜೀವಹರಣ ಮೋಹ
ಕರುಣೆ ತೋರಲಿಲ್ಲ
ಉನ್ಮತ್ತರ ವ್ಯಾಮೋಹ

೦೨೪೦ಪಿಎಂ೦೯೧೧೨೦೨೩
*ಅಮುಭಾವಜೀವಿ ಮುಸ್ಟೂರು*

ನೀ ನನ್ನ ಬೆಳಕಲ್ಲ ಬಿರುಗಾಳಿ 

ಮೆತ್ತಿದ ಮಂಜಿನ ಹನಿ ಕರಗಿ
ಭರವಸೆ ಬತ್ತಿ ಹೋಗಿವೆ
ನಂಬಿಕೆ ದ್ರೋಹದ ಸುಳಿ
ಬಾಳ ಕತ್ತಲಿಗೆ ತಳ್ಳಿಯಾಯ್ತು

ನೀ ನನ್ನ ಬೆಳಕಲ್ಲ ಬಿರುಗಾಳಿ
ಆ ಬಿರುಸಿಗೆ ಸಿಕ್ಕು ಬರಿದಾದೆ
ಹಣತೆ ಹಚ್ಚುವೆ ಎಂದುಕೊಂಡಿದ್ದೆ
ಕಾಡ್ಗಿಚ್ಚಿಗೆ ಸಿಕ್ಕು ಬೆಂದು ಹೋದೆ

ಬಳಿ ಬಂದೆ ಬೆಳದಿಂಗಳಂತೆ
ಸುಳಿಯಂತೆ ಪಾತಾಳಕೆ ತಳ್ಳಿದೆ
ತೀರದಲಿ ವಿರಮಿಸುವಾಸೆಗೆ
ಸುನಾಮಿಯಂತೆರಗಿ ಆಘಾತ ನೀಡಿದೆ

ಒಲವ ದೀಪಾವಳಿ ಹಬ್ಬದಿ
ಬಿರುಸಾಗಿ ಆರ್ಭಟಿಸಿ ಭಸ್ಮಗೈದೆ
ದೀಪ ದೀಪವ ಬೆಳಗುವ ಮೊದಲೆ
ನಂದುವ ಆತಂಕ ತಂದೊಡ್ಡಿದೆ

ಬೆಳಕ ಬಯಸಿ ಬಂದವಳು
ಪತಂಗದಂತೆ ರೆಕ್ಕೆ ಸುಟ್ಟು ಕೊಂಡೆ
ಬಾನಿಗೆ ಹಾರುವ ಭ್ರಮೆಯಲ್ಲಿ
ಆಸರೆ ಕಾಣದೆ ಕಂಗಾಲಾದೆ

ಬೇಡ ಬಿಡು ಇನಿಯ
ನಮ್ಮಂತೆ ನಡೆಯದು ಸಮಯ
ಸೇರದ ತೀರದ ಬಾಳು ನಮ್ಮದು
ಇನ್ನು ಒಲವ ಗೂಡು ಸೇರದು

೦೭೪೩ಪಿಎಂ೦೯೧೧೨೦೨೨
*ಅಮುಭಾವಜೀವಿ ಮುಸ್ಟೂರು*

ಹೂಬನ

ಎದೆಯ ಹೊಲದಲ್ಲಿ
ಭಾವಗಳು ಅರಳಿ
ಒಲವ ಹೂಬನವು
ನಳನಳಿಸಿಹುದು

ಯುದ್ಧಗಳು 

ಮನುಕುಲದ ನಾಶ
ಯುದ್ಧದ ಈ ಉನ್ಮಾದ
ನರ ರಕ್ತ  ಪಿಪಾಸು
ಮದವೇರಿದ ಜನ



ಹೂಬನ

ಎದೆಯ ಹೊಲ
ಹಸಿರು ಸಿರಿಯಲ್ಲಿ
ಹೂಬನದಂತೆ
ನಳನಳಿಸುತ್ತಿದೆ

ಕಾಯುವ ಕರುಣೆ

ಬಳಲಿ ಜೀವ
ಅಳಿದುಳಿದ ಭಾವ
ಬೊಗಸೆ ಜಾರಿ
ಕಾಯುವ ಕರುಣೆಯ
ಹಂಬಲದ ಭಿಕ್ಷುಕ

ಯುದ್ಧಗಳು

ನರ ಮಾನವ
ಯುದ್ಧೋನ್ಮಾದದಿ ಕುದ್ದು
ರಕ್ತ ಮಜ್ಜನ
ನಿಲ್ಲದ ಹಿಂಸೆ ನಿತ್ಯ
ಸಾವಿನ ಸರದಾರ

ಭಯದ ಕಾರ್ಮೋಡ

ನಿಂತಲ್ಲೇ ನೆಲ
ಕುಸಿವ ವೇಳೆಯಲ್ಲಿ
ಭಯದ ಕಾರ್ಮೋಡವು
ನೆಮ್ಮದಿಯ ಕಸಿದು
ಕೈಚೆಲ್ಲಿದೆ ಬಯಕೆ
೧೦೧೨ಪಿಎಂ೦೯೧೧೨೦೨೩
ಅಮುಭಾವಜೀವಿ ಮುಸ್ಟೂರು
ಶಿಕ್ಷಕರು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಜಗಳೂರು ತಾಲೂಕು ದಾವಣಗೆರೆ ಜಿಲ್ಲೆ


ಸಿರಿಯ ನಾ ಬೇಡಲಿಲ್ಲ 

ಎಡವಿ ಬಿದ್ದಿದೆ ಬದುಕು
ದಡ ಸೇರುವೆ ಅಭಯ ನೀಡು
ಬರುವ ಸಂಕಷ್ಟ ನೂರಿರಲಿ
ಎದುರಿಸುವ ಶಕ್ತಿ ಕೊಡು

ಬಡತನದ ಬೇಗೆಯಲಿ ಬೆಂದಿರುವೆ
ಸಿರಿಯ ನಾ ಎಂದು ನಿನ್ನ ಬೇಡಲಿಲ್ಲ
ಖುಷಿಯ ಕಳೆದುಕೊಂಡು ಬಳಲಿರುವೆ
ಆಸರೆಯ ಬಯಸಿಹೆ ಸಿಗದೇ ಹೋಯ್ತಲ್ಲ

ಬಂಧುಗಳೆಲ್ಲ ಕೈ ಬಿಟ್ಟು ಹೋದರು
ಬಾಳಲಿ ನನ್ನವರೆಂಬುವರಾರಿಲ್ಲ
ನನ್ನದೆನ್ನುವುದೆಲ್ಲ ಇಲ್ಲದೆ ಹೋದರೂ
ಗೆಲ್ಲುವ ಭರವಸೆಯ ಕಳೆದುಕೊಂಡಿಲ್ಲ

ಒಂಟಿ ಪಯಣದ ಹಾದಿಯಲ್ಲಿ
ನಂಬಿಕೆಯ ನಿಟ್ಟುಸಿರು ಬಿಟ್ಟು
ಹಂಬಲಿಸುತಿರುವೆ ಬಾಳಲಿ
ಯಶಸ್ಸು ಸಾಧಿಸುವ ಛಲದಿ

ಬಲವ ಕೊಡು ಎದ್ದು ನಿಲ್ಲಲು
ಗೆಲುವು ಕೊಡು ಜಗಕೆ ಸಾರಿ ಹೇಳಲು
ಸಿರಿಯ ಬೇಡುವುದಿಲ್ಲ ಹರಿಯೇ
ಗುರಿಯೆಡೆಗೆ ನನ್ನ ನಡೆಸಿಬಿಡು

೦೯೫೪ಪಿಎಂ೧೦೧೧೨೦೨೩
*ಅಮುಭಾವಜೀವಿ ಮುಸ್ಟೂರು*

ಅಮಾವಾಸ್ಯೆಯ ಕತ್ತಲಲ್ಲಿ

ಬಾಳ ದಾರಿಯಲ್ಲಿ
ಚಂದ್ರನ ತೇರಿನಲ್ಲಿ
ಒಲವಿನ ಜೋಡಿ ನಾವು
ಕಾಣುವ ಬಿಂಬದಲ್ಲಿ
ಕಣ್ಣಿನ ರೆಪ್ಪೆಯಂತೆ
ನಾ ಕಾಯುವೆ ಇರಲಿ ವಿಶ್ವಾಸವು

ಅಮಾವಾಸ್ಯೆಯ ಕತ್ತಲಲ್ಲಿ
ಕಣ್ಬೆಳಕಾಗಿ ಉಳಿಯುವೆ
ಬಾಳ ದಡ ಸೇರಲು
ಹುಣ್ಣಿಮೆಯ ರಾತ್ರಿಯಲ್ಲಿ
ಉಕ್ಕೋ ಸಾಗರಕೆ ತೀರವಾಗುವೆ
ಒಲವ ಅಮೃತ ನಿನಗೆ ಕುಡಿಸಲು

ಹೂವಂತೆ ನೀನು ಬಾಳಲಿ
ದುಂಬಿಯಂತೆ ನಾ ನಿನ್ನ ಜೊತೆಯಲ್ಲಿ
ಮಧು ಹೀರುವೆ ಹದ ಪ್ರೀತಿಯಲ್ಲಿ
ಧಾವಂತದ ಈ ಬದುಕಿನಲ್ಲಿ
ಏಕಾಂತದ ಈ ಸಮಯದಲ್ಲಿ
ಸುಖಾಂತದ ಒಲವ ಬೇಡುವೆ ನಿಲ್ಲಿ

ಕೈ ಮೇಲೆ ಕೈ ಇಟ್ಟು ಆಣೆ ಮಾಡು
ಎಂದೆಂದೂ ನಿನ್ನವನಾಗಿರುವೆ ನೋಡು
ಜಗಕ್ಕೆ ಮಾದರಿಯಾಗದೆ ನಮ್ಮೀ ಪಾಡು
ಚಂದಿರನೂರಲಿ ಕಟ್ಟೋಣ ಪುಟ್ಟಗೂಡು
ಸದಾ ಬೆಳಕಾಗಿರಲಿ ಬೆಳದಿಂಗಳ ಮಾಡು
ಎಲ್ಲ ಮರೆತು ಹಾಯಾಗಿ ಗುನುಗೋಣ ಹಾಡು

0532ಪಿಎಂ೧೧೧೧೨೦೨೩
*ಅಮುಭಾವಜೀವಿ ಮುಸ್ಟೂರು*

ಕನ್ನಡ ಕವನ ಸಂಚಲನ ಬಳಗದ ಸ್ಪರ್ಧೆಗಾಗಿ

ವಿಷಯ:- *ದೀಪದಿಂದ ದೀಪವ ಹಚ್ಚುವ ದೀಪಾವಳಿ*

ಶೀರ್ಷಿಕೆ :- *ದಾರಿದೀಪ*

ಕತ್ತಲಿಂದ ಬೆಳಕಿನೆಡೆಗೆ
ಸಾಗಬೇಕು ನಮ್ಮ ನಡಿಗೆ

ಸಾಲು ದೀಪಗಳ ಸಂಸಾರ
ಎಣ್ಣೆ ಬತ್ತಿಗಳೇ ಅದಕಾಧಾರ
ದೀಪದಿಂದ ದೀಪ ಹಚ್ಚುವ
ಸಂಸ್ಕಾರವೇ ಬೆಳಕಿನ ದೀಪಾವಳಿ

ಒಂದು ಸಣ್ಣ ಹಣತೆ
ಕೋಣೆಯ ಕತ್ತಲೆ ಕಳೆಯುವುದು
ಜ್ಞಾನದ ಜ್ಯೋತಿ ಮನದ
ಅಜ್ಞಾನವ ತೊಳೆಯುವುದು

ಯಾರೂ ಇಲ್ಲಿ ಪರಿಪೂರ್ಣರಿಲ್ಲ
ಒಬ್ಬರಿಗೊಬ್ಬರು ಇಲ್ಲಿ ದಾರಿದೀಪ
ಜ್ಯೋತಿ ಬೆಳಗೋ ಪ್ರೀತಿ ಬೇಕು
ಕಳೆಯಲು ಮನದ ದ್ವೇಷದ ಶಾಪ

ಸ್ನೇಹದ ಎಣ್ಣೆ ಬೇಕು
ಪ್ರೀತಿಯ ಬತ್ತಿ ಸಾಕು
ಅನುಬಂಧದ ಹಣತೆ ಬೆಳಗಲು
ಅಂತರಂಗ ಬೆಳಕಾಗಲು

ಬಾಳ ಕತ್ತಲಿಗೆ ಹಣತೆ ಹಚ್ಚಿ
ಒಬ್ಬರ ಮುಖ ಒಬ್ಬರು ನೋಡೋಣ
ಒಲವಿನ ಪ್ರಣತಿ ಬೆಳಗುವ ತನಕ
ಬಾಳ ಪಯಣ ಸವೆಸೋಣ

೦೮೧೨ಪಿಎಂ೧೨೧೧೨೦೨೩
*ಅಮುಭಾವಜೀವಿ ಮುಸ್ಟೂರು*


ಮಗುವಾಗಿ ನಿನ್ನ ಕೈ ತುತ್ತು ತಿನ್ನುವಾಸೆ ಇನಿಯ 

ಒಂದು ಅಪರೂಪದ ಬಂಧ
ನನ್ನ ನಿನ್ನ ಈ ಸಂಬಂಧ
ಹೂವೊಳಗೆ ಸೇರಿದಂತೆ ಮಕರಂದ
ಬಡತನದೊಳಗೂ ಒಲವಿದೆ
ಆ ಪ್ರೀತಿಯ ನೆರಳಲಿ ಬಾಳಿದೆ
ಜೇನಾಗುವ ಸವಿದು ಸೌಗಂಧ

ಸಿರಿಯ ಬೇಡುವುದಿಲ್ಲ ಬಾಳಲಿ
ನಿನ್ನೊಲವೊಂದು ಸಾಕು ನನಗೆ
ಮಗುವಾಗಿ ನಿನ್ನ ಕೈ ತುತ್ತು ತಿನ್ನುವಾಸೆ ಇನಿಯ 
ಎದೆಯ ಭಾವಗಳ ಗೊಂಚಲು
ನಲ್ಲ ನಿನ್ನ ಈ ಚಂದದ ಮಡಿಲು
ಸಿರಿವಂತಿಕೆ ಬೇಡದ ಒಲವೇ ವಿಸ್ಮಯ

ಜೊತೆ ಜೊತೆಯಲಿ ಸಾಗಲಿ ಜೀವನ
ನಗುನಗುತ ಬಾಳಾಗಲಿ ಹೂಬನ
ಅದರಲಿ ನೀ ತುಂಬಿದೆ ಒಲವ ಹೂರಣ
ಅನುದಿನ ಹಿತ ತರಲಿ ಆಲಿಂಗನ
ಅನುಕ್ಷಣವೂ ಆಪ್ಯಾಯಮಾನ
ನಿನ್ನ ಬಾಳಿಗೆ ನಾನಾಗುವೆ ತೋರಣ

ಬಡತನವಿಲ್ಲ ನಿನ್ನೊಲುಮೆಯಲಿ 
ಶ್ರೀಮಂತಿಕೆ ಬೇಕಿಲ್ಲ ಬಾಳಿನಲಿ
ಗಂಜಿ ಕುಡಿದರೂ ನಂಜಿಲ್ಲ ಅದರಲಿ
ಪ್ರೀತಿಯ ಕೈ ತುತ್ತು ಬಾಳ ಸಂಪತ್ತು
ಸಂಗಾತಿ ನೀ ತೋರಿದೆ ಸಂಪ್ರೀತಿ
ಸಂತೃಪ್ತೆ ನಾ ನಿನ್ನ ಒಲವ ಸುಧೆಯಲಿ

೦೭೪೨ಪಿಎಂ೧೩೧೧೨೦೨೩
*ಅಮುಭಾವಜೀವಿ ಮುಸ್ಟೂರು*










ಹಚ್ಚಿದ ಹಣತೆ ಬೆಳಕಿನಲ್ಲಿ ಹೊಸತು ಕರೆಯಬಾರದೇ ಇಂದು 

ಲೇಖನ

*ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಭಾಗಿದಾರರ ಪಾತ್ರ*

ಮಕ್ಕಳು ಮನುಕುಲದ ಕುಸುಮಗಳು, ಅವುಗಳನ್ನು ಪ್ರೀತಿಯಿಂದ ಪೋಷಿಸಬೇಕು, ಮನಸ್ಸು ನಿಷ್ಕಲ್ಮಶ ಬಿಳಿ ವಸ್ತ್ರದಂತೆ ಅಲ್ಲಿ ನಕಾರಾತ್ಮಕತೆಯ ಕರಿ ಛಾಯೆ ಮೂಡದಂತೆ ಎಚ್ಚರ ವಹಿಸಬೇಕು. ಮಕ್ಕಳ ವ್ಯಕ್ತಿತ್ವ ಗೋಡೆಗೆ ಎಸೆದ ಚಂಡಿನಂತೆ. ಅದಕ್ಕೆ ನಾವೇನನ್ನು ತುಂಬುತ್ತೇವೆಯೋ ಪಲಿತಾಂಶವನ್ನು ಕೊಡುತ್ತದೆ. ಯಾವ ಮಗು ಬಲಹೀನವಲ್ಲ ಯಾವ ಮಗು ನಿಷ್ಪ್ರಯೋಜಕವಲ್ಲ. ಹಿರಿಯರ ನಡೆ ನುಡಿಗಳು ಮಗುವಿನ ಮನಸ್ಸಿನಲ್ಲಿ ಪ್ರತಿಫಲನಗೊಂಡು ಸಾಕ್ಷಾತ್ಕಾರಗೊಳ್ಳುತ್ತದೆ. ಹಾಗಾಗಿ ನಾವು ಮಕ್ಕಳ ಮುಂದೆ ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕಾಗುತ್ತದೆ. ತಂದೆ ತಾಯಿ ಮತ್ತು ಗುರುಗಳ ಮಾರ್ಗದರ್ಶನ ಮಕ್ಕಳಿಗೆ ಅತಿ ಅವಶ್ಯಕ. ಈ ಮೂರು ಸ್ಥರಗಳಲ್ಲಿ ವ್ಯತ್ಯಾಸವಾದರೆ ಮಕ್ಕಳ ಭವಿಷ್ಯ ಹಾದಿ ತಪ್ಪುತ್ತದೆ. ತಂದೆ ತಾಯಿ ಮತ್ತು ಗುರುಗಳನ್ನು ಹಿಂಬಾಲಿಸುತ್ತದೆ. ಮಗುವಿಗೆ ಈ ಮೂವರ ಮಾತು ಭೇದ ವಾಕ್ಯ.

ಮಗು ಗೆಳೆಯರೊಂದಿಗೆ ಆಟಿಕೆಗಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತದೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳು ಯಾರೊಂದಿಗೆ ಬೆರೆಯುತ್ತಾರೆ ಯಾವ ವಸ್ತುಗಳೊಂದಿಗೆ ಆಡುತ್ತಾರೆ ಎಂಬುದನ್ನು ಗಮನಿಸಬೇಕು. ವ್ಯಕ್ತಿ ಮತ್ತು ಒಳ್ಳೆಯ ವಸ್ತುಗಳು ಅವರ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗುತ್ತವೆ. ಹಂತದಲ್ಲಿ ಮಕ್ಕಳಿಗೆ ಒತ್ತಾಯದ ಓದಿಗಿಂತ ಆಸಕ್ತಿಯನ್ನು ಕೆರಳಿಸುವಂತಹ ವಿಚಾರಗಳ ಪುಸ್ತಕಗಳನ್ನು ಓದಲು ಮಾರ್ಗದರ್ಶನ ಮಾಡಬೇಕು ಹಾಗೂ ಕಲಿತದ್ದನ್ನು ಓದಿದ್ದನ್ನು ಗೆಳೆಯರೊಂದಿಗೆ ಹಂಚಿಕೊಂಡು ಅವರನ್ನು ಸಹ ತನ್ನ ಓದಿನ ಅನುಭವವನ್ನು ಇಮ್ಮಡಿಗೊಳಿಸುವಂತಹ ವಾತಾವರಣವನ್ನು ಮಗು ಸೃಷ್ಟಿ ಮಾಡಿಕೊಳ್ಳಲು ಪ್ರೇರೇಪಿಸಬೇಕು. ಮಗು ಕೇಳುತ್ತದೆ ಎಂದು ಎಲ್ಲವನ್ನೂ ಖರೀದಿಸಿ ಕೊಡುವ ಗೀಳಿಗೆ ಬೀಳಬಾರದು. ಆ ವಸ್ತುವಿನ ಮೌಲ್ಯ ಗೊತ್ತಾಗಬೇಕೆಂದರೆ ಅದನ್ನು ಪಡೆಯುವ ಕಷ್ಟವೂ ಆ ಮಗುವಿಗೆ ಗೊತ್ತಿರಬೇಕು ಆಗ ಆ ವಸ್ತುಗಳನ್ನು ಅತ್ಯಂತ ಜಾಗರೂಕತೆಯಿಂದ ಅಷ್ಟೇ ಆಸ್ತೆಯಿಂದ ಕಾಪಾಡಿಕೊಂಡು ಬರುತ್ತದೆ. ಕೇಳಿದ್ದನ್ನೆಲ್ಲ ಕೊಡಿಸುವ ಬದಲು ಅವಶ್ಯಕತೆ ವಾಗಿರುವುದನ್ನು ಮಾತ್ರ ಮಕ್ಕಳಿಗೆ ಕೊಡಿಸಬೇಕು.

   ಮಕ್ಕಳಿಗೆ ಮೌಲ್ಯಗಳ ಪರಿಚಯವಾಗಬೇಕು. ನೈತಿಕ ಮೌಲ್ಯಗಳನ್ನು ಎಳವೆಯಿಂದಲೇ ಅದರ ಮನಸ್ಸಿನೊಳಗೆ ಬಿತ್ತಬೇಕು. ಮೌಲ್ಯಗಳನ್ನು ಬಿತ್ತುವ ಜನರ ವ್ಯಕ್ತಿತ್ವ ಸಹ ಮೌಲ್ಯಯುತವಾಗಿರಬೇಕು. ಹೇಳುವುದು ಒಂದು ಮಾಡುವುದು ಇನ್ನೊಂದು ಆದರೆ ಮಗುವಿನ ಮನಸ್ಸಿನಲ್ಲಿ ಗೊಂದಲ ಉಂಟಾಗಿ ಅದು ಬೇರೊಂದು ಹಾದಿ ಹಿಡಿಯುವ ಪ್ರಮೇಯ ಬರುತ್ತದೆ. ಅದನ್ನೇ ಆದರೂ ಮಕ್ಕಳಿಗೆ ಒತ್ತಾಯ ಪೂರಕವಾಗಿ ತುರುಕುವ ಬದಲು ಮಗುವಿನ ಆಸಕ್ತಿಗನುಗುಣವಾದ ಮೌಲ್ಯಗಳನ್ನು ತಿಳಿಸುತ್ತಾ ಹೋಗಬೇಕು. ಕೆಲವು ಮಕ್ಕಳು ಸೌಮ್ಯವಾಗಿರುತ್ತವೆ ಇನ್ನೂ ಕೆಲವು ಮಕ್ಕಳು ಅಸಹಜವಾಗಿ ವರ್ತಿಸುತ್ತಿರುತ್ತವೆ. ಸಂದರ್ಭದಲ್ಲಿ ಮಕ್ಕಳನ್ನು ತಾರತಮ್ಯ ಮಾಡದೆ ಸಮಚಿತ್ತದಿಂದ ಸ್ವೀಕರಿಸುವ ಮನಸ್ಥಿತಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ಒಳ್ಳೆಯ ಮಕ್ಕಳು ಕೆಟ್ಟ ಮಕ್ಕಳು ಎಂದು ಬೇರ್ಪಡಿಸಿ ಆ ಕೀಳರಿಮೆ ಮನಸ್ಸಿನಲ್ಲಿ ಬೇರೂರುವಂತೆ ಮಾಡುವ ಬದಲು ಒಳ್ಳೆಯವರನ್ನು ಹೊಗಳದೇ ಕೆಟ್ಟವರನ್ನು ತೆಗಳದೇ ಆಯಾ ಸನ್ನಿವೇಶಕ್ಕೆ ತಕ್ಕಂತೆ ಮಕ್ಕಳಲ್ಲಿ ನೈತಿಕ ಮೌಲ್ಯಗಳ ತಿಳುವಳಿಕೆ ನೀಡುವ ಮೂಲಕ ಅವರ ವ್ಯಕ್ತಿತ್ವದಲ್ಲಿ ಆಗಬಹುದಾದ ಆ ಬದಲಾವಣೆಗಳನ್ನು ಸರಿದಾರಿಯಲ್ಲಿ ಮುನ್ನಡೆಸುವ ಚಾಣಾಕ್ಷತೆ ಅವರನ್ನು ಮಾರ್ಗದರ್ಶಿಸುವವರಲ್ಲಿ ಇರಬೇಕಾಗುತ್ತದೆ.

ಮನೆಯಲ್ಲಿ ತಂದೆ ತಾಯಿಗಳು ಶಾಲೆಯಲ್ಲಿ ಶಿಕ್ಷಕರು ಸಮಾಜದಲ್ಲಿ ಹಿರಿಯರು ಪ್ರತಿಯೊಂದು ಮಗುವಿನ ಚಲನವಲನಗಳ ಬಗ್ಗೆ ಗಮನಹರಿಸಿ ಯಾವ ಮಗುವಿಗೆ ಯಾವ ರೀತಿಯ ಮಾರ್ಗದರ್ಶನ ಅವಶ್ಯಕತೆ ಇದೆ ಎಂಬುದನ್ನು ಮನಗಂಡು ಅದನ್ನು ಪೂರೈಸಲು ಆಗುತ್ತದೆ ಶ್ರಮಿಸಬೇಕಾಗುತ್ತದೆ. ನಮ್ಮಗಳ ಕಾರ್ಯದೊತ್ತಡದಿಂದಾಗಿ ಮಕ್ಕಳನ್ನು ನಿರ್ಲಕ್ಷಿಸುವ ಅವರಿಗಾಗಿ ಸಮಯ ಮೀಸಲಿಡುವ ಪ್ರಕ್ರಿಯೆಯಿಂದ ಹಿಂದೆ ಸರಿಯಬಾರದು. ಇದರಿಂದ ಮಗು ತನಗೆ ಅವಶ್ಯಕತೆ ಇರುವಾಗ ಅದನ್ನು ಕೇಳುವವರಿಲ್ಲ ಎಂಬ ಕಾರಣಕ್ಕೆ ತನಗೆ ತೋಚಿದಂತೆ ಬೆಳೆಯುತ್ತೆ. ಅದಕ್ಕಾಗಿ ಪ್ರತಿಯೊಬ್ಬರೂ ಮಗು ನಮ್ಮ ಬಳಿ ಬಂದಾಗ ನಮ್ಮ ಎಲ್ಲ ಒತ್ತಡಗಳನ್ನು ಬದುಕಿಟ್ಟು ಅದರ ಮಾತುಗಳನ್ನು ಕೇಳಿ ಅದಕ್ಕೆ ಸೂಕ್ತ ಮಾರ್ಗದರ್ಶನ ನೀಡಿದಾಗ ಮಾತ್ರ ಮಗು ಸಚ್ಚಾರಿತ್ರ್ಯವಂತನಾಗುತ್ತಾನೆ ಅಲ್ಲದೆ ಅವನ ಸಂಪರ್ಕಕ್ಕೆ ಬಂದ ವ್ಯಕ್ತಿಗಳಿಗೆ ಗೌರವ ಕೊಡುವುದನ್ನು ಕಲಿಯುತ್ತಾನೆ. ನಮ್ಮ ಕನಸುಗಳು ಮಗುವಿನ ಮೇಲೆ ಹೇರಿಕೆಯಾಗದಂತೆ ಎಚ್ಚರಿಕೆವಹಿಸಿ, ಹೇಳುವುದನ್ನೇ ಪ್ರೀತಿಯಿಂದ ಸ್ನೇಹಪರತೆಯಿಂದ ಮಗುವಿಗೆ ಹತ್ತಿರವಾಗುವ ಮೂಲಕ ಅವರಲ್ಲಿ ನಮ್ಮ ಅಪೇಕ್ಷಿತ ಬದಲಾವಣೆಗಳನ್ನು ತರಲು ಪ್ರಯತ್ನಿಸಬೇಕು.

   ಹುಟ್ಟಿದ ಪ್ರತಿಯೊಂದು ಮಗು ತನ್ನೊಳಗೆ ಅಸಾಮಾನ್ಯವಾಗಿರುವ ಪ್ರತಿಭೆಯನ್ನು ಪಡೆದುಕೊಂಡೆ ಬಂದಿರುತ್ತದೆ. ಅದನ್ನು ಗುರುತಿಸುವ ಪರೀಕ್ಷಿಸುವ ಪ್ರಶಂಶಿಸುವ ತಾಳ್ಮೆ ಗುರು ಹಿರಿಯರಲ್ಲಿ ಇರಬೇಕಾಗುತ್ತದೆ. ಯಾವ ಮಗು ವ್ಯರ್ಥ ಕಾಲ ಕಳೆಯಲು ಇಲ್ಲಿಗೆ ಬಂದಿಲ್ಲ. ಪ್ರಕೃತಿಗೆ ಸಮಾಜಕ್ಕೆ ಅನುಕೂಲವಾಗುವ ಯಾವುದೋ ಒಂದು ಗುಣವನ್ನು ಅದರೊಳಗೆ ತುಂಬಿ ಕಳಿಸಿರುತ್ತದೆ. ಅದನ್ನು ಗುರುತಿಸಿ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಮಾಡುವುದು ಮಾತ್ರ ಶಿಕ್ಷಣದ ಕರ್ತವ್ಯವಾಗಿದೆ.ಆದರೆ ಇಂದಿನ ಶಿಕ್ಷಣ ಮಕ್ಕಳಲ್ಲಿ ಮೌಲ್ಯಗಳನ್ನು ಬಿಟ್ಟು ಬರಿ ಅಂಕಗಳು ಗ್ರೇಡ್ ಗಳಿಗೆ ಮಹತ್ವ ನೀಡಿ ಮಗುವಿನ ಪ್ರತಿಭೆಗೆ ಯಾವುದೇ ಅವಕಾಶ ನೀಡದಿರುವುದು ದುರಂತವೇ ಸರಿ. ಯಾವುದೋ ಒಂದು ಸರ್ಕಾರಿ ಹುದ್ದೆ ಪಡೆಯುವುದಕ್ಕೋಸ್ಕರ ಹತ್ತಾರು ವರ್ಷಗಳಿಂದ ಒಂದೇ ರೀತಿಯ ಪಠ್ಯಕ್ರಮವನ್ನು ಓದಿ ಪರೀಕ್ಷೆಯಲ್ಲಿ ಪಡೆದ ಅಂಕಗಳು ಅವನೊಳಗಿನ ಪ್ರತಿಭೆಯನ್ನು ಪ್ರೇರೇಪಿಸುವ ,ಪುರಸ್ಕರಿಸುವ ಅದಕ್ಕೆ ಇನ್ನಷ್ಟು ಹೆಚ್ಚಿನ ಅನುಭವಗಳನ್ನು ನೀಡುವಲ್ಲಿ ವಿಫಲವಾಗಿದೆ. ಅದಕ್ಕಾಗಿ ಇಂದು ನಿರುದ್ಯೋಗ ಸಮಸ್ಯೆ ಹೆಮ್ಮರವಾಗಿ ಬೆಳೆದು ನಿಂತಿದೆ. ಮಗು ತನ್ನ ಕಲಿಕೆಯ ಮತ್ತು ಪ್ರತಿಭೆಯ ಸಮ್ಮೇಳತದಿಂದ ಬದುಕು ಉಪವಾಸ ಅನ್ವೇಷಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುವ ಪರಿಸರವನ್ನು ಶಾಲಾ ಶಿಕ್ಷಣ ಕೊಡಬೇಕಾಗಿರೋದು ಇಂದಿನ ಅಗತ್ಯ. ಮಗು ಮಗುವಿನ ಬದುಕಿಗೆ ಹತ್ತಿರವಿರದ ಪಾಠಗಳು, ಜೀವನದ ಸಮಸ್ಯೆಗಳನ್ನು ಬಗೆಹರಿರಿಸಲಾಗದ ಸಮೀಕರಣಗಳು, ವಾಸ್ತವಕ್ಕೆ ಹತ್ತಿರವಿರದ ಪ್ರಯೋಗಗಳನ್ನು ಓದಿ ಕಲಿಯುವುದರಿಂದ ಮಗುವಿಗೆ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಬದುಕಿನಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲು ಮಗುವಿಗೆ ಸೂಕ್ತ ಮಾರ್ಗಗಳನ್ನು ಹುಡುಕಿ ಕೊಡುವ ವ್ಯವಸ್ಥೆ ಬೇಕಾಗಿದೆ. ಇಲಾಖೆಗಳು ನಿಗದಿಪಡಿಸುವ ಪಠ್ಯಕ್ರಮ, ಸರ್ಕಾರಗಳು ನಿಗದಿಪಡಿಸುವ ನೀತಿ ನಿಯಮಗಳು, ಅಕರ್ಷಣೀಯವಾಗಿಲ್ಲದ ಮತ್ತು ಸುಸಜ್ಜಿತವಲ್ಲದ ಶಾಲಾ ಕೊಠಡಿಗಳು, ಸಂಬಳಕ್ಕಾಗಿ ಬಂದು ಸಹಿ ಮಾಡಿ ಹೋಗುವ ಶಿಕ್ಷಕರು, ಕಲಿಸುವವರ ಮೇಲೆ ಸರ್ಕಾರ ಇಲಾಖೆ ಸಮುದಾಯಗಳ ಒತ್ತಡಗಳು ಮಗುವಿನ ಭವಿಷ್ಯದ ಮೇಲೆ ಚಪ್ಪಡಿ ಕಲ್ಲು ಎಳೆಯುತ್ತಿವೆ. ದೋಣಿ ಒಳಗಿನ ಶಿಕ್ಷಣಕ್ಕಿಂತ ಬಯಲಿನಲ್ಲಿ ದೊರೆಯುವ ಶಿಕ್ಷಣ ಹೆಚ್ಚು ಮೂರ್ತ ಸ್ವರೂಪವಾಗಿರುತ್ತದೆ. ಅಂತಹ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಮೇಲಿನ ಎಲ್ಲ ಹೊಣೆಗಾರರು ಚಿಂತಿಸಿ ಸನ್ನಿವೇಶಗಳನ್ನು ಒದಗಿಸಿಕೊಡಬೇಕು. ಮಕ್ಕಳು ಬಯಸಿದ್ದನ್ನು ಕೊಡುವ ಬದಲು ಅದನ್ನೇ ಬಯಸಬೇಕು ಎಂಬ ಬೇಲಿ ಹಾಕಿ ಅವರ ಪ್ರತಿಭೆಯನ್ನು ಮೊಟಕುಗೊಳಿಸಲಾಗುತ್ತಿದೆ.
ಕಟ್ಟು ನಿಟ್ಟಿನ ವಾತಾವರಣದಿಂದ ಮಕ್ಕಳ ಮನಸ್ಸಿನಲ್ಲಿ ಘಾತುಕತೆ ಹೆಚ್ಚಾಗುತ್ತದೆ. ನನಗೆ ಬೇಕಾದನ್ನು ಕೊಡದ ಸಮಾಜದ ವಿರುದ್ಧ ತಿರುಗಿ ಬೀಳುವ ಮನಸ್ಥಿತಿ ಬಲಗೊಳ್ಳುತ್ತಾ ಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ ಯಾರು ಯಾರು ಬಾಗಿದಾರರು ಇರುತ್ತಾರೆಯೋ ಅವರೆಲ್ಲರ ವಿರುದ್ಧವಾಗಿ ಮಗು ತನ್ನೊಳಗೆ ರೂಪಿತಗೊಳ್ಳುತ್ತಾ ಹೋಗುತ್ತದೆ. ಆದ್ದರಿಂದ ಎಲ್ಲಾ ಭಾಗಿದಾರರು ಕೃತ್ರಿಮವಾದ ಬುದ್ಧಿ ಮತ್ತೆ ಬೆಳೆಸುವ ಬದಲು ಸ್ವಂತಿಕೆಯ ಕೌಶಲ್ಯ ಅಭಿವೃದ್ಧಿ ಹಾಗೂ ಪ್ರತಿಭೆಯ ಅನಾವರಣಕ್ಕೆ ವೇದಿಕೆ ಕಲ್ಪಿಸಿ ಕೊಟ್ಟಾಗ ಮಾತ್ರ ಇಂದಿನ ಮಗು ನಾಡಿನ ದೇಶದ ಭವಿಷ್ಯವಾಗಿ ಹೊರಹೊಮ್ಮುತ್ತದೆ. ಆ ನಿಟ್ಟಿನಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ನಮ್ಮ ಎಲ್ಲ ಭಿನ್ನತೆಗಳನ್ನು ಬದುಕಿಟ್ಟು ಬೇಕಾದನ್ನು ಕೊಡುವ ನಿಟ್ಟಿನಲ್ಲಿ ಶ್ರಮಿಸಬೇಕು.

    ಆಧುನಿಕ ಜಗತ್ತು ಮಕ್ಕಳ ಮೇಲೆ ತುಂಬಾ ಅಡ್ಡ ಪರಿಣಾಮಗಳನ್ನು ಬೀರುತ್ತಿದೆ. ಹಿರಿಯರ ಮಾರ್ಗದರ್ಶನದಲ್ಲಿ ಸಿಗಬೇಕಾಗಿದ್ದ ವಸ್ತುಗಳು ತಂತ್ರಜ್ಞಾನಗಳು ಇಂದು ಮಕ್ಕಳ ಕೈಗೆ ಲೀಲಾಜಾಲವಾಗಿ ಸಿಗುತ್ತಿವೆ. ಮಕ್ಕಳು ಅಡ್ಡ ದಾರಿ ಹಿಡಿಯುವ ಸುಲಭ ಮಾರ್ಗಗಳು ಅರಿವಿಗೆ ಬಾರದೆ ತೆರೆದುಕೊಂಡು ಮಕ್ಕಳ ಮನಸ್ಸಿನಲ್ಲಿ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸುತ್ತಿವೆ. ತಂತ್ರಜ್ಞಾನದ ಬಳಕೆಯಲ್ಲಿ ಒಳಿತು ಕೆಡುಕುಗಳೆರಡು ಇವೆಯಾದರೂ ಕೆಡುಕು ಅತಿ ಶೀಘ್ರವಾಗಿ ಮಕ್ಕಳನ್ನು ಆಕರ್ಷಿಸಿ ಆವರಿಸಿಬಿಡುತ್ತದೆ. ಇದರ ಹಿಡಿತಕ್ಕೆ ಸಿಕ್ಕ ಮಕ್ಕಳು ಒಂಟಿಯಾಗಿ ತಮ್ಮದೇ ಲೋಕದಲ್ಲಿ ವಿಹರಿಸಲು ಬಯಸುತ್ತಾರೆ. ಹಾಗಾಗಿ ಮಕ್ಕಳು ಬಳಸುವ ತಂತ್ರಜ್ಞಾನಗಳು ಅವರ ಎಂತಹ ಉದ್ದೇಶಗಳನ್ನು ಈಡೇರಿಸುತ್ತದೆ ಎಂಬುದನ್ನು ಹಿರಿಯರಾದ ನಾವು ಮನಗಂಡು ಅದರ ಒಳಿತು ಕೆಡುಕುಗಳ ಬಗ್ಗೆ ಅದು ಬಳಸಿ ಹಾಳಾಗುವ ಮೊದಲೇ ನಾವು ಅದಕ್ಕೆ ಮಾರ್ಗದರ್ಶನ ನೀಡಿರಬೇಕು. ಆಗ ಮಾತ್ರ ಮಗು ಅಂತಹ ಅಪಾಯಗಳನ್ನು ದೂರವಿಟ್ಟು ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ತನ್ನ ಪ್ರತಿಭೆಯನ್ನು ಹೊಂದಿಸಿ ಈ ಸಮಾಜಕ್ಕೆ ಬಹುದೊಡ್ಡ ಕೊಡುಗೆಗಳನ್ನು ನೀಡುವುದರಲ್ಲಿ ಸಂಶಯವಿಲ್ಲ. ವಿಶ್ವೇಶ್ವರಯ್ಯ ಅಬ್ದುಲ್ ಕಲಾಂ ರಂತಹವರು ಬಾಲ್ಯದಲ್ಲಿ ಕಂಡ ಕನಸುಗಳನ್ನು ತಮ್ಮ ಅಗಾಧ ಪ್ರತಿಭೆಯ ಸಹಾಯದಿಂದ ಇಡೀ ಸಮಾಜಕ್ಕೆ ದೇಶಕ್ಕೆ ಸದುಪಯೋಗವಾಗುವಂತಹ ತಂತ್ರಜ್ಞಾನಗಳನ್ನು ವಸ್ತುಗಳನ್ನು ನೀಡಿದ ಹಾಗೆ ಈಗಿನ ಮಕ್ಕಳು ಕೂಡ ಅಂತಹದ್ದೇ ದಾರಿಯಲ್ಲಿ ಸಾಗುವಂತೆ ನಾವು ಅವರಿಗೆ ದಾರಿ ತೋರಿಸಬೇಕು. ಕೀಳು ಅಭಿವ್ಯಕ್ತಿ ಅಭಿರುಚಿ ಹೊಂದಿರುವ ಮಾಧ್ಯಮಗಳಿಂದ ಮಕ್ಕಳನ್ನು ದೂರವಿಟ್ಟು ಸಬ್ಯ ನಾಗರೀಕನನ್ನು ಸೃಷ್ಟಿ ಮಾಡುವ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಮಗು ಸಮಾಜಕ್ಕೆ ಹೆಮ್ಮೆ ತರುವಂತಾಗಬೇಕೆ ಹೊರತು ಹೊರೆಯಾಗುವಂತಹ ವ್ಯಕ್ತಿ ಸೃಷ್ಟಿಯಾಗದಂತೆ ಎಚ್ಚರಿಕೆ ವಹಿಸಬೇಕು.


      ಮಗುವಿನ ಮನಸ್ಸು ತುಂಬಾ ಮೃದು ಎಂಬುದು ಎಲ್ಲರಿಗೂ ಗೊತ್ತು. ಅದನ್ನು ಅಷ್ಟೇ ನಾಜೂಕಾಗಿ ನಿರ್ವಹಣೆ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಸಾಮೂಹಿಕ ಪ್ರಜ್ಞೆ ಮಕ್ಕಳಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು. ಅದೇ ಸನ್ನಿವೇಶವನ್ನು ಎದುರಿಸಿ ಮಗು ಗೆದ್ದು ಬರಬೇಕು ಸೋಲು ಗೆಲವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ ಎಂಬ ಕಲ್ಪನೆ ಮಗುವಿನಲ್ಲಿರಬೇಕು. ದಿನಾಚರಣೆ ಈ ಸಂದರ್ಭದಲ್ಲಿ ಎಲ್ಲಾ ಭಾಗಿದಾರರು ತಮ್ಮ ಜವಾಬ್ದಾರಿಗಳನ್ನು ಅರಿತು ಮುಂದಿನ ಸಮಾಜಕ್ಕೆ ಕೊಡುಗೆ ನೀಡುವ ಮಕ್ಕಳನ್ನು ಸಮರ್ಥರನ್ನಾಗಿಸಿ ಅವರನ್ನು ಸಮಾಜ ಸದ್ವಿನಿಯೋಗಪಡಿಕೊಳ್ಳುವಂತಾಗಬೇಕು. ಮಕ್ಕಳನ್ನು ದ್ವೇಷಿಸುವ ಹಿಂಸಿಸುವ ಸಮಾಜಘಾತುಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳುವುದನ್ನು ನಿಷೇಧಿಸಬೇಕು. ಸ್ವಾಸ್ಥ್ಯ ಸಮಾಜಕ್ಕೆ ಮಕ್ಕಳು ಉತ್ಕೃಷ್ಟ ಫಸಲಾಗಬೇಕು. ಹುಟ್ಟಿದ ಪ್ರತಿ ಮಗು ಸಮಾಜದ ಆಸ್ತಿಯಾಗಬೇಕು ಎಂಬ ಆಶಯದೊಂದಿಗೆ ಈ ಬಾರಿಯ ಮಕ್ಕಳ ದಿನಾಚರಣೆ ಅರ್ಥಪೂರ್ಣವಾಗಲಿ.

೦೧೫೪ಪಿಎಂ೧೪೧೧೨೦೨೩
ಅಮುಭಾವಜೀವಿ ಮುಸ್ಟೂರು 

ನಲ್ಲೆ ನಿನ್ನ ಸ್ನೇಹ
ಬೆಳಗುವಂತೆ ನಂದಾದೀಪ
ಆ ಬೆಳಕಲಿ ನಾನು
ನಿನ್ನ ಮುಂದಿಟ್ಟೆ ಒಲವ ಪ್ರಸ್ತಾಪ

ನಿನ್ನ ಪ್ರೀತಿಯೊಂದು ಹಣತೆ
ಅಲ್ಲಿ ಬೆಳಗುವ ಜ್ಯೋತಿ ಮಮತೆ
ಜೊತೆ ನೀನಿರಲು ಇಲ್ಲ ಕತ್ತಲು
ನಿನ್ನ ನಗುವ ಕಣ್ಣ ಹೊಳಪು ಹಣತೆ ಸಾಲು

ಬೆಳದಿಂಗಳೇಕೆ ನೀನಿಲ್ಲರಲು
ಕ್ಷೀರ ಧಾರೆ ಸುರಿದಂತೆ ಮುಗಿಲು
ನಲಿವ ಗುಲಾಬಿ ನಗುವ ನಿನ್ನೀ ಅಧರ
ಒಲಿದ ಗೆಳತಿ ನಿನ್ನ ಮಾತು ಸುಮಧುರ

ಸುದ್ದಿ ಮಾಡದೆ ಶುದ್ಧಿ ಮಾಡಿದೆ
ಪ್ರೀತಿಯೊಳಿರುವ ಚಂದ ನಾ ನೋಡಿದೆ
ನನ್ನೆದೆಯ ಬಯಕೆಗಳರಳಿ
ತವಕಿಸುತಿವೆ ಸೇರಲು ನಿನ್ನ ಬಳಿ

ಜೊತೆಗಾತಿ ನೀನೆಂಬ ಹೆಮ್ಮೆ ನನಗೆ
ನಗುವ ಬೆಳಕು ಚೆಲ್ಲು ಕೊನೆವರೆಗೆ
ನನ್ನ ಬಾಳ ಬಂಧು ನೀನೆ ತಾನೆ
ನಿನಗೆ ನೀಡುವೆ ನನ್ನೊಲವ ಸಂಭಾವನೆ

ನಿನ್ನಿಂದ ಈ ಹಬ್ಬವಾಯ್ತು
ಸಂಭ್ರಮದ ರಸಗಳಿಗೆ
ಜೋಡಿ ಹಣತೆಗಳಂತೆ
ಬೆಳಗತಲಿರೋಣ ಬಾಳಿಗೆ

೦೯೦೩ಪಿಎಂ೧೪೧೧೨೦೨೩
*ಅಮುಭಾವಜೀವಿ ಮುಸ್ಟೂರು*

*ತನಗ*

ಕತ್ತಲು ಕಳೆಯಿತು
ಹಣತೆ ಬೆಳಗಿತು
ದೀಪಗಳ ಸಂದೇಶ
ದೀಪಾವಳಿ ವಿಶೇಷ

೦೯೪೧ಪಿಎಂ೧೪೧೧೨೦೨೩
*ಅಮುಭಾವಜೀವಿ ಮುಸ್ಟೂರು*

ನಂಬಿಸಿ ಕತ್ತು ಕೊಯ್ದಳಾಕೆ
ಪ್ರೀತಿಯ ಆಟವಾಡ
 ಸಲುಗೆಯ ಸಂಗಬೇಡಿ
ವಶವಾದ ಎದೆಗೆ ತಿವಿದಳು

ಬೇಕಿರುವಾಗ ಬೆಣ್ಣೆಯಾಗಿತ್ತು ಮಾತು ಬೇಡವಾದಾಗ ಸಲ್ಲದ ಕೊಂಕು ಹುಡುಕಿತ್ತು
ಅವಳ ಮರ್ಮ ಅರಿಯದೆ ಹುಡುಗ ಕಳೆದು ಹೋದ
ಕಣ್ಣಿಲ್ಲದ ಪ್ರೀತಿಯ ನಂಬಿ ಕುರುಡಾದ

ಪ್ರೀತಿ ಸಿಗದ ಹುಡುಗನರಳುತ್ತಿದ್ದ
ಪ್ರೀತಿಯ ನಾಟಕವಾಡಿ ಅವಳು ನಲಿಯುತಿಹಳು
ಹೊಣೆ ಯಾರು ಹುಡುಗನ ಈ ಸ್ಥಿತಿಗೆ
ಮೋಸ ಮಾಡಿದವಳ ಸ್ನೇಹ ಮಾಡಿದ ತಪ್ಪಿಗೆ

ವಿಷ ಕುಡಿದಾದರೂ ಬದುಕಬಹುದು
ಅವಳ ಹುಸಿ ನಗೆಯ ಹಿಡಿತದಿಂದ ತಪ್ಪಿಸಿಕೊಳ್ಳಲಾಗದು
ದಿನದಿಂದ ದಿನಕ್ಕೆ ಕೃಷವಾಯಿತು ಬದುಕು
ಬಾಳಲಿ ಅವಳಿಂದ ಒಳಿತಿಗಿಂತ ಹೆಚ್ಚು ಕೆಡುಕು