Tuesday, February 15, 2022

ಕವಿತೆ

ನೀ ಹಚ್ಚಿದ ಒಲವ ಹಣತೆ
ಏಕೋ ನನ್ನ ಸುಡುತ್ತಿದೆ
ಬಯಸದೇ ಬಂದ ನೀನು
ನೋವಿನಾಳಕೆನ್ನ ತಳ್ಳಿದೆ

ನೀನಾಗೇ ಬಳಿ ಬಂದೆ
ಪ್ರೀತಿಯ ಪ್ರಸ್ತಾಪಿಸಿದೆ
ಬೇಡವೆಂದರೂ ಮತ್ತೆ ಮತ್ತೆ ಬಯಸಿದೆ
ಲೋಕ ನನ್ನ ದ್ವೇಷಿಸುವಂತೆ ನೀ ಮಾಡಿದೆ

ಅಂತರಂಗದೊಳಗೆ ಅದ್ಯಾವ ವಿಷ ತುಂಬಿ
ನನ್ನ ವಶಮಾಡಿಕೊಂಡೆ ನೀನು
ಪ್ರಶಾಂತವಾಗಿದ್ದ ನನ್ನ ಬಾಳಿನೊಳಗೆ
ಅಶಾಂತಿಯ ತುಂಬಿ ಹೋದೆ ನೀನು

ಪದೇ ಪದೇ ನಾ ಹೇಳುತ್ತಿದ್ದ ಮಾತು ನಿಜವಾಯ್ತು
ಹೂವಿಂದ ಹೂವಿಗೆ ಹಾರುವ ದುಂಬಿ ನೀನೆಂದು
ಮಧುವ ಇರುವ ಭರದಲ್ಲಿ ನೀನು
ಬದುಕನ್ನೇ ಬರ್ಬರವಾಗಿ ಕೊಂದು ಹೋದೆ

ನಿನ್ನ ಈ ಮೋಸದಾಟಕ್ಕೆ
ನಾ ಬಲಿಯಾದದ್ದು ವಿಪರ್ಯಾಸ
ನಿನ್ನ ನಾಟಕದ ಮಾತುಗಳಿಗೆಲ್ಲ
ಕಿವಿಗೊಟ್ಟು ನಾ ಕಳೆದುಕೊಂಡೆ ಸಂತಸ

ಸದ್ಯ ನಿನ್ನ ಸುಳಿಗೆ ಸಿಕ್ಕು
ನಾ ಸರ್ವನಾಶವಾಗಲಿಲ್ಲ
ನಿನ್ನ ದುರ್ನಡತೆಗಳಿಗೆ ಶಿಕ್ಷೆಯಾಗಲಿ
ನೊಂದ ನನ್ನ ಹೃದಯಕ್ಕೆ ಶಾಂತಿ ಸಿಗಲಿ

1115ಪಿಎಂ15022022
 *ಅಮುಭಾವಜೀವಿ ಮುಸ್ಟೂರು*

No comments:

Post a Comment