Sunday, January 29, 2023

ಕವನ

ಬದುಕಿಗೆ ಏಕಿಷ್ಟೋಂದು ಆಸೆಗಳು
ಬಂದದ್ದು ನಾವಿಲ್ಲಿ ಬಾಳಿಹೋಗಲು

ಹೆತ್ತವರ ಕಾಮಪ್ರೇಮದ ಫಲ
ಮಕ್ಕಳೇ ಅವರಿಗೆ ಬೇರೇನಿಲ್ಲ
ಪ್ರೀತಿಯ ಅನುಬಂಧ ಬೆಸೆದ ಸಂಬಂಧ
ಬೆಳೆದು ನಿಂತ ಮೇಲೆಲ್ಲ ಮರೆತು
ತನ್ನ ಸ್ವಾರ್ಥಸುಖಕೆ ಅವರ ಬಲಿಗೊಟ್ಟು
ಕೊನೆಗೆ ಬರುವರು ಅವರ ಆಸ್ತಿ ಹಕ್ಕಿಂದ

ಬಾಂಧವ್ಯಕಿಂತ ಬಂದವರ ಮಾತೇ ಹೆಚ್ಚು
ರಕ್ತಸಂಬಂಧವಾದರೂ ದ್ವೇಷಿಸೋ ಹುಚ್ಚು
ಕರುಳಬಳ್ಳಿಯ ನಂಟು ಕಳಚಿದ್ದೆಲ್ಲಿ
ಬಂದು ಹೋಗುವ ಮೂರು ದಿನದೊಳಗೆ
ಅದು ಏಕಿಷ್ಟೊಂದು ದ್ವೇಷ ಹಗೆ
ಒಗ್ಗಟ್ಟಿನ ಬಲವೇ ಸುಖಜೀವನಕಿಲ್ಲಿ

ಹೋದವರು ಅವರೆಲ್ಲ ಮಣ್ಣಾದರು
ಸುಟ್ಟವರು ಇನ್ನಿಲ್ಲದಂತೆ ಬೂದಿಯಾದರು
ಏಕೆ ಬಡಿದಾಡುವರೋ ಈ ಸತ್ಯ ಅರಿಯದವರು
ನಿನ್ನೆ ಅವರು ಇಂದು ಇವರು ನಾಳೆ ಇನ್ನಾರೋ
ಹುಟ್ಟು ಸಾವಿನ ಮಧ್ಯೆ ಏಕಿಂತ ಪರಿಪಾಠ
ಶಾಶ್ವವಾಗುಳಿದಿಲ್ಲ ಕೋಟೆ ಕಟ್ಟಿ ಮೆರೆದವರು

ಉಳಿಯಲಿ ಅನುಬಂಧದಾನಂದ
ಕೂಡಿ ಬಾಳಿದರೆದಲ್ಲವೇ ಮಕರಂದ

೧೦೩೬ಪಿಎಂ೨೯೦೧೨೦೨೩
*ಅಮುಭಾವಜೀವಿ ಮುಸ್ಟೂರು*

Thursday, January 26, 2023

ಕವನ

ಅವಳು ನೇಯ್ದ ಮೋ(ಸ)ಹದ
ಬಲೆಗೆ ಸಿಕ್ಕಿದ ಪತಂಗವಾದೆ
ಸ್ನೇಹದ ಮಧುವಲಿ ಪ್ರೀತಿಯ
ವಿಷ ಬೆರೆಸಿ ನಂಬಿಕೆ ಕೊಂದಳು

ಮನೆ ಮಕ್ಕಳು ಸಂಸಾರವಿದ್ದರೂ
ಮೋಹಿಸಿದಳು ಬೇಡವೆಂದರೂ
ಜಗದೆದುರು ಬಲು ಅಮಾಯಕಿ
ಪ್ರೀತಿಯ ವಿಷಯದಿ ಸಮಯಸಾಧಕಿ

ವಿಶ್ವಾಸದ ಚಿನ್ನದ ಸೂಜಿಯ
ಚುಚ್ಚಿದಳು ನಂಬಿಕೆಯ ಕಂಗಳಿಗೆ
ಬಲು ಘಾತುಕ ಹೆಣ್ಣಿವಳು
ಮನವ ಘಾಸಿಗೊಳಿಸಿ ಹೋದಳು

ಎಚ್ಚರವಿರಬೇಕಿತ್ತಿಂತವಳ
ಸಹವಾಸವ ಒಪ್ಪಿಕೊಳುವಾಗ
ಮುಗ್ಧ ಮನಸಿನ ಶುದ್ಧತೆಗೆ
ಮಸಿ ಮಳಿಯಿತವಳ ದುಷ್ಟಸಂಗ

ಅಪಾಯವಾಗುವ ಮೊದಲೇ
ಹೊರಬಂದದ್ದೇ ಒಳಿತಾಯ್ತು
ಜೀವನದಲ್ಲಿ ಒಂದು ಅನುಭವ
ನಂಬುವ ಮೊದಲು ಯೋಚಿಸಬೇಕಿತ್ತು

೧೨೫೪ಪಿಎಂ೨೩೦೧೨೦೨೩
*ಅಮುಭಾವಜೀವಿ ಮುಸ್ಟೂರು*


ನಿನ್ನೊಲವ ಪೂಜೆಗಾಗಿ
ಹೂ ಬುಟ್ಟಿಯ ತಂದೆ
ನಿನ್ನೊಂದಿಗೆ ಬಾಳುವಾಸೆಯಿಂದ
ನಗುಮೊಗದಿ ಕಾದು ಕುಳಿತೆ
ನಲ್ಲ ನೀನಿರುವ ನಂಬಿಕೆ
ಏಕಾಂತದಲೂ ಇಲ್ಲ ಅಂಜಿಕೆ
ಪ್ರೀತಿಯ ದೇಗುಲದ ಮುಂದೆ
ನಿನ್ನ ಸೇರಲು ನಾನು ಬಂದೆ
ಬಾರೋ ಬೇಗ ಜೊತೆಗಾರ
ನಿನಗಾಗಿ ಕಾದಿದೆ ಹೂಹಾರ
ಕಾಯುವ ಕಷ್ಟ ಕೊಡದಿರು
ಸೇರುವ ಬಯಕೆಗೆ ಒತ್ತಾಸೆಯಾಗಿರು

೦೧೩೫ಪಿಎಂ೨೩೦೧೨೦೨೩
*ಅಮುಭಾವಜೀವಿ ಮುಸ್ಟೂರು* 

ಕರೆಯದಿದ್ದರೂ ಒಳ ನುಸುಳಿದ 
ನಿನ್ನ ಹಕೀಕತ್ತಾದರೂ ಏನಿತ್ತು
ನಂಬಿದ ಮುಗ್ಧ ಹೃದಯವ ನೀನು 
ಎಂದಿಗೂ ನೋಯಿಸಬಾರದಿತ್ತು

ಕಾತರಿಸುವ ಕಂಗಳಿಗೆ ನೀ 
ಚಿನ್ನದ ಸೂಜಿಯಾಗಿ ಚುಚ್ಚಬಾರದಿತ್ತು
ಎದೆಯ ಭಾವಗಳಿಗೆ ಒಲವ ಸುಧೆಯ 
ಹುಚ್ಚು ಹಚ್ಚಿಸಬಾರದಿತ್ತು

ಕಿರಿದಾದ ಹೃದಯ ಪ್ರಪಂಚದೊಳಗೆ 
ಹಿರಿದಾದ ಮೋಹ ತುಂಬಬಾರದಿತ್ತು
ಬೀದಿ ಬದುಕಿನ ಆನಂದವನು ನಂಬಿ
ಬಂದವನ ನೀ ಹಾದಿ ತಪ್ಪಿಸಬಾರದಿತ್ತು

ಕೀಳು ಜನರ ಬಾಯಿಗೆ ನೀ
ಆಹಾರವಾಗಿಸಬಾರದಿತ್ತು
ಗೋಳು ಕೇಳುವವರು ಈಗ ಯಾರಿಲ್ಲ 
ನೀ ಅನಾಥವಾಗಿಸಬಾರದಿತ್ತು

ಕೊಳಕು ತುಂಬಿದ ನಿನ್ನ ಮನಸ್ಥಿತಿಗೆ
ಒಲವೆಂದು ತಳುಕು ಹಾಕಿಕೊಳ್ಳಬಾರದಿತ್ತು
ಇರುಳು ಕಂಡ ಬಾವಿಯೊಳಗೆ
ಹಗಲೇ ನೀ ತಳ್ಳಬಾರದಿತ್ತು

೦೨೫೧ಎಎಂ೨೭೦೧೨೦೨೩
*ಅಮುಭಾವಜೀವಿ ಮುಸ್ಟೂರು*


ಕವನ

ನೀ ಬಂದು ಹೋದದ್ದು ನಿಜವೇ?
ನೀ ಹಾಗೆ ಮಾಡಿದ್ದು ತರವೇ?

ಹಗಲೆಲ್ಲಾ ಕಾತರಿಸಿ ಕಣ್ದಣಿದು
ಇರುಳ ನಿದ್ರೆಗೆ ಜಾರಿರಲು
ಅರಿಯದ ಕನಸಲ್ಲಿ ನೀನು
ಹೀಗೆ ಬಂದು ಹಾಗೆ ಹೋದೆ ಏಕೆ?

ಮುಂಜಾವದಲಿ ಮೈಮುರಿದೆದ್ದು
ಕಣ್ಬಿಡುವ ಮುಂಚೆ ಇಬ್ಬನಿಯಾಗ್ಹೊಳೆದು
ಮುಟ್ಟಲು ನೀ ಮರೀಚಿಕೆಯಂತೆ
ಅಲ್ಲೇ ಇದ್ದು ನೀ ಕರಗಿದೆ ಏಕೆ?

ಹೂವಾಗಿ ನೀನರಳಿ ಸೆಳೆದು
ಭೃಂಗದ ಮೈದಡವಿದೆ ಇಂದು
ಮಧು ಹೀರುವಾ ಮುಂಚೆಯೇ
ಉದುರಿ ಮರೆಯಾದೆ ಏಕೆ?

ವಿರಹ ಬೇಗೆಯಲಿ ಬಾಯಾರಿ ನಡೆದು
ನಿನ್ನೊಲವ ಒರತೇಲಿ ಮುಳುಗೆದ್ದು
ಹಿತವೆಂದು ಬಗೆವ ಮುನ್ನವೇ
ಬರಿದಾಗಿ ಹರಿದು ಹೋದೆ ಏಕೆ?

ಹಿಡಿ ಅನ್ನವ ಕಾಲಲ್ಲಿ ಒದ್ದು
ಅಗುಳಗುಳಿಗೆ ಹಲುಬುತಲಿದ್ದು
ಈ ಜೀವಕೆ ನಿನ್ನೊಲವ ಅನ್ನದಾನ
ಮಾಡಲಾಗದೆ ಕುಂತೆ ನೀ ಏಕೆ?

ಬಂದು ಬಿಡು ಒಲವೇ
ನೀನಿಲ್ಲದೊಲಿಯದಾ ಗೆಲುವೇ
ನಿನ್ನೊಂದು ನಗೆ ಸ್ಪೂರ್ತಿ ನನಗೆ
ನಿನ್ನ ಜೊತೆಯೊಂದು ಸಾಕೆನಗೆ.

####ಅಮು ಭಾವಜೀವಿ####

Monday, January 23, 2023

ಕವನ

ಸೋತಾಗ ಮೇಲೆತ್ತುವ ಬದಲು
ಆ ಸೋಲನ್ನೇ ಸಂಭ್ರಮಿಸುವವರ
ಹೇಗೆ ನಂಬುವುದು ಹೇಳು
ಬಿದ್ದವನ ಬಂದು ಎತ್ತುವ ಬದಲು
ಆಳಿಗೊಂದು ಕಲ್ಲನೆಸೆಯುವವರ
ಹೇಗೆ ನಂಬುವುದು ಹೇಳು

ನೊಂದ ಜೀವದೆದುರು ಬಂದು
ಇನ್ನಷ್ಟು ನೋವ ನೀಡುವವರ
ಹೇಗೆ ನಂಬುವುದು ಹೇಳು
ಸಾವಿನ ಮನೆಯಲ್ಲೂ
ಹಗೆ ಸಾಧಿಸುವವರ ನಿಜಸ್ವರೂಪ
ಹೇಗೆ ನಂಬುವುದು ಹೇಳು

ಕಣ್ಣೀರು ಒರೆಸುವ ಬದಲು
ಕಣ್ಚುಚ್ಚುವವರ ಮನಸ್ಥಿತಿಯ
ಹೇಗೆ ನಂಬುವುದು ಹೇಳು
ಗಾಯವಾಗಿಹ ಹೃದಯವನು
ಮತ್ತಷ್ಟು ಘಾಸಿಗೊಳಿಸುವವರ
ಹೇಗೆ ನಂಬುವುದು ಹೇಳು

ಪ್ರೀತಿಸಿ ಪ್ರೀತಿಪಡೆಯುವ ಬದಲು
ದ್ವೇಷಿಸುವವರ ಧೋರಣೆಯುಳ್ಳವರ
ಹೇಗೆ ನಂಬುವುದು ಹೇಳು
ತನ್ನ ಪಾಡಿಗೆ ತಾವಿದ್ದರೂ ಕೂಡ
ತೊಡರ್ಗಾಲು ಕೊಟ್ಟು ಬೀಳಿಸಿ ನಗುವವರ
ಹೇಗೆ ನಂಬುವುದು ಹೇಳು

೦೨೩೧ಎಎಂ೨೦೦೧೨೦೨೩
*ಅಮುಭಾವಜೀವಿ ಮುಸ್ಟೂರು*

ಚಂದ ಚಿಲುಮೆ ಚಿಮ್ಮುವಂತೆ
ಲವಲವಿಕೆಯ ಹೆಣ್ಣು ನನ್ನವಳು
ಚಿತ್ತಾರದ ಚಿಟ್ಟೆ ಹಾರುವಂತೆ
ಚೈತನ್ಯದ ನವಕಿರಣ ನನ್ನವಳು

ಪ್ರೀತಿಯ ಅನುಬಂಧ ಬೆಸೆದ
ಸ್ನೇಹದ ಕಡಲಲ್ಲಿ ಅಲೆ ನನ್ನವಳು
ಬದುಕಿನ ಭರವಸೆಗೆ ಪ್ರೇರಣೆ
ಬಯಸದೆ ಸಿಕ್ಕವಳು ಈ ನನ್ನವಳು

ಬಿರಿದ ಮೊಗ್ಗಿನಂತೆ ಲತೆಯಲ್ಲಿ
ಅರಳಿ ನಗುವ ಗುಲಾಬಿ ನನ್ನವಳು
ಗರಿ ಬಿಚ್ಚಿ ಹಾರುವ ಹಕ್ಕಿಯಂತೆ
ಎದೆಯ ಗೂಡು ನೀಡಿದಳು ಈ ನನ್ನವಳು

ಮುಸ್ಸಂಜೆಯ ವೇಳೆ ಕೆಂಪಾದಂತೆ
ನಾಚಿ ನೀರಾಗಿ ನಿಂತ ನನ್ನವಳು
ಇರುಳ ಬಾಂದಳದಲ್ಲಿ ಮಿನುಗುವ
ಆ ಒಂಟಿ ಬೆಳ್ಳಿಚುಕ್ಕಿ ನನ್ನವಳು

ಇಂಥವಳ ಒಡನಾಟದಲ್ಲಿ
ನಡೆವೆ ಜೊತೆ ಜೊತೆಯಲಿ
ಒಲವಿನ ತೇರಿನಲ್ಲಿ ನಿತ್ಯ
ಮೆರವಣಿಗೆ ಹೋಗುವಾಸೆ ಎದೆಯಲಿ

೦೬೨೧ಪಿಎಂ೨೦೦೧೨೦೨೩
ಅಮುಭಾವಜೀವಿ ಮುಸ್ಟೂರು

ಕವಿತೆ

*ಸ* ರಿ ದಾರಿಯಲಿ ನಡೆವ ಮೊದಲು
*ಸಾ* ವಿರ ಭಾರಿ ಯೋಚಿಸಬೇಕು
*ಸಿ* ಕ್ಕ ಸಿಕ್ಕ ಕಡೆ ಓಡಾಡುವ ಬದಲು
*ಸೀ* ಮಿತ ಗುರಿಯೆಡೆಗೆ ಸಾಗಬೇಕು
*ಸು* ಖದ ನಿರೀಕ್ಷೆಯ ಕೈಗೂಡಿಲು
*ಸೂ* ಕ್ಷ್ಮಮತಿಯಾಗಿ ಚಿಂತಿಸು
*ಸೃ* ಷ್ಟಿಯ ಮುಂದೆ ನೀ ತೃಣವು
*ಸೆ* ಳೆತಕೆ ಸಿಗದಂತೆ ಜಾಗರೂಕತೆಯಿಂದ
*ಸೇ* ರಬೇಕು ಸಾಧನೆಯ ಆ ಗುರಿಯನು
*ಸೈ* ಎನಿಸಿಕೊಂಡಾಗಲೇ ಸಾರ್ಥಕತೆ
*ಸೊ* ಗಸಾದ ಈ ಜಗದಲಿ
*ಸೋ* ಜಿಗದ ಸಂಗತಿ ನೂರಿವೆ
*ಸೌಂ* ದರ್ಯವ ಆಸ್ವಾದಿಸುವ
*ಸಂ* ಸ್ಕಾರವು ನಿನ್ನ ಮನವನಾಳುವಾಗ
*ಸಹ* ಯಾತ್ರಿಯಾಗಿ ಬರುವುದು ನಿನ್ನೊಂದಿಗೆ

೧೦೩೮ಪಿಎಂ೨೦೦೧೨೦೨೩
*ಅಮುಭಾವಜೀವಿ ಮುಸ್ಟೂರು*

ಕವನ

ಅವಳು ನೇಯ್ದ ಮೋ(ಸ)ಹದ
ಬಲೆಗೆ ಸಿಕ್ಕಿದ ಪತಂಗವಾದೆ
ಸ್ನೇಹದ ಮಧುವಲಿ ಪ್ರೀತಿಯ
ವಿಷ ಬೆರೆಸಿ ನಂಬಿಕೆ ಕೊಂದಳು

ಮನೆ ಮಕ್ಕಳು ಸಂಸಾರವಿದ್ದರೂ
ಮೋಹಿಸಿದಳು ಬೇಡವೆಂದರೂ
ಜಗದೆದುರು ಬಲು ಅಮಾಯಕಿ
ಪ್ರೀತಿಯ ವಿಷಯದಿ ಸಮಯಸಾಧಕಿ

ವಿಶ್ವಾಸದ ಚಿನ್ನದ ಸೂಜಿಯ
ಚುಚ್ಚಿದಳು ನಂಬಿಕೆಯ ಕಂಗಳಿಗೆ
ಬಲು ಘಾತುಕ ಹೆಣ್ಣಿವಳು
ಮನವ ಘಾಸಿಗೊಳಿಸಿ ಹೋದಳು

ಎಚ್ಚರವಿರಬೇಕಿತ್ತಿಂತವಳ
ಸಹವಾಸವ ಒಪ್ಪಿಕೊಳುವಾಗ
ಮುಗ್ಧ ಮನಸಿನ ಶುದ್ಧತೆಗೆ
ಮಸಿ ಮಳಿಯಿತವಳ ದುಷ್ಟಸಂಗ

ಅಪಾಯವಾಗುವ ಮೊದಲೇ
ಹೊರಬಂದದ್ದೇ ಒಳಿತಾಯ್ತು
ಜೀವನದಲ್ಲಿ ಒಂದು ಅನುಭವ
ನಂಬುವ ಮೊದಲು ಯೋಚಿಸಬೇಕಿತ್ತು

೧೨೫೪ಪಿಎಂ೨೩೦೧೨೦೨೩
*ಅಮುಭಾವಜೀವಿ ಮುಸ್ಟೂರು*


ನಿನ್ನೊಲವ ಪೂಜೆಗಾಗಿ
ಹೂ ಬುಟ್ಟಿಯ ತಂದೆ
ನಿನ್ನೊಂದಿಗೆ ಬಾಳುವಾಸೆಯಿಂದ
ನಗುಮೊಗದಿ ಕಾದು ಕುಳಿತೆ
ನಲ್ಲ ನೀನಿರುವ ನಂಬಿಕೆ
ಏಕಾಂತದಲೂ ಇಲ್ಲ ಅಂಜಿಕೆ
ಪ್ರೀತಿಯ ದೇಗುಲದ ಮುಂದೆ
ನಿನ್ನ ಸೇರಲು ನಾನು ಬಂದೆ
ಬಾರೋ ಬೇಗ ಜೊತೆಗಾರ
ನಿನಗಾಗಿ ಕಾದಿದೆ ಹೂಹಾರ
ಕಾಯುವ ಕಷ್ಟ ಕೊಡದಿರು
ಸೇರುವ ಬಯಕೆಗೆ ಒತ್ತಾಸೆಯಾಗಿರು

೦೧೩೫ಪಿಎಂ೨೩೦೧೨೦೨೩
*ಅಮುಭಾವಜೀವಿ ಮುಸ್ಟೂರು* 

Sunday, January 15, 2023

ಕವನ

ಪ್ರೀತಿಯ ಆಟದಲಿ
ಮೋಸದ ಪುಟದಲಿ
ಪಾಠವ ಕಲಿಸಿ ಹೋದಳು
ನಂಬಿಕೆಯ ಭಾವಕೆ
ನೋವಿನ ಕಾಣಿಕೆ
ನೀಡಿ ಅವಳು ಹೋದಳು

ಬೇಕಿರದ ಸಂಬಂಧಕೆ
ಪ್ರೀತಿಯ ಲೇಪಿಸಿ
ಮುಗ್ಧ ಹೃದಯಕೆ ಮಸಿ ಬಳಿದಳು
ನೈತಿಕತೆಯ ನಂಟಿರದ
ದೈಹಿಕ ವಾಂಛೆಗಾಗಿ
ಶುದ್ಧ ಒಲವಿಗೆ ಕಳಂಕ ತಂದಳು

ಇಂತಹವಳ ಸಂಕುಲ ನಶಿಸಲಿ
ಕಷ್ಟ ತಂದವಳೂ ಅದನನುಭವಿಸಲಿ
ಅಮಾಯಕ ಹೃದಯ ಚೇತರಿಸಿಕೊಳ್ಳಲಿ
ಮೋಸಗಾತಿಯ ಆಟ ಪಾಠವಾಯ್ತು
ಕಪಟಿಯ ಹಿಂದಿನ ದಿಟ ಅರಿವಾಯ್ತು
ನೊಂದ ಮನಸು ನಿತ್ಯ ಶಪಿಸಿತು

1028ಪಿಎಂ15012023
*ಅಮುಭಾವಜೀವಿ ಮುಸ್ಟೂರು*

Sunday, January 8, 2023

ಕವನ

ನೋವು ಕೊಟ್ಟವರಿಗೊಂದಿಷ್ಟು
ನೋವು ಕೊಡುವುದು ಪ್ರಕೃತಿ
ತಾಳ್ಮೆಯೊಂದಿಷ್ಟಿರಲಿ ಮನುಜ
ಕೊಟ್ಟದ್ದನ್ನು ಹಿಂತಿರುಗಿಸುವುದು ಜಗದ ನೀತಿ

ನಾನು ಎಂದು ಮೆರೆದವರಾರೂ
ಇಲ್ಲಿ ಉಳಿದಿಲ್ಲ ಕೇಳು ಮನುಜ
ಬೆಳೆದದ್ದು ಅಳಿಯಲೇ ಬೇಕು
ಅರಿತರೆ ಸಾಕು ನೀನು ಈ ನಿಜ

ಸ್ವಾರ್ಥಕಾಗಿ ಸತ್ಯವನು ಕೊಂದರೇನಂತೆ
ನಿಸ್ವಾರ್ಥಿಗಳನು ಕೈಬಿಡದು ಕೇಳು
ಒಂದಷ್ಟು ಕಷ್ಟಗಳ ಸಹಿಸಲೇ ಬೇಕು
ಹೂವಿನ ಜೊತೆ ಮುಳ್ಳಿರುವುದೇಕೆ ಹೇಳು

ನೊಂದ ಜೀವಿಗಳ ಮೂಕ ವೇದನೆ
ಯಮನ ಲೆಕ್ಕದಲಿ ದಾಖಲಾಗಿಹುದು 
ಪಾಪದ ಕೊಡ ತುಂಬಿದ ಬಳಿಕ
ಎಲ್ಲಕ್ಕೂ ಉತ್ತರ ಸಿಕ್ಕೇಸಿಗುವುದು

ಯಾವುದನ್ನೂ ಹೆಚ್ಚು ಸಂಭ್ರಮಿಸದರು
ಎಲ್ಲಕ್ಕೂ ಕೊನೆಯೆಂಬುದೊಂದಿದೆ
ಪ್ರಾಮಾಣಿಕತೆಯ ಅರ್ಜಿಯೊಂದಿಗೆ ನಡೆ
ಒಳ್ಳೆತನಕೆಂದಿಗೂ ಬೆಲೆ ಇದ್ದೇ ಇದೆ

೦೨೫೬ಎಎಂ೦೯೦೧೨೦೨೩
*ಅಮುಭಾವಜೀವಿ ಮುಸ್ಟೂರು*

ಕವನ

*ಕೊನೆ ಎಲ್ಲಿ*

ಯಾರು ಕೊಂದರೋ
ಏಕೆ ಕೊಂದರೋ
ಜೀವವಂತೂ ಬಲಿಯಾಯ್ತು 
ನ್ಯಾಯ ಸಿಗುವುದೋ 
ಅಲ್ಲೇ ನ್ಯಾಯ ಸಾಯುವುದೋ
ಇಲ್ಲಿ ಯಾರಿಗೆ ಗೊತ್ತು

ಹೆತ್ತವರ ಅಸಹಾಯಕತೆಗೆ
ನೋವಿನ ಕಿಚ್ಚನು ಇಟ್ಟು 
ದಹಿಸುತಿದೆ ನಿತ್ಯವೂ 
ಸಾವನ್ನೂ ಲಾಭವಾಗಿಸಿಕೊಂಡು.
ಸಮಾಜದ ಶಾಂತಿಯನು ಕೆಡಿಸಿ
ಮಣ್ಣಲ್ಲಿ ಮಣ್ಣಾಯ್ತು ಆ ಸತ್ಯವೂ

ಇನ್ನೆಷ್ಟು ದೇಹಗಳು ಬಲಿ
ಬೀಳಬೇಕೋ ಆ ರಕ್ತ ಪಿಪಾಸುವಿಗೆ
ತಣಿದು ತೃಪ್ತವಾಗದ ಆ ಮನಕೆ
ಮಾನವೀಯತೆ ಇನ್ನೆಲ್ಲಿ
ಮಾನವನ ದಾನವತೆಗೆ ಕೊನೆ ಎಲ್ಲಿ

1009.ಪಿಎಂ08012018
*ಅಮುಭಾವಜೀವಿ*

ಕವನ

*ಕೊನೆ ಎಲ್ಲಿ*

ಯಾರು ಕೊಂದರೋ
ಏಕೆ ಕೊಂದರೋ
ಜೀವವಂತೂ ಬಲಿಯಾಯ್ತು 
ನ್ಯಾಯ ಸಿಗುವುದೋ 
ಅಲ್ಲೇ ನ್ಯಾಯ ಸಾಯುವುದೋ
ಇಲ್ಲಿ ಯಾರಿಗೆ ಗೊತ್ತು

ಹೆತ್ತವರ ಅಸಹಾಯಕತೆಗೆ
ನೋವಿನ ಕಿಚ್ಚನು ಇಟ್ಟು 
ದಹಿಸುತಿದೆ ನಿತ್ಯವೂ 
ಸಾವನ್ನೂ ಲಾಭವಾಗಿಸಿಕೊಂಡು.
ಸಮಾಜದ ಶಾಂತಿಯನು ಕೆಡಿಸಿ
ಮಣ್ಣಲ್ಲಿ ಮಣ್ಣಾಯ್ತು ಆ ಸತ್ಯವೂ

ಇನ್ನೆಷ್ಟು ದೇಹಗಳು ಬಲಿ
ಬೀಳಬೇಕೋ ಆ ರಕ್ತ ಪಿಪಾಸುವಿಗೆ
ತಣಿದು ತೃಪ್ತವಾಗದ ಆ ಮನಕೆ
ಮಾನವೀಯತೆ ಇನ್ನೆಲ್ಲಿ
ಮಾನವನ ದಾನವತೆಗೆ ಕೊನೆ ಎಲ್ಲಿ

1009.ಪಿಎಂ08012018
*ಅಮುಭಾವಜೀವಿ*