Sunday, January 8, 2023

ಕವನ

ನೋವು ಕೊಟ್ಟವರಿಗೊಂದಿಷ್ಟು
ನೋವು ಕೊಡುವುದು ಪ್ರಕೃತಿ
ತಾಳ್ಮೆಯೊಂದಿಷ್ಟಿರಲಿ ಮನುಜ
ಕೊಟ್ಟದ್ದನ್ನು ಹಿಂತಿರುಗಿಸುವುದು ಜಗದ ನೀತಿ

ನಾನು ಎಂದು ಮೆರೆದವರಾರೂ
ಇಲ್ಲಿ ಉಳಿದಿಲ್ಲ ಕೇಳು ಮನುಜ
ಬೆಳೆದದ್ದು ಅಳಿಯಲೇ ಬೇಕು
ಅರಿತರೆ ಸಾಕು ನೀನು ಈ ನಿಜ

ಸ್ವಾರ್ಥಕಾಗಿ ಸತ್ಯವನು ಕೊಂದರೇನಂತೆ
ನಿಸ್ವಾರ್ಥಿಗಳನು ಕೈಬಿಡದು ಕೇಳು
ಒಂದಷ್ಟು ಕಷ್ಟಗಳ ಸಹಿಸಲೇ ಬೇಕು
ಹೂವಿನ ಜೊತೆ ಮುಳ್ಳಿರುವುದೇಕೆ ಹೇಳು

ನೊಂದ ಜೀವಿಗಳ ಮೂಕ ವೇದನೆ
ಯಮನ ಲೆಕ್ಕದಲಿ ದಾಖಲಾಗಿಹುದು 
ಪಾಪದ ಕೊಡ ತುಂಬಿದ ಬಳಿಕ
ಎಲ್ಲಕ್ಕೂ ಉತ್ತರ ಸಿಕ್ಕೇಸಿಗುವುದು

ಯಾವುದನ್ನೂ ಹೆಚ್ಚು ಸಂಭ್ರಮಿಸದರು
ಎಲ್ಲಕ್ಕೂ ಕೊನೆಯೆಂಬುದೊಂದಿದೆ
ಪ್ರಾಮಾಣಿಕತೆಯ ಅರ್ಜಿಯೊಂದಿಗೆ ನಡೆ
ಒಳ್ಳೆತನಕೆಂದಿಗೂ ಬೆಲೆ ಇದ್ದೇ ಇದೆ

೦೨೫೬ಎಎಂ೦೯೦೧೨೦೨೩
*ಅಮುಭಾವಜೀವಿ ಮುಸ್ಟೂರು*

No comments:

Post a Comment