Sunday, January 29, 2023

ಕವನ

ಬದುಕಿಗೆ ಏಕಿಷ್ಟೋಂದು ಆಸೆಗಳು
ಬಂದದ್ದು ನಾವಿಲ್ಲಿ ಬಾಳಿಹೋಗಲು

ಹೆತ್ತವರ ಕಾಮಪ್ರೇಮದ ಫಲ
ಮಕ್ಕಳೇ ಅವರಿಗೆ ಬೇರೇನಿಲ್ಲ
ಪ್ರೀತಿಯ ಅನುಬಂಧ ಬೆಸೆದ ಸಂಬಂಧ
ಬೆಳೆದು ನಿಂತ ಮೇಲೆಲ್ಲ ಮರೆತು
ತನ್ನ ಸ್ವಾರ್ಥಸುಖಕೆ ಅವರ ಬಲಿಗೊಟ್ಟು
ಕೊನೆಗೆ ಬರುವರು ಅವರ ಆಸ್ತಿ ಹಕ್ಕಿಂದ

ಬಾಂಧವ್ಯಕಿಂತ ಬಂದವರ ಮಾತೇ ಹೆಚ್ಚು
ರಕ್ತಸಂಬಂಧವಾದರೂ ದ್ವೇಷಿಸೋ ಹುಚ್ಚು
ಕರುಳಬಳ್ಳಿಯ ನಂಟು ಕಳಚಿದ್ದೆಲ್ಲಿ
ಬಂದು ಹೋಗುವ ಮೂರು ದಿನದೊಳಗೆ
ಅದು ಏಕಿಷ್ಟೊಂದು ದ್ವೇಷ ಹಗೆ
ಒಗ್ಗಟ್ಟಿನ ಬಲವೇ ಸುಖಜೀವನಕಿಲ್ಲಿ

ಹೋದವರು ಅವರೆಲ್ಲ ಮಣ್ಣಾದರು
ಸುಟ್ಟವರು ಇನ್ನಿಲ್ಲದಂತೆ ಬೂದಿಯಾದರು
ಏಕೆ ಬಡಿದಾಡುವರೋ ಈ ಸತ್ಯ ಅರಿಯದವರು
ನಿನ್ನೆ ಅವರು ಇಂದು ಇವರು ನಾಳೆ ಇನ್ನಾರೋ
ಹುಟ್ಟು ಸಾವಿನ ಮಧ್ಯೆ ಏಕಿಂತ ಪರಿಪಾಠ
ಶಾಶ್ವವಾಗುಳಿದಿಲ್ಲ ಕೋಟೆ ಕಟ್ಟಿ ಮೆರೆದವರು

ಉಳಿಯಲಿ ಅನುಬಂಧದಾನಂದ
ಕೂಡಿ ಬಾಳಿದರೆದಲ್ಲವೇ ಮಕರಂದ

೧೦೩೬ಪಿಎಂ೨೯೦೧೨೦೨೩
*ಅಮುಭಾವಜೀವಿ ಮುಸ್ಟೂರು*

No comments:

Post a Comment