*ಕೊನೆ ಎಲ್ಲಿ*
ಯಾರು ಕೊಂದರೋ
ಏಕೆ ಕೊಂದರೋ
ಜೀವವಂತೂ ಬಲಿಯಾಯ್ತು
ನ್ಯಾಯ ಸಿಗುವುದೋ
ಅಲ್ಲೇ ನ್ಯಾಯ ಸಾಯುವುದೋ
ಇಲ್ಲಿ ಯಾರಿಗೆ ಗೊತ್ತು
ಹೆತ್ತವರ ಅಸಹಾಯಕತೆಗೆ
ನೋವಿನ ಕಿಚ್ಚನು ಇಟ್ಟು
ದಹಿಸುತಿದೆ ನಿತ್ಯವೂ
ಸಾವನ್ನೂ ಲಾಭವಾಗಿಸಿಕೊಂಡು.
ಸಮಾಜದ ಶಾಂತಿಯನು ಕೆಡಿಸಿ
ಮಣ್ಣಲ್ಲಿ ಮಣ್ಣಾಯ್ತು ಆ ಸತ್ಯವೂ
ಇನ್ನೆಷ್ಟು ದೇಹಗಳು ಬಲಿ
ಬೀಳಬೇಕೋ ಆ ರಕ್ತ ಪಿಪಾಸುವಿಗೆ
ತಣಿದು ತೃಪ್ತವಾಗದ ಆ ಮನಕೆ
ಮಾನವೀಯತೆ ಇನ್ನೆಲ್ಲಿ
ಮಾನವನ ದಾನವತೆಗೆ ಕೊನೆ ಎಲ್ಲಿ
1009.ಪಿಎಂ08012018
*ಅಮುಭಾವಜೀವಿ*
No comments:
Post a Comment