Tuesday, December 21, 2021

ಲೇಖನ

*ಲೇಖನ ಮಾಲೆ ೦೫*

*ಸಾಮಾಜಿಕ #ಜಾಲತಾಣದ #ಸ್ನೇಹಸಂಕೋಲೆ # #ಸುರಕ್ಷಿತವಲ್ಲ* 

ಮನುಷ್ಯನ ಬದುಕಿನಲ್ಲಿ ಸ್ನೇಹ ಎನ್ನುವುದೊಂದು ನೆರಳಿನ ಮರವಿದ್ದಂತೆ .ಇಲ್ಲಿ ನಮ್ಮ ನೋವು ನಲಿವುಗಳನ್ನು ಹಂಚಿಕೊಂಡು ಹಗುರಾಗಲು ಸಾಧ್ಯವಿದೆ .ಸ್ನೇಹಿತರಿಲ್ಲದ ಬದುಕನ್ನು  ಊಹಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ . ಅದರಲ್ಲೂ ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಫೇಸ್ ಬುಕ್ ವಾಟ್ಸ್ ಆಪ್ ಇನ್ಸ್ ಟಾಗ್ರಾಂ ಮುಂತಾದ ಮಾಧ್ಯಮಗಳಲ್ಲಿ ಸ್ನೇಹಿತರ ದಂಡೆ ಸಿಕ್ಕಿ ಬಿಡುವುದು .ಒಬ್ಬರಿಗೊಬ್ಬರು ನೋಡಿಕೊಳ್ಳದೆ ಕೇವಲ ಅವರ ರೆಸ್ಯೂಮ್ ಗಳನ್ನು ನೋಡಿ ಅವರ ಸ್ನೇಹ ಸಂಘವನ್ನ ಒಪ್ಪಿ ಅಪ್ಪಿ ಮೈಮರೆಯುತ್ತೇವೆ .ಅಭಿರುಚಿ ಆಸಕ್ತಿ ಅನುಕೂಲ ಅನಾನುಕೂಲ ಇವೆಲ್ಲವುಗಳ ಆಚೆ ಕೇವಲ ಸ್ನೇಹದ ಕೋರಿಕೆ ಬಂದ ಕೂಡಲೇ ಅವರ ಸ್ನೇಹ ಕೋರಿಕೆಯನ್ನು  ಸ್ವೀಕರಿಸಿ ಏನನ್ನೋ ಸಾಧಿಸಿದಂತೆ ಬೀಗುತ್ತೇವೆ ಗರ್ವ ಪಡುತ್ತೇವೆ ಹೆಮ್ಮೆ ಪಡುತ್ತೇವೆ ಆದರೆ ಅವರ ಸ್ನೇಹ ಎಂತಹದ್ದು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಎಡವಿ  ಬಿಡುತ್ತೇವೆ. ಅವರುಗಳ ಪ್ರೊಫೈಲ್ ಗಳನ್ನು ಜಾಲಾಡಿ ದಾಗಲೂ ಅವರು ಎಂಥವರು ಎಂಬುದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಕೆಲವು ಸಂದರ್ಭದಲ್ಲಿ . ಕೇವಲ ಆಕರ್ಷಣೆಗೋಸ್ಕರ ಅವರ ಸ್ನೇಹಕ್ಕೆ ಒಪ್ಪಿಗೆ ಸೂಚಿಸಿ ನಾವು ಅವರು ಮಾಡುವ ಅನ್ಯಾಯಗಳಿಗೆ ಬಲಿಯಾಗುತ್ತೇವೆ .    ಸ್ನೇಹ ಸಿಕ್ಕಾಗೆ ಎಷ್ಟು ಸಂಭ್ರಮಿಸುತ್ತೇವೆಯೋ 1ಕ್ಷಣ ಅವರು ನಮಗೆ ಪ್ರತಿಕ್ರಿಯಿಸದೇ ಹೋದ ನಮ್ಮ ನಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಸಣ್ಣ ಅನುಮಾನ ಬಂದಾಗ ಜಗತ್ತೇ ಕಳಚಿ ತಲೆ ಮೇಲೆ ಬಿದ್ದಂತೆ ಆಡುತ್ತೇವೆ .ಇದ್ದಬದ್ದ ದಾರಿಗಳನ್ನೆಲ್ಲ ಬಳಸಿ ನಮ್ಮ ಬಗ್ಗೆ ಅವರ ಅಭಿಪ್ರಾಯ ಏನಿರಬಹುದು ಎಂದು ತಿಳಿದುಕೊಳ್ಳಲು ಪರದಾಡುತ್ತೇವೆ .ಒಮ್ಮೆ ನಾವು ಅವರಿಗೆ ನಮ್ಮ ಬದುಕು ವ್ಯಕ್ತಿತ್ವ ನಮ್ಮ ಆಸೆ ಆಕಾಂಕ್ಷೆಗಳನ್ನು ತಿಳಿಸಿದವೆಂದುಕೊಂಡರೆ ಸಾಕು ನಂತರ ಅವರು ನಮ್ಮನ್ನು ಆಳಲು ಶುರು ಮಾಡುತ್ತಾರೆ.

          ಈ ಸಾಮಾಜಿಕ ಜಾಲತಾಣಗಳಲ್ಲಿರುವ ಸ್ನೇಹಿತರು ಯಾರು ನಮ್ಮ ಕಷ್ಟ ಸುಖಗಳಿಗೆ ಆಗುವುದಿಲ್ಲ .ನಮ್ಮ ಪೋಸ್ಟ್ ಗಳಿಗೆ ಕೇವಲ ಲೈಕು ಡಿಸ್ ಲೈಕ್ ಕಾಮೆಂಟ್ ಅಷ್ಟಕ್ಕೆ ಅವರು ಸೀಮಿತರಾಗಿರುತ್ತಾರೆ .  ಅದರಾಚೆ  ಒಂದು ಸಣ್ಣ  ಸಹಾಯವನ್ನು ಯಾಚಿಸಿದರೂ ಅವರು ಅದನ್ನು ಈಡೇರಿಸುವಲ್ಲಿ ಅಶಕ್ತರಾಗುತ್ತಾರೆ.ಕಷ್ಟಕ್ಕಾಗದ ಇಂತಹ ಸಾವಿರ ಸಾವಿರ ಸ್ನೇಹಿತರುಗಳನ್ನಿಟ್ಟುಕೊಂಡು ನಾವು ಸಾಧಿಸುವುದಾದರೂ ಏನು? ಇಲ್ಲಿನ ಸ್ಪಂದನೆಗಳು ಕೇವಲ ಬೂಟಾಟಿಕೆಗಷ್ಟೇ ಸೀಮಿತವಾಗಿರುತ್ತವೆ .  ಇಲ್ಲಿ ಕೊಡುವುದಕ್ಕಿಂತ ಪಡೆದುಕೊಳ್ಳುವವರ ಸಂಖ್ಯೆ ಜಾಸ್ತಿಯಾಗಿರುತ್ತದೆ .  

           ಇನ್ನು ಈ ಸ್ನೇಹದ ನೆವಮಾಡಿಕೊಂಡುನಮ್ಮ ಸಲಿಗೆ  ಬಯಸುತ್ತಾರೆ, ಸಲಿಗೆಯನ್ನು ಕೊಟ್ಟುಬಿಟ್ಟೆವು ಎಂದರೆ ಇಡೀ ನಮ್ಮ ಬದುಕಿನಲ್ಲಿ ಆಡಬಾರದ ಆಟಗಳನ್ನೆಲ್ಲಾ ಆಡಿ ನಮ್ಮ ಬದುಕನ್ನೇ ನಿಸ್ಸಾರವಾಗಿ ಸುತ್ತಾರೆ . ಪ್ರೀತಿ ಪ್ರೇಮಗಳ ಬಲೆಬೀಸುತ್ತಾರೆ ಹಣ ಗಿಫ್ಟ್ ಗಳ ಆಮಿಷ ಒಡ್ಡುತ್ತಾರೆ ಕೊನೆಗೆ ನಮ್ಮನ್ನೇ ಕೆಟ್ಟವರನ್ನಾಗಿ ಬಿಂಬಿಸಿಬಿಡುತ್ತಾರೆ . ನಮ್ಮ ಹೊರಜಗತ್ತನ್ನೇ ಮರೆಯುವಷ್ಟು ನಾವು ಈ ಜಗತ್ತಿನಲ್ಲಿ ಕಳೆದುಹೋಗಿಬಿಡುತ್ತೇವೆ . ಕಳೆದುಹೋದದ್ದು ಕೇವಲ ನಾವಲ್ಲ ನಮ್ಮ ವ್ಯಕ್ತಿತ್ವ ನಮ್ಮ ನಂಬಿಕೆ ನಮ್ಮ ಭರವಸೆ ನಮ್ಮ ಆಸೆ ಆಕಾಂಕ್ಷೆ ನಮ್ಮ ಹಣ ಸಮಯ ಎಲ್ಲವನ್ನು ಕಳೆದುಕೊಂಡು ಸಾಮಾಜಿಕ ಜಾಲತಾಣಗಳ ಬಾಯಿಬಡುಕ ಕಾಮೆಂಟ್ಸ್ ಗಳಿಗೆ ಬಲಿಯಾಗಿ ಅದೆಷ್ಟೋ ಜನ ಆತ್ಮಹತ್ಯೆ ಮಾಡಿಕೊಂಡಿರುವುದು ನಮ್ಮ ಕಣ್ಣ ಮುಂದೆ ಇದೆ .

    ಇಲ್ಲಿ ಅಮಾಯಕರೆಂದು ಗೊತ್ತಾದ ತಕ್ಷಣ ನಮ್ಮನ್ನು ಅವರ ಹಿಡಿತಕ್ಕೆ ತೆಗೆದುಕೊಂಡು ಬಿಡುತ್ತಾರೆ .ನಮ್ಮೆಲ್ಲ ರಹಸ್ಯಗಳನ್ನು ಬಲು ಜಾಣ್ಮೆಯಿಂದ ಹೊರಗೆ ತೆಗೆದುಕೊಂಡು ಬಿಡುತ್ತಾರೆ . ಅದರಲ್ಲೂ ಪ್ರೀತಿ ಪ್ರೇಮದ ಬಲೆಗೆ ಸಿಕ್ಕೆವೆಂದರೆ ನಮ್ಮನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತಾರೆ . ನಮ್ಮನ್ನು ಎಲ್ಲಾ ರೀತಿಯಲ್ಲೂ ಬಳಸಿಕೊಂಡು ಅಕ್ಷರಶ: ಸಾಮಾಜಿಕ ಜಾಲತಾಣಗಳ ಬೀದಿಗೆ ಎಸೆದು ಬಿಡುತ್ತಾರೆ .ಅಂತಹ ಸಂದರ್ಭದಲ್ಲಿ ನಾವು ಮಾತ್ರ ಕೊರಗಿ ಸೊರಗಿ ಬದುಕೇ ಬೇಡವೆಂದು ಬೆಂಡಾಗಿ ಹೋಗಿಬಿಡುತ್ತೇವೆ . ಆದರೆ ನಮ್ಮನ್ನು ಈ ಸ್ಥಿತಿಗೆ ತಂದ ಆ ಮಹಾನುಭಾವರು ಖುಷಿಯಿಂದ ಏನೂ ಆಗಿಲ್ಲವೇನೋ ಎಂಬಂತೆ ಹಾಡುತ್ತಾ ಕುಣಿಯುತ್ತಾ ನಲಿಯುತ್ತಾ ಬದುಕುತ್ತಿರುತ್ತಾರೆ .ತನ್ನ ಕುಟುಂಬದ ಜತೆ ಒಳ್ಳೆಯ ಒಡನಾಟವಿಲ್ಲ ಎಂದು ಹೇಳಿಕೊಂಡಿದ್ದ ಅವರು ಇದಾದ ಮೇಲೆ ಅದೇ ಕುಟುಂಬದ ಜೊತೆ ತುಂಬಾ ಅನ್ಯೋನ್ಯವಾಗಿ ಬದುಕುತ್ತಾ ಇರುತ್ತಾರೆ . ಆದರೆ ನಮ್ಮ ವೈಯಕ್ತಿಕ ವೈವಾಹಿಕ ಬದುಕಿನಲ್ಲಿ ಸುನಾಮಿಯನ್ನು ಎಬ್ಬಿಸಿ ಬಿರುಗಾಳಿಯಲ್ಲಿ ನಮ್ಮನ್ನು ತರಗೆಲೆಗಳನ್ನಾಗಿಸಿ ಬಿಡುತ್ತಾರೆ . ಆ ಪ್ರವಾಹದಲ್ಲಿ ನಮ್ಮ ವೈಯಕ್ತಿಕ ಬದುಕಿನ ನೆಮ್ಮದಿಯೇ ಕೊಚ್ಚಿ ಹೋಗಿ ಬಿಡುತ್ತದೆ . ಅಷ್ಟು ದಿನಗಳವರೆಗೆ ಸಂಪಾದಿಸಿಕೊಂಡು ಬಂದಿದ್ದ ಒಳ್ಳೆಯತನ ಆದರ್ಶಗಳು ನಮ್ಮ ಸೃಜನಶೀಲತೆ ನಮ್ಮ ಬದುಕಿನ ಗುರಿ ಎಲ್ಲವೂ ನಮ್ಮ ಕೈತಪ್ಪಿ ಹೋಗಿ ಅಕ್ಷರಶಃ ನಾವು ಒಬ್ಬಂಟಿಯಾಗಿ ಬಿಡುತ್ತೇವೆ.ಇಂತಹ ಸಂದರ್ಭದಲ್ಲಿಯೇ ಈ ಆತ್ಮಹತ್ಯೆಯಂತಹ ಮಹಾ ಪಾಪಕ್ಕೆ ಕೈಹಾಕಲು ಮನಸ್ಸು ಹಾತೊರೆಯುತ್ತಿರುತ್ತದೆ .ಕೆಲವರು ಅದರಲ್ಲಿ ಯಶಸ್ವಿಯಾದರು ಇನ್ನು ಕೆಲವರು ಸಮಾಜಕ್ಕೆ ಮಾನ ಮರ್ಯಾದೆಗೆ ಅಂಜಿ ಹೇಗೋ  ಅದೃಶ್ಯವಾಗಿ ಕಳೆದು ಹೋಗಿಬಿಡುತ್ತಾರೆ .ಆದರೆ  ನಮ್ಮಿಂದ ಬೇಕಾದುದನ್ನೆಲ್ಲ ಪಡೆದುಕೊಂಡ ಮೇಲೆ ನಮ್ಮನ್ನು ಎತ್ತಿ ಬಿಸಾಡಿ ಇನ್ನೊಂದು ಮಿಕವನ್ನು ಹುಡುಕುವುದರತ್ತ  ತಮ್ಮ ಗಮನವನ್ನು ಹರಿಸುತ್ತಿರುತ್ತಾರೆ . ನಮಗಾದ ಅನ್ಯಾಯದ ಬಗ್ಗೆ ನಾವೆಲ್ಲರೂ ಬಾಯಿಬಿಡದೆ ಕೊರಗುತ್ತೇವೆ ಆದರೆ ಅವರು ಅದನ್ನೇ ಬಂಡವಾಳ ಮಾಡಿಕೊಂಡು ಜಗದೆದುರು ತಾವು ಸಾಚಾ ಎಂದು ಬೀಗುತ್ತಿರುತ್ತಾರೆ . ಅದಲ್ಲದೆ ನಾವೇನಾದರೂ ಅವರ ಬಗ್ಗೆ ಮಾತನಾಡಲು ಶುರು ಮಾಡಿದರೆ ನಮ್ಮನ್ನು  ಹೆದರಿಸಿ ಬೆದರಿಸುವ ಕರೆಗಳನ್ನು ಮಾಡಿ ನಮ್ಮನ್ನು ಇನ್ನಷ್ಟು ಹೈರಾಣು ಮಾಡಿಬಿಡುತ್ತಾರೆ . ಇವರ ಸಹವಾಸವೇ ಸಾಕು ಎಂದು ನಾವು ಮೌನಕ್ಕೆ ಶರಣಾಗಿ ಬಿಡಬೇಕಾಗುತ್ತದೆ .

       ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಸ್ನೇಹಿತರ ದಂಡು ಎಂದೂ ನಮ್ಮ ಶ್ರೇಯಸ್ಸನ್ನು ಬಯಸುವುದಿಲ್ಲ. ಆ ಸ್ನೇಹದಿಂದ ನಮಗೆ  ಒಂದು ನಯಾಪೈಸೆಯ ಅನುಕೂಲ ಆಗುವುದಿಲ್ಲ .ಇಂತಹ ಸಾವಿರ ಸಾವಿರ ಸಂಖ್ಯೆಯ ಸ್ನೇಹಿತರನ್ನಿಟ್ಟುಕೊಂಡು ನಾವು ಜೀವನದಲ್ಲಿ ಏನು ಸಾಧಿಸುತ್ತೇವೆ.ವಾಸ್ತವ ಜಗತ್ತಿನಲ್ಲಿ ನಾವು ನಮ್ಮವರಿಗಾಗಿಯೂ ಬದುಕುವುದಿಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ನಾವು ನಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳುವುದಿಲ್ಲ .

   ಇಂತಹ ಕಪಿಮುಷ್ಟಿಯ ಕಬಂಧಬಾಹು ಹಿಡಿತಕ್ಕೆ ಸಿಕ್ಕಿ ಅದೆಷ್ಟು ಗಂಡುಗಳು ಹೆಣ್ಣುಗಳು ನಿತ್ಯ ನರಳುತ್ತಿದ್ದಾರೆ .ಹೇಳಿಕೊಳ್ಳಲು ಆಗದೆ ಸಹಿಸಿಕೊಳ್ಳಲು ಆಗದೆ ಬಿಸಿತುಪ್ಪವಾಗಿ  ನುಂಗಲಾಗದೆ ಸಹಿಸಿ ಪರಿತಪಿಸುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ ಕೆಲವು ಹೆಣ್ಣುಮಕ್ಕಳಿಗೆ ಕೆಲವರ ಬೆಂಬಲ ಸಿಕ್ಕರೂ ಸಹ ಅವರು ಅದರಲ್ಲಿ ಸಿಕ್ಕಿ ಹೈರಾಣಾಗಿ ಹೋಗಿದ್ದಾರೆ .ಇನ್ನೂ ಅದೆಷ್ಟೋ ಪುರುಷರು ಹೇಳಿಕೊಳ್ಳಲಾಗದೆ ಮುಚ್ಚಿಟ್ಟುಕೊಳ್ಳಲಾಗದಂತೆ ಬಾಣಲೆಯಿಂದ ಬೆಂಕಿಗೆ ಬಿದ್ದು ಒದ್ದಾಡುತ್ತಿದ್ದಾರೆ .ಇಷ್ಟೆಲ್ಲ ಸಂಕಷ್ಟಗಳನ್ನು ತಂದೊಡ್ಡುವ ಈ ಸಾಮಾಜಿಕ ಜಾಲತಾಣಗಳ ಸ್ನೇಹ ಸಂಕೋಲೆ ನಮಗೆ ಬೇಕಾ ಎನ್ನುವ ದೊಡ್ಡ ಪ್ರಶ್ನೆ ನಮ್ಮೆದುರು ಬಂದು ನಿಲ್ಲುತ್ತದೆ . ಇದರ ಸಾಧಕ ಬಾಧಕಗಳನ್ನು ಪರಿಶೀಲಿಸಿದಾಗ ಸಾಧನೆಗಿಂತ ಬಾಧೆಗಳೇ ಹೆಚ್ಚು ಬದುಕನ್ನು ಕಂಗೆಡಿಸಿಬಿಡುತ್ತವೆ. ತುಂಬಾ ಆಕರ್ಷಣೀಯವಾಗಿರುವ ಈ ಕೆಟ್ಟ ಜಗತ್ತಿನೊಳಗೆ ಒಮ್ಮೆ ಪ್ರವೇಶಿಸಿ ಹೊರಬಂದಾಗ ಗೊತ್ತಾಗುತ್ತದೆ ಅದು ಎಷ್ಟು ಕ್ರೂರ ಎಂಬುದು .ಆದ್ದರಿಂದ ದಯವಿಟ್ಟು ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿ ಹದಿಹರೆಯದ ಯುವಕ ಯುವತಿಯರಲ್ಲಿ ಮಧ್ಯವಯಸ್ಸಿನ ಸ್ತ್ರೀ ಪುರುಷರಲ್ಲಿ ನನ್ನ ವಿನಮ್ರ ಮನವಿ ಇಷ್ಟೇ ನಿಮ್ಮ ಬುದ್ಧಿ ನಿಮ್ಮ ಕೈಯಲ್ಲಿರಲಿ . ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಆಕರ್ಷಣೆಗಳಿಗೆ ಒಳಗಾಗದೆ ತುಂಬಾ ವಿವೇಚನೆಯಿಂದ ಈ ಜಗತ್ತಿನಲ್ಲಿ ಬೆಣ್ಣೆಯೊಳಗಿನ ಕೂದಲನ್ನೆತ್ತಿಕೊಳ್ಳುವಂತೆ ಕೆಸರೊಳಗಿರುವ ಕಮಲದಂತೆ ನಾವು ಇದ್ದು ಬಿಡಬೇಕಲ್ಲವೇ ?!

೦೬೫೦ಪಿಎಂ೨೧೧೨೨೦೨೧ 
*ಅಮುಭಾವಜೀವಿ ಮುಷ್ಟೂರು*

Monday, December 20, 2021

ನಾಡಿಗ್ ಲೇಖನ

ಟಿಪ್ಪಣಿ

ನನ್ನ ದೃಷ್ಟಿಯಲ್ಲಿ
ಬರಹಗಾರನ ೧೦  ಲಕ್ಷಣಗಳು

೧ ತಾನು ಲೇಖಕ, ಲೇಖಕಿ ಎಂಬ ವಿಶೇಷ 
" ಭ್ರಮೆ "ಯನ್ನು ಕಿತ್ತು ಬಿಸಾಕಬೇಕು.

೨  down to earth ಅಂತಾರಲ್ಲ, ಅಷ್ಟು ಸಹಜ ಸರಳತೆ ಇರಬೇಕು

೩ ಅರ್ಧ ಕತೆ, ಒಂದು ಸಾಲು ಕವಿತೆ
ಬರೆದು ತನ್ನನು ತಾನು ಘೋಷಿತ ಬರಹಗಾರ ಎಂದು ತೀರ್ಮಾನಿಸಬಾರದು, ಅತ್ಯುತ್ತಮವಾದುದನ್ನು ಓದುತ್ತಿರಬೇಕು.

೪ ಪ್ರಶಸ್ತಿ  ಪುರಸ್ಕಾರ, ಇತ್ಯಾದಿ ಮೊದಲು
ದಕ್ಕಿದ ಕೂಡಲೇ ಬರಹ ನಿಲ್ಲಿಸಬಾರದು

೫ ಬರಹ  ಉಸಿರಿನ ಹಾಗೆ  ನಿರಂತರತೆ ಜೀವಮಿಡಿತದ ಹಾಗೆ ಸಹಜತೆ ಇರಬೇಕು

೬ ನದಿ ಗಾಳಿ ಬೆಳಕಿನ ಹಾಗೆ ಫಲಾಫಲ ನಿರೀಕ್ಷೆ ಇರದೆ ತನ್ನ ಪಾಡಿಗೆ ಬರೆಯಬೇಕು

೭ ತನ್ನಿಂದ ಜಗತ್ತು ಅಲ್ಲ, ತಾನು ಜಗತ್ತಿನ ಅತಿ ಸಣ್ಣ ಕಣ ಎಂಬ ನಿರ್ಮಮ ಭಾವ ಇರಬೇಕು

೮ ಸಣ್ಣ ನಿರ್ಲಿಪ್ತತೆ ಮತ್ತು ತೋರಿಸಿಕೊಳ್ಳದ ಅಂತಃಕರಣ ಒಟ್ಟೊಟ್ಟಿಗೆ ಕಟ್ಟಿಕೊಳ್ಳಬೇಕು

೯ ಲೋಕದ ನಿಂದೆ ಮತ್ತು ಜನಾನುರಾಗ ಎರಡನ್ನೂ ನಿಭಾಯಿಸುವ ಶಕ್ತಿ ಎದೆಗೆ ತಂದುಕೊಡಬೇಕು

೧೦ ಬರಹಗಾರನೇ  ಮುಖ್ಯ, ಬರಹ ಮುಖ್ಯ ಅಲ್ಲ ಎಂಬ ಒಣ ಹುಚ್ಚು ಹುಸಿಯನ್ನು ಬಿಡಬೇಕು.

ನಾಡಿಗ್
ದೀಪಾವಳಿ
೫/೧೧/೨೧

ಕವಿತೆ



0248ಎಎಂ26102021
*ಅಪ್ಪಾಜಿ ಸುಧಾ ಮುಸ್ಟೂರು*

ಈ ಜೀವಕೆ ನೀನೇ ಎಲ್ಲಾ
ನೀ ನನ್ನೊಂದಿಗಿರಲು
ಏನೋ ಒಂಥರ ಸುಂದರ ಅನುಭವ
ನನ್ನೆದುರಿಗಿನ ಖುಷಿಯ ಚಿತ್ತಾರ
ನನ್ನೊಳಗಿನ ನೆಮ್ಮದಿಯ  ಆಧಾರ
ನನ್ನ ಭಾವಬದುಕಿನ ಸಂಸ್ಕಾರ
ನನ್ನ  ಅನುರಾಗದ ಮುದ್ದು ಸಂಸಾರ
ಎಲ್ಲವೂ ನೀನಲ್ಲವೇ
ನಿನ್ನ ಹೊರತು ಏನೂ ಬೇಕಿಲ್ಲವೆ
ನನ್ನ ನಗು ನನ್ನ ಜಗವು
ಪ್ರತಿ ಪುಟದ ಪ್ರತಿ ಅಕ್ಷರಗಳ
ಪ್ರತಿರೂಪವೇ ನೀನು
ಪ್ರತಿ ಪದದ  ಅನುಭವದ
ಅನುಬಂಧದ ಪ್ರತಿಪಾದನೆಯೇ ನೀನು
ನನಗೆ ಸಾಕು ನಿನ್ನ  ಹಿಡಿ ಪ್ರೀತಿ
ನಾವಲ್ಲವೇ ಸುಖೀ ದಂಪತಿ

0520ಎಎಂ29102021
*ಅಪ್ಪಾಜಿ ಸುಧಾ ಮುಸ್ಟೂರು*

ಕವನ

*ಹಾಯ್ಕು*
ಜೇನಿನ ಹಾಗೆ
ಮಗುವಿನ ನಗುವು
ಖುಷಿ ಹಂಚಲು

ಮೊಗದಿ ಶಶಿ
ನಗುತಲಿದ್ದ ತಾಯಿ
ಮಡಿಲಲ್ಮಲ್ಗಿ

ತಾಯಿ ಪಾಲಿಗೆ
ಕಂದನೇ ಜೀವನವು
ನಲಿವು ನೋವ್ಗೂ

0330ಪಿಎಂ14112021



ಒಲವಿನ ಪೂಜೆಗೆ
ನೀನೇ ಬಾಡದ ಸುಮವು
ಬದುಕಿನ ಯಾತ್ರೆಗೆ
ದೇವರು ಜೊತೆ ನೀಡಿದ ವರವು
ಹದ ಬದುಕಿನ  ಓಗರ ಸವಿಯಲು
ನಲ್ಲೆ ನಿನ್ನೊಲವೇ ಮಧುಬಟ್ಟಲು

0224ಎಎಂ16112021
*ಅಪ್ಪಾಜಿ ಸುಧಾ ಮುಸ್ಟೂರು*
*ಅಪ್ಪಾಜಿ ಸುಧಾ ಮುಸ್ಟೂರು*




ಈ ನಿನ್ನ ಮುಗ್ಧತೆಗೆ
ಮನ ಸೋಲದವರುಂಟೆ ಕಂದ
ತಿರುಗಿ ನೋಡುವ ನಿನ್ನ ಸ್ಪಂದನೆಗೆ
ಬೆಸೆಯದಿರುವುದೇ ಅನುಬಂಧ
ಮಗುವಾಗಿ ಜಗವ ಗೆಲ್ಲುವೆ
ನಿನ್ನ  ಈ ನಗುವಿಗೆ ಕಳೆದುಹೋಗಿರುವೆ


0727ಪಿಎಂ16112021
 *ಅಪ್ಪಾಜಿ ಸುಧಾ ಮುಸ್ಟೂರು*
     

ಸುಧಾ ಲೇಖನ

ಗುರು ವಿನಿಂದಲೆ ಗುರಿ ಮುಟ್ಟುವಂತೆ ನಾ ನನ್ನ ತಾಯಿ
ನನ್ನ ಮೊದಲ ಗುರು .


ಅವರೇ ನನಗೆ ಬದುಕಿಗೆ ಸ್ಪೂರ್ತಿ.

ಎಷ್ಟು ಕಷ್ಟದ ದಿನಗಳನ್ನು ಅನುಭವಿಸಿದ ಜೀವ ಅದು.
ಆದರೂ ಎಂದೂ ಕುಗ್ಗದ ಉತ್ಸಾಹವೇ ನನಗೆ ತುಂಬಾ ಇಷ್ಟ. ಸದಾ ಏನಾದಾದರೂ ಒಂದು ಕೆಲಸ ಮಾಡುವುದು ಅವಳಿಗೆ ಹುಟ್ಟಿನಿಂದ ಬಂದ ಬಳುವಳಿ.
ನನ್ನ ತಾಯಿ ಇದ್ದಾಗ ಅವರ ಬೆಲೆ ನನಗೆ ಗೊತ್ತಿರಲಿಲ್ಲ.
ಈಗ ಪ್ರತಿ ಕ್ಷಣ ಅವರ ನೆನಪು ಕಾಡಿದೆ.
ಅಮ್ಮ ಅಮ್ಮ  ಅಮ್ಮ ತಾಯಿ ಪ್ರೀತಿ, ಮಮತೆ ಸಂತೊಷ
ನಗು  ಧೈರ್ಯ  ಶಕ್ತಿ  ಅವರೇ.
ಬದುಕಿನ ಹಾದಿಯಲ್ಲಿ ಬಹಳ ಕಷ್ಟ ಅನುಭವಿಸಿದರು ನನ್ನ ತಾಯಿ.
ಮಕ್ಕಳೆಂದರೆ ನನ್ನ ಅಮ್ಮನಿಗೆ ತುಂಬಾ ಇಷ್ಟ.
ನನಮ್ಮನಿಗೆ ಸುಖಕಿಂತ ನೊವೇ ಜಾಸ್ತಿ. ಬಡಪಾಯಿಗೆ
ಮಕ್ಕಳೆಂದರೆ ಜೀವದ ಜೀವ.
ಒಬ್ಬ ಒಳ್ಳೆಯ ಮಗಳು ಸೋದರಿ ಮಡದಿ  ತಾಯಿಯ ಎಲ್ಲಾ ಜವಾಬ್ದಾರಿ ನ ಸರಿಯಾಗಿ ನಿಬಾಯಿಸಿದರು.
ಆದರೂ
 ನನ್ನ ತಾಯಿ ಯ ನಿರಾಕರಿಸಿದರು ಎಲ್ಲರೂ.
ತುಂಬಾ ಹೆಮ್ಮೆ ಅನಿಸುತ್ತೆ ಅವರು ನನ್ನ ತಾಯಿಯಾಗಿಪಡೆದದ್ದು. ಇನ್ನು ಸ್ವಲ್ಪ ದಿನ ನಮ್ಮ ಜೋತೆ ಇರಬೇಕಿತ್ತು ಎಂಬ ಸಣ್ಣ ಆಸೆ ಇತ್ತು.
ತನಗೆ ಊಟ ಇತ್ತ  ಇಲ್ಲೊ ಆದರೆ ನಮಗೆ ಮಾತ್ರ ಹೊಟ್ಟೆಗೆ ಎಂದು ಕಡಿಮೆ ಮಾಡದ ಅನ್ನದಾತೆ ನನ್ನ ಅಮ್ಮ.
ನನ್ನ ಅಮ್ಮನಿಗೆ ತಮ್ಮಜೀವನದ ಅನುಭವಗಳನ್ನು ಹೇಳುವುದೆಂದರೆ ತುಂಬಾ ಇಷ್ಟ.
ಯಾವಾಗಲೂ ಏನಾದರೊಂದು ವಿಷಯವನ್ನು ಹೇಳಿಕೊಡ್ತಿದ್ದರು. ಆದರೆ ಜನ  ಅದನ್ನು ಕೆಟ್ಟವರನಾಗಿ ಮಾಡಿದರು.
ಇನ್ನೂ ಮೊಮ್ಮಕ್ಕಳನ್ನು ಕಂಡರೆ ಸಾಕು ಸ್ವಲ್ಪ ಜಾಸ್ತಿ ನೆ
ಇಷ್ಟ.
 ಯಾವಾಗಲೂ ಅವರ ಜೋತೆ ನಗುತ್ತಿದ್ದರು.
ಭೂಮಿಯಂತೊಳು ಭೂಮಿ ತೊರಿಸಿದವಳು
ನನ್ನ ಹೆತ್ತವಳೂ
ಮುತ್ತ ನಿಟ್ಟೊಳು
ಬಚ್ಚಿಟೂ ತುತ್ತ ನಿಟ್ಟೋಳು.
I Love you Amma
Miss you Amma.


ಸುಧಾ ಅಪ್ಪಾಜಿ.17.11.21.

ಕವನ

ನೀ ಬಿಟ್ಟು ಹೋದ
ದಾರಿಯತ್ತ ದೃಷ್ಟಿ ನೆಟ್ಟು
ಕಾದಿಹೆನು ಮತ್ತೆ ಬರುವೆ ಎಂದು
ನೋಡುವ ಕಣ್ಣೊಳಗೆ
ಧೂಳು ಸೇರಿ ಕಂಬನಿಯು
ಹೇಳಿತು ನೀ ಮತ್ತೆ ಬರಲಾರೆ ಎಂದು

ಬೇಡವಾಗಿದ್ದ ಬದುಕಿನೊಳಗೆ
ಆಗಂತುಕನಾಗಿ ಬಂದು ಹೀಗೆ
ಆಕಸ್ಮಿಕವಾಗಿ ಹೊರಟು ಹೋದೆ
ಬೇಕೆನಿಸಿದಾಗ ಕೈಗೆಟುಕದೆ
ಬರಿ ನೋವಿನ ಪ್ರವಾಹವನ್ನೇ
ಬಾಳಿಗುಡುಗೊರೆಯಾಗಿ ನೀಡಿದೆ

ಹೃದಯ ವೇದನೆಗೆ  ಔಷಧವಿಲ್ಲ
ಮನದ ನೋವಿಗುಪಶಮನವಿಲ್ಲ
ಸಹಿಸಲೇ ಬೇಕು  ಇರುವವರಿಗೆ
ಕಾಡುವ ನೆನಪುಗಳ ಜೊತೆಗೂಡಿ
ದೂಡಬೇಕಿದೆ ಈ ಬಾಳ ಬಂಡಿ
ಸಾವು ಬಂದು ಕರೆಯುವವರೆಗೆ

1040 ಪಿಎಂ13102021
*ಅಪ್ಪಾಜಿ ಸುಧಾ ಮುಸ್ಟೂರು*

ಈ ನಿನ್ನ ನಗುವ ಚೆಲುವು
ಸೋತಿತದಕೆ ನನ್ನ ಮನವು
ಒಲವಿನ ಕಾಣಿಕೆ ನೀಡಿವೆ ಸಂಗಾತಿ
ಹೃದಯ ಕದ್ದೆ ನೀ ಸುಮತಿ
ಪ್ರೀತಿಯ ಕವಿತೆಗೆ ನೀನಾದೆ ಸ್ಪೂರ್ತಿ
ಜೊತೆ ಬಾಳುವೆ ಜೀವನ ಪೂರ್ತಿ

0533ಎಎಂ16102021
*ಅಪ್ಪಾಜಿ ಸುಧಾ ಮುಸ್ಟೂರು*


ಕಳ್ಳ ಬೆಕ್ಕು ಮ(ನ)ನೆಯೊಳಗೆ ಬಂದಿತ್ತು
ಮೆಳ್ಳಿ ಮಾತಿನಿಂದ ಮನವ ಸೆಳೆದಿತ್ತು
ಮನಸಿನ ತಿಳಿಗೊಳದಲ್ಲಿ ಹೆಜ್ಜೆಯಿರಿಸಿ
ಇದ್ದ ನೆಮ್ಮದಿಯನೆಲ್ಲ ಕದಡಿ
ಒಲವಿನ ಹಾಲ್ಮೊಸರನೆಲ್ಲ ಕುಡಿದು
ಕೈಗೆಟುಕದ ಹಣ್ಣು ಹುಳಿಯೆಂದು
ದೂರಿ ಹೊರಟು ಹೋಯಿತು
ಬಗ್ಗಡವಾದ ಮನದಲೀಗ
ಶಾಂತಿಯ ಕಾಣಲು ನಿತ್ಯ ಹೋರಾಟ
ಎಚ್ಚರ ನಿಮ್ಮ ಮನೆಗೂ ಬರಬಹುದು
ಬಾಗಿಲಲೇ ತಡೆದು ಹಿಮ್ಮೆಟ್ಟಿಸಿ
ಮಾರ್ಜಾಲ ನ್ಯಾಯವ ಜ್ಞಾಪಿಸಿಕೊಳ್ಳಿ


0956ಪಿಎಂ16102021
*ಅಮುಭಾವಜೀವಿ ಮುಸ್ಟೂರು*

ತಾವು ಗಾಜಿನ ಮನೆಯಲ್ಲಿ ಕೂತು
ಇನ್ನೊಬ್ಬರ ಮನೆ ಮೇಲೆ ಕಲ್ಲೆಸೆದು
ಗುಲ್ಲೆಬ್ಬಿಸುವ ಜನರುಂಟು ಜಗದಲಿ

ತಾನೇನೆಂಬುದನರಿಯದ ಜನ
ಇತರರ ಕುರಿತು ಇಲ್ಲಸಲ್ಲ ಗುಮಾನಿ
ಮಾತಾಡಿ ತಾವು ಸಾಚಾಗಳೆಂದುಕೊಳ್ಳುವರು

ತನ್ನ ಮನೆಯೊಳಗೆ ಏನಾಗುತ್ತಿದೆ
ಎಂದು ತಿಳಿಯಲಾರದ ಶೂರರು
ಇತರರ ಕುರಿತಾಗಿ ಗೂಡಚರ್ಯ ಮಾಡುವರು

ಎರಡೂ ಕೈಗಳು ಸೇರಿ ಚಪ್ಪಾಳೆಯಾಗುವುದಾದರೂ
ಒಂದು ಕೈ ಕತ್ತರಿಸಿ ಇನ್ಶೊಂದರದೇನೂ ತಪ್ಪಿಲ್ಲವೆಂದು
ಜಗದೆದುರು ಹರಾಜಾಕಿ ಮೆರೆಯುವರು

ತನ್ನನ್ನೇ ತಾನು ನಂಬದ ಗೋಸುಂಬೆ
ಕುಲದವರು ಇತರರ ನಂಬಿಕೆಯನ್ನೂ
ಅಪನಂಬಿಕೆಯಲಿ ಅಳೆದು ನೋಡುವರು

ಜಗವೇ ಹೀಗೆ ನಿನ್ನಂತೆ ನೀ ನಡೆದುಬಿಡು
ಆಡುವವರ ಮಾತಿಗೆ ಕಿವಿಗೊಡಬೇಡ
ನಿನ್ನ ಪ್ರಾಮಾಣಿಕತೆಗೆ ಜಯವಿದ್ದೇ ಇದೆ

0245ಪಿಎಂ19102021
*ಅಪ್ಪಾಜಿ ಸುಧಾ ಮುಸ್ಟೂರು*


ಒಂದೇ ತಪ್ಪು ಸಾಕು
ಈ ಜಗತ್ತು ನಿನ್ನನುರುಳಿಸಲು
ತಪ್ಪಿನ ಹಿಂದಿನ ಕಾರಣಕಿಂತ
ಕಣ್ಣೆದುರಿಗುರುವುದೇ ಸರಿ
ಎಲ್ಲರು ಕಣ್ಣ ಗುರಿ ನಿನ್ನ ಮೇಲಿರಲು
ಎಚ್ಚರದಿಂದಿರುವುದು ಒಳಿತು
ಮೊಸಳೆ ಕಣ್ಣೀರಿಗೇ ಕರುಗುವ
ಜಗದೆದುರು ಸಿಕ್ಕಿಬೀಳದಿರು
ಒಮ್ಮೆ ಸಿಕ್ಕರೂ ನಿನ್ನ  ಇಡೀ
ಜನ್ಮಕ್ಕಾಗುವಷ್ಟು ದೂಷಣೆ
ಅವಮಾನಗಳನು ಸಹಿಸಬೇಕಾದೀತು

0825 ಪಿಎಂ19102021
*ಅಪ್ಪಾಜಿ ಸುಧಾ ಮುಸ್ಟೂರು*

ಬದುಕಿನಲಿ ಪ್ರತಿ ದಿನವೂ
ಒಂದು ಹೊಸ ಅಧ್ಯಾಯ
ಓದದೇ ಪುಟ ತಿರುವಿದರೆ
ಕತ್ತಲಾಗುವುದು ಭವಿಷ್ಯ

ಪ್ರತಿ ಪುಟದ ಪ್ರತಿ  ಅಕ್ಷರ
ಅನುಭವ ತುಂಬಿಕೊಡುವ  ಆಧಾರ
ಖುಷಿಯ ವಿಷಯ ನೂರಿರಲು
ಶ್ರಮವ ಸಾರುವುದು ಬೆವರ ಸಾಲು

ಅವರವರ ಪುಟವನ್ನು  ಅವರೇ ಓದಬೇಕು
ಅರಿಯದುದನು ಹಿರಿಯರಿಂದ ತಿಳಿಯಬೇಕು
ಮರೆಯದೆ  ಎಲ್ಲವನ್ನೂ ಕಲಿಯಬೇಕು
ನಾಳೆಗೆ ಹಿರಿಯನಾಗುವಂತೆ ಬೆಳೆಯಬೇಕು

ಕಲಿಸಲು ಯಾರಿಲ್ಲ  ಇಲ್ಲಿ ಗುರುಗಳು
ಅರ್ಥವಾಗಲು ದಂಡಿಸುತ್ತವೆ ಕಷ್ಟಗಳು
ದಂಡನೆಗೆ ಹೆದರಿ ಗೈರಾದೆಯಾದರೆ
ಫಲಿತಾಂಶ ತಿಳಿಯಲು ಇರಲಾರೆ

ಆತ್ಮವಿಶ್ವಾಸದಿ  ಓದಿ ಮುಗಿಸು
ಆಗಲೇ ಬದುಕು ಬಲು ಸೊಗಸು
ಅವಸರದ  ಅಧ್ಯಯನದಿ ಸಿಗದು ಯಶಸ್ಸು
ಅತಿ ವಿನಯದಿ ಕಲಿತು ಗುರಿ ಸಾಧಿಸು

0603ಎಎಂ21102021
*ಅಪ್ಪಾಜಿ ಸುಧಾ ಮುಸ್ಟೂರು*

ಇರುವುದೊಂದೇ ಜೀವನ
ಪ್ರತಿ ಕ್ಷಣವೂ ಖುಷಿಯಿಂದ ಅನುಭವಿಸಬೇಕು
ಬೇಕೆನಿಸಿದಾಗ ಮತ್ತೆ ಹಿಂತಿರುಗಿ ಹೋಗಲಾರದು
ಈ ಗಳಿಗೆಯನು ಆಸ್ವಾದಿಸುತ್ತಾ ಸಾಗಬೇಕು
ಗೊತ್ತಿಲ್ಲ ಯಾವಾಗ ಕರೆಬರುವುದೋ
ಅದಕಾಗಿ ವ್ಯರ್ಥ ಮಾಡದೆ ಉಪಯೋಗಿಸಬೇಕು
ಕರೆ ಬಂದಾಗ ಕೊರಗಿರದಂತೆ ತೆರಳಬೇಕು
ನೋವಿನ ಕಹಿ ಮರೆತು
ನಲಿವಿನ ಸಿಹಿ ಜೊತೆ ಬೆರೆತು
ಆನಂದದಿ ಅವಿಸ್ಮರಣೀಯವಾಗಿಸಿಕೊಂಡು
ಬದುಕನ್ನು ಸಂಪೂರ್ಣ ಅನುಭವಿಸೋಣ

0919 ಪಿಎಂ21102021
*ಅಪ್ಪಾಜಿ ಸುಧಾ ಮುಸ್ಟೂರು*

ನಾನಾಗಿಯೇ  ಇಟ್ಟುಕೊಂಡೆ ಕಪ್ಪು ಚುಕ್ಕೆ
ಸಕಲವನ್ನೂ ಕಳೆದುಕೊಂಡೆ ಆ ಕಾರಣಕ್ಕೆ 
ಅರಿಯದೆ ಮಾಡಿಕೊಂಡ  ಆ ತಪ್ಪು
ಭವಿಷ್ಯದ ಪ್ರಭೆಯನ್ನೇ ನುಂಗಿದ ಕಪ್ಪು

ನಿಸರ್ಗದ ಕೂಸಾಗಿ ಸಂಭ್ರಮಿಸುತ್ತಾ
ಪ್ರೀತಿಯ ರಾಯಭಾರಿಯಾಗಿ ಹಂಚುತ್ತಾ
ನನ್ನೊಳಗೆ ನಾನು ಸದಾ ಖುಷಿಯಾಗಿದ್ದೆ
ಆ ವಿಷಯ ಘಳಿಗೆಯಿಂದ ಬಲು ನೊಂದೆ

ಹೋದಲ್ಲಿ ಬಂದಲ್ಲಿ ಗೌರವದ ಗುಂಗಲ್ಲಿ
ಮಿಂದೆದ್ದು ನನ್ನೊಳಗೆ ನಾನೇ ಹೆಮ್ಮೆ ಪಟ್ಟಿದ್ದೆ
ತಿಳಿ ಶುಭ್ರ ಬಿಳಿ ಹಾಳೆಯಲಿ ಮೂಡಿದ ಚುಕ್ಕೆ
ಅದೆಷ್ಟೋ ಅನರ್ಥಗಳಿಗಾಹಾರವಾಗಿಸಿತು ನನ್ನ

ಪುರಸ್ಕರಿಸುತ್ತಿದ್ದ ಕೈಗಳೆಲ್ಲವೂ ಈಗ
ತಿರಸ್ಕಾರದಿಂದ ನೋಡುತಿರುವಾಗ
ನೋಯುತ್ತಿವೆ ಈ ಮುಗ್ಧ ಮನಸ್ಸು
ಇನ್ನು ಮರೀಚಿಕೆಯಾಯ್ತು ಕಂಡ ಕನಸು

ಕಂಗಾಲಾಗಿದೆ ನನ್ನ  ಅಂಬೆಗಾಲಿನ ಪಯಣ
ಕದ್ದು ಹಂಚಿದುದೊಂದೆ ಕಾರಣ
ಕಂಗೆಡಿಸಿತು ದಂಗುಬಡಿಸಿತು ಬದುಕನ್ನು
ತೀವ್ರ ನಿರ್ಲಕ್ಷ್ಯಕ್ಕೊಳಗಾದೆ ವಿನಾಕಾರಣ

ಬದುಕಿನ ದಿಕ್ಕನ್ನೇ ಬದಲಿಸಿದಾ ಘಟನೆ
ಭಾವದಾರಿದ್ರ್ಯಕೆ ನಾ ತುತ್ತಾದೆನೆ
ಅಳುಕಿನ ಭಾವದಿ ಭವಿಷ್ಯಕೆ ಕುತ್ತು ತಂದುಕೊಂಡೇನೆ
ಕ್ಷಮಿಸುವ ಮನಸಿಲ್ಲದವರೆದುರು ಕೃಶವಾದೆನೆ

0417ಎಎಂ 22102021
*ಅಪ್ಪಾಜಿ ಸುಧಾ ಮುಸ್ಟೂರು*




ಸುಧಾ ಕವಿತೆ

ಅತ್ಯಂತ ಅಮೂಲ್ಯ ನೀ ನನ್ನ ಬಾಳಿಗೆ
 ಪ್ಪಾಪೀಯ ಕೈ ಹಿಡಿದ ತಪ್ಪಿಗೆ
ಜೀವನ ದಲ್ಲಿ ಸುಖವಿಲ್ಲ ನನಿಂದ ನಿನಗೆ
ಸುರಕ್ಷಿತಳಾಗಿರುವೆ ಅದು ನಿನ್ನ ಕೊಡುಗೆ
ಧಾರಿದ್ಯಳಾಗಿ ಬಂದೇ ನಿನ್ನ ಬದುಕಿಗೆ



ಸುಧಾ ಅಪ್ಪಾಜಿ 1  12  21  4/15 am

ಕವಿತೆ

ಸಾವು ಬಂದು ಹೋದ ಮೇಲೆ
ನೆನಪು ನೂರು ಕಾಡಿವೆ
ನೋವು ನುಂಗುವ  ಈ ವೇಳೆ
ಮಾತುಗಳು ಮೌನ ತಾಳಿವೆ


ರುಬಾಯಿ*

ಮಾತು ಬರದೆ ಮೂಕವಾಗಿದೆ
ಮನಸು  ಬರಿದಾಗಿಹೋಗಿದೆ
ಮೂಕವೇದನೆಯಲಿ ಬಳಲಿ
ಬದುಕೀಗ ನಿಸ್ಸಹಾಕವಾಗಿದೆ

0927ಪಿಎಂ08112021
*ಅಪ್ಪಾಜಿ ಸುಧಾ ಮುಸ್ಟೂರು*

ದೊಡ್ಡ ಬದಲಾವಣೆಯಾಗಿದೆ
ಅಂದು ನಡೆದ  ಆ ಘಟನೆಯಿಂದ
ಮತ್ತೆಂದೂ ಎಡವದಂತೆ ಎಚ್ಚರಿಸಿದೆ
ಅವಮಾನವನ್ನು ಸಹಿಸಿ
ಅವಹೇಳನದ ಮಾತಿಗೆ ಕೊರಗಿ
ನಂಬಿದವರೇ ನಿಂದಿಸಿದಾಗ
ಮನವೀಗ ಬದಲಾಗಿದೆ ವಿಧಿಯಿಲ್ಲ
ಅಭಿನಂದಿಸುವರಿಲ್ಲದೆ ಕೊರಗಿ
ಮತ್ತೆ  ಎಲೆಮರೆಯ ಕಾಯಾಗಿ
ಅಲ್ಲೇ ಮಾಗುವ ಮನಸು ಮಾಡಿದೆ

0958ಪಿಎಂ08112021
 *ಅಪ್ಪಾಜಿ ಸುಧಾ ಮುಸ್ಟೂರು*

ಸತ್ಯಕ್ಕೆ ಗೆಲುವು
ನಿಧಾನವಾಗಬಹುದು
ಆದರೆಂದೂ ಸೋಲದು
ಸತ್ಯವಂತರಿಗೆ ಪರೀಕ್ಷೆಗಳು ಜಾಸ್ತಿ
ಆದರೂ ಎದೆಗುಂದುವ ಭಯವಿಲ್ಲ
ಭರವಸೆಯೊಂದಿರೆ ಗೆಲುವು ಸಾಧ್ಯ
ಅವಮಾನಗಳೆಲ್ಲ  ಅಭಿಮಾನವಾಗಲು
ನೂರು ಸೋಲುಗಳ ನಂತರ ಗೆಲ್ಲುವ
ಆತ್ಮವಿಶ್ವಾಸ ತುಂಬಿರಲಿ ಬದುಕಿನಲಿ
ಗೆದ್ದು ಬೀಗುವ ಬದಲು
ಬಿದ್ದು ಏಳುವ ಛಲವಿರಲಿ

0927ಪಿಎಂ09112021
*ಅಪ್ಪಾಜಿ ಸುಧಾ ಮುಸ್ಟೂರು*


ಕವಿತೆ

ನನ್ನೊಳಗಿನ ಅನುಭೂತಿಗೆ
ಯಾವ ಸಂಕೋಲೆಗಳ ಬಂಧನವಿಲ್ಲ
ಮೇಲುಕೀಳುಗಳ ವಾದವಿವಾದಗಳಲಿ
ಯಾವ ಪ್ರಯೋಜನವೂ ಇಲ್ಲ.

ಮಗು ವಿಶ್ವ ಮಾನವತೆಯಿಂದ
ಮನಷ್ಯನ ಸಂಕುಚಿತತೆ ಹೊಂದಿದಾಗಲೇ
ಮನುಕುಲದ ಮೇಲ್ಛಾವಣಿ ಕುಸಿಯಿತು
ಮಾನವೀಯತೆಯು ಆಗಲೇ ಸತ್ತಿತು

ಯಾರ ಮನೆಯ  ಊಟ
ಯಾರು ತಿಂದರೋ ಗೊತ್ತಿಲ್ಲ
ಊರ ಮುಂದಿನ ಕಸ ಗುಡಿಸಿದ್ದು
ಮಾತ್ರ ಭಾರಿ ಸುದ್ದಿಯಾಗುವುದಲ್ಲ

ಜಾತಿಗಳ ಕೋತಿಗಳ ಕೈಯಲ್ಲಿ
ಮಾನವತೆಯ ಮಾಣಿಕ್ಯ ಸಿಕ್ಕು
ಬದುಕಿನ ಮೌಲ್ಯಗಳನೇ ಕಳೆಯುತಿದೆ
ಹೀಗಾದರೆ ಮುಂದಿನ ಪೀಳಿಗೆಗೆ  ಯಾರು ದಿಕ್ಕು

ಪ್ರೀತಿಯ ಪರಿಶುದ್ದತೆಯಲ್ಲೂ
ಬಾಂಧವ್ಯದ ಜ್ಯೋತಿ ನಂದಿ
ಬವಣೆಗಳನ್ನು ಹೊತ್ತು ತಂದಿದೆ
ಮೇಲೆ ನಕ್ಕರೂ ಒಳಗಿನ್ನೂ ಇದೆ ಬೇಗುದಿ

ಮನುಕುಲೋದ್ದಾರಕ್ಕೆ
ಅಡ್ಡಿಯಾಗುವ ಕಾರಣಕ್ಕೆ
ಜಾತಿ ಮತ ಧರ್ಮ ಪಂಥಗಳ ಆಚೆ ನೂಕಿ
ಸಮಸಮಾಜದ ಕ್ರಾಂತಿ ಜ್ಯೋತಿ ಪ್ರಜ್ವಲಿಸಲಿ

1003ಪಿಎಂ16112021
ಅಪ್ಪಾಜಿ ಸುಧಾ ಮುಸ್ಟೂರು

ನೀ ಹಣೆಗಿಡುವ ಹೂಮುತ್ತಿನಲ್ಲಿ
ನಲ್ಲ ನನ್ನ ಬಾಳ ಬುತ್ತಿಯಿದೆ
ನೀ ತೋರುವ  ಈ ಪ್ರೀತಿಯಲಿ
ಎಲ್ಲಾ ನೋವ ಮರೆಸೋ ಶಕ್ತಿಯಿದೆ
ನಿನ್ನ  ಎದೆ ಮೇಲೆ ತಲೆಯಿಡಲು
ನನ್ನೆಲ್ಲ ಕಷ್ಟಗಳು ದೂರವಾಗಿವೆ
ನಿನ್ನ  ಒಲವಿನ ಬಿಸಿಯಪ್ಪುಗೆಯಲ್ಲಿ
ನಲ್ಲ ನಾ ಕರಗಿಹೋಗುವೆ
ನಿನ್ನ ಈ ಸಾಮಿಪ್ಯದ ನೆರಳಿನಲ್ಲಿ
ಬಾಳ ಚೆಲುವಾಗಿ ನಾ ಅರಳುವೆ

0345ಎಎಂ20112021
 *ಅಪ್ಪಾಜಿ ಸುಧಾ ಮುಸ್ಟೂರು



ಲೇಖನ

ಬದುಕಲು ಬಂದ ನಮಗೆ  ಈ ಸಾವು ನೋವುಗಳು ಸಹಜ. ಅದನ್ನು  ಅನುಭವಿಸಲಷ್ಟೇ ನಾವು ಶಕ್ತರು.ನಮ್ಮ ಮನಸಿನ ಸಮಾಧಾನಕ್ಕೆ ಆ ವಿಧಿಯನ್ನು ಅಥವ ದೇವರನ್ನು ಬೈಯ್ಯುವುದು ಅಸಹಾಯಕರಾಗಿ ನಮಗಿಂತ ನೋವು ದುಃಖ ಕೊಡದಿರು ಎಂದು  ಅಂಗಲಾಚುವುದಷ್ಟೇ ನಮ್ಮಿಂದ ಸಾಧ್ಯ  ಆದರೆ ಅದು ತಾನೇನು ಮಾಡಬೇಕೆಂದುಕೊಂಡಿದೆಯೋ ಅದನ್ನು ಮಾಡಿಯೇ ತೀರುತ್ತದೆ.ನಮಗೆ  ಆ ನೋವು ಮಾತ್ರ ಜೀವಮಾನವಿಡೀ ಉಳಿದುಬಿಡುತ್ತದೆ.ಇಲ್ಲಿ ಸಜ್ಜನರು ದುರುಳರು ದುಷ್ಟರು ಅಂತ  ಇಲ್ಲ.  ಅವರವರ ಸಮಯ ಬಂದಾಗ ಎಲ್ಲರೂ ವಿಧಿಯಿಲ್ಲದೇ ವಿಧಿಗೆ ಶರಣಾಗಬೇಕು. ಆದರೆ ಸಜ್ಜನರು ಸ್ವಲ್ಪ ಬೇಗನೇ ಹೊರಟುಬಿಡುತ್ತಾರೆ ಅದಕ್ಕೆ ಸ್ವಲ್ಪ ನೋವು ಜಾಸ್ತಿ. ಅದನ್ನು ತಡೆಯಲು ಪ್ರಯತ್ನಿಸಿ ಗೆಲ್ಲಬೇಕು.  ಅದಕ್ಕಾಗಿ ನಾವು  ಅವರ ನೆನಪುಗಳ ಬುತ್ತಿ ಬಿಚ್ಚಿ ಅವರೊಡನಾಟದ ಸವಿಕ್ಷಣಗಳನ್ನು ಮೆಲುಕು ಹಾಕುತ್ತಾ ನಮ್ಮ ವರ್ತಮಾನದ ಸಹಜೀವಿಗಳೊಂದಿಗೆ ಅವರ ಹಾದಿಯಲ್ಲಿ ಸಾಗುವ ಮೂಲಕ ನೋವು ಮರೆಯಬೇಕು. ನಮ್ಮ ಸಜ್ಜನಿಕೆಯ ಕಾಲ ಬರುವತನಕ ಸಾಗಬೇಕು. ಇಲ್ಲಿ ಯಾರೂ ಶಾಶ್ವತವಲ್ಲ.  ಎಲ್ಲರೂ  ಎಲ್ಲವೂ ಅನಿಶ್ಚಿತವೇ. ಸಾವು ನೋವಿನ್ನು ತಡೆಯುವ ಶಕ್ತಿ ನಮಗಿಲ್ಲ  ಆದರೆ  ಹಚ್ಚಿಕೊಂಡವರ ನಂಟು ಬಿಚ್ಚಿಕೊಂಡು ಹೋದಾಗ ಇನ್ನಿಲ್ಲದಂತೆ ಖಾಲಿತನ ನಮ್ಮನ್ನು  ಆವರಿಸಿಕೊಂಡುಬಿಡುತ್ತದೆ. ಅದರಿಂದ ಹೊರಬರುವ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿ  ಇದೆ.  ಇಂತಹ ವಿಷಮ ಪರಿಸ್ಥಿತಿಯಲ್ಲಿ ನಾವು ಒಬ್ಬಂಟಿ ಅನಿಸಿದರೂ ಕೂಡ ನಮ್ಮ ಸುತ್ತ ಮುತ್ತ  ಅದೆಷ್ಟೋ ನೊಂದ ಜೀವಗಳ ಬದುಕು ಸಾಗುತ್ತಿರುತ್ತದೆ.ಅದನ್ನು ನೋಡಿ ನಾವೂ ಅವರಲ್ಲೊಬ್ಬರಾಗಿ ದಡ ಸೇರುವ ಪ್ರಯತ್ನ ಮಾಡಬಹುದು ಅಷ್ಟೇ.  ಅದನ್ನು ಬಿಟ್ಟು ನಾವು ಸದಾ ಅದೇ ಚಿಂತೆಯಲ್ಲಿ ಕೃಶವಾಗದೆ   ಎದುರಾಗುವ ಅದೆಷ್ಟೋ ವಿಪ್ಲವಗಳಿಗೆ ಎದೆಗುಂದಿದೆ ಮುನ್ನಡೆಯಬೇಕು.

0540ಎಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*


ಫೇಸ್ಬುಕ್ಕಲ್ಲಿ ಪರಿಚಯ
ವಾಟ್ಸಪ್ಪಲ್ಲಿ ವಿನಿಮಯ
ಚಾಟಿಂಗಲ್ಲಿ ಸಲಿಗೆ
ಮೀಟಿಂಗಲ್ಲಿ ಸುಲಿಗೆ
ಸಂಸಾರದಲ್ಲಿ ಗೌಪ್ಯತೆ
ಜಾಲತಾಣದಲಿ ಗಾಢತೆ
ಮಾತಿನಲ್ಲಿ  ಅತಿ ವಿನಯತೆ
ನೋಟದಲಿ ಮಾದಕತೆ
ಸಂ(ಸಾ)ಸ್ಕಾರಸ್ಥರಲಿ ಪ್ರೀತಿ
ಸಮಾಜದಲ್ಲಿ  ಆದರ್ಶ ಸತಿ
ಯಾಮಾರಿಸಿ ಹಳ್ಳ ತೋಡುವ
ಕೆಲ ಅಂತರ್ಜಾಲ ಮಾಯಾಂಗನೆರು
ಬಾಳ ನೆಮ್ಮದಿಗೆ ಕೊಳ್ಳಿಯಿಟ್ಟು
ಬಿಸಿ ಕಾಯಿಸಿಕೊಳ್ಳುವರು ಎಚ್ಚರ

0829ಪಿಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*

ಸುಧಾ ಕವಿತೆ

ಅತ್ಯಂತ ಅಮೂಲ್ಯ ನೀ ನನ್ನ ಬಾಳಿಗೆ
 ಪ್ಪಾಪೀಯ ಕೈ ಹಿಡಿದ ತಪ್ಪಿಗೆ
ಜೀವನ ದಲ್ಲಿ ಸುಖವಿಲ್ಲ ನನಿಂದ ನಿನಗೆ
ಸುರಕ್ಷಿತಳಾಗಿರುವೆ ಅದು ನಿನ್ನ ಕೊಡುಗೆ
ಧಾರಿದ್ಯಳಾಗಿ ಬಂದೇ ನಿನ್ನ ಬದುಕಿಗೆ



ಸುಧಾ ಅಪ್ಪಾಜಿ 1  12  21  4/15 am

ಕವನ

ಯಾರೋ ಬರೆದ ಕಥೆಯಲ್ಲಿ
ಕೇವಲ ಪಾತ್ರಧಾರಿ ನಾನು
ದಿಗ್ದರ್ಶಿಸುವ ಅವರ ತಪ್ಪಿಗಾಗಿ
ಸಿಕ್ಕಿಹಾಕಿಕೊಂಡು ಪರಿತಪಿಸುವೆ ನಾನು

ನನ್ನ ಭಾವನೆ ಬೇರೆ
ನನ್ನ ಕಲ್ಪನೆ ಬೇರೆ
ನನ್ನ ವ್ಯಕ್ತಿತ್ವವೇ ಬೇರೆ ಆದರೂ
ನನ್ನ ನೋಡುವ ಕಣ್ಣಿಗೆ ಬೇರೆಯೇ ಆಗಿ ಕಂಡೆನು

ಆಡಿಸಿದಂತೆ ಆಡುವ ಬೊಂಬೆಗೆ
ವ್ಯಕ್ತಿತ್ವವೆಂಬುದು ಬರೀ ಮರೀಚಿಕೆ
ಅಸ್ತಿತ್ವವನ್ನೇ ಕಳೆದುಕೊಂಡು ಬದುಕಲು
ನನ್ನಿಂದ ಸಾಧ್ಯವಾಗುತ್ತಿಲ್ಲ ಅದೇ ಚಡಪಡಿಕೆ

ಕೊಟ್ಟ ಕುದುರೆಯನೇರಲರಿಯದವರು
ಅಡ್ಡಾದಿಡ್ಡಿ ಓಡಿಸಿ ಮೆರೆದರು
ದಣಿದ ಕುದುರೇಗೆ ಮಾತ್ರವೇ
ಚಾಟಿ ಏಟಿನ ನೋವುಣಿಸಿದರು

ಇಲ್ಲಿ ಎಲ್ಲರೂ ಅವರವರ ಮೂಗಿನ ನೇರಕ್ಕೆ
ನಮ್ಮ ವ್ಯಕ್ತಿತ್ವವನ್ನು ತೂಗಿ ಅಳೆಯುವರು
ಬದುಕು ಭಾವನೆಗಳು ನನ್ನವಾಗಲು
ಬಿಡದೆ ಕಂಗೆಡಿಸುವ ಮೂಢ ಜನರು  

ಬಳಿದ ಮಸಿಯನೆಲ್ಲ ತೊಳೆದುಕೊಂಡು
ಮತ್ತೆ ನಾನೆದ್ದು ಬರುವೆ ಏನೆಂದು ತೋರಲು
ನನ್ನ ಬಗ್ಗೆ ಅರಿತವರು ತುಂಬಿದ ಬೆಂಬಲ
ಸ್ಫೂರ್ತಿಯಾಗಿದೆ ನಾನೆಲ್ಲ ಗೆದ್ದು ಬದುಕಲು

೦೭೫೦ಎಎಂ೦೬೧೨೨೦೨೧
ಅಮುಭಾವಜೀವಿ ಸುಧಾ ಮುಸ್ಟೂರು


ಮತ್ತೆ ಪುಟಿದೇಳಬೇಕು ಇಲ್ಲಿ
ಕೊಂದವರ ಎದುರಲ್ಲಿ ಮತ್ತೆ
ಮರುಜೀವ ಪಡೆದು ಬೆಳೆಯಬೇಕಿಲ್ಲ

ಇಲ್ಲಸಲ್ಲದ ಆಪಾದನೆಗಳ
ಎಡೆಮುರಿಕಟ್ಟಿ ತೋರಬೇಕು
ಬದುಕಿನಲ್ಲಿ ಭರವಸೆಯೇ ದೊಡ್ಡದೆಂದು

ಬೆಳೆಯುವ ಮೊಳಕೆಯನೇ
ಚಿವುಟುವವರ ಮುಂದೆ
ಹೆಮ್ಮರವಾಗಿ ಬೆಳೆಯಬೇಕು

ಒಡಲ ಭಾವಗಳ ಬಸಿದು
ಮತ್ತೆ ಜೀವ ತುಂಬಬೇಕು
ನನ್ನವರಿಗೆ ಉಳಿದು ನೆರಳಾಗಲು

ಕುಹಕಿಗಳ ಆಡುವ ಮಾತಿಗೆ
ಕಿವಿಗೊಡದೆ ಬೆಳೆದಾಗಲೇ
ಕಣ್ಮುಚ್ಚಿ ಕೂರುವರು ವಿಧಿಯಿಲ್ಲದೆ

ಬೆಳೆದು ತೋರುವ ತನಕ
ನಿನ್ನನಿಲ್ಲಿ ಯಾರೂ ನಂಬುವುದಿಲ್ಲ
ಅದಕ್ಕೆ ಎಂದು ಅಂಜಿಕೆ ಬೇಡ

ನಡೆಯಬೇಕು ದಾರಿ ಸಿಕ್ಕಂತೆ
ವನವಾಗದಿದ್ದರೂ ಮರವಾಗು ಬಿಟ್ಟು ಚಿಂತೆ
ನೀನು ನೀನಾಗು ಎಲ್ಲರೊಳಗೊಂದಾಗುವ ಬದಲು

೦೮೧೮ಎಎಂ೦೬೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು* 

ಕವನಗಳು

ಬೆಳೆಯುವಾಗ ಬರಲೇ ಇಲ್ಲ 
ಈಗ ಭೋರ್ಗರೆಯುತಿಹ ವರುಣ
ಕೊಚ್ಚಿ ಹೋಗುತಿರುವ ಬದುಕು
ಕಂಡು ಕೇಳರಿಯದಷ್ಟು ದಾರುಣ

ಕಷ್ಟ ಪಟ್ಟು ಬೆಳೆಸಿದ ರೈತನಿಗೆ
ಹಿಡಿದಿತ್ತು ಒಂದಿಡೀ ವರ್ಷ
ಎಲ್ಲಾ ಮುಗಿದ ಮೇಲೆ ಬಂದ
ಮಳೆಗೆ ಹಾಳುಗೈಯಲು ಸಾಕು ನಿಮಿಷ

ಅವಶ್ಯಕತೆ ಮೀರಿ ಅಬ್ಬರಿಸುವ
ವರ್ಷಧಾರೆ ಬದುಕ ಮುಳುಗಿಸಿತು
ನೆಚ್ಚಿನ ಹೊಲಮನೆಯಲ್ಲ ಕೊಚ್ಚಿ ಹೋಗಿ
ಜೀವನವೀಗ ಬೀದಿಗೆ ಬಿದ್ದಿತು

ಯಾರ ದೂರುವುದಿಲ್ಲಿ
ಬಡಪಾಯಿ ಬದುಕಿನಲ್ಲಿ
ಕಣ್ಣೀರು ಕೂಡ ಕಾಣದಾಗಿದೆ
ಸುರಿವ  ಈ ಮಳೆಹನಿಯಲ್ಲಿ

ಹೊರೆಯೀಗ  ಅಧಿಕವಾಗುತಿದೆ
ನೆರೆ ಬಂದು ಬದುಕು ಸತ್ತಿದೆ
ಮತ್ತೆ ಕಟ್ಟಿಕೊಳ್ಳಲಿ ಹೇಗೆ
ಬೊಗಸೆಯಲ್ಲಿ ಬದುಕು ಸೋರುತಿದೆ

ಸರ್ಕಾರ ಕೊಡುವ ಪರಿಹಾರ
ಕೈಸೇರುವ ಖಾತರಿಯೇ ಇಲ್ಲ
ಹುದುಗಿರುವ ತಿಮಿಂಗಿಲಗಳೇ ನುಂಗಿ
ಕೊಡುವ ಬಿಡಿಗಾಸಿಗೆ ಬದುಕು ಕಟ್ಟಿಕೊಳ್ಳಲಾಗುತಿಲ್ಲ

0416ಎಎಂ20112021
*ಅಪ್ಪಾಜಿ ಸುಧಾ ಮುಸ್ಟೂರು*

ನೊಂದ ಕ್ಷಣವನ್ನೇ ನೆನೆಯಬಾರದು
ಮರೆತು ಮುನ್ನಡೆಯಬೇಕು
ನೋಯಿಸಿದವರನ್ನೇ ಶಪಿಸಬಾರದು
ತಿರಸ್ಕಾರದಿಂದ ದೂರವಿರಿಸಬೇಕು
ನೆಮ್ಮದಿಯ ಕದಡಿದವರ ಸಂಘ ಕೂಡದು
ಅಭಿನಂದಿಸುವಂತೆ ಬದುಕಬೇಕು
ದೂರುವವರನ್ನು ನಿಂದಿಸಬಾರದು
ದಂಡಿಸುವಂತೆ ಜೀವಿಸಬೇಕು
ಬದಲಾವಣೆ ಬಯಸುವವರು
ನಿನ್ನ ಬದಲಿಸಲು ಪ್ರಯತ್ನಿಸುವರು
ಯಾರೊಂದಿಗೂ ಹಗೆಯೂ ಬೇಡ
ಸ್ನೇಹದ ಬಗೆಯೂ ಬೇಡ
ಆನೆ ನಡೆಯುವ ಹಾದಿಯಲ್ಲಿ
ಶ್ವಾನ ರೋಧಸುವುದು ಸಹಜ
ಹಾಗೆಯೇ ನೀ ಬದುಕು ಮನುಜ

0809ಪಿಎಂ23112021
 *ಅಪ್ಪಾಜಿ ಸುಧಾ ಮುಸ್ಟೂರು


ನಿನ್ನ ಪ್ರೀತಿಯ ದಾಳಿ
ಮಿಂಚಿಗಿಂತಲೂ ತೀವ್ರವಾಗಿದೆ
ಅದು ಎದೆಗೆ ಸಿಡಿಲಾಗಿ
ಬಂದೆರಗಿ ಹತವಾದೆ
ಹಿತ ನೀಡಬೇಕಾದ ಪ್ರೀತಿ
ಹತವಾಗಿಸುವುದಾದರೆ
ಬದುಕಿಗೆ ಅದು ಮಾರಕ

1122ಪಿಎಂ25112021
*ಅಪ್ಪಾಜಿ ಸುಧಾ ಮುಸ್ಟೂರು*


ಕೂಗಿ ಕೂಗಿ ಹೇಳಬೇಕೆಂದಿರುವೆ
ನನ್ನಂತರಂಗದ ಸಿಹಿ ವಿಷಯಗಳನ್ನು
ನಲ್ಲೆ ನೀನಲ್ಲವೇ ನನ್ನ ಭಾವನೆಗಳ
ಅಂತರಂಗದ ಅಭಿಮಾನಿ
ಕೇಳಲೊಂದಿಷ್ಟು ಸಮಯ ಕೊಡು
ನಾವೆಲ್ಲಾ ನಿವೇದಿಸಿಕೊಳ್ಳುವೆ
ಒಲವಿನಲಿ ಒಳದನಿಯಲಿ
ಅದುಮಿಟ್ಟ ಹೃದಯದ ಮಾತುಗಳ
ದೂರದಿರು ದೂರಾಗದಿರು
ದಾರಿದ್ರ್ಯ ಬಂದೀತು ನನ್ನ ಬಾಳಿಗೆ
ಜೀವನ ಸಂಗಾತಿ ನೀನು
ಖುಷಿಯ ಸಂಗತಿ ಕೇಳಿನ್ನು
ಜೀವಕಿಂತ ಹೆಚ್ಚಾಗಿ ಪ್ರೀತಿಸುವೆ
ಜೀವವಿರುವ ತನಕ ಜೊತಿಯಿರುವೆ

0815 ಪಿಎಂ 26112021
*ಅಪ್ಪಾಜಿ ಸುಧಾ ಮುಸ್ಟೂರು

ಯಾರದ್ದೋ ತಪ್ಪಿಗೆ
ಇನ್ಯಾರಿಗೋ ಶಿಕ್ಷೆ
ತಪ್ಪಿತಸ್ಥ ತಪ್ಪಿಸಿಕೊಂಡ
ಅಮಾಯಕ ಸಿಕ್ಕಿಹಾಕಿಕೊಂಡ
ಇಲ್ಲಿ ಎಲ್ಲವೂ ಇನ್ನೊಬ್ಬರ ನಿರ್ಧಾರ
ಅಲ್ಲಗಳೆಯಲು ಇಲ್ಲ ಯಾರಿಗೂ ಅಧಿಕಾರ
ಸುಳ್ಳು ಇಲ್ಲಿ ದರ್ಬಾರು ಮಾಡುವಾಗ
ಸತ್ಯ ತಾನು ಮೂಲೆಗುಂಪಾಗಿಹುದು
ತಪ್ಪು ಮಾಡಿದವನಿಗಿಲ್ಲಿ ಸನ್ಮಾನ
ಒಪ್ಪಿಕೊಂಡವನಿಗಿಲ್ಲಿ ತಪ್ಪದು ಅವಮಾನ
ಬದುಕೇ ಹೀಗೆ ಗಾಳಿ ಬಂದ ಹಾಗೆ
ತೂರಿಕೊಂಡವನು ಜಾಣ
ಸಿಕ್ಕಿಹಾಕಿಕೊಂಡವನೇ ಕೋಣ

0902ಪಿಎಂ27112021
*ಅಪ್ಪಾಜಿ ಸುಧಾ ಮುಸ್ಟೂರು*

ಬದುಕು ಯಾರ
ಹಂಗಿಗೆ ಬೀಳದಂತೆ
ನಿನ್ನವರು ಯಾರಿಲ್ಲ
ಸಿರಿತನ ನಿನ್ನದಾಗದಾಗ
ಎಲ್ಲಾ ದೂರುವರು
ಬಡತನದ ಬದುಕು ನಿನ್ನದಿರುವಾಗ
ದುಡ್ಡು ಮಾಡುವ ತನಕ
ಸೆಡ್ಡು ಹೊಡೆದು ದುಡಿಯಬೇಕು
ಗೆದ್ದು ಬೀಗುವ ಛಲವಿರಲಿ
ಸೋಲುಗಳ ಸಹಿಸಿ ಮುನ್ನಡೆಯಬೇಕು
ಜೀವನದ ಪಾಠ ಬಲು ಶ್ರೇಷ್ಠ
ಅರಿತು ಹೆಜ್ಜೆ ಇಡಬೇಕು ಜಯ ಕಾಣಲು

0545ಪಿಎಂ29112021
*ಅಪ್ಪಾಜಿ ಸುಧಾ ಮುಸ್ಟೂರು*


ರುಬಾಯಿ*

ಪ್ರತಿ ಕ್ಷಣದ ಈ ಆರಾಧನೆ
ಪ್ರಕೃತಿ ಮಾತೆಯ ಉಪಾಸನೆ
ಹಸಿರ ಬಸಿರ ಹೊತ್ತು ಸಲಹುವ
ನಿಸರ್ಗದ ಚೆಲುವಿನ ಆಸ್ವಾದನೆ

0940ಪಿಎಂ29112021
*ಅಪ್ಪಾಜಿ ಸುಧಾ ಮುಸ್ಟೂರು*


ಫೇಸ್ಬುಕ್ಕಲ್ಲಿ ಪರಿಚಯ
ವಾಟ್ಸಪ್ಪಲ್ಲಿ ವಿನಿಮಯ
ಟೆಲಿಗ್ರಾಂಲ್ಲಿ ತಲೆ ಕಡಿಸಿ
ಇನ್ಷ್ಟಾಗ್ರಾಮಲ್ಲಿ ಇಷ್ಟಪಟ್ಟಂತೆ ನಟಿಸಿ
ಚಾಟಿಂಗಲ್ಲಿ ಸಲಿಗೆ
ಮೀಟಿಂಗಲ್ಲಿ ಸುಲಿಗೆ
ಸಂಸಾರದಲ್ಲಿ ಗೌಪ್ಯತೆ
ಜಾಲತಾಣದಲಿ ಗಾಢತೆ
ಮಾತಿನಲ್ಲಿ  ಅತಿ ವಿನಯತೆ
ನೋಟದಲಿ ಮಾದಕತೆ
ಸಂ(ಸಾ)ಸ್ಕಾರಸ್ಥರಲಿ ಪ್ರೀತಿ
ಸಮಾಜದಲ್ಲಿ  ಆದರ್ಶ ಸತಿ
ಯಾಮಾರಿಸಿ ಹಳ್ಳ ತೋಡುವ
ಕೆಲ ಅಂತರ್ಜಾಲ ಮಾಯಾಂಗನೆರು
ಬಾಳ ನೆಮ್ಮದಿಗೆ ಕೊಳ್ಳಿಯಿಟ್ಟು
ಬಿಸಿ ಕಾಯಿಸಿಕೊಳ್ಳುವರು ಎಚ್ಚರ

0829ಪಿಎಂ30112021
*ಅಪ್ಪಾಜಿ ಸುಧಾ ಮುಸ್ಟೂರು*

*ಪ್ರೀತಿಯ ಹೂಮುತ್ತು
ಕಳೆಯಿತೆಲ್ಲ ಆಪತ್ತು
ಸಂಗಾತಿ ನೀನೇ ಸಂಪತ್ತು

*ಅಪ್ಪಾಜಿ ಸುಧಾ ಮುಸ್ಟೂರು

ನಿನ್ನ ಪ್ರೀತಿಯ ಪ್ರತಿಯಾಗಿ
ಕೊಡಲು ನನ್ನಲ್ಲೇನಿಲ್ಲ ಬಡವ ನಾನು.
ಅದು ಗೊತ್ತಿದ್ದೂ ನೀ ಹೇರಳವಾಗಿ
ಎಲ್ಲವನ್ನೂ ಕೊಟ್ಟೆ ಅದ ಸವಿದೆ ನಾನು
ನಿನ್ನೊಲುಮೆಯ ನಾವೆಯಲಿ
ಬಾಳದಡ ಸೇರುವೆನು
ನೀನೀ ಪಯಣವ ಗುರಿಸೇರಿಸುವ ನಾ(ಯ)ವಿಕಿ
ನಿನ್ನ ಮಡಿಲೊಂದೆ ನನ್ನ ಸೂರು
ನೀನಾದೆಯಿಂದು ನನ್ನ ತವರು
ಬದುಕಿನ ಏರಿಳಿತಗಳ ಸಹಿಸಿ
ಜೊತೆ ನಡೆಯುವ ನಿನಗೆ
ಚಿರಋಣಿಯಾಗಿರುವೆ ಕೊನೆವರೆಗೆ

0727ಎಎಂ03122021
*ಅಪ್ಪಾಜಿ ಸುಧಾ ಮುಸ್ಟೂರು*


ಟಂಕ


[12/16, 7:34 PM] ಅಪ್ಪಾಜಿ ಎ ಮುಸ್ಟೂರು ಸುಧಾ: *ಟಂಕ ೦೧*

ತಿಳಿದವರು
ತಿದ್ದಿ ಮುನ್ನಡೆಸಲು
ಹೊಸ ಪೀಳಿಗೆ
ಹುಲುಸಾಗಿ ಬೆಳೆದು
ಸಾಹಿತ್ಯ ಉಳಿಯಲಿ

೦೭೩೨ಪಿಎಂ೧೬೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*
[12/16, 7:51 PM] ಅಪ್ಪಾಜಿ ಎ ಮುಸ್ಟೂರು ಸುಧಾ: *ಟಂಕಾ ೦೨*

ತಿಳಿದವರು
ತಿಳಿಸಿ ಹೇಳಲಾರ್ದೆ
ತುಳಿಯುತಲಿ
ತೆಗಳುವುದರಲ್ಲೇ
ಕಾಲಕಳೆಯುವರು

೦೭೫೦ಪಿಎಂ೧೬೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*




ನೂರಾರು ವೇಷಗಳು
ಬದುಕನ್ನು ಸಾಗಿಸಲು
ಒಮ್ಮೆ ಬೇಕು ಒಮ್ಮೆ ಬೇಡ
ಎಷ್ಟೊಂದು ವಿಚಿತ್ರ ಪಾತ್ರಗಳು
ಹೀಗೆ ಬಂದು ಹಾಗೆ ಹೋಗಲು
ನಾನು ನನದೆನ್ನುವ ಸ್ವಾರ್ಥಿಗಳು
ಬಿಟ್ಟುಹೋಗುವ ಸಮಯ ಗೊತ್ತಿಲ್ಲ
ಆದರೂ ಬಿಡದ ಈ ಅಹಮಿಗೆ ಮರುಳು
ದುಷ್ಟ ದುರುಳತೆಯ ಕೈಮೇಲು
ಸತ್ಯದ ಹಾದಿಯದು ಕಲ್ಲುಮುಳ್ಳು
ಇದ್ದು ಹೋಗುವ ಮೂರು ದಿನಕೆ
ಎಲ್ಲವೂ ತನ್ನದೆನ್ನುವ ಅಹಂಭಾವಗಳು

೦೨೩೨ಎಎಂ೧೭೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

ಕವನ

#ಆಮುಭಾವದೂಟ ೧೭೮

ಅರ್ಥ ಮಾಡಿಕೊಳ್ಳುವ ಶಕ್ತಿಯಿರಬೇಕು
ಇಲ್ಲದಿದ್ದರೆ ಎಲ್ಲಾ ವ್ಯರ್ಥ
ಏನೇ ಹೇಳಿದರೂ ಪ್ರಯೋಜನವಾಗದು
ಅಪಾರ್ಥ ಮಾಡಿಕೊಳ್ಳುವ  ಮನಸಿರಲು
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಬೇಕು
ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕು
ಕಾಲೆಳೆವರುಂಟು ಅಡಿಗಡಿಗೂ
ಗಡಿಬಿಡಿ ಮಾಡಿಕೊಳ್ಳುವ ಬದಲು
ಗುರಿ ಮುಟ್ಟುವ ಆತ್ಮವಿಶ್ವಾಸವಿರಲಿ ಎಂದಿಗೂ

೧೦೫೮ಪಿಎಂ೧೦೧೨೨೦೨೧
ಅಮುಭಾವಜೀವಿ ಸುಧಾ ಮುಸ್ಟೂರು



ಮೌನವನ್ನೇ ಅಲಂಕರಿಸಿ ಬಿಡಿ
ಕೆಲವು ಸಂದರ್ಭದಲ್ಲಿ
ಮಾತು ಮೌನಗಳ ಸಮ್ಮಿಳಿತ ಭಾವ
ಬದುಕಿನ ಕ್ಷಣಗಳ ಕಟ್ಟಿಕೊಡುವುದು
ನೆಮ್ಮದಿಯ ಹೊಂದಬೇಕೆಂದರೆ
ಮೌನವನ್ನು ತಬ್ಬಿ ಕೋರೋಣ
ಪ್ರತಿ ಕ್ಷಣವೂ ಆ ಖುಷಿಯನ್ನು ಸವಿದು
ಜೀವನದ ಸಾರ್ಥಕತೆ ಪಡೆಯೋಣ

೦೭೩೮೧೨೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

#ಅಮುಭಾವದೂಟ 185

ಕಣ್ಣಿಂದ ಜಾರಿ ಹಸಿರು
ನೂರು ಕಥೆಯ ಹೇಳಿದೆ
ಅಂತರಂಗದ ಮಾತುಗಳು
ಮೂಕವೇದನೆಯಲಿ ನೊಂದಿವೆ
ಎದೆಗೆ ಚುಚ್ಚಿದ ಬಾಣದಿ ರಕ್ತ ಸುರಿಸಿ
ಬೆಂದ ಭಾವಗಳು ಸೋತು ಕೂತಿವೆ
ಎದ್ದು ನಿಲ್ಲುವ ಸತ್ವವಿಲ್ಲದೆ
ಆಸರೆಯ ಮರೀಚಿಕೆಯ ನಿರೀಕ್ಷೆ
ತಂದೊಡ್ಡಿದೆ ಮತ್ತೊಷ್ಟು ಪರೀಕ್ಷೆ
ಹೀಗೆಯೇ ಜೀವನ

0259ಎಎಂ18122021
*ಅಮುಭಾವಜೀವಿ ಸುಧಾ ಮುಸ್ಟೂರು*


ನೂರು ಕಥೆಗಳನ್ನು ಹೇಳಿದೆ.

#ಕಣ್ಣು


ನೋಡುವ ಕಣ್ಣುಗಳಿಗೆ
ಕಾಮಾಲೆ ಅಂಟಿದೆ
ಆಡುವ ಮಾತುಗಳಿಗೆ
ಸ್ವಾರ್ಥದ ಗ್ರಹಣ ಹಿಡಿದಿದೆ
ಅವರವರ ಮೂಗಿನ ನೇರಕ್ಕೆ
ಅವರದೇ ಚಿಂತನೆ  ಆಲೋಚನೆ
ವಾಸ್ತವವಾಗಿ ಗುರಿಯಾದ ಜೀವ
ನೋಯುವುದೆಂಬ ಕಾಳಜಿಯೂ ಇಲ್ಲದ
ಆ ಜನರ ಚುಚ್ಚುನುಡಿಗಳ ಜಾಲ
ಹರಡಿದೆ ಜಗದ ತುಂಬೆಲ್ಲ

0324ಎಎಂ18122021
 *ಅಮುಭಾವಜೀವಿ ಸುಧಾ  ಮುಸ್ಟೂರು* .

ಈ ನಿನ್ನ ಮೋಹಕ ನೋಟ
ನಿತ್ಯ ಸತ್ಯದ ಸಂಪುಟ
ಮುಗ್ಧತೆಯ ಮುಗುಳ್ನಗೆಗೆ
ಮಾರುಹೋಗಿದೆ ಹೃದಯ
ಒಲವಿನ ಅಧಿದೇವತೆಯು ನೀನು
ಸದಾ ವ್ಯಾಪಿಸುವ ಆರಾಧಕ ನಾನು
ಈ ಚಿತ್ರಣ ಹೊಸಚೇತನ
ತಂತು ಸೋತ ಬಾಳಲಿ
ಇನ್ನು ಸೋಲುವ ಮಾತಿಲ್ಲ
ನೀನಿರಲು ಜೊತೆಯಲಿ

0402ಎಎಂ18122021
 ಅಮುಭಾವಜೀವಿ ಸುಧಾ ಮುಸ್ಟೂರು



*ಟಂಕ ಸ್ಪರ್ಧೆಗಾಗಿ 1*

ಕಷ್ಟಗಳೆಲ್ಲ
ಪಾಠಗಳಾದವಿಲ್ಲಿ
ದೈವದ ಪಾತ್ರ
ದಾರಿದ್ರ್ಯವ ನೀಗದೆ
ಬಾಳು ಬೀಳಾಯಿತಲ್ಲ

0855ಪಿಎಂ18122021

*ಟಂಕ 2*
ಜೀವನದಲ್ಲಿ
ನಡೆಯುವುದೆಲ್ಲವೂ
ದೈವ ನಿರ್ಣಯ
ನಮ್ಮದೇನಿದ್ದರಿಲ್ಲಿ
ನಟಿಸುವ  ಅಭಿನಯ

0859ಪಿಎಂ18122021
 *ಅಮುಭಾವಜೀವಿ ಸುಧಾ ಮುಸ್ಟೂರು*


ಇಂಥವರೂ ಇರ್ತಾರೆ
ತಿಳಿಗೊಳದಂತ ಬಾಂಧವ್ಯದೊಳಗೆ
ಬೇಡದ ಕಲ್ಲೆಸೆದು ಕದಡಿ
ಏನೂ ಆಗಿಯೇ ಇಲ್ಲವೆಂಬಂತೆ
ಹೊರಜಗದಲ್ಲಿ ಮೆರೆಯುತಿಹರು

ಹೊರಗೊಂದು ಒಳಗೊಂದು
ದ್ವಂದ್ವ ವ್ಯಕ್ತಿತ್ವ ಅವರದು
ತನ್ನದೂ ಬೇಕು ಇತರರದೂ ಬೇಕು
ಬೆಣ್ಣೆಯೊಳೊಕ್ಕ ಕೇಶದಂತೆ
ಸಿಕ್ಕೂ ಸಿಗದಂತಿರುವರು

ನಲ್ಲ (ಲ್ಲೆ) ಬಾಹುಬಂಧನವಿದ್ದೂ
ಪ್ರಿಯಕರನ(ಳ) ಆಲಿಂಗನದಾಸೆಯಲಿ
ಸಲಿಗೆಯ ಕರಗತಗೊಳಿಕೊಂಡು
ಬೆರೆತರೂ ಬೆರೆಯದವರಂತೆ ನಟಿಸಿ
ಬೇಳೆ ಬೇಯದಾದಾಗ ಹೀಗಳೆವರು

ಕೋತಿ ಹಣ್ಣನು ತಾ ತಿಂದು
ಮೇಕೆ ಮೂತಿಗೊರೆಸಿದಂತೆ
ಅಮಯಾಕರ ಬದುಕಲ್ಲಿ ಬಂದು
ಬಗ್ಗಡವೆಬ್ಬಿಸಿ ದುಗುಡವಿಲ್ಲದೆ
ಎದ್ದು ಹೋಗಿಯೇ ಬಿಡುವರು

ಅವರಿವರ ಮುಂದೆ ಹಗುರ ಮಾತಾಡಿ
ಅನುಕಂಪ ಗಿಟ್ಟಿಸಿಕೊಂಡ ಬಳಿಕ
ಅವಮಾನಿಸಿ ಅಧೀರಗೊಳಿಸಿ
ಅಂತರಂಗದಲೂ ಅಳುಕಿಲ್ಲದ
ಕೊಳಕು ಜನರಿವರು
 0248ಎಎಂ19122021
*ಅಮುಭಾವಜೀವಿ ಸುಧಾ ಮುಸ್ಟೂರು*

ನೀನು ದೀಪ ನಾನು ರೂಪ
ಒಲವ ಹಾದಿಯಲಿ ನಾ ಸಂತೃಪ್ತ
ನೀನು ಬೆಳಕು ನಾನು ಬದುಕು
ಅರ್ಥ ಬಂತು ಬಾಳ ಪ್ರತಿ ಪದಕೂ
ನೀನು ಪ್ರೇಮ ನಾನು ನೇಮ
ಜೀವನ ಒಲವು ಚೆಲುವಿನ ಸಂಗಮ
ನೀನು ಆಸೆ ನಾನು ತಮಾಷೆ
ಪ್ರೀತಿ ಬಾಳಿನುದಯದ  ಉಷೆ
ನೀನು ನಾನು ಬೆರೆತ ಜೇನು
ಈ ಅನುರಾಗ ಬಿಟ್ಟು ಬೇಡ ಬೇರೇನೂ

0312ಎಎಂ19122021
*ಅಮುಭಾವಜೀವಿ ಸುಧಾ ಮುಸ್ಟೂರು*

ಕವನ

ಕಣ ಕಣದಲ್ಲೂ ಛಲವಿದೆ
ಜಗವನ್ನೇ ಗೆಲ್ಲುವ ಹುರುಪಿದೆ
ಯಾರೆಷ್ಟೇ ತೊಡರಗಾಲು ನೀಡಲಿ
ದಾಪುಗಾಲು ಹಾಕಿ ಗೆದ್ದು ಬರುವೆ
ಅಡೆತಡೆಗಳೇನೇ ಬರಲಿ
ಗುರಿ ಮುಟ್ಟುವ ಹುಮ್ಮಸ್ಸಿದೆ
ಅವಮಾನಗಳನೆಲ್ಲ ಅಭಿಮಾನವಾಗಿಸಿ
ಮತ್ತೆ ಎದ್ದು ಬರುವೆ
ಸೋಲನೆಂದೂ ಸವಾಲಾಗಿಸಿ
ಸೆಡ್ಡುಹೊಡೆವೆ ಸಾಧನೆ ಮಾಡಲು

೦೬೪೯ಪಿಎಂ೧೯೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*


#ಅಮುಭಾವದೂಟ ೧೯೧

*ಗಜಲ್*


ಎದೆಯೊಳಗಿನ ಬಿಸಿ ರಕ್ತವೇ ತಂಪಾಯ್ತು
ನನ್ನೊಳಗಿನ ಒಲವಿನ ತಿಳುವಳಿಕೆಯೇ ತಪ್ಪಾಯ್ತು

ಅವಳು ಬಯಸಿದ ಸಲಿಕಗೆಯ ಕೊಟ್ಟ ತಪ್ಪಿಗೆ
ಜಾಲತಾಣದ ನನಗಿದ್ದ ಭರವಸೆಯೇ ಸತ್ತೋಯ್ತು

ಅವಳ ವಾಂಛೆಗಳ ಈಡೇರಿಸಲಾಗದಾದಾಗ
ಹೆದರಿಕೆ ಬೆದರಿಕೆಗಳಿಂದ ನಗೆಯೆಂಬುದೇ ಕಳೆದೋಯ್ತು

ಅರಸನ ತೊರೆದು ಅಷ್ಥಾವಕ್ರನ ಹಂಬಿಲಿಸುವಂತೆ
ಪತಿಗರಿವಾಗದ ಹಾಗೆಯೇ ಸತಿಸೋತಾಯ್ತು

ಹೀಗೂ ಇರುವರೆಂಬ ದಿಗ್ಭ್ರಮೆಯಲಿ
ಅಮು ಬರಹವೇ ನಿಂತೋಯ್ತು

೧೧೨೯ಪಿಎಂ೧೯೧೨೨೦೨೧
*ಅಮುಭಾವಜೀವಿ ಸುಧಾ ಮುಸ್ಟೂರು*

  

Friday, December 10, 2021

ಲೇಖನ ಮಾಲೆ

#ಅಮುಭಾವದೂಟ #ಮಾಲಿಕೆ ೦೪

ಜೀವನದ ಈ ಪಯಣದಲ್ಲಿ ನಗುನಗುತ್ತಾ ಸಾಗಬೇಕು ನಾವು .ಯಾರದೋ ಖುಷಿಗಾಗಿ ಇನ್ಯಾರದ್ದೋ ಮರ್ಜಿಗಾಗಿ  ನಮ್ಮ ಸಂತೋಷವನ್ನು ನಾವು ತ್ಯಾಗ ಮಾಡಬಾರದು . ನಾವು ಇಲ್ಲಿ ಬದುಕುತ್ತಿರುವುದು ನಮಗೋಸ್ಕರವೇ ಹೊರತು ಬೇರೆಯವರ ಮನಸ್ಸನ್ನು ಸಂತೋಷ ಪಡಿಸಲು  ಅಲ್ಲ . ಅವರ ಬದುಕು ಅವರಿಗೆ ಆದರೆ ನಮ್ಮ ಬದುಕು ನಮಗೆ ಎಂದು ನಾವು ಮೊದಲು ಅರ್ಥ ಮಾಡಿಕೊಳ್ಳಬೇಕು . ಇಲ್ಲಿ ಯಾರು ಯಾರನ್ನು ನಂಬಿ ಬದುಕುತ್ತಿಲ್ಲ ಆದರೆ ಪರಸ್ಪರ ಸ್ನೇಹ ಪ್ರೀತಿ ವಿಶ್ವಾಸ ನಂಬಿಕೆಯಂತಹ ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಅಷ್ಟೆ .ಆದರೆ ವೈಯಕ್ತಿಕ ವಿಚಾರಕ್ಕೆ ಬಂದಾಗ ನಮ್ಮ ಬದುಕು ನಮಗಷ್ಟೆ ಮುಖ್ಯವಾಗಬೇಕು . ಇತರರ ಕಷ್ಟಗಳಿಗೆ ಮಿಡಿಯುವ ಇತರರಿಗೆ ಸಹಾಯ ಮಾಡುವ ಮನೋಭಾವ ನಮ್ಮಲ್ಲಿದ್ದರೂ ಕೂಡ ಈ ಜಗತ್ತು ನಮ್ಮನ್ನು ಹೇಗೆ  ಸ್ವೀಕರಿಸಿದೆ ಎಂಬುದರ ಮೇಲೆ ಅದರ ಬೆಲೆ ನಿಂತಿದೆ .  ನಾವು ಎಷ್ಟೇ ಪ್ರಾಮಾಣಿಕವಾಗಿ ಬದುಕಿದರೂ ಕೂಡ ಈ ಜಗತ್ತು ನಮ್ಮಲ್ಲಿ ಏನಾದರೊಂದು ಕೆಟ್ಠ ತನವನ್ನು ಕಾಣುತ್ತಿರುತ್ತದೆ .ವಾಸ್ತವದಲ್ಲಿ  ನಮ್ಮಲ್ಲಿ ಅಂತಹ ಕೆಟ್ಟ ಗುಣಗಳು ಇರುವುದೇ ಇಲ್ಲ ಆದರೂ ಕೂಡ ಜಗತ್ತಿಗೆ ಅದು ಕಂಡಿರುತ್ತದೆ ನಮ್ಮನ್ನು ನಿಷ್ಟುರವಾಗಿ ನೋಡುತ್ತದೆ .ಅದು ನಮ್ಮ ತಪ್ಪಲ್ಲ ಅದು ನೋಡುವ ಜಗತ್ತಿನ ಕಣ್ಣಿನ ತಪ್ಪೇ ಹೊರತು ಅದಕ್ಕೆ ನಾವು ಎಂದಿಗೂ ತಲೆಕೆಡಿಸಿಕೊಳ್ಳಬಾರದು .ನಾವು ಏನು ಎಂಬುದು ನಮಗೆ ಗೊತ್ತಿರುತ್ತದೆ ನಾವು ಹೇಗೆ ಬದುಕಬೇಕು ಎಂಬುದು ನಮ್ಮದೇ ಆದಂತಹ ಆಲೋಚನೆಯಲ್ಲಿ ಅದು ಮೂಡಿಬರುತ್ತಿರುತ್ತದೆ .ನೀನು ಹೀಗೇ ಬದುಕಬೇಕೆಂದು ನಿರ್ದೇಶಿಸುವ ಹಕ್ಕು ಈ ಸಮಾಜಕ್ಕೂ ಇಲ್ಲ ಸಮಾಜದೊಳಗಿನ ಜನಗಳಿಗೂ ಇಲ್ಲ .ನಮ್ಮ ಬದುಕು ನಮ್ಮದೇ ಆದರ್ಶಗಳು ನಂಬಿಕೆಗಳು ವಿಶ್ವಾಸಗಳ ಮೇಲೆ ನಡೆಯುತ್ತಿರುತ್ತದೆ . ಅದರ ಫಲಾಫಲಗಳು ಕೂಡ ನಮ್ಮ ನಡೆ ನುಡಿಗಳನ್ನು ಅವಲಂಬಿಸಿರುತ್ತದೆ ಇಲ್ಲಿ ಬೇರೆಯವರ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು .

     ನಾವು ಸದಾ ಬೇರೆಯವರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಾನು ನನ್ನ ಸಂಸಾರ ನಮ್ಮ ಸುತ್ತಮುತ್ತಲಿನ ಪರಿಸರದ ಜೊತೆ ಜೊತೆಗೆ ನಾವು ಅನ್ಯೋನ್ಯವಾಗಿ ಬದುಕುತ್ತಾ ಇರಬೇಕು .ನಮಗಾಗಿ ಮಿಡಿಯುವ ಜೀವಗಳ ಜೊತೆ ನಾವೂ ಸಹ ಮಿಡಿಯಬೇಕು ದುಡಿಯಬೇಕು .ನಮ್ಮ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮಾಡುವಂತಹವರ ಮಾತುಗಳಿಗೆ ನಾವು ಕಿವಿಗೊಡದೆ ನಾವು ನಂಬಿದ ಹಾದಿಯಲ್ಲಿ ನಡೆಯುವುದೇ ಕ್ಷೇಮ . ನಾವು ಇತರರ ಬಗ್ಗೆ ಯೋಚಿಸಿದಷ್ಟೂ ನಮ್ಮ ಬಗ್ಗೆ ಕಾಳಜಿಯನ್ನು ಕಳೆದುಕೊಂಡುಬಿಡುತ್ತೇವೆ .ಅದರ ಬದಲು ಅವಶ್ಯಕತೆಯಿಲ್ಲದ ಅವರ ಬಗ್ಗೆ ಯೋಚಿಸುವ ಬದಲು ನಮ್ಮ ಬಗ್ಗೆ ನಾವು ಆಲೋಚನೆ ಮಾಡಿದ್ದೆ ಆದರೆ ನಮ್ಮ ಜೀವನದಲ್ಲಿ ನಾವು ಸುಖವನ್ನು ಅನುಭವಿಸಬಹುದು .  ನಾವು ಯಾರ ಬಗ್ಗೆ ಹೆಚ್ಚು ಚಿಂತಿಸುತ್ತೇವೆಯೋ ಅವರು ನಮ್ಮ ಬಗ್ಗೆ ಒಂದಿನಿತೂ ಯೋಚಿಸುವುದಿಲ್ಲ , ಅವರ ಪಾಡಿಗೆ ಅವರು ಅವರ ಜೀವನದ ಖುಷಿಗಳನ್ನು ಅನುಭವಿಸುತ್ತಿರುತ್ತಾರೆ .ಹೊರಜಗತ್ತಿಗೆ ಅವರು ಎಲ್ಲರಿಗೂ ಬೇಕಾದವರಾಗಿ ನಯವಾದ ಮಾತುಗಳನ್ನಾಡುತ್ತಾ ತಮ್ಮ ಬದುಕನ್ನು ಆನಂದಿಸುತ್ತಿರುತ್ತಾರೆ ತಮ್ಮ ಹಾದಿಯಲ್ಲಿ ಯಶಸ್ಸನ್ನು ಕಾಣುತ್ತಾರೆ . ಆದರೆ ಅವರ ಬಗ್ಗೆ ಚಿಂತಿಸುವ ನಾವುಗಳು ಮಾತ್ರ ದಿನದಿನಕ್ಕೂ ಕ್ಷೀಣವಾಗಿ ನಮ್ಮ ನೆಮ್ಮದಿಯನ್ನು ಕಳೆದುಕೊಂಡು ಪರಿತಪಿಸುತ್ತೇವೆ .ಅವರು ಹಾಗೆ ಹೀಗೆ ಇದ್ದಾರೆ ಎಂದುಕೊಳ್ಳುತ್ತಾ ನಾವು ಇರಬೇಕಾದ ರೀತಿಯನ್ನು ಮರೆತುಬಿಡುತ್ತೇವೆ .ಅವರಂತೆ ನಾವು ಆಗುವ ಬದಲು ಅವರ ಪ್ರತಿಯೊಂದು ನಡೆಗೆ ನಾವು ನಮ್ಮದೇ ಆದ ರೀತಿಯಲ್ಲೇ ವಿಶ್ಲೇಷಣೆ ಮಾಡುತ್ತಾ ಅಂತಹ ಯಾವುದೇ ಅನುಕೂಲಗಳು ನಮಗಿಲ್ಲ ಎಂದು ಒಳಗೊಳಗೇ ಕರುಬುತ್ತೇವೆ,ಕೊರಗುತ್ತೇವೆ ಮನಸ್ಸಿನಲ್ಲೇ ಅವರಿಗೊಂದು ಹಿಡಿಶಾಪವನ್ನು ಹಾಕುತ್ತೇವೆ . ಇದಾವುದರಿಂದಲೂ ಅವರಿಗೆ ಕಿಂಚಿತ್ತೂ ತೊಂದರೆಯಾಗುವುದಿಲ್ಲ ಬದಲಾಗಿ ನಮ್ಮ ಖುಷಿ ಆನಂದ ನೆಮ್ಮದಿಗಳನ್ನು ನಾವು ಸ್ವಲ್ಪ ಸ್ವಲ್ಪವೇ ಕಳೆದುಕೊಂಡು  ದಿನನಿತ್ಯ ಅವರು ಮಾಡುವುದೆಲ್ಲವೂ ತಪ್ಪು ಎಂದು ನಾವು ಅವರನ್ನು ದೂರುತ್ತೇವೆ ದ್ವೇಷಿಸುತ್ತೇವೆ . ನಮ್ಮ ಬದುಕಿನೊಳಗಿನ ಸಣ್ಣ ಸಣ್ಣ ಖುಷಿಗಳನ್ನು ನಾವು ಕಡೆಗಣಿಸಿ ಇತರರ ಬಹುದೊಡ್ಡ ಸಂತೋಷವನ್ನು ಕಂಡು ಮರುಗುತ್ತೇವೆ ಕೊರಗುತ್ತೇವೆ ಕಂಗೆಡುತ್ತೇವೆ . ಇದಾವುದೂ ನಮ್ಮೊಳಗಿನ ಆತ್ಮಕ್ಕೆ ಸುಖವನ್ನು ನೀಡುವ ಬದಲು  ಆತ್ಮಸಾಕ್ಷಿಯನ್ನು ನಿದ್ದೆಗೆಡಿಸಿ ನೆಮ್ಮದಿಯನ್ನು ಕದಡಿ ಬಿಡುತ್ತದೆ . ಮೂರುಹೊತ್ತು ಅವರನ್ನು ದ್ವೇಷಿಸುವುದರಲ್ಲಿಯೇ ನಮ್ಮ ಇಡೀ ಬದುಕನ್ನು ವ್ಯರ್ಥವಾಗಿ ಕಳೆದುಬಿಡುತ್ತೇವೆ .

         ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ವೈಯಕ್ತಿಕವಾಗಿ ಅವರವರ ಬದುಕಿನೊಂದಿಗೆ ಮಾತ್ರವೇ ಹೊಂದಾಣಿಕೆ ಮಾಡಿಕೊಂಡು ಸಾಗಬೇಕು .ಅಕ್ಕಪಕ್ಕ ಹಿಂದೆ ಮುಂದೆ ಮಾತನಾಡುವವರ ಮಾತುಗಳಿಗೆ ಕಿವಿಗೊಡದೆ ನಾವು ನಮ್ಮ ಬದುಕನ್ನು ಸಾರ್ಥಕತೆಯತ್ತ ಕೊಂಡೊಯ್ಯಲು ಪರಿಶ್ರಮವನ್ನು ಪಡಬೇಕು . ನಮ್ಮ ಒಡನಾಡಿಗಳ ಪ್ರತಿಕ್ಷಣವನ್ನು ಸುಖಮಯವಾಗಿ ಸಂತೋಷ ಮಯವಾಗಿ ಇಡುವುದು ನಮ್ಮ ಜವಾಬ್ದಾರಿಯಾಗಿರುತ್ತದೆ . ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ನಾವು ಎಡವಿ ಬರೀ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಚಿಂತನೆ ಆಲೋಚನೆಗಳನ್ನು ಮಾಡುತ್ತ ಹೋದರೆ ನಮಗೆ ದಕ್ಕಿರುವ ಸಂಬಂಧಗಳನ್ನು ನಾವು ಕಳೆದುಕೊಂಡು ಬದುಕಿನಲ್ಲಿ ಒಬ್ಬಂಟಿಗರಾಗಿ ಬಿಡುತ್ತೇವೆ . ಕುದಿಯುವ ಮನಸ್ಸಿನಲ್ಲಿ ನಾವು ನೆಮ್ಮದಿಯನ್ನು ಕಾಣಲು ಸಾಧ್ಯವಿಲ್ಲ .ಕುಣಿಯಲು ಬಯಸುವ ಮನಸ್ಸನ್ನು ಹೀಗೆ ಕುದಿಯುವಿಕೆಯಲ್ಲಿ ಬೇಯಿಸಿ ಬಿಟ್ಟರೆ ನಮ್ಮ ಜೀವನ ನರಕವಾಗುತ್ತದೆ .ಬದುಕೇ ಬರಡು ಎನಿಸಿಬಿಡುತ್ತದೆ .ಆದ್ದರಿಂದ ನಾವುಗಳು ಎಂದಿಗೂ ಇನ್ನೊಬ್ಬರ ಬಗ್ಗೆ ಆಲೋಚನೆ ಮಾಡದೆ ನಮ್ಮಂತೆ ನಾವು ಬದುಕುತ್ತಾ ನಮ್ಮವರ ಜೊತೆ ಜೊತೆಯಲ್ಲಿ ಖುಷಿಖುಷಿಯಿಂದ ಬಾಳುವಂತಾಗಬೇಕು . ನಾವು ಬದುಕುವ ರೀತಿಯನ್ನು ಕಂಡು ನಮ್ಮನ್ನು ದ್ವೇಷಿಸುವವರೂ ಕೂಡ ಹೊಗಳುವಂತೆ ನಾವಿರಬೇಕು . ಸಮಾಜಕ್ಕೆ ನಮ್ಮ ಅವಶ್ಯಕತೆ ಇಲ್ಲದಿರಬಹುದು ಆದರೆ ನಮ್ಮವರಿಗೆ ನಮ್ಮ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ ಹಾಗಾಗಿ ನಾವು ನಮ್ಮವರಿಗಾಗಿ ಬದುಕಬೇಕು .

    ನಮ್ಮೊಳಗಿನ ಅಸಹಾಯಕತೆ ಅಸಹನೀಯತೆಗಳುನಾವು ಇನ್ನೊಬ್ಬರನ್ನು ದ್ವೇಷಿಸುವಂತೆ ಮಾಡುತ್ತದೆ .ಆದ್ದರಿಂದ ಅಂತಹ ನಕಾರಾತ್ಮಕ ಭಾವನೆಗಳು ನಮ್ಮ ಮನಸ್ಸಿನೊಳಗೆ ನುಸುಳದಂತೆ ನಾವು ತಡೆಯಬೇಕು .ಅದಕ್ಕಾಗಿ ನಾವು ನಮ್ಮ ಮನಸ್ಸನ್ನು ಸದಾ ಕ್ರಿಯಾಶೀಲವಾಗಿ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಆ ಮೂಲಕ ನಮ್ಮ ವ್ಯಕ್ತಿತ್ವವನ್ನು ಇಮ್ಮಡಿಗೊಳಿಸಿಕೊಳ್ಳಬೇಕು . ಅಲ್ಲದೆ ನಾವು ಸದಾ ಚಟುವಟಿಕೆಯಿಂದ ಇದ್ದಾಗ ಬೇರೆಯವರ ಬಗ್ಗೆ ಚಿಂತಿಸುವ ಮನಸ್ಥಿತಿ ನಮ್ಮಲ್ಲಿ ಬರುವುದೇ ಇಲ್ಲ .ಆದ್ದರಿಂದ ನಾವು ನಮ್ಮವರ ಬಗ್ಗೆ ಆಲೋಚನೆ ಮಾಡುತ್ತಾ ನಮ್ಮ ಬದುಕನ್ನು ಸುಖಮಯವಾಗಿ ಕಟ್ಟಿಕೊಳ್ಳುವ ಕಡೆಗೆ ನಾವು ಹೆಜ್ಜೆ ಇಡಬೇಕು . ಇಲ್ಲಿ ಯಾರು ಯಾರನ್ನು ಬೆಳೆಸುವುದಿಲ್ಲ ಬದಲಾಗಿ ಅಳಿಸುತ್ತಾರೆ ಹಾನಿಪಡಿಸುತ್ತಾರೆ ಕಾಲೆಳೆದು ಬೀಳಿಸುತ್ತಾರೆ .  ಅಂತಹ ಯಾವ ಅಚಾತುರ್ಯಗಳಿಗೂ ನಾವು ಒಳಗಾಗದಂತೆ  ಜಾಗೃತರಾಗಬೇಕು . ನಮ್ಮೊಳಗಿನ ಆತ್ಮವಿಶ್ವಾಸಕ್ಕೆ ಕುಂದುಂಟುಮಾಡಿಕೊಳ್ಳದಂತೆ ನಾವು ಸದಾ ಧನಾತ್ಮಕ ಚಿಂತನೆಯಿಂದ  ನಮ್ಮ ಬದುಕಿನ ಜತೆ ಸಂಧಾನ ಮಾಡಿಕೊಂಡು ಬದುಕಬೇಕು. ಸದೃಢ ಮನಸ್ಥಿತಿಯಿಂದ ನಮ್ಮ ಬದುಕನ್ನು  ದಡ ಸೇರಿಸ ಬೇಕು  . ಅಂತಹ ಸದ್ವಿಚಾರ ಸತ್ ಚಿಂತನೆಗಳ ಜತೆಜತೆಗೆ ನಾವು ಬದುಕುತ್ತಾ ಸಾಗೋಣ .

೦೭೪೫ಪಿಎಂ೧೦೧೨೨೦೨೧
*ಅಮುಭಾವಜೀವಿ ಸುಧಾ ಮುಷ್ಟೂರು*

ಲೇಖನ ಮಾಲೆ

*ಅಮುಭಾವದೂಟ ಮಾಲೆ 03*

ನಮ್ಮನ್ನು ತೊರೆದು ಹೋಗುವವರಿಗೆ ನಾವು ಮುಕ್ತ  ಅವಕಾಶ ನೀಡಬೇಕು.  ಏಕೆಂದರೆ  ಅವರಿಗೆ ನಮ್ಮ  ಅವಶ್ಯಕತೆ  ಇರುವುದಿಲ್ಲ  ಎಂಬುದು  ಎಷ್ಟು ಸತ್ಯವೋ ನಮಗೂ  ಅವನ/ಳ ಅವಶ್ಯಕತೆಯೂ ಇಲ್ಲ  ಎಂಬುದನ್ನು ನಾವೂ ಕೂಡ ಸಾಬೀತು ಮಾಡಬೇಕು. ಬೆಳ್ಳಗಿರುವುದೆಲ್ಲಾ ಹಾಲಾಗಿರುವುದಿಲ್ಲ. ಆದರೂ ಆ ಹಾಲಾಹಲವನ್ನೂ ನಾವು ಹಾಲಾಗಿ ಮಾಡಹೊರಟಿದ್ದು ಮಾತ್ರ ಸ್ವಯಂಕೃತ  ಅಪರಾಧವಾಗಿರುತ್ತದೆ.ಆದರೆ ಕಾರಣದಿಂದಲೇ ಆ ಪ್ರಾಯಶ್ಚಿತ್ತಕ್ಕಾದರೂ  ಬಿಟ್ಟು ಹೋಗುವವರನ್ನು ನಮ್ಮ ಬದುಕಿನಿಂದಾಚೆಗೆ ಕತ್ತುಹಿಡಿದು ದಬ್ಬಿಬಿಡಬೇಕು.

        ನಮ್ಮ ವ್ಯಕ್ತಿತ್ವ , ಬದುಕು , ನಮ್ಮ ಮಾತುಕತೆ, ನಮ್ಮ  ನಡೆನುಡಿಯ ಬಗ್ಗೆ ಗೌರವಿಸುವ ನಮ್ಮ ಬೆಲೆ ಗೊತ್ತಿರುವ ಯಾರೂ ಕೂಡ ತೊರೆಯಲು ಬರುವುದಿಲ್ಲ.ನಮ್ಮ  ಒಡನಾಟದಲ್ಲಿ ಅವರು ತಮ್ಮ ನೋವು ಅಸಹಾಯಕತೆ ಅನ್ಯಾಯಗಳನ್ನು ಮರೆಯುವ  ಅಥವಾ  ಅವುಗಳಿಗೆ ಉತ್ತರ ಹುಡಿಕೊಳ್ಳುತ್ತಿರುತ್ತಾರೆ.ಅಂತಹವರಿಗೋಸ್ಕರ ನಾವು ಸದಾ ನಮ್ಮನ್ನು ತೆರೆದಿಟ್ಟುಕೊಳ್ಳಬೇಕು.ಇವರು ನಮ್ಮ ಮೇಲೆ  ಅದೆಂತಹದ್ದೇ ಆರೋಪ ಬಂದರೂ ಅದನ್ನು ಕ್ಷಣಾರ್ಧದಲ್ಲಿ ನಂಬಿ ನಮ್ಮನ್ನು  ಅಗಲಲಾರರು.ಬದಲಾಗಿ  ಅದರ ಸತ್ಯಾಸತ್ಯತೆಯ ಪರಾಮರ್ಶೆ ಮಾಡಿ ನಮ್ಮದೇನೂ ತಪ್ಪಿಲ್ಲ ಎಂಬುದನ್ನು ಸಾಬೀತು ಮಾಡಿ ನಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ನಮ್ಮನ್ನು ಇನ್ನಷ್ಟು ಗಾಢವಾಗಿ ಪ್ರೀತಿಸುತ್ತಾರೆ ಆರಾಧಿಸುತ್ತಾರೆ.

                 ನಮ್ಮನ್ನು ಬಿಟ್ಟು ಹೋಗುವವರು ಖಂಡಿತವಾಗಿಯೂ ನಮ್ಮ ಬಗ್ಗೆ  ಅಪ್ಪಿತಪ್ಪಿಯೂ ಒಂದೊಳ್ಳೆಯ ಮಾತನ್ನು  ಆಗುವುದಿಲ್ಲ.ನಮ್ಮಿಂದ ಸಾಧ್ಯವಾದಷ್ಟು ಒಳ್ಳೆಯದನ್ನು ಪಡೆದುಕೊಂಡಿದ್ದಾಗ್ಯೂ  ನಮ್ಮ ಮೇಲೆ  ನಿಷ್ಠುರವಾದ ಮಾತುಗಳಿಂದ ನಿಂದಿಸಿ ನಮ್ಮ ಬಗ್ಗೆ  ಇಲ್ಲಸಲ್ಲದ  ಆಪಾದನೆಯನ್ನು ಹೊರಿಸಿ ತಾನು ಮಾತ್ರ ಸಾಚ  ಎಂಬಂತೆ ಬಿಂಬಿಸಿಕೊಂಡು ಸಮಾಜ ಸಮುದಾಯ ತಮ್ಮ  ಹೊಗಳುಭಟ್ಟಂಗಿಗಳ ಸಮೂಹದಲ್ಲಿ ಹಾಗೂ ಇತ್ತೀಚಿಗಿನ ಸಾಮಾಜಿಕ ಜಾಲತಾಣಗಳಲ್ಲಿ ನೊಂದು ಬೆಂದವರಂತೆ  ಮೊಸಳೆ ಕಣ್ಣೀರು ಸುರಿಸಿ  ಆ ಎಲ್ಲರೆದೆರು ಅನುಕಂಪ ಗಿಟ್ಟಿಸಿಕೊಂಡು ಬೀಗುತ್ತಾರೆ.ಆದರೆ ವಾಸ್ತವದಲ್ಲಿ ನಮ್ಮ ಬಗ್ಗೆ ಗೊತ್ತಿರುವ ಗೊತ್ತಿಲ್ಲದಿರುವ ಯಾರೂ ಕೂಡ ತಲೆಕೆಡಿಸಿಕೊಳ್ಳದೆ ಅಂತಹವರನ್ನು ಕಡೆಗಣಿಸುತ್ತಾ ನಮ್ಮ ಬಗೆಗಿನ  ಆದರಾಭಿಮಾನಗಳನ್ನು ಇಮ್ಮಡಿಗೊಳಿಸಿಕೊಳ್ಳುತ್ತಾರೆ.ಒಂದು ಕುನ್ನಿ ನಮ್ಮನ್ನು ಬಿಟ್ಟು ಹೋದರೇನಂತೆ ನಮ್ಮನ್ನು ಗೌರವಿಸುವ ನಮ್ಮ ಸ್ನೇಹ ಬಯಸುವ ನೂರಾರು ಮಂದಿ ನಮ್ಮನ್ನು ಅನುಸರಿಸುತ್ತಾರೆ ನಮ್ಮ ಕಾರ್ಯಗಳನ್ನು ಬೆಂಬಲಿಸುತ್ತಾರೆ.

          ಒಟ್ಟಿನಲ್ಲಿ ನಮ್ಮನ್ನು ಬಿಟ್ಟು ಹೋದವರ ಬಗ್ಗೆ ಚಿಂತಿಸದೆ ನಮ್ಮ ಜೊತೆ ಇರುವವರ ಸಮೂಹದಲ್ಲಿ  ಎಂದಿನಂತೆಯೇ ನಾವು ನಾವಾಗಿ ಬದುಕಬೇಕು. ತೊರದವರ ನೀಚ ಬುದ್ಧಿಯ ಬಗ್ಗೆ ಮಾತಾಡದೇ ಮೌನವಾಗಿದ್ದುಬಿಡಬೇಕು. ಆಗ ನಾವು ನಮ್ಮವರು ನೆಮ್ಮದಿಯಿಂದ ಸಂತೋಷದಿಂದ ಬದುಕಬಹುದು. ಆ ನಿಟ್ಟಿನಲ್ಲಿ ನಾವೆಲ್ಲಾ ಸಾಗೋಣ.

1056ಪಿಎಂ09122021
*ಅಪ್ಪಾಜಿ ಸುಧಾ ಮುಸ್ಟೂರು*

ಲೇಖನ ಮಾಲೆ

#ಅಮುಭಾವದೂಟ 02


#ಜೀವನ #ಹೂವಿನ #ಹಾಸಿಗೆಯಲ್ಲ #ಸಾಧಿಸಿ   #ಸುಖಮಯವಾಗಿಸಿಕೊಳ್ಳಬೇಕು

ಜೀವನ ಎಂಬುದು ಹೂವಿನ ಹಾಸಿಗೆಯಲ್ಲ.ಆನೆಯ ಭಾರ ಆನೆಗೆ ಇರುವೆಯ ಭಾರ ಇರುವೆಗೆ ಎಂಬಂತೆ ಅವರವರ ಪಾಲಿಗೆ ಅವರದೇ ಆದ ಕಷ್ಟ ಕಾರ್ಪಣ್ಯಗಳನ್ನು ಅನುಭವಿಸಬೇಕಾಗಿರುತ್ತದೆ. ನಮ್ಮ ಕಷ್ಟ ನಮಗೆ ದೊಡ್ಡದಾಗಿದ್ದರೆ ಇತರರಿಗೆ  ಅದು ಏನೂ ಅಲ್ಲದಿರಬಹುದು. ಇತರರಿಗೆ ಬಂದೊದಗಿರುವ ಸಂಕಷ್ಟ ನಮಗೆ  ಚಿಕ್ಕ ವಿಷಯವಾಗಿರಬಹುದು . ಆದರೆ ಅವರವರ ಪಾಲಿಗೆ ಅದು ಒಂದು ಪಾಠ ಕಲಿಸಿ  ಅನುಭವದ ಮೂಟೆಯನ್ನು ಹೊರಿಸಿಹೋಗಿರುತ್ತದೆ.ಅದಕ್ಕೆ ಹಿರಿಯರು ಹೇಳುವುದು ಜೀವನ ಒಂದು ಪಾಠಶಾಲೆ ಇಲ್ಲಿ ಕಲಿತ  ಅನುಭವ ಎಂದಿಗೂ ನಮ್ಮನ್ನು ಹಾದಿ ತಪ್ಪದಂತೆ ಸರಿದಾರಿಯಲ್ಲಿ ಕರೆದೊಯ್ಯಲು ಸಹಾಯಕವಾಗುವುದೆಂಬುದು ವಾಸ್ತವ ಸತ್ಯವಾಗಿದೆ.

              ಇತರೆ ಪ್ರಾಣಿಗಳು ತಮ್ಮ ಸಂಕಷ್ಟದ ಪರಿಸ್ಥಿತಿಯನ್ನು  ತಾವೇ ನಿಭಾಯಿಸುತ್ತವೆ.ಇಲ್ಲಿ ಬಲಾಢ್ಯವಾದದ್ದು ಗೆದ್ದರೆ ಬಲಹೀನವಾದದ್ದು ಸೋತು ಶರಣಾಗಬಹುದು ಅಥವಾ ಸತ್ತುಹೋಗಬಹುದು. ಆದರೆ ಮನುಷ್ಯರ ವಿಚಾರದಲ್ಲಿ ಹಾಗಾದಿರಬಹುದು.ಏಕೆಂದರೆ ಇಲ್ಲಿ ದೈಹಿಕವಾಗಿ ಬಲಾಢ್ಯನಾಗಿದ್ದರೂ ಬೌದ್ಧಿಕವಾಗಿ ಬಲಹೀನನಾಗಿರುವ ಹಾಗೂ ದೈಹಿಕವಾಗಿ ಬಲಹೀನನಾದವನು ಬೌದ್ಧಿಕವಾಗಿ ಬಲಾಢ್ಯನಾಗಿದ್ದು ಪರಿಸ್ಥಿತಿಯನ್ನು ತನ್ನದೇ ಆದ ಚಾಣಾಕ್ಷತೆಯಲ್ಲಿ ನಿಭಾಯಿಸಬಹುದು ಅಥವಾ  ಇತರರ ಸಹಾಯ ಸಹಕಾರದೊಂದಿಗೆ ನಿವಾರಿಸಿಕೊಳ್ಳಲು ಅವಕಾಶವಿದ್ದಾಗ್ಯೂ ಕೆಲವೊಮ್ಮೆ  ಅಸಹಾಯಕನಾಗಿ ಅಪಾಯ ತಂದೊಡ್ಡಿಕೊಳ್ಳವ ಅವಿವೇಕಿಗಳನ್ನೂ ಕಾಣುತ್ತೇವೆ. ಅಂತವರ ಪಾಲಿಗೆ ಕಷ್ಟವೆಂಬುದು ಅನುಭವಿಸಲಾಗದ ಹೊರೆಯಾಗಿರುತ್ತದೆ.ಅದರೊಂದಿಗೆ ಸಮಾಜದಿಂದ   ಉಂಟಾಗಬಹುದಾದ ಪರಿಣಾಮಗಳಿಗೆ ಹೆದರಿ ಬದಕನ್ನು ಕೈಚೆಲ್ಲಿರವರನ್ನು ನಾವು ಕಾಣಬಹುದು. ಆದ್ದರಿಂದ ಕಷ್ಟಗಳು ಮನುಷ್ಯನಿಗಲ್ಲದೆ ಮರಕ್ಕೆ ಬರುತ್ತದೆಯೇ ಎಂಬ ಹಿರಿಯರ ಅನುಭವಾಮೃತದ ಬೆಂಬಲದಿಂದ ಎದುರಿಸುವ ಆತ್ಮವಿಶ್ವಾಸ ಮೂಡಿಸಿಕೊಂಡು ಇರುವುದೊಂದೇ ಜೀವನದಲ್ಲಿ ಪ್ರಾಮಾಣಿಕವಾಗಿ ಖುಷಿಯಿಂದ  ಸಂತೃಪ್ತಿಯಿಂದ ಇತರರಿಗೆ ಮಾದರಿಯಾಗುವಂತೆ ಬದುಕುವುದು ನಮ್ಮ ಕೈಯಲ್ಲೇ ಇದೆ. ಯಾವುದೇ ಕಾರಣಕ್ಕೂ  ನಮ್ಮನ್ನು ಇತರರೊಂದಿಗೆ ಹೋಲಿಸಿಕೊಳ್ಳುವ ಬದಲು ನಮ್ಮ ಜೀವನ ನಮ್ಮದೇ ಪಯಣ  ಎಂದುಕೊಂಡು ಸಾಗಿದರೆ ಗುರಿಮುಟ್ಟುವುದು ಕಷ್ಟವೇನಲ್ಲ. 


1105ಪಿಎಂ07122021
*ಅಮುಭಾವಜೀವಿ ಸುಧಾ ಮುಷ್ಟೂರು*