ಮುಸ್ಸಂಜೆಯ ಮೈಮೇಲೆ
ಮುತ್ತಿನ ಹನಿಗಳ ಅಭಿಷೇಕ
ಉರಿಬಿಸಿಲಿಗೆ ದಣಿದ ನೆಲಕೆ
ಮುಂಗಾರಿಗೆ ಮತ್ತೇರಿ
ಮಿಂಚು ಗುಡುಗಿನ ಆರ್ಭಟದಿ
ಕೆರೆಕಟ್ಟೆಗಳ ಮೈದುಂಬಿಸಿ
ಪ್ರಕೃತಿಗೆ ತಂತು ಹೊಸತನ
ಕಾರ್ಮೋಡಗಳೆದೆಯಿಂದ
ಕೋಲ್ಮಿಂಚಿನ ರುದ್ರನರ್ತನ
ಹೊಸ ಮಳೆಯು ಇಳೆ ತಣಿಸಲು
ಹಸಿರಿನಾಳೆಯಲ್ಲಿ ಮೂಡಿತು ಕವನ
ಬಿರುಗಾಳಿ ಸುಳಿಗಾಳಿಗಳ
ರೌದ್ರಾವತಾರ ಭಯಂಕರ
ಮಳೆ ಬಂದು ನಿಂತ ಮರುಕ್ಷಣ
ಕಣ್ಮನಗಳಿಗೆ ನಯನಮನೋಹರ
ವೈಶಾಖದ ಬಿಸಿಲಿನ ಕಾರಣ
ಭೂಮಿಯೊಳಗೆ ಜಲಮರುಪೂರಣ
ಮಳೆಗಾಲವು ಮುಂಬದುಕಿಗೆ ಪ್ರೇರಣ
ನಿಸರ್ಗದ ಉನ್ನತಿಗೆ ಪುಷ್ಟಿ ಕರಣ
0544ಪಿಎಂ16052022
*ಅಮುಭಾವಜೀವಿ ಮುಸ್ಟೂರು*
No comments:
Post a Comment