Saturday, November 4, 2017
ಹಚ್ಚಿಟ್ಟ ಹಣತೆ ಕನ್ನಡ ಜ್ಯೋತಿಯಾಯ್ತು
ಬೀಸುವ ಗಾಳಿ ಕನ್ನಡ ಕಂಪು ಹರಡಿತು
ಹರಿವ ನೀರು ಕನ್ನಡ ಕಲರವ ಸಾರಿತು
ಬಾಳವ ನೆಲ ಕನ್ನಡ ಕುಲವ ಪೋಷಿಸಿತು
ನುಡಿವ ಮಾತೆಲ್ಲವೂ ಕನ್ನಡ
ನಡೆವ ಹಾದಿಯೆಲ್ಲವೂ ಕನ್ನಡ
ಹೆಜ್ಜೆ ಗೆಜ್ಜೆಯ ದನಿಯೂ ಕನ್ನಡ
ಸಿಹಿ ಸಜ್ಜಿಗೆಯ ಸವಿಯೂ ಕನ್ನಡ
ಒಬ್ಬರನೊಬ್ಬರ ಬೆಸೆದ ಸ್ನೇಹ ಕನ್ನಡ
ಭಿನ್ನತೆಯೊಳಗೂ ಏಕತೆ ಸಾರಿದ ಕನ್ನಡ
ನಾಡು ನುಡಿಯಲೊಂದಾದ ಕನ್ನಡ
ಹಾಡು ಪಾಡು ಎಲ್ಲವೂ ಕನ್ನಡ
ಶರಣರುಲಿದ ವಚನವೆಲ್ಲ ಕನ್ನಡ
ಷರೀಫಜ್ಜನ ತತ್ವಪದವು ಕನ್ನಡ
ದಾಸರ ಭಜನೆ ಕೀರ್ತನೆ ಕನ್ನಡ
ಕವಿಪುಂಗವರ ಸಾಲೆಲ್ಲವೂ ಕನ್ನಡ
ಕಟ್ಟಿದ ಗುಡಿಗೋಪುರ ಕನ್ನಡ
ಉಕ್ಕಿ ಬರುವ ನೂಪರವೂ ಕನ್ನಡ
ಮಹಲು ಗುಡಿಸಲು ನಿಂತ ನೆಲೆ ಕನ್ನಡ
ಕಲ್ಲು ಕಲ್ಲಿನಲಿ ಅರಳಿದ ಕಲೆ ಕನ್ನಡ
ನಾಡ ಸಂಸ್ಕೃತಿಯ ತಿಲಕ ಕನ್ನಡ
ಪ್ರತಿ ಹೃದಯದ ಮಿಡಿತ ಕನ್ನಡ
ಕರುನಾಡಿನೊಳಗಿರುವುದೆಲ್ಲವೂ ಕನ್ನಡ
ಹುಟ್ಟಿನಿಂದ ನಂಟು ಹೊಂದಿದ ಕನ್ನಡ
ಎಂದೆಂದಿಗೂ ಅಮರ ಕನ್ನಡ
ಸುಖ ದುಃಖದಲ್ಲೂ ಇದೆ ಸಂಗಡ
೦೫೩೨ಮು೦೧೧೧೨೦೧೭
*ಅಮುಭಾವಜೀವಿ*
Subscribe to:
Post Comments (Atom)
No comments:
Post a Comment