Saturday, July 23, 2022

ಕವನ

ಹೆತ್ತ ಜೀವ ಅಲ್ಲಿ
ಮಾತಿಲ್ಲದೆ ಮಲಗಿದೆ
ಪುಟ್ಟ ಹೃದಯವಿಲ್ಲಿ
ಕಾಯುತ್ತಾ ಕುಳಿತಿದೆ
ಅಮ್ಮ ಎಂದು ಕರೆವಾಗ
ಕಂದ  ಎಂದು ಕರೆಯದೀಗ

ಗರ್ಭದಲಿ ಜಾಗ ನೀಡಿ
ಮಡಿಲಲಿ ಜೋಗುಳ ಹಾಡಿ
ತುತ್ತನಿಟ್ಟು ಹಸಿವ ದೂಡಿ
ಬೆಳೆಸಿದ ತಾಯಿಗೆ ಸಾಟಿ ಯಾರು
ಪ್ರೀತಿ  ಎಂದರೆ ಅದು ಅಮ್ಮಾನೇ
ಅವಳಿಲ್ಲದ ಬಾಳಲಿ ನಾ ಒಂಟಿನೇ

ಅಕ್ಕರೆ ತುಂಬಿದ ಅನುಭಾವ
ಚೂರೂ ಇಲ್ಲ  ಅಹಂಭಾವ
ದೇವರಿಗಿಂತ ಮಿಗಿಲು ತಾಯಿ
ಎಷ್ಟು ಸಹಿಸೀತು ಈ ನೋವ
ನಗುವ ಮರೆತು ಕೂತಿರಲು
ತವರಿಲ್ಲ  ಇನ್ನು ಬದುಕಿನಲು

0734ಎಎಂ24072022
*ಅಮುಭಾವಜೀವಿ ಮುಸ್ಟೂರು*

ಕವಿತೆ

ಮಾತು ಮೂಕವಾಗಿದೆ
ಹೃದಯ ಭಾರವಾಗಿದೆ

ಹೆತ್ತ ಒಡಲು ಕಷ್ಟ ಪಡಲು
ಅಸಹಾಯಕವಾಗಿವೆ ಕೈಗಳು
ಪ್ರೀತಿ ಕೊಟ್ಟ ಜೀವ ಹಾಸಿಗೆ ಹಿಡಿದಿರಲು
ಅನಾಥ ಭಾವ ಕಾಡಿದೆ ಹಗಲಿರುಳು 
ನನಗೇ ಏಕೆ ಇಂಥ ಶಿಕ್ಷೆ
ಅಂತ್ಯವಿರದ  ಈ ಪರೀಕ್ಷೆ 

ನೋಡಲಾಗದ ಕಂಗಳಲಿ
ಬರೀ ಕಂಬನಿಯು ಜಿನುಗಿದೆ
ಮೌನ ತಳೆದ ವದನದಲಿ
ನಗುವದೇಕೆ ಮಾಯವಾಗಿದೆ
ಜಗವ ತೋರಿದ ಜನುಮದಾತೆ
ಮಲಗಿದಳೇಕೆ ಮಾತಾಡದಂತೆ

ಉಸಿರು ಹೆಸರು ಎಲ್ಲಾ ಕೊಟ್ಟು 
ಹಸಿವೆಯನ್ನು ಬಹು ದೂರವಿಟ್ಟು
ಸಹಿಸಿ ಎಲ್ಲಾ ಸಂಕಷ್ಟಗಳ ಬದಿಗಿಟ್ಟು 
ಸಾ(ವ)ಸಿವೆಯನರಸಿ ಹೊರಟರದೇನು ಗುಟ್ಟು
ಎದೆಯೊಳಗಿನ  ಅನಾಥ ಭಾವ 
ತಡೆಯಲಾಗದು ಈ ನೋವ

0631ಎಎಂ24072022 
*ಅಮುಭಾವಜೀವಿ ಮುಸ್ಟೂರು*





ಕವನ

ಹೇಗೆ ಸಹಿಸಲಿ ತಾಯಿ ನಿನ್ನ 
ಇಂತಹ ಸ್ಥಿತಿಯಲ್ಲಿ ಕಂಡು 
ಕರುಣೆಯಿರದ ದೈವವ
ಕ್ಷಮಿಸಲಾರೆ ಎಂದೆಂದಿಗೂ 

ಕಲ್ಮಶವಿಲ್ಲದ ಮುಗ್ಧ ಜೀವ 
ಏಕೆ ಸಹಿಸಬೇಕಿಂತ ನೋವ
ಯಾವ ತಪ್ಪಿಗೆ ಇಂತಹ ಶಿಕ್ಷೆ
ಅಸಹಾಯಕನಾದೆಯಾ ಮಾಡಲು ರಕ್ಷೆ

ದಣಿವಿಲ್ಲದೆ ದುಡಿದು ಸಲುಹಿತ್ತು
ಇಳಿ ವಯಸಲೂ ನೋಯಬೇಕೆ
ಇಂತ ಮೋಸಗೈವ ನಿನಗೇಕೆ ಬೇಕು 
ನಿತ್ಯ ಪೂಜೆ ಆರತಿ ಅಭಿಷೇಕ 

ಹೆತ್ತವಳ ಆಪತ್ತಿನಿಂದ ಬಿಡಿಸು
ಮಕ್ಕಳಿರುವೆವು ಸಲಹಲು
ಕಲ್ಲು ನೀನು  ಅರಿಯಲಾರೆ
ತಾಯಿ ಮಮತೆಯ ವಾತ್ಸಲ್ಯ 

ಬವಣೆಯ ನೀಗಿಸು ತಪ್ಪು ನಿಲ್ಲಿಸು
ಅಮ್ಮನೆಂಬ ಜೀವವ ಬದುಕಿಸು
ಜನ್ಮವಿರುವವರೆಗೆ ಋಣಿಯಾಗಿರುವೆ
ನಮ್ಮ ತಾಯಿಯ ನಮಗೊಪ್ಪಿಸು

1120ಪಿಎಂ24072022
 *,ಅಮುಭಾವಜೀವಿ ಮುಸ್ಟೂರು*

ಕವನ

ಎಲ್ಲಾ ನೋವ ಸಹಿಕೊಂಡೆ
ಎಲ್ಲಾ  ಅವಮಾನ ನುಂಗಿಕೊಂಡೆ
ಎತ್ತರಕ್ಕೆ ಬೆಳಿಸಿ ನಮ್ಮನದಕೆಲ್ಲ
ಉತ್ತರವಾಗಿ ತೋರಿದೆ

ಅಪ್ಪನೆಂಬ  ಆಗದಡಿಯಲಿ
ಹೆಮ್ಮರವಾಗುತ್ತಿದೆ ನೆರಳಾಗಿ ಸಲಹಿದೆ
ಹೆಮ್ಮೆಯ ಬದುಕು ನಮ್ಮದಾಗಿಸಿದೆ
ಸಾಟಿ ಏನುಂಟು ನಿನಗೆ ಜಗದಲಿ

ಬೇಕು ಬೇಡಗಳ ಪೂರೈಸಿದಂತ ಜೀವ
ಸುಖ ದುಃಖಕೂ ಮಡಿಲಾದ ಭಾವ
ಯಾವ ನಂಟೂ ಅಂಟಲಾರದು
ಅಮ್ಮನುಂಟು ಎಂಬ ಭರವಸೆಯ ಮುಂದೆ 

ಹೆಣ್ಣು ತಾಯಾಗಲು ಜಗಕೆ ಬಲು ಖುಷಿ 
ಅದಕೆ ತಾಯಿ ದೈವವೆನ್ನುವ ಸಮಜಾಯಿಷಿ 
ಕಲ್ಲು ದೇವರ ಬಲ್ಲವರಾರಿಲ್ಲ
ಮಾತೃ ದೇವರ ಮುಂದೆ ಮತ್ಯಾರಿಲ್ಲ

ಹಸಿವಿಗಮೃತವಿತ್ತು ಬೆಳೆಸಿದವಳು ತಾಯಿ
ಅವಳ ಪ್ರೀತಿಯ ಮುಂದೆ  ಎಲ್ಲವೂ ಸ್ಥಾಯಿ
ಜೀವವಿತ್ತವಳ ಋಣವ ತೀರಿಸಲಾದೀತೆ
ಜೀವಮಾನವಿದು ಅವಳಿತ್ತ ರಕ್ಷೆಗೆ ಸಮವಾದೀತೆ

0549ಎಎಂ22072022
 *ಅಮುಭಾವಜೀವಿ ಮುಸ್ಟೂರು*

ಕವನ

ಅಮ್ಮನೆಂಬ ದೈವವಲ್ಲಿ
ನೊಂದುಕೊಂಡು ಮಲಗಿದೆ
ಅದರ ನೋವ ಕಂಡು ಇಲ್ಲಿ 
ಜೀವ ಜೀವನ ನಲುಗಿದೆ

ಅವರನ್ನು ಮಾಸ ಹೊತ್ತ ಜೀವ
ಜನನದಲ್ಲಿ ಸಹಿಸಿ ಅಗಾಧ ನೋವ
ಜನ್ಮ ಕೊಟ್ಟ ಅವಳ  ಋಣವ
ಇಡೀ ಬದುಕು ಸಾಲದು ತೀರಿಸಲು

ತಾಯಿ ಪ್ರೀತಿ ಮುಂದೆ 
ಎಲ್ಲವೂ ತೃಣ ಜಗದಲಿ
ತಾಯಿ ಮಡಿಲ ತವರಿರಲು
ಎಲ್ಲಾ ನೋವಿಗುಪಶಮನ ಬದುಕಲಿ

ಅಂತ ಜೀವಕೇಕಿಂತ ನೋವ ಕೊಟ್ಟ 
ಮುಗ್ಧ ಹೃದಯಕೇಕಿಂತ ಕಷ್ಟ ಕೊಟ್ಟ
ದೇವರೇ ನೀ ಬರೀ ಕಲ್ಲು ತಾಯ ಮುಂದೆ
ನೀನಿರುವ ನಂಬಿಕೆ ನೀಗಿತು ಇಂದಿನಿಂದೆ

ಅಮ್ಮ ನೀನಿಲ್ಲದೆ ಬದುಕು  ಅನಾಥ
ನೀ ಕೊಟ್ಟ ಭಿಕ್ಷೆ ನನ್ನದೇನಿಲ್ಲ ಸ್ವಂತ
ಬೇಗ ಹೊರ ಬಾ ದೈವವೇ ಆ ನೋವಿನಿಂದ 
ಬಾಳಲಿ ಮತ್ತೆ ಜೊತೆಯಾಗು ಕಾಯುತಿರುವೆ ನಿನ್ನ ಕಂದ

0517ಎಎಂ22072022
*ಅಮುಭಾವಜೀವಿ ಮುಸ್ಟೂರು*

ಕವನ

ಅಮ್ಮನೆಂಬ ದೈವವಲ್ಲಿನೊಂದುಕೊಂಡು ಮಲಗಿದೆಅದರ ನೋವ ಕಂಡು ಇಲ್ಲಿ ಜೀವ ಜೀವನ ನಲುಗಿದೆಅವರನ್ನು ಮಾಸ ಹೊತ್ತ ಜೀವಜನನದಲ್ಲಿ ಸಹಿಸಿ ಅಗಾಧ ನೋವಜನ್ಮ ಕೊಟ್ಟ ಅವಳ  ಋಣವಇಡೀ ಬದುಕು ಸಾಲದು ತೀರಿಸಲುತಾಯಿ ಪ್ರೀತಿ ಮುಂದೆ ಎಲ್ಲವೂ ತೃಣ ಜಗದಲಿತಾಯಿ ಮಡಿಲ ತವರಿರಲುಎಲ್ಲಾ ನೋವಿಗುಪಶಮನ ಬದುಕಲಿಅಂತ ಜೀವಕೇಕಿಂತ ನೋವ ಕೊಟ್ಟ ಮುಗ್ಧ ಹೃದಯಕೇಕಿಂತ ಕಷ್ಟ ಕೊಟ್ಟದೇವರೇ ನೀ ಬರೀ ಕಲ್ಲು ತಾಯ ಮುಂದೆನೀನಿರುವ ನಂಬಿಕೆ ನೀಗಿತು ಇಂದಿನಿಂದೆಅಮ್ಮ ನೀನಿಲ್ಲದೆ ಬದುಕು  ಅನಾಥನೀ ಕೊಟ್ಟ ಭಿಕ್ಷೆ ನನ್ನದೇನಿಲ್ಲ ಸ್ವಂತಬೇಗ ಹೊರ ಬಾ ದೈವವೇ ಆ ನೋವಿನಿಂದ ಬಾಳಲಿ ಮತ್ತೆ ಜೊತೆಯಾಗು ಕಾಯುತಿರುವೆ ನಿನ್ನ ಕಂದ.  0517ಎಎಂ22072022*ಅಮುಭಾವಜೀವಿ ಮುಸ್ಟೂರು*

ಎಲ್ಲಾ ನೋವ ಸಹಿಕೊಂಡೆಎಲ್ಲಾ  ಅವಮಾನ ನುಂಗಿಕೊಂಡೆಎತ್ತರಕ್ಕೆ ಬೆಳಿಸಿ ನಮ್ಮನದಕೆಲ್ಲಉತ್ತರವಾಗಿ ತೋರಿದೆಅಪ್ಪನೆಂಬ  ಆಗದಡಿಯಲಿಹೆಮ್ಮರವಾಗುತ್ತಿದೆ ನೆರಳಾಗಿ ಸಲಹಿದೆಹೆಮ್ಮೆಯ ಬದುಕು ನಮ್ಮದಾಗಿಸಿದೆಸಾಟಿ ಏನುಂಟು ನಿನಗೆ ಜಗದಲಿಬೇಕು ಬೇಡಗಳ ಪೂರೈಸಿದಂತ ಜೀವಸುಖ ದುಃಖಕೂ ಮಡಿಲಾದ ಭಾವಯಾವ ನಂಟೂ ಅಂಟಲಾರದುಅಮ್ಮನುಂಟು ಎಂಬ ಭರವಸೆಯ ಮುಂದೆ ಹೆಣ್ಣು ತಾಯಾಗಲು ಜಗಕೆ ಬಲು ಖುಷಿ ಅದಕೆ ತಾಯಿ ದೈವವೆನ್ನುವ ಸಮಜಾಯಿಷಿ ಕಲ್ಲು ದೇವರ ಬಲ್ಲವರಾರಿಲ್ಲಮಾತೃ ದೇವರ ಮುಂದೆ ಮತ್ಯಾರಿಲ್ಲಹಸಿವಿಗಮೃತವಿತ್ತು ಬೆಳೆಸಿದವಳು ತಾಯಿಅವಳ ಪ್ರೀತಿಯ ಮುಂದೆ  ಎಲ್ಲವೂ ಸ್ಥಾಯಿಜೀವವಿತ್ತವಳ ಋಣವ ತೀರಿಸಲಾದೀತೆಜೀವಮಾನವಿದು ಅವಳಿತ್ತ ರಕ್ಷೆಗೆ ಸಮವಾದೀತೆ
0549ಎಎಂ22072022 *ಅಮುಭಾವಜೀವಿ ಮುಸ್ಟೂರು*
ಹೇಗೆ ಸಹಿಸಲಿ ತಾಯಿ ನಿನ್ನ ಇಂತಹ ಸ್ಥಿತಿಯಲ್ಲಿ ಕಂಡು ಕರುಣೆಯಿರದ ದೈವವಕ್ಷಮಿಸಲಾರೆ ಎಂದೆಂದಿಗೂ ಕಲ್ಮಶವಿಲ್ಲದ ಮುಗ್ಧ ಜೀವ ಏಕೆ ಸಹಿಸಬೇಕಿಂತ ನೋವಯಾವ ತಪ್ಪಿಗೆ ಇಂತಹ ಶಿಕ್ಷೆಅಸಹಾಯಕನಾದೆಯಾ ಮಾಡಲು ರಕ್ಷೆದಣಿವಿಲ್ಲದೆ ದುಡಿದು ಸಲುಹಿತ್ತುಇಳಿ ವಯಸಲೂ ನೋಯಬೇಕೆಇಂತ ಮೋಸಗೈವ ನಿನಗೇಕೆ ಬೇಕು ನಿತ್ಯ ಪೂಜೆ ಆರತಿ ಅಭಿಷೇಕ ಹೆತ್ತವಳ ಆಪತ್ತಿನಿಂದ ಬಿಡಿಸುಮಕ್ಕಳಿರುವೆವು ಸಲಹಲುಕಲ್ಲು ನೀನು  ಅರಿಯಲಾರೆತಾಯಿ ಮಮತೆಯ ವಾತ್ಸಲ್ಯ ಬವಣೆಯ ನೀಗಿಸು ತಪ್ಪು ನಿಲ್ಲಿಸುಅಮ್ಮನೆಂಬ ಜೀವವ ಬದುಕಿಸುಜನ್ಮವಿರುವವರೆಗೆ ಋಣಿಯಾಗಿರುವೆನಮ್ಮ ತಾಯಿಯ ನಮಗೊಪ್ಪಿಸು1120ಪಿಎಂ24072022 *,ಅಮುಭಾವಜೀವಿ ಮುಸ್ಟೂರು*    

Thursday, July 21, 2022

ಮಾಹಿತಿ

ಚೋಕಾ*

ಚೋಕಾ (choka) ಇದು ಜಪಾನಿನ ಸಾಹಿತ್ಯದ ಮತ್ತೊಂದು ಕಾವ್ಯ ಪ್ರಕಾರವಾಗಿದ್ದು  ೯ ಸಾಲುಗಳ ಒಂದು ಸಾಹಿತ್ಯ ಶೈಲಿ. ೫೫ ಅಕ್ಷರ ಜೋಡಣೆಯ ಛಂದಸ್ಸಿನ ಗುಚ್ಚ. ಚೋ ಎಂದರೆ long (ದೊಡ್ಡದು ), ಕಾ ಎಂದರೆ song (ಕವಿತೆ ).
ಹಾಯ್ಕು,
ಟಂಕಾ,
ಚೋಕಾ,
ವಾಕಾ,
ರೆಂಗ... ಇವೆಲ್ಲ ಜಪಾನೀ ಭಾಷೆಯಲ್ಲಿನ ಸಾoಪ್ರದಾಯಿಕ ಕಾವ್ಯ ರಚನೆಯ ಪ್ರಕಾರಗಳು.

ಮೊದಲನೆಯ ಸಾಲಿನಲ್ಲಿ ಐದು ಅಕ್ಷರ,
ಎರಡನೆಯ ಸಾಲಿನಲ್ಲಿ ಏಳು ಅಕ್ಷರ,
ಮೂರನೆಯ ಸಾಲಿನಲ್ಲಿ ಐದು ಅಕ್ಷರ,
ನಾಲ್ಕನೆಯ ಸಾಲಿನಲ್ಲಿ ಏಳು ಅಕ್ಷರ,
ಐದನೆಯ ಸಾಲಿನಲ್ಲಿ ಐದು ಅಕ್ಷರಗಳು,
ಆರನೇ ಸಾಲಿನಲ್ಲಿ ಏಳು ಅಕ್ಷರಗಳು,
ಏಳನೇ ಸಾಲಿನಲ್ಲಿ ಐದು ಅಕ್ಷರಗಳು,
ಎಂಟು ಮತ್ತು ಒಂಬತ್ತು = ತಲಾ ಏಳು- ಏಳು ಅಕ್ಷರಗಳು. ಹೀಗೆ ಒಂಬತ್ತು ಸಾಲುಗಳಲ್ಲಿ ಚೋಕಾ ರಚನೆಯಾಗುತ್ತದೆ.

(1, 3, 5 ಹಾಗೂ 7ನೇ ಸಾಲುಗಳು ಐದೈದು ಅಕ್ಷರಗಳನ್ನು,
2, 4, 6, 8 ಹಾಗೂ 9ನೇ ಸಾಲುಗಳು ಏಳೇಳು ಅಕ್ಷರಗಳನ್ನು ಹೊಂದಿರಬೇಕು)

ಒಟ್ಟು 55 ಅಕ್ಷರದ ಕವನ ಇದಾಗಿದೆ.

*ಸಂಗ್ರಹ*

Friday, July 15, 2022

ಕವನ

ಬೇಡವೆಂದರೂ ನೀ 
ಮತ್ತೆ ಬೀಳುವೆ ಕಣ್ಣಿಗೆ
ಮರೆಯ ಬೇಕೆಂದರೂ ನೀ
ಆಸೆ ಹುಟ್ಟಿಸುವೆ ಮನಸಿಗೆ

ನನಗೆ ಗೊತ್ತು ನೀನೆಂದೂ
ಸಿಗದ ಹುಳಿದ್ರಾಕ್ಷಿ ಎಂದು
ಎಲ್ಲ ಮರೆತಿರುವಾಗ ನೀ ಬಂದು
ಭೂತಕೆ ತಳ್ಳುವೆ   ಅಲ್ಲಿಗೇ ಹೋಗೆಂದು

ನಾ ಭ್ರಮನಿರಸನಗೊಂಡು 
ಬದುಕನ್ನೇ ಬೇಡವೆನ್ನುವ
ತೀರ್ಮಾನಕ್ಕೆ ಗಟ್ಟಿ ಅಂಟಿಕೊಳ್ಳುವಾಗಲೇ
 ಚಿತ್ತ ಚಂಚಲಿಸಿದೆ

ಆಶಾಗೋಪುರವೆಂದೋ ಕಳಚಿತ್ತು
ಒಲವ ನೂಪುರ ಒಡೆದು ಹಾಳಾಗಿತ್ತು
ಮರಳುರಾಶಿಯನ್ನ ಆಗಲೇ  ಮುಚ್ಚಿತ್ತು
ನೀನದರ ಗುಟ್ಟ ಒಡೆಯಬೇಡ್ಹೋಗು

ಬಡವನ ಪಾಡು
 ದಡವಿಲ್ಲದ ಗೂಡು
ಎಲ್ಲ ಒಣಗಿರುವಾಗ ಕಿಚ್ಚು
ಹಚ್ಚಿ ನಾಶಗೈಯುವುದು ಬೇಡ

ನಿನ್ನ ಜಾಡ ನೀ ಹಿಡಿದು ನಡೆ
ಕಣ್ಣೆತ್ತಿ ನೋಡದೆ ನನ್ನ ಕಡೆ
ಬದುಕು ಕಲಿಸಿದೀ ಪಾಠ
ಬಾಳಗೀತೆಗಿದೇ ಮುಖಪುಟ.

0610ಪಿಎಂ150715

##ಅಮು##

Tuesday, July 12, 2022

ಕವನ

#ಅಮುಭಾವದೂಟ(02)  23

ಅಪಾರ್ಥಗಳು ಹೆಚ್ಚಾಗುತ್ತವೆ
ಸರಿಯಾದ ಸಂವಹನಗಳಿಲ್ಲದೆ
ಸಂಬಂಧಗಳು ಹಾಳಾಗುತ್ತವೆ
ಸರಿಯಾಗಿ  ಅರ್ಥಮಾಡಿಕೊಳ್ಳದೆ
ಸ್ನೇಹಿತರೂ ದೂರಾಗುವರು
ಹಾಳುಗೆಡುಹುವವರ ಮಾತಿಂದ
ಪ್ರೀತಿಯೂ ಮುರಿದು ಬೀಳುತ್ತದೆ 
ಹೃದಯಗಳ ಮಾತು ಮೌನವಾಗಲು
ಅರಿವಿನ ಕೊರತೆಯ  ಅಪಾಯ 
ಎಲ್ಲಾ  ಅನುಬಂಧಗಳ ವಿದಾಯ

0621ಪಿಎಂ12072022
*ಅಮುಭಾವಜೀವಿ ಮುಸ್ಟೂರು*

Friday, July 1, 2022

ಲೇಖನ

ಈ ಜಗತ್ತಿನಲ್ಲಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಹಾಳು ಮಾಡುವುದಕ್ಕಾಗಿ ಜನ ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ. ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ತನ್ನ ಕ್ಷೇತ್ರದಲ್ಲಿ ತನ್ನ ಪಾಲಿನ ಕೆಲಸವನ್ನು ಮಾಡುತ್ತಾ ಹೋಗುವವರಿಗೆ ಇಂಥ ಜನರು ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸಾಕಷ್ಟು ನೋವನ್ನು ಕೊಡುತ್ತಾರೆ. ನಮ್ಮ ಬಗ್ಗೆ ಆಡಿಕೊಳ್ಳುವ ಜನರ ವ್ಯಕ್ತಿತ್ವ ಅವರ ನಡೆನುಡಿ ಎಲ್ಲವೂ ಅರಿವಿದ್ದರೂ ಕೂಡ ನಾವು ಸುಮ್ಮನಿದ್ದು ನಮ್ಮ ಪಾಡಿಗೆ ನಾವು ಇದ್ದರೂ ಕೂಡ ಅವರಿಗೆ ತೊಂದರೆ ಕೊಡದೆ ಹೋದರೆ ಚಂದ ಅನ್ನವು ಜೀರ್ಣವಾಗದೆ ಇರಬಹುದು ಆದರೆ ಅಂತಹ ವ್ಯಕ್ತಿಗಳ ನಕಾರಾತ್ಮಕ ಅಂಶಗಳು ಎಂದು ನಮ್ಮ ವ್ಯಕ್ತಿತ್ವವನ್ನು ಮುಟ್ಟುವುದಕ್ಕೂ ಸಾಧ್ಯವಿಲ್ಲ.

        ಈ ಜಗತ್ತಿನಲ್ಲಿ ಬೆಳೆಯುವವನಿಗೆ ನೂರಾರು ಅಡ್ಡಿಗಳು. ಇಲ್ಲಿ ಎಲ್ಲವೂ ತೀರ್ಮಾನವಾಗುವುದು ಅವರವರ ಮೂಗಿನ ನೇರಕ್ಕೆ ಹೊರತು ವ್ಯಕ್ತಿಯ ವ್ಯಕ್ತಿತ್ವದ ಮೇಲಲ್ಲ. ಪ್ರತಿಯೊಬ್ಬರ ಪಯಣ ಇನ್ಯಾರದೋ ಅಭಿಪ್ರಾಯಕ್ಕೆ ಇನ್ಯಾರದೋ ಪ್ರಶಂಸೆಗೆ ಅಥವಾ ತಳಬುಡಗಳಿಲ್ಲದ ಆರೋಪ ಮಾಡುವವರ ಸಹಾಯದಿಂದ ಸಾಗುವುದಿಲ್ಲ. ಬದಲಾಗಿ ಅದು ಅವರವರ ಪರಿಶ್ರಮ ಅವರು ನಂಬಿರುವ ತತ್ವ-ಸಿದ್ಧಾಂತಗಳು ಆದರ್ಶಗಳು ಸಾಧಿಸಬೇಕೆಂಬ ಅಚಲ ವಿಶ್ವಾಸದಿಂದ ಗುರಿಯೆಡೆಗೆ ಸಾಗಿ ಬಂದಿರುತ್ತಾನೆ.