Friday, July 15, 2022

ಕವನ

ಬೇಡವೆಂದರೂ ನೀ 
ಮತ್ತೆ ಬೀಳುವೆ ಕಣ್ಣಿಗೆ
ಮರೆಯ ಬೇಕೆಂದರೂ ನೀ
ಆಸೆ ಹುಟ್ಟಿಸುವೆ ಮನಸಿಗೆ

ನನಗೆ ಗೊತ್ತು ನೀನೆಂದೂ
ಸಿಗದ ಹುಳಿದ್ರಾಕ್ಷಿ ಎಂದು
ಎಲ್ಲ ಮರೆತಿರುವಾಗ ನೀ ಬಂದು
ಭೂತಕೆ ತಳ್ಳುವೆ   ಅಲ್ಲಿಗೇ ಹೋಗೆಂದು

ನಾ ಭ್ರಮನಿರಸನಗೊಂಡು 
ಬದುಕನ್ನೇ ಬೇಡವೆನ್ನುವ
ತೀರ್ಮಾನಕ್ಕೆ ಗಟ್ಟಿ ಅಂಟಿಕೊಳ್ಳುವಾಗಲೇ
 ಚಿತ್ತ ಚಂಚಲಿಸಿದೆ

ಆಶಾಗೋಪುರವೆಂದೋ ಕಳಚಿತ್ತು
ಒಲವ ನೂಪುರ ಒಡೆದು ಹಾಳಾಗಿತ್ತು
ಮರಳುರಾಶಿಯನ್ನ ಆಗಲೇ  ಮುಚ್ಚಿತ್ತು
ನೀನದರ ಗುಟ್ಟ ಒಡೆಯಬೇಡ್ಹೋಗು

ಬಡವನ ಪಾಡು
 ದಡವಿಲ್ಲದ ಗೂಡು
ಎಲ್ಲ ಒಣಗಿರುವಾಗ ಕಿಚ್ಚು
ಹಚ್ಚಿ ನಾಶಗೈಯುವುದು ಬೇಡ

ನಿನ್ನ ಜಾಡ ನೀ ಹಿಡಿದು ನಡೆ
ಕಣ್ಣೆತ್ತಿ ನೋಡದೆ ನನ್ನ ಕಡೆ
ಬದುಕು ಕಲಿಸಿದೀ ಪಾಠ
ಬಾಳಗೀತೆಗಿದೇ ಮುಖಪುಟ.

0610ಪಿಎಂ150715

##ಅಮು##

No comments:

Post a Comment