Saturday, July 23, 2022

ಕವನ

ಅಮ್ಮನೆಂಬ ದೈವವಲ್ಲಿನೊಂದುಕೊಂಡು ಮಲಗಿದೆಅದರ ನೋವ ಕಂಡು ಇಲ್ಲಿ ಜೀವ ಜೀವನ ನಲುಗಿದೆಅವರನ್ನು ಮಾಸ ಹೊತ್ತ ಜೀವಜನನದಲ್ಲಿ ಸಹಿಸಿ ಅಗಾಧ ನೋವಜನ್ಮ ಕೊಟ್ಟ ಅವಳ  ಋಣವಇಡೀ ಬದುಕು ಸಾಲದು ತೀರಿಸಲುತಾಯಿ ಪ್ರೀತಿ ಮುಂದೆ ಎಲ್ಲವೂ ತೃಣ ಜಗದಲಿತಾಯಿ ಮಡಿಲ ತವರಿರಲುಎಲ್ಲಾ ನೋವಿಗುಪಶಮನ ಬದುಕಲಿಅಂತ ಜೀವಕೇಕಿಂತ ನೋವ ಕೊಟ್ಟ ಮುಗ್ಧ ಹೃದಯಕೇಕಿಂತ ಕಷ್ಟ ಕೊಟ್ಟದೇವರೇ ನೀ ಬರೀ ಕಲ್ಲು ತಾಯ ಮುಂದೆನೀನಿರುವ ನಂಬಿಕೆ ನೀಗಿತು ಇಂದಿನಿಂದೆಅಮ್ಮ ನೀನಿಲ್ಲದೆ ಬದುಕು  ಅನಾಥನೀ ಕೊಟ್ಟ ಭಿಕ್ಷೆ ನನ್ನದೇನಿಲ್ಲ ಸ್ವಂತಬೇಗ ಹೊರ ಬಾ ದೈವವೇ ಆ ನೋವಿನಿಂದ ಬಾಳಲಿ ಮತ್ತೆ ಜೊತೆಯಾಗು ಕಾಯುತಿರುವೆ ನಿನ್ನ ಕಂದ.  0517ಎಎಂ22072022*ಅಮುಭಾವಜೀವಿ ಮುಸ್ಟೂರು*

ಎಲ್ಲಾ ನೋವ ಸಹಿಕೊಂಡೆಎಲ್ಲಾ  ಅವಮಾನ ನುಂಗಿಕೊಂಡೆಎತ್ತರಕ್ಕೆ ಬೆಳಿಸಿ ನಮ್ಮನದಕೆಲ್ಲಉತ್ತರವಾಗಿ ತೋರಿದೆಅಪ್ಪನೆಂಬ  ಆಗದಡಿಯಲಿಹೆಮ್ಮರವಾಗುತ್ತಿದೆ ನೆರಳಾಗಿ ಸಲಹಿದೆಹೆಮ್ಮೆಯ ಬದುಕು ನಮ್ಮದಾಗಿಸಿದೆಸಾಟಿ ಏನುಂಟು ನಿನಗೆ ಜಗದಲಿಬೇಕು ಬೇಡಗಳ ಪೂರೈಸಿದಂತ ಜೀವಸುಖ ದುಃಖಕೂ ಮಡಿಲಾದ ಭಾವಯಾವ ನಂಟೂ ಅಂಟಲಾರದುಅಮ್ಮನುಂಟು ಎಂಬ ಭರವಸೆಯ ಮುಂದೆ ಹೆಣ್ಣು ತಾಯಾಗಲು ಜಗಕೆ ಬಲು ಖುಷಿ ಅದಕೆ ತಾಯಿ ದೈವವೆನ್ನುವ ಸಮಜಾಯಿಷಿ ಕಲ್ಲು ದೇವರ ಬಲ್ಲವರಾರಿಲ್ಲಮಾತೃ ದೇವರ ಮುಂದೆ ಮತ್ಯಾರಿಲ್ಲಹಸಿವಿಗಮೃತವಿತ್ತು ಬೆಳೆಸಿದವಳು ತಾಯಿಅವಳ ಪ್ರೀತಿಯ ಮುಂದೆ  ಎಲ್ಲವೂ ಸ್ಥಾಯಿಜೀವವಿತ್ತವಳ ಋಣವ ತೀರಿಸಲಾದೀತೆಜೀವಮಾನವಿದು ಅವಳಿತ್ತ ರಕ್ಷೆಗೆ ಸಮವಾದೀತೆ
0549ಎಎಂ22072022 *ಅಮುಭಾವಜೀವಿ ಮುಸ್ಟೂರು*
ಹೇಗೆ ಸಹಿಸಲಿ ತಾಯಿ ನಿನ್ನ ಇಂತಹ ಸ್ಥಿತಿಯಲ್ಲಿ ಕಂಡು ಕರುಣೆಯಿರದ ದೈವವಕ್ಷಮಿಸಲಾರೆ ಎಂದೆಂದಿಗೂ ಕಲ್ಮಶವಿಲ್ಲದ ಮುಗ್ಧ ಜೀವ ಏಕೆ ಸಹಿಸಬೇಕಿಂತ ನೋವಯಾವ ತಪ್ಪಿಗೆ ಇಂತಹ ಶಿಕ್ಷೆಅಸಹಾಯಕನಾದೆಯಾ ಮಾಡಲು ರಕ್ಷೆದಣಿವಿಲ್ಲದೆ ದುಡಿದು ಸಲುಹಿತ್ತುಇಳಿ ವಯಸಲೂ ನೋಯಬೇಕೆಇಂತ ಮೋಸಗೈವ ನಿನಗೇಕೆ ಬೇಕು ನಿತ್ಯ ಪೂಜೆ ಆರತಿ ಅಭಿಷೇಕ ಹೆತ್ತವಳ ಆಪತ್ತಿನಿಂದ ಬಿಡಿಸುಮಕ್ಕಳಿರುವೆವು ಸಲಹಲುಕಲ್ಲು ನೀನು  ಅರಿಯಲಾರೆತಾಯಿ ಮಮತೆಯ ವಾತ್ಸಲ್ಯ ಬವಣೆಯ ನೀಗಿಸು ತಪ್ಪು ನಿಲ್ಲಿಸುಅಮ್ಮನೆಂಬ ಜೀವವ ಬದುಕಿಸುಜನ್ಮವಿರುವವರೆಗೆ ಋಣಿಯಾಗಿರುವೆನಮ್ಮ ತಾಯಿಯ ನಮಗೊಪ್ಪಿಸು1120ಪಿಎಂ24072022 *,ಅಮುಭಾವಜೀವಿ ಮುಸ್ಟೂರು*    

No comments:

Post a Comment