Wednesday, March 29, 2023

ಕವಞ

*#ಕರ್ಮಯೋಗಿ*

ವಸಂತನನು ಸಂತನಾಗಿಸದೆ
ಚೈತ್ರ ಚಿಗುರಿನ ಬಣ್ಣ ತಂದು
ಕೊಗಿಲೆಯ ದನಿಗೆ ಮನಸೋತು
ಮೂಡಿ ಬಂದ ರವಿರಾಯ

ಬಿರಿದ ಮೊಗ್ಗಿನ ಎದೆಯಿಂದ
ದುಂಬಿಗಾನದ ಮುದದಿಂದ
ಇಬ್ಬನಿಯ ಮೊಗವರೆಸಿ
ಹೊಂಗಿರಣ ಚೆಲ್ಲಿದ ನೇಸರ

ಮಲಗಿದ್ದ ಗಿರಿಯ ಮೈದಡವಿ
ಮರಗಿಡಗಳ ತಲೆ ಸವರಿ
ಸಾಗರದಲೆಗೆ ಹೊಂಬಣ್ಣ
ಬಳಿದು ಬೀಗಿದ ಭಾಸ್ಕರ

ನಿನ್ನೆಯನು ಹಿಂದೆ ಸರಿಸಿ
ಇಂದಿಗೆ ಹೊಸ ನಿರೀಕ್ಷೆ ಮೂಡಿಸಿ
ನಾಳೆಯ ಭರವಸೆಯಾಗಿ
ನಗುವ ಬಿತ್ತರಿಸಿದ ಸೂರ್ಯ

ದಿನದ ತುಂಬೆಲ್ಲ ಬೆಳಕು ಚೆಲ್ಲಿ
ಸಂಜೆ ತನಕ ಉರಿ ಬಿಸಿಲ ಸುರಿದು
ಮತ್ತದೇ ಮೌನದಲಿ ಧ್ಯಾನಸ್ಥನಾಗಿ
ದಿನ ಮುಗಿಸುವ ನಿಷ್ಠಾವಂತ ಕರ್ಮಯೋಗಿ

0653ಎಎಂ30032019
*ಅಮು ಭಾವಜೀವಿ ಮುಸ್ಟೂರು

ಈ ಪುಟ್ಟ ಹೃದಯದೊಳಗೆ ಏಕೆ
ಬರ ಮಾಡಿಕೊಳ್ಳದೆ ದೂರ ತಳ್ಳಿದೆ
ಮೂಕ ಮನಸು ನೊಂದು ಈಗ
ಕಂಬನಿಯ ಧಾರೆ ಹರಿಸುತ್ತಿದೆ
ಬೇಡವಾಯಿತೆ ಒಲವು ನಿನಗೆ
ಬದುಕ ಬಯಸಿದೆ ನಿನ್ನೊಂದಿಗೆ

ಕರೆಯದೆ ಬಂದೆ ನೀನಂದು
ಕರೆದರೂ ಕೇಳಿಸದೆ ನಿನಗಿಂದು
ಏಕೆ ಹೇಳು ಈ ಅಂತರ
ವಿರಹ ಬಾಧಿಸುತ್ತಿದೆ ನಿರಂತರ
ಪ್ರೀತಿಯ ಮಾತು ಕೇಳಿಸದೇಕೆ
ಹಗಲಿರುಳು ನಿನ್ನದೆ ಕನವರಿಕೆ

ದಾಂಪತ್ಯದ ಸುಖದ ನಿರೀಕ್ಷೆಗೆ
ಇದೆಂಥಾ ಪರೀಕ್ಷೆ ಒಡ್ಡಿದೆ
ದೂರ ದೂರ ಭಾವ ಭಾರ
ಸನಿಹ ಬಯಸಿದ ಹರೆಯ ಘೋರ
ಬರುವೆ ನೀನೆಂದು ಬಳಿಗೆ ನಲ್ಲ
ನಿನ್ನ ಹೊರತು ನನಗೇನು ಬೇಕಿಲ್ಲ

ದಂಪತಿಗಳು ನಾವಲ್ಲವೇ
ಒಂದಾಗಲು ಏಕೆ ಗೊಡವೆ
ಆಲಿಂಗನ ಬಯಸಿದೆ ಬಾ ಒಲವೇ
ಬದುಕಿನ ಜ್ಯೋತಿ ಸಂಗಾತಿ ನೀನಲ್ಲವೇ

1056ಪಿಎಂ30032022
*ಅಮುಭಾವಜೀವಿ ಮುಸ್ಟೂರು*

ಕೊಟ್ಟು ವನ

*೧ ಕವಲು*

ಹುಟ್ಟಿದಒಂದೇ 
ಮೊಳಕೆಯು ಚಿಗುರಿ 
ಕವಲಾಯಿತು 

ಕವಲುಗಳ 
ಚಾಚುತ್ತಾ ಮರವೀಗ 
ಹೆಮ್ಮರವಾಯ್ತು

ಹರಡಿರುವ 
ಕವಲು ನೆರಳಾಗಿ
ಹಿತ ತಂದಿತು

ಒಂದೊಂದರಲ್ಲೂ 
ಸಹಸ್ರ ಹೂವುಕಾಯಿ
ತುಂಬಿ ನಿಂತಿತ್ತು 

ಸವಿಗಾರನ 
ಕಣ್ಣು ಹಣ್ಣ ಮೇಲ್ಬಿದ್ದು
ಕಲ್ಲು ಬೀರಿದ 

ಹೊಡೆದವನ 
ಬಾಯಿ ಸಿಹಿ ಮಾಡಿತು 
ಮರದ ಪ್ರೀತಿ 

ಬರವು ಬಂದು 
ಕವಲೆಲ್ಲಾ ಒಣಗಿ 
ಮರ ಸತ್ತಿತು 

ಒಣ ಮರವ 
ಕಂಡು ಕೊಡಲಿ ಬೀಸಿ 
ತುಂಡರಿಸಿದ 

ಮರದೊಡಲು 
ಇದ್ದು ಹೋದರೂ ಬೆಲೆ 
ಮಾನವಗಿಲ್ಲ

0205ಪಿಎಂ30032017
*ಅಮುಭಾವಜೀವಿ*


*#ಕರ್ಮಯೋಗಿ*

ವಸಂತನನು ಸಂತನಾಗಿಸದೆ
ಚೈತ್ರ ಚಿಗುರಿನ ಬಣ್ಣ ತಂದು
ಕೊಗಿಲೆಯ ದನಿಗೆ ಮನಸೋತು
ಮೂಡಿ ಬಂದ ರವಿರಾಯ

ಬಿರಿದ ಮೊಗ್ಗಿನ ಎದೆಯಿಂದ
ದುಂಬಿಗಾನದ ಮುದದಿಂದ
ಇಬ್ಬನಿಯ ಮೊಗವರೆಸಿ
ಹೊಂಗಿರಣ ಚೆಲ್ಲಿದ ನೇಸರ

ಮಲಗಿದ್ದ ಗಿರಿಯ ಮೈದಡವಿ
ಮರಗಿಡಗಳ ತಲೆ ಸವರಿ
ಸಾಗರದಲೆಗೆ ಹೊಂಬಣ್ಣ
ಬಳಿದು ಬೀಗಿದ ಭಾಸ್ಕರ

ನಿನ್ನೆಯನು ಹಿಂದೆ ಸರಿಸಿ
ಇಂದಿಗೆ ಹೊಸ ನಿರೀಕ್ಷೆ ಮೂಡಿಸಿ
ನಾಳೆಯ ಭರವಸೆಯಾಗಿ
ನಗುವ ಬಿತ್ತರಿಸಿದ ಸೂರ್ಯ

ದಿನದ ತುಂಬೆಲ್ಲ ಬೆಳಕು ಚೆಲ್ಲಿ
ಸಂಜೆ ತನಕ ಉರಿ ಬಿಸಿಲ ಸುರಿದು
ಮತ್ತದೇ ಮೌನದಲಿ ಧ್ಯಾನಸ್ಥನಾಗಿ
ದಿನ ಮುಗಿಸುವ ನಿಷ್ಠಾವಂತ ಕರ್ಮಯೋಗಿ

0653ಎಎಂ30032019
*ಅಮು ಭಾವಜೀವಿ ಮುಸ್ಟೂರು

ಶುಭೋದಯ ಶುಭದಿನ

ಹಾಯ್ಕು

*೧ ಕವಲು*

ಹುಟ್ಟಿದಒಂದೇ 
ಮೊಳಕೆಯು ಚಿಗುರಿ 
ಕವಲಾಯಿತು 

ಕವಲುಗಳ 
ಚಾಚುತ್ತಾ ಮರವೀಗ 
ಹೆಮ್ಮರವಾಯ್ತು

ಹರಡಿರುವ 
ಕವಲು ನೆರಳಾಗಿ
ಹಿತ ತಂದಿತು

ಒಂದೊಂದರಲ್ಲೂ 
ಸಹಸ್ರ ಹೂವುಕಾಯಿ
ತುಂಬಿ ನಿಂತಿತ್ತು 

ಸವಿಗಾರನ 
ಕಣ್ಣು ಹಣ್ಣ ಮೇಲ್ಬಿದ್ದು
ಕಲ್ಲು ಬೀರಿದ 

ಹೊಡೆದವನ 
ಬಾಯಿ ಸಿಹಿ ಮಾಡಿತು 
ಮರದ ಪ್ರೀತಿ 

ಬರವು ಬಂದು 
ಕವಲೆಲ್ಲಾ ಒಣಗಿ 
ಮರ ಸತ್ತಿತು 

ಒಣ ಮರವ 
ಕಂಡು ಕೊಡಲಿ ಬೀಸಿ 
ತುಂಡರಿಸಿದ 

ಮರದೊಡಲು 
ಇದ್ದು ಹೋದರೂ ಬೆಲೆ 
ಮಾನವಗಿಲ್ಲ

0205ಪಿಎಂ30032017
*ಅಮುಭಾವಜೀವಿ*

Thursday, March 23, 2023

ಕವನ

ತೆರೆಯುತ್ತಿದೆ ಹಗಲು ಕಣ್ಣ
ಬಳಿಯುತ್ತಾ ಲೋಕಕೆ ಬಣ್ಣ
ಹೇಮಂತನ ಸಾಮಂತನಾಗಿ
ಮಂಜು ಮುಸುಕಿದೆ ಇಬ್ಬನಿಯಾಗಿ

ಹಕ್ಕಿಗಳ ಗಾನ ಮಾಧುರ್ಯ
ಬಿರಿದ ಮೊಗ್ಗರಳುವ ಸೌಂದರ್ಯ
ಬಿಚ್ಚಿಟ್ಟಿತು ದಿನದ ಆಂತರ್ಯ
ರವಿ ಶುರುವಿಡಲು ತನ್ನ ಕೈಂಕರ್ಯ

ಹೊಸ ಭರವಸೆಗಳ ಹೊತ್ತು
ಅನಾವರಣಗೊಳ್ಳುತಿದೆ ಪ್ರಕೃತಿ
ಹತ್ತಾರು ನಿರೀಕ್ಷೆಗಳ ಸುತ್ತ
ತಿರುಗುತ್ತಿದೆ ಬಾಳ ಸದ್ಗತಿ

ಇರುಳು ಕಳೆದು ಬೆಳಕು ಹರಿದು
ನವ ಚೈತನ್ಯವ ತಂದಿದೆ ಹುರುಪು
ಮಾನವ ನಾನು ಸೋಮಾರಿಯೆನಿಸಿತು
ನೋಡುತ ನಿಸರ್ಗದ ವೈಯಾರ ಒನಪು

ಸ್ವರ್ಗವ ತಂದಿತು ಬಳಿಗೆ
ಈ ಸುದಿನದ ಸುಂದರ ಘಳಿಗೆ
ಆಸ್ವಾದಿಸಿದರದೇ ಹೋಳಿಗೆ
ಆಪ್ಯಾಯಮಾನವದು ಬಾಳಿಗೆ

*****ಅಮು ಭಾವಜೀವಿ*****

ಕವನ

ತೆರೆಯುತ್ತಿದೆ ಹಗಲು ಕಣ್ಣ
ಬಳಿಯುತ್ತಾ ಲೋಕಕೆ ಬಣ್ಣ
ಹೇಮಂತನ ಸಾಮಂತನಾಗಿ
ಮಂಜು ಮುಸುಕಿದೆ ಇಬ್ಬನಿಯಾಗಿ

ಹಕ್ಕಿಗಳ ಗಾನ ಮಾಧುರ್ಯ
ಬಿರಿದ ಮೊಗ್ಗರಳುವ ಸೌಂದರ್ಯ
ಬಿಚ್ಚಿಟ್ಟಿತು ದಿನದ ಆಂತರ್ಯ
ರವಿ ಶುರುವಿಡಲು ತನ್ನ ಕೈಂಕರ್ಯ

ಹೊಸ ಭರವಸೆಗಳ ಹೊತ್ತು
ಅನಾವರಣಗೊಳ್ಳುತಿದೆ ಪ್ರಕೃತಿ
ಹತ್ತಾರು ನಿರೀಕ್ಷೆಗಳ ಸುತ್ತ
ತಿರುಗುತ್ತಿದೆ ಬಾಳ ಸದ್ಗತಿ

ಇರುಳು ಕಳೆದು ಬೆಳಕು ಹರಿದು
ನವ ಚೈತನ್ಯವ ತಂದಿದೆ ಹುರುಪು
ಮಾನವ ನಾನು ಸೋಮಾರಿಯೆನಿಸಿತು
ನೋಡುತ ನಿಸರ್ಗದ ವೈಯಾರ ಒನಪು

ಸ್ವರ್ಗವ ತಂದಿತು ಬಳಿಗೆ
ಈ ಸುದಿನದ ಸುಂದರ ಘಳಿಗೆ
ಆಸ್ವಾದಿಸಿದರದೇ ಹೋಳಿಗೆ
ಆಪ್ಯಾಯಮಾನವದು ಬಾಳಿಗೆ

*****ಅಮು ಭಾವಜೀವಿ*****

Monday, March 20, 2023

ಕವನ

*ಭಾವಗೀತಾಲಯದಿ*

ಕಟ್ಟೋಣ ಬನ್ನಿ ತಳಿರು ತೋರಣ 
ಬೀರೋಣ ಭಾವದ ಹೊಂಗಿರಣ //ಪ//

ಆಷಾಢದ ಈ ತಂಗಾಳಿಯಂತೆ 
ಮುಂಜಾನೆ ಕೂಗೋ ಮುಂಗೋಳಿಯಂತೆ
ಮನದ ಮಂಜಿನ ಹನಿ ಸೇರಿಸಿ 
ಭಾವಗೀತಾಲಯವ ಸಿಂಗರಿಸಿ 
ಹಾಡೋಣ ಬನ್ನಿ ನಲಿಯೋಣ ಬನ್ನಿ  /೧/

ವರ್ಷಕಾಲದ ಹರ್ಷವನೆಲ್ಲ ಸವಿದು 
ಭಾವಗೀತೆಯ ಪದಪದಗಳಲಿ ಬೆಸೆದು
ಹಾಡೋ ಹಕ್ಕಿಯ ಕೊರಳಾಗಿ 
ಬೆಳೆಯೋ ಬಳ್ಳಿಗೆ ಬೆರಳಾಗಿ 
ಬೆಳೆಯೋಣ ಬನ್ನಿ ಬೆಳೆಸೋಣ ಬನ್ನಿ  /೨/

ಋತುಗಳ ಮೆರವಣಿಗೆಯಲ್ಲಿ 
ಸಂಭ್ರಮಿಸುತ್ತಾ ಬರವಣಿಗೆಯಲ್ಲಿ
ಭಾವಲೋಕಕೆ ಬಣ್ಣ ಬಳಿದು 
ಭಾವಗೀತಾಲಯದಿ ಉಳಿದು 
ಚೆಲುವ ಬಿತ್ತೋಣ ಬನ್ನಿ  ಒಲವ ಪಡೆಯೋಣ ಬನ್ನಿ  /೩/

೦೩೨೫ಎಎಂ೦೧೦೭೨೦೧೭
*ಅಮುಭಾವಜೀವಿ*

ಕವನ

**ಒಂದು ಪುಟ್ಟ ಸಂಸಾರ*

ಮನೆಯ ಮೂಲೆಯಲ್ಲಿ 
ಬಾಗಿಲು ಕಿಟಕಿ ಸಂದಿಯಲ್ಲಿ 
ಇತ್ತು ಒಂದು ಪುಟ್ಟ ಸಂಸಾರ 
ಗುಬ್ಬಚ್ಚಿಯ ದನಿ ಮಧುರ

ಮನೆಯ ಸುತ್ತ ಮುತ್ತ ಹಾರುತ
ಹುಳು ಹುಪ್ಪಟೆ ಕಾಳು ಎಕ್ಕಿ
ಪುರ್ರೆಂದು ಹಾರಿ ಹೋಗಿ ಮತ್ತೆ 
ಬರುವ ಮುದ್ದು ಗುಬ್ಬಿ ಎಲ್ಲಿ ಹೋದೆ

ಪುಟ್ಟ ಕಾಲು ಆಕರ್ಷಕ ಬಣ್ಣ 
ಚಿಕ್ಕ ಕೊಕ್ಕಿನಿಂದ ಚಿಂವ್ಗುಡುತ
ಮನೆ ಒಳಗೆ ಹೊರಗೆಲ್ಲ ಇರುವ
ಗುಬ್ಬಚ್ಚಿ ಎಲ್ಲಿ ಕಣ್ಮರೆಯಾದೆ

ಯಾರಿಗೂ ತೊಂದರೆ ಕೊಡದೆ
ಎಲ್ಲರ ಪ್ರೀತಿಯನ್ನ ಗಳಿಸಿದ್ದೆ
ಮನುಜನ ಆಕ್ರಮಣದಿಂದ
ತತ್ತರಿಸಿ ಎತ್ತ ಹಾರಿ ಹೋದೆ

ಮಕ್ಕಳ ಮುದ್ದಿನ ಗುಬ್ಬಿ ಮರಿ
ಚಿಣ್ಣರ ಕನಸಿನ ಕಿನ್ನರಿ
ಚಿಂವ್ ಚಿಂವ್ ಸದ್ದು ಕೇಳುವ
ಆಸೆಯಾಗಿದೆ ಎಲ್ಲಿರುವೆ ಬರದೆ

ತಂತ್ರಜ್ಞಾನದ ತರಂಗಗಳ ಹಾವಳಿಯಿಂದ 
ನಾನೀಗ ಅಳಿವಿನಂಚಿನಲ್ಲಿರುವೆ
ಅದನು ಬಿಟ್ಟಿರಲಾರಿರಿ ನೀವು
ಅದರಿಂದ ಬದುಕಲಾಗುತಿಲ್ಲ ನಾವು

0859ಎಎಂ20032019
*ಅಮು ಭಾವಜೀವಿ*

*ಗುಬ್ಬಚ್ಚಿ ದಿನದ ಶುಭಾಶಯಗಳೊಂದಿಗೆ*







ಕವನ

*ಶ್ರಮಿಕರೆಂಬ ಹೆಸರವರು*

ಶ್ರಮದ ಬದುಕು ಇವರದು 
ಶ್ರಮಿಕರೆಂಬ ಹೆಸರವರದು 

ಬಿಸಿಲು ಮಳೆ ಎನ್ನದೇ 
ಬೆವರು ಸುರಿಸಿ ಉಳುಮೆ ಮಾಡಿ 
ದೇಶಕೆಲ್ಲಾ ಅನ್ನ ನೀಡುವ 
ರೈತ ಶ್ರಮದ ಮೊದಲ ದಾತ 

ಧೂಳು ಹಿಡಿದ ಗಣಿಗಳಲ್ಲಿ 
ಭಾರೀ ಯಂತ್ರಗಳ ಜೊತೆಯಲ್ಲಿ 
ಹಗಲಿರುಳೆನ್ನದೇ ಶ್ರಮಿಸುವ 
ಕಾರ್ಮಿಕ ಶ್ರಮದ ಪ್ರತೀಕ 

ಒಂದೆಡೆಯಿಂದ ಮತ್ತೊಂದೆಡೆಗೆ
ಸರಕುಗಳನು ಸಾಗಿಸುತ್ತಾ 
ಊಟ ನಿದ್ರೆಗಳಿಲ್ಲದೆ ದುಡಿವ 
ಚಾಲಕನದು ಶ್ರಮದ ಕಾಯಕ

ಜಗವೆಲ್ಲ ಮಲಗಿರಲು ತಾನೆದ್ದು 
ಎಲ್ಲರ ಸುಖನಿದ್ರೆಯ ಕಾವಲಾಗಿ 
ಆಸ್ತಿಪಾಸ್ತಿಯ ಕಾಯುವ 
ಆರಕ್ಷಕ ಶ್ರಮದ ಪರಿಪಾಲಕ 

ದೇಶದ ಗಡಿಯಲ್ಲಿ ಶಸ್ತ್ರಾಸ್ತ್ರಗಳ ಹೊತ್ತು 
ಗಿರಿ ಕಣಿವೆ ಕಂದರ ಹಿಮಾಲಯ ತಪ್ಪಲಲಿ 
ಜೀವದ ಹಂಗುತೊರೆದು ಹೋರಾಡುವ 
ಯೋಧ ಶ್ರಮದ ವಜ್ರಾಯುಧ

ಹಗಲೆಲ್ಲಾ ಮೂಟೆ ಹೊತ್ತು 
ಬಿಡಿಗಾಸಿಗೆ ಬೆವರಿಳಿಸಿಕೊಂಡು
ದಣಿವಿಲ್ಲದೆ ಹೆಣಗಾಡುವ 
ಕೂಲಿಕಾರ ಶ್ರಮದ ಸರದಾರ 

ಮುಂಜಾನೆಯಿಂದ ರಾತ್ರಿ ತನಕ
ಬಿಡುವಿಲ್ಲದೆ ಪಗಾರವನೂ ಕೇಳದೆ 
ಮನೆಯ ಕೆಲಸದಲ್ಲಿ ತಲ್ಲೀನವಾದ 
ಸ್ತ್ರೀ ಶ್ರಮದ ಬದುಕಿಗೆ ಸಾಕ್ಷಿ 

0257ಪಿಎಂ20032017
*ಅಮುಭಾವಜೀವಿ*

Sunday, March 12, 2023

ಲೇಖನ

*ಜೀವನದ ಪಯಣದಲ್ಲಿ,,,,,,,,,,,*

ಬದುಕು ಎಲ್ಲವನ್ನೂ ಕಲಿಸುತ್ತದೆ. ಆದಷ್ಟು ಅದು ನಮ್ಮ ಆಸೆಗಳನ್ನು ಸೋಲಿಸಿ ನಿರಾಸೆ ಅನ್ನು ಬೆಂಬಲಿಸಿ ಎಟೀನ ಮೇಲೆ ಏಟು ನೀಡುತ್ತಾ ನಮಗೆ ಪಾಠವನ್ನು ಕಲಿಸುತ್ತದೆ. ನಡೆಯುವವನು ಎಡವದೇ ಕುಳಿತವನು ಎಡವಲಾರ ಎಂಬಂತೆ ಜೀವನ ಪಯಣದಲ್ಲಿ ಎಲ್ಲರೂ ಎಡವಿ ಬಿದ್ದವರೇ. ಆದರೆ ಕೊಡವಿ ಎದ್ದವರು ಕಡಿಮೆ. ಹಾಗೇ ಎದ್ದು ಮುನ್ನಡೆದವರು ಇಂದಿನ ಮಹಾ ಸಾಧಕರು. ಬಿದ್ದು ಅಲ್ಲೇ ಆಳುತ್ತಿರುವವರು, ಆದರೂ ಬಂದು ಮೇಲೆತ್ತಲಿ ಎಂದು ಕಾಯುವವರು ಇಂದಿಗೂ ಗುರಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗಲಾರರು. 

   ಮನುಷ್ಯನ ಜೀವಿತಾವಧಿಯಲ್ಲಿ ಒಂದೊಂದು ಅವಸ್ಥೆಯಲ್ಲಿ ಒಂದೊಂದು ತೆರನಾದ ಆಸೆ ನಿರಾಸೆಗಳಿರುತ್ತವೆ. ಬಾಲ್ಯದಲ್ಲಿ ತಂದೆ ತಾಯಿ ಕೇಳಿದ್ದು ಕೊಡಿಸಲಿಲ್ಲ ಎಂದು ರಚ್ಚೆ ಹಿಡಿಯುವ ಮಕ್ಕಳು ತನಗೆ ಬೇಕಾದ್ದನ್ನು ಪಡೆಯುವಲ್ಲಿ ಯಶಸ್ವಿಯಾಗಿರಬಹುದು, ಇಲ್ಲ ಹೆತ್ತವರ ಕೋಪಕ್ಕೆ ತುತ್ತಾಗಿ ಒದೆ ತಿಂದು ತನ್ನ ಆಸೆಯನ್ನು ಅಲ್ಲೇ ಕಮರಿಸಿಕೊಳ್ಳಬಹುದು. ಯೌವ್ವನದಲ್ಲಿ ಓದು , ಉದ್ಯೋಗ, ಪ್ರೀತಿ , ಸ್ನೇಹ, ಮದುವೆ ಇತ್ಯಾದಿ ವಿಷಯಗಳಲ್ಲಿ ಪ್ರತಿಯೊಬ್ಬರದೂ ಒಂದೊಂದು ಕಾಣಿಸುತ್ತವೆ. ಓದುವ ಸಮಯದಲ್ಲಿ ಆಸಕ್ತಿ ತೋರಿ ಉನ್ನತ ಹುದ್ದೆಗಳಲ್ಲಿ ಸೇರಿ ಸಾಕಷ್ಟು ಹಣ ಸಂಪಾದನೆ ಮಾಡಿ ಮನಸ್ಸಿಗೊಪ್ಪುವ ರನ್ನು ವಿವಾಹವಾಗಿ ಸುಖವಾಗಿದ್ದರೆ, ಇನ್ನು ಕೆಲವರು ಇದಕ್ಕೆ ತದ್ವಿರುದ್ಧವಾಗಿ ಓದದೆ, ದುಡಿಯದೇ ಪ್ರೀತಿ ಪ್ರೇಮದ ಸುಳಿಗೆ ಸಿಕ್ಕು ಅತ್ತ ಮದುವೆ ಇಲ್ಲದೆ ಇತ್ತ ಪ್ರೀತಿ ಇಲ್ಲದೆ ತ್ರಿಶಂಕುವಿನಲಿ ನಿಂತು ಬದುಕನ್ನು ಆಸೆಯ ಕೂಪವಾಗಿಸಿ ಹೆತ್ತವರಿಗೂ ನೋವನ್ನಿತ್ತು ಬದುಕನ್ನು ದುರಂತವಾಗಿಸಿಕೊಳ್ಳುತ್ತಾರೆ.

          ಗೃಹಸ್ಥರಾದ ಮೇಲೆ ನೂರಾರು ಚಿಂತೆ. ಮನೆ , ಮಕ್ಕಳು, ಸಂಸಾರ, ಉದ್ಯೋಗ, ದುಡಿಮೆ, ನಂಬಿದವರನ್ನು ಸಾಕಬೇಕಾದ ಹೊಣೆಗಾರಿಕೆಯ ಅನಿವಾರ್ಯತೆಗಳಲ್ಲಿ ಸಿಲುಕಿ ಮನುಷ್ಯ ನಿಜಕ್ಕೂ ಹೈರಾಣ ಹೋಗುತ್ತಾನೆ. ಯೌವ್ವನದಲ್ಲಿ ಸ್ವಲ್ಪ ಉತ್ತಮ ನಿರ್ವಹಣೆ 
ಇದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲವೆಂದರೆ ನಿಜಕ್ಕೂ ಸೋಲುತ್ತಾರೆ. ಸಂಸಾರದಲ್ಲಿ ಹೆಜ್ಜೆ ಹೆಜ್ಜೆಗೂ ನೂರಾರು ಸವಾಲುಗಳು ಎದುರಾಗಿ ಎತ್ತ ತಿರುಗಿದರೂ ಏಟಿನ ಮೇಲೆ ಏಟುಗಳನ್ನು ಕೊಡುತ್ತಿರುತ್ತವೆ. ಇದರಲ್ಲಿ ಯಶಸ್ಸು ಕಾಣುವುದು ಸಾಗರದ ಮಧ್ಯ ಸಿಲುಕಿ ದಡ ಸೇರಲು ಪಡುವ ಕಷ್ಟ ಕ್ಕಿಂತಲೂ ದುಸ್ಸಾಹಸವಾಗಿರುತ್ತದೆ. ಕೈ ಹಿಡಿದವರ ತೃಪ್ತಿಪಡಿಸಬೇಕು, ವಿದ್ಯಾಭ್ಯಾಸ , ಭವಿಷ್ಯ ರೂಪಿಸುವುದು, ಮದುವೆ ಅಂತೆಲ್ಲ ಇಡೀ ಬದುಕಿನ ಬಹುಪಾಲು ಅದಕ್ಕೆಂದೇ ಮೀಸಲಿಡಬೇಕು. ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಮಟ್ಟಕ್ಕೆ ತಲುಪಿದರಂತೂ ಅವನ ಜೀವನ ಸಾರ್ಥಕ. ಅವರೇನಾದರೂ ಅಲ್ಲಿ ಸರಿಯಾಗಿ ಓದದೆ ಎಡವಿದರೆಂದರೆ ಜೀವನದಲ್ಲಿ ಮತ್ತೆ ಹೊರೆ ಎನಿಸಿದಾಗ ಹೆತ್ತವರ ನಿರಾಸೆ ಹತಾಶೆಗಳು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಜೀವನದಲ್ಲಿ ದುಡಿದು ದಣಿದು ಒಂದು ಮನೆ ಕಟ್ಟಬೇಕು ಎಂಬ ಹಂಬಲದಲ್ಲಿ ತನ್ನ ಬೇಕು ಬೇಡಗಳನ್ನು ಗಂಟುಮೂಟೆ ಕಟ್ಟಿ ಎಸೆದುಬಿಟ್ಟಿತ್ತಾರೆ. ಈ ಕಾಲಘಟ್ಟದಲ್ಲಿ ನಿಜಕ್ಕೂ ಇಲ್ಲಿ ಸಲ್ಲಿದವನು ಬದುಕನ್ನು ಗೆದ್ದವನು. ಇಲ್ಲಿ ಸೋತವನು ಸಾಯುವುದಕ್ಕೂ ಯೋಗ್ಯತೆಯಿಲ್ಲದೆ ನರಳಿ ನರಳಿ ಬಾಳುತ್ತಿರುವನು. 

            ಇನ್ನು ಜೀವನದ ಅಂತಿಮ ಘಟ್ಟ ಮುಪ್ಪು. ಇದೊಂದು ಅತ್ಯಂತ ಕಷ್ಟದ ಕಾಲ. ತಾನು ಏನೆಲ್ಲ ಕಷ್ಟಪಟ್ಟು ಕಟ್ಟಿದ ಜೀವನದ ಸೌಧದಲ್ಲಿ ತನಗೆ ಬದುಕಲು ಅರ್ಹತೆ ಇಲ್ಲದ ಯಾವುದೋ ಅನಾಥಾಶ್ರಮದ ಪಾಲಾದ ಬೇಕಾದ ದುರಂತ ಕಥೆ. ತನ್ನ ಕುಟುಂಬಕ್ಕಾಗಿ ಹಗಲು ಇರುಳು ಎನ್ನದೆ ದುಡಿದು ಹೈರಾಣಾದ ಜೀವ ತನ್ನ ಶ್ರಮದ ಫಲವನ್ನು ಅನುಭವಿಸುತ್ತಿರುವ ಮಕ್ಕಳಿಂದ ತಿರಸ್ಕೃತರಾಗಿ, ಅವರ ತಿರಸ್ಕಾರಕ್ಕೆ ತುತ್ತಾಗಿ ಜೀವನದ ಸಂಧ್ಯೆಯಲ್ಲಿ ಅಸಹಾಯಕರಾಗಿ ದಾರಿಕಾಣದೆ ನಿಂತಾಗ ಇಡೀ ಬದುಕಿನಲ್ಲಿ ಮೊದಲು ಗೆದ್ದಿದ್ದರು ಈಗ ಅಕ್ಷರಶಃ ಸೋತು ಸುಣ್ಣವಾಗಿರುತ್ತಾರೆ. ದುಡಿಯಲು ಶಕ್ತಿ ಇಲ್ಲ ಆದರೂ ತಾನೆ ದುಡಿದಿದ್ದು ಎಂಬ ಸ್ವಾಭಿಮಾನದ ಬದುಕು ದಕ್ಕದೇ ಇರುವಾಗ ನಿಶಕ್ತವಾಗಿ ಕೂರುವಂತೆ ಮಾಡಿಬಿಡುತ್ತದೆ. ಇಂಥ ಬದುಕಿಗಿಂತ ಸಾವೆ ಮೇಲು ಎಂಬಂತೆ ಈ ಪರಿತಪಿಸುತ್ತಿರುತ್ತಾರೆ.

       ಒಟ್ಟಿನಲ್ಲಿ ಜೀವನದ ಪ್ರತಿ ಹಂತದಲ್ಲೂ ಸೋಲು-ಗೆಲುವುಗಳು ಆಸೆ-ನಿರಾಸೆ ಗಳು ಪುರಸ್ಕಾರ ತಿರಸ್ಕಾರಗಳು ಪ್ರತಿ ವ್ಯಕ್ತಿಯ ಬದುಕಿನ ಗತಿಯನ್ನು ನಿರ್ಧರಿಸಿ ಸಾರ್ಥಕ ನಿರರ್ಥಕದ ಮುಖ ದರ್ಶನ ಮಾಡಿಸುತ್ತದೆ. ಗೆದ್ದವನು ಸೋತ ಸೋತವನು ಸತ್ತ ಎನ್ನುವಂತೆ ಸೋಲನ್ನು ಸವಾಲಾಗಿ ಸ್ವೀಕರಿಸಿದವನು ಮಾತ್ರವೇ ಜೀವನದಲ್ಲಿ ನೆಮ್ಮದಿಯಿಂದ ಇರುತ್ತಾನೆ. ಉಳಿದಂತೆ ಎಲ್ಲರೂ ತಮ್ಮ ತಮ್ಮ ಹಂತದಲ್ಲಿ ಸಾಮರ್ಥ್ಯಕ್ಕನುಗುಣವಾಗಿ ಎಲ್ಲಿ ಬಿದ್ದಿದ್ದರೂ ಅಲ್ಲೇ ಇದ್ದು ಇನ್ನಿಲ್ಲದಂತೆ ನೋವುಗಳನ್ನು, ಅವಮಾನಗಳನ್ನು ಅನುಭವಿಸಿ ಬದುಕಿನ ಪುಟದೊಳಗೆ  ಒಂದು ಸಣ್ಣ ಚುಕ್ಕಿಯು ಆಗದಂತೆ ಅಸ್ತಿತ್ವವೇ ಇಲ್ಲದಂತೆ ಅಳಿದು ಹೋಗುವರು. ಸಾಧನೆ ಮಾಡಿದವರು ನೂರಾರು ವರ್ಷ ಉಳಿಯುವ ಬದುಕನ್ನು ಕಟ್ಟಿಕೊಂಡು ಮಾದರಿಯಾ ಗುವರು. ಜೀವನದ ಪಯಣದಲ್ಲಿ ಸೋತವರು ಗೆದ್ದವರು ಎಲ್ಲರೂ ಮೈಲುಗಲ್ಲುಗಳಾಗಿ ಮುಂದಿನವರಿಗೆ ದಾರಿ ತೋರುವ ದೀವಿಗೆಗಳಾಗಿ ಉಳಿಯುವರು. ಬದುಕು ಎಲ್ಲರನ್ನೂ ಕೊನೆಗೆ ಸಾವು ಎಂಬ ದಡ ಮುಟ್ಟಿಸುವಷ್ಟರಲ್ಲಿ ಏಳು ಬೀಳುಗಳು ಅನುಭವದ ಪಾಠಗಳಾಗಿ ದಾಖಲಾಗುತ್ತವೆ. ಸಾಧಕ ಉಳಿಯುತ್ತಾನೆ, ಉಳಿದವರು ಹೆಸರಿಲ್ಲದಂತೆ ಅಳಿದು ಹೋಗುತ್ತಾರೆ. ಆದರೆ ಬದುಕು ಮಾತ್ರ ನಿದ್ದೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಮತ್ತೊಂದು ಹೊಸ ಅಧ್ಯಾಯವನ್ನು ಬೋಧಿಸಲು ಸಜ್ಜಾಗಿ ಹೊಸ ಆಯಾಮಗಳನ್ನು ಸೃಷ್ಟಿಸಿಕೊಂಡು ಹೊಸ ಪರೀಕ್ಷೆಗಳನ್ನು ನೀಡಲು ತಯಾರಾಗಿರುತ್ತದೆ. ಆ ಕಾಲಘಟ್ಟದಲ್ಲಿ ವ್ಯಕ್ತಿ ಮತ್ತೆ ಅದನ್ನು ಗೆಲ್ಲುವ ಸೋಲುವ ಸಾಹಸ ಮಾಡಬೇಕಾಗುತ್ತದೆ. ಬದುಕಿನ ತಿರುಗಣಿ ಮಾತ್ರ ತಿರುಗುತ್ತಲೇ ಇರುತ್ತದೆ.

*ಅಮು ಭಾವಜೀವಿ* 
ಅಪ್ಪಾಜಿ ಎ ಮುಸ್ಟೂರು ಶಿಕ್ಷಕರು ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ

Tuesday, March 7, 2023

ಲೇಖನ

ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜಗದೆಲ್ಲಾ ಮಹಿಳಾ ಸಮುದಾಯಕ್ಕೆ ಶುಭಕೋರುತ್ತಾ ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ಹರಿಯ ಬಿಡುತ್ತಿದ್ದೇನೆ.

ಹೆಣ್ಣು ಈ ಸೃಷ್ಟಿಯ ಅದ್ಬುತ ರೂಪಕ.ಅವಳು ಸಹನೆಯಲ್ಲಿ,ತ್ಯಾಗದಲ್ಲಿ,ಹಿಡಿದ ಕಾರ್ಯ ಸಾಧನೆಯಲ್ಲಿ
ಗಂಡಿಗಿಂತಲೂ ಅಚಲವಾಗಿದ್ದು ಗುರಿ ಮುಟ್ಟುವ ಛಾತಿಯಿರುವುದು ಅವಳೊಬ್ಬಳಿಗೆ ಮಾತ್ರ.ಹೆಣ್ಣು ಬಾಳಿನ ಅಷ್ಟೂ ಪಾತ್ರಗಳನ್ನು ಯಶಸ್ವಿಯಾಗಿ ನಿಭಾಯಿಸುವ ಸಾಮರ್ಥ್ಯ ಹೊಂದಿದವಳಾಗಿದ್ದಾಳೆ.ಅವಳ ಕೈಯಲ್ಲಿ ಆಡಿ ಬೆಳೆದ ನಾವೇ ಧನ್ಯರು.
ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎಂಬೊಂದು ಮಾತಿದೆ.ಅಂದರೆ ಹೆಣ್ಣು ತಾಯಾಗಿ ತನ್ನ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದಷ್ಟೇ ಸಲೀಸಾಗಿ ತನ್ನ ಸಮಾಜದ ಏಳಿಗೆಗಾಗಿ ಚಾಣಾಕ್ಷತೆಯ ಮೆರೆದು ಅಲ್ಲೂ ತಾನು ಪ್ರಬುದ್ದಳು ಎಂಬುದನ್ನು ಸಾಭೀತುಪಡಿಸಿದ್ದಾಳೆ.ಇತಿಹಾಸದ ಪುಟವನೊಮ್ಮೆ ತಿರುವಿ ನೋಡಿದಾಗ ಅವಳ ಮಹತ್ವ ನಮಗೆ ಅರಿವಾಗುತ್ತದೆ.
            ಹೆಣ್ಣು ಇಷ್ಟೆಲ್ಲಾ ಹೊಂದಿದ್ದರೂ ನಮ್ಮ ಸಮಾಜ ಅವಳನ್ನಿನ್ನು ಅಬಲೆಯನ್ನಾಗಿಯೇ ನೋಡುತ್ತಿದೆ.ಎಲ್ಲಿ ನಾರಿಯನ್ನು ಗೌರವಿಸುತ್ತಾರೋ ಅಲ್ಲಿ ದೇವರು ನೆಲೆಸಿರುತ್ತಾನೆ ಎಂದು ಶಾಸ್ತ್ರಗಳು ಹೇಳಿದರೂ ಇಂದಿನ ಆಧುನಿಕ ಯುಗದಲ್ಲಿ ಅವಳ ಹೆಜ್ಜೆಹೆಜ್ಜೆಗೂ ಸಂಕಷ್ಟಗಳನ್ನ ಎದುರಿಸುತ್ತಿದ್ದಾಳೆ.ಈ ಪುರುಷ ಪ್ರಧಾನ ಸಮಾಜದಲ್ಲಿ ಅವಳು ಸಂಭಾವನೆ ಕೇಳದ ದುಡಿವ ನಿಸ್ವಾರ್ಥಿಯಾದರೂ, ಅವಳನ್ನು ಪ್ರಾಣಿಗಳಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಾಗಿದೆ.ಅವಳು ತಾಯಗರ್ಭದಿಂದಲೇ ತನ್ನ ಉಳಿವಿಗಾಗಿ ಹೋರಾಡುತ್ತಾ ಬಂದು ಈ ಗಂಡೆಂಬ ಭಂಡನ ಏಳಿಗೆಗೆ ಸರ್ವಸ್ವವನೇ ತ್ಯಾಗ ಮಾಡಿದರೂ ವರದಕ್ಷಿಣೆ,ಅತ್ಯಾಚಾರಗಳಂತಹ ಅಡಕೊತ್ತಿಗೆ ಸಿಲುಕಿ ನರಳುವಂತಾಗಿರುವು ವಿಪರ್ಯಾಸ.  
ಕೊನೆಯದಾಗಿ ಈ ಜಗತ್ತನ್ನೇ ಸೃಷ್ಟಿಸಬಲ್ಲ ತಾಯಕುಲಕೆ ನನ್ನ ಪ್ರಣಾಮವನ್ನರ್ಪಿಸುತ್ತಾ ಇನ್ನು ಮುಂದಾದರೂ ಸಮಾಜದ ಎಲ್ಲಾ ಕಡೆಗಳಲ್ಲಿ ಅವಳು ಹೆಣ್ಣು ಎಂಬ ಮಾತ್ರಕ್ಕೆ ಸೀಮಿತ ಮಾಡದೆ ಸಮಾನ ಅವಕಾಶವನಿತ್ತು ಅಷ್ಟೇ ಗೌರವಾನ್ವಿತವಾಗಿ ಬದುಕಲು ಅನುವು ಮಾಡಿಕೊಟ್ಟರೆ ಅದೇ ನಾವವಳಿಗೆ ತೀರಿಸುವ ಋಣ.
ಮತ್ತೊಮ್ಮೆ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನದ ಶುಭಾಶಯಗಳು.

{529ಎಎಂ080315}

Monday, March 6, 2023

ತನಗ


*ತನಗ*
ಸ್ವರ್ಗ ಸಮಾನವದು
ಪ್ರೀತಿ ಪಾತ್ರರ ಸಂಗ
ದೈವ ಸಾಕ್ಷಾತ್ಕಾರವು
ಶುದ್ಧದಿ ಅಂತರಂಗ

ನೋಡುವ ನೋಟದೊಳು
ದೋಷವಿರದಿರಲು
ಕ್ಲೇಶ ಕಳೆಯುವುದು
ಸಂತಸ ದೊರೆವುದು

ದೈವ ನಿರ್ಣಯವನು
ಮೀರಲಾಗದೆಂದಿಗೂ
ನಡೆವ ಹಾದಿಯಲಿ
ನಂಬಿಕೆಯೊಂದಿರಲಿ

ಎತ್ತರದ ವ್ಯಕ್ತಿತ್ವ
ತರುವುದು ದೈವತ್ವ
ಎಡವದಂತೆ ನಡೆ
ಕಷ್ಟ ಸುಖ ಸಮತ್ವ

ನಿಂದಕರಿರುವರು
ಆನೆಯ ಕಂಡು ಶ್ವಾನ
ಬೊಗಳುವಂತೆ ಜನ
ನಿತ್ಯ ನಿನ್ನ ಪಾಲಿಗೆ

ದುರ್ಜನ ಸಂಘವದು
ಕೆಸರಿನ ಸಂಬಂಧ
ಸಜ್ಜನರ ಸಂಗವದು
ಚಂದನದ ಸೌಗಂಧ

ಸಕಲರ ಪ್ರೀತಿಸು
ಸುಖಕರ ಜೀವಿಸು
ತಾಳ್ಮೆಯಿಂದ ಸಹಿಸು
ಶರಣಾಗಿ ಸಾಧಿಸು 

೦೨೨೭ಎಎಂ೦೭೦೩೨೦೨೩
*ಅಮುಭಾವಜೀವಿ ಮುಸ್ಟೂರು*

Sunday, March 5, 2023

ಲೇಖನ

*ಜೀವನದ ಪಯಣದಲ್ಲಿ,,,,,,,,,,,*

ಬದುಕು ಎಲ್ಲವನ್ನೂ ಕಲಿಸುತ್ತದೆ. ಆದಷ್ಟು ಅದು ನಮ್ಮ ಆಸೆಗಳನ್ನು ಸೋಲಿಸಿ ನಿರಾಸೆ ಅನ್ನು ಬೆಂಬಲಿಸಿ ಎಟೀನ ಮೇಲೆ ಏಟು ನೀಡುತ್ತಾ ನಮಗೆ ಪಾಠವನ್ನು ಕಲಿಸುತ್ತದೆ. ನಡೆಯುವವನು ಎಡವದೇ ಕುಳಿತವನು ಎಡವಲಾರ ಎಂಬಂತೆ ಜೀವನ ಪಯಣದಲ್ಲಿ ಎಲ್ಲರೂ ಎಡವಿ ಬಿದ್ದವರೇ. ಆದರೆ ಕೊಡವಿ ಎದ್ದವರು ಕಡಿಮೆ. ಹಾಗೇ ಎದ್ದು ಮುನ್ನಡೆದವರು ಇಂದಿನ ಮಹಾ ಸಾಧಕರು. ಬಿದ್ದು ಅಲ್ಲೇ ಆಳುತ್ತಿರುವವರು, ಆದರೂ ಬಂದು ಮೇಲೆತ್ತಲಿ ಎಂದು ಕಾಯುವವರು ಇಂದಿಗೂ ಗುರಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗಲಾರರು. 

   ಮನುಷ್ಯನ ಜೀವಿತಾವಧಿಯಲ್ಲಿ ಒಂದೊಂದು ಅವಸ್ಥೆಯಲ್ಲಿ ಒಂದೊಂದು ತೆರನಾದ ಆಸೆ ನಿರಾಸೆಗಳಿರುತ್ತವೆ. ಬಾಲ್ಯದಲ್ಲಿ ತಂದೆ ತಾಯಿ ಕೇಳಿದ್ದು ಕೊಡಿಸಲಿಲ್ಲ ಎಂದು ರಚ್ಚೆ ಹಿಡಿಯುವ ಮಕ್ಕಳು ತನಗೆ ಬೇಕಾದ್ದನ್ನು ಪಡೆಯುವಲ್ಲಿ ಯಶಸ್ವಿಯಾಗಿರಬಹುದು, ಇಲ್ಲ ಹೆತ್ತವರ ಕೋಪಕ್ಕೆ ತುತ್ತಾಗಿ ಒದೆ ತಿಂದು ತನ್ನ ಆಸೆಯನ್ನು ಅಲ್ಲೇ ಕಮರಿಸಿಕೊಳ್ಳಬಹುದು. ಯೌವ್ವನದಲ್ಲಿ ಓದು , ಉದ್ಯೋಗ, ಪ್ರೀತಿ , ಸ್ನೇಹ, ಮದುವೆ ಇತ್ಯಾದಿ ವಿಷಯಗಳಲ್ಲಿ ಪ್ರತಿಯೊಬ್ಬರದೂ ಒಂದೊಂದು ಕಾಣಿಸುತ್ತವೆ. ಓದುವ ಸಮಯದಲ್ಲಿ ಆಸಕ್ತಿ ತೋರಿ ಉನ್ನತ ಹುದ್ದೆಗಳಲ್ಲಿ ಸೇರಿ ಸಾಕಷ್ಟು ಹಣ ಸಂಪಾದನೆ ಮಾಡಿ ಮನಸ್ಸಿಗೊಪ್ಪುವ ರನ್ನು ವಿವಾಹವಾಗಿ ಸುಖವಾಗಿದ್ದರೆ, ಇನ್ನು ಕೆಲವರು ಇದಕ್ಕೆ ತದ್ವಿರುದ್ಧವಾಗಿ ಓದದೆ, ದುಡಿಯದೇ ಪ್ರೀತಿ ಪ್ರೇಮದ ಸುಳಿಗೆ ಸಿಕ್ಕು ಅತ್ತ ಮದುವೆ ಇಲ್ಲದೆ ಇತ್ತ ಪ್ರೀತಿ ಇಲ್ಲದೆ ತ್ರಿಶಂಕುವಿನಲಿ ನಿಂತು ಬದುಕನ್ನು ಆಸೆಯ ಕೂಪವಾಗಿಸಿ ಹೆತ್ತವರಿಗೂ ನೋವನ್ನಿತ್ತು ಬದುಕನ್ನು ದುರಂತವಾಗಿಸಿಕೊಳ್ಳುತ್ತಾರೆ.

          ಗೃಹಸ್ಥರಾದ ಮೇಲೆ ನೂರಾರು ಚಿಂತೆ. ಮನೆ , ಮಕ್ಕಳು, ಸಂಸಾರ, ಉದ್ಯೋಗ, ದುಡಿಮೆ, ನಂಬಿದವರನ್ನು ಸಾಕಬೇಕಾದ ಹೊಣೆಗಾರಿಕೆಯ ಅನಿವಾರ್ಯತೆಗಳಲ್ಲಿ ಸಿಲುಕಿ ಮನುಷ್ಯ ನಿಜಕ್ಕೂ ಹೈರಾಣ ಹೋಗುತ್ತಾನೆ. ಯೌವ್ವನದಲ್ಲಿ ಸ್ವಲ್ಪ ಉತ್ತಮ ನಿರ್ವಹಣೆ 
ಇದ್ದವರು ಇಲ್ಲಿ ಸಲ್ಲುತ್ತಾರೆ. ಇಲ್ಲವೆಂದರೆ ನಿಜಕ್ಕೂ ಸೋಲುತ್ತಾರೆ. ಸಂಸಾರದಲ್ಲಿ ಹೆಜ್ಜೆ ಹೆಜ್ಜೆಗೂ ನೂರಾರು ಸವಾಲುಗಳು ಎದುರಾಗಿ ಎತ್ತ ತಿರುಗಿದರೂ ಏಟಿನ ಮೇಲೆ ಏಟುಗಳನ್ನು ಕೊಡುತ್ತಿರುತ್ತವೆ. ಇದರಲ್ಲಿ ಯಶಸ್ಸು ಕಾಣುವುದು ಸಾಗರದ ಮಧ್ಯ ಸಿಲುಕಿ ದಡ ಸೇರಲು ಪಡುವ ಕಷ್ಟ ಕ್ಕಿಂತಲೂ ದುಸ್ಸಾಹಸವಾಗಿರುತ್ತದೆ. ಕೈ ಹಿಡಿದವರ ತೃಪ್ತಿಪಡಿಸಬೇಕು, ವಿದ್ಯಾಭ್ಯಾಸ , ಭವಿಷ್ಯ ರೂಪಿಸುವುದು, ಮದುವೆ ಅಂತೆಲ್ಲ ಇಡೀ ಬದುಕಿನ ಬಹುಪಾಲು ಅದಕ್ಕೆಂದೇ ಮೀಸಲಿಡಬೇಕು. ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಮಟ್ಟಕ್ಕೆ ತಲುಪಿದರಂತೂ ಅವನ ಜೀವನ ಸಾರ್ಥಕ. ಅವರೇನಾದರೂ ಅಲ್ಲಿ ಸರಿಯಾಗಿ ಓದದೆ ಎಡವಿದರೆಂದರೆ ಜೀವನದಲ್ಲಿ ಮತ್ತೆ ಹೊರೆ ಎನಿಸಿದಾಗ ಹೆತ್ತವರ ನಿರಾಸೆ ಹತಾಶೆಗಳು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ. ಜೀವನದಲ್ಲಿ ದುಡಿದು ದಣಿದು ಒಂದು ಮನೆ ಕಟ್ಟಬೇಕು ಎಂಬ ಹಂಬಲದಲ್ಲಿ ತನ್ನ ಬೇಕು ಬೇಡಗಳನ್ನು ಗಂಟುಮೂಟೆ ಕಟ್ಟಿ ಎಸೆದುಬಿಟ್ಟಿತ್ತಾರೆ. ಈ ಕಾಲಘಟ್ಟದಲ್ಲಿ ನಿಜಕ್ಕೂ ಇಲ್ಲಿ ಸಲ್ಲಿದವನು ಬದುಕನ್ನು ಗೆದ್ದವನು. ಇಲ್ಲಿ ಸೋತವನು ಸಾಯುವುದಕ್ಕೂ ಯೋಗ್ಯತೆಯಿಲ್ಲದೆ ನರಳಿ ನರಳಿ ಬಾಳುತ್ತಿರುವನು. 

            ಇನ್ನು ಜೀವನದ ಅಂತಿಮ ಘಟ್ಟ ಮುಪ್ಪು. ಇದೊಂದು ಅತ್ಯಂತ ಕಷ್ಟದ ಕಾಲ. ತಾನು ಏನೆಲ್ಲ ಕಷ್ಟಪಟ್ಟು ಕಟ್ಟಿದ ಜೀವನದ ಸೌಧದಲ್ಲಿ ತನಗೆ ಬದುಕಲು ಅರ್ಹತೆ ಇಲ್ಲದ ಯಾವುದೋ ಅನಾಥಾಶ್ರಮದ ಪಾಲಾದ ಬೇಕಾದ ದುರಂತ ಕಥೆ. ತನ್ನ ಕುಟುಂಬಕ್ಕಾಗಿ ಹಗಲು ಇರುಳು ಎನ್ನದೆ ದುಡಿದು ಹೈರಾಣಾದ ಜೀವ ತನ್ನ ಶ್ರಮದ ಫಲವನ್ನು ಅನುಭವಿಸುತ್ತಿರುವ ಮಕ್ಕಳಿಂದ ತಿರಸ್ಕೃತರಾಗಿ, ಅವರ ತಿರಸ್ಕಾರಕ್ಕೆ ತುತ್ತಾಗಿ ಜೀವನದ ಸಂಧ್ಯೆಯಲ್ಲಿ ಅಸಹಾಯಕರಾಗಿ ದಾರಿಕಾಣದೆ ನಿಂತಾಗ ಇಡೀ ಬದುಕಿನಲ್ಲಿ ಮೊದಲು ಗೆದ್ದಿದ್ದರು ಈಗ ಅಕ್ಷರಶಃ ಸೋತು ಸುಣ್ಣವಾಗಿರುತ್ತಾರೆ. ದುಡಿಯಲು ಶಕ್ತಿ ಇಲ್ಲ ಆದರೂ ತಾನೆ ದುಡಿದಿದ್ದು ಎಂಬ ಸ್ವಾಭಿಮಾನದ ಬದುಕು ದಕ್ಕದೇ ಇರುವಾಗ ನಿಶಕ್ತವಾಗಿ ಕೂರುವಂತೆ ಮಾಡಿಬಿಡುತ್ತದೆ. ಇಂಥ ಬದುಕಿಗಿಂತ ಸಾವೆ ಮೇಲು ಎಂಬಂತೆ ಈ ಪರಿತಪಿಸುತ್ತಿರುತ್ತಾರೆ.

       ಒಟ್ಟಿನಲ್ಲಿ ಜೀವನದ ಪ್ರತಿ ಹಂತದಲ್ಲೂ ಸೋಲು-ಗೆಲುವುಗಳು ಆಸೆ-ನಿರಾಸೆ ಗಳು ಪುರಸ್ಕಾರ ತಿರಸ್ಕಾರಗಳು ಪ್ರತಿ ವ್ಯಕ್ತಿಯ ಬದುಕಿನ ಗತಿಯನ್ನು ನಿರ್ಧರಿಸಿ ಸಾರ್ಥಕ ನಿರರ್ಥಕದ ಮುಖ ದರ್ಶನ ಮಾಡಿಸುತ್ತದೆ. ಗೆದ್ದವನು ಸೋತ ಸೋತವನು ಸತ್ತ ಎನ್ನುವಂತೆ ಸೋಲನ್ನು ಸವಾಲಾಗಿ ಸ್ವೀಕರಿಸಿದವನು ಮಾತ್ರವೇ ಜೀವನದಲ್ಲಿ ನೆಮ್ಮದಿಯಿಂದ ಇರುತ್ತಾನೆ. ಉಳಿದಂತೆ ಎಲ್ಲರೂ ತಮ್ಮ ತಮ್ಮ ಹಂತದಲ್ಲಿ ಸಾಮರ್ಥ್ಯಕ್ಕನುಗುಣವಾಗಿ ಎಲ್ಲಿ ಬಿದ್ದಿದ್ದರೂ ಅಲ್ಲೇ ಇದ್ದು ಇನ್ನಿಲ್ಲದಂತೆ ನೋವುಗಳನ್ನು, ಅವಮಾನಗಳನ್ನು ಅನುಭವಿಸಿ ಬದುಕಿನ ಪುಟದೊಳಗೆ  ಒಂದು ಸಣ್ಣ ಚುಕ್ಕಿಯು ಆಗದಂತೆ ಅಸ್ತಿತ್ವವೇ ಇಲ್ಲದಂತೆ ಅಳಿದು ಹೋಗುವರು. ಸಾಧನೆ ಮಾಡಿದವರು ನೂರಾರು ವರ್ಷ ಉಳಿಯುವ ಬದುಕನ್ನು ಕಟ್ಟಿಕೊಂಡು ಮಾದರಿಯಾ ಗುವರು. ಜೀವನದ ಪಯಣದಲ್ಲಿ ಸೋತವರು ಗೆದ್ದವರು ಎಲ್ಲರೂ ಮೈಲುಗಲ್ಲುಗಳಾಗಿ ಮುಂದಿನವರಿಗೆ ದಾರಿ ತೋರುವ ದೀವಿಗೆಗಳಾಗಿ ಉಳಿಯುವರು. ಬದುಕು ಎಲ್ಲರನ್ನೂ ಕೊನೆಗೆ ಸಾವು ಎಂಬ ದಡ ಮುಟ್ಟಿಸುವಷ್ಟರಲ್ಲಿ ಏಳು ಬೀಳುಗಳು ಅನುಭವದ ಪಾಠಗಳಾಗಿ ದಾಖಲಾಗುತ್ತವೆ. ಸಾಧಕ ಉಳಿಯುತ್ತಾನೆ, ಉಳಿದವರು ಹೆಸರಿಲ್ಲದಂತೆ ಅಳಿದು ಹೋಗುತ್ತಾರೆ. ಆದರೆ ಬದುಕು ಮಾತ್ರ ನಿದ್ದೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಮತ್ತೊಂದು ಹೊಸ ಅಧ್ಯಾಯವನ್ನು ಬೋಧಿಸಲು ಸಜ್ಜಾಗಿ ಹೊಸ ಆಯಾಮಗಳನ್ನು ಸೃಷ್ಟಿಸಿಕೊಂಡು ಹೊಸ ಪರೀಕ್ಷೆಗಳನ್ನು ನೀಡಲು ತಯಾರಾಗಿರುತ್ತದೆ. ಆ ಕಾಲಘಟ್ಟದಲ್ಲಿ ವ್ಯಕ್ತಿ ಮತ್ತೆ ಅದನ್ನು ಗೆಲ್ಲುವ ಸೋಲುವ ಸಾಹಸ ಮಾಡಬೇಕಾಗುತ್ತದೆ. ಬದುಕಿನ ತಿರುಗಣಿ ಮಾತ್ರ ತಿರುಗುತ್ತಲೇ ಇರುತ್ತದೆ.

ಅಮು ಭಾವಜೀವಿ ಮುಸ್ಟೂರು

ಅಪ್ಪಾಜಿ ಎ ಮುಸ್ಟೂರು ಶಿಕ್ಷಕರು ಮುಸ್ಟೂರು ಅಂಚೆ ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ

Friday, March 3, 2023

ಕವನ

ಬಡತನದಲ್ಲಿ ನೋವು ಸಹಜ
ಪ್ರೀತಿಯಲಿ ಮರೆಯಬೇಕು ಮನುಜ
ಪ್ರೇಮ ಪೂಜೆಗೆ ಆಡಂಬರ ಬೇಕಿಲ್ಲ
ಅರಿತ ಮನಸುಗಳಿದ್ದರಷ್ಟೆ ಸಾಕಲ್ಲ

ಹಣದಿ ಬಡತನವಿದ್ದರೇನು ಪ್ರಿಯೆ
ಪ್ರೀತಿಗೆಲ್ಲಿದೆ ಬಡತನ ತಿಳಿಯೆ
ನಿನಗೆ ನಾನು ನನಗೆ ನೀನು
ಇಷ್ಟೇ ಸಾಕು ಒಲವ ಹಾದಿಯಲಿ

ಗಂಜಿ ಕುಡಿದರೂ ಖುಷಿಯಿದೆ
ಪ್ರೀತಿಯ ಈ ಪಯಣದಲಿ
ಅಂಜಿ ನಡೆಯುವೆ ಏಕೆ
ಪ್ರೀತಿಸಲು ಧೈರ್ಯ ಬೇಕಿಲ್ಲಿ

ಗುಡಿಸಲೇ ಇರಲಿ ನಾವಿರಲು
ಒಬ್ಬರಿಗೊಬ್ಬರು ತಬ್ಬಿ ಹಿಡಿದರೆ 
ಅರಮನೆಯಲೂ ಸಿಗದ ಆನಂದವಿದೆ
ಆತ್ಮೀಯ ಹೃದಯಗಳ ಪಿಸುಮಾತಲಿ

ಕೈತುತ್ತು ಕೊಟ್ಟು ಕೈಹಿಡಿದು ನಡೆಸು
ಕಡೆವರೆಗೂ ಜೊತೆಯಿರುವೆ
ಕಷ್ಟಗಳ ಸರಮಾಲೆ ಎದುರಾಗಲಿ
ಪ್ರೀತಿಯ ಅನುಬಂಧ ಗಟ್ಟಿಯಾಗಿರಲಿ

೧೦೨೨ಪಿಎಂ೦೩೦೩೨೦೨೩
*ಅಮುಭಾವಜೀವಿ ಮುಸ್ಟೂರು*

Thursday, March 2, 2023

ಕವನ

#ಅಮುಭಾವದೀಪ್ತಿ ೧೩

ಬಾಳೊಂದು ಹೋರಾಟ
ತಪ್ಪದು ಈ ಸಂಕಟ
ನಡೆವೆ ಜೊತೆ ಜೊತೆಯಲಿ
ಅನುರಾಗ ತುಂಬಿರಲು
ಅನುಮಾನವೇ ಬೇಡ
ಅನುಸರಿಸಿ ಬಾಳುವೆ ಇಲ್ಲಿ

ಬಿಸಿಲಾದರೇನು ನೆರಳಾಗಿರುವೆ
ಮಳೆ ಬಂದರೇನು ಕೊಡೆಯಾಗುವೆ
ಜೀವದ ಜೀವ ನಿನ್ನ ಪ್ರೀತಿಸುವೆ
ನಿನ್ನಾಣೆ ನಾನು ತೊರೆಯಲಾರೆ
ನೀನಿಲ್ಲದೆ ನಾ ಬದುಕಿರಲಾರೆ
ಎಂದೆಂದಿಗೂ ನೀನೆನ್ನ ಸಂಗಾತಿಯು

ಈ ಬಾಳ ಭಾವಗೀತೆಗೆ
ನಿನ್ನ ನಗುವೇ ಸಂಗೀತ
ಹಾಡವೆ ಸದಾ ನಿನ್ನ ಖುಷಿಗಾಗಿ
ಹಾರೋಣ ಜೋಡಿಹಕ್ಕಿಗಳ ಹಾಗೆ
ಹಾಡೋಣ ದುಂಬಿಗಳ ಹಾಗೆ
ಪ್ರೀತಿಯ ಈ ಪಯಣದಲಿ

೧೦೪೮ಪಿಎಂ೦೨೦೩೨೦೨೩
*ಅಮುಭಾವಜೀವಿ ಮುಸ್ಟೂರು*