Wednesday, March 31, 2021

*ಬದುಕಿನ ಒತ್ತಾಸೆ*

ಕನಸುಗಳು ನೂರು ಕಮರಿದವು 
ಸಮತೋಲನದ ಬದುಕಿನಲ್ಲಿ 
ಬಂಧ ಸಂಬಂಧಗಳು ಅಳಿದುಳಿದವು
ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ 

ನಡೆವ ಹಾದಿಗೆ ಎಲ್ಲವೂ ಮುಖ್ಯ 
ಅಲ್ಲಿ ಸಿಗಬೇಕು ಸಹಪಯಣಿಗರ ಸಖ್ಯ
ಕೈಹಿಡಿದು ಕರೆದೊಯ್ಯುವವರು
ಹಾದಿ ತಪ್ಪಿಸಲು ಬಾಳಲ್ಲಿಲ್ಲ ಸೌಖ್ಯ

ನಂಬಿಕೆಯ ನೆರಳಿನಲಿ 
ಅರಳಿದ ಹೊತ್ತು 
ಅಂಜಿಕೆಯ ನರಳಿಕೆಯಲ್ಲಿ
ನೆಲಕಚ್ಚಿಸಿತು ಆಪತ್ತು

ಕಳೆಯುತಿದೆ ವಯಸ್ಸು 
ಕಡಿಮೆಯಾಗುತಿದೆ ಆಯಸ್ಸು 
ಸಿಕ್ಕ ಸ್ವಲ್ಪ ಸಮಯದಲಿ
ಕಟ್ಟಿಕೊಳ್ಳಬೇಕು ಭವಿಷ್ಯ 

ಬಯಸಿದುದೆಲ್ಲ ಕೈಜಾರುವಾಗ
ಕಂಗಾಲಾದ ಬದುಕಿಗೇಕೋ
ಮತ್ತೆ ಕಟ್ಟಿಕೊಳ್ಳವ ಭರವಸೆ 
ಬದುಕಿನದು ಎಂತಹ ಒತ್ತಾಸೆ 

0513ಎಎಂ26082018
*ಅಮು ಭಾವಜೀವಿ*
ಮುಸ್ಟೂರು 

*ನಿಮಗೆ ಕನಿಕರವಿಲ್ಲ*

ಏಕೆ ಮೇಘವೇ ಮುನಿಸು
ನಿಮಗಿಲ್ಲವೇ ಮಳೆ ಸುರಿವ ಕನಸು 

ರೈತನ ಹೊಲದ ಬೆಳೆ 
ಅಲ್ಲೇ ಒಣಗುತಲಿದೆ
ಸಾಲದ ಶೂಲ ಅವನನು
ಆತ್ಮಹತ್ಯೆಗೆ ದೂಡುತಿದೆ

ಬಾಯಾರಿದ ಬದುಕಿಗೆ 
ದಾಹ ಕತ್ತು ಹಿಸುಕಿ ಕೊಲ್ಲುತಿದೆ
ಬರಿದಾದ ಬೊಗಸೆಯಲ್ಲಿ 
ಹನಿ ನೀರು ಆವಿಯಾಗುತಿದೆ

ಹಸಿರುಡಬೇಕಾದ ಭೂತಾಯಿ
ಭಣಗುಡುತಿಹಳು ಕಂಗಾಲಾಗಿ
ಒಡಲಿಗೆ ಹತ್ತಿದ ಬೆಂಕಿ 
ಸುಡುತಲಿದೆ ಕಾಡ್ಗಿಚ್ಚಾಗಿ

ಹಸಿವಿನ ಆಕ್ರಂದನ
ಮುಗಿಲು ಮುಟ್ಟಿದೆ
ನೆಲೆಗಾಗಿ ನರಳುವ 
ಬದುಕು ಸಾವನು ಬಯಸಿದೆ

ಮುನಿದ ನಿಮಗೆ ಕನಿಕರವಿಲ್ಲ
ದಣಿದ ಬದುಕೆಗೆ ತ್ರಾಣವಿಲ್ಲ
ಮುನಿಸು ಕರಗಿ ಧಾರೆ ಸುರಿಯಲಿ
ಭೂಮಿ ಮತ್ತೆ ಹಸಿರುಟ್ಟು ನಲಿಯಲಿ 

1229ಪಿಎಂ28082018

ಅಮು ಭಾವಜೀವಿ 
*ನಿಮಗೆ ಕನಿಕರವಿಲ್ಲ*

ಏಕೆ ಮೇಘವೇ ಮುನಿಸು
ನಿಮಗಿಲ್ಲವೇ ಮಳೆ ಸುರಿವ ಕನಸು 

ರೈತನ ಹೊಲದ ಬೆಳೆ 
ಅಲ್ಲೇ ಒಣಗುತಲಿದೆ
ಸಾಲದ ಶೂಲ ಅವನನು
ಆತ್ಮಹತ್ಯೆಗೆ ದೂಡುತಿದೆ

ಬಾಯಾರಿದ ಬದುಕಿಗೆ 
ದಾಹ ಕತ್ತು ಹಿಸುಕಿ ಕೊಲ್ಲುತಿದೆ
ಬರಿದಾದ ಬೊಗಸೆಯಲ್ಲಿ 
ಹನಿ ನೀರು ಆವಿಯಾಗುತಿದೆ

ಹಸಿರುಡಬೇಕಾದ ಭೂತಾಯಿ
ಭಣಗುಡುತಿಹಳು ಕಂಗಾಲಾಗಿ
ಒಡಲಿಗೆ ಹತ್ತಿದ ಬೆಂಕಿ 
ಸುಡುತಲಿದೆ ಕಾಡ್ಗಿಚ್ಚಾಗಿ

ಹಸಿವಿನ ಆಕ್ರಂದನ
ಮುಗಿಲು ಮುಟ್ಟಿದೆ
ನೆಲೆಗಾಗಿ ನರಳುವ 
ಬದುಕು ಸಾವನು ಬಯಸಿದೆ

ಮುನಿದ ನಿಮಗೆ ಕನಿಕರವಿಲ್ಲ
ದಣಿದ ಬದುಕೆಗೆ ತ್ರಾಣವಿಲ್ಲ
ಮುನಿಸು ಕರಗಿ ಧಾರೆ ಸುರಿಯಲಿ
ಭೂಮಿ ಮತ್ತೆ ಹಸಿರುಟ್ಟು ನಲಿಯಲಿ 

1229ಪಿಎಂ28082018

ಅಮು ಭಾವಜೀವಿ 

Tuesday, March 30, 2021

*ಖಾಲಿತನ*

ಭಾವ ಬರಿದಾಗುತಿದೆ 
ನೋವು ಇನ್ನೂ ಉಳಿದಿದೆ 

ನೀ ಕೊಟ್ಟ ಪ್ರೀತಿಗೆ 
ಸಾಟಿ ಏನಿದೆ ಜಗದಿ
ಪ್ರವಾಹದಿ ಸಿಲುಕಿದವಗೆ
ನೀನಾದೆ ಹುಲ್ಲುಕಡ್ಡಿ ಆಸರೆ

ಬೀದಿಯಲಿ ಬಿದ್ದ ಬದುಕಿಗೆ
ನೀನೊಂದು ಸೂರಾಗಿ ಸಲಹಿದೆ
ಬರೀ ಕಂಬನಿಯೇ ತುಂಬಿದ
ಬದುಕಲಿ ಸವಿಜೇನ ಉಣಬಡಿಸಿದೆ

ಕಂಡ ಕಂಡವರ ಬಾಯಿಗೆ 
ಆಹಾರವಾದ ನನಗೆ 
ನೀ ಅಭಿಮಾನದ ಕವಚವಾಗಿ
ಉತ್ತರ ಕೊಟ್ಟೆ ಅವರಿಗೆ

ನೀನಲ್ಲದೆ ಇನ್ನೇನು ಬೇಡ
ಎಂದು ಬಂದೆ ನೀನಿರುವಲ್ಲಿಗೆ
ವಿಧಿಯ ಪ್ರವಾಹಕೆ ಸಿಲುಕಿ
ಬಿಟ್ಟು ಹೋದೆ ನೀನಲ್ಲಿಗೆ

ಇನ್ನು ನನಗಿಲ್ಲ ಬದುಕು
ಮತ್ತೆ ಗೆದ್ದಿತು ಆ ಕೆಡುಕು 
ನೊಂದು ಬೆಂದು ಬರಿದಾದೆ
ನೀನಿಲ್ಲದ ಖಾಲಿತನಕೆ ಶರಣಾದೆ

0918ಎಎಂ21082018
*ಅಮು ಭಾವಜೀವಿ*
ಜಗಳೂರು 
*ಹಾಯ್ಕು*

ಮೂಡಣದಲ್ಲಿ
ರಂಗೇರಲು ಬಾನೆಲ್ಲ 
ಕೆಂಪಗಾಯಿತು

ಮೂಡಿದ ರವಿ
ಆಗಸದಲ್ಲಿ ದಿನ 
ತಾ ತೆರೆಯಲು

ತಾವರೆ ಹೂವು 
ನಲಿಯುತ ಸ್ವಾಗತ 
ಕೋರಿತವನ

ಬಳುಕುವಲೆ
ತೇಲಿ ಬಂದು ಪಾದವ
ತೊಳೆಯಿತಾಗ

ಹಕ್ಕಿ ಇಂಚರ 
ಸುಮಧುರ ಹಾಡಲಿ
ಹೊಗಳಿತಾಗ

ಇಬ್ಬನಿಯಲಿ
ಪ್ರತಿಫಲಿಸಿದನು
ಮುಂಜಾನೆಯಲಿ

ಹಗಲು ಬಂದು 
ಜಗವ ಬೆಳಗಲು 
ಸಂಭ್ರಮಿಸಿತು

0135ಪಿಎಂ23082018

*ಅಮು ಭಾವಜೀವಿ*
ಮದರಂಗಿ ಮೆತ್ತಿದ ಪಾದಗಳಲ್ಲಿನ
ರಂಗಾಗಿ ಬೆರೆವೆ 
ಕಟ್ಟಿದ ಕಾಲ್ಗೆಜ್ಜೆಯ ದನಿಯಾಗಿ 
ನೋವ ಮರೆವೆ 
ಮುಚ್ಚಿದ ಸೆರಗಿನ ಮರೆಯಲ್ಲಿ 
ಎಲ್ಲಾ ಅವಮಾನಗಳ ಸಹಿಸುವೆ 
ನಿನ್ನ ಪ್ರೀತಿಯ ಕಿರುನಗೆಯಲ್ಲಿ 
ಜಗವ ಮರೆವೆ 

ಅಮು ಭಾವಜೀವಿ 
*ಗಜಲ್*

ಬಂದ ಪ್ರವಾಹದಲ್ಲಿ ಕೊಚ್ಚಿ ಹೋಯ್ತು ಬದುಕು 
ಜೀವ ಕೈಯಲ್ಲಿ ಹಿಡಿಸಿಯಾಯ್ತು ಬದುಕು 

ಕಣ್ಣ ಮುಂದೆ ಮನೆಯು ಕುಸಿದು
ಬೀದಿಗೆ ಬಿದ್ದಾಯ್ತು ಬದುಕು 

ಬಂಧು ಬಳಗದವರನೆಲ್ಲ ದೂರವಾಗಿಸಿ
ದಿಕ್ಕಾಪಾಲಾಗಿ ಹೋಯ್ತು ಬದುಕು 

ಹೊಲ ಗದ್ದೆಗಳನೆಲ್ಲಾ ನುಂಗಿ 
ಇನ್ನಿಲ್ಲದಂತೆ ನಾಶವಾಯ್ತು ಬದುಕು

ಬೆಟ್ಟವೇ ಕಳಚಿ ಮಣ್ಣ ರಾಶಿಯೊಳಗೆ
ದಾರಿಯ ಮುಚ್ಚಿ ನರಕವಾಯ್ತು ಬದುಕು

ಆಶ್ರಯಿಸಿದುದನೆಲ್ಲ ಹೊತ್ತೊಯ್ದು
ನಿರಾಶ್ರಿತವಾಯ್ತು ಬದುಕು 

ಸುರಿವ ಮಳೆಯಲ್ಲಿ ಕಣ್ಣೀರು 
ಕೋಡಿ ಹರಿಸಾಯ್ತು ಬದುಕು 

ಅಮುವಿನಂತರಂಗದ ರೋಧನೆಗೆ
ಕಿವಿಯಿರದೆ ಕಿವುಡಾಯ್ತು ಬದುಕು

0527ಪಿಎಂ22082018
*ಅಮು ಭಾವಜೀವಿ*
ಚಿತ್ರದುರ್ಗ 
*ಶಾಂತವಾಗಿ ಮೇಘವೇ*

ಓ ಮೇಘಗಳೆ ಇದು ನ್ಯಾಯವೇ 
ಒಂದೆಡೆ ಅತಿವೃಷ್ಟಿ ಇನ್ನೊಂದೆಡೆ 
ಅನಾವೃಷ್ಟಿ ಇದು ಸರಿಯೇ 

ಕೊಡಗನ್ನೇ ಮಡುವಾಗಿಸಿ
ಬದುಕನ್ನೇ ನುಂಗಿಹಾಕಿ
ಪ್ರವಹಿಸಿದೆ ಘೋರ ಪ್ರವಾಹ

ಬೆಟ್ಟ ಗುಡ್ಡಗಳೆಲ್ಲ ಕುಸಿದು
ಬದುಕಿನ ನೆಮ್ಮದಿಯ ಕಸಿದು
ಬೀದಿಗೆ ತಂದ ನಿನ್ನದೆಂತ ದಾಹ

ಬಯಲು ಸೀಮೆಯ ಮರೆತು
ಅಲ್ಲೇ ನೀವು ನೆಲೆ ನಿಂತು 
ಶಿಕ್ಷಿಸೋ ಕಾರಣವೇನು 

ಜಲದಿಗ್ಬಂಧನ ವಿಧಿಸಿ 
ಹೊಲಗದ್ದೆಗಳ ಮುಳುಗಿಸಿ
ಗೆದ್ದು ಬೀಗುವೆ ನೀನು 

ಮುನಿಯದಿರು ಮೇಘವೆ 
ಬದುಕಲು ಬಿಡು ನಮ್ಮನು 
ಮನ್ನಿಸಿ ನಮ್ಮ ತಪ್ಪನು

ಸಾವನ್ನೇ ಕಣ್ಣ ಮುಂದಿರಿಸಿ 
ಎಚ್ಚರಿಕೆಯ ನೀ ನೀಡಿದೆ 
ಕನಿಕರಿಸಿ ರಕ್ಷಿಸು ನಮ್ಮನು

ತೃಣ ಜೀವವು ನಮ್ಮದು
ಹೆಣಗಾಡುತಲಿಹುದು
ಶಾಂತವಾಗೆಂದು ಬೇಡುತ

0627ಪಿಎಂ20082018

ಅಮು ಭಾವಜೀವಿ*
ಚಿತ್ರದುರ್ಗ 

*ಯಾರ ಶಾಪ*

ಏಕೆ ಈ ವಿಕೋಪ
ಯಾರದೋ ಈ ಶಾಪ

ಬದುಕಿನ ಆಧಾರವನ್ನೇ ಕಸಿದು
ಭರವಸೆಯ ಮಹಲೇ ಕುಸಿದು 
ಗುರಿಯ ದಾರಿಯೇ ಕಾಣದಾಗಿ
ಕಂಗಾಲಾಗಿದೆ ಭವಿಷ್ಯವು 

ಹರಿವ ನೀರೊಳಗೆ ಎಲ್ಲಾ 
ಆಸೆಗಳು ಕೊಚ್ಚಿ ಹೋಗಿ 
ನಿರಾಸೆಯ ಕೊಚ್ಚೆಯಲ್ಲಿ 
ಮತ್ತೆ ಕಟ್ಟಿಕೊಳ್ಳ ಬೇಕಿದೆ ಬದುಕು 

ಕಂಡ ಕನಸುಗಳನೆಲ್ಲ 
ಹೊತ್ತೊಯ್ಯಿತು ಪ್ರವಾಹ 
ಮುಳುಗಿದ ಬದುಕ ಕಂಡು 
ಚಡಪಡಿಸುತಿದೆ ಬಡಜೀವ

ನೆರೆಯ ಆಕ್ರೋಶಕೆ 
ನೆರೆಹೊರೆಯೂ ನರಳಾಡಿದೆ
ನಂಬಿಕೆಯ ನೆಲವೇ
ಕಾಲಡಿಯಲಿ ಕುಸಿಯುತಿದೆ

ಸಾಕು ಮಾಡು ಕಷ್ಟಗಳ ಮಳೆಯೇ
ಹಸಿವಿಂದ ನಿದ್ರೆಯಿರದೆ ಬಳಲಿರುವೆ
ಕಡಿಮೆ ಮಾಡಿಕೋ ನಿನ್ನ ಕೋಪವ
ಗಂಜಿಯ ಕುಡಿದಾದರೂ ಬದುಕುವೆ

0617ಎಎಂ19082018
*ಅಮು ಭಾವಜೀವಿ*
ಚಿತ್ರದುರ್ಗ 

*ಬೇಡ ಈ ದುಗುಡ*


ಈ ದುಗುಡ ನಿನಗೆ 
ಬೇಡ ಗೆಳತಿ 
ಮೌನ ತೊರೆದು ಮಾತಾಡು
ಏನೇ ಕಷ್ಟಗಳು ಬರಲಿ

ನೆರಳಾಗುತೀನಿ ನಾನು 
ಪ್ರತಿ ನರಳಾಟಕೂ
ಕೊರಳಾಗುತೀನಿ ನಾನು 
ಬದುಕಿನ ಪ್ರತಿ ಹೋರಾಟಕೂ

ಹಸಿರಾಗುತೀನಿ ನಾನು 
ನಿನಗೆ ಸಿರಿಯನ್ನು ತರಲು
ಹೆದ್ದಾರಿಯಾಗುತೀನಿ ನಾನು 
ನಿನ್ನ ಗುರಿಯನ್ನು ಸೇರಲು 

ಛಲದಿಂದ ಚಲಿಸು
ಫಲವನ್ನು ನಿರೀಕ್ಷಿಸದೇ
ಒಂದಡಿಯೂ ಮುಂದಿಡಬೇಡ
ನಿನ್ನ ದಾರಿಯನು ಪರೀಕ್ಷಿಸದೆ

ಆಸರೆಯ ಸೂರು ನಾನಾಗುವೆ
ಭೂಮಿಗೆ ಅಂಬರದಂತೆ
ಅಂದ ಆನಂದದ ಗಣಿಯಾಗು
ಇರುಳಿನ ಆ ಚಂದಿರನಂತೆ 

30082003
*ಅಮು ಭಾವಜೀವಿ*

N*ಓ ಅಜಾತಶತ್ರುವೇ*

ಅಶ್ರುತರ್ಪಣ ನಿಮಗೆ 
ಓ ಅಜಾತಶತ್ರುವೇ
ಹೃದಯ ಭಾರವಾಗಿದೆ
ಬೀಳ್ಕೊಡಲು ನಿಮ್ಮನೀಗಲೇ

ಮೃದು ಮಾತಿನ ಧೃಢತೆ
ದೇಶಕ್ಕೆ ನಿಮ್ಮಿಂದಲೇ ಘನತೆ 
ಕವಿ ಹೃದಯದ ಭಾವಜೀವಿ 
ಮರೆಯಾದಿರಾ ವಾಜಪೇಯಿ 

ಅಟಲ್ ಎಂಬ ದಿಟ್ಟ ವ್ಯಕ್ತಿ 
ಅಚಲ ನಿಲುವಿನ ಮೂರ್ತಿ
ಶತ್ರುವಿಗೂ ಸ್ನೇಹ ಹಸ್ತ ಚಾಚಿ 
ಹೆಮ್ಮೆಯ ನೇತಾರರೆನಿಸಿದ ವಾಗ್ಮಿ 

ವಿಜ್ಞಾನದ ಮುನ್ನಡೆಗೆ ಪ್ರೋತ್ಸಾಹಿಸಿ
ದೇಶದ ಆರ್ಥಿಕ ಸ್ಥಿತಿ ಬಲಪಡಿಸಿ
ಭಾರತ ಪ್ರಕಾಶಿಸಿದ ಸೂರ್ಯ 
ಅಧಿಕಾರದ ಅಮಲೇರದ ಗಾಂಭೀರ್ಯ 

ರಾಜಕಾರಣಕೊಂದು ಘನತೆ ನಿಮ್ಮಿಂದ 
ರಾಜತಾಂತ್ರಿಕತೆಯಲಿ ಮೂಡಿತು ಸಂಬಂಧ 
ಭಾರತ ಸಂತ ಸುತ ನಿಮಗಿದೋ ನಮನ
ಕಂಬನಿಯಲಿ ಮೂಡಿದ ಶ್ರದ್ಧಾಂಜಲಿ ಕವನ


0614ಪಿಎಂ16082018
*ಅಮು ಭಾವಜೀವಿ*
ಚಿತ್ರದುರ್ಗ 


*ಮರೀಚಿಕೆ*
ಭಾವ ಬತ್ತುತಿದೆ 
ಬೇಸರ ಕುತ್ತು ತಂದಿದೆ 
ಬಯಕೆಗಳೊಳಗೆಲ್ಲ
ನಿರಾಸೆಯ ಪ್ರವಾಹ ನುಗ್ಗಿದೆ

ಕಣ್ಣು ಕನಸನೇ ಮರೆತು 
ಮನವು ವ್ಯಸನಕೆ ಸಿಕ್ಕು
ತನುವು ಕೃಶವಾಗಿ
ಕುಸಿಯುತಿದೆ ಬದುಕು 

ನಂಬಿಕೆಯ ಸೂರು ಕುಸಿದು 
ಅಭಿಮಾನದ ಬೇರು ಕಡಿದು
ಸ್ವಾಭಿಮಾನವ ಅವಮಾನಿಸಿ
ಸೋಲಿಗೆ ಶರಣಾಯ್ತು ಭವಿಷ್ಯ 

ಎಲ್ಲ ಇಲ್ಲಗಳು ಸಲ್ಲದಂತಾಗಿಸಿ
ಬದುಕ ಭರವಸೆಯನ್ನು ಕಸಿದು
ಎಡವಿ ಬಿದ್ದಿರಲು ಎತ್ತದೆ
ತುಳಿದು ಅಳಿಸಿ ಹಾಕಿತು 

ಹೋರಾಟದ ಹಾದಿಯಲಿ
ಜಯವಿನ್ನು ಮರೀಚಿಕೆ 
ಗೆಲುವು ಇಲ್ಲದ ಬದುಕಿನಲಿ 
ಇರದು ನೆಮ್ಮದಿಯ ಕಾಣಿಕೆ

0928ಎಎಂ16082018
*ಅಮು ಭಾವಜೀವಿ*
ಹಾವು ಹಾಲು ಕುಡಿಯುವುದಿಲ್ಲ
ಈ ಸತ್ಯ ನಿಮಗೇಕೆ ತಿಳಿದಿಲ್ಲ 

ಕಲ್ಲು ನಾಗರದ ಮೇಲೆ 
ಶುದ್ಧ ಹಾಲನು ಎರೆದು
ಭಕ್ತಿ ಪರವಶವಾದರೇನು
ಕಲ್ಲೆಂದಾದರೂ ಮೆದುವಾಗುವುದೇನು

ಗೆದ್ದಲು ಕಟ್ಟಿದ ಹುತ್ತದ ಬಾಯಿಗೆ 
ತನಿ ಎರೆದರೆ ಬರುವುದೇ ಭಾಗ್ಯ
ಪೂಜೆಗೈದು ಪಾಪ ಕಳೆವುದಾದರೆ
ಜಗಕೆಂದೂ ಇರುತಿರಲಿಲ್ಲ ದೌರ್ಭಾಗ್ಯ

ಹಬ್ಬದ ಆಚರಣೆ ಇದು 
ನಮ್ಮ ಸಂಭ್ರಮಕೆ
ಆದರೇಕೆ ಅವು 
ಸಿಲುಕಬೇಕು ಸಂಕಷ್ಟಕೆ

ಸಂಪ್ರದಾಯದ ಕಟ್ಟಳೆಯ ಬಿಚ್ಚಿ 
ಸತ್ಯದ ಸಂಸ್ಕಾರ ಅರಿಯೋಣ ಬನ್ನಿ 
ಹಸಿದ ಎಷ್ಟೋ ಮಕ್ಕಳಿಹರು ಬೀದಿಯಲ್ಲಿ 
ಅವರ ಬಾಯಿಗೆ ಅಮೃತ ಕುಡಿಸುವ ತನ್ನಿ

ವ್ಯರ್ಥ ಮಾಡುವ ಕಾಲವಿದಲ್ಲ
ಅಪಾರ್ಥ ಮಾಡಿಕೊಳ್ಳುವನು ದೇವರಲ್ಲ
ಪೂಜೆ ನೆರವೇರಿಸಿ ಪ್ರಸಾದ ನೀವು
ಹಂಚಿರಿ ಮಕ್ಕಳೇ ನಿಜ ದೈವವು

0418ಪಿಎಂ12082018

*ಅಮು ಭಾವಜೀವಿ*
ಚಿತ್ರದುರ್ಗ 

ಕವನ

*ಬಾಳಪಯಣದ ತುಂಬಾ*

ನೀ ನನ್ನ ಜೊತೆಗಿರಲು 
ನನಗಿಲ್ಲ ಯಾವ ದಿಗಿಲು 
ಬಾಳಪಯಣದ ತುಂಬಾ 
ನಿನ್ನ ನೆನಪುಗಳ ಬಿಂಬ 
ಹೆಜ್ಜೆ ಹೆಜ್ಜೆಗೂ ಇರಲಿ ನಿನ್ನ ಬೆಂಬಲ 
ಇದುವೇ ನನ್ನ ನಿಸ್ವಾರ್ಥ ಹಂಬಲ 

ಪ್ರೀತಿಯ ಸೆಳೆತ ತಂದ 
ನಮ್ಮೀರ್ವರ ಅನುಬಂಧ 
ಶಶಿ ತಾರೆಯರ ಆದರ್ಶ 
ನಮ್ಮಲ್ಲಿ ಬೇಡ ಸಂಘರ್ಷ 
ಕಷ್ಟಗಳ ಎದುರಿಸಿ ಮುನ್ನಡೆಯೋಣ 
ಇಷ್ಟದ ಬಾಳಲ್ಲಿ ಖುಷಿಯಾಗಿರೋಣ 

ನಮಗೇಕೆ ನಲ್ಲೇ ಜಗದ ಜಂಜಾಟ 
ನಾವೇ ತೆರೆಯೋಣ ಹೊಸ ಸಂಪುಟ 
ಅಲ್ಲಿ ನಿನಗೆ ನಾನು ನನಗೆ ನೀನು 
ನಮಗೆ ಸ್ಫೂರ್ತಿಯಾಗಲಿ ಬುವಿ ಭಾನು 
ಕೈ ಕೈ ಹಿಡಿದು ಮುಂದೆ ಸಾಗೋಣ 
ಬಾಳ ಪಥದಲಿ ಪರಿಭ್ರಮಿಸೋಣ 

೦೭೨೬ಎಎಂ೦೧೧೨೨೦೨೦
*ಅಪ್ಪಾಜಿ  ಎ ಮುಷ್ಟೂರು* 

ಮಂಜು ಮುಸುಕಿದ ಮುಂಜಾನೆಯಲಿ 
ಮೈ ತೊಳೆದ ಎಲೆಗಳ ಖುಷಿಯಲ್ಲಿ 
ಈ ಶುಭೋದಯವ ಸಂಭ್ರಮಿಸೋಣ 
ಜಗದ ಚೆಲುವಿಗೆ ನಮನ ಸಲ್ಲಿಸೋಣ 

ಬಿರಿದ ಮೊಗ್ಗಿಗೆ ರವಿಕಿರಣದ ಸ್ಪರ್ಶ 
ಎಷ್ಟೊಂದು ಆಹ್ಲಾದ ಈ ಸನ್ನಿವೇಶ 
ನಿಸರ್ಗದ ಮನೆಯೇ ಸ್ವರ್ಗ 
ಎಷ್ಟು ಉಪಯುಕ್ತ ಅದು ನೀಡಿದ ಸಂದೇಶ 

ಒಟ್ಟಿಗೆ ಬಾಳುವ ನಿಸರ್ಗ ಪಾಠ 
ತೆರೆದಿದೆ ಈಗ ನವ ಸಂಪುಟ 

*ಭ್ರಮೆ ಕಳಚಿದಾಗ*

ಇಷ್ಟು ದಿನದ ಬಂಧ 
ಕೊನೆಗೊಂಡಿತು ಇಂದಿಗೆ 
ಸ್ನೇಹದಲ್ಲಿ ಸಲಿಗೆ ಬಯಸಿ 
ಸಲಿಗೆಯಿಂದ ಪ್ರೀತಿ ಉದಿಸಿ
ಈರ್ವರೊಂದಾಗುವ ಮೊದಲೇ 
ವಿರಸ ತಾನು ಅರಸಿ ಬಂದು 
ದೂರವಾದವು ಜೀವಗಳಿಂದು
ಶುದ್ಧ ಸಂಬಂಧ ಕಡಿದುಕೊಂಡು 
ಒಂದು ಜೀವ ನೊಂದಿದೆ 
ಇನ್ನೊಂದು ಜೀವ ಖುಷಿಗೊಂಡಿದೆ 
ಭ್ರಮೆಯ ಬದುಕು ಕಳಚಿದಾಗ 

೦೨೫೪ಪಿಎಂ೦೧೧೨೨೦೨೦
ಅಪ್ಪಾಜಿ ಎ ಮುಷ್ಟೂರು 

*ಅವಳ ನೆನಪು*

ಅವಳ ನೆನಪುಗಳು
ಮತ್ತೆ ಮತ್ತೆ ಕಾಡಿವೆ
ಅವಳ ಸಲಿಗೆಯ ಮಾತುಗಳು 
ಹೃದಯದಿ ಗಾಯ ಮಾಡಿವೆ
ಅವಳ ಅಗಲಿಕೆಯ ನೋವು
ಒಂಟಿಯಾಗಿಸುತಿದೆ 
ಅವಳ ಪ್ರೀತಿಯ ಮುಲಾಮು 
ಬೇಕೆಂದು ಮನ ಬಯಸಿದೆ

1253ಪಿಎಂ02122020
*ಅಪ್ಪಾಜಿ ಎ ಮುಸ್ಟೂರು*

*ಕಷ್ಟ ಬಂದಾಗ*

ಕಷ್ಟ ಬಂದಾಗಲೇ ತಿಳಿಯುವುದು 
ಜೊತೆಯಲ್ಲಿ ನಿಲ್ಲುವವರಾರೆಂದು
ಹಣ ಅಂತಸ್ತು ಇದ್ದರೇನೇ ಇಲ್ಲಿ 
ನೆಂಟರು ಬಂಧುಬಳಗ ಎಲ್ಲಾ 
ಬರಿಯಾದೆಯೋ ಎಲ್ಲಾ ದೂರ ದೂರ 
ಮತ್ತೆ ಮೇಲೊಂದಿಷ್ಟು ನಿಷ್ಠುರ 
ಸ್ವಾಭಿಮಾನಕೂ ಅವಮಾನ ಮಾಡಿ 
ಕತ್ತು ಹಿಸುಕುವ ಸಂಬಂಧಿಕರೇ ಹೆಚ್ಚು 
ಹುಚ್ಚು ಭ್ರಮೆಯಾಚೆ ಬಂದು 
ಬದುಕಬೇಕು ಈ ಜೀವನ ನಮ್ಮದು
ಕಷ್ಟವೋ ಸುಖವೋ ಜಯಿಸುವ ತನಕ
ಬೆಲೆಯಿಲ್ಲ ನೆಲೆಯಿಲ್ಲ ಮೂಲೆಗುಂಪು 

0920ಪಿಎಂ02122020
*ಅಪ್ಪಾಜಿ ಎ ಮುಸ್ಟೂರು*


*ನಿಗಗಾಗಿ*

ನಿನಗಾಗಿ ಹಂಬಲಿಸೋ 
ಈ ಹೃದಯವ ನೋಯಿಸಿದೆ
ನಿನ್ನ ಪ್ರೀತಿಯ ಬಯಸೋ
ಮನಕೆ ನಿನ್ನಾಸರೆ ಬೇಕಿದೆ
ದೂರುವ ಬದಲು ನೀ
ಸನಿಹದಲ್ಲಿ ಬಂದು ಕೂರು
ದ್ವೇಷಿಸುವ ಬದಲು
ಸ್ನೇಹದಿ ಬಂದು ಸೇರು
ಬೇಕಿಲ್ಲ ಅವಮಾನ 
ತೋರು ಒಂದಿಷ್ಟು ಅಭಿಮಾನ 

0154ಪಿಎಂ03122020
*ಅಪ್ಪಾಜಿ ಎ ಮುಸ್ಟೂರು*

*ಹೀಗೆ ಬದುಕು*

ಮಾತಿನಲ್ಲಿ ತೂಕವಿರಲಿ 
ಮನಸಿನಲ್ಲಿ ಪ್ರೀತಿಯಿರಲಿ
ಹೃದಯದಲ್ಲಿ ಸ್ನೇಹವಿರಲಿ
ಬದುಕಿನಲ್ಲಿ ವಿಶ್ವಾಸವಿರಲಿ
ಅನುಮಾನ ಅವಮಾನ ಮಾಡಿ 
ಎಲ್ಲವನ್ನೂ ಕಳೆದುಕೊಂಡು 
ಒಬ್ಬಂಟಿಯಾಗಿ ನಿಲ್ಲದಿರು 
ಯಾರ ಮೇಲೂ ದ್ವೇಷ ಬೇಡ
ಯಾರ ಮುಂದೆಯೂ ಕೈಚಾಚಬೇಡ
ಯಾರ ಮರ್ಜಿಗಾಗಿ ಕಾಯಬೇಡ
ಸಂಬಂಧ ಬೆಸೆವ ದರ್ಜಿಯಾಗು

0918ಪಿಎಂ03122020
*ಅಪ್ಪಾಜಿ ಎ ಮುಸ್ಟೂರು*

*ಮೋಸಗಾತಿ*

ಮನವ ಘಾಸಿಗೊಳಿಸಿದಳು
ಆ ಮಹಾ ಮಾಯಗಾತಿ
ಹೃದಯವ ಗಾಯಗೊಳಿಸಿದಳು
ಆ ಮಹಾ ಮೋಸಗಾತಿ
ಸ್ನೇಹ ಬಯಸಿ ಬಂದಳು
ಅದನು ಕೊಟ್ಟೆ ಧಾರಾಳವಾಗಿ 
ಪ್ರೀತಿ ಬೇಕು ಅಂದಳು
ನಿರಾಕರಿಸಿದೆ ಅತಿ ವಿನಯವಾಗಿ
ಸ್ನೇಹ ಪ್ರೀತಿ ಎರಡನೂ ತೊರೆದು 
ಹೋದಳು ಇಂದು ಮಹಾ ವಂಚಕಿಯಾಗಿ

0546ಎಎಂ04122020
*ಅಮುಭಾವಜೀವಿ ಮುಸ್ಟೂರು*


*ಬೇಡವಾದಾಗ*

ಬೇಡವಾದಾಗ ನಿರ್ಬಂಧ 
ಹೇರುವೆ ನೀನು 
ಬೇಕಾದಾಗ ಸಂಬಂಧ 
ಬಯಸಿ ಬರುವೆ ನೀನು 
ಅರಿಯಲಾರೆ ನಿನ್ನ ಮನದ
ಒಳ ತಿರುಳನ್ನು 
ಮರೆಯಲಾರೆ ಎಂದೆಂದಿಗೂ 
ನೀ ಕಲಿಸಿಹೋದ ಪಾಠವನ್ನು 
ಮಾಯಾಂಗನೆ ನಿನ್ನ 
ಮೋಸದಾಟದಿ ದಾಳವಾಗಿ
ಆಡಿಸಿದೆ ಆಟವ(ನ)ನ್ನ 
ನೀ ಮಾಡಿದ ಗಾಯಕೆ 
ಮುಲಾಮಿಲ್ಲ ಸಹಿಸುವೆ ನಾವು 
ನೀ ಮೋಹ(ಸ)ದ ಪ್ರತಿರೂಪವು

0954ಪಿಎಂ04122020
*ಅಪ್ಪಾಜಿ ಎ ಮುಸ್ಟೂರು*

*ಅಮ್ಮ ನೀನೇ ಕಾರಣ*

ನನ್ನ ನಗುವಿಗೂ ಅಳುವಿಗೂ 
ಅಮ್ಮ ನೀನೇ ಕಾರಣ
ನೀ ಕೊಟ್ಟ ಈ ಜೀವದ
ಚೈತನ್ಯವೂ ನೀನೇನೆ
ನಿನ್ನೊಡಲ ಗರ್ಭದಲ್ಲಿ 
ಜಾಗವಿತ್ತ ಋಣಕಾಗಿ 
ಜನುಮ ಜನುಮದ
ತನಕ ನಿನ್ನ ನಾ ಪೂಜಿಸುವೆ

0208ಪಿಎಂ05122020
*ಅಪ್ಪಾಜಿ ಎ ಮುಸ್ಟೂರು*
#ಅಮುಭಾವಬುತ್ತಿ ೨೨೮


*ಹಾಯ್ಕು*

ತೀರದ ಲೋಭ
ಲಾಭವಿಲ್ಲದ ನಾಕ
ಕಷ್ಟ ಜೀವನ 

1035ಪಿಎಂ05122020

*ಹಾಯ್ಕು*

ಜೀವನ ನಾಣ್ಯ 
ಮೊಗಚಿ ಬೀಳುವಾಗ 
ಸುಖದುಃಖವು

1045ಪಿಎಂ05122020
*ಅಮುಭಾವಜೀವಿ 
*ಅಮುಭಾವಜೀವಿ *

*ಹಾಯ್ಕು*

ಅರಿತ ಬಾಳ್ವೆ 
ಬಾಳೆಲೆ ಊಟದಂತೆ
ಸವಿರುಚಿಯು

1054ಪಿಎಂ05122020
*ಅಪ್ಪಾಜಿ ಎ ಮುಸ್ಟೂರು* 

*ಹಾಯ್ಕು*

ಮಗು ಮನಸ್ಸು 
ಮೃದು ಸುಮ ದಳವು
ಮುಳ್ಳಾಗದಿರು

1101ಪಿಎಂ05122020
*ಅಪ್ಪಾಜಿ ಎ ಮುಸ್ಟೂರು*

*ದಾಂಪತ್ಯ*

ಒಲವಿನ ಆರಾಧನೆಗೆ
ಚೆಲುವಿನ ಈ ಬೆಸುಗೆ 
ನೋಡುವ ಕಣ್ಣಿಗಿಂತ 
ಮಿಡಿವ ಹೃದಯವೇ ಹಿತ
ಮಾತು ಮೌನವಾಗಿ 
ಸೋತು ಶರಣಾಗಿ
ಬಾಳ ಹಾದಿಯಲಿ 
ಜೊತೆ ನಡೆವುದೇ 
ದಾಂಪತ್ಯದನುಸಂಧಾನ

0323ಎಎಂ06122020
*ಅಪ್ಪಾಜಿ ಎ ಮುಸ್ಟೂರು*

*ಸಾರ್ಥಕತೆ*

ಹೆಜ್ಜೆ ಹೆಜ್ಜೆಗೂ ಗಮನಿಸುವ
ವಿದ್ವತ್ಜನರ ತಿದ್ದುವ ಮಾತುಗಳು 
ಬೆಳೆಯುವ ಉತ್ಸಾಹಿಗೆ
ಸ್ಪೂರ್ತಿಯ ಚಿಲುಮೆಗಳು
ತುಳಿದ ಮುಳ್ಳಿನ ನೋವು 
ಭಾವದೊಳಗುಟ್ಟಿದ ಪದವು
ಓದುವೆದೆಗೆ ಹಿತ ತರಲು
ಸಾರ್ಥಕ್ಯದ ಹೊನಲು 

0334ಎಎಂ06122020
*ಅಪ್ಪಾಜಿ ಎ ಮುಸ್ಟೂರು*

ನೀ ಹೀಗೆ 
ತಿರುಗಿ ನೋಡುವ ಪರಿಗೆ
ಕರಗಿ ಹೋದೆ ಮಂಜಿನಂತೆ
ಆ ನಗುವ ಕಂಡು 
ಮನದಿ ಪುಳಕಗೊಂಡು
ಅರಳಿದೆ ನೀ ಹಿಡಿದ ಸುಮದಂತೆ

0358ಎಎಂ06122020
*ಅಪ್ಪಾಜಿ ಎ ಮುಸ್ಟೂರು*

*ಬೆಳಕು*

ಭರವಸೆಯ ಬೆಳಕು 
ಕತ್ತಲಲ್ಲಿರುವವಗೆ
ಅದೇ ಬೆಳಕು ಸಾವು
ತರುವುದು ಪತಂಗಕೆ
‌ಬೆಳಕದು ಒಂದೇ ಆದರೂ 
ಬಳಕೆಯಲಿ ಒಳಿತು ಕೆಡುಕು

0629ಪಿಎಂ06122020
*ಅಪ್ಪಾಜಿ ಎ ಮುಸ್ಟೂರು*

ಆಡುವ ಮಾತು 
ವ್ಯಕ್ತಿತ್ವ ಸೂಚಕ
ನೋಡುವ ನೋಟ 
ಭಾವ ಪ್ರಚೋದಕ
ಮಾತು ಭಾವಗಳ 
ಸಮ್ಮಿಳಿತ ನಡತೆ 
ನಡೆ ನುಡಿ ಒಂದಾದರೆ
ಅದುವೇ ಬಾಳ ಘನತೆ 

0913ಪಿಎಂ06122020
*ಅಪ್ಪಾಜಿ ಎ ಮುಸ್ಟೂರು*


*ಒಲವಾಗಿದೆ*

ನೀ ಹಿಡಿದ ಸುಮದ 
ಚೆಲುವಿಗೆ ಪೈಪೋಟಿ 
ಶುರುವಾಗಿದೆ ಈಗ
ನಿನ್ನ ವದನದ 
ಕಾಂತಿಯ ಕಂಡು 
ಸುಮವೂ ನಾಚಿ ಕೆಂಪಾಗಿದೆ 
ಈ ಮುಂಗುರುಳ ವಿನ್ಯಾಸ 
ನೋಡಲೇನೋ ವಿಶೇಷ 
ನಿನ್ನೊಳಗೀಗ ಒಲವಾಗಿದೆ

1003ಪಿಎಂ06122020
*ಅಪ್ಪಾಜಿ ಎ ಮುಸ್ಟೂರು*

ಹಾಯ್ಕು

ಪ್ರೀತಿಯಂಕುರ
ಹರೆಯ ಉಡುಗೊರೆ 
ಬಾಳ ಹಾದಿಲಿ 

ಕಂಡ ಕನಸು
ನನಸಾಗುವ ಮುನ್ನ 
ನಿರಾಸೆ ದಾಳಿ

ಮನುಜ ಪಥ
ಪ್ರೀತಿಯ ರಥದಲಿ
ರಾರಾಜಿಸಲಿ 
1259ಪಿಎಂ07122020
*ಅಪ್ಪಾಜಿ ಎ ಮುಸ್ಟೂರು*
#ಅಮುಭಾವಬುತ್ತಿ ೨೩೯

*ಹಾಯ್ಕು*

ನಿನ್ನ ಸಲುಗೆ
ಬದುಕ ಕಲಿಸಿತು
ಬಾಳ ಹಾದಿಲಿ

*ಅಪ್ಪಾಜಿ ಎ ಮುಸ್ಟೂರು*

#ಅಮುಭಾವಬುತ್ತಿ೨೪೦

*ನಂಬಿಕೆ ಒಡೆದರೆ*

ನಂಬಿಕೆಯ ಗಾಜು ಒಡೆದರೆ
ಜೋಡಿಸಲಾಗದು ಮೊದಲಿನಂತೆ 
ನೋಡುವ ನೋಟ ಬದಲಾಗಿ 
ಎಲ್ಲದರಲ್ಲೂ ತಪ್ಪು ಹುಡುಕಿ
ಅನುಬಂಧ ಮರೆಯಾಗಿ 
ಅವಲಂಬನೆ ದೂರವಾಗಿ 
ಪರಸ್ಪರ ದೂರುತ
ನೆಮ್ಮದಿಯ ಹಾಳುಗೈದು
ನೊಂದು ಬೆಂದು ಬಸವಳಿವುದು 

0338ಪಿಎಂ08122020
*ಅಪ್ಪಾಜಿ ಎ ಮುಸ್ಟೂರು*

*ಹಾಯ್ಕು*

ಸುಖ ಎಲ್ಲಿದೆ
ಪ್ರೀತಿಯಿಲ್ಲದ ಬಾಳು
ನಂಬಿಕೆ ಇಲ್ಲ
08122020
*ಅಪ್ಪಾಜಿ ಎ ಮುಸ್ಟೂರು*

*ಕೌತುಕ*

ನಿನ್ನ ತಿಳಿಯುವ ಕುತೂಹಲ 
ತಿಳಿದಷ್ಟು ನೀ ಕೌತುಕ
ನಿನ್ನ ಅರಿಯುವ ಹಂಬಲ 
ಅರಿತಷ್ಟು ನೀ ರೋಚಕ
ನಿನ್ನ ಮಾತು ಕೋಮಲ
ಮಾತೆಷ್ಟು ಚುಂಬಕ 
ನಿನ್ನ ಪ್ರೀತಿ ಮೃದುಲ
ಪ್ರೀತಿಯೆಷ್ಟು ಪ್ರಚೋದಕ
ಈ ಬಂಧನ ಈ ಮಿಲನ
ಬಾಳ ನೆಮ್ಮದಿಯ ದ್ಯೋತಕ

0823ಪಿಎಂ08122020
*ಅಪ್ಪಾಜಿ ಎ ಮುಸ್ಟೂರು*

 


ಸಾಕು ಬದುಕಿನ ಜಂಜಡ
ದಣಿದು ನಡೆಯಲಾರೆ ಕಾಲದ ಸಂಗಡ 
ಬರೇ ನೋವುಗಳೇ ಇಲ್ಲಿನ ಸಾಧನೆ 
ಭ್ರಮೆಯ ಬದುಕಿದು ಬರೀ ಶೋಧನೆ 

ಆದರ್ಶಗಳಿಗೆ ಇಲ್ಲಿ ಬೆಲೆಯಿಲ್ಲ 
ಆಶಯಗಳಿಗೆ ಇಲ್ಲಿ ನೆಲೆ ಇಲ್ಲ 
ಎಲ್ಲಾ ಸ್ವಾರ್ಥದ ಆಡುಂಬೊಲ 
ನಂಬಿಕೆಗೆ ಇಲ್ಲಿಲ್ಲ ಬೆಂಬಲ 

ಮೂಗಿನ ನೇರಕ್ಕೆ ಎಲ್ಲವೂ ಸತ್ಯ 
ವ್ಯಕ್ತಿಯ ಭಾವಗಳೆಲ್ಲ ಮಿಥ್ಯ
ಉಳ್ಳವನಿಗಿಲ್ಲಿ ಎಲ್ಲದಕ್ಕೂ ದಕ್ಕುವುದು 
ಇಲ್ಲದವರ ಗೋಳು ಯಾರಿಗೂ ಕೇಳದು 

ಶ್ರಮಕ್ಕೆ ತಕ್ಕ ಫಲವಿಲ್ಲ 
ಗುರಿಮುಟ್ಟಿಸುವ ಛಲವಿಲ್ಲ 
ಸೋತು ಕೂತ ಮನಸ್ಸಿನಾಗೆ 
ಸತ್ಯದರ್ಶನ ಪಾಠವಾಯಿತು 

೦೫೪೫ಪಿಎಂ ೧೮೦೨೧೨೦೨೧


ಏನೆಲ್ಲಾ ಆಗುವ ಹಂಬಲದಲ್ಲಿ 
ನಾನು ನಾನಾಗಲಾಗಲಿಲ್ಲ 
ಸಾಹಿತ್ಯದ ಸೂರಿನಲ್ಲಿ ಮೊಳೆತು 
ಹೆಮ್ಮರದ  ಮೇರುವಾಗಲಾಗಲಿಲ್ಲ 

ಕೃಷಿಯ ಆಳಕ್ಕೆ ಇಳಿದು ಬೆಳೆದು 
ಬದುಕಿನ ಬೇರು ಭದ್ರ ಗೊಳ್ಳಲಿಲ್ಲ 
ವೃತ್ತಿಯಲ್ಲಿ ಮಹತ್ವಾಕಾಂಕ್ಷೆಯ 
ಆದರ್ಶಗಳು ಹಾದಿ ನೆರಳಾಗಲಿಲ್ಲ 

ಪ್ರವೃತ್ತಿಯ ಮಜಲುಗಳೆಂದಿಗೂ
ಉನ್ನತಿಯ ಉತ್ತುಂಗಕ್ಕೆ ಕರೆದೊಯ್ಯಲಿಲ್ಲ 

ಬರೆದದ್ದು ಬರಿ ಆತ್ಮತೃಪ್ತಿಗೆ 
ಭಾಜನನಾಗಿಲ್ಲ ಯಾವ ಪ್ರಶಸ್ತಿಗೆ 
ನಡೆವ ಹಾದಿ ಧನಾತ್ಮಕವಾಗಿದ್ದರೂ ಕೂಡ 
ಗುರಿ ತಲುಪಿಸುವಲ್ಲಿ ಆಯಿತು ವಿಫಲ 

ನಿತ್ಯದಿ ಹಿಂಡಿಕೊಂಡೆ ಗಾಣದೆತ್ತಿನಂತೆ 
ದುರಂತ ಕಬ್ಬಿನ ಸಿಹಿ ಸವಿಯಲಾಗಲಿಲ್ಲ ಎಂದಿಗೂ 
ಎಂಥ ವಿಪರ್ಯಾಸವಿದು ಜೀವನದಿ 
ಶ್ರಮಕ್ಕೆ ತಕ್ಕ ಫಲ ಸಿಗುವುದೇ ಇಲ್ಲ ಎಂದೆಂದಿಗೂ 

೧೦೩೨ಪಿಎಂ ೦೩೦೨೨೨೧
ಅಮುಬಾವಜೀವಿ ಮುಷ್ಟೂರು 

ನೋಯುವೆ ಏಕೆ
ಒಲವಿನ ಜೀವವೇ 
ಸದಾ ನಗುತ್ತಲಿರು
ಜೊತೆಯಲ್ಲಿ ನಾನಿಲ್ಲವೇ 

ಪ್ರೀತಿಯ ನಂಬಿ ಬದುಕುವ ನಾವು 
ಎಡವಿ ಬಿದ್ದರೆ ದುಪ್ಪಟ್ಟು ನೋವು 
ತಪ್ಪೆಸಗಿದೆ ಒಪ್ಪವಾಗಿ ಜೀವಿಸಿ 
ಬಾಳ ಪಯಣದಿ ಗುರಿ ತಲುಪೋಣ

ಆದುದಕ್ಕೆಲ್ಲಾ ಹೊಣೆಯನ್ನು ಮಾಡದೆ 
ಆರೋಪ ಪ್ರತ್ಯಾರೋಪದಲ್ಲಿ ಕಾಲ ತಳ್ಳದೆ 
ಪರಸ್ಪರ ಅನ್ಯೋನ್ಯತೆಯಲ್ಲಿ ಬಾಳುತ
ಅನುಗಾಲವು ಸುಖವಾಗಿರೋಣ 

ಆಡುವವರ ಮಾತಿಗೆ ಕಿವಿಗೊಡದೆ 
ಅಂದುಕೊಂಡಂತೆ ಸಾಧಿಸುವ ಬಿಡದೆ 
ಅವಹೇಳನಗಳ ಮೆಟ್ಟಿಲು ಏರಿ 
ಅಭಿಮಾನದ ಶಿಖರದಿ ರಾರಾಜಿಸೋಣ

ಬಿಡು ಈ ಮೌನ 
ಬೇಡ ನಮ್ಮಲ್ಲಿ ಬಿಗುಮಾನ 
ಜೊತೆ ಜೊತೆಯಲಿ ನಡೆಯುತ 
ಸಾಧಿಸೋಣ ಬಾಳಿನ ಹಿತ 

೨೪೧ಪಿಎಂ ೧೫೦೨೨೦೨೧
ಅಪ್ಪಾಜಿ ಎ ಮುಷ್ಟೂರು 

ದೂರುವೆ ಏಕೆ ನನ್ನನ್ನೇ 
ಭಾರವಾದ ಹೃದಯದಿಂದ ಸುಮ್ಮನೆ 
ಹೇಳಿಬಿಡು ಕಾರಣವೇನು 

ಬಾಳ ಯಾನದ ಇಕ್ಕೆಲದಿ 
ನೋವು ನಲಿವುಗಳ ಸಾಲು ನೆರಳಲಿ
ದಣಿವಾರಿಸಿಕೊಳ್ಳೋಣ ಒಲವ ಹಾಸಿ 

ಕಷ್ಟವೇ ಪಾಠ ನಮಗಿಲ್ಲಿ 
ದುಷ್ಟತನಕ್ಕೆ ಜಾಗವಿಲ್ಲ ನಮ್ಮಲಿ
ಸಾಗುವ ನಾವು ಜೊತೆ ಜೊತೆಯಲಿ 

ನಿನ್ನೆಗಳು ಕಲಿಸಿದ ಪಾಠ 
ನಾಳೆಗಳ ಗೆಲ್ಲುವ ಹಠ 
ಹಿಂದಿನ ದಿನ ನಿತ್ಯ ಪ್ರೇರಣೆ 

ನೋಯದಿರು ನನ್ನೊಂದಿಗೆ 
ಖುಷಿಯ ಸವಿಯೋಣ ಜೊತೆಜೊತೆಗೆ 
ನೆಮ್ಮದಿಯ ಬದುಕಿರಲಿ ನಾಳೆಗೆ 

ಚೇತನವಾಗು ನನ್ನೆಲ್ಲ ಹೋರಾಟಕ್ಕೆ 
ಬೆಂಬಲವಾಗಿರುವೆನು ಒತ್ತಾಸೆಗಳಿಗೆ
ಸರಸಸಲ್ಲಾಪದಿ ಜತೆಯಾಗೋಣ 

೦೫೧ಪಿಎಂ ೧೫೦೨೨೦೨೧
  ಅಪ್ಪಾಜಿ ಎ ಮುಷ್ಟೂರು 
#ಅಮುಭಾವಬುತ್ತಿ

*ಅನುಭವದಬುತ್ತಿ*

ಬದುಕಿನಲ್ಲಿ  ಬರುವ ಸಂಕಷ್ಟಗಳು 
ಅನುಭವದ ಬುತ್ತಿ ಕಟ್ಟುವ ಕುಲುಮೆಗಳು 
ಅಂಜದೆ ಮುನ್ನುಗ್ಗಬೇಕು 
ಸೋಲುವ ಭೀತಿ ಬಿಡಬೇಕು 
ಆತ್ಮವಿಶ್ವಾಸದ ಹೆಜ್ಜೆಯನೀಡಬೇಕು 
ತಾಳ್ಮೆಯಿಂದ ದಡ ಸೇರಬೇಕು 
ಭರವಸೆಯೊಂದೆ ಹಾದಿ ಸ್ಪೂರ್ತಿ 
ಜೀವನದ ಗುರಿ ತಲುಪಲು 

1040ಎಎಂ13092020
*ಅಮುಭಾವಜೀವಿ ಮುಸ್ಟೂರು*


ಬದುಕಿನಲ್ಲಿ ಬರುವ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿ ಮುನ್ನುಗ್ಗುಬೇಕು


ಹಿಂತಿರುಗಿ ನೀ ನೋಡಲು
ವಶವಾಗಿ ಹೋದೆ ಆ ಕ್ಷಣ 
ನಿನ್ನ ಮೊಗದ ಆ ಆಹ್ವಾನಕ್ಕೆ
ಮರುಮಾತಿಲ್ಲದೆ ಆಗಮಿಸಿದೆ
ನಿನ್ನ ಕಣ್ಣ ಈ ಪ್ರೀತಿಯ ಭಾವ
ಸೆಳೆಯಿತು ನನ್ನನ್ನು ಬಳಿಗೆ 
ನಿನ್ನ ಮುಂಗುರುಳ ಸ್ವಾಗತ 
ತೋರಿತು ಮನದ ಇಂಗಿತ
ಒಲವಿನ ಈ ಮಿಲನ 
ಜನುಮಗಳ ಬಂಧನ

1153ಎಎಂ13092020
ಅಮುಭಾವಜೀವಿ ಮುಸ್ಟೂರು 


ಪ್ರೀತಿಯ ನಾಟಕವಾಡಿ
ಹೃದಯದಿಂದ ಆಚೆದೂಡಿ
ಖುಷಿ ಪಡುವೆಯಾ ನೋವ ನೀಡಿ
ಏಕೆ ಹೀಗೆ ಮಾಡಿದೆ ನೀನು 
ಮೋಸ ಮಾಡಲು ಕಾರಣವೇನು
ಅವಮಾನಿಸಿದೆ ಅನುಮಾನಿಸಿ
ದೂರ ತಳ್ಳಿದೆ ನೀ ನನ್ನ ಆಪಾದಿಸಿ
ಚೆಲ್ಲಾಟದ ಚತುರ ನೀನು 
ಮೌನದಿ ಸಹಿಕೊಳ್ಳುವೆ ನಾನು 
ಎಂದಿಗೂ ಮರೆಯಲಾರೆ ನಿನ್ನನು
ನೀ ಕೊಟ್ಟ ಎಲ್ಲಾ ನೋವನು

0613ಪಿಎಂ13092020
*ಅಮುಭಾವಜೀವಿ ಮುಸ್ಟೂರು*

Sunday, March 28, 2021

ಕವನ

*ಚಂದಿರ ನೀರಿಗೆ ಹೋಗುವ ಬಾರೆ*

ಈ ಸಂಜೆಯ ತಂಗಾಳಿಯಂತೆ 
ರಂಗೇರಿದ ಗೋಧೂಳಿಯಂತೆ
ನಿನ್ನೊಲವ ಗುಂಗಿನಲ್ಲಿ ಮೈಮರೆವೆ
ಹಸಿರು ಪೈರು ನಲಿಯುವಂತೆ 
ಮೊಗ್ಗು ಬಿರಿದು ಹರಡುವಂತೆ 
ನಿನ್ನ ಪ್ರೇಮಕ್ಕೆ ನಾ ಸೋತಿರುವೆ 

ಹರಿಯೋ ನೀರಿನ ಲವಲವಿಕೆ 
ಹಕ್ಕಿ ಕೊರಳ ಇಂಪು ಗಾನಕ್ಕೆ 
ನಿನ್ನ ಚಿನಕುರಳಿ ಮಾತೇ ಹೋಲಿಕೆ 
ಸಾಗರದ ಹೆದ್ದೆರೆಗಳಲ್ಲಿ ತೇಲಿ
ಬೆಟ್ಟಗಳ ಸವರಿ ಓಡುವ ಮೇಘಗಳ 
ಚಿತ್ತಾರದ ಭಿತ್ತಿಗಳಲ್ಲಿ ನಿನ್ನದೇ ಕನವರಿಕೆ 

ಯಾರೇ ನೀನು ಮನದರಸಿ ಏನು 
ನಿನ್ನ ಸ್ಪರ್ಶ ಒಂದು ರೋಮಾಂಚನ 
ಆ ಸ್ಫೂರ್ತಿಯಲ್ಲಿ ಹುಟ್ಟಿತು ಕವನ
ಚಂದಿರನೂರಿಗೆ ಹೋಗುವ ಬಾರೆ 
ತಾರೆಗಳ ಜೊತೆ ಸೇರುವ ಬಾರೆ 
ಸ್ವರ್ಗಮಯ ನಮ್ಮೀ ಜೀವನ 

೦೫೫೫ಪಿಎಂ೦೯೦೮೨೦೨೦
*ಅಮುಭಾವಜೀವಿ ಮುಸ್ಟೂರು*