N*ಓ ಅಜಾತಶತ್ರುವೇ*
ಅಶ್ರುತರ್ಪಣ ನಿಮಗೆ
ಓ ಅಜಾತಶತ್ರುವೇ
ಹೃದಯ ಭಾರವಾಗಿದೆ
ಬೀಳ್ಕೊಡಲು ನಿಮ್ಮನೀಗಲೇ
ಮೃದು ಮಾತಿನ ಧೃಢತೆ
ದೇಶಕ್ಕೆ ನಿಮ್ಮಿಂದಲೇ ಘನತೆ
ಕವಿ ಹೃದಯದ ಭಾವಜೀವಿ
ಮರೆಯಾದಿರಾ ವಾಜಪೇಯಿ
ಅಟಲ್ ಎಂಬ ದಿಟ್ಟ ವ್ಯಕ್ತಿ
ಅಚಲ ನಿಲುವಿನ ಮೂರ್ತಿ
ಶತ್ರುವಿಗೂ ಸ್ನೇಹ ಹಸ್ತ ಚಾಚಿ
ಹೆಮ್ಮೆಯ ನೇತಾರರೆನಿಸಿದ ವಾಗ್ಮಿ
ವಿಜ್ಞಾನದ ಮುನ್ನಡೆಗೆ ಪ್ರೋತ್ಸಾಹಿಸಿ
ದೇಶದ ಆರ್ಥಿಕ ಸ್ಥಿತಿ ಬಲಪಡಿಸಿ
ಭಾರತ ಪ್ರಕಾಶಿಸಿದ ಸೂರ್ಯ
ಅಧಿಕಾರದ ಅಮಲೇರದ ಗಾಂಭೀರ್ಯ
ರಾಜಕಾರಣಕೊಂದು ಘನತೆ ನಿಮ್ಮಿಂದ
ರಾಜತಾಂತ್ರಿಕತೆಯಲಿ ಮೂಡಿತು ಸಂಬಂಧ
ಭಾರತ ಸಂತ ಸುತ ನಿಮಗಿದೋ ನಮನ
ಕಂಬನಿಯಲಿ ಮೂಡಿದ ಶ್ರದ್ಧಾಂಜಲಿ ಕವನ
0614ಪಿಎಂ16082018
*ಅಮು ಭಾವಜೀವಿ*
ಚಿತ್ರದುರ್ಗ
No comments:
Post a Comment