Sunday, April 11, 2021


ಮತ್ತೆ ಚೈತ್ರ ಬಂದಂತೆ 
ಬಂದೆ ನೀ ಬಾಳಿಗೆ 
ಉದುರಿದೆಲೆಯ ಜಾಗದಲ್ಲಿ
ಮತ್ತೆ ಚಿಗುರು ಬರುವಂತೆ ನಾಳೆಗೆ 
ಭರವಸೆಯ ಬಿತ್ತಿ ಹೋದೆ ನನ್ನಲಿ

ಬಾಳ ಇರುಳಿಗೆ ಬೆಳದಿಂಗಳ ತಂದೆ 
ಮನದ ಮುಂಜಾನೆಗೆ ಇಬ್ಬನಿಯ ಹಾಸಿದೆ 
ನೋವಿನ ಕಹಿಯ ಮರೆಸಿ 
ನಲಿವಿನ ಸಿಹಿ ಹಂಚಿದೆ

ಮುಂಗಾರಿನ ಅಭಿಷೇಕಕ್ಕೆ 
ಬಾಯಾರಿದ ನೆಲ ತಣಿಯಿತು 
ನಿನ್ನೊಲವಿನ ಪಟ್ಟಾಭಿಷೇಕಕ್ಕೆ 
ಹೃದಯ ನಿವಾಸ ವಿಜೃಂಭಿಸಿತು

‍ಮತ್ತೆ ವಸಂತ ತಂದ 
ತಂಗಾಳಿಯ ಮಧುಚಂದ್ರಕ್ಕೆ 
ದುಂಬಿಯ ಝೇಂಕಾರದ ಸಂಗೀತ 
ಹಸಿರುಟ್ಟಳು ವನರಾಜಿ ಸುಮಾ ಮೇಳಕ್ಕೆ ಹಿಗ್ಗುತ
ನವಪಲ್ಲವದ  ಕಂಪ ಸೂಸುತ

ಮಾನದ ಮೊಗ್ಗು ಅರಳಿತು 
ಬಯಕೆ ದುಂಬಿ ಮುತ್ತಿತು 
ಮೊದಲ ದಿನದ ಮೌನ ಕಾವ್ಯಕ್ಕೆ 
ಮುನ್ನುಡಿ ಬರೆಯಿತು ದಾಂಪತ್ಯ 

೧೨೦೪ಎಎಂ೧೭೦೨೨೦೨೧
*ಅಪ್ಪಾಜಿ ಎ ಮುಸ್ಟೂರು*

ಈ ನಿನ್ನ ತುಂಟ 
ನಯನಗಳ ನೆಂಟನಾಗುಸೆ
ಕೆಣಕುವ ನಿನ್ನ ಮುಂಗುರುಳ ಹಿಡಿದುಜೋಕಾಲಿಯಾಡುವಾಸೆ
ಮುಂಜಾನೆಯ ಮೂಡದಂತೆ
ಮಸ್ಸಂಜೆಯ ಪಡುವಣದಂತೆ 
ಕೆಂಪೇರಿರುವ ಕೆನ್ನೆಗಳ ಕಚ್ಚುವಾಸೆ
ರವಿಚಂದ್ರರಂಥ ನಿನ್ನೆರಡು ಕಂಗಳ 
ಕಾಯ್ವ ರೆಪ್ಪೆಯಾಗಿರುವಾಸೆ
ಆಣತಿಯ ಕೊಡು ಗೆಳತಿ 
ಅನುಗಾಲ ನಿನ್ನೊಲವ ಆರಾಧಿಸುವಾಸೆ

೦೬೩೪ಎಎಂ೧೭೦೨೨೦೨೧
ಅಪ್ಪಾಜಿ ಎ ಮುಸ್ಟೂರು

ನನ್ನೆದೆಯು ಭಾವಗಳ ಅಣೆಕಟ್ಟು 
ತೆರೆಯಬೇಕು ನೀ ಒಪ್ಪಿಗೆಯ ಕ್ರಸ್ಟ್ ಗೇಟು 
ಭೋರ್ಗರೆದು ಧುಮ್ಮಿಕ್ಕುವ ಭಾವದೊರತೆ 
ಭಾವಕ್ಕೆಂದು ಬಾರದು ಪದಗಳ ಕೊರತೆ 
ಬಳಸಿಕೊಳ್ಳುವ ತಾಳ್ಮೆ ನಿನಗಿದ್ದರೆ 
ಬೆಳೆಸುವೆ ನಿನ್ನೆದೆಯೊಳಗೆ ಒಲವ ನಂದನ 
ಎಲ್ಲೆ ಮೀರದ ಭಾವ ಸ್ಫುರಣ 
ಅದಕ್ಕೆಲ್ಲ ನಿನ್ನೀ ನಗುವೇ ಕಾರಣ 
ಭಾವದ ಪ್ರತಿ ಹನಿಯೂ ಅಮೃತ ಬಿಂದು 
ನೋವುಗಳ ಮಣಿಸಿ ಆಸೆಗಳ ತಣಿಸುವೆ ಎಂದೆಂದೂ 

೦೭೪೦ಎಎಂ೧೭೦೨೨೦೨೧
ಅಪ್ಪಾಜಿ ಮುಸ್ಟೂರು 

*ನೀನು*

ಈ ಜೀವಕ್ಕೆ ಉಸಿರು ನೀನು
ಭಾವಕ್ಕೆ ಸ್ಪೂರ್ತಿ ನೀನು 
ಹೃದಯದ ಬಡಿತವೇ ನೀನು 
ಮನದ ತುಡಿತವೂ ನೀನು 
ಮುಂಜಾನೆಗೆ ಇಬ್ಬನಿ ನೀನು 
ಮುಸ್ಸಂಜೆಯ ಗೋಧೂಳಿ ನೀನು 
ನನ್ನೊಲವಿನಾಸರೆ ನೀನು 
ನನ್ನ ಗೆಲುವಿನ ಚೇತನ ನೀನು 
ನೀನಿಲ್ಲದೆ ಬದುಕಿಲ್ಲ ನನಗೆ 
ನೀನೇ ಬೇಕು ಬಾಳ ಕೊನೆವರೆಗೆ 

೦೭೪೨ಎಎಂ೧೭೦೨೨೦೨೧
*ಅಪ್ಪಾಜಿ ಎ ಮುಸ್ಟೂರು*

*ಒಂದು ಮಾತು*

ಒಂದು ಅರ್ಥಪೂರ್ಣವಾದ ಮಾತು 
ಬದುಕನ್ನೇ ಬದಲಿಸಬಲ್ಲದು
ಒಂದು ಅವಹೇಳನದ ಮಾತು
ಸಾಧಿಸುವ ಛಲ ಹಿಮ್ಮಡಿಸಬಲ್ಲದು
ಒಂದು ಪ್ರೀತಿಯ ಮಾತು 
ಸೋಲನ್ನು ಗೆಲುವಾಗಿಸಬಲ್ಲದು
ಒಂದು ಅಧಿಕಾರದ ಮಾತು
ಕಾರ್ಯಕ್ಷಮತೆಯನ್ನು ಹೆಚ್ಚಿಸಬಲ್ಲದು
ಒಂದು ಕರುಣೆಯ ಮಾತು 
ಮಾನವೀಯತೆಯ ಕುರುಹಾಗಬಲ್ಲದು
ಒಂದು ಚುಚ್ಚುವ ಮಾತು
ಜೀವನಪರ್ಯಂತ ನೆನಪಾಗುಳಿಯಬಲ್ಲದು
ಒಂದು ವಿನಯದ ಮಾತು
ಕೊಲೆಗಡುಕನನ್ನು ಮನುಷ್ಯನನ್ನಾಗಿಸಬಲ್ಲದು
ಒಂದು ಅನುಕಂಪದ ಮಾತು 
ನೊಂದ ಹೃದಯದ ನೋವ ನೀಗಬಲ್ಲದು
ಒಂದು ಮಾತು ಇಷ್ಟೊಂದು ಬದಲಾವಣೆ ತರಬಹುದಾದರೆ
ನೂರು ಮಾತುಗಳ ಅಗತ್ಯವುಂಟೇನು

0631ಪಿಎಂ17022021
*ಅಮುಭಾವಜೀವಿ ಮುಸ್ಟೂರು*

ಮಾತು ಬಿಟ್ಟಳು
ಮೌನ ತೊಟ್ಟಳು
ಮೋಹದ ಮೋಹನಾಂಗಿ
ಹಚ್ಚಿಕೊಂಡೆ ಹುಚ್ಚನಂತೆ 
ಮೆಚ್ಚಿಕೊಂಡೆ ಅರಿಯದಂತೆ
ಅದಕಾಗಿ ನಾನಾದೆ ಬೈರಾಗಿ

1002ಪಿಎಂ17022021

ಮೋಹದ ಗೆಳತಿ ಮುನಿಸಿಕೊಂಡಾಗ
ಭಾವದೆದೆ ಬತ್ತಿ ಹೋಗುತಿದೆ
ಪ್ರೀತಿಯ ಸಂಗಾತಿ ಮಾತು ಬಿಟ್ಟಾಗ
ಲೋಕವೇ ಬಬೇಡವೆನಿಸುತಿದೆ
ಬಾಳ ಪಯಣದಲಿ ಅವಳ ಚಿತ್ರ 
ಕಾಣದಿರೆ ಹೃದಯ ದಣಿಯುತಿದೆ
ಗೆಳತಿ ಅವಳು ದೂರವಾಗುವೆನೆಂದರೆ
ಮನ ಶರತ್ತಿಗೊಪ್ಪಿ ಮಣಿಯುತ್ತದೆ

1048ಪಿಎಂ17022021


ಕಾರ್ಮೋಡದೆದೆಯೊಳಗೆ
ತೂರಿ ಬರುವ ಮಿಂಚಂತೆ
ನಿನ್ನ ಈ ತುಂಟ ನಗುವು
ಕಾರಿರುಳು ಕವಿವಾಗ
ಬೆಳದಿಂಗಳು ಮೂಡಿದಂತೆ 
ನಿನ್ನೀ ನಯನದೊಳಪು

ತಂಗಾಳಿಯಲ್ಲಿ
ತೂರಾಡುವಂತೆ
ಈ ನಿನ್ನ ಮುಂಗುರುಳು 
ತಾರೆಗಳ ಹೊಳಪಂತೆ
ನಿನ್ನಧರದ ಮಧ್ಯೆ 
ಫಳ್ಗುಡುವ ದಂತಪಂಕ್ತಿಯ ಸಾಲು 

ಮುಂಜಾನೆ ಮುಸ್ಸಂಜೆಯಂತ
ನಿನ್ನ ತುಟಿಯಂಚಿನ ಸೆಳೆತ
ನನ್ನೆದೆಯ ಮೋಹವನು ತಣಿಸಿತು
ಸಂಪಿಗೆಯನೋಲುವ 
ನೀಳನಾಸಿಕದಂಚಲ್ಲಿ  ಸಂಚು
ಹೂಡಿದೆ ನಾಚಿಕೆಯ ಕುರುಹು

ಕಣ್ಣ ಸನ್ನೆಯಲೇ 
ಕರೆದು ರಮಿಸುವ
ಮೋಹಕ ರಮಣಿ
ಕಬ್ಬಿನ ಜಲ್ಲೆಯಂತೆ 
ಮೈದುಂಬಿ ನಿಂತ 
ಹರೆಯಭರಿತ ತರುಣಿ

ಮೋಹಿಸಿದೆ ಮನಸೋತು
ಬಯಸಿದೆ ಭಾವದ ಸ್ವತ್ತು
ಈಗ ನನಗವಳು
ಮಾತು ಮೌನಕೆ ಶರಣಾಗಿ
ಪ್ರೀತಿಯ ತಿಲಕವು ನಾನಾಗಿ
ರಾರಾಜಿಸುವಾಸೆ ಅವಳ ನೊಸಲಲಿ

1142ಪಿಎಂ17022021
*ಅಮುಭಾವಜೀವಿ ಮುಸ್ಟೂರು*

ತೊರೆದು ನೀನು ಬದುಕಬಹುದು 
ಮರೆತು ನಾನು ಬದುಕಲಾರೆ 
ಉಸಿರು ನೀನು ನನ್ನ ಜೀವಕ್ಕೆ 
ಹಸಿರಾಗಿರುವೆ ಸದಾ ನನ್ನ ಮನಃತೃಪ್ತಿಗೆ 

ಎದೆಯ ಭಾವಗಳ ಒಡತಿ  ನೀನು 
ನನ್ನ ಕವಿತೆಗೆ ಸ್ಫೂರ್ತಿ ನೀನು 
ಸದಾ ನಿನ್ನ ನೆನಪಲ್ಲೇ ಜೀವಿಸುವೆ ನಾನು
ನಿನ್ನ ಮರೆತು ನಾ ದೂರ ಹೋಗೆನು 

ಮಾತು ಮಥಿಸಿ ಮೌನ ಬಯಸಿ ಹೋದೆ 
ಆಡಿದ ಮಾತಿನಿಂದ ಅಡಿಗಡಿಗೂ ನಾ ನೊಂದೆ 
ಅದಾವ ಪಂಜರದಲ್ಲಿ ನನ್ನ ಬಂಧಿಸಿರುವೆ
ಅದೆಲ್ಲಿರುವೆ ಹೇಳು ಬಂದು ನಿನ್ನ ಸಂಧಿಸುವೆ

ಬಹು ದೂರ ಕ್ರಮಿಸಿ ಬಂದಿಹೆನು ನಿನ್ನ ಜೊತೆ 
ಈಗ ಕೈಬಿಟ್ಟು ಹೋದರೆ
ಉಳಿವುದೊಂದೇ ವ್ಯಥೆ   

ಎದೆಯ ನೋವುಗಳಿಗೆ ಮಿಡಿಯುವ ನಿನ್ನ 
ಎದುರುಗೊಂಬುವ ಆಸೆ ನನ್ನಲ್ಲಿ 
ದೂರಾಗುವ ಮಾತು ಎಂದೆಂದಿಗೂ ಬೇಡ 
ಅನುಕ್ಷಣವೂ ಹೃದಯಕ್ಕೆ
ಹತ್ತಿರವಾಗಿರು ನನ್ನ ಸಂಗಡ 

೦೫೩೬ಎಎಂ೧೮೦೨೨೦೨೧
ಅಪ್ಪಾಜಿ ಎ ಮುಷ್ಟೂರು 

ರುಬಾಯಿ 

ಭರವಸೆಯ ತುಂಬಬೇಕು ಮನದಲಿ
ನಿತ್ಯ ನೊಂದು ಕೂತವನ ಎದೆಯಲಿ
ಚುಚ್ಚುವ ಮಾತುಗಳ ಅಂಕುಶ ಬಿಟ್ಟು 
ಸಾಂತ್ವನದ ಮಾತೊಂದು ಸಾಕು ಪ್ರೀತಿಲಿ

0726ಎಎಂ18022021
*ಅಮುಭಾವಜೀವಿ ಮುಸ್ಟೂರು*


ಒಡಲೊಳಗೆ ಅಗ್ನಿಜ್ವಾಲೆ ಕುದಿಯುತ್ತಿದ್ದರು 
ನಂದನವನದ ಹಸಿರಾಗಿದೆ  ಬುವಿ
ಮನದೊಳಗೆ ನೂರು ನೋವು ತುಂಬಿದ್ದರು 
ನಗುನಗುತ ಬಾಳುತಿಹಳು ಈ ಸಖಿ 

ಅಗೆದು ಬಗೆದು ಮೊಗೆದು ತೆಗೆದು 
ನಿತ್ಯ ನಡೆಯುತ್ತಿದೆ ಅವಳ ಮೇಲೆ ಅತ್ಯಾಚಾರ 
ಬಲವಂತದ ಬಸುರಿಗೆ ತತ್ತರಿಸಿದೆ ಬದುಕು 
ತನ್ನವರಾರೂ ನೀಡಲಿಲ್ಲ ಅವಳಿಗೆ ಸಹಕಾರ 

ಅನುಭವಿಸುವವನ ಅಟ್ಟಹಾಸಕ್ಕೆ ತುತ್ತಾಗಿ 
ಕುತ್ತು ತಂದಿದೆ ಆಯ್ದು ತಿನ್ನುವವರ ಬಾಳಿಗೆ
ಬಲಾತ್ಕಾರದಿ ಫಲವುಂಡವನು ನಿರಾಳ 
ಒಡಲೊಳಗಿನ ಜೀವದ ಚಿಂತೆ ನಾಳೆಗೆ 

ಹಾಗೆ ಹೀಗೆ  ಸಹಿಸಿ ಒಮ್ಮೆಲೆ 
ಬಾಯಿ ತೆರೆಯಿತು ಜ್ವಾಲಾಮುಖಿ 
ಅಳಿವು ಉಳಿವಿನ ಹೋರಾಟದಲ್ಲಿ 
ಹೊಸ ಜೀವಕ್ಕೆ ಜನ್ಮ ಕೊಟ್ಟಳೀ ಸಖಿ

ಬಳಸಿ ಬಿಸಾಡಿದ ಒಡಲಲ್ಲಿ 
ಮತ್ತೆ ಉತ್ತಿ ಬಿತ್ತಿ ಬೆಳೆಯುವ ಹಂಬಲ 
ಸಿಕ್ಕಿತು ನಾಯಿ ಮುಟ್ಟಿದ ಮಡಿಕೆಯೊಳಗಿನ 
ಅನ್ನ ತಿನ್ನುವನೆಂದು ಬಂದವನ ಬೆಂಬಲ 

ಮತ್ತೆ ವಸಂತದ ವರ್ಷಧಾರೆಗೆ 
ಚಿಗುರಿತು ಹೊಸ ಮನ್ವಂತರದಾಸೆ
ಬದುಕು ಕೊಟ್ಟವನ ಆದರ್ಶ ಮರೆಯಾಗಿ
ಬರೆ ಎಳೆದಿದೆ ಬದುಕಿಗೆ ಇಲ್ಲ ಶುಕ್ರದೆಸೆ 

ಅಲ್ಲಿ ಪ್ರವಾಹ ಇಲ್ಲಿ ಸುನಾಮಿ
ಕೊಚ್ಚಿಹೋಯಿತು ಭೂಗರ್ಭದ ಅಸ್ತಿತ್ವ 
ಅನುಮಾನ ಅವಮಾನಗಳ ಬೆಂಕಿ 
ಕೊಲ್ಲುತ್ತಿದೆ ನಿತ್ಯ ನಂಬಿಕೆಗಿಲ್ಲ ಮಹತ್ವ 

ನೋವು ನರಳಾಟಗಳಾಚೆಗೂ 
ಮುನ್ನಡೆದಿದೆ ಬದುಕು 
ತನ್ನನೇ ಸುಟ್ಟುಕೊಂಡು ಬೆಳಕನೀಯುತಲೆ ಬತ್ತಿ  
ಕತ್ತಲೆಯೊಂದಿಗೆ ನಿತ್ಯ ಒಂಟಿ ಗುದ್ದಾಡುತ್ತಾ 

೦೪೧೧ಪಿಎಂ ೧೯೦೨೨೦೨೧
ಅಪ್ಪಾಜಿ ಎ ಮುಸ್ಟೂರು 
ಬೆದರದಿರು ಮನವೇ 
ತನುವಿಗೆ ಆಸರೆಯಾಗಿ ನಾನಿರುವೆ 
ಈ ಜೀವದ ಚೇತನವೇ 
ಬಳಿ ಬಂದು ನನ್ನ ರಮಿಸೆಯ ?

ಕಾರ್ಮೋಡ ಕವಿದ ಇರುಳಲ್ಲಿ 
ನಿನಗಾಗಿ ಕಾದಿರುವೆ ನಾನಿಲ್ಲಿ 
ನೀ ಬರುವ ಸೂಚನೆ ನೀಡುತ್ತಿದೆ 
ಗುಡುಗು ಮಿಂಚುಗಳ ಆರ್ಭಟ 

ಮನದಲ್ಲಿ ಏಕೋ ಇಂದು 
ಆಸೆಗಳು ಮೂಡಿವೆ ನೂರೊಂದು 
ಮೌನ ಗೀತೆಯೂ ಕೂಡ ಹಿತವೆನಿಸುತ್ತಿದೆ 
ತನುವ ತಂತಿಯ ಮೀಟಲು ಬಾರೆಯ 

ಕಣ್ಣ ಕಡಲಿನಲ್ಲಿ ಉಕ್ಕುವ
ಕಂಬನಿಯ ನಾನು ಒರೆಸುವೆ 
ಹರುಷದದ ಹೊನಲಲ್ಲಿ ತೇಲಿಸಿ
ಬಿಗಿದಪ್ಪಿ ನಿನ್ನ ಮುದ್ದಿಸುವೆ ಸಹಿಸೆಯಾ 

೧೦೧೭ಪಿಎಂ ೧೯೦೨೨೦೨೧
ಅಮುಭಾವಜೀವಿ ಮುಸ್ಟೂರು

ಬರೀ ನೋವುಗಳೆ ತುಂಬಿದ 
ಬದುಕಿನಲ್ಲಿ ನೆಮ್ಮದಿ ಅರಸಿ 
ಹೊರಟಿದೆ ಈ ಜೀವ 

ಬರೀ ಸೋಲುಗಳೇ ಸಂಭ್ರಮಿಸುವಾಗ 
ಗೆಲುವೆಂಬುದು ಮರೀಚಿಕೆಯಾಗಿ 
ಬಾಳ ಬೇಸರಕ್ಕೆ ಕಿಡಿಹೊತ್ತಿ ಬೆಂದಿದೆ ಜೀವ 

ಹರೆಯ ಶುರುವಾದ ವೇಳೆಯಲಿ 
ನನ್ನದಲ್ಲದ ತಪ್ಪಿಗೆ ಈಗ 
ಕಣ್ಣೀರಲ್ಲಿ ಕೈತೊಳೆಯುತ್ತಿದೆ ಜೀವ 

ಬೇಕಿಲ್ಲದ ಬದುಕಿನೊಳಗೆ 
ಕಂದ ಕುಡಿಯೊಡೆಯುವಾಗ 
ಹೇಗೆ ಕಳೆದುಕೊಳ್ಳುವುದು ಜೀವ 

ಬಳಸಿಕೊಂಡವನು 
ಬಳಿ ಬರದಂತಾದನು 
ಬಂಧುಗಳು ಕೈಬಿಟ್ಟಾಗ ನೊಂದಿತು ಜೀವ 

ಹೋರಾಟಕ್ಕಿಳಿದ ಬದುಕಿನೊಳಗೆ 
ನಮ್ಮವರೆಂಬುವರ ಬೆಂಬಲವಿಲ್ಲದೆ 
ಕೃಶವಾಗಿ ಹೋಯಿತು ಈ ಜೀವ 

ಅನುಕಂಪದ ಅನುಸಂಧಾನದಲ್ಲಿ 
ಕೈಹಿಡಿದವನು ಒಲವಿಗಿಂತ 
ನೋವೇ ಹೆಚ್ಚಾಗಿ ನರಳಿತು  ಜೀವ 

ಬೇಕಿಲ್ಲದಾಗ ಬಳಸಿಕೊಂಡವನಿಗೊಂದು
ಬಾಳು ಕೊಟ್ಟು ಕೈ ಹಿಡಿದವನಿಗೊಂದು 
ತನ್ನೊಡಲಲ್ಲಿ ಜಾಗ ಕೊಟ್ಟು ಬೆಳೆಸಿತು ಜೀವ 

ಮೊದಲಿದ್ದ ಒಲವು ಈಗಿಲ್ಲ 
ಬರಿ ಜಗಳ ದಿನವೆಲ್ಲಾ 
ನೆಮ್ಮದಿಯ ಕಾಣದಾಗಿದೆ ಜೀವ 

ಎದೆಯಾಳದ ಭಾವನೆಗಳಿಗೆ 
ಬೆಲೆ ಕೊಡುವ ಹೃದಯಕ್ಕಾಗಿ 
ಹಂಬಲಿಸಿ ಕಾಯುತಿದೆ ಜೀವ 

ಅಂದು ನುಚ್ಚುನೂರಾದ ಕನಸುಗಳು 
ಇಂದು ಅಚ್ಚ ಹಸಿರಾಗಿ ಕಾಡುತ್ತಿವೆ 
ಸ್ವಚ್ಚ ಮನಸ್ಸಿನವನ ಪರಿಚಯಿಸಿಕೊಂಡಿದೆ ಜೀವ 

ಹೇಳಿಕೊಳ್ಳಲಾಗದ ಆನಂದದಲ್ಲಿ 
ಮೈಮರೆತು ಮನಬಿಚ್ಚಿ ನೋವು 
ಮರೆಸುವವನ ಮಾತಿಗಾಗಿ ಚಡಪಡಿಸುತಿದೆ ಜೀವ 

ಈಗ ತೆರೆದಿರುವ ಹೊಸ ಅಧ್ಯಾಯ 
ಎಲ್ಲಿ ಹೇಗೆ ಕಾಣುವುದೋ ಮುಕ್ತಾಯ 
ಸಂಕೋಚದಲ್ಲಿ ಸಂಕುಚಿತಗೊಂಡಿದೆ ಜೀವ 

ಬದುಕು ತಂದ ಈ ತಲ್ಲಣ 
ಎಲ್ಲಿರುವುದೋ ನೆಮ್ಮದಿಯ ನಿಲ್ದಾಣ 
ಹುಡುಕುತ್ತಿದೆ ಎಡತಾಕದೆ ಒದ್ದಾಡಿದೆ ಜೀವ 

ಬದುಕಿನ ಈ ಸಮರ 
ಪ್ರಶ್ನೆಯಾಗುಳಿದಿದೆ ಸಿಗದೆ ಉತ್ತರ 
ಖುಷಿಯ ಎತ್ತರಕ್ಕೇರಬೇಕಿದೆ ಜೀವ 

೦೫೧೯ಎಎಂ೨೦೦೨೨೦೨೧

ಅಪ್ಪಾಜಿ ಎ ಮುಷ್ಟೂರು 
 


*ದೇವರ ಹೂವು*

ಕೆಸರುಲ್ಲೊಂದು ಹೂವು  ಅರಳಿತ್ತು 
ದೇವರ ಪಾದಕ್ಕೆ ಅರ್ಪಿತವಾಯಿತು
ಒಲವು ಕೊಡಬೇಕಾಗಿದ್ದ ಜೀವ 
ಕಸವಾಗಿ ಕಂಡಾಗ ಸಹಿಸದು ನೋವ
ಪ್ರೀತಿಯ ಪೂಜೆಗೆಂದು ತಂದು 
ಮುಡಿಗೇರುವ ಬದಲು ಪಾದದಡಿ ನಿಂದು 
ಅಸಹಾಯಕತೆಯಲ್ಲಿ ಅಸುನೀಗುತ್ತಿವೆ 
ಭಾವವಿರದ ಮನದ ಚುಚ್ಚು ಮಾತುಗಳಿಗೆ 
ದಳ ಹರಿದು ವಿಲವಿಲ ಒದ್ದಾಡಿದೆ 
ತಪ್ಪು ಮಾಡಿದ ತುಂಬಿ ಸ್ವಚ್ಛಂದವಾಗಿದೆ 
ಅರಳುವ ಮೊದಲೇ ಕೊಳೆ ಹತ್ತಿ ನರಳಿದೆ 
ದೇವರ ಪಾದ ಸೋಕಿ ಪಾವನವಾಗಬೇಕಿತ್ತು
ದೇವರು ಕೂಡ ದಾಸಿಯಂತೆ ಬಳಸಿಕೊಂಡು 
ಪ್ರೀತಿಯ ಪನ್ನೀರನೆರಚುವ ಬದಲು  
ನೋವು ಅವಮಾನದ ಶಿಕ್ಷೆ ನೀಡಿ 
ಅರಿವ ಹೃದಯದ ಹುಡುಕಾಟದಲ್ಲಿ 
ಒಂದು ದಿನದ ಬದುಕಿನಲ್ಲಿ ಅರೆಕ್ಷಣ 
ಖುಷಿ ಕೊಡುವ ಜೀವಕ್ಕಾಗಿ ಕಾಯುತ್ತಿದೆ 

೦೫೩೬ಎಎಂ೨೦೦೨೨೦೨೧
*ಅಪ್ಪಾಜಿ ಎ ಮುಷ್ಟೂರು* 

ಟಂಕಾ 

ನಿನ್ನ ಪ್ರೀತಿಗೆ
ಸೋತು ಹೋಗಿಹೆ ನಾನು 
ನಿನ್ನ ಮಾತಿಗೆ
ಮನಸು ಕೊಟ್ಟೆ ಇನ್ನು 
ಖುಷಿ ಜೀವನ ಯಾನ

0611ಎಎಂ20022021

ಒಲವಿನ 
ಹೃದಯಕ್ಕೆ 
ರಸಸ್ವಾದದ 
ಭಾವ ಲಹರಿ 
ಮುದಗೊಂಡ
ಮನದ ಖುಷಿ 
ಉಲ್ಲಾಸದ ಸಿರಿ

0618ಎಎಂ20022021


ಒಲವೆ ನೀ ದೂರ ಹೋಗಿ 
ಮನವ ಕಾಡಿದೆ ನಿತ್ಯವೂ 
ಪ್ರೀತಿ ಇಲ್ಲದ ಮೇಲೆ 
ಬಾಳು ಶೂನ್ಯ ಸತ್ಯವೂ
ನೂರು ನೆನಪು ದೂರು ನೀಡಿವೆ
ನಿನ್ನ ಕರೆತರಬೇಕೆಂದು
ಬಾ ಮತ್ತೆ ಬದುಕಿನಲಿ
ಚಿಗುರುವಾಸೆಗಳ ಸವಿದು 
ಕೋಗಿಲೆಯಂತೆ ಹಾಡಬಯಸಿದೆ

0852ಪಿಎಂ20022021
ಅಪ್ಪಾಜಿ ಎ ಮುಸ್ಟೂರು 

*ಸಜ್ಜನ ಬದುಕು*

ಅವಹೇಳನಕೆ ಅಂಜದೇ
ಬಾಳಲೇಬೇಕು ಇಲ್ಲಿ 
ಪಿತೂರಿಗಳಿಗೆ ತಕ್ಕ 
ಉತ್ತರ ಕೊಡುತಲಿ
ಸುಳ್ಳಿನ ಸರಮಾಲೆ 
ಹರಿದು ಹಾಕುವ ತನಕ
ಹೋರಾಡಬೇಕು ಸತ್ಯಾನ್ವೇಷಣೆಗೆ
ಜಯದ ಆ ಪರಿಭ್ರಣೆಯಲ್ಲಿ
ಸೋಲಿನ ರಾತ್ರಿಯೂ ಉಂಟು 
ಗೆಲುವಿನ ಬೆಳದಿಂಗಳು ಉಂಟು 
ಸರ್ವಹಿತ ಪಥದಿ ನಡೆದು
ಸಜ್ಜನನಾದರಷ್ಟೇ ಸಾರ್ಥಕ ಬದುಕು

0521ಎಎಂ18062020
*ಅಮುಭಾವಜೀವಿ ಮುಸ್ಟೂರು*

[6/18, 8:35 AM] +91 78995 03158 ದೇವಿದಾಸ್ ಅವರ ಪ್ರತಿಕ್ರಿಯೆ : ಸಜ್ಜನನ ಬದುಕಿನ ಕುರಿತು ಹನಿಗವನದಲ್ಲಿ ಸೊಗಸಾಗಿ ಬಿಂಬಿಸಿದ್ದಿರಿ.ಬದುಕು ಹೇಗೆ? ಅಂದರೆ ನಾವು ಹೇಗೆ ಅನುಸರಿಸಿಕೊಂಡು ಸಾಗುತ್ತೇವೆಯೊ ಹಾಗೆ ವಾವ್👍👌


*ನೀನಿರು ಸಾಕು*


ಇರು ನೀ ನೋವಿಗೆ ಹೆಗಲಾಗಿ
ಸೇರು ನೀ ಏಕಾಂತದಿ ಜೊತೆಯಾಗಿ 
ಮಾತಾಗು ನೀ  ನಾನಿರುವಾಗ ಮೌನವಾಗಿ
ನನ್ನೊಂದಿಗಿರು ಸ್ನೇಹದ ಆಸರೆಯಾಗಿ 
ಬೇಸತ್ತು ಕೂತಾಗ ನೀನಿರುವ ಸ್ಪೂರ್ತಿಯಾಗಿ
ಸೋತು ಕೈಚೆಲ್ಲಿದಾಗ ನೀ ಬಾ ಬೆಂಬಲವಾಗಿ 
ಪ್ರತಿ ಕ್ಷಣವೂ ನಗುತ ನಗಿಸುತಿರು 
ದುಃಖದಲಿರಲು ಧೈರ್ಯ ತುಂಬುತಿರು
ದ್ವೇಷಿಸುವವರ ನಡುವೆ ನೀ ನನ್ನ ಪ್ರೀತಿಸು
ನಾ ಏರುವ ಎತ್ತರಕ್ಕೆ 
ನೀ ಹತ್ತಿರವಾಗಿರು 

0249ಪಿಎಂ18062020
*ಅಮುಭಾವಜೀವಿ ಮುಸ್ಟೂರು*

Wednesday, April 7, 2021

*ಕತ್ತಲಲ್ಲಿ ಕರಗಿ*

ಬಡತನದ ಬೇಗೆಯಲ್ಲಿ 
ಬೆಂದ ಬದುಕು 
ಬರಿ ನೋವನ್ನೇ ಉಂಡಿತ್ತು 
ಜೀವನದುದ್ದಕ್ಕೂ 

ಹರಕು ಮುರುಕು ಜೋಪಡಿ 
ಉಂಟು ಅದಕ್ಕೆ ನೂರು ಕಿಂಡಿ 
ಮೈಯ ಮೇಲೆ ಹರಿದ ಬಟ್ಟೆ 
ಕಾಮುಕರ ಕಣ್ಣಿಗೆ ಹರೆಯ ಬಣ್ಣದ ಚಿಟ್ಟೆ 

ಕಿತ್ತು ತಿನ್ನುವ ಕಡುಬಡತನ 
ಅದರ ಮೇಲೊಂದಿಷ್ಟು ಜಾತಿಯ ಹಗೆತನ 
ಉಳ್ಳವರ ದಳ್ಳುರಿಯ ಮುಂದೆ 
ನನ್ನ ಗುಡಿಸಲು ಸುಟ್ಟು ಕರಕಲು 

ಬೀದಿಗೆ ಬಿದ್ದಿತು ಬದುಕು 
ಆಗಲೇ ಎದುರಾಯಿತು ಕೆಡುಕು 
ಹಾದಿ ಬೀದಿಯ ಕಣ್ಣು ನನ್ನ ಮೇಲೆ 
ಕನಿಕರಕ್ಕಿಂತಲೂ ಕಾಮಾಂಧತೆಯ ಲೀಲೆ 

ಹಸಿವನಿಲ್ಲಿ ಯಾರೂ ಕೇಳಲಿಲ್ಲ 
ತೀಟೆ ತೀರಿಸಿಕೊಂಡು ಪೇಟೆಗಟ್ಟಿದರಲ್ಲ
ಅಲ್ಲಿ ಮತ್ತೊಂದು ನರಕ 
ಕೆಂಪು ದೀಪದ ಕೆಳಗೆ ಕುದಿವ ಬದುಕು 

ಹರೆಯದ  ಮೈಯ ಕಿತ್ತು ತಿಂದವು 
ಲಜ್ಜೆಗೆಟ್ಟ, ಕಾಮಾಂಧ ಹದ್ದುಗಳು 
ಆ ಕತ್ತಲಲ್ಲಿ ಕರಗಿ ಹೋದವು 
ನನ್ನ ಸ್ವಂತಿಕೆಯ ನಿರೀಕ್ಷೆಗಳು 

ಹಗಲು ಇರುಳು ಬಿಡುವಿಲ್ಲದ ಕೆಲಸ 
ಮೈಹಾಸಿ ಪಡೆದದ್ದು ಬಿಡಿಗಾಸ
ಮೈ ಉಂಡವರಾರೂ ಮನಸ ಕಂಡು ಕೇಳಲಿಲ್ಲ 
ಹಿಂಡಿ ಹಿಪ್ಪೆಮಾಡಿ ದಂಡಿಸಿದ ಅವರಾರು ಶತ್ರುಗಳಲ್ಲ 

ಹರೆಯ ಮೆಲ್ಲ ದೂರ ಸರಿಯಲು 
ಹೊಲಸು ನಾರುತಿತ್ತು ಕಾಮನೆ 
ತನುವಿನೊಳಗೆ ಏನೇನೋ ಯಾತನೆ 
ಯಾರಿಗೂ ಈಗ ತಟ್ಟಲಿಲ್ಲ ಕಾಮದ ವಾಸನೆ 

ಬಾಣಲೆಯಿಂದ ಬೆಂಕಿಗೆ ಬಿದ್ದೆ
ಮೈಯ ವ್ರಣಕ್ಕೆ ನರಳುತ್ತಲಿದ್ದೆ 
ಲುಚ್ಛಾ ಜನರ ಚಪಲಕ್ಕೆ ಬಲಿಯಾಗಿ 
ಕೊಚ್ಚೆಯಲ್ಲಿ ಹೊರಳಾಡಿ ಪ್ರಾಣ ಬಿಟ್ಟೆ 

೦೫೩೮ಪಿಎಂ೨೮೧೧೨೦೨೦
ಅಪ್ಪಾಜಿಗೆ ಎ ಮುಷ್ಟೂರು 



ಕವನ ಸ್ಪರ್ಧೆಗಾಗಿ:
ವಿಷಯ : ಮನೆ ಮಡದಿ ಮಕ್ಕಳು

ಶೀರ್ಷಿಕೆ : *ಬಾಳ ಬಾಂಧವ್ಯ*

ಕಲ್ಲು ಮಣ್ಣಿನ ಕೂಡಿಕೆಯ 
ಕಬ್ಬಿಣ ಸಿಮೆಂಟು ಛಾವಣಿಯ 
ನಡುವೆ ಬದುಕುವ ಜೀವಗಳ 
ನೆಲೆ ನೆಮ್ಮದಿಯ ತಾಣ ಮನೆಯು

ಪುರುಷನೆಂಬ ಕುದುರೆಯ ಕಟ್ಟಿ 
ಸಂಸಾರದ ಯಾಗ ಭೋಗಕೆ
ತಾಳಿಯ ಬಂಧದಿ ಬೆಸೆದ ಸಂಗಾತಿ 
ಅವಳೇ ಮಡದಿಯೆಂಬ ಗೆಳತಿ 

ಕಾಮ ಪ್ರೇಮದ ಕುರುಹಾಗಿ 
ವಂಶವೃಕ್ಷದ ಬಿಳಲಾಗಿ
ಕಂಡ ಕನಸಗಳ ಸಾಕಾರಕಾಗಿ 
ಮಕ್ಕಳಿರಬೇಕು ಮನೆ ತುಂಬಾ 

0824ಪಿಎಂ28112020
*ಅಪ್ಪಾಜಿ ಎ ಮುಸ್ಟೂರು*

*ರುಬಾಯಿ ಸ್ಪರ್ಧೆಗಾಗಿ*

ನನಗೆ ಅವಳದೇ ಕನವರಿಕೆ
ಅವಳೇ ನನ್ನ ಕಾವ್ಯ ಕನ್ನಿಕೆ 
ಭಾವಪರವಶತೆಗೆ ಪ್ರೇರಣ
ಅವಳೇ ಆ ಶಿಲಾಬಾಲಿಕೆ

0507ಪಿಎಂ29112020
*ಅಪ್ಪಾಜಿ ಎ ಮುಸ್ಟೂರು*

*ಕಾರಣ ಏನಿರಬಹುದು*

ಕ್ಷಮಿಸೆಂದು ಅಂಗಲಾಚಿದರೂ 
ಅದಕಿನ್ನು ಸಮಯ ಬೇಕೆಂದು 
ನುಣಿಚಿಕೊಳ್ಳುತಾಳೆ ಅವಳು
ಏನಿರಬಹುದು ಅವಳ ಉದ್ದೇಶ 
ಸತಾಯಿಸುವ ಹಿಂದಿನ ಸಂದೇಶ
ಆಟ ಆಡಿಸುತ್ತಿರಬಹುದೇ ಅವಳು

0420ಪಿಎಂ30112020
*ಅಪ್ಪಾಜಿ ಎ ಮುಸ್ಟೂರು*

*ಹೇಗೆ ಬರಲಿ*

ವಿಳಾಸ ಮರೆತು ಹೋಯಿತು 
ನಿನ್ನ ಪ್ರೀತಿಯರಮನೆಗೆ 
ನಾ ಬರಲಿ ಹೇಗೆ ಚೆಲುವೆ 
ನಿನ್ನ ನೆನಪುಗಳ ಬೆಳಕಲ್ಲಿ 
ಆ ಒನಪಿನ ಬಳುಕು ಹಾದಿಯಲಿ
ನಿರೀಕ್ಷೆಯ ಹೊತ್ತು ನಡೆದು ಬಂದೆ
ಆದರೆ ನೀನನ್ನ ತಿರಸ್ಕರಿಸಿ 
ದಣಿದ ಜೀವವ ಮತ್ತಷ್ಟು ಮಣಿಸಿ
ನೋವಿನ ಪ್ರವಾಹದಲಿ ಕೊಚ್ಚಿಹೋದೆ
ಕನಿಕರಿಸದ ನಿನ್ನ ಹೇಗೆ ಒಪ್ಪಿಸಲಿ

0430ಪಿಎಂ30112020
*ಅಪ್ಪಾಜಿ ಎ ಮುಸ್ಟೂರು*

*ಬೇಡವಾಗಿದೆ ಬಂಧ*

ತೊರೆದು ಹೋಗು ನನ್ನಿಂದ 
ಬೇಡವಾಗಿದೆ ಈ ಬಂಧ
ಹತ್ತಿರ ಬಂದ ನನ್ನ ದೂರ ತಳ್ಳಿ 
ಹೃದಯ ಗಾಯ ಮಾಡಿದೆ 
ಸ್ನೇಹವ ದೂಷಿಸಿ 
ಪ್ರೀತಿಯ ಅನುಮಾನಿಸಿ
ಬಾಳ ನೆಮ್ಮದಿಯ ಕಳೆದೆ
ಮತ್ತೆಂದೂ ನೋಯಿಸದೆ 
ನನ್ನಿಂದ ದೂರ ಉಳಿದುಬಿಡು

0739ಪಿಎಂ30112020
*ಅಪ್ಪಾಜಿ ಎ ಮುಸ್ಟೂರು*

*ಅಂದು* 

ಸ್ನೇಹದ ಸವಿಯಲ್ಲಿ
ಸಲಿಗೆಯ ಬಯಸಿ
ಸನಿಹ ಬಂದಳು

*ಇಂದು* 

ಸ್ನೇಹ ಹಳಸಿರಲು
ಗೌರವವ ಬಯಸಿ
ದೂರವಾದಳು

1016ಪಿಎಂ30112020
*ಅಪ್ಪಾಜಿ ಎ ಮುಸ್ಟೂರು*


ಹಾಯ್ಕು

ನಿನ್ನ ಸೇರಲು 
ಎಲ್ಲಾ ತೊರೆದು ಬಂದೆ
ಈ ಪ್ರೀತಿಗಾಗಿ 
1025ಪಿಎಂ3011202
ಅಪ್ಪಾಜಿ ಎ ಮುಸ್ಟೂರು
ಹಾಯ್ಕು

ಭಕ್ತಿ ಗಾಯನ 
ಮುಕ್ತಿ ಸಾಧನ ಇಲ್ಲಿ 
ಆಸ್ತಿಕನಾದ್ರೆ
1028ಪಿಎಂ30112020
ಅಪ್ಪಾಜಿ ಎ ಮುಸ್ಟೂರು

*ಪ್ರಯೋಜನ ಶೂನ್ಯ*

ಬೀದಿಗೆ ಬಿದ್ದಿದೆ ಬದುಕು 
ಬೆನ್ನೆಲುಬಿನ ಒಳಗೆ ಹುಳುಕು 
ಯಾರಿಂದಲೂ ಸಿಗಲಿಲ್ಲ ಪರಿಹಾರ 
ಹೋರಾಟವೇ ನಿತ್ಯದ ನಮ್ಮ ಬದುಕು 

ಕಾಯಿದೆಗಳು ಬಂದರೂ 
ಕಾರಣಗಳು ನೂರಾರು 
ಪ್ರಯೋಜನ ಮಾತ್ರ ಶೂನ್ಯ 
ಪ್ರತಿಭಟನೆ ಅಗ್ರಮಾನ್ಯ 

ಎಲ್ಲರೂ ಅವನ ಪರ 
ಹಿಡಿಯುವ ತನಕ ಅಧಿಕಾರ 
ಮಾತು ಮರೆಯುವರು ಆನಂತರ 
ಅವನ ಶ್ರಮ ತಪ್ಪಲಿಲ್ಲ ನಿರಂತರ 

ಉತ್ತುವ ಅವನಿಗೆ ಬಿತ್ತಿ ಬೆಳೆಯುವ ಕನಸು 
ಬೆವರು ಹರಿಸಿದರೂ ಸಿಗಲಿಲ್ಲ ಯಶಸ್ಸು 
ಆದರೂ ಕುಂದದು ಅವನ ಹುಮ್ಮಸ್ಸು 
ಬಾಗಿದವನು ಬೀಗಲಿಲ್ಲ ಮುಗಿದರೂ ಆಯಸ್ಸು 

ಬೆಳೆದ ಬೆಳೆಗೆ ಇಲ್ಲ  ಬೆಲೆ 
ಎಲ್ಲಾ ದಲ್ಲಾಳಿಗಳ ಲೀಲೆ 
ನೆತ್ತಿ ಮೇಲೆ ಮಣ್ಣು ಹೊತ್ತು ಅವ ಸತ್ತ 
ಉನ್ನತಿಯ ಪಡೆದರು ಅವನ ರೈತ(ರಕ್ತ ) ಹೀರುತ್ತಾ 

ಬೆಳೆ ಬೆಳೆದ ಅವನಿಗೆ 
ಇರಲಿ ಬೆಲೆ ನಿಗದಿಯ ಅಧಿಕಾರ 
ಸ್ವಂತಿಕೆಯಿಂದ ಬದುಕುವನು ಆಗ 
ಬೇಕಿಲ್ಲ ನಿಮ್ಮಗಳ ಪರಿಹಾರ 

೦೭೩೩ಎಎಂ೦೯೧೨೨೦೨೦
*ಅಪ್ಪಾಜಿ ಎ ಮುಷ್ಟೂರು*


*ಸಾಂತ್ವನದ ಮಾತು*

ನಿನ್ನ ಸಾಂತ್ವನದ ಮಾತು ಕೇಳಿ 
ಪರಮಾನಂದವಾಯ್ತು ಮನಸ್ಸಿಗೆ 
ನಿರೀಕ್ಷೆಗಳು ಮತ್ತೆ ಗರಿಗೆದರಿವೆ 
ಭರವಸೆ ತುಂಬಿರಲು ನನಗೆ 
ಬೆಳೆಯಬೇಕು ಎತ್ತರಕ್ಕೆ 
ಆಡಿಕೊಳ್ಳುವವರಿಗೆ 
ಉತ್ತರ ನೀಡುವುದಕ್ಕೆ 
ನಿನ್ನ ಬೆಂಬಲವಿರಲಿ ನಿರಂತರ 
ಗೆದ್ದು ನೀಡಿವೆ ಅವರಿಗುತ್ತರ 

೦೨೩೨ಪಿಎಂ೦೯೧೨೨೦೨೦
ಅಪ್ಪಾಜಿ ಎ ಮುಷ್ಟೂರು 
*ಜೀವನ ಪಾಠ*

ಬಾಳೆಂದು ಮುಳ್ಳಲ್ಲ 
ಕಷ್ಟಗಳು ಹೊಸದಲ್ಲ 
ಎದುರಿಸಿ ಬದುಕಬೇಕು ನಿತ್ಯ 
ಸೋಲಿಗೆ ಕುಗ್ಗದೆ 
ಗೆಲುವಿಗೆ ಹಿಗ್ಗದೆ 
ಸಮಭಾವದಿ ಬಾಳ ಸವಿಬೇಕು 
ನಾಳೆಗಳ ನಿರೀಕ್ಷೆಗಿಂತ 
ನಿನ್ನೆಗಳ ಪರೀಕ್ಷೆಗಿಂತ 
ಇಂದಿನ ಯಶಸ್ಸಿಗೆ ಶ್ರಮಿಸಬೇಕು 
ನೋವುಗಳ ಪುಟ ತಿರುವಿ 
ನಲಿವುಗಳ ಕವಿತೆ ಹಾಡಿ 
ನೆಮ್ಮದಿಯ ಭರವಸೆ ಹೊಂದಬೇಕು 

೦೫೧೬ಪಿಎಂ೦೯೧೨೨೦೨೦
*ಅಪ್ಪಾಜಿ ಎ ಮುಷ್ಟೂರು*

#ಅಮುಭಾವಬುತ್ತಿ ೨೪೫

*ಹಾಯ್ಕು*

ಪ್ರಣಯ ಕಾಂತೆ 
ಬಾಳ ಪಥದಲಿ ನೀ
ಭಾಗ್ಯ ದೇವತೆ
0703ಪಿಎಂ10122020
*ಅಪ್ಪಾಜಿ ಎ ಮುಸ್ಟೂರು*

*ಹಾಯ್ಕು*

ಬಿಂಬಿಸಲಿದೆ
ಒಲವಿನ ಹಣತೆ
ನೀನೇ ಕನ್ನಡಿ

0715ಪಿಎಂ10122020
*ಅಪ್ಪಾಜಿ ಎ ಮುಸ್ಟೂರು*

*ಏಕಾಂಗಿ*

ಏಕೆ ಈ ನೋವ 
ನನಗಿತ್ತು ಹೋದೆ 
ಬಾಳ ಹಾದಿಯಲಿ 
ನೆರಳಿಲ್ಲದಂತೆ ಮಾಡಿದೆ
ಮೌನದೊಡವೆ ತೊಟ್ಟು 
ಬಾಳುವಾಸೆಯ ಬಿಟ್ಟು 
ಒಬ್ಬಂಟಿಯಾಗಿ ಹೋದೆ
ಅರ್ಧಾಂಗಿಯಾಗಬೇಕಾದವಳ
ಏಕಾಂಗಿಯಾಗಿ ಮಾಡಿದೆ

0733ಪಿಎಂ11122020
*ಅಪ್ಪಾಜಿ ಎ ಮುಸ್ಟೂರು*

ನಿನ್ನ ನಗುವಿನಂತೆ
ಚಿಮ್ಮಿವೆ ಹನಿಗಳು 
ನವೋಲ್ಲಾಸದಿಂದ
ಮುಂಜಾನೆಯ ಈ
ಆರ್ದತೆಯಲ್ಲೂ
ರೋಮಾಂಚನವ
ತಂದಿತು ಈ ಚೆಲುವು 

0921ಪಿಎಂ11122020
*ಅಪ್ಪಾಜಿ ಎ ಮುಸ್ಟೂರು*

ಈ ನಗುವೇ ಸ್ಪೂರ್ತಿ 
ಮುನ್ನಡೆಯ ಬಾಳಿಗೆ
ಈ ನಿನ್ನ ನಿರ್ಮಲ ಪ್ರೀತಿ
ಬೆಂಗಾವಲು ನಮ್ಮ ನಾಳೆಗೆ
ಗೆಜ್ಜೆ ಕಟ್ಟಿ ಕುಣಿವ ಮನಸು
ಗುರಿ ಮುಟ್ಟಲು ಬಾಳ ಯಶಸ್ಸು 
ಅದಕೆಲ್ಲ ಕಾರಣವೇ ನೀನು
ಈ ಚೆಲುವ ಆರಾಧಕ ನಾನು 

0413ಎಎಂ12122020
*ಅಪ್ಪಾಜಿ ಎ ಮುಸ್ಟೂರು*


ಓ ನನ್ನ ಸಾಹಿತ್ಯ ಬಂಧುಗಳೇ
ಕಾಟ ಕೊಡುತ್ತಲೇ ಇರುವೆ ನಿಮಗೆ 
ಹಗಲಿನಲಿ ಇರುಳಿನಲಿ
ಸಂಜೆ ಮುಂಜಾನೆಯಲಿ
ಸಹಿಸಿಕೊಳ್ಳುತ ನಿಮ್ಮ 
ಕೈಗೂಸನೆತ್ತಿಕೊಂಡು ಬೆಳೆಸಿರಿ
ಬತ್ತಿಹೋಗದ ಭಾವದೊರತೆಗೆ
ನಿಮ್ಮ ಬೆಂಬಲವೆ ವರ್ಷಧಾರೆ
ನೀವು ಬೆಳೆಸುವ ನಿಮ್ಮದೇ ವೃಕ್ಷ 
ಭಾವದ ನೆರಳೀಯುವೆ ದಣಿಯದಿರಿ
ಮಣಿದು ಬಾಳುವೆ ನಿಮ್ಮೆದುರು
ಬೇಸರಿಸಿಕೊಳ್ಳದೆ ಸವಿದು ಬೆಳೆಸಿರಿ
ಹುಂಬ ಭಾವಗಳು ನನ್ನವು
ಜಂಭಪಡುವ ಚಂದ ಸುಮವು
ಮುಡಿವ ನೀವಿರುವವರೆಗೂ
ಮರಳಿ ಮರಳಿ ಅರಳುವೆ ನಾನು 

0605ಎಎಂ12122020
ಅಪ್ಪಾಜಿ ಎ ಮುಸ್ಟೂರು 


ರೈತ

*ನಮ್ಮ ಅನ್ನದಾತ*

ರೈತ ನಮ್ಮ ಅನ್ನದಾತ
ಆದರೆ ಇಂದು ಅವನು ಶೋಷಿತ

ಮಳೆಗಾಗಿ ಕಾದು ಕುಳಿತು
ಬಂದ ಒಡನೆ ಉಳುಮೆಗೈದು
ಬೀಜ ಬಿತ್ತಿ ಮೊಳೆಯುವಾಗ
ಮತ್ತೆ ಮುಗಿಲ ಬೇಡುವನು

ಬೆಳೆದ ಬೆಳೆಗೆ ಬೆಲೆಯಿಲ್ಲದೆ
ಸಾಲದ ಶೂಲಕೆ ಕೊರಳೊಡ್ಡಿ
ಬೇಸಾಯದೊಂದಿಗೆ ಸಾಯುವ
ಹತಭಾಗ್ಯ ಭೂತಾಯಿಯ ಮಗ

ಸುಳ್ಳು ಭರವಸೆಗಳ ನಂಬಿ 
ಎಲ್ಲಾ ಹುಸಿಯಾಗಲು ಕುಗ್ಗಿ 
ನಂಬಿದವರನೆಲ್ಲ ಅನಾಥರಾಗಿಸಿ
ಆತ್ಮಹತ್ಯೆಗೆ ಶರಣಾದನು

ಭೂಮಿ ಉಳುವವನಿಗೆ
ಬೆಲೆ  ಸಿಗಲೇಬೇಕು
ರೈತ ಬೆಳೆದರೆ ತಾನೆ
ನಮಗೆಲ್ಲ ನೆಮ್ಮದಿಯ ಬದುಕು 

ವ್ಯವಸಾಯವೇ ಅಭಿವೃದ್ಧಿಯ
ಮಂತ್ರವಾಗಬೇಕು
ವ್ಯವಸ್ಥೆಯಲ್ಲಿ ರೈತನಿಗೆ 
ಮೊದಲ ಆದ್ಯತೆ ನೀಡಬೇಕು 

0854ಎಎಂ01082018
*ಅಮು ಭಾವಜೀವಿ*
ಚಿತ್ರದುರ್ಗ 

*ಸರಿಸಾಟಿ ಇಲ್ಲ*

ಅಂಬರದ ಚಂದಿರನಿಗೂ
ಒಮ್ಮೆ ಬಿಡುವೆಂಬುದಿದೆ
ನಿನಗೆ ಮಾತ್ರ ಏಕಿಲ್ಲ ನಲ್ಲೆ
ಬೆಳಗಿಂದ ರಾತ್ರಿವರೆಗೂ
ವಿರಮಿಸದೆ ದುಡಿಯುವ 
ನಿನಗೆ ಸರಿಸಾಟಿ ಏನೂ ಇಲ್ಲ 

ಅರಳುವ ಹೂವಿಗೆ ಇಲ್ಲಿ 
ಒಂದು ದಿನದ ಜೀವನ
ದೈವಕೋ ಮಸಣಕೋ ಅಲಂಕಾರ 
ಸಾವು ಬರುವವರೆಗೆ ನೀನು 
ದುಡಿವೆ ಸ್ವಾರ್ಥವಿರದೆ
ಕುಟುಂಬಕೆ ನಿನ್ನಿಂದಲೇ ಸಂಸ್ಕಾರ

ಹರಿವ ನೀರು ಕಡಲ ಸೇರಿ
ಕ್ಷಾರವಾಗಿ ಅಬ್ಬರದಲೆಗಳಲಿ
ತೀರ ಮುಟ್ಟಿ ಮರೆಯಾಗುವುದು 
ಬಾಳ ನೆಲವ ಹದಗೊಳಿಸಿ
ನೆಮ್ಮದಿಯ ಹಸಿರ ಹೊದಿಸಿ
ಹಿಮ್ಮೆಟ್ಟದೆ ನಡೆವೆ ಕಷ್ಟಗಳ ಎದುರಿಸಿ

ಪ್ರಕೃತಿಗೂ ಮಿಗಿಲು ನೀನು
ಭೂಮಿಗಿಂತಲೂ ತಾಳ್ಮೆ ನಿನ್ನದು
ದೇವರನ್ನೂ ಮೀರಿದವಳು ನೀನು
ಸರಿಸಮಾನ ಏನೂ ನಿನಗಿಲ್ಲ 
ನಿನ್ನ ಕರ್ತವ್ಯಕೆ ಎಣೆಯಿಲ್ಲ
ಬದುಕ ದಡ ಸೇರಿಸುವ ನಾವಿಕಳು ನೀನು 

1104ಪಿಎಂ30032019
*ಅಮು ಭಾವಜೀವಿ*

*ಉಳಿಯಬೇಕು ರೈತ*


ದೇಶದ ಹಸಿವ ನೀಗಿಸುವ
ರೈತ ನಿನಗೆ ವಂದನೆ 
ಬೆವರು ಹರಿಸಿ ದುಡಿಯುವ 
ಅನ್ನದಾತ ನಿನಗೆ ಅಭಿನಂದನೆ 

ಉಳುಮೆ ನಿನ್ನ ಕಾಯಕ 
ದುಡಿಮೆ ಅದಕ್ಕೆ ಪ್ರಚೋದಕ 
ಉತ್ತಿ ಬಿತ್ತಿ ಬೆಳೆವ ನೀನು 
ಭೂಮಿ ತಾಯಿಯ ಚೊಚ್ಚಲ ಮಗನು

ಸೃಷ್ಟಿ ದೃಷ್ಟಿಯ ಮೇಲಾಟದಲ್ಲಿ 
ಸಮಷ್ಟಿಹಿತ ನಿನ್ನ ಪೂಜೆ 
ಅತಿವೃಷ್ಟಿ ಅನಾವೃಷ್ಟಿ ಏನೇ ಬರಲಿ
ದುಡಿಯುತಲಿರುವುದೇ ನಿನ್ನ ಪೂಜೆ 

ಬಿಸಿಲು ಮಳೆಗೆ ಅಂಜದೆ 
ಹಗಲು ಇರುಳು ಎನ್ನದೆ 
ನೇಗಿಲ ಧರ್ಮವ ನಂಬಿದ ರೈತ 
ದೇಶಕ್ಕೆಲ್ಲ ಅವನೇ ಅನ್ನದಾತ 

ಬೆಳೆದ  ಬೆಳೆಗೆ ಬೆಲೆ ಸಿಗದಿದ್ದರೂ 
ತಾನು ಬಳಲಿ ಬಸವಳಿದರೂ
ಕಾಯಕ ಬಿಡದ ನೇಗಿಲಯೋಗಿ 
ಕವಿಭಾವದಿ ಸೃಷ್ಟಿನಿಯಮದ ಭೋಗಿ 

ಉಳಿಯಬೇಕು ರೈತ ನೀನು 
ಎಲ್ಲರ ನೆಮ್ಮದಿಯ ಬಾಳಿಗಾಗಿ 
ತೊಳೆಯುವವನು ಕೂಡ ನಿನ್ನನೇ 
ನಂಬಿ ಹನು ತನ್ನ ಉನ್ನತಿಗಾಗಿ 

ರೈತ ನೀನು ಬೆಳೆದ ಧಾನ್ಯ 
ಸಕಲ ಜೀವಿಗಳಿಗೂ ಅತ್ಯಮೂಲ್ಯ 
ಎದೆಗುಂದದ ನಿನ್ನ ದುಡಿಮೆ 
ದೇಶಕ್ಕೆ ನಿನ್ನಿಂದಲೇ ಹಿರಿಮೆ 

೦೮೨೭ಎಎಂ ೨೩೧೨೨೦೨೦
ಅಪ್ಪಾಜಿ ಎ ಮುಷ್ಟೂರು 


*ಮಾತು ಮನ ಕೆಡಿಸಿತು*

ಮಾತಿಗೆ ಮಾತು ಬೆಳೆಯಿತು 
ಮಾತಿನ ಹಿಂದಿನ ಕಾಳಜಿ ಮರೆತು ಹೋಯಿತು 
ಪ್ರತಿ ಮಾತಲ್ಲೂ ತಪ್ಪನ್ನೇ ಹುಡುಕುತ್ತಾ 
ಪ್ರೀತಿಯ ಛಾಯೆ ಪೆಡಂಭೂತವಾಗಿ 
ಇದ್ದ ಸಲಿಗೆ ದ್ವೇಷಕ್ಕೆ ತಿರುಗಿ 
ಮಾತಿನ ಹಿಂದಿನ ಉದ್ದೇಶ ಅರಿಯದೆ 
ಪರಸ್ಪರ ದೂರುತ್ತಾ ದೂರಾದವು ಮನ 
ಕಾರಣವಿಲ್ಲದೆ ನೊಂದವು ದಿನ 
ಯಾರದೋ ಮಾತಿನಲ್ಲಿರುವ ನಂಬಿಕೆ 
ಹೃದಯವಾಸಿಯ  ಮೇಲೆ ಇಲ್ಲದಾಯ್ತು 
ಸಂಬಂಧ ಹಳಸಿ ಹೋಯ್ತು 
ಅನುಬಂಧ ಕಳಚಿಕೊಂಡಿತು 
ಎರಡೂ ಹೃದಯಗಳ ಸೇತುವೆಯಾಗಿದ್ದ ಮಾತು
ಎರಡು ಮನಗಳ ಮಧ್ಯೆ ಗೋಡೆ ಎದ್ದಿತು  
ಮಾತು ಮನಗಳ ಕೆಡಿಸಿತು 
ಹೃದಯ ಗಾಯಗೊಂಡು ನೊಂದಿತು
ಮಾತು ಮೌನಗಳ ಸಮ್ಮಿಳಿತ 
ಇಲ್ಲದೆ ಮರೆಯಾಯ್ತು ಬಾಳ ಹಿತ 

೦೬೨೨ಎಎಂ೨೪೧೨೨೦೨೦
*ಅಪ್ಪಾಜಿ ಎ ಮುಸ್ಟೂರು* 

*ಮರೆಯಲಾರೆ*

ಯಾರೋ ಏನೋ ಅಂದರು ಎಂದು 
ನನ್ನೆದೆಯ ಭಾವಗಳ ಅವಮಾನಿಸಿದೆ
ಏನೋ ಮಾಡಲು ಹೋಗಿ ಇಂದು 
ಅನುಬಂಧದ ಬುಡ ಕಡಿದೆ
ನಂಬಿಕೆಯ ಪಯಣದಲ್ಲಿ ಅಂಜಿಕೆಯಿಲ್ಲದೆ
ಅನುಮಾನದಿ ನೆರಳೀಯದೆ ನರಳಿಸಿದೆ
ಮರೆಯಲಾಗದ ನಿನ್ನ ನೆನಪುಗಳ 
ಒತ್ತಡದ ದಟ್ಟಡವಿಯಲಿ ಒಂಟಿ ಮಾಡಿದೆ
ನೊಂದ ಜೀವದ ಬೆಂದ ಭಾವಗಳ
ಸಂತೆಯಲಿ ಹಂಚುತಿಹೆನು 
ಬೇಕಾದವರು ಬೇಕೆಂದು ಎತ್ತಿಕೊಂಡು
ಮನದ ಭಾರವನಿಳಿಸಿ ಸಂತೈಸಿದರು

0741ಪಿಎಂ24122020
*ಅಪ್ಪಾಜಿ ಎ ಮುಸ್ಟೂರು*

*ಹರಿತ ಮಾತು*

ಇಷ್ಟು ತೀವ್ರವಾಗಿರುತ್ತೆಂದು ಊಹಿಸಿರಲಿಲ್ಲ 
ನಿನ್ನ ಹರಿತವಾದ ಮಾತು 
ಅದು ಎದೆಯನಿರಿದು ನೆತ್ತರು ಚಿಮ್ಮಿ 
ಹೃದಯವನು ಗಾಯಗೊಳಿತು
ನೀ ನಡೆದುಕೊಂಡು ಈ ರೀತಿ 
ಘಾಸಿಗೊಳಿಸಿತು ನಿನ್ನ ನೀತಿ 
ನಿನ್ನ ನಾಟಕದ ಮುಂದೆ 
ನನ್ನ ಪ್ರಾಮಾಣಿಕತೆ ಸೋತಿದೆ
ನಿನ್ನ ಆಟದ ಹಿಂದೆ 
ಇಂತಹ ಘೋರ ಉದ್ದೇಶವಿತ್ತೆ 
ಏನೇ ಆದರೂ ನೀ ಹೀಗಾಗಬಾರದಿತ್ತು
ಜನುಮಕಾಗುವಷ್ಟು ನೋವ ನನಗಿತ್ತು 
ಖುಷಿ ಪಡುತಿರುವ ನಿನ್ನೊಳಗಿನ 
ಆತ್ಮಸಾಕ್ಷಿಗೆ ಅರಿವಿದೆ
ನನ್ನ ಆತ್ಮಸ್ಥೈರ್ಯ ಕುಂದಿಸದೆ
ಬಾಳು ನಂದಿಸದಿರು ಒಲವೇ 

0916ಪಿಎಂ25122020
*ಅಪ್ಪಾಜಿ ಎ ಮುಸ್ಟೂರು*

*ಟಂಕಾ*

ಎದೆಯ ನೋವು
ಹೃದಯದುಂಬಿ ನನ್ನ 
ಕಣ್ಣ ಕಂಬನಿ
ಮನವ ತೊಳೆಯಲು 
ವೇದನೆಯು ದೂರಾಯ್ತು

0812ಪಿಎಂ26122020
*ಅಪ್ಪಾಜಿ ಎ ಮುಸ್ಟೂರು*

*ಪ್ರೀತಿ ಅಮಲು*

ಪ್ರೀತಿ ಜೇನಿನಂತೆ
ಸವಿಯಾದ ಅನುಭೂತಿ 
ಇಷ್ಟ ಪಟ್ಟಿದ್ದು ಕೈಗೆಟುಕಲು
ಪ್ರೀತಿ ಒಮ್ಮೊಮ್ಮೆ 
ಕುಟುಕಿದಾಗ ಯಾತನೆ
ಇಷ್ಟವಿಲ್ಲದೇ ಪಡೆಯ ಬಯಸಲು
ಪ್ರೀತಿ ಅಮಲು 
ಸವಿದಾಗಲೂ ಕಚ್ಚಿಸಿಕೊಂಡಾಗಲೂ
ಕಾಯುವ ಯಾತನೆಯೂ ಹಿತಕರವೂ
ಅದು ಹೃದಯದ ಭಾವಗಳಿಗೆ ಬಿಟ್ಟದ್ದು 

0853ಪಿಎಂ26122020
*ಅಪ್ಪಾಜಿ ಎ ಮುಸ್ಟೂರು*

#ಅಮುಭಾವಬುತ್ತಿ ೨೬೯

*ನಾಳೆಯ ಭರವಸೆಯೊಂದಿಗೆ*

ಅವಳು ಬಿಟ್ಟು ಹೋದ ನೆನಪುಗಳು
ಮತ್ತೆ ಮತ್ತೆ ಕಾಡುತ್ತಿವೆ ಕೊಲ್ಲುತ್ತಿವೆ
ಬಯಕೆಗಳ ಬೇಲಿ ದಾಟಿ ಬಂದವಳು 
ಬರಿ ಬವಣೆಗಳ ಕೊಟ್ಟ ಕಾರಣ ನೊಂದಿಹೆ
ಭಾವನೆಗಳ ಸಾಂಗತ್ಯದಲ್ಲಿ ಹೊಮ್ಮುವ ಪದಗಳ 
ಕಟ್ಟಿ ಹಾಕಬಹುದೇ ಎದರಿಸುವ ತಂತ್ರಗಳಿಂದ 
ಬಣ್ಣದ ಚಿಟ್ಟೆಯ ಸ್ನೇಹವ  ಮಾಡಿ 
ನೋವಿನ ಬೆಂಕಿಯಲ್ಲಿ ಬಿದ್ದು ಹೊರಳಾಡ್ತಿದೆ 
ನ್ಯಾಯಸಮ್ಮತ ನಡವಳಿಕೆಯಿಂದಾಗಿ 
ಇನ್ನೂ ನಂಬಿಕೆ ಉಳಿಸಿಕೊಂಡಿರುವೆ
ನಾಳೆ ಎಂಬ ಭರವಸೆಯೊಂದಿಗೆ 

೦೪೧೯ಎಎಂ೨೭೧೨೨೦೨೦
*ಅಪ್ಪಾಜಿ ಎ ಮುಷ್ಟೂರು* 
 

*ನಿನ್ನ ಬೆಂಬಲವೇ*

ನಿನ್ನ ಬಾಹುಬಂಧನವೇ ಸ್ವರ್ಗ
ಜೊತೆಯಲ್ಲಿ ನೀನಿದ್ದರೆ ಅದೇ ಜೀವನ 
ಪ್ರೀತಿಯ  ಸಮ್ಮಿಳಿತದ ಸಂಬಂಧ 
ಸ್ನೇಹ ಛಾಯೆಯ ಅನುಬಂಧ 
ಬಾಳ ಪಯಣದಲ್ಲಿ ಅದುವೇ ಮಧುಚಂದ್ರ 
ನಿನ್ನ ನಗುವೇ ಎಲ್ಲಕ್ಕೂ ಸ್ಫೂರ್ತಿ 
ಬೆನ್ನ ಹಿಂದಿನ ನಿನ್ನ ಬೆಂಬಲವೇ 
ಕಲ್ಲು ಮುಳ್ಳು ಹಾದಿಯಲ್ಲಿ 
ಗೆಲ್ಲುವ ಭರವಸೆ ತುಂಬಿದೆ 
ನೀನಿರುವ ತನಕ ನನಗೆ ನಿಶ್ಚಿಂತೆ 
ನೀನಿರುವ ಖುಷಿಯಲ್ಲಿ ಇಲ್ಲ ಕೊರತೆ 
ನಿನ್ನೊಳಗೆ ನಾ ಅನುರಕ್ತನಾದೆ 
ನಿನ್ನಾಸರೆಯೊಳಗೆ ಬೆಳೆವ ಬಳ್ಳಿಯಾದೆ
ನಾಳೆಯ ನೀರೀಕ್ಷೆ ನನಗಿಲ್ಲ
ಇಂದಿನ ಪರೀಕ್ಷೆ ಗೆದ್ದು ಬೀಗುವೆನು 

೦೪೩೪ಎಎಂ೨೭೧೨೨೦೨೦
ಅಪ್ಪಾಜಿ ಎ ಮುಸ್ಟೂರು 

ಮೂಡುತಿದೆ ಬೆಳಗುt5t
ನೋಡದರ ಸೊಬಗು 
ಮುಂಜಾನೆಯ ಹೊತ್ತು 
ಪ್ರಕೃತಿಯ ಸಂಪತ್ತು 

ಎಲೆಗಳ ಒಡಲ ಮೇಲೆ 
ಹೊಳೆವ ಇಬ್ಬನಿ ಮಾಲೆ 
ಉಲಿವ ಹಕ್ಕಿಗಳಿಂಚರ
ಸುಪ್ರಭಾತದ ಸುಸ್ವರ

ತಂಗಾಳಿಗೆ ತಣಿದ ಇರುಳಿಗೆ
ವಿಶ್ರಾಂತಿಯ ಜೋಗುಳ
ದಿನ ತೆರೆಯಿತು ಇನ ಬರಲು
ಇನ್ನಿಲ್ಲ ಕತ್ತಲಿನ ಉಪಟಳ 

ಜೀವ ಚೇತನದ ಮುಂಜಾವು 
ಭಾವ ಹೊಮ್ಮಿಸುತಿಹ ಸುಮವು
ಇನ್ನು ದಿನವೆಲ್ಲ ಹೊಸತನ
ಕಾಯಕಕೆ ಅಣಿಗೊಳಿಸುವ ಕ್ಷಣ

ಏಳಿ ಎದ್ದೇಳಿ ಬೆಳಕಾಯಿತು
0630ಎಎಂ11082018


*ಗಜಲ್*

ಎದೆಯ ನೋವುಗಳು ನೂರಿರಲಿ ಕೇಳು ಮನವೆ 
ಆಗುವುದೆಲ್ಲಾ ಒಳ್ಳೆಯದಕ್ಕೆ ಇಲ್ಲಿ ಕೇಳು ಮನವೆ 

ಹೆಜ್ಜೆ ಹೆಜ್ಜೆಗೂ ಅಡೆತಡೆಗಳನ್ನುಂಟು ಬದುಕಲ್ಲಿ 
ಎಲ್ಲ ಕಷ್ಟಗಳ ಗೆಲ್ಲಬೇಕು ಇಲ್ಲಿ ಕೇಳು ಮನವೆ 

ಬೆನ್ನಿಗೆ ಚೂರಿ ಹಾಕುವವರೇ ಹೆಚ್ಚು ಜಗದಲ್ಲಿ 
ಬೇರುಬಿಟ್ಟು ನೆರಳು ನೀಡಬೇಕಿಲ್ಲಿ ಕೇಳು ಮನವೆ 

ದುಷ್ಟಕೂಟದ ಕೆಟ್ಟ ಕಲ್ಪನೆಗಳಿಗೆ ಎಂದಿಗೂ  ಅಂತ್ಯವಿಲ್ಲ 
ನಾಯಿಬಾಲ ನೆಟ್ಟಗಾಗುವುದಿಲ್ಲ ಇಲ್ಲಿ ಕೇಳು ಮನವೆ 

ಅಮುವಿನ ಅನುಭವದ ಮಾತುಗಳು  ಸುಳ್ಳಾಗುವುದಿಲ್ಲ
ಸತ್ಯದ ಹಾದಿಯನೆಂದು ಬಿಡಬಾರದು ಇಲ್ಲಿ ಕೇಳು ಮನವೆ 

೦೫೨೮ಪಿಎಂ೦೨೦೧೨೦೨೧
*ಅಪ್ಪಾಜಿ ಎ ಮುಸ್ಟೂರು* 


ಪ್ರೀತಿಯ ಸೆಳೆತದ 
ಮೋಹಕ್ಕೆ ಸಿಲುಕಿ 
ಪರಿಪರಿಯಾಗಿ ನೊಂದೆ 
ಆತುರದಿ ದುಡುಕಿ 

ಕಾಡ್ಗಿಚ್ಚಿಗೆ ಸಿಕ್ಕ ತರಗೆಲೆಯಂತೆ 
ಉರಿದು ಕರಕಲಾಯಿತು ಬದುಕು 
ಪ್ರವಾಹಕ್ಕೆ ಸಿಕ್ಕ ಹಾಯಿದೋಣಿಯಂತೆ     
ಕಂಗೆಡಿಸಿದೆ ನನಗೊದಗಿದ ಕೆಡುಕು 

ದೂರದ ಬೆಟ್ಟದ ನುಣುಪಿಗೆ ಸೋತು 
ಗಿರಿ ಕಣಿವೆಗೆ ಬಿದ್ದಿರುವೆ ಎತ್ತುವವರಿಲ್ಲ 
ಚಂದದ ಸುಮದ ಚೆಲುವಿಗೆ ಮರುಳಾದೆ 
ಬಳಿಯಲ್ಲೇ ಮುಳ್ಳಿರುವುದು ಅರಿವಿಗೆ ಬರಲಿಲ್ಲ 

ಬಲ್ಲವರ ಮಾತು ರುಚಿಸದು ಇದರ ಪರಿಣಾಮ 
ವಿಷ ನುಂಗಿ ವಿಲವಿಲ ಒದ್ದಾಡುತ್ತಿರುವೆ
ಇಲ್ಲಸಲ್ಲದ ಆಪಾದನೆಗಳಿಗೆ ತುತ್ತಾಗಿ 
ಮುತ್ತಿನಂತ ಬದುಕನ್ನೆ ಹೊಡೆದು ಹಾಕಿರುವೆ 

ಮಾಯಾಲೋಕದ ಯಕ್ಷಿಣಿ ಈ ಪ್ರೀತಿ 
ಅರಿಯದೆ ಮರುಳಾದರೆ ತಪ್ಪದು ಪಜೀತಿ 
ಸಹಿಸಲೇಬೇಕಿದೆ ಎದೆಗಿರಿದ ಮೊನಚಿನ ಗಾಯ 
ಮಾಯಲು ಬೇಕಿದೆ ಜನುಮಾಂತರದ ಸಮಯ 

೦೫೫೨ಪಿಎಂ ೦೨೦೧೨೦೨೧
ಅಪ್ಪಾಜಿ ಎ ಮುಷ್ಟೂರು 

ನಿನ್ನ 
ಭಾವದೊಳಗಿನ
ಕಲ್ಪನಾ ವಿಹಾರಿಯು
ನಾನಲ್ಲವೇ 
ಸಖಿ

0846ಪಿಎಂ02012020
*ಪಂಚ ಸೂತ್ರಗಳು*

*ನಂಬಿಕೆ* ಯು ಇರಬೇಕು 
ಇಡುವ ಪ್ರತಿ ಹೆಜ್ಜೆಯಲ್ಲೂ
ಜೊತೆ ಬಾಳುವ ಪ್ರತಿ ಜೀವಿಯಲ್ಲೂ
ಹಿತ ಬಯಸುವ ಪ್ರತಿ ಸಂಬಂಧದಲ್ಲೂ

*ಗೌರವ* ಪಡೆಯಬೇಕು
ಜೀವನದ ಈ ಪಯಣದಲ್ಲಿ 
ಬದುಕುವ ರೀತಿಯಲ್ಲಿ 
ಗೆಲುವಿನ ಈ ಹೋರಾಟದಲ್ಲಿ 

*ಪ್ರೀತಿ* ಯಲಿ ಬಾಳಬೇಕು 
ಪ್ರತಿ ಜೀವಿಯನೂ ಪ್ರೀತಿಸಬೇಕು 
ಪ್ರೀತಿ ಬದುಕಿನ ಗುರಿಯಾಗಬೇಕು
ಪ್ರತಿ ಎದೆಯಲೂ ಜಾಗ ಪಡೆಯಬೇಕು 

*ಭಾವನೆ* ಗಳ ಹಂಚಿಕೊಳ್ಳುತ
ಇತರರ ಭಾವನೆಗಳ ಗೌರವಿಸಬೇಕು
ಧನಾತ್ಮಕ ಭಾವನೆ ಹೊಂದಬೇಕು 
ನೋವು ನಲಿವುಗಳ ಹಂಚಿಕೊಳ್ಳಬೇಕು 

*ಸಾಮರಸ್ಯ* ದಿ ಬಾಳಬೇಕು 
ಪರಸ್ಪರರ ಆದರಿಸಬೇಕು
ಕೊಡು ಕೊಳ್ಳುವ ಮನಸಿದ್ದರೆ 
ನೆಮ್ಮದಿಯ ಸೂರಾಗುವುದೀ ಧರೆ

ನಂಬಿಕೆಯ ದೋಣಿಯಲಿ
ಗೌರವದ ಯಾತ್ರೆಯಲಿ 
ಪ್ರೀತಿಯ ಗುರಿ ಮುಟ್ಟಲು 
ಭಾವನೆಗಳ ಸಾಮರಸ್ಯವಿರಲಿ

0646ಎಎಂ03052019

*ಅಮು ಭಾವಜೀವಿ*
*ನಾವೇಕೆ ಅದಕರ್ಹರಲ್ಲ*

ನಿತ್ಯ ರಸ್ತೆಯ ಮೇಲೆ 
ನಮ್ಮ ಹೋರಾಟ
ಹಗಲು ಇರುಳೆನ್ನದೆ
ದುಡಿದ ನಮ್ಮ ಮೇಲೇಕೆ ಹಟ

ವಾಹನ ಮಾತ್ರ ಸರ್ಕಾರಿ
ನೌಕರರೇಕೆ ಸರ್ಕಾರದವರಲ್ಲ
ಮನೆ ಮಠ ಬಿಟ್ಟು ಬಂದು
ದುಡಿವ ನಾವೇಕೆ ಅದಕರ್ಹರಲ್ಲ

ಚಾಲಕ ಚಕ್ರ ತಿರುಗಿಸಿದರೇನೇ
ನಿರ್ವಾಹಕ ಹಣ ಸಂಗ್ರಹಿಸಿದರೇನೇ
ಇಲಾಖೆಗೆ ಆರ್ಥಿಕ ಬಲ ತುಂಬುವುದು
ಅಧಿಕಾರಿ ವರ್ಗ ಐಷಾರಾಮಿಯಗಿರುವುದು

ಎಂಥ ಸಂದಿಗ್ಧತೆಯಲ್ಲಿಯೂ 
ದುರ್ಗಮ ಹಾದಿಯಲ್ಲಿಯೂ
ಜನರ ಸುರಕ್ಷತೆಗೆ ಶ್ರಮಿಸುವ
ನಮಗೇಕಿಲ್ಲ ಸರ್ಕಾರಿ ರಕ್ಷಣೆ 

ದುಡಿಸಿಕೊಳ್ಳುವಿರಿ ಗಾಣದೆತ್ತಿನಂತೆ
ನಮ್ಮನೇಕೆ ಕಾಣಲಾರಿರಿ ಸರ್ಕಾರಿ ನೌಕರರಂತೆ
ಸಾರಿಗೆಯ ಸವಾಲು ಜಯಿಸುವ 
ನಮ್ಮನೇಕೆ ಕಾಣುವಿರಿ ಜಾನುವಾರುಗಳಂತೆ

ಓಡುವ ಬಸ್ಸಿನ ಚಕ್ರಗಳು ನಾವು
ನಾವು ಸವೆದರೇನೇ ನಿಮ್ಮ ಉಳಿವು
ನಮ್ಮನ್ನು ನೌಕರರೆಂದು ಪರಿಗಣಿಸಿ 
ನಮ್ಮ ಬೆಂಬಲಕೆ ಎಲ್ಲರೂ ಕೈ ಜೋಡಿಸಿ 

0910ಪಿಎಂ13122020
*ಅಪ್ಪಾಜಿ ಎ ಮುಸ್ಟೂರು*
*ಪ್ರೀತಿ*

ಸಾಕೆನ್ನುವಷ್ಟು ಪ್ರೀತಿ ಸಿಕ್ಕಿತು
ನನ್ನವಳ ಮಡಿಲೊಳಗಿಂದ
ಬಂದ ನೋವುಗಳೆಲ್ಲ ಮಾಯವಾದವು
ಅವಳ ನಿರ್ಮಲ ಒಲವಿನಿಂದ
ಎಲ್ಲಾ ಅವಮಾನಗಳ ಸಹಿಸಿ
ಗೆಲ್ಲುವ ಛಲ ತುಂಬಿತು ಈ ಬಂಧ 
ಉಸಿರಿರುವವರೆಗೆ ಋಣಿ ನಾನು 
ಅವಳ ನಿಸ್ವಾರ್ಥ ಪ್ರೀತಿಗೆ

1021ಪಿಎಂ14122020
*ಅಪ್ಪಾಜಿ ಎ ಮುಸ್ಟೂರು*

ಎಲ್ಲರೂ ನಮ್ಮವರೇ 
ನಾವೆಲ್ಲ ಕುಲಬಾಂಧವರು 
ವೈಯಕ್ತಿಕ ಭಿನ್ನತೆಗಳ ದೂರವಿರಿಸಿ 
ಸಾಮೂಹಿಕ ಯಶಸ್ಸಿನತ್ತ ಧಾವಿಸಿ 
ಇಟ್ಟ ನಂಬಿಕೆಗಳಿಗೆ 
ದಿಟ್ಟ ಉತ್ತರ ಕೊಟ್ಟು 
ಸ್ಪಂದಿಸುವ ಮನವಿರಲಿ ಮೊದಲು 
ಗೆಲುವು ಬೀಗುವುದಕ್ಕಲ್ಲ 
ಹೊಣೆಗಾರಿಕೆಯ ಭಾರ ಹೊತ್ತು 
ಹೆಣಗಾಡುವ ಎದೆಗಾರಿಕೆಯು
ಪರ ವಿರೋಧಗಳಿಗಿಂತ
ಪರಸ್ಪರ ಹೊಂದಾಣಿಕೆಯಿಂದ 
ಕೊಟ್ಟ ಭರವಸೆಗಳ ಮರೆಯದೆ 
ನೊಂದವರ ಅಶಕ್ತರ ಶಕ್ತಿಯಾಗಿ 
ಲಾಬಿಗಳಿಗೆ ಮಣಿಯದೆ 
ಲೋಭಗಳಲ್ಲಿ ಮೈಮರೆಯದೆ 
ಲಾಭ ನಷ್ಟಗಳ ಲೆಕ್ಕ ಹಾಕದೆ 
ಲವಲವಿಕೆಯ ಸಮೂಹಶಕ್ತಿ 
ಮುನ್ನಡೆಸಲಿ ಸರ್ವರನು 

೦೫೧೫ಎಎಂ೧೬೧೨೨೦೨೦
ಅಪ್ಪಾಜಿ ಎ ಮುಸ್ಟೂರು 

*ಆಸೆ* 

ನಿನ್ನ ಕಣ್ಣ ರೆಪ್ಪೆಯೊಳಗೆ 
ಸಣ್ಣದೊಂದು ಬಿಂಬವಾಗುವಾಸೆ 
ನಿನ್ನ ಚೆಂದ ಕೈ ಬ(ಳೆ)ಲೆಯೊಳಗೆ 
ಇಂಪಾದ ಶಬ್ದವಾಗುವಾಸೆ 
ನಿನ್ನ ಅಧರಗಳೊಳಗೆ 
ಮಧುರ ನಗುವಾಗುವಾಸೆ 
ನಿನ್ನ ನೀಳ ಕೇಶದೊಳಗೆ 
ನಲಿವ ಸುಮವಾಗುವಾಸೆ 
ನಿನ್ನೊಡಲ ಮಡಿಲೊಳಗೆ 
ಮಗುವಾಗಿ ಮಲಗುವಾಸೆ 
ಚಂದಿರವದನೆ ನಿನ್ನೊಲವಿಗೆ 
ಸಾಗರವಾಗಿ ಉಕ್ಕಿಬರುವೆ ಬಳಿಗೆ 

೦೫೫೮ಎಎಂ೧೬೧೨೨೦೨೦
ಅಪ್ಪಾಜಿ ಎ ಮುಸ್ಟೂರು 


ಚಿಂತಕರ ಚಾವಡಿ 
ಆಗಿಹೋಯಿತು ರಾಡಿ 
ಗದ್ದುಗೆಯ ಜಿದ್ದಿಗೆ ಬಿದ್ದು 
ತಾವಿರುವ ಸ್ಥಾನವ ಮರೆತು 
ಕಚ್ಚಾಡುವ ಇವರೆಲ್ಲ 
ನಾವು ಆರಿಸಿ ಕಳಿಸಿದ ನಾಯಕರೇ ???
ಜನರ ಬಗ್ಗೆ ಕಾಳಜಿ ಇಲ್ಲದ 
ಗಲೀಜು ರಾಜಕೀಯದ ರೂವಾರಿಗಳು !!!!
ಹಿಂದಿನವರು ಗಳಿಸಿಟ್ಟ ಮಾನ ಸನ್ಮಾನಗಳ
ಕಿತ್ತಾಟ ಕಚ್ಚಾಟ ಎಳೆದಾಟ ರಂಪಾಟ ಮಾಡಿ 
ಕನ್ನಡಿಗರು ತಲೆ ತಗ್ಗಿಸುವಂತಾಯಿತು 
ಎಲ್ಲರೂ ಅವರೇ ಎಲ್ಲವೂ ಅದಕ್ಕೆ 
ತತ್ತ್ವ ಸಿದ್ಧಾಂತಗಳ ಹೊಸಕಿ ಹಾಕಿ 
ಹಣಬಲ ತೋಳ್ಬಲ ಅಧಿಕಾರ ಬಲದಿಂದ 
ಗಬ್ಬು ನಾರುವ ಕೊಚ್ಚಿಯೊಳಗೆ ಬಿದ್ದು 
ಕನ್ನಡಮ್ಮನಿಗೆ ಅವಮಾನ ಗೈಯ್ಯುತಿಹರು 
ನಾಚಿಕೆಯಾಗಬೇಕು ನಾಯಕರೇ ನಿಮಗೆ 
ಶಾಂತಿ ಅಹಿಂಸೆಗಳಿಂದ ಸ್ವಾತಂತ್ರ್ಯ ತಂದ 
ಗಾಂಧೀಜಿಯ ಹೋರಾಟವೇ ನಿಮ್ಮದು ?
ವಿಧಾನಸೌಧದೊಳಗೆ ಕಚ್ಚಾಡುವ 
ನಿಮ್ಮ ತುಚ್ಛ ವರ್ತನೆಗೆ ಧಿಕ್ಕಾರ 
ತಲೆತಗ್ಗಿಸುವಂತೆ ಮಾಡಿದಿರಿ ಮತದಾರ 
ರೈತರ ಬಡವರ ಅಶಕ್ತರ ಪರವಿಲ್ಲದ 
ನಿಮ್ಮ ಅಧಿಕಾರದ ದಾಹಕ್ಕೆ 
ಹಿಡಿಶಾಪ ಹಾಕುವುದು ಒಂದೇ ದಾರಿ 

೦೬೨೨ಎಎಂ೧೬೧೨೨೦೨೦
ಅಪ್ಪಾಜಿ ಎ ಮುಸ್ಟೂರು 

ಈ ನೋಟ ನೂರು 
ಕಥೆ ಹೇಳುತಿದೆ ಗೆಳತಿ 
ನೋವು ತುಂಬಿದ ಕಂಗಳಲೂ
ನಗುವ ನಿರೀಕ್ಷೆ ಹೆಚ್ಚಿದೆ
ಭರವಸೆ ನೀಡುವೆ ನಿನಗೆ 
ಉಸಿರಿರುವವರೆಗೆ 
ಜೊತೆ ಜೊತೆಗೆ ಸಾಗುವೆ
ನೋವು ನಲಿವಾಗಿಸಿ 
ಸಂಭ್ರಮದಿ ಬಾಳೋಣ

0824ಪಿಎಂ17122020
*ಅಪ್ಪಾಜಿ ಎ ಮುಸ್ಟೂರು*

*ದೂರುವ ಮುಂಚೆ*

ಇನ್ನೊಬ್ಬರನ್ನು ದೂರುವ ಮುಂಚೆ 
ಆತ್ಮಾವಲೋಕನ ಮಾಡಿಕೊಳ್ಳುವುದು ಮುಖ್ಯ 
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ 
ನೋಡುವುದು ಮುಖ್ಯ 
ಒಂದು ಕೈಯಲ್ಲಿ ಚಪ್ಪಾಳೆ ಅಸಾಧ್ಯ 
ಎರಡೂ ಕೈ ಕೂಡಿದರೇನೇ ಸದ್ದಾಗುವುದು
ದೂರುವ ಮೊದಲು ದೂರುವವನ 
ಪ್ರಾಮಾಣಿಕತೆಯೂ ಪರೀಕ್ಷಿತವು
ತಾನೇ ತನ್ನ ಬೆನ್ನ ಚಪ್ಪರಿಸುವ ಬದಲು
ಬೇರೆಯವರ ವ್ಯಕ್ತಿತ್ವಕೂ ಬೆಲೆ ಕೊಡಬೇಕು 

0837ಪಿಎಂ18122020
*ಅಪ್ಪಾಜಿ ಎ ಮುಸ್ಟೂರು*

ಒಂದು ಬಾಗಿಲು ಮುಚ್ಚಿದರೇನಂತೆ
ಮತ್ತೊಂದು ಕಡೆ ತೆರೆದೇ ಇರುತ್ತೆ
ಇಣುಕಿ ನೋಡುವ ಮಿಣುಕು ಹುಳು
ಕಾಮಾಲೆ ಕಣ್ಣಿನಲಿ ಜಗ ನೋಡುತಲಿ
ಭ್ರಮೆಯಲೇ ಬದುಕುತಿವೆ  ನಿತ್ಯವೂ 
ಅಭಿಮಾನಿಸದೆ ಅನುಮಾನಿಸುತ
ಅವಹೇಳನದಿ ಜಗದನುಕಂಪ ಗಿಟ್ಟಿಸಿ
ಬೀಗುವರು ಬಾಗಲೊಲ್ಲದವರು

0729ಎಎಂ19122920
ಅಪ್ಪಾಜಿ ಎ ಮುಸ್ಟೂರು 
*ಕಾವ್ಯಕನ್ನಿಕೆ ೧೦*

ವರುಷಗಳೇ ಕಳೆದಂತಾಗಿದೆ
ನಿನ್ನ ಕ್ಷಣ ನೋಡದೆ
ಪ್ರೀತಿಯ ಸೌಧದಲಿ 
ನೆನಪುಗಳ ಸರಪಳಿ 
ತುಂಡಾಗುತಿಲ್ಲ ಇಂದಿಗೂ 
ಅದೆಷ್ಟು ಕಾಡುತಿರುವೆ 
ಓ ನನ್ನ ಕಾವ್ಯಕನ್ನಿಕೆ 

1111ಎಎಂ19122020
*ಅಪ್ಪಾಜಿ ಎ ಮುಸ್ಟೂರು*

ಪ್ರೀತಿಯ ಹೃದಯವ 
ನೋಯಿಸಿ ಹೋದೆಯೇಕೆ 
ತಾಯೊಲವಲೂ ದೋಷ ಕಂಡು 
ದೂಷಿಸಿ ಹೊರಟುಹೋದೆ ಏಕೆ ?

ಕಣ್ಣಲ್ಲಿ ಕಣ್ಣಿಟ್ಟು ಕನವರಿಸಿದ ಪ್ರೀತಿಗೆ 
ಕಂಬನಿಯ ವಿದಾಯ ಹೇಳಿದೆ ಏಕೆ 
ದಯೆ ತೋರದೆ ದೂರ ಮಾಡಿದೆ 
ನಡುನೀರಲ್ಲಿ ಕೈಬಿಟ್ಟು ಹೋದೆಯೇಕೆ ?

ಈ ಮೊರೆಯು ಕೇಳದೆ ನಿನಗೆ 
ಹಿಂತಿರುಗಿ ನೋಡದೆ ನಡೆದೆ 
ವೇದನೆಯ ಹೃದಯ ರೋಧನೆಯ 
ಕೇಳದಷ್ಟು ಕಿವುಡಾಯಿತೇ ನಿನ್ನ ಹೃದಯ 

ನಿನ್ನ ಅರಿಯದೆ ನೊಂದೆ ನಾನು 
ಮೋಹದ ಬಲೆಯಲ್ಲಿ ಸಿಲುಕಿ ಮಡಿದೆನು 
ಸುಖವನ್ನರಸಿ ನೀ ನಡೆದೆ 
ನಿನ್ನ ಬಯಸಿ ನಾ ನೊಂದೆ 

ನಮ್ಮಿಬ್ಬರ ನಂಟಿಗೆ ಇನ್ನೂ 
ಯಾವ ಅಂಟು ಬೆಸೆಯದಿನ್ನೂ 
ನಿನ್ನ ನೆನಪುಗಳ ನೋವನ್ನುಂಡು
ನಿನ್ನದೇ ಗುಂಗಿನಲ್ಲಿ ನುಂಗಿ ಬಾಳುವೆನೆಲ್ಲ ಸಂಕಷ್ಟವನ್ನು 

ಕಾರಣವನ್ನೇ ಹೇಳದೆ ಹೋದೆ 
ಅಪವಾದವನಷ್ಟೇ ನನ್ನ ಮೇಲೆ ಹೊರಿಸಿದೆ
ಹಾಯಾಗಿ ನೀನಿರು ನೀ ಬಯಸಿದಂತೆ 
ನಡುಬೀದಿಯಲ್ಲಿ ಸಾಯುವೇ ನಿನಗೆ ಬೇಡ ಚಿಂತೆ

೧೦೩೪ಪಿಎಂ ೧೯೧೨೨೦೨೦
ಅಪ್ಪಾಜಿ ಎ ಮುಷ್ಟೂರು 

*ನಾನೇಕೆ ಬರೆಯುತ್ತೇನೆ*

ನಾನು ಬರೆಯುತ್ತಿದ್ದೇನೆ 
ನನ್ನೊಳಗಿನ ಖಾಲಿಯಾಗದ 
ಭಾವಗಳಿಗೆ ಅಕ್ಷರ ರೂಪ ಕೊಡುತ್ತಾ
ನನ್ನ ಈ ಭಾವಗಳು 
ಇನ್ಯಾರದೋ ನೋವುಗಳು 
ಮತ್ಯಾರದೋ ಕಲ್ಪನೆಗಳು 
ನೊಂದವರು ನಿರಾಳಗೊಂಡು 
ಪ್ರೀತಿಸುವವರು ಪುಳಕಿತಗೊಂಡು 
ಆಸ್ವಾದಿಸುವ ಅಭಿಮಾನಿಸುವ 
ಭಾವ ಹಡೆವ ಬಂಧು ನಾನು 
ಬೇಸರಿಸದೆ ಬೆನ್ತಟ್ಟಿ ಇನ್ನೂ 
ಬರೆದು ಬರೆದು ನೀಡುವೆ ನಿಮಗಾಗಿ 
ನಿಮ್ಮ ಭಾವದ ಹಸಿವ ತಣಿಸುವುದಕ್ಕಾಗಿ 
ಕುಲುಮೆಯಂತೆ ಕುದಿಯುವೆ
ಚಿಲುಮೆಯಂತೆ ಚಿಮ್ಮಿವೆ
ಒಲುಮೆಯಿಂದಲಿ ಎತ್ತಿಕೊಳ್ಳಿರಿ ಎಲ್ಲಾ 

೦೫೫೬ಪಿಎಂ ೨೦೧೨೨೦೨೦
*ಅಪ್ಪಾಜಿ ಎ ಮುಸ್ಟೂರು*
    *ಸೋಲೊಂದು ಪಾಠ*

ಸೋಲೊಂದು ಪಾಠ
ಗೆಲ್ಲಲೊಂದು ಹಠ
ಬಿದ್ದ ಹೊಡೆತಗಳೆಲ್ಲಾ 
ಎದ್ದು ನಿಲ್ಲಲು ಆಸರೆಗಳು
ಅನುಭವದ ಸಂಪುಟ
ನೀಗುವುದು ಸಂಕಷ್ಟ 
ಸೋತಷ್ಟು ಸಂಯಮದಿಂದ 
ಗೆಲುವಿನ ಅಂತರವ ಕ್ರಮಿಸುತ
ಬಾಳ ಹಾದಿಯಲಿ ನೆಮ್ಮದಿ 
ಪಡೆಯುವುದೇ ಸಾಧನೆ 

0634ಪಿಎಂ22122020
*ಅಪ್ಪಾಜಿ ಎ ಮುಸ್ಟೂರು*




*ಕರೆದರೂ ಕೇಳದಂತೆ*


ಕರೆದರೂ ಕೇಳದಂತೆ 
ಎಲ್ಲಿಗೆ ಹೊರಟಿರುವೆ ನಲ್ಲ 
ಈ ಏಕಾಂತವೂ ಬೇಸರ ತರಿಸಿದೆ 
ನಿನಗೇಕೆ ಮಾತಾಡುವ ಮನಸ್ಸಿಲ್ಲ 

ಪ್ರೀತಿಯಲ್ಲಿ ಅನುಮಾನ ಬೇಡವೇ ಬೇಡ 
ಅದರಿಂದ ಕಾಡುವುದು ದುಗುಡ 
ಕೇಳು ನೀನೊಮ್ಮೆ ಮನದ ಮಾತು 
ಆ ಹಳೆಯ ಕಹಿ ಘಟನೆಗಳನ್ನೆಲ್ಲ ಮರೆತು 

ನಿಸರ್ಗದ ಈ ಸುಂದರ ತಾಣ 
ಚೆಲುವಿಲ್ಲ ಅದಕ್ಕೂ ಹಿಡಿದಿದೆ ಗ್ರಹಣ 
ಒಮ್ಮೆ ಹಿಂತಿರುಗಿ ನೋಡಿ ಮಾತಾಡಿಸು
ಎದೆಯ ವೇದನೆಯ ನೀ ನೀಗಿಸು

ಈ ಮಂಜಿನಂತೆ ಕರಗಿ 
ಹೋಗಲಿ ನಿನ್ನೊಳಗಿನ ಮೌನ 
ಈ ಪ್ರಕೃತಿಯ ಮಡಿಲೊಳಗೆ 
ನಾವು ಒಂದಾದರೆ ಸುಂದರ ಜೀವನ 

ತೊರೆದು ಹೋಗದಿರು ದೂರ 
ಕಳೆದುಕೊಂಡ ಹೃದಯದ ಭಾರ 
ಅರ್ಥವಾಗದು ನಿನಗೆ ಈಗ 
ಅದಕ್ಕೂ ಮುಂಚೆ ನೀ ಬಂದು ಸೇರು ಬೇಗ 

ನನ್ನ ತೋಳುಗಳು ಕಾತರಿಸುತ್ತಿವೆ 
ನಿನ್ನ ಆಸರೆಯ ಬಯಸಿ 
ಈ ನಮ್ಮ ಅನುಬಂಧ ಬೆಸೆಯಲಿ 
ಖುಷಿಯಿಂದ ಬಾಳೋಣ ಸಂಭ್ರಮಿಸಿ 

೦೮೧೫ ಎಎ೦೨೫೦೨೦೨೦
*ಅಮು ಭಾವಜೀವಿ ಮುಸ್ಟೂರು* 


*ನಮಸ್ತೇ ಅಮು ಭಾವಜೀವಿ ಸರ್ 💐 🤝 🙏*

*ಕರೆದರೂ ತಿರುಗಿ ನೋಡದ ನಲ್ಲನಿಗೆ ಬರೆದ ನುಡಿಗಳು ಚಂದದ ಸಾಂಗತ್ಯವಿಲ್ಲದ ಬದುಕು ಶೂನ್ಯ ನನ್ನ ಬಿಟ್ಟು ಹೋಗಬೇಡ ನನ್ನ ಜೊತೆ ಮಾತಾಡಲು ಮನಸು ಇಲ್ಲವೇ.... 👌👌*

*ಯಾವಾಗ ಪ್ರೀತಿಯಲ್ಲಿ ಅನುಮಾನ ಬರುತ್ತೊ ಅವತ್ತೆ ನಮ್ಮ ಮನಸು ಮಸಣದ ಹೆಣವಾಗಿ ಬಿಡುತ್ತದೆ ಮನದ ಮಾತ ಕೇಳದೇ ಹೋಗಬೇಡ ಮುಂದೆ ಬದುಕೋಣ ಕಹಿ ಘಟನೆಗಳ ಮರೆತು 👌👌*

*ನಾವಿಲ್ಲಿ ಕೂಡಿರುವುದು ನಿಸರ್ಗದ ಮಡಿಲಲ್ಲಿ ಅದೇಕೆ ಮುಖ ತಿರುಗಿ ನಿಂತಿರುವೆ ಆ ಸೂರ್ಯನಿಗೆ ಇಡಿದಂಗೆ ನಿನಗೂ ಗ್ರಹಣ ಇಡಿದಿದೆಯಾ... ಒಂದೇ ಒಂದು ಸಾರಿ ನೀ ನನ್ನ ತಿರುಗಿ ನೋಡು ನಮ್ಮಿಬರ ಬಾಳಾಗುವುದು ಸುಖ ಸಂತೋಷದ ಬೀಡು 👌👌*

*ಒಟ್ಟಾರೆ ಕವನ ಚೆನ್ನಾಗಿದೆ ಶುಭವಾಗಲಿ ನಮಸ್ಕಾರ 🙏*

*ಪ್ರೇಮಾರ್ಜುನ*

ಸುರೇಶ್ ನೇಗಿಲಗುಳಿ ಅವರ ಅಭಿಪ್ರಾಯ 

ಕಿವಿ ಕಿವುಡಾಗುಸಿದ ಬಗ್ಗೆ ದುಗುಡ,ಒಲವು ಇಲ್ಲದಾಗಲು ಸಾಧ್ಯವೇ?ಜೊತೆ ಸೇರುವ ಸಮಯ ಸನ್ನಿವೇಶವನ್ನು ಪರಿಗಣಿಸು,ಬಂದು ಬಿಡು ಎಂಬ ಭಾವ ಕೊಟ್ಟವು


ಎಂಎನ್ ತೇಜಸ್ವಿ: ಅದ್ಭುತವಾದ ಕವಿತೆಯ ಸಾಲುಗಳು 👌👌🌹
ರೇಷ್ಮ ಕಂದಕೂರು: Super sir
+91 97314 04138: ಮಾನವ ಮೂಳೆಮಾಂಸಗಳ ತಡಿಕೆ
ಪದಪ್ರಯೋಗ ಅದ್ಭುತ ಸಾಹಿತಿಗಳೇ


*ಅಮು ಭಾವಜೀವಿ ಮುಸ್ಟುರು ರವರ ಕವನ*

*ಕರೆದರೂ ಕೇಳದಂತೆ*

*ಮನಸ್ತಾಪ ಹೊಂದಿ ದೂರ ಸರಿಯುತ್ತಿರುವ ತನ್ನ ನಲ್ಲನಿಗೆ ಈ ಒಲವಿನ ಪ್ರೀತಿಯ ಹೃದಯದ ಮಾತುಗಳು ಕೇಳಿಸದೇ??.ಕರೆದರೂ ಕೇಳದಂತೆ ಏಕೆ ಈ ಮೌನ ಎಂದು ಮನದ ದುಗುಡವನ್ನು ವ್ಯಕ್ತಪಡಿಸುವ ಒಂದು ವಿರಹ ವೇದನೆ ತಾಳಲಾರದ ಹೆಣ್ಣಿನ ಧ್ವನಿಯಾಗಿ ಕವನ ಮೂಡಿ ಬಂದಿದೆ*

ಈ ಮಂಜಿನಂತೆ ಕರಗಿ
ಹೋಗಲಿ ನಿನ್ನೊಳಗಿನ ಮೌನ
ಈ ಪ್ರಕೃತಿಯ ಮಡಿಲೊಳಗೆ
ನಾವು ಒಂದಾದರೆ ಜೀವನ ಸುಂದರ

👆🏽👌🏽👌🏽👌🏽 *ಸರ್*

*ಧನ್ಯವಾದಗಳು*

*ಶಶಿಧರ್ ಅಮೃತಸಿಂಚನ*
*ಹೆಣ್ಣೆಂದರೆ ಹೆಮ್ಮೆ*

ಒಡಲೊಳಗೆ ಬೆಂಕಿ ಬಿದ್ದರೂ
ಮೊಗದಲಿ ನಗುವ ಜೀವ ಹೆಣ್ಣು 
ಮನದೊಳಗೆ ನೂರಾಯಸೆಗಳಿದ್ದರೂ
ಬದುಕಲಿ ಪರಿತ್ಯಕ್ತೆಯಾಗಿರುವಳು ಹೆಣ್ಣು 
ಹೃದಯದಲಿ ನೋವು ಆಳಿದರೂ
ನಗುವ ಹಂಚಿ ಬಾಳ ಪೊರೆಯುವಳು ಹೆಣ್ಣು 
ಕೈಹಿಡಿದವನ ಅಶಕ್ತತೆಯ ತೋರಗೊಡದೆ
ಬದುಕಿನ ಯಾನಕೆ ಶಕ್ತ ಸಾರಥಿಯಾಗುವಳು ಹೆಣ್ಣು 
ತನ್ನೆದೆಯ ಭಾವಗಳಿಗೆ ಪೆಟ್ಟು ಬಿದ್ದರೂ
ಸಂಸಾರದ ಗುಟ್ಟು ರಟ್ಟು ಮಾಡದೆ ಬಾಳುವಳು ಹೆಣ್ಣು 
ನಂಬಿಸಿದವರು ನಡುನೀರಲ್ಲಿ ಕೈಬಿಟ್ಟರೂ
ಬಾಳನೌಕೆಯ ದಡ ಮುಟ್ಟಿಸುವಳು ಹೆಣ್ಣು 
ಹೆಣ್ಣು ಹುಟ್ಟಿತೆಂದು ಕುಗ್ಗಿಹೋಗದೆ
ಹೆಮ್ಮೆಯಿಂದ ಹೇಳಿ ಮಗನಿಗಿಂತಲೂ
ಮಗಳೇ ಹೆಚ್ಚು ಎಂದು 

0425ಎಎಂ21022021
ಅಮುಭಾವಜೀವಿ ಮುಸ್ಟೂರು 


ತಪ್ಪುಗಳನ್ನು ಅಳಿಸಲಾಗದು 
ಆದರೆ ತಿದ್ದಿಕೊಳ್ಳಬಹುದು
ತಪ್ಪು ಮಾಡದವರಾರಿಲ್ಲ
ಆದರೆ ತಿದ್ದಿ ನಡೆವವರಿಗೆಂದೂ ಸೋಲಿಲ್ಲ
ತಪ್ಪು ಅರಿಯದೇ ಆದರೆ ಕ್ಷಮೆಯಿದೆ
ಅರಿತು ಮಾಡುವ ತಪ್ಪಿಗೆ ಶಿಕ್ಷೆ ಬೇಕಿದೆ
ತಪ್ಪು ಮಾಡಿ ಮೆರೆಯದಿರು
ಒಪ್ಪಿಕೊಳ್ಳವುದೇ ಪ್ರಾಯಶ್ಚಿತ್ತವು

0753ಪಿಎಂ21022021
*ಅಮುಭಾವಜೀವಿ ಮುಸ್ಟೂರು*

*ಕಂಬನಿ*

ಈ ಕಂಬನಿಗೂ ಕೂಡ 
ಬೇಜಾರಿದೆ ನೀ ನೊಂದುದಕೆ
ಬದುಕು ಕೊಟ್ಟ ಹೊಡೆತಕೆ
ಸೋತ ಹೃದಯದ ತಲ್ಲಣಕೆ
ಕಣ್ಣ ಹನಿಯ ಕಾಣಿಕೆ 
ಕಂಪಿಸುತ್ತಿದೆ ಮನವು 
ತಂಪಿಲ್ಲದ ಬದುಕಿಗಾಗಿ

0700ಎಎಂ22022021
*ಅಮುಭಾವಜೀವಿ ಮುಸ್ಟೂರು*


[2/22, 7:36 AM] +91 6364 619 967: ಕಣ್ಣ ಹನಿ  ಕಾಣಿಕೆ "wow  amezing words amu🌹ಶೌಕತ್ ಅಲ

*ಹಾಯ್ಕು

*ದಾರಿ*

ನೀನು ಬರುವ 
ದಾರಿ ಕಾದೆ ನಿತ್ಯವೂ
ಸುಳಿವೇ ಇಲ್ಲ 

*ಆಸೆ*

ಬಾಳೋ ಜೀವಕೆ
ಆಸೆ ದುಃಖಕ್ಕೆ ಮೂಲ 
ತಿಳಿಯಲಿಲ್ಲ 

0140ಪಿಎಂ22022021
*ಅಮುಭಾವಜೀವಿ ಮುಸ್ಟೂರು*

*ಕೀಲಿಕೈ*

ಎನ್ನ ಹೃದಯ ನಿನಗೆ ಮೀಸಲು 
ನೀನೆಂದಿಗೂ ಅದಕೆ ಕಾವಲು 
ಪ್ರೀತಿಯ ಕೀಲಿಕೈ ನಿನ್ನೊಪ್ಪಿಗೆಯಲ್ಲಿದೆ 
ಕದ ತೆರೆಯುವ ಮೂಲಕ ಖುಷಿಯನು ಹಂಚು
ನಲಿಯುತ ಅಡಿಯಿಡುವೆ ಆ ಗುಡಿಗೆ
ನಗುವಿನ ಬೆಳಕ ನೀ ಚೆಲ್ಲು
ನನ್ನೊಲವಿಗೆ ಆಸರೆಯಾಗಿ ನಿಲ್ಲು
ಬಾಳಿನ ಬುತ್ತಿ ಬಿಚ್ಚಿ ಸವಿಯೋಣ

0158ಪಿಎಂ22022021
*ಅಮುಭಾವಜೀವಿ ಮುಸ್ಟೂರು*

ನಂಬಿಕೆಯ ಗೋಡೆ 
ಕುಸಿದು ಬೀಳಲು
ಕನಸುಗಳೆಲ್ಲ ಮಣ್ಣು 
ಪ್ರೀತಿಯ ಆಸರೆ 
ಕಳಚಿಕೊಳ್ಳಲು
ಬದುಕು ನಶ್ವರ
ಸುಳ್ಳಿನ ಸಾಮ್ರಾಜ್ಯದಲಿ
ವ್ಯಕ್ತಿತ್ವ ಸರ್ವನಾಶ
ನೀಡದು ಸಂತೋಷ 

0557ಎಎಂ24022021
ಅಮುಭಾವಜೀವಿ ಮುಸ್ಟೂರು .

ಭಾವವೀಗ ಬಲಿಯಾಗುತಿದೆ
ಬವಣೆ ಹೊತ್ತು ನರಳುತಿದೆ
ಸುಳ್ಳಿನ ಮುಳ್ಳಿನ ಮೇಲೆ 
ನೋವಲಿ ಹೊರಳಾಡುತಿದೆ

ಮತ್ತೆ ಮತ್ತೆ ನೆನೆಯುತ್ತಾ 
ಸತ್ತೆ ಎಂದು ಕೊರಗುತ್ತಾ
ಬಯಲಾದ ಸತ್ಯಕೆ ಹೆದರಿ 
ಭೀತಿಗೊಂಡಿದೆ ನಡುಗುತ್ತಾ 

ಪದಗಳು ಸಾಕ್ಷಿಯಾಗಿರಲು
ಭಾವವು ಸ್ಪಷ್ಟವಾಗಿರಲು
ನೋಡುವ ನೋಟಕೆ ಅನುಮಾನ 
ನ್ಯಾಯ ಮೌನತಳೆದಿರಲು

ಎದೆಯಾಳದಿ ಮೂಡಿದ ಭಾವನೆಗಳು 
ಎದುರಾಡಲು ಸೋತ ಸಾಲುಗಳು 
ಎದುರೀಜಲಾಗದೆ ಚಡಪಡಿಸಿ
ಎದೆಗುಂದವೆ ನೊಂದ ಭಾವಗಳು

ಬೇಡವೇ ಬೇಡ ಈ ಭಾವದ ನಂಟು
ಕಳಚಿಕೊಳ್ಳುತಿದೆ ಬಂಧದ ಗಂಟು
ಉಳಿಸಿಕೊಳ್ಳಲು ಹೆಣಗಾಡುತಿಹೆ
ಬಲಗೊಳಿಸಲಿ ನಂಬಿಕೆಯ ಅಂಟು

0918ಎಎಂ24022021
ಅಮುಭಾವಜೀವಿ ಮುಸ್ಟೂರು 


[2/24, 6:46 PM] ಸಂತೋಷ ಕೆಂಭಾವಿ ಯುಎಸ್ಎ: ಭಾವನೆ ಬತ್ತದ ಅಮುಭಾವಜೀವಿ ...ಸುಂದರ ರಚನೆ ಸರ್ 
👌🙏


ಮಧುರಾಲಿಂಗನ ಬಯಸೋ
ಜೀವಕ್ಕೆ  ಕ್ರೌರ್ಯದ ಆಕ್ರಮಣ 
ಮಧು ಹೀರಿದ ದುಂಬಿಯ ಕೃತ್ಯದಿ
ಪರಾಗ ಸ್ಪರ್ಶದ ಕಾರಣ
ಹೂ ಒಡಲಲಿ ಈಗ 
ಬೀಜಾಂಕುರದ ಪರಿಣಾಮ 
ಸುಮವು ಬಾಡಿ ಕಾಯುದಿಸಿ
ನೊಂದು ನರಳಿದೆ ಕಾಣದೆ ಪ್ರೇಮ 
ನಡು ನೀರಲಿ ಕೊಚ್ಚಿ ಹೋಗುವ 
ಬದುಕಿಗಾಸರೆಯಾದ ಹುಲ್ಲುಕಡ್ಡಿಯೂ ಕೂಡ 
ಮುಳ್ಳಾಗಿ ಚುಚ್ಚಿ ಎದೆಬಗೆದು
ನೋವಿನ ನೆತ್ತರ ಪ್ರವಾಹ 
ಬದುಕನ್ನೇ ಮುಳುಗಿಸುವ ದುಗುಡ 

0108ಎಎಂ25022021

ಬೇಲಿಯೇ ಮೇಲೆ ಬಿದ್ದು 
ಸುಮದೆದೆಯ ಬಗೆದು
ಕ್ರೂರ ದುಂಬಿ ತಂದ
ಪರಾಗಸ್ಪರ್ಶದಿಂಡ
ದಳ ಹರಿದೊಡಲಲಿ
ಅಂಡ ಪಿಂಡಿದುಗಮ
ದುಂಬಿಯ ದೌರ್ಜನ್ಯ ಗೌಣ
ಎದೆಗಿರಿದ ಮುಳ್ಳಿಂದ ನೋವುಲ್ಬಣ
ಬಲವಂತವಾದರೂ ತಪ್ಪು ಹೂವಿಂದೆಂದು
ಬಳಿ ಬರಲಿಲ್ಲ ಯಾವ ಬಂಧು
ಬಿರುಗಾಳಿಗೆ ತುತ್ತಾದ ಜೀವನ ಬಳ್ಳಿಗೆ
ಆಸರೆಯಾದ ಮರವೂ ಕೂಡ ಮುಳ್ಬಿಟ್ಟು
ಕಾಯ ಮೇಲೆರಗಿ ಮತ್ತೆದೇ ನೋವು 
ಅತಿಯಾಗಿ ನೊಂದಿದೆ ಹೂವು
ತೊಟ್ಟುಕಳಚುವ ತನಕ ಈ
ದಿಟ್ಟತನದ ಹೋರಾಟಕಂತ್ಯವಿಲ್ಲ
ಬಿರುಗಾಳಿಯ ಪಿಸುಮಾತಿಗಂಜಿ
ತಂಗಾಳಿ ಕೂಡ ಬಳಿಸುಳಿಯದಲ್ಲ

0130ಎಎಂ25022021
ಅಪ್ಪಾಜಿ ಎ ಮುಸ್ಟೂರು 

ಮೊರೆಯ ಕೇಳು ಮಾಧವ 
ನೀಗು ನನ್ನೆದೆಯ ನೋವ
ಒಂಟಿತನದ ನನ್ನ ವೇದನೆಗೆ
ತೋರು ನೀ ಉಪಶಮನವ

ಬದುಕಿನ ಪ್ರತಿ ಗಳಿಗೆಯಲ್ಲಿ
ಸೋಲುಗಳದೇ ಪಾರುಪತ್ಯ
ಬೇಸತ್ತು ಕೂತ ಮನಸ್ಸಿಗೆ
ಬೇಕು ನಿನ್ನ ಸಾಂತ್ವನದ ಸಾಂಗತ್ಯ

ಚಿರವಿರಹಿಯೆಂಬ ಅನುಕಂಪದ 
ಮಾತು ನನಗೆ ಬೇಡ ಮಾಧವ
ಚಿರಪ್ರೇಮಿಯಾಗಿ ನೀ ಸ್ವೀಕರಿಸಿದ 
ಮೇಲೆ ವಿರಹ ಇನ್ನೆಲ್ಲಿ ಅಲ್ಲವಾ

ಆತ್ಮಸಖ ನೀನೆನಗೆ
ಆತ್ಮಬಲ ತುಂಬಿರುವೆ
ಆನಂದದ ಮೊಸರು ಕಡೆದು
ಆ ನೆಮ್ಮದಿಯ ಬೆಣ್ಣೆ ತೆಗೆದಿರುವೆ

ನನಗೆ ಈಗ ಬೇಕಿರುವುದು
ನಿನ್ನೊಲವಿನ ಕೊಳಲ ದನಿ
ಅದ ಕೇಳದ ನನ್ನೆದೆಯೊಳಗೆ
ಕುದಿಯುತ್ತಿದೆ ನೋವಿನ ಕಂಬನಿ

ಮೊಳಗಿಸು ಮಾಧವ 
ತೊಲಗಿಸು ಈ ನೋವ
ಬಳಲಿದ ಜೀವಕೆ ಮತ್ತೆ
ನೀ ತಂದುಬಿಡು ಚೇತನವ

0814ಎಎಂ25022021
ಅಮು ಭಾವಜೀವಿ ಮುಸ್ಟೂರು


ಒಂದು ಕಡೆ ನಿಲ್ಲುವುದಿಲ್ಲ 
ಮನಸ್ಸು ಮತ್ತು ಬದುಕು
ಬೇಕಾದಾಗ ನಿಲುಕುವುದಿಲ್ಲ 
ಬೇಡವಾದಾಗ ಬಿಡುವುದಿಲ್ಲ 
ನಿತ್ಯ ಬದಲಾಗುವ ಕ್ರಿಯೆ
ಸತ್ಯ ಅರಿಯದ ಮಾಯೆ
ನೋವು ನಲಿವುಗಳ ಏರಿಳಿತ 
ಕಷ್ಟ ಸುಖಗಳ ಸಮ್ಮಿಳಿತ 
ಈ ಪಯಣ ಬದುಕಲು ಪ್ರೇರಣ

0759ಪಿಎಂ25022021
*ಅಮುಭಾವಜೀವಿ ಮುಸ್ಟೂರು*


ಮುದ್ದು ಮುಖದ ಚೆಲುವೆ 
ಕನಸಲರಳಿದ ಹೂವೆ
ಸೆಳೆದಳು ಮುಗ್ಧ ಮನಸನ್ನು 

ಪ್ರೀತಿಯ ಮಧುವನದಿ
ಜೋಡಿ ದುಂಬಿಗಳಂತೆ 
ಕಲೆತು ಸವಿದರು ಅಧರಾಮೃತ

ಅವಳ ತೋಳುಗಳ ಬಾಚಿ
ತಬ್ಬಿ ಹಿಡಿದು ಮೌನದಲಿ
ಮನಬಿಚ್ಚಿದರು ಒಲವಲಿ

ಎದೆಯ ಮೇಲೆ ತಲೆಯಿಟ್ಟು
ಅವಳುಲಿವ ಮಾತಿಗೆಲ್ಲ
ಬಂಧ ಬಿಗಿಗೊಳಿಸಿ ತಲ್ಲೀನನಾದ

ಸುಮದ ಮಧುರ ಗಂಧ
ತಂಗಾಳಿಯ ತಂಪು ಚೆಂದ
ಮೈಮರೆತು ಜಾರಿದವು ಕನಸಿಗೆ

ಸಮಯದ ಪರಿವೇ ಇಲ್ಲ
ಭಾವದಿ ಬೆಸೆದುಕೊಂಡಿವೆಯೆಲ್ಲ
ಚೆಲುವಿನೊಲವ ಜೋಡಿಗಳು

ನಿಶ್ಯಬ್ದದ ರಾತ್ರಿಯಲಿ
ಪ್ರಕ್ಷುಬ್ದಗೊಳ್ಳದ ಮನದಲಿ
ಒಲವಾಮೃತ ಸವಿದವೀ ಜೋಡಿ

ಕನಿಸಿನ ತೆರೆ ಸರಿದಾಗ 
ಹಾಸಿಗೆಯಲಿ ಒಬ್ಬನೇ ಆಗ
ಮಧುರ ಕನಸಿಗೊಲಿದಾನೋ

0305ಪಿಎಂ26022021
ಅಪ್ಪಾಜಿ ಎ ಮುಸ್ಟೂರು 

#ಅಮುಭಾವಬುತ್ತಿ 402

*ಎಲ್ಲಿರುವೆ*

ಕಾಯುತಿರುವೆ ನಿನಗಾಗಿ 
ಎಲ್ಲಿರುವೆ ನನ್ನೊಲವೆ
ಒಂಟಿತನದ ಬೇಗುದಿ 
ಕಳೆಯುತಿದೆ ನೆಮ್ಮದಿ 
ಬೇಗ ಬಳಿ ಬಾ ಚೆಲುವೆ 
ಪ್ರೀತಿಯ ಹಸಿವ ನೀಗಲು 
ಸಂಗಾತಿ ನೀ ಜೊತೆಯಾಗಲು
ಕಾದು ಕುಳಿತಿರುವೆ 
ಇನ್ನು ಸತಾಯಿಸದೆ ಬಂದು ಸೇರು 
ನಮ್ಮೊಲವಿಗಿಲ್ಲ ಯಾವ ತಕರಾರೂ 
ದಂಪತಿಗಳಲ್ಲವೇ ನಾವಿಬ್ಬರೂ 

1026ಪಿಎಂ28022021
 


ನಾನು ನನಗಾಗಿ ಏನನ್ನೂ ಕೇಳುವುದಿಲ್ಲ 
ನನಗಿಲ್ಲದ ಎಲ್ಲವೂ ಸಿಗಲಿ 
ನನ್ನೊಡಲ ಕುಡಿಗಳಿಗಾಗಿ 
ಬಡತನವನ್ನೇ ಹಾಸಿ ಹೊದ್ದು 
ಚಿಂದಿ ಬಟ್ಟೆಯಲ್ಲಿ ಜೀವನ ಕಳೆದು 
ಅರೆಹೊಟ್ಟೆಗೆ ಉಂಡದ್ದು ನನಗಷ್ಟೇ ಸಾಕು 

ಉಳ್ಳವರು ಮಾಡಿದ ಅವಮಾನ 
ಇಲ್ಲದವರ ಕೆಚ್ಚೆದೆಯ ಸ್ವಾಭಿಮಾನ 
ಎಲ್ಲಾ ಪಾಠವನ್ನು ಕಲಿಸಿತು ಜೀವನ 
ನುಂಗಿಕೊಂಡ ನೋವುಗಳೆಷ್ಟೋ 
ಪಟ್ಟ ಕಷ್ಟಗಳು ಬೆಟ್ಟದಷ್ಟು 
ಎದೆಗುಂದದೆ ಬದುಕಿದೆ ಇಷ್ಟಪಟ್ಟು 

ಹಣದ ಮಾನದಂಡದ ಮುಂದೆ 
ಗುಣದ ಮಾನವೀಯತೆ ನಿರರ್ಥಕ 
ಸಹಿಸಿ ಬದುಕಿದಾಗಲೇ ಜೀವನ ಸಾರ್ಥಕ 
ಈಗ ಗೆದ್ದಿರುವೆ ಬದುಕನ್ನು 
ಮುದ್ದಿನಿಂದ ಸಲಹುವೆ ಒಡಲ ಕುಡಿಗಳನ್ನು
ಎದೆಗುಂದದ ಆತ್ಮವಿಶ್ವಾಸವೇ ಹಾದಿ ನನಗಿನ್ನು

೦೮೨೦ಎಎಂ೦೬೦೨೨೦೨೧
ಅಪ್ಪಾಜಿ ಎ ಮುಷ್ಟೂರು 

*ನಡೆ ನುಡಿ*

ನಡತೆಯ ಮೇಲೆ ಗೌರವವಿದೆ 
ನುಡಿಯಲಿ ನಡತೆ ಕಾಣಿಸುತ್ತದೆ
ನಡೆನುಡಿ ಸರಿಯಾಗಿದ್ದರೆ 
ವ್ಯಕ್ತಿತ್ವಕೊಂದು ಬೆಲಿಯಿದೆ
ನಡೆ ನುಡಿ ಅದಲು ಬದಲಾದರೆ
ನಂಬಿಕೆ ದೂರವಾಗುವುದು
ಅಗೌರವ ಹೆಗಲೇರುವುದು
ಎಂದೂ ಹಾಗಾದಿರಲಿ 


0436ಪಿಎಂ06022021
*ಅಪ್ಪಾಜಿ ಎ ಮುಸ್ಟೂರು*

ಎಲ್ಲವೂ ಕೈತಪ್ಪಿಹೋಯ್ತು
ಮೊದಲಾಗಿ ನೀನು ಕೂಡ 
ಆ ನೋವಿನ ಮುಂದೆ 
ಬೇರೇನೂ ಬೇಕಾಗಿಲ್ಲ 
ಸೋಲೊಪ್ಪಿ ಶರಣಾದೆ

0715ಪಿಎಂ06022021
#ಅಮುಭಾವಜೀವಿ


ಅದೇಕೋ ಕಾಣೆ 
ಈ ಇರುಳು ಕೂಡ 
ಬೇಸರವ ಹಡೆಯುತಿದೆ
ನೀನಿಲ್ಲದ ಕಾರಣವಿರಬಹುದು? 

1038ಪಿಎಂ06022021
ಅಮುಭಾವಜೀವಿ

#ಅಮುಭಾವಬುತ್ತಿ 344

*ಮುಂಜಾನೆ ಭಾವ*

ಕತ್ತಲ ಎದೆಯಲ್ಲಿ 
ಬೆಳಕಿನ ಭರವಸೆ ತಂದು 
ಮುಂಜಾನೆಯ ಮಂಜಿನಲಿ
ನಿಸರ್ಗದ ಮೊಗ ಒರೆಸಿ 
ದಿನದಾರಭಕೆ ಸ್ವಾಗತಿಸಿದ
ಬಾಲ ಭಾಸ್ಕರ 

0712ಎಎಂ07022021
*ಅಮುಭಾವಜೀವಿ ಮುಸ್ಟೂರು*

ಭಾವನೆಗಳನ್ನೆಲ್ಲ ಬಿಟ್ಟು 
ಪರಿ ಚಿತ್ರವನ್ನು ನೋಡಿ 
ಇಲ್ಲಿ ಅಳೆಯುವರು ವ್ಯಕ್ತಿತ್ವ 
ಭಾವಕ್ಕೆ ಆಸರೆಯಾಗುವಂತೆ 
ಚಿತ್ರವೊಂದು ಹಿಂಪರದೆ 
ಅರಿಯದಾದರು ಅದರ ಮಹತ್ವ 


೧೨೨೫ಪಿಎಂ ೦೭೦೨೨೦೨೧
ಅಪ್ಪಾಜಿ ಎ ಮುಸ್ಟೂರು ಅಮು 

ಪ್ರೀತಿ ಇದು ಮನಸ್ಸಿನ ಪಿಸುಮಾತು 
ಪ್ರೀತಿ ಇದು ಹೃದಯದ ಸೊತ್ತು 
ಪ್ರೀತಿಯ ಪಾಲಿಸಿದರೆ ಇಲ್ಲ ಆಪತ್ತು 
ಪ್ರೀತಿಯೇ ಬಾಳಿನ ಮಹಾಸಂಪತ್ತು 


*ಜೊತೆಯಿರು ಸಾಕು*

ನೀನಂದ್ರೆ ನನಗಿಷ್ಟ 
ಬದುಕಿನ ಎಲ್ಲಾ ಕ್ಷಣ
ನೀ ಜೊತೆಯಿರೆ ಸಾಕು
ಬೇರೇನನು ನಾ ಬಯಸೆನು
ಬರಲಿ ನನಗೆ ನೂರು ಕಷ್ಟ 
ಇರಲಿ ಬದುಕಲಿ ತಲ್ಲಣ
ಎಲ್ಲಾ ಸಹಿಸಿ ಸುಖ ಕೊಡುವೆ
ನಿನ್ನ ತೊರೆದು ಇರಲಾರೆನು

0208ಪಿಎಂ08022021
*ಅಪ್ಪಾಜಿ ಎ ಮುಸ್ಟೂರು*


*ಗೆಲ್ಲುವ ಹಂಬಲ* 

ಉಕ್ಕಿ ಬರುತ್ತಿದೆ ಹುಮ್ಮಸ್ಸು 
ಸಾಧನೆಯ ಗುರಿ ಮುಟ್ಟಲು 
ಹರೆಯವಿದು ಸಕಾಲ
ಸಾಧಕನೆನಿಸಿಕೊಳ್ಳಲು
ಇರಲು ಎಲ್ಲರ ಬೆಂಬಲ
ಗೆದ್ದು ಬೀಗುವ ಹಂಬಲ
ನಿತ್ಯ ಹೋರಾಟದ ಈ
ಸ್ಪರ್ಧಾತ್ಮಕ ಯುಗದಲ್ಲಿ 

0216ಪಿಎಂ08022021
*ಅಪ್ಪಾಜಿ ಎ ಮುಸ್ಟೂರು*


*ಹಸಿರಾಗಲಿ ಬದುಕು*

ನೀರಸವಾಗದಿರಲಿ ಸಂಬಂಧ 
ಖುಷಿಯ ತರಲಿ ಅನುಬಂಧ 
ಪ್ರೀತಿಯ ಸೌಧದಲಿ ನಗುವಿರಲಿ
ಸ್ನೇಹದ ಹೊನಲು ಸದಾ ಬೆಳಗಲಿ 
ಬಾಳಹಾದಿಯು ತಣ್ಣೆಳಲ ತಾಣವಾಗಿ 
ಸಂಭ್ರಮದ ವರ್ಷಧಾರೆ ಸದಾ ಸುರಿದು
ನೆಮ್ಮದಿಯ ಹಸಿರಾಗಲಿ ಬದುಕು

0835ಪಿಎಂ08022021
*ಅಪ್ಪಾಜಿ ಎ ಮುಸ್ಟೂರು*


ನೀನೆಷ್ಟೇ ನನ್ನ ದೂರವಿರಿಸಿದರು 
ನೀ ನನ್ನ ಹೃದಯ ವಾಸಿಯಾಗಿರುವೆ
ನೀನೆಷ್ಟೇ ನನ್ನ ಅವಮಾನಿಸಿದರು 
ನಾ ನಿನ್ನ ಅಭಿಮಾನಿಯಾಗಿರುವೆ
ನೀನೆಷ್ಟೇ ನನ್ನನ್ನು ದ್ವೇಷಿಸಿದರೂ
ನಾ ನಿನ್ನ ಹುಚ್ಚನಂತೆ ಪ್ರೀತಿಸುವೆ 
ನೀವೆಷ್ಟೇ ನನ್ನನ್ನು ದೂರಿದರು 
ನಾನು ಸದಾ ನಿನ್ನ ಗೌರವಿಸುವೆ 
ನೀನಷ್ಟೇ ನನಗೆ ಮುಖ್ಯ 
ನನಗೆ ಬೇಕು ನಿನ್ನ ಸಖ್ಯ 
ಈ ಕ್ರೂರ ಜಗದೊಳಗೆ ಕ್ರೂರಿಯಾಗದೆ 
ನೀ ಬಂದೆನ್ನ ಸೇರು ತೊರೆಯದೆ 

೦೪೨೯ಎಎಂ೦೯೦೨೨೦೨೧
ಅಪ್ಪಾಜಿ ಎ ಮುಷ್ಟೂರು 

ಪ್ರಿಯೆ ನಿನ್ನ ಕಣ್ಣ ಬೆಳಕು 
ತೊಳೆಯಿತೆನ್ನ ಮನದ ಕೊಳಕು 
 ನೀ ತೋರಿದ ಒಲವು 
ಮರೆಸಿತು ನನ್ನೆದೆಯ ನೋವು  

ನಿನ್ನ ನೋಟ ಒಂದು ಕವಿತೆ 
ನಾನಲ್ಲಿ ಬೆಳಗುವ ಹಣತೆ 
 ನೀನಿರಲು ನನ್ನ ಸನಿಹ 
ಎಂದೆಂದೂ ಬಾಧಿಸದು ವಿರಹ 

ಕ್ಕೆ ನಿನ್ನೆರಡು ನಯನಗಳು 
ರವಿಚಂದ್ರರಂತೆ ಬೆಳಕಾಗಿರಲು 
ಇನ್ನೂ ಇರುಳ ಭಯ ನನಗಿಲ್ಲ 
ಇರುವಾಗ ನಿನ್ನೊಲವ ಬೆಂಬಲ

ಸದ್ದಿಲ್ಲದೆ ಸೇರಿದೆ ನನ್ನೊಳಗೆ 
ಮದ್ದಾದೆ ನನ್ನೆಲ್ಲಾ ನೋವಿಗೆ 
ನೆನಪುಗಳ ಸೋನೆ ಸುರಿದಿರಲು 
ಎದೆ ಗುಡಿಯು ನಿನಗಷ್ಟೆ ಮೀಸಲು 


ನೀನಾದೆ ಜೊತೆಗಾತಿ ನನಗಿಂದು
ಕೈಬಿಡದೆ ಮುನ್ನಡೆಸು ಎಂದೆಂದೂ 
ನೀ ನನ್ನ ಬಾಳ ಅಮೃತಸಿಂಧು 
ನನ್ನೆಲ್ಲಾ ನೋವು ನಲಿವುಗಳ ಆತ್ಮಬಂಧು 

ನಿನ್ನಿಂದಲೇ ಸಂಭ್ರಮಿಸಿದೆ ಈ ಜೀವನ 
ನೀನಲ್ಲವೆ ನನ್ನ ಬಾಳ ಸಂಜೀವನ 

೦೪೫೭ಎಎಂ೦೯೦೨೨೦೨೧
ಅಪ್ಪಾಜಿ ಎ ಮುಸ್ಟೂರು

*ನೀನಿರದೆ*

ನಿನ್ನನೆಂದು ಕೈಬಿಡೆನು
ನೀನಿರದೆ ನಾ ಬಾಳೆನು
ನಿನ್ನೊಲವಿಗಾಗಿ ಹಂಬಲಿಸೋ 
ನಾ ಹಸುಗೂಸಿನಂತೆ
ನಿನ್ನೊಡಲ ಮಡಿಲಲ್ಲಿ 
ನಾ ಮರೆವೆ ಎಲ್ಲಾ ಚಿಂತೆ 
ದೂರ ಹೋಗಿ ನೋವ ನೀಡದಿರು
ಭಾರವಾದ ನನ್ನಿ ಹೃದಯಕೆ
ಪ್ರೀತಿಯ ತಂಗಾಳಿ ಸವರಿ 
ತಣಿಸುತಿರು ಒಲವೇ ನಿತ್ಯ 

0228ಪಿಎಂ11022021
*ಅಪ್ಪಾಜಿ ಎ ಮುಸ್ಟೂರು*

Tuesday, April 6, 2021

*ಹೆಣ್ಣೆಂದರೆ ಹೆಮ್ಮೆ*

ಒಡಲೊಳಗೆ ಬೆಂಕಿ ಬಿದ್ದರೂ
ಮೊಗದಲಿ ನಗುವ ಜೀವ ಹೆಣ್ಣು 
ಮನದೊಳಗೆ ನೂರಾಯಸೆಗಳಿದ್ದರೂ
ಬದುಕಲಿ ಪರಿತ್ಯಕ್ತೆಯಾಗಿರುವಳು ಹೆಣ್ಣು 
ಹೃದಯದಲಿ ನೋವು ಆಳಿದರೂ
ನಗುವ ಹಂಚಿ ಬಾಳ ಪೊರೆಯುವಳು ಹೆಣ್ಣು 
ಕೈಹಿಡಿದವನ ಅಶಕ್ತತೆಯ ತೋರಗೊಡದೆ
ಬದುಕಿನ ಯಾನಕೆ ಶಕ್ತ ಸಾರಥಿಯಾಗುವಳು ಹೆಣ್ಣು 
ತನ್ನೆದೆಯ ಭಾವಗಳಿಗೆ ಪೆಟ್ಟು ಬಿದ್ದರೂ
ಸಂಸಾರದ ಗುಟ್ಟು ರಟ್ಟು ಮಾಡದೆ ಬಾಳುವಳು ಹೆಣ್ಣು 
ನಂಬಿಸಿದವರು ನಡುನೀರಲ್ಲಿ ಕೈಬಿಟ್ಟರೂ
ಬಾಳನೌಕೆಯ ದಡ ಮುಟ್ಟಿಸುವಳು ಹೆಣ್ಣು 
ಹೆಣ್ಣು ಹುಟ್ಟಿತೆಂದು ಕುಗ್ಗಿಹೋಗದೆ
ಹೆಮ್ಮೆಯಿಂದ ಹೇಳಿ ಮಗನಿಗಿಂತಲೂ
ಮಗಳೇ ಹೆಚ್ಚು ಎಂದು 

0425ಎಎಂ21022021
ಅಮುಭಾವಜೀವಿ ಮುಸ್ಟೂರು 


ತಪ್ಪುಗಳನ್ನು ಅಳಿಸಲಾಗದು 
ಆದರೆ ತಿದ್ದಿಕೊಳ್ಳಬಹುದು
ತಪ್ಪು ಮಾಡದವರಾರಿಲ್ಲ
ಆದರೆ ತಿದ್ದಿ ನಡೆವವರಿಗೆಂದೂ ಸೋಲಿಲ್ಲ
ತಪ್ಪು ಅರಿಯದೇ ಆದರೆ ಕ್ಷಮೆಯಿದೆ
ಅರಿತು ಮಾಡುವ ತಪ್ಪಿಗೆ ಶಿಕ್ಷೆ ಬೇಕಿದೆ
ತಪ್ಪು ಮಾಡಿ ಮೆರೆಯದಿರು
ಒಪ್ಪಿಕೊಳ್ಳವುದೇ ಪ್ರಾಯಶ್ಚಿತ್ತವು

0753ಪಿಎಂ21022021
*ಅಮುಭಾವಜೀವಿ ಮುಸ್ಟೂರು*

*ಕಂಬನಿ*

ಈ ಕಂಬನಿಗೂ ಕೂಡ 
ಬೇಜಾರಿದೆ ನೀ ನೊಂದುದಕೆ
ಬದುಕು ಕೊಟ್ಟ ಹೊಡೆತಕೆ
ಸೋತ ಹೃದಯದ ತಲ್ಲಣಕೆ
ಕಣ್ಣ ಹನಿಯ ಕಾಣಿಕೆ 
ಕಂಪಿಸುತ್ತಿದೆ ಮನವು 
ತಂಪಿಲ್ಲದ ಬದುಕಿಗಾಗಿ

0700ಎಎಂ22022021
*ಅಮುಭಾವಜೀವಿ ಮುಸ್ಟೂರು*


[2/22, 7:36 AM] +91 6364 619 967: ಕಣ್ಣ ಹನಿ  ಕಾಣಿಕೆ "wow  amezing words amu🌹ಶೌಕತ್ ಅಲ

*ಹಾಯ್ಕು

*ದಾರಿ*

ನೀನು ಬರುವ 
ದಾರಿ ಕಾದೆ ನಿತ್ಯವೂ
ಸುಳಿವೇ ಇಲ್ಲ 

*ಆಸೆ*

ಬಾಳೋ ಜೀವಕೆ
ಆಸೆ ದುಃಖಕ್ಕೆ ಮೂಲ 
ತಿಳಿಯಲಿಲ್ಲ 

0140ಪಿಎಂ22022021
*ಅಮುಭಾವಜೀವಿ ಮುಸ್ಟೂರು*

*ಕೀಲಿಕೈ*

ಎನ್ನ ಹೃದಯ ನಿನಗೆ ಮೀಸಲು 
ನೀನೆಂದಿಗೂ ಅದಕೆ ಕಾವಲು 
ಪ್ರೀತಿಯ ಕೀಲಿಕೈ ನಿನ್ನೊಪ್ಪಿಗೆಯಲ್ಲಿದೆ 
ಕದ ತೆರೆಯುವ ಮೂಲಕ ಖುಷಿಯನು ಹಂಚು
ನಲಿಯುತ ಅಡಿಯಿಡುವೆ ಆ ಗುಡಿಗೆ
ನಗುವಿನ ಬೆಳಕ ನೀ ಚೆಲ್ಲು
ನನ್ನೊಲವಿಗೆ ಆಸರೆಯಾಗಿ ನಿಲ್ಲು
ಬಾಳಿನ ಬುತ್ತಿ ಬಿಚ್ಚಿ ಸವಿಯೋಣ

0158ಪಿಎಂ22022021
*ಅಮುಭಾವಜೀವಿ ಮುಸ್ಟೂರು*

ನಂಬಿಕೆಯ ಗೋಡೆ 
ಕುಸಿದು ಬೀಳಲು
ಕನಸುಗಳೆಲ್ಲ ಮಣ್ಣು 
ಪ್ರೀತಿಯ ಆಸರೆ 
ಕಳಚಿಕೊಳ್ಳಲು
ಬದುಕು ನಶ್ವರ
ಸುಳ್ಳಿನ ಸಾಮ್ರಾಜ್ಯದಲಿ
ವ್ಯಕ್ತಿತ್ವ ಸರ್ವನಾಶ
ನೀಡದು ಸಂತೋಷ 

0557ಎಎಂ24022021
ಅಮುಭಾವಜೀವಿ ಮುಸ್ಟೂರು .

ಭಾವವೀಗ ಬಲಿಯಾಗುತಿದೆ
ಬವಣೆ ಹೊತ್ತು ನರಳುತಿದೆ
ಸುಳ್ಳಿನ ಮುಳ್ಳಿನ ಮೇಲೆ 
ನೋವಲಿ ಹೊರಳಾಡುತಿದೆ

ಮತ್ತೆ ಮತ್ತೆ ನೆನೆಯುತ್ತಾ 
ಸತ್ತೆ ಎಂದು ಕೊರಗುತ್ತಾ
ಬಯಲಾದ ಸತ್ಯಕೆ ಹೆದರಿ 
ಭೀತಿಗೊಂಡಿದೆ ನಡುಗುತ್ತಾ 

ಪದಗಳು ಸಾಕ್ಷಿಯಾಗಿರಲು
ಭಾವವು ಸ್ಪಷ್ಟವಾಗಿರಲು
ನೋಡುವ ನೋಟಕೆ ಅನುಮಾನ 
ನ್ಯಾಯ ಮೌನತಳೆದಿರಲು

ಎದೆಯಾಳದಿ ಮೂಡಿದ ಭಾವನೆಗಳು 
ಎದುರಾಡಲು ಸೋತ ಸಾಲುಗಳು 
ಎದುರೀಜಲಾಗದೆ ಚಡಪಡಿಸಿ
ಎದೆಗುಂದವೆ ನೊಂದ ಭಾವಗಳು

ಬೇಡವೇ ಬೇಡ ಈ ಭಾವದ ನಂಟು
ಕಳಚಿಕೊಳ್ಳುತಿದೆ ಬಂಧದ ಗಂಟು
ಉಳಿಸಿಕೊಳ್ಳಲು ಹೆಣಗಾಡುತಿಹೆ
ಬಲಗೊಳಿಸಲಿ ನಂಬಿಕೆಯ ಅಂಟು

0918ಎಎಂ24022021
ಅಮುಭಾವಜೀವಿ ಮುಸ್ಟೂರು 


[2/24, 6:46 PM] ಸಂತೋಷ ಕೆಂಭಾವಿ ಯುಎಸ್ಎ: ಭಾವನೆ ಬತ್ತದ ಅಮುಭಾವಜೀವಿ ...ಸುಂದರ ರಚನೆ ಸರ್ 
👌🙏


ಮಧುರಾಲಿಂಗನ ಬಯಸೋ
ಜೀವಕ್ಕೆ  ಕ್ರೌರ್ಯದ ಆಕ್ರಮಣ 
ಮಧು ಹೀರಿದ ದುಂಬಿಯ ಕೃತ್ಯದಿ
ಪರಾಗ ಸ್ಪರ್ಶದ ಕಾರಣ
ಹೂ ಒಡಲಲಿ ಈಗ 
ಬೀಜಾಂಕುರದ ಪರಿಣಾಮ 
ಸುಮವು ಬಾಡಿ ಕಾಯುದಿಸಿ
ನೊಂದು ನರಳಿದೆ ಕಾಣದೆ ಪ್ರೇಮ 
ನಡು ನೀರಲಿ ಕೊಚ್ಚಿ ಹೋಗುವ 
ಬದುಕಿಗಾಸರೆಯಾದ ಹುಲ್ಲುಕಡ್ಡಿಯೂ ಕೂಡ 
ಮುಳ್ಳಾಗಿ ಚುಚ್ಚಿ ಎದೆಬಗೆದು
ನೋವಿನ ನೆತ್ತರ ಪ್ರವಾಹ 
ಬದುಕನ್ನೇ ಮುಳುಗಿಸುವ ದುಗುಡ 

0108ಎಎಂ25022021

ಬೇಲಿಯೇ ಮೇಲೆ ಬಿದ್ದು 
ಸುಮದೆದೆಯ ಬಗೆದು
ಕ್ರೂರ ದುಂಬಿ ತಂದ
ಪರಾಗಸ್ಪರ್ಶದಿಂಡ
ದಳ ಹರಿದೊಡಲಲಿ
ಅಂಡ ಪಿಂಡಿದುಗಮ
ದುಂಬಿಯ ದೌರ್ಜನ್ಯ ಗೌಣ
ಎದೆಗಿರಿದ ಮುಳ್ಳಿಂದ ನೋವುಲ್ಬಣ
ಬಲವಂತವಾದರೂ ತಪ್ಪು ಹೂವಿಂದೆಂದು
ಬಳಿ ಬರಲಿಲ್ಲ ಯಾವ ಬಂಧು
ಬಿರುಗಾಳಿಗೆ ತುತ್ತಾದ ಜೀವನ ಬಳ್ಳಿಗೆ
ಆಸರೆಯಾದ ಮರವೂ ಕೂಡ ಮುಳ್ಬಿಟ್ಟು
ಕಾಯ ಮೇಲೆರಗಿ ಮತ್ತೆದೇ ನೋವು 
ಅತಿಯಾಗಿ ನೊಂದಿದೆ ಹೂವು
ತೊಟ್ಟುಕಳಚುವ ತನಕ ಈ
ದಿಟ್ಟತನದ ಹೋರಾಟಕಂತ್ಯವಿಲ್ಲ
ಬಿರುಗಾಳಿಯ ಪಿಸುಮಾತಿಗಂಜಿ
ತಂಗಾಳಿ ಕೂಡ ಬಳಿಸುಳಿಯದಲ್ಲ

0130ಎಎಂ25022021
ಅಪ್ಪಾಜಿ ಎ ಮುಸ್ಟೂರು 

ಮೊರೆಯ ಕೇಳು ಮಾಧವ 
ನೀಗು ನನ್ನೆದೆಯ ನೋವ
ಒಂಟಿತನದ ನನ್ನ ವೇದನೆಗೆ
ತೋರು ನೀ ಉಪಶಮನವ

ಬದುಕಿನ ಪ್ರತಿ ಗಳಿಗೆಯಲ್ಲಿ
ಸೋಲುಗಳದೇ ಪಾರುಪತ್ಯ
ಬೇಸತ್ತು ಕೂತ ಮನಸ್ಸಿಗೆ
ಬೇಕು ನಿನ್ನ ಸಾಂತ್ವನದ ಸಾಂಗತ್ಯ

ಚಿರವಿರಹಿಯೆಂಬ ಅನುಕಂಪದ 
ಮಾತು ನನಗೆ ಬೇಡ ಮಾಧವ
ಚಿರಪ್ರೇಮಿಯಾಗಿ ನೀ ಸ್ವೀಕರಿಸಿದ 
ಮೇಲೆ ವಿರಹ ಇನ್ನೆಲ್ಲಿ ಅಲ್ಲವಾ

ಆತ್ಮಸಖ ನೀನೆನಗೆ
ಆತ್ಮಬಲ ತುಂಬಿರುವೆ
ಆನಂದದ ಮೊಸರು ಕಡೆದು
ಆ ನೆಮ್ಮದಿಯ ಬೆಣ್ಣೆ ತೆಗೆದಿರುವೆ

ನನಗೆ ಈಗ ಬೇಕಿರುವುದು
ನಿನ್ನೊಲವಿನ ಕೊಳಲ ದನಿ
ಅದ ಕೇಳದ ನನ್ನೆದೆಯೊಳಗೆ
ಕುದಿಯುತ್ತಿದೆ ನೋವಿನ ಕಂಬನಿ

ಮೊಳಗಿಸು ಮಾಧವ 
ತೊಲಗಿಸು ಈ ನೋವ
ಬಳಲಿದ ಜೀವಕೆ ಮತ್ತೆ
ನೀ ತಂದುಬಿಡು ಚೇತನವ

0814ಎಎಂ25022021
ಅಮು ಭಾವಜೀವಿ ಮುಸ್ಟೂರು


ಒಂದು ಕಡೆ ನಿಲ್ಲುವುದಿಲ್ಲ 
ಮನಸ್ಸು ಮತ್ತು ಬದುಕು
ಬೇಕಾದಾಗ ನಿಲುಕುವುದಿಲ್ಲ 
ಬೇಡವಾದಾಗ ಬಿಡುವುದಿಲ್ಲ 
ನಿತ್ಯ ಬದಲಾಗುವ ಕ್ರಿಯೆ
ಸತ್ಯ ಅರಿಯದ ಮಾಯೆ
ನೋವು ನಲಿವುಗಳ ಏರಿಳಿತ 
ಕಷ್ಟ ಸುಖಗಳ ಸಮ್ಮಿಳಿತ 
ಈ ಪಯಣ ಬದುಕಲು ಪ್ರೇರಣ

0759ಪಿಎಂ25022021
*ಅಮುಭಾವಜೀವಿ ಮುಸ್ಟೂರು*


ಮುದ್ದು ಮುಖದ ಚೆಲುವೆ 
ಕನಸಲರಳಿದ ಹೂವೆ
ಸೆಳೆದಳು ಮುಗ್ಧ ಮನಸನ್ನು 

ಪ್ರೀತಿಯ ಮಧುವನದಿ
ಜೋಡಿ ದುಂಬಿಗಳಂತೆ 
ಕಲೆತು ಸವಿದರು ಅಧರಾಮೃತ

ಅವಳ ತೋಳುಗಳ ಬಾಚಿ
ತಬ್ಬಿ ಹಿಡಿದು ಮೌನದಲಿ
ಮನಬಿಚ್ಚಿದರು ಒಲವಲಿ

ಎದೆಯ ಮೇಲೆ ತಲೆಯಿಟ್ಟು
ಅವಳುಲಿವ ಮಾತಿಗೆಲ್ಲ
ಬಂಧ ಬಿಗಿಗೊಳಿಸಿ ತಲ್ಲೀನನಾದ

ಸುಮದ ಮಧುರ ಗಂಧ
ತಂಗಾಳಿಯ ತಂಪು ಚೆಂದ
ಮೈಮರೆತು ಜಾರಿದವು ಕನಸಿಗೆ

ಸಮಯದ ಪರಿವೇ ಇಲ್ಲ
ಭಾವದಿ ಬೆಸೆದುಕೊಂಡಿವೆಯೆಲ್ಲ
ಚೆಲುವಿನೊಲವ ಜೋಡಿಗಳು

ನಿಶ್ಯಬ್ದದ ರಾತ್ರಿಯಲಿ
ಪ್ರಕ್ಷುಬ್ದಗೊಳ್ಳದ ಮನದಲಿ
ಒಲವಾಮೃತ ಸವಿದವೀ ಜೋಡಿ

ಕನಿಸಿನ ತೆರೆ ಸರಿದಾಗ 
ಹಾಸಿಗೆಯಲಿ ಒಬ್ಬನೇ ಆಗ
ಮಧುರ ಕನಸಿಗೊಲಿದಾನೋ

0305ಪಿಎಂ26022021
ಅಪ್ಪಾಜಿ ಎ ಮುಸ್ಟೂರು 

#ಅಮುಭಾವಬುತ್ತಿ 402

*ಎಲ್ಲಿರುವೆ*

ಕಾಯುತಿರುವೆ ನಿನಗಾಗಿ 
ಎಲ್ಲಿರುವೆ ನನ್ನೊಲವೆ
ಒಂಟಿತನದ ಬೇಗುದಿ 
ಕಳೆಯುತಿದೆ ನೆಮ್ಮದಿ 
ಬೇಗ ಬಳಿ ಬಾ ಚೆಲುವೆ 
ಪ್ರೀತಿಯ ಹಸಿವ ನೀಗಲು 
ಸಂಗಾತಿ ನೀ ಜೊತೆಯಾಗಲು
ಕಾದು ಕುಳಿತಿರುವೆ 
ಇನ್ನು ಸತಾಯಿಸದೆ ಬಂದು ಸೇರು 
ನಮ್ಮೊಲವಿಗಿಲ್ಲ ಯಾವ ತಕರಾರೂ 
ದಂಪತಿಗಳಲ್ಲವೇ ನಾವಿಬ್ಬರೂ 

1026ಪಿಎಂ28022021
 


ಗಜಲ್ 


ಒಲವ ಬಿಟ್ಟು ಅಷ್ಟು ದೂರ ಹೇಗೆ ನಡೆದೆ ನೀನು 
ಮನದ ಬೇಲಿಯ ದಾಟಿ ಏಕೆ ಹೋದೆ ನೀನು

ಒಬ್ಬಂಟಿ ಬದುಕೆಷ್ಟು ಕಷ್ಟ ಗೊತ್ತೆ ನೀನಗೆ
ಒಂದೂ ಸೂಚನೆ ನೀಡದೆ ಏಕೆ ಹೋದೆ ನೀನು

ಮೈಮರೆತು ನಿದಿರೆಗೆ ಜಾರಿಬಿಟ್ಟೆ ನೀನಿರುವೆಯೆಂದು
ಅದು ಯಾವಾಗ ಎದ್ದು ಒಬ್ಬನೇ ಹೋದೆ ನೀನು

ಈ ನಡುರಾತ್ರಿಯಲಿ ಅದಾವ ಮಧುಶಾಲೆಯಲಿರುವೆ
ಚಂದಿರನ ಬೆಳದಿಂಗಳ ಹಿಡಿದು ಬಂದೆ ಎಲ್ಲಿಗೆ ಹೋದೆ ನೀನು 

ಆಮು ಎಂದು ಕಂಗಾಲಾಗಿರಲಿಲ್ಲ ಜಿಂದಗಿಯಲಿ
ಮತ್ತೆ ಬರುವ ಸುಳಿವ ನೀಡದೆ ಹೋದೆ ನೀನು

0854ಎಎಂ24012020
ಅಮುಭಾವಜೀವಿ ಮುಸ್ಟೂರು 


[1/24, 9:28 AM] +91 98865 99941: ಗಜಲ್ 


ಒಲವ ಬಿಟ್ಟು ಅಷ್ಟು ದೂರ ಹೇಗೆ ನಡೆದೆ ನೀನು 
ಮನದ ಬೇಲಿಯ *ದಾಟಿ* ಏಕೆ ಹೋದೆ ನೀನು

ಒಬ್ಬಂಟಿ ಬದುಕೆಷ್ಟು ಕಷ್ಟ ಗೊತ್ತೆ ನೀನಗೆ
ಒಂದೂ ಸೂಚನೆ *ನೀಡದೆ* ಏಕೆ ಹೋದೆ ನೀನು

ಮೈಮರೆತು ನಿದಿರೆಗೆ ಜಾರಿಬಿಟ್ಟೆ ನೀನಿರುವೆಯೆಂದು
ಅದು ಯಾವಾಗ ಎದ್ದು *ಒಬ್ಬನೇ* ಹೋದೆ ನೀನು

ಈ ನಡುರಾತ್ರಿಯಲಿ ಅದಾವ ಮಧುಶಾಲೆಯಲಿರುವೆ
ಚಂದಿರನ ಬೆಳದಿಂಗಳ ಹಿಡಿದು ಬಂದೆ *ಎಲ್ಲಿಗೆ* ಹೋದೆ ನೀನು 

ಆಮು ಎಂದು ಕಂಗಾಲಾಗಿರಲಿಲ್ಲ ಜಿಂದಗಿಯಲಿ
ಮತ್ತೆ ಬರುವ ಸುಳಿವ *ನೀಡದೆ* ಹೋದೆ ನೀನು

0
[1/24, 9:31 AM] +91 98865 99941: ಸರ್ ಬೋಲ್ಡ್ ಮಾಡಿದ ಪದಗಳು ಕಾಫಿಯ ಅಂತ ಅನ್ನಿಸುತ್ತವೆ. 
ಬಾರ *ದೆ*
ನೋಡ *ದೆ*
ತಾರ *ದೆ*
ಮರೆಯ *ದೆ*

ಈ ರೀತಿ ಒಂದೇ ರವಿ ಇರುವ ಕಾಫಿಯ ಬರಬೇಕು ಅಂತ ನನ್ನ ಅಭಿಪ್ರಾಯ ಸರ್.. ತಪ್ಪಿದ್ದರೆ ತಿಳಿಸಿ ಸರ್..
[1/24, 9:32 AM] +91 98865 99941: ಮೊದಲ ಎರಡು ಸಾಲು(ಮತ್ಲಾ) ಗಳಲ್ಲೂ ಒಂದೇ ರದೀಫ್(ಹೋದೆ ನೀನು) ಬರಬೇಕು
*ನಮ್ಮೂರ ಜಾತ್ರೆ*

ಜಾತ್ರೆಗೆ ಹೋಗೋಣ ಬನ್ನಿ 
ನಮ್ಮೂರ ತೇರ ಎಳೆಯೋಣ ಬನ್ನಿ 

ಮಾಘ ಮಾಸದಲ್ಲಿ ಬರುವ 
ಮುಸ್ಟೂರ ಜಾತ್ರೋತ್ಸವ 
ಲಿಂಗೇಶನ ದರುಶನವ ಪಡೆದು
ನಾವೆಲ್ಲಾ ಪುನೀತರಾಗೋಣ ಬನ್ನಿ 

ಪಂಜು ಪಂಜಿನ ಬೆಳಕಲ್ಲಿ 
ಬಲಿ ಅನ್ನವ ಹೊತ್ತು ತಂದು 
ತೇರಿಗೆ ಪ್ರದಕ್ಷಿಣೆ ಹಾಕಿ 
ಕಾಯಿ ಹಣ್ಣು ತೂರುವ ಬನ್ನಿ 

ಪಲ್ಲಕ್ಕಿಯಲ್ಲಿ ಹೊತ್ತು 
ಓಡೋಡಿ ಬಂದು ತೇರಿನ 
ಮೇಲೆ ದೇವರ ಕೂರಿಸಿ 
ಮಿಣಿಯ ಹಿಡಿದು ಎಳೆಯೋಣ ಬನ್ನಿ 

ನವ ಜೋಡಿಗೆ ತೇರಿನ 
ಹೊನ್ನ ಕಳಸ ತೋರಿಸಿ 
ಸಂಭ್ರಮದಿ ನಲಿವ 
ಅವರ ಹರಸೋಣ ಬನ್ನಿ 

ಖೇಣೇರ ಅಂಗಡೀಲಿ 
ಬಳೆ ಸರಗಳಿತ್ಯಾದಿ ಕೊಂಡು
ರಾಟೇಲಿ ತಿರುಗಿ ಜೋಕಾಲಿ
ಜೀಕುತ್ತ ನಲಿಯೋಣ ಬನ್ನಿ 

ಬಗೆ ಬಗೆಯ ತಿಂಡಿ ತಿನಿಸು 
ತಂದು ಮನೆಮಂದಿಯಲ್ಲ ಕೂತು
ಪ್ರಸಾದವ ಸವಿಯುತ್ತಾ 
ದೇವರ ಕೃಪೆಗೆ ಪಾತ್ರರಾಗೋಣ ಬನ್ನಿ 

0918ಪಿಎಂ09122019

ಅಮು ಭಾವಜೀವಿ ಮುಸ್ಟೂರು 

ಹೇಗೆ ಮರೆಯಲಿ ಗೆಳೆಯ 
ನೀ ಬಿಟ್ಟು ಹೋದ ನೆನಪುಗಳ
ನೋಯುತಿದೆ ಈ ಜೀವ
ಸಹಿಸಲಾರೆ ಈ ಅಗಲಿಕೆಯ

ನಿನ್ನ ನಿತ್ಯದ ತುಂಟಾಟಗಳು 
ಕಣ್ಣ ಮುಂದೆ ಬಂದು ಹೋಗುತಿವೆ
ನಿನ್ನ ಒಡನಾಟವ ನೆನೆನೆನೆದು
ಹೃದಯ ಭಾರವಾಗಿದೆ ಈ ಸಾವು ನ್ಯಾಯವೆ 

ಅರ್ಜಿಸಿಕೊಳ್ಳಲಾರೆ ಅರ್ಜುನ 
ನಿನ್ನ ಈ ವಿದಾಯ
ಕಣ್ಣೆದುರೇ ಕೈತಪ್ಪಿಹೋದೆ
ಕರುಣೆಯಿಲ್ಲ ಸಾವಿಗೆ 

ಇಷ್ಟೇ ನಮ್ಮಿಬ್ಬರ ಋಣಾನುಬಂಧ 
ಹೋಗು ಗೆಳೆಯ ಮತ್ತೆ ಬರದಿರು
ಈ ಪಾಪಿ ಜಗದಲಿ ಪ್ರೀತಿಗೆ ನೆಲೆಯಿಲ್ಲ
ನಿನ್ನ ಮೇಲೆ ಅಮಾಯಕ ಜೀವಕೆ ಬೆಲೆಯಿಲ್ಲ 

ಕಂಬನಿಯಲಿ ಬೀಳ್ಕೊಡುವೆ
ಕರದಿಂದೆತ್ತಿ ಅಂತ್ಯಸಂಸ್ಕಾರಗೈವೆ
ಈ ನೋವು ನಿರಂತರ 
ನಿನ್ನ ಸಾವು ಬಲು ಘೋರ 

0946ಪಿಎಂ05042021
ಅಪ್ಪಾಜಿ ಎ ಮುಸ್ಟೂರು 

ಪ್ರೀತಿಯ ಅರ್ಜುನನ ದುರಂತ ಸಾವಿನ ಕುರಿತು ಬರೆದದ್ದು