Tuesday, April 6, 2021

ಹೇಗೆ ಮರೆಯಲಿ ಗೆಳೆಯ 
ನೀ ಬಿಟ್ಟು ಹೋದ ನೆನಪುಗಳ
ನೋಯುತಿದೆ ಈ ಜೀವ
ಸಹಿಸಲಾರೆ ಈ ಅಗಲಿಕೆಯ

ನಿನ್ನ ನಿತ್ಯದ ತುಂಟಾಟಗಳು 
ಕಣ್ಣ ಮುಂದೆ ಬಂದು ಹೋಗುತಿವೆ
ನಿನ್ನ ಒಡನಾಟವ ನೆನೆನೆನೆದು
ಹೃದಯ ಭಾರವಾಗಿದೆ ಈ ಸಾವು ನ್ಯಾಯವೆ 

ಅರ್ಜಿಸಿಕೊಳ್ಳಲಾರೆ ಅರ್ಜುನ 
ನಿನ್ನ ಈ ವಿದಾಯ
ಕಣ್ಣೆದುರೇ ಕೈತಪ್ಪಿಹೋದೆ
ಕರುಣೆಯಿಲ್ಲ ಸಾವಿಗೆ 

ಇಷ್ಟೇ ನಮ್ಮಿಬ್ಬರ ಋಣಾನುಬಂಧ 
ಹೋಗು ಗೆಳೆಯ ಮತ್ತೆ ಬರದಿರು
ಈ ಪಾಪಿ ಜಗದಲಿ ಪ್ರೀತಿಗೆ ನೆಲೆಯಿಲ್ಲ
ನಿನ್ನ ಮೇಲೆ ಅಮಾಯಕ ಜೀವಕೆ ಬೆಲೆಯಿಲ್ಲ 

ಕಂಬನಿಯಲಿ ಬೀಳ್ಕೊಡುವೆ
ಕರದಿಂದೆತ್ತಿ ಅಂತ್ಯಸಂಸ್ಕಾರಗೈವೆ
ಈ ನೋವು ನಿರಂತರ 
ನಿನ್ನ ಸಾವು ಬಲು ಘೋರ 

0946ಪಿಎಂ05042021
ಅಪ್ಪಾಜಿ ಎ ಮುಸ್ಟೂರು 

ಪ್ರೀತಿಯ ಅರ್ಜುನನ ದುರಂತ ಸಾವಿನ ಕುರಿತು ಬರೆದದ್ದು 

No comments:

Post a Comment