Tuesday, April 6, 2021

ಗಜಲ್ 


ಒಲವ ಬಿಟ್ಟು ಅಷ್ಟು ದೂರ ಹೇಗೆ ನಡೆದೆ ನೀನು 
ಮನದ ಬೇಲಿಯ ದಾಟಿ ಏಕೆ ಹೋದೆ ನೀನು

ಒಬ್ಬಂಟಿ ಬದುಕೆಷ್ಟು ಕಷ್ಟ ಗೊತ್ತೆ ನೀನಗೆ
ಒಂದೂ ಸೂಚನೆ ನೀಡದೆ ಏಕೆ ಹೋದೆ ನೀನು

ಮೈಮರೆತು ನಿದಿರೆಗೆ ಜಾರಿಬಿಟ್ಟೆ ನೀನಿರುವೆಯೆಂದು
ಅದು ಯಾವಾಗ ಎದ್ದು ಒಬ್ಬನೇ ಹೋದೆ ನೀನು

ಈ ನಡುರಾತ್ರಿಯಲಿ ಅದಾವ ಮಧುಶಾಲೆಯಲಿರುವೆ
ಚಂದಿರನ ಬೆಳದಿಂಗಳ ಹಿಡಿದು ಬಂದೆ ಎಲ್ಲಿಗೆ ಹೋದೆ ನೀನು 

ಆಮು ಎಂದು ಕಂಗಾಲಾಗಿರಲಿಲ್ಲ ಜಿಂದಗಿಯಲಿ
ಮತ್ತೆ ಬರುವ ಸುಳಿವ ನೀಡದೆ ಹೋದೆ ನೀನು

0854ಎಎಂ24012020
ಅಮುಭಾವಜೀವಿ ಮುಸ್ಟೂರು 


[1/24, 9:28 AM] +91 98865 99941: ಗಜಲ್ 


ಒಲವ ಬಿಟ್ಟು ಅಷ್ಟು ದೂರ ಹೇಗೆ ನಡೆದೆ ನೀನು 
ಮನದ ಬೇಲಿಯ *ದಾಟಿ* ಏಕೆ ಹೋದೆ ನೀನು

ಒಬ್ಬಂಟಿ ಬದುಕೆಷ್ಟು ಕಷ್ಟ ಗೊತ್ತೆ ನೀನಗೆ
ಒಂದೂ ಸೂಚನೆ *ನೀಡದೆ* ಏಕೆ ಹೋದೆ ನೀನು

ಮೈಮರೆತು ನಿದಿರೆಗೆ ಜಾರಿಬಿಟ್ಟೆ ನೀನಿರುವೆಯೆಂದು
ಅದು ಯಾವಾಗ ಎದ್ದು *ಒಬ್ಬನೇ* ಹೋದೆ ನೀನು

ಈ ನಡುರಾತ್ರಿಯಲಿ ಅದಾವ ಮಧುಶಾಲೆಯಲಿರುವೆ
ಚಂದಿರನ ಬೆಳದಿಂಗಳ ಹಿಡಿದು ಬಂದೆ *ಎಲ್ಲಿಗೆ* ಹೋದೆ ನೀನು 

ಆಮು ಎಂದು ಕಂಗಾಲಾಗಿರಲಿಲ್ಲ ಜಿಂದಗಿಯಲಿ
ಮತ್ತೆ ಬರುವ ಸುಳಿವ *ನೀಡದೆ* ಹೋದೆ ನೀನು

0
[1/24, 9:31 AM] +91 98865 99941: ಸರ್ ಬೋಲ್ಡ್ ಮಾಡಿದ ಪದಗಳು ಕಾಫಿಯ ಅಂತ ಅನ್ನಿಸುತ್ತವೆ. 
ಬಾರ *ದೆ*
ನೋಡ *ದೆ*
ತಾರ *ದೆ*
ಮರೆಯ *ದೆ*

ಈ ರೀತಿ ಒಂದೇ ರವಿ ಇರುವ ಕಾಫಿಯ ಬರಬೇಕು ಅಂತ ನನ್ನ ಅಭಿಪ್ರಾಯ ಸರ್.. ತಪ್ಪಿದ್ದರೆ ತಿಳಿಸಿ ಸರ್..
[1/24, 9:32 AM] +91 98865 99941: ಮೊದಲ ಎರಡು ಸಾಲು(ಮತ್ಲಾ) ಗಳಲ್ಲೂ ಒಂದೇ ರದೀಫ್(ಹೋದೆ ನೀನು) ಬರಬೇಕು

No comments:

Post a Comment