Wednesday, April 7, 2021

*ಕರೆದರೂ ಕೇಳದಂತೆ*


ಕರೆದರೂ ಕೇಳದಂತೆ 
ಎಲ್ಲಿಗೆ ಹೊರಟಿರುವೆ ನಲ್ಲ 
ಈ ಏಕಾಂತವೂ ಬೇಸರ ತರಿಸಿದೆ 
ನಿನಗೇಕೆ ಮಾತಾಡುವ ಮನಸ್ಸಿಲ್ಲ 

ಪ್ರೀತಿಯಲ್ಲಿ ಅನುಮಾನ ಬೇಡವೇ ಬೇಡ 
ಅದರಿಂದ ಕಾಡುವುದು ದುಗುಡ 
ಕೇಳು ನೀನೊಮ್ಮೆ ಮನದ ಮಾತು 
ಆ ಹಳೆಯ ಕಹಿ ಘಟನೆಗಳನ್ನೆಲ್ಲ ಮರೆತು 

ನಿಸರ್ಗದ ಈ ಸುಂದರ ತಾಣ 
ಚೆಲುವಿಲ್ಲ ಅದಕ್ಕೂ ಹಿಡಿದಿದೆ ಗ್ರಹಣ 
ಒಮ್ಮೆ ಹಿಂತಿರುಗಿ ನೋಡಿ ಮಾತಾಡಿಸು
ಎದೆಯ ವೇದನೆಯ ನೀ ನೀಗಿಸು

ಈ ಮಂಜಿನಂತೆ ಕರಗಿ 
ಹೋಗಲಿ ನಿನ್ನೊಳಗಿನ ಮೌನ 
ಈ ಪ್ರಕೃತಿಯ ಮಡಿಲೊಳಗೆ 
ನಾವು ಒಂದಾದರೆ ಸುಂದರ ಜೀವನ 

ತೊರೆದು ಹೋಗದಿರು ದೂರ 
ಕಳೆದುಕೊಂಡ ಹೃದಯದ ಭಾರ 
ಅರ್ಥವಾಗದು ನಿನಗೆ ಈಗ 
ಅದಕ್ಕೂ ಮುಂಚೆ ನೀ ಬಂದು ಸೇರು ಬೇಗ 

ನನ್ನ ತೋಳುಗಳು ಕಾತರಿಸುತ್ತಿವೆ 
ನಿನ್ನ ಆಸರೆಯ ಬಯಸಿ 
ಈ ನಮ್ಮ ಅನುಬಂಧ ಬೆಸೆಯಲಿ 
ಖುಷಿಯಿಂದ ಬಾಳೋಣ ಸಂಭ್ರಮಿಸಿ 

೦೮೧೫ ಎಎ೦೨೫೦೨೦೨೦
*ಅಮು ಭಾವಜೀವಿ ಮುಸ್ಟೂರು* 


*ನಮಸ್ತೇ ಅಮು ಭಾವಜೀವಿ ಸರ್ 💐 🤝 🙏*

*ಕರೆದರೂ ತಿರುಗಿ ನೋಡದ ನಲ್ಲನಿಗೆ ಬರೆದ ನುಡಿಗಳು ಚಂದದ ಸಾಂಗತ್ಯವಿಲ್ಲದ ಬದುಕು ಶೂನ್ಯ ನನ್ನ ಬಿಟ್ಟು ಹೋಗಬೇಡ ನನ್ನ ಜೊತೆ ಮಾತಾಡಲು ಮನಸು ಇಲ್ಲವೇ.... 👌👌*

*ಯಾವಾಗ ಪ್ರೀತಿಯಲ್ಲಿ ಅನುಮಾನ ಬರುತ್ತೊ ಅವತ್ತೆ ನಮ್ಮ ಮನಸು ಮಸಣದ ಹೆಣವಾಗಿ ಬಿಡುತ್ತದೆ ಮನದ ಮಾತ ಕೇಳದೇ ಹೋಗಬೇಡ ಮುಂದೆ ಬದುಕೋಣ ಕಹಿ ಘಟನೆಗಳ ಮರೆತು 👌👌*

*ನಾವಿಲ್ಲಿ ಕೂಡಿರುವುದು ನಿಸರ್ಗದ ಮಡಿಲಲ್ಲಿ ಅದೇಕೆ ಮುಖ ತಿರುಗಿ ನಿಂತಿರುವೆ ಆ ಸೂರ್ಯನಿಗೆ ಇಡಿದಂಗೆ ನಿನಗೂ ಗ್ರಹಣ ಇಡಿದಿದೆಯಾ... ಒಂದೇ ಒಂದು ಸಾರಿ ನೀ ನನ್ನ ತಿರುಗಿ ನೋಡು ನಮ್ಮಿಬರ ಬಾಳಾಗುವುದು ಸುಖ ಸಂತೋಷದ ಬೀಡು 👌👌*

*ಒಟ್ಟಾರೆ ಕವನ ಚೆನ್ನಾಗಿದೆ ಶುಭವಾಗಲಿ ನಮಸ್ಕಾರ 🙏*

*ಪ್ರೇಮಾರ್ಜುನ*

ಸುರೇಶ್ ನೇಗಿಲಗುಳಿ ಅವರ ಅಭಿಪ್ರಾಯ 

ಕಿವಿ ಕಿವುಡಾಗುಸಿದ ಬಗ್ಗೆ ದುಗುಡ,ಒಲವು ಇಲ್ಲದಾಗಲು ಸಾಧ್ಯವೇ?ಜೊತೆ ಸೇರುವ ಸಮಯ ಸನ್ನಿವೇಶವನ್ನು ಪರಿಗಣಿಸು,ಬಂದು ಬಿಡು ಎಂಬ ಭಾವ ಕೊಟ್ಟವು


ಎಂಎನ್ ತೇಜಸ್ವಿ: ಅದ್ಭುತವಾದ ಕವಿತೆಯ ಸಾಲುಗಳು 👌👌🌹
ರೇಷ್ಮ ಕಂದಕೂರು: Super sir
+91 97314 04138: ಮಾನವ ಮೂಳೆಮಾಂಸಗಳ ತಡಿಕೆ
ಪದಪ್ರಯೋಗ ಅದ್ಭುತ ಸಾಹಿತಿಗಳೇ


*ಅಮು ಭಾವಜೀವಿ ಮುಸ್ಟುರು ರವರ ಕವನ*

*ಕರೆದರೂ ಕೇಳದಂತೆ*

*ಮನಸ್ತಾಪ ಹೊಂದಿ ದೂರ ಸರಿಯುತ್ತಿರುವ ತನ್ನ ನಲ್ಲನಿಗೆ ಈ ಒಲವಿನ ಪ್ರೀತಿಯ ಹೃದಯದ ಮಾತುಗಳು ಕೇಳಿಸದೇ??.ಕರೆದರೂ ಕೇಳದಂತೆ ಏಕೆ ಈ ಮೌನ ಎಂದು ಮನದ ದುಗುಡವನ್ನು ವ್ಯಕ್ತಪಡಿಸುವ ಒಂದು ವಿರಹ ವೇದನೆ ತಾಳಲಾರದ ಹೆಣ್ಣಿನ ಧ್ವನಿಯಾಗಿ ಕವನ ಮೂಡಿ ಬಂದಿದೆ*

ಈ ಮಂಜಿನಂತೆ ಕರಗಿ
ಹೋಗಲಿ ನಿನ್ನೊಳಗಿನ ಮೌನ
ಈ ಪ್ರಕೃತಿಯ ಮಡಿಲೊಳಗೆ
ನಾವು ಒಂದಾದರೆ ಜೀವನ ಸುಂದರ

👆🏽👌🏽👌🏽👌🏽 *ಸರ್*

*ಧನ್ಯವಾದಗಳು*

*ಶಶಿಧರ್ ಅಮೃತಸಿಂಚನ*

No comments:

Post a Comment