Thursday, October 12, 2017

ಬೆಳೆದು ಬೆಳೆದು ಬೃಹತ್ತಾಯ್ತು ನಮ್ಮ ಬೆಂದಕಾಳೂರು ಸುತ್ತಮುತ್ತಲಿನ ಹಳ್ಳಿಗಳ ನಗರವಾಗಿಸಿ ದೂರದಿಂದ ಬಂದು ಬದುಕು ಕಟ್ಟಿಕೊಂಡರು ಕಾಂಕ್ರೀಟ್ ಕಾಡಿನಲ್ಲಿ ಎಷ್ಟೊಂದು ಜನ ಜಂಗುಳಿ ವಾಹನಗಳ ಬಲು ಹಾವಳಿ ಧಾವಂತದ ಬದುಕೇ ಇದರ ಬಳುವಳಿ ದುಡಿಮೆಯೊಂದೇ ಇಲ್ಲಿನ ಮಂತ್ರ ವಾರಾಂತ್ಯಕೆ ವಿರಾಮದ ಸೂತ್ರ ಕಲೆ ಸಾಹಿತ್ಯ ಒಂದಷ್ಟು ಪ್ರೋತ್ಸಾಹ ಏನು ಹೇಳಲಿ ಅವರ ಜೀವನೋತ್ಸಹವನು ಬದುಕು ಅರಸಿ ಬಂದವರನೆಲ್ಲ ಅಪ್ಪಿ ಒಪ್ಪಿಕೊಳ್ಳುವ ನಗರ ವಾಹನ ದಟ್ಟಣೆಯೊಂದಿಗೆ ಗುರಿ ತಲುಪಲಿಲ್ಲಿ ನಿತ್ಯ ಸಮರ ಉದ್ಯಾನವನಗಳ ನಗರವಿಂದು ಭಾರಿ ಬೃಹತ್ ಕಟ್ಟಡಗಳ ಆಗರ ಮೆಟ್ರೊ ಮಾಲ್ ಸಂಸ್ಕೃತಿ ಪೋಷಕ ಕರುನಾಡ ರಾಜಧಾನಿ ಎಂಬ ದ್ಯೋತಕ ಹೆಮ್ಮೆಯ ನಗರದೊಳಗೂ ಸಮಸ್ಯೆಗಳ ಮಹಾಪೂರ ಆಧುನಿಕತೆಯ ಹೆಸರಿನಲ್ಲಿ ಇದು ಸಿಲಿಕಾನ್ ವ್ಯಾಲಿ 0510ಎಎಂ25092017 *ಅಮುಭಾವಜೀವಿ*

No comments:

Post a Comment