Thursday, October 12, 2017

ಮಧುಗಿರಿ ಮಾಹಿತಿ ವೇದಿಕೆಯ ಕವಿಗೋಷ್ಠಿಗಾಗಿ *ನಲ್ಮೆಯ ಕನ್ನಡ* ನಮ್ಮ ನಲ್ಮೆಯ ಕನ್ನಡ ಬಂತು ನಮ್ಮ ಸಂಗಡ ಮರೆಸಿತೆಲ್ಲ ದುಗುಡ ಅದಕೆ ಹಾಡಿದೆ ಈ ಹಾಡ ಸಾವಿರ ವರ್ಷಗಳ ಯಾನದಲಿ ಅಳಿಯದೆ ಉಳಿದ ಭಾಷೆಯಿದು ರಾಜಾಶ್ರಯದಿ ರಾರಾಜಿಸಿದ ಜನಪದ ಸೊಗಡಿನ ಭಾಷೆ ನಮ್ಮದು ಅರಿಶಿಣ ಕುಂಕುಮ ಶೋಭಿತೆ ಅವಳೇ ನಮ್ಮ ಕನ್ನಡ ಮಾತೆ ಕವಿ ಕೋಗಿಲೆಗಳ ಕಂಠಸಿರಿ ಕನ್ನಡಾಂಬೆಯ ಸೌಭಾಗ್ಯದ ಐಸಿರಿ ನದಿ ವನಗಳ ಸುಂದರ ನಾಡು ಕರಿಮಣ್ಣ ಪರಿಶುದ್ಧ ಸೊಗಡು ನಿತ್ಯ ಹರಿದ್ವರ್ಣ ಭೂಷಿತೆ ನಿತ್ಯದಭಿಮಾನ ಪೂಜಿತೆ ಸಾಧಕರ ಸಾಧನೆಯ ಮೆಟ್ಟಿಲು ಮಾತೆಯಂತೆ ಪೊರೆವ ತೊಟ್ಟಿಲು ಕನ್ನಡವಿದು ಬರಿ ಭಾಷೆಯಲ್ಲ ಕನ್ನಡಿಗನ ಪ್ರತಿ ಉಸಿರು ಇದು ಕನ್ನಡವ ಬೆಳೆಸೋಣ ಕನ್ನಡವ ಉಳಿಸೋಣ ಮೆರೆಯಲಿ ಮತ್ತೆ ಸಾರ್ವಭೌಮತ್ವ ಪೊರೆಯಲಿ ಅನವರತ ಈ ಪ್ರಭುತ್ವ *ಅಮುಭಾವಜೀವಿ*

No comments:

Post a Comment