Thursday, October 12, 2017

*ಚಿತ್ರ ಕವನ ಸ್ಪರ್ಧೆಗಾಗಿ* *ಬಾಳ ಮುಸ್ಸಂಜೆಯಲೂ* ದೇಹ ಸುಕ್ಕುಗಟ್ಟಿದೆ ಬದುಕು ಇನ್ನೂ ಇದೆ ನಿನಗೆ ನಾನಾಸರೆ ನನಗೆ ನೀನಾಸರೆ ಈ ಅನಾಥ ಯಾತ್ರೆ.ಯಲಿ ಬೆನ್ನು ಪೂರ ಬಾಗಿದೆ ಕಣ್ಣು ಮಸುಕಾಗಿದೆ ಬರಿಗಾಲ ಈ ಪಯಣದಲಿ ನಮ್ಮೊಲವಿಗೆ ಸಾಟಿ ಯಾವುದಿಲ್ಲಿ ನನ್ನವರೆಂಬ ಎಲ್ಲ ಬಂಧ ಕಡಿದು ಹೊರದೂಡಿದ ಪರದೇಶಿ ಬದುಕಿದು ಎಲ್ಲ ತೊರೆದು ಬೀದಿಗೆ ಬಿದ್ದರೂ ನಮ್ಮ ಬದುಕುವ ಉತ್ಸಾಹಕಿಲ್ಲ ಕೊರತೆಯೂ ಬಾಳ ಮುಸ್ಸಂಜೆಯಲೂ ನಾಳೆಯ ಭರವಸೆಯಿದೆ ಏನೇ ಬಂದರೂ ಒಂದಾಗಿ ನಡೆವ ಒತ್ತಾಸೆ ನಮ್ಮದಾಗಿದೆ ಕೈಗೊಂದು ಕೋಲು ಹೆಗಲಿಗೊಂದು ಚೀಲ ಇಷ್ಟೇ ನಾವು ಗಳಿಸಿದ್ದು ಅಷ್ಟೇ ನಮಗುಳಿದದ್ದು 0732ಎಎಂ07102017 *ಅಮುಭಾವಜೀವಿ* ಭವಾನಿ ಶಂಕರ್ ಅವರ ವಿಮರ್ಶೆ ಪೋಟೊ ಜೊತೆಗೆ ಕಳುಹಿಸಿದ್ದಿರಿ ಅನ್ನುವುದು ಬಿಟ್ಟರೆ ಸರ್. ಷೇರು ... .ಫಿಫಾ .... .. .. ..e ಸ್ಪರ್ಧೆಯ ಎಲ್ಲಾ ನಿಯಮಗಳನ್ನು ಅನುಸರಿಸಿದ್ದಿರಿ ಕವಿಗಳೇ. ಮೊದಲು ನಿಮಗೊಂದು ಅಭಿವಂದನೆ. ಮೆಚ್ಚುಗೆಯ ಅಂಶಗಳು👇 ೧.೨೦ ಸಾಲಿನಲ್ಲಿ ಒಂದು ಒಳ್ಳೆಯ ಕವನವನ್ನು ಓದುಗರಿಗೆ ಉಣಬಡಿಸಿದ್ದಿರಿ. ೨. ವೃದ್ಧಾಪ್ಯದ ಎಲ್ಲಾ ಕುರುಹುಗಳನ್ನು ಕವನದಲ್ಲಿ ತಿಳಿಸಿದ್ದಿರ. ೩. ಕವನದ ಚಿತ್ರವನ್ನು ಮನೋಜ್ಞವಾಗಿ ಚಿತ್ರಿಸಿದ್ದಿರ. ೪. ಅವರು ಯಾಕೆ ಆ ರೀತಿಯಾಗಿ ಹೊರಟಿದ್ದಾರೆ ಅನ್ನುವಂತಹ ವಿಷಯವು ತಿಳಿಯುವುದು. ೫. ನಾಳೆಯೆಂಬ ಭರವಸೆಯನ್ನು ಈ ಇಳೀವಯಸ್ಸಿನಲ್ಲೂ ಕವಿ ಧ್ವನಿಸಿದ್ದಾರೆ. ಒಂದು ಉತ್ತಮ ಕವನ. ಕವನದಲ್ಲಿ ಪ್ರಶ್ನೆಗಳು ಉದ್ಭವಿಸುವುದಿಲ್ಲ. ವಿಮರ್ಶೆ: *🐿ಶಂಕರ್ ಗುರು* [ ]

No comments:

Post a Comment