Friday, November 5, 2021

ಮಾಹಿತಿ

ಮುಕ್ತಕ ರಚನೆಯಲ್ಲಿ ಭಾಗವಹಿಸಿದ ಎಲ್ಲಾ ಕವಿಮನಗಳಿಗೆ ಹೃದಯಪೂರ್ವಕ ಅಭಿನಂದನೆಗಳು ಭಾವಗಳನ್ನು ಮುಕ್ತಕದಲ್ಲಿ ಹಿಡಿದಿಡುವುದು  ಸುಲಭದ ಮಾತಲ್ಲ. ಸಾಕಷ್ಟು ಅನುಭವವಿರುವ ಕವಿಮನಗಳ  ಕವನಗಳ ರಚನೆಗಳಿಗೆ ತೀರ್ಪು ನೀಡುವುದು ಕಷ್ಟ   ಆದಾಗ್ಯೂ ತಿಳಿದ ಅನುಭವದ  ಮೇಲೆ  ತೀರ್ಪುನೀಡಿದ್ದೇನೆ ತಪ್ಪಾಗಿದ್ದರೆ ಕ್ಷಮೆಯಿರಲಿ

ಸವಿತ ಎಂ ಸೊರಬ

ಮುಕ್ತಕದ ನಿಯಮಗಳು ಇಂತಿದೆ
ಮಾತ್ರೆಗಳು
೫ ೫ ೫ ೫
೫ ೫ ೫ ೩
೫ ೫ ೫ ೫
೫ ೫ ೩ ೩
ಅಥವಾ
೫ ೫ ೫ ೫
೫ ೫ ೫ ೧
೫ ೫ ೫ ೫
೫ ೫ ೬

ಕೊನೆಯ ಸಾಲಿನ ೩+೩ರಲ್ಲಿ ಕಾವ್ಯನಾಮ ಅಥವಾ ಅಂಕಿತ ನಾಮ ಇರಬೇಕು
ನಾಲ್ಕೂ ಸಾಲುಗಳಲ್ಲಿ ಆದಿ ಪ್ರಾಸ ಕಡ್ಡಾಯ
ಅರಿ ಸಮಾಸ ಲಗಾದಿ ಗಣ ಬರಬಾರದು


*ಆತ್ಮೀಯ ಕವಿಮನಗಳೇ ಗಮನಿಸಿ*

*ಈ ಮಾಹಿತಿಯನ್ನು ಪೂರ್ಣವಾಗಿ ಮತ್ತೊಮ್ಮೆ ಓದಿ ಚೆಂದದ ರುಬಾಯಿ ಬರೆಯಿರಿ*

*ರುಬಾಯಿ ಎಂದರೆ*
ನಾಲ್ಕು ಸಾಲುಗಳ ಚುಟುಕು ಮಾದರಿ ರಚನೆ
ಒಂದು ಎರಡು ಮತ್ತು ನಾಲ್ಕನೇ ಸಾಲುಗಳು ಅಂತ್ಯ ಪ್ರಾಸ ಹೊಂದಿರಬೇಕು
ಮೂರನೇ ಸಾಲು
ಎಲ್ಲ ನಾಲ್ಕು ಸಾಲುಗಳ ಕೊಂಡಿಯಾಗಿರಬೇಕು
ಪ್ರಾಸಗಳು ತ್ರಾಸದಲಿ ಬರದಂತೆ ಎಚ್ಚರ ಅಗತ್ಯ
ಗಝಲ್ ನಂತೆ ರುಬಾಯಿಗೂ ಶೀರ್ಷಿಕೆ ಇರುವುದಿಲ್ಲ

*ಮೂರು ಪ್ರಾಸಗಳು ಸಮಾನವಾಗಿರಲಿ.* *ಹಾಗೂ ಪ್ರಾಸಗಳಲ್ಲಿ ಕೊನೆಯ ಎರಡು ಅಕ್ಷರ ಒಂದೇ ರೀತಿ ಇರಲಿ*ರುಬಾಯಿ ಯಲ್ಲಿ ಪದಗುಚ್ಛಗಳು ಸಮಾನ ಅಳತೆ ಹೊಂದಿರಲಿ,
 ಪ್ರಾಸಕ್ಕಾಗಿ ಪದ ಜೋಡಿಸದೇ ಅರ್ಥದೆಡೆಯೂ ಗಮನಿಸಬೇಕಾಗುತ್ತದೆ.
ಪ್ರಾಸಗಳಲ್ಲಿ ಎರಡಕ್ಷರ ಸಮಾನ ಇರಲಿ

*ಉದಾಹರಣೆ  ಇಲ್ಲಿದೆ ಗಮನಿಸಿ*


 
*ರುಬಾಯಿ*

ಬೇಕಿಲ್ಲಿ ದಿನವೂ ಲೇಖನಿ‌ಯೂ ಹರಿತ
ಸಾಹಿತ್ಯವೂ ಇರಲಿ ನಿತ್ಯ ಕೌತುಕ ಭರಿತ
ಹಿತದ ಅನುಭವದಿ ಗೆಲ್ಲೋಣ ಎಲ್ಲರನು
ಬರಹದಿ ಬೇಡವೇ ಬೇಡ ಇತರರಿಗೆ ಇರಿತ

*ಗಣೇಶ ಪ್ರಸಾದ ಪಾಂಡೇಲು*


*ಮೇಲಿನ ರುಬಾಯಿಯನ್ನು ಗಮನಿಸಿ*

* ಮೊದಲನೇ ಸಾಲಿನ ಕೊನೆಯ ಪದ *ಹರಿತ ಎರಡಕ್ಷರದ *ರಿತ* ಪ್ರಾಸದಲ್ಲಿ ಅಂತ್ಯವಾಗಿದೆ.
ಎರಡನೇ ಸಾಲಿನ ಕೊನೆಯ ಪದ  *ಭರಿತ ಎರಡಕ್ಷರದ *ರಿತ* ಪ್ರಾಸದಲ್ಲಿ ಅಂತ್ಯವಾಗಿದೆ
ಮೂರನೆಯ ಸಾಲಿನ ಕೊನೆಯ ಪದ ಎಲ್ಲರನು *ನು, (ಉ)* ಉಚ್ಛಾರಣೆ ಯಲ್ಲಿ ಅಂತ್ಯವಾಗಿದೆ
ನಾಲ್ಕನೆಯ ಸಾಲಿನಲ್ಲಿ ಕೊನೆಯ ಪದ  *ಇರಿತ* *ರಿತ* ಎರಡಕ್ಷರದ ಪ್ರಾಸದಲ್ಲಿ ಅಂತ್ಯವಾಗಿದೆ. ಹೀಗೆ  *ಒಂದು, ಎರಡು ಹಾಗೂ ನಾಲ್ಕನೇ ಸಾಲಿನ ಕೊನೆಯ ಪದಗಳಲ್ಲಿ ಕೊನೆಯ ಪದದ ಉಚ್ಛಾರಣೆ(ಅ) ಒಂದೇ ಆಗಿದ್ದು, ಮೂರನೇ ಸಾಲಿನ ಕೊನೆಯ ಪದದ ಕೊನೆಯ ಅಕ್ಷರದ ಉಚ್ಚಾರಣೆ(ಉ) ಬೇರೆ  ಆಗಿದೆ ಹೀಗಿದ್ದರೆ ಮಾತ್ರ ರುಬಾಯಿ ಅನಿಸಿಕೊಳ್ಳುತ್ತದೆ*

*ಉದಾಹರಣೆ ಗಮನಿಸಿ*




*ರುಬಾಯಿ*

ಛಲದಿಂದ ಸನ್ಮಾರ್ಗದಲ್ಲಿ ನಡೆದು
ಮೋಸ ವಂಚನೆಗಳನೆಲ್ಲಾ ತಡೆದು
ಜನಾನುರಾಗಿ ಆಗಲೇಬೇಕಾಗಿದೆ
ಸಾಮಾಜಿಕ ಪಿಡುಗುಗಳ ತೊಡೆದು

*- ಸೌಮ್ಯಾ ಗೋಪಾಲ್*


*ಇವುಗಳನ್ನು ಗಮನಿಸಿ  ಚೆಂದದ ರುಬಾಯಿಗಳನ್ನು ಬರೆಯಿರಿ*


 *ಶಮಾಚಂದ್ರ*
*ನಿರ್ವಾಹಕ ಬಳಗ*
*ಅಕ್ಷರ ದೀಪ*
( *ಕನ್ನಡವೇ ಸತ್ಯ ಕನ್ನಡವೇ ನಿತ್ಯ*)


ರುಬಾಯಿ ಎಂದರೆ*
ನಾಲ್ಕು ಸಾಲುಗಳ ಚುಟುಕು ಮಾದರಿ ರಚನೆ
ಒಂದು ಎರಡು ಮತ್ತು ನಾಲ್ಕನೇ ಸಾಲುಗಳು ಅಂತ್ಯ ಪ್ರಾಸ ಹೊಂದಿರಬೇಕು
ಮೂರನೇ ಸಾಲು
ಎಲ್ಲ ನಾಲ್ಕು ಸಾಲುಗಳ ಕೊಂಡಿಯಾಗಿರಬೇಕು
ಪ್ರಾಸಗಳು ತ್ರಾಸದಲಿ ಬರದಂತೆ ಎಚ್ಚರ ಅಗತ್ಯ
ಗಝಲ್ ನಂತೆ ರುಬಾಯಿಗೂ ಶೀರ್ಷಿಕೆ ಇರುವುದಿಲ್ಲ.
ಸಾಲುಗಳು ಸಮಾನವಾಗಿರಬೇಕು ಅಕ್ಷರಗಳು ಒಂದೇ ಸಮ ಇದ್ದರೆ ಒಳ್ಳೆಯದು . ಸಾಧ್ಯವಾದಷ್ಟು 2 ಅಕ್ಷರಗಳ ಪ್ರಾಸ ಇದ್ದರೆ ಚೆನ್ನ.


ಧ್ಯಾನ ಯೋಗದಲಿ ಮನವ ನಿಲಿಸುತ
ಸಂಸ್ಕೃತಿ ಆಚರಣೆಗಳನು ಪಾಲಿಸುತ
ಅರಿಷಡ್ವರ್ಗಗಳನ್ನು  ಸದಾ ದಮನಿಸು
ಬಾಳಲಿ ಶಾಂತಿ ನೆಮ್ಮದಿಯ ಗಳಿಸುತ

                         ಸುಜಾತಾ ರವೀಶ್

No comments:

Post a Comment