ಬರಿ ನೋವನ್ನೇ ಉಂಡ ಜೀವ
ಬರೀ ಕಷ್ಟಗಳ ಕಂಡ ಜೀವ
ಸುಖವೆಂಬುದೇ ದಕ್ಕದ ಬದುಕಲಿ
ಬಳಲಿದರು ಭರವಸೆ ಕಳೆದುಕೊಳ್ಳದೆ ಜೀವ
ಬಾಳಿನಲ್ಲಿ ಏರಿಗಿಂತ
ಇಳಿತದ್ದೇ ಸಿಂಹಪಾಲು
ಅಸಹಾಯಕತೆಯ ಆಕ್ರಮಣದಲ್ಲಿ
ಶ್ರಮದಿ ದುಡಿಯಿತು ಬಡತನ ನೀಗಲು
ಎದುರಾದ ಸವಾಲುಗಳನ್ನು
ಸಮಚಿತ್ತದಲ್ಲಿ ಎದುರಿಸಿ ನಡೆದು
ಸಮೃದ್ಧಿ ಕಾಣುವ ಸಮಯದಲ್ಲಿ
ಎಂಬುದು ಕರೆದೊಯ್ದು ಬಿಟ್ಟಿತು
ಆ ಸಂಕಷ್ಟದ ಬದುಕು ಇತರರಿಗೆ ಪಾಠ
ಅನುಭವದ ಅನಂತತೆ ಮಹಾಸಂಪುಟ
ನಡೆದ ದಾರಿಗಳು ನಮಗೆ ಆದರ್ಶ
ಎದುರಿಸಲು ಜೀವನದ ಸಂಘರ್ಷ
ನಿಮ್ಮ ಅನುಬಂಧ ನಮಗೆ ತುಂಬಾ ಇಷ್ಟ
ನಿಮ್ಮ ಅನುಪಸ್ಥಿತಿ ತುಂಬಲಾರದ ನಷ್ಟ
ದೇಹವಷ್ಟೇ ದೂರವಾಗಿದೆ ನಮ್ಮಿಂದ
ನಿಮ್ಮ ಪ್ರತಿ ಹೆಜ್ಜೆ ಅಜರಾಮರ ನಮ್ಮ ಹೃದಯದಲ್ಲಿ
0643ಎಎಂ27052021
ಅಪ್ಪಾಜಿ ಎ ಮುಸ್ಟೂರು
ಎಲ್ಲರ ಮನೆಯ ಕದ ತಟ್ಟುತ್ತ
ಬೇಕಾದವರನು ಚಟ್ಟಕ್ಕೆ ಹತ್ತಿಸುತ್ತ
ಹಣ ಅಂತಸ್ತಿಗಿಂತ ಆರೋಗ್ಯ ಭಾಗ್ಯ ಮುಖ್ಯ
ಅಮು
ಸಂದಿಗ್ಧತೆಯಲ್ಲಿ ಸಿಕ್ಕಿಕೊಂಡಿದೆ ಬದುಕು
0359ಪಿಎಂ28052021
No comments:
Post a Comment