Thursday, November 4, 2021

ನಿನ್ನ ಕಠೋರ ನಿಯಮಕ್ಕೆ
ನೊಂದ ಮನಸುಗಳ ದಿಕ್ಕಾರವಿದೆ
ನಿನ್ನ ಕ್ರೂರ ಮನಸ್ಥಿತಿಗೆ
ನಮ್ಮ  ಅಸಹಾಯಕತೆಯು ಕೈಚೆಲ್ಲಿದೆ

ನೋವಿನಲಿ ಬೇಯುತಿಹ ಜೀವಕೆ
ಸಂಜೀವಿನಿಯ ರೂಪದ ಪರಿಹಾರವಿಲ್ಲ
ಭರವಸೆಯೇ ಇಲ್ಲದ ಬದುಕಿಗೆ
ನಂಬಿಕೆಯ ನರಳಾಟ ಕೇಳುತ್ತಿಲ್ಲ

ಶಿಕ್ಷಿಸುವ ಭರದಲ್ಲಿ ಬದುಕು
ಅಮಾಯಕರ ಬಲಿ ಪಡೆಯುತಿದೆ
ಬಸವಳಿದ ತನುವಿಗೆ ಮತ್ತೆ ಮತ್ತೆ
ಸಾವು ನೋವಿನ ಶೂಲ ತಿವಿಯುತ್ತಿದೆ

ಜೀವಕಿನ್ನು ಖಾತ್ರಿ ಇಲ್ಲವೇ ಇಲ್ಲ
ಜೀವನವಿದು ಅನಿಶ್ಚಿತವಾಯ್ತಲ್ಲ
ಬಂಧ ಅನುಬಂಧಗಳೆಲ್ಲ ಕಳಚಿ
ಅನಾಥ ಪ್ರಜ್ಞೆ ನಿತ್ಯ ಕಾಡುತಿದೆ

ಕರೋನ ನಿನ್ನ ಕಬಂಧ ಬಾಹು ಚಾಚಿ
ಹೊತ್ತೊಯ್ದೆ ಅದೆಷ್ಟೋ ಜೀವಗಳ
ಈ ಘೋರ ದುರಂತಗಳ ಪಾಪಕೆ
ನಿನಗೂ ಮುಂದೊಮ್ಮೆ ಉತ್ತರ ಕೊಡುತ್ತದೆ

1240ಪಿಎಂ16052021 

No comments:

Post a Comment