Friday, September 29, 2017

*ಶ್ರೀ ಏಕನಾಥೇಶ್ವರಿ ಪ್ರಸನ್ನ* "ಎಲ್ಲಾದರೂ ಇರು ಎಂದಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು" ಎಂಬ ಕವಿವಾಣಿಯಂತೆ ತಾಯ್ನಾಡು,ತನ್ನ ಬಂಧು ಬಾಂಧವರ ಬಾಂಧವ್ಯ ವೃದ್ಧಿಗೆ ಹಾಗೂ ತನ್ನನ್ನು ಸಲುಹಿದ ಸಮಾಜಕ್ಕೆ ಏನಾದರೂ ಮಾಡಬೇಕು ಎಂಬ ಹಂಬಲವೇ 'ಕದಂ'ನ ಹುಟ್ಟಿಗೆ ಪ್ರೇರಣೆ ಎಂದರೆ ಅತಿಶಯೋಕ್ತಿಯಾಗದು. "ಕೂಲಿ ಕೆಲಸವೆಂದು ಕಳವಳದಿಂದ ಮಾಡದೆ, ಕಾಯಕ ಸೇವಾ ಮನೋಭಾವದಿಂದ ಮಾಡು,ಹಣ್ಣು ತನ್ನ ಗುಣ ತಾನೇ ಅರಿವುದೆ?ಕಣ್ಣು ತನ್ನ ತಾ ನೋಡಲು ಆಗುವುದೇ ? ಸೂರ್ಯ ಚಂದ್ರ ತರುಮರಾದಿಗಳು ತಮ್ಮ ಕಾಯಕ ಮರೆತಿರುವವೇ? ಸದಾ ಕಾಯಕ ನಿಷ್ಠನಾದಲ್ಲಿ ಆವ ಕೆಲಸವಾದರೂ ಸರಿ ಸನ್ಮಾರ್ಗ ಸದ್ಭಾವದಿಂದ ಮಾಡುವುದೇ ದೇವರಿಗೆ ಪ್ರಿಯ ಎಂದು ಭಾವಿಸುವ ಪ್ರತಿಯೊಂದು ಜೀವಿಯೂ ತನ್ನ ಕಾಯಕದಲ್ಲಿ ತೊಡಗಿ ಅದರಲ್ಲಿ ಬಂದುದನ್ನು ನಿಸ್ವಾರ್ಥ ಸೇವೆಗೆ ಮುಡಿಪಿಡುವ ಆ ಮೂಲಕ ಬದುಕಿನ ಸಾರ್ಥಕತೆಯನ್ನು ಕಾಣುವುದೇ ಪ್ರತಿಯೊಬ್ಬರ ಬದುಕಿನ ಗುರಿಯಾಗಿದೆ. "ಕದಂ" ಎಂಬ ಸಂಘಟನೆಯಿಂದ ನಮ್ಮ ಸಮಾಜದ ಋಣ ತೀರಿಸಲು ಸಮಾನ ಮನಸ್ಕರ ಈ ತಂಡ ತನ್ನ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ . ಆರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಜನರಿಂದ ಆರಂಭಗೊಂಡ "ಕದಂ" ಇಂದು ತನ್ನ ನಿಸ್ವಾರ್ಥ ಸೇವೆಯ ಮೂಲಕ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ನಾಡು ನುಡಿಗಾಗಿ ಸಮಾಜದ ಕಲ್ಯಾಣಕ್ಕಾಗಿ ಕಂಕಣ ತೊಟ್ಟು ತನ್ನ ಬದ್ಧತೆಯನ್ನೂ ತೋರುತ್ತಾ ಬಂದಿದೆ. "ಜೀವನೋಧ್ಯಮವೆಲ್ಲ ತೋಟದುದ್ಯೋಗವೇನು, ಭಾವ ಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ತೀವ್ರ ತೆರನಿಗೆ ಹೊಳಪು ಮೊಗ ಮೊಗದಲ್ಲಿ ಜಗದಿ ಸೇವೆಯೆಂಬುದು ಬೊಮ್ಮನಿಗೆ ಮಂಕುತಿಮ್ಮ" ಎಂಬ ಸಾರವನರಿತು ಸೇವೆಗಾಗಿ 'ಕದಂ' ಸದಾ ಸನ್ನದ್ದವಾಗಿದೆ. 2016 - 17 ನೇ ಸಾಲಿನ 'ಕದಂ'ನ ಕಾರ್ಯಕ್ರಮಗಳು ಬಡಮಕ್ಕಳಿಗೆ ವಿದ್ಯಾರ್ಜನೆ ಮತ್ತು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು .ದಿನಾಂಕ 23:07:2017 ರಂದು ಅಣ್ಣಯ್ಯ ಸಭಾಭವನ ತ್ರಾಸಿಯಲ್ಲಿ ನಡೆದ ಸಮಾರಂಭದಲ್ಲಿ ಶ್ರೀ ಲೋಕೇಶ ಬಂಕೇಶ್ವರ ಕಲಾವಿದರು ಹಾಗೂ ಅಂಬಿಕ ರಾಜ್ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಕುಮಾರಿ ರಾಧಿಕ ಎಂ ಪೈ ಹಾಗೂ ಎಸ್. ಎಸ್. ಎಲ್. ಸಿ ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಕುಮಾರಿ ರಂಜಿತ ಆಚಾರ್ಯ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಲ್ಲದೆ ಶ್ವೇತಾ ದೇವಾಡಿಗ ಮರವಂತೆ,ಅಭಿಷೇಕ ದೇವಾಡಿಗ ನಾಗೂರು, ಪ್ರಜ್ವಲ್ ದೇವಾಡಿಗ ಉಪ್ಪಿನಕುತ್ರು, ರಕ್ಷಿತ್ ದೇವಾಡಿಗ ಉಪ್ಪುಂದ, ನಿವೇದಿತಾ ಎಸ್ ದೇವಾಡಿಗ ಆಲೂರು ಇವರನ್ನು ಸಹ 'ಕದಂ' ಅತ್ಯಂತ ಗೌರವಾದರಗಳಿಂದ ಪುರಸ್ಕರಿಸಿ ಸಮಾಜದ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ನೀಡಿದ ತೃಪ್ತಿ ನಮ್ಮ ಸಂಘದ್ದಾಗಿದೆ. ಅದು ಅಲ್ಲದೇ ವಾಕ್ ಶ್ರವಣ ದೋಷ ಇರುವ ಉತ್ಸವಿ ದೇವಾಡಿಗ ಅವರಿಗೆ 'ಕದಂ' ತನ್ನ ಸಹಾಯ ಹಸ್ತ ಚಾಚಿದ್ದು ಅವಳ ಚಿಕಿತ್ಸೆಗಾಗಿ ಒಂದು ಲಕ್ಷ ರೂಪಾಯಿ ಸಹಾಯಧನವನ್ನು ನೀಡಿ ಸಾರ್ಥಕತೆಯನ್ನು ಮೆರೆದಿದೆ. ಇನ್ನು ರಂಜಾನ್ ಹಬ್ಬದ ಪ್ರಯುಕ್ತ ದುಬೈನಲ್ಲಿ ಸಮಾಜದ ಸುಮಾರು ಐವತ್ತಕ್ಕೂ ಹೆಚ್ಚಿನ ಸದಸ್ಯರುಗಳ ಸಹಕಾರದಿಂದ ಸತತ ಆರು ವರ್ಷಗಳಿಂದ ರಕ್ತದಾನ ಶಿಬಿರಗಳುನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುವ ಮೂಲಕ ರಕ್ತದಾನದ ಮಹತ್ವವನ್ನು ಸಾರುವ ಕೆಲಸ ಮಾಡಿಕೊಂಡು ಬರುತ್ತಿದೆ ನಮ್ಮ ಈ 'ಕದಂ'.ಇದು ಅಲ್ಲದೆ 2016_17 ನೇ ಸಾಲಿನಲ್ಲಿ ನಮ್ಮ ಸಂಘವು ಆರ್ಥಿಕವಾಗಿ ಅಶಕ್ತರಾಗಿರುವ ಬಡಕುಟುಂಬಗಳಿಗೆ ಸುಮಾರು ಐದು ಲಕ್ಷ ರೂಪಾಯಿಯ ವೈದ್ಯಕೀಯ ನೆರವನ್ನು ನೀಡುವ ಮೂಲಕ ಬಡವರ ಆಶಾಕಿರಣವಾಗಿ ಅವರ ನೈತಿಕ ಹಾಗೂ ಆರ್ಥಿಕ ಬೆಂಬಲವನ್ನು ಒದಗಿಸುತ್ತಾ ಸಮಾಜದ ಋಣ ಸಂದಾಯ ಮಾಡಿದ ತೃಪ್ತಿಯಲ್ಲಿದೆ ನಮ್ಮ ಕದಂ. , 'ಕದಂ'ನ ಮತ್ತೊಂದು ವಿಶೇಷವೆಂದರೆ ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗ ಅರಸಿ ಬರುವ ನಮ್ಮ ಸಮಾಜದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. 'ಕದಂ' ನಲ್ಲಿ ಯಾವುದೇ ಅಧಿಕಾರ ಸ್ಥಾನಮಾನದ ಹಂಗಿಲ್ಲದೆ ಸರ್ವರೂ ಸೇವಕರಾಗಿ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವುದು ನಮ್ಮ 'ಕದಂ'ನ ಹೆಗ್ಗಳಿಕೆಯಾಗಿದೆ. ಅಲ್ಲದೆ ಸಮುದಾಯದ ಸಾಧಕರನ್ನು ಗುರುತಿಸಿ "ದೇವಾಡಿಗ ಸಾಧಕ" ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ. "ಬಿಡುವಿಲ್ಲದೀ ಜೀವಿ ತಾಪಣದ ಸರಕೆಣಸಿ ಕಡೆಯೆಂದು ? ಮುಗಿಯದಿಹ ಲಾಭನಷ್ಟಗಳ ಕಡತದೊಳ್ ಅದೆಂದಿನ ಲೆಕ್ಕವೇ ತೀರ್ಮಾನ ?ಬಿಡು ಲಾಭದಾತುರವ ಮಂಕುತಿಮ್ಮ" ಎಂಬಂತೆ ದುಡಿದ ದುಡಿಮೆಯಲ್ಲಿ ಸ್ವಲ್ಪ ಸ್ವಲ್ಪವನೇ ಉಳಿಸಿ ಲಾಭದಾಸೆಗೆ ಬೀಳದೆ ಸಮಾಜದ ಋಣ ತೀರಿಸಲು ತನ್ನನ್ನು ತೊಡಗಿಸಿಕೊಂಡಿದೆ ನಮ್ಮ ಈ 'ಕದಂ' ಕದಂ'ನ ಮುಂದಿನ ಗುರಿಗಳು :- * ವಿದ್ಯನಿಧಿಯನ್ನು ಐದು ಲಕ್ಷಕ್ಕೆ ಏರಿಸುವ ಮೂಲಕ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು. * ವೈದ್ಯಕೀಯ ಸಹಾಯಕ್ಕಾಗಿ ಶಾಶ್ವತ ನಿಧಿಯನ್ನು ಸ್ಥಾಪಿಸುವ ಮೂಲಕ ಸಮಾಜದ ಅರ್ಹ ಬಡವರ ಆರೋಗ್ಯಕ್ಕೆ ಸಹಾಯ ಹಸ್ತ ಚಾಚುವುದು. * ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರಿಗೊಂದು ಬದುಕು ಕಟ್ಟಿಕೊಡುವ ಸಾರ್ಥಕ ಕಾರ್ಯ ಮಾಡುವುದು ಕದಂ'ನ ಮುಖ್ಯ ಗುರಿಯಾಗಿದೆ. ನಮ್ಮ ದೇವಾಡಿಗರ ಆರಾಧ್ಯ ದೈವ ಶ್ರೀ ಏಕನಾಥೇಶ್ವರಿ ದೇವಾಲಯವನ್ನು ಬಾರಕೂರಿನಲ್ಲಿ ಕಟ್ಟಿಸುತ್ತಿದ್ದು ಅದಕ್ಕಾಗಿ ಕದಂ'ನ ತನ್ನ ಕೈಜೋಡಿಸಿ ದೇವಾಲಯದ ಕೆಲಸ ಕಾರ್ಯಗಳಿಗೆ ಧನವಿನಿಯೋಗ ಮಾಡುವ ಮೂಲಕ ದೇವರ ಕಾರ್ಯಗಳಿಗೆ ತನ್ನ ಅಳಿಲು ಸೇವೆ ಸಲ್ಲಿಸಿದ ತೃಪ್ತಿ ಹೊಂದಿದೆ. ಕೊನೆಯದಾಗಿ ನಿಸ್ವಾರ್ಥ ಸೇವೆಯನ್ನೇ ತನ್ನ ಧ್ಯೇಯವಾಗಿಟ್ಪುಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘದ ಪ್ರತಿ ಸದಸ್ಯರೂ ಕೂಡ ಅರ್ಪಣಾ ಮನೋಭಾವದಿಂದ ಯಶಸ್ವಿಯಾಗಿ ನಡೆಸಿಕೊಂಡು ಬರಲಾಗಿದೆ. ಇನ್ನು ಮುಂದೆಯೂ ಸದಸ್ಯರೆಲ್ಲರೂ ತನು ಮನ ಧನದಿಂದ ಸಹಕರಿಸಿ ಸಮಾಜದ ಏಳಿಗೆಗಾಗಿ ಶ್ರಮಿಸುವ ಮಹತ್ವದ ಗುರಿಯನ್ನು ಹೊಂದಲಾಗಿದೆ. ಅದಕ್ಕೆ ಸಹಕರಿಸುವರೆಂಬ ವಿಶ್ವಾಸ ಕದಂ'ನದ್ದಾಗಿದೆ. ಧನ್ಯವಾದಗಳು
[23/09 5:52 pm] ಅಮುಭಾವಜೀವಿ: *ಅವಳೆಂದರೆ ಕರುಣಾಮಯಿ* *ಎಂದೆಂದಿಗೂ ಅವಳೆನ್ನ ಎರಡನೇ ತಾಯಿ* [23/09 5:54 pm] ಅಮುಭಾವಜೀವಿ: *ಅವಳೆಂದರೆ ನನ್ನೊಡಲ ಅರ್ಧಾಂಗಿ* *ಕಡೆದಳು ಈ ಕಮಂಗಿಯನ್ನು ಶಿಲ್ಪವಾಗಿ* [23/09 5:59 pm] ಅಮುಭಾವಜೀವಿ: *ಅವಳೆಂದರೆ ಸಂಪ್ರೀತಿ* *ಅದಕೆ ನಾನವಳಿಗೆ ಶರಣಾಗತಿ* [23/09 6:03 pm] ಅಮುಭಾವಜೀವಿ: *ಅತಿ ಶರಣಾಗತಿ ಪ್ರೀತಿಯ ಸಂಕೇತ* *ಅವಳೊಂದಿಗೆ ಬದುಕುವುದೇ ಸಂತಸ* [23/09 6:05 pm] ಅಮುಭಾವಜೀವಿ: *ಅವಳೆಂದರೆ ನಂಬಿಕೆ* *ಅವಳಿರಲು ಇಲ್ಲ ಅಂಜಿಕೆ* *ಅವಳೆಂದರೆ ಸೂಜಿದಾರ* *ಅವಳೆನ್ನ ಬದುಕಿನಾಧಾರ*
ಭಾಗ 3 ಕಥೆ: *ಆ ನೆನಪುಗಳು* *ಹಿಂದಿನ ಸಂಚಿಕೆಯಿಂದ* ಅರುಣನದು ಸ್ಥಿತಿವಂತ ಕುಟುಂಬವಲ್ಲ. ಆದರೆ ಕಷ್ಟಪಟ್ಟು ದುಡಿದು ತಿನ್ನುವ ಬಡತನದಲ್ಲೂ ಸ್ವಾಭಿಮಾನಕ್ಕೆ ಎಂದೂ ಧಕ್ಕೆ ಬಾರದಂತೆ ಬದುಕಿದ ಕುಟುಂಬವಾಗಿತ್ತು. ಅವನ ತಂದೆ ರೈತ. ಹೇಳಿ ಕೇಳಿ ರೈತನ ಬದುಕು ಇಂದು ತುಂಬಾ ಕನಿಷ್ಠವಾಗಿದೆ.ಆದರೆ ಅಂದು ಅವನ ಮನೆಯಲ್ಲಿ ಎಲ್ಲರೂ ಶ್ರಮಜೀವಿಗಳಾಗಿ ದುಡಿಯುತ್ತಿದ್ರು. ಅವನ ಅಕ್ಕಂದಿರು ಅಣ್ಣ ಅಪ್ಪ ಅಮ್ಮ ಎಲ್ಲರೂ ದಿನವೂ ಹೊಲದ ಕೆಲಸದಲ್ಲಿ ನಿರತಾಗಿರುತ್ತಿದ್ದರು. ಅರುಣ್ ಕೂಡ ಅವರೊಂದಿಗೆ ಕೆಲಸ ಮಾಡುತ್ತಿದ್ದ. ಶಾಲೆ ಪ್ರಾರಂಭಕ್ಕೂ ಮುಂಚೆ ಹಾಗೂ ಶಾಲೆ ಬಿಟ್ಟ ನಂತರ ಹೊಲಕ್ಕೆ ತೆರಳಿ ತನ್ನವರೊಂದಿಗೆ ಸೇರಿ ಕೆಲಸ ಮಾಡುವುದು.ಅಲ್ಲಿ ಬಿಡುವಿನ ವೇಳೆಯಲ್ಲಿ ಓದಿಕೊಳ್ಳುವುದನ್ನು ಮಾಡುತ್ತಿದ್ದ.ಹೀಗಿದ್ದರೂ ಅವನ ಶಾಲೆಯಲ್ಲಿ ಮಾತ್ರ ನಂಬರ್ ಒನ್. ಬದುಕನ್ನು ಕಟ್ಟಿಕೊಳ್ಳುವ ದಿಟ್ಟ ಕನಸಿಗಿಂತ ನಿತ್ಯದ ಆಭ್ಯಾಸ ಅವನನ್ನು ಉನ್ನತ ಶ್ರೇಣಿಯಲ್ಲಿ ಪಾಸಾಗುವಂತೆ ಮಾಡಿತ್ತು.ಎರಡು ವರ್ಷದ ಕಾಲೇಜು ಜೀವನ ಹಾಗಂತಮುಗಿದದ್ದೇ ಗೊತ್ತಾಗಂತೆ ಕಳೆದುಹೋಯ್ತು .ಮತ್ತೆ ಸ್ನೇಹಿತರನ್ನು ಅಗಲುವ ಆ ಘಳಿಗೆ ಬಂತು. ತನ್ನ ತಂದೆ ತಾಯಿಯ ಆಸೆಯಂತೆ ಸರ್ಕಾರಿ ಕೆಲಸ ಹಿಡಿಯುವ ಸಲುವಾಗಿ ಮುಂದಿನ ಹೆಚ್ಚಿನ ಅಭ್ಯಾಸಕ್ಕಾಗಿ ಬೇರೊಂದು ಊರಿಗೆ ಹೋಗಬೇಕಾಯಿತು. ಅಲ್ಲಿ ಮತ್ತೆ ಅರುಣನಿಗೆ ಒಂಟಿತನ ಕಾಡಲು ಶುರುವಾಯ್ತು..ಹಾಗಂತ ಅವನೇನು ಅಲ್ಲಿ ಓದಿನಲ್ಲಿ ಹಿಂದೆ ಬೀಳಲಿಲ್ಲ. ಚೆನ್ನಾಗಿ ಅಭ್ಯಾಸ ನಡೆಸುತ್ತಿದ್ದ. ಒಮ್ಮೆ ಊರಿಗೆ ಬಂದಾಗ ಅವನ ಬಾಲ್ಯದ ಗೆಳೆಯ ಸಿಕ್ಕ. "ಹಾಯ್ ಗೆಳೆಯ ! ಹೇಗಿದ್ದೀಯೋ ? . ನಮ್ಮನ್ನು ಮರೆತೇಬಿಟ್ಟೆಯಾ ? ಎಂದು ಆಲಂಗೀಸಿಕೊಂಡ.
ಭಾಗ 2 ಕಥೆ: *ಆ ನೆನಪುಗಳು* *ಹಿಂದಿನ ಸಂಚಿಕೆಯಿಂದ* ಅರುಣ್ ಓದಿನಲ್ಲಿ ಸದಾ ಮುಂದು. ಇವನ ಹಿಂದೆ ಅವನ ಗೆಳೆಯರ ದಂಡು. ಹೀಗಿದ್ದರೂ ಕಾಲೇಜಿನಲ್ಲಿ ಅವನೆಂದೂ ಗುಂಪುಗಾರಿಕೆ ಮಾಡಿದವನಲ್ಲ.ಬದಲಾಗಿ ತನ್ನ ಆಪ್ತರೊಂದಿಗೆ ಸೇರಿ ಅಂದಂದಿನ ಪಾಠಗಳ ಕುರಿತಾದ ಚರ್ಚೆಯಲ್ಲಿ ತೊಡಗಿಸಿಕೊಂಡು ತಾನೂ ಕಲಿಯುತ್ತ ಸ್ನೇಹಿತರನ್ನು ಕಲಿಕೆಯಲ್ಲಿ ಪಕ್ವಗೊಳಿಸುತ್ತಿದ್ದ ಪ್ರತಿಭಾನ್ವಿತ. ಹೀಗೆ ಅರುಣ್ ತನ್ನ ಪಾಡಿಗೆ ತಾನು ಕಲಿಕೆಯಲ್ಲಿ ಪ್ರಗತಿ ಹೊಂದುತ್ತ ಉಪನ್ಯಾಸಕರು ಪ್ರಾಂಶುಪಾಲರು ಏಕೆ ಇಡೀ ಕಾಲೇಜಿನ ಜವಾನರಲ್ಲೂ ಮನೆಮಾತಾಗಿದ್ದು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ವಿದ್ಯಾಭ್ಯಾಸದ ವಿಷಯದಲ್ಲಿ ಅವನನ್ನು ಸರಿಗಟ್ಟುವವರಿದ್ದಿಲ್ಲ.ಬಡತನ ಎನ್ನುವುದು ಅವನಿಗಿಂತಹ ಸಂಸ್ಕಾರವನ್ನು ಕಲಿಸಿತ್ತು.ಹೀಗಿರುವಾಗ ಅದೇ ಕಾಲೇಜಿನಲ್ಲಿ ಇವನ ಪ್ರತಿಸ್ಪರ್ಧಿ ಎಂದರೆ ರಶ್ಮಿ ಎಂಬ ಸೌಂದರ್ಯವತಿ. ತನ್ನ ತಂದೆ ತಾಯಿ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರು.ಆಕೆಗೆ ಯಾವುದಕ್ಕೂ ಕೊರತೆಬಾರದಂತೆ ಸಾಕಿದ್ದರು. ಅವಳು ಸಹ ಬುದ್ದಿವಂತೆ. ಆದರೆ ಅರುಣನನ್ನು ಸರಿಗಟ್ಟಲಾಗುತ್ತಿರಲಿಲ್ಲ. ಅವಳೊಮ್ಮೆ ಉಪಾಧ್ಯಾಯರಲ್ಲಿ ಹೇಳಿಕೊಳ್ಳುತ್ತಿದ್ದಳಂತೆ," ಸರ್ ನಾನು ಎಷ್ಟೇ ಓದಿದರೂ ಅವನನ್ನು ಸರಿಗಟ್ಟಲಾಗುತ್ತಿಲ್ಲ. " ಅಂತ ಆದರೆ ಅವನೇನು ಪುಸ್ತಕದ ಹುಳುವಾಗಿರಲಿಲ್ಲ. ಬದಲಾಗಿ ಕಷ್ಟಪಟ್ಟು ಓದುವ ಛಲ ಉಳ್ಳವನಾಗಿದ್ದ. ಹೀಗೆ ಅವನ ಕಲ್ಪನಾ ಲಹರಿ ಸಾಗುತ್ತಿತ್ತು. ಅಷ್ಟರಲ್ಲಿ ಅವನ ರೂಮ್ ಮೇಟ್ 'ಅಪ್ಪ ಮಾರಾಯ ಕನಸು ಕಂಡಿದ್ದು ಸಾಕು, ಈಗ ಊಟಕ್ಕೆ ಸಮಯ ಆಗಿದೆ ಬಾರೋ ' ಎಂದಾಗಲೇ ಅವನಿಗೆ ಎಚ್ಚರ ಆಗಿದ್ದು. ' ಓಹ್ ! ಕ್ಷಮೆ ಇರಲಿ ಕಣೋ, ನನ್ನ ಬಾಲ್ಯದ ಗುಂಗಲ್ಲಿ ಮುಳುಗಿಹೋಗಿದ್ದೆ. ಸಮಯ ಹೋಗಿದ್ದೇ ಗೊತ್ತಾಗ್ಲಿಲ್ಲ ನೋಡು' ಎನ್ನುತ್ತಾ ಬೇಗನೇ ಎದ್ದು ಫ್ರಶಪ್ ಆಗಿ ಊಟಕ್ಕೆ ಹೋಗಿ ಬಂದರು. ಮತ್ತೆ ಅವನ ಸ್ನೇಹಿತ ರಾತ್ರಿ ಪಾಳಿಯ ಕೆಲಸಕ್ಕೆ ಹೊರಟುಹೋದ ಮತ್ತೆ ಇವನ ತನ್ನ ಕಲ್ಪನೆಯಲಿ ಮುಳುಗಿದ. *ಮುಂದುವರೆಯುವುದು*
*ಹಿಂದಿನ ಸಂಚಿಕೆಯಿಂದ* ಅರುಣನದು ಸ್ಥಿತಿವಂತ ಕುಟುಂಬವಲ್ಲ. ಆದರೆ ಕಷ್ಟಪಟ್ಟು ದುಡಿದು ತಿನ್ನುವ ಬಡತನದಲ್ಲೂ ಸ್ವಾಭಿಮಾನಕ್ಕೆ ಎಂದೂ ಧಕ್ಕೆ ಬಾರದಂತೆ ಬದುಕಿದ ಕುಟುಂಬವಾಗಿತ್ತು. ಅವನ ತಂದೆ ರೈತ. ಹೇಳಿ ಕೇಳಿ ರೈತನ ಬದುಕು ಇಂದು ತುಂಬಾ ಕನಿಷ್ಠವಾಗಿದೆ.ಆದರೆ ಅಂದು ಅವನ ಮನೆಯಲ್ಲಿ ಎಲ್ಲರೂ ಶ್ರಮಜೀವಿಗಳಾಗಿ ದುಡಿಯುತ್ತಿದ್ರು. ಅವನ ಅಕ್ಕಂದಿರು ಅಣ್ಣ ಅಪ್ಪ ಅಮ್ಮ ಎಲ್ಲರೂ ದಿನವೂ ಹೊಲದ ಕೆಲಸದಲ್ಲಿ ನಿರತಾಗಿರುತ್ತಿದ್ದರು. ಅರುಣ್ ಕೂಡ ಅವರೊಂದಿಗೆ ಕೆಲಸ ಮಾಡುತ್ತಿದ್ದ. ಶಾಲೆ ಪ್ರಾರಂಭಕ್ಕೂ ಮುಂಚೆ ಹಾಗೂ ಶಾಲೆ ಬಿಟ್ಟ ನಂತರ ಹೊಲಕ್ಕೆ ತೆರಳಿ ತನ್ನವರೊಂದಿಗೆ ಸೇರಿ ಕೆಲಸ ಮಾಡುವುದು.ಅಲ್ಲಿ ಬಿಡುವಿನ ವೇಳೆಯಲ್ಲಿ ಓದಿಕೊಳ್ಳುವುದನ್ನು ಮಾಡುತ್ತಿದ್ದ.ಹೀಗಿದ್ದರೂ ಅವನ ಶಾಲೆಯಲ್ಲಿ ಮಾತ್ರ ನಂಬರ್ ಒನ್. ಬದುಕನ್ನು ಕಟ್ಟಿಕೊಳ್ಳುವ ದಿಟ್ಟ ಕನಸಿಗಿಂತ ನಿತ್ಯದ ಆಭ್ಯಾಸ ಅವನನ್ನು ಉನ್ನತ ಶ್ರೇಣಿಯಲ್ಲಿ ಪಾಸಾಗುವಂತೆ ಮಾಡಿತ್ತು.ಎರಡು ವರ್ಷದ ಕಾಲೇಜು ಜೀವನ ಹಾಗಂತಮುಗಿದದ್ದೇ ಗೊತ್ತಾಗಂತೆ ಕಳೆದುಹೋಯ್ತು .ಮತ್ತೆ ಸ್ನೇಹಿತರನ್ನು ಅಗಲುವ ಆ ಘಳಿಗೆ ಬಂತು. ತನ್ನ ತಂದೆ ತಾಯಿಯ ಆಸೆಯಂತೆ ಸರ್ಕಾರಿ ಕೆಲಸ ಹಿಡಿಯುವ ಸಲುವಾಗಿ ಮುಂದಿನ ಹೆಚ್ಚಿನ ಅಭ್ಯಾಸಕ್ಕಾಗಿ ಬೇರೊಂದು ಊರಿಗೆ ಹೋಗಬೇಕಾಯಿತು. ಅಲ್ಲಿ ಮತ್ತೆ ಅರುಣನಿಗೆ ಒಂಟಿತನ ಕಾಡಲು ಶುರುವಾಯ್ತು..ಹಾಗಂತ ಅವನೇನು ಅಲ್ಲಿ ಓದಿನಲ್ಲಿ ಹಿಂದೆ ಬೀಳಲಿಲ್ಲ. ಚೆನ್ನಾಗಿ ಅಭ್ಯಾಸ ನಡೆಸುತ್ತಿದ್ದ. ಒಮ್ಮೆ ಊರಿಗೆ ಬಂದಾಗ ಅವನ ಬಾಲ್ಯದ ಗೆಳೆಯ ಸಿಕ್ಕ. "ಹಾಯ್ ಗೆಳೆಯ ! ಹೇಗಿದ್ದೀಯೋ ? . ನಮ್ಮನ್ನು ಮರೆತೇಬಿಟ್ಟೆಯಾ ? ಎಂದು ಆಲಂಗೀಸಿಕೊಂಡ.
ಕಥೆ: *ಆ ನೆನಪುಗಳು* *ನನ್ನ ಮೊದಲ ಪ್ರಯತ್ನ ದಯವಿಟ್ಟು ತಿದ್ದಿ ತೀಡಿ ಆಶೀರ್ವದಿಸಿ* "ಜೀವನ ಏರು ಪೇರಿನಾ ಗಾಯನ" ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಸುಶ್ರಾವ್ಯ ಗೀತೆಯನ್ನು ಕೇಳುತ್ತಾ ಹಾಗೆ ಮಲಗಿಕೊಂಡವನ ಭಾವಲಹರಿ ಅವನ ಕಾಲೇಜಿನ ದಿನಗಳತ್ತ ಹೊರಳಿತು. ನಿಜಕ್ಕೂ ಬದುಕಿನ ಅತ್ಯಂತ ಸಂಭ್ರಮದಿಂದ ಸಂತೋಷವನ್ನು ಆಸ್ವಾದಿಸುವ ವಯಸ್ಸು ಅದು.ಕಾಲೇಜಿನ ಗೆಳೆಯ ಗೆಳತಿಯರ ಒಡನಾಟದಲ್ಲಿ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಪರ್ವ ಕಾಲವದು.ಬಾಲ್ಯದ ಗೆಳೆಯರನ್ನೆಲ್ಲಾ ಮತ್ತೊಮ್ಮೆ ಕೂಡಿಕೊಳ್ಳುವ ಸದಾವಕಾಶ ಹಾಗೂ ಹೊಸ ಗೆಳೆಯ ಗೆಳತಿಯರೊಂದಿಗೆ ಹೊಸ ಬಂಧ ಹುಟ್ಟಿಕೊಳ್ಳುವ ಸುಸಮಯ. ಅರುಣ್ ಮಧ್ಯಮವರ್ಗದ ಕುಟುಂಬದಿಂದ ಬಂದವನು. ಆದ್ದರಿಂದ ಅವನಲ್ಲಿ ಗರ್ವಕ್ಕಿಂತ ವಿನಯಕ್ಕೆ ಹೆಚ್ಚು ಆದ್ಯತೆ. ತನ್ನಲ್ಲಿ ವಿದ್ವತ್ ಇದ್ದರೂ ಅದನ್ನೆಂದೂ ಅಹಂಕಾರವಾಗಿ ಬಳಸಿಕೊಳ್ಳದ ಚತುರ.ತನ್ನ ಸ್ನೇಹಿತರನ್ನು ಜಾತಿ ಧರ್ಮಗಳಿಗೆ ಪ್ರೀತಿಸುವ ಮಾನವೀಯ ಗುಣಗಳು ಅವನಲ್ಲಿದ್ದವು.ಅದಕ್ಕಾಗಿಯೇ ಎಲ್ಲಾ ಸ್ನೇಹಿತರು ಅವನನ್ನು ಸೂಜಿಗಲ್ಲಿನಂತೆ ಅಂಟಿಕೊಂಡಿರುತ್ತಿದ್ದರು. ಅರುಣ್ ಬಡ ಕುಟುಂಬದಿಂದ ಬಂದುದಕ್ಕಾಗಿಯೇ ಏನೋ ದೂರದ ಊರಿನಲ್ಲಿದ್ದ ಕಾಲೇಜಿಗೆ ಸೇರಿಕೊಂಡನು. ಆದರೆ ಏಕೋ ಅವನಿಗೆ ಅಲ್ಲಿನ ವಾತಾವರಣ ಹಿಡಿಸಲಿಲ್ಲ.ತುಂಬಾ ಮಂಕಾಗುತ್ತಾ ಹೋದ. ಇದನ್ನು ಗಮನಿಸಿದ ಅವನ ಮಾವ ಮತ್ತೆ ತಾನು ಓದಿದ ಶಾಲೆಯಲ್ಲಿಯೇ ಇದ್ದ ಪ್ರಥಮ ಪಿಯುಸಿಗೆ ಸೇರಿಸಿದರು. ಅನಿವಾರ್ಯ ಕಾರಣಗಳಿಂದ ಮತ್ತೆ ತನ್ನ ಹುಟ್ಟೂರಿನ ಶಾಲೆಯಲ್ಲಿಯೇ ಓದುವ ಅವಕಾಶ ಒದಗಿಬಂತು. ಆಗ ಅರುಣ್ ಮತ್ತೆ ಮೊದಲಿನಂತೆ ಚುರುಕಾದ. ತನ್ನ ಗ್ರಾಮದ ಕಾಲೇಜಿನಲ್ಲಿ ಓದಿ ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ಛಲ ತೊಟ್ಟು ಅದಕ್ಕಾಗಿ ಮೊದಲ ದಿನದಿಂದಲೇ ಕಾರ್ಯಪ್ರವೃತ್ತನಾದ. ಅದು ಕಾಲೇಜಿಗೆ ಬಂದ ಹೊಸದರಲ್ಲಿ ಅದೇ ಶಾಲೆಯಲ್ಲಿ ಓದಿದ್ದರೂ ಎರಡು ಮೂರು ತಿಂಗಳ ನಂತರ ಬಂದಿದ್ದರಿಂದ ಹೊಸ ಜಾಗದಲ್ಲಿ ಹೊಸ ಸ್ನೇಹಿತರೊಂದಿಗೆ ಹೊಸತನವು ಚಿಗುರೊಡೆವ ಕಾಲ.ಬಾಲ್ಯದ ಕೆಲ ಸ್ನೇಹಿತರನ್ನು ಬಿಟ್ಟರೆ ಉಳಿದವರೆಲ್ಲ ಹೊಸಬರೇ ಆಗಿದ್ದರು.ಕಾಲೇಜಿಗೆ ಬಂದ ಮೊದಲ ದಿನ ಎಲ್ಲರ ಪರಿಚಯದ ಕಾರ್ಯಕ್ರಮವನ್ನು ಹಳೆಯ ಸ್ನೇಹಿತರು ನೆರವೇರಿಸಿದರು. ಹೀಗೆ ದಿನೇ ದಿನೇ ಕಾಲೇಜಿನ ವಿದ್ಯಾಭ್ಯಾಸ ಸಾಗುತ್ತಿತ್ತು.ಅರುಣ್ ಕೆಲವೇ ದಿನಗಳಲ್ಲಿ ಎಲ್ಲರ ನೆಚ್ಚಿನ ವಿದ್ಯಾರ್ಥಿಯಾಗಿದ್ದ.ಯಾವೊಬ್ಬ ಸ್ನೇಹಿತನನ್ನು ನೋಯಿಸದೇ ಜನಾನುರಾಗಿಯಾದ. ಅರುಣ್ ಓದಿನಲ್ಲಿ ಸದಾ ಮುಂದು. ಇವನ ಹಿಂದೆ ಅವನ ಗೆಳೆಯರ ದಂಡು. ಹೀಗಿದ್ದರೂ ಕಾಲೇಜಿನಲ್ಲಿ ಅವನೆಂದೂ ಗುಂಪುಗಾರಿಕೆ ಮಾಡಿದವನಲ್ಲ.ಬದಲಾಗಿ ತನ್ನ ಆಪ್ತರೊಂದಿಗೆ ಸೇರಿ ಅಂದಂದಿನ ಪಾಠಗಳ ಕುರಿತಾದ ಚರ್ಚೆಯಲ್ಲಿ ತೊಡಗಿಸಿಕೊಂಡು ತಾನೂ ಕಲಿಯುತ್ತ ಸ್ನೇಹಿತರನ್ನು ಕಲಿಕೆಯಲ್ಲಿ ಪಕ್ವಗೊಳಿಸುತ್ತಿದ್ದ ಪ್ರತಿಭಾನ್ವಿತ. ಹೀಗೆ ಅರುಣ್ ತನ್ನ ಪಾಡಿಗೆ ತಾನು ಕಲಿಕೆಯಲ್ಲಿ ಪ್ರಗತಿ ಹೊಂದುತ್ತ ಉಪನ್ಯಾಸಕರು ಪ್ರಾಂಶುಪಾಲರು ಏಕೆ ಇಡೀ ಕಾಲೇಜಿನ ಜವಾನರಲ್ಲೂ ಮನೆಮಾತಾಗಿದ್ದು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ವಿದ್ಯಾಭ್ಯಾಸದ ವಿಷಯದಲ್ಲಿ ಅವನನ್ನು ಸರಿಗಟ್ಟುವವರಿದ್ದಿಲ್ಲ.ಬಡತನ ಎನ್ನುವುದು ಅವನಿಗಿಂತಹ ಸಂಸ್ಕಾರವನ್ನು ಕಲಿಸಿತ್ತು.ಹೀಗಿರುವಾಗ ಅದೇ ಕಾಲೇಜಿನಲ್ಲಿ ಇವನ ಪ್ರತಿಸ್ಪರ್ಧಿ ಎಂದರೆ ರಶ್ಮಿ ಎಂಬ ಸೌಂದರ್ಯವತಿ. ತನ್ನ ತಂದೆ ತಾಯಿ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರು.ಆಕೆಗೆ ಯಾವುದಕ್ಕೂ ಕೊರತೆಬಾರದಂತೆ ಸಾಕಿದ್ದರು. ಅವಳು ಸಹ ಬುದ್ದಿವಂತೆ. ಆದರೆ ಅರುಣನನ್ನು ಸರಿಗಟ್ಟಲಾಗುತ್ತಿರಲಿಲ್ಲ. ಅವಳೊಮ್ಮೆ ಉಪಾಧ್ಯಾಯರಲ್ಲಿ ಹೇಳಿಕೊಳ್ಳುತ್ತಿದ್ದಳಂತೆ," ಸರ್ ನಾನು ಎಷ್ಟೇ ಓದಿದರೂ ಅವನನ್ನು ಸರಿಗಟ್ಟಲಾಗುತ್ತಿಲ್ಲ. " ಅಂತ ಆದರೆ ಅವನೇನು ಪುಸ್ತಕದ ಹುಳುವಾಗಿರಲಿಲ್ಲ. ಬದಲಾಗಿ ಕಷ್ಟಪಟ್ಟು ಓದುವ ಛಲ ಉಳ್ಳವನಾಗಿದ್ದ. ಹೀಗೆ ಅವನ ಕಲ್ಪನಾ ಲಹರಿ ಸಾಗುತ್ತಿತ್ತು. ಅಷ್ಟರಲ್ಲಿ ಅವನ ರೂಮ್ ಮೇಟ್ 'ಅಪ್ಪ ಮಾರಾಯ ಕನಸು ಕಂಡಿದ್ದು ಸಾಕು, ಈಗ ಊಟಕ್ಕೆ ಸಮಯ ಆಗಿದೆ ಬಾರೋ ' ಎಂದಾಗಲೇ ಅವನಿಗೆ ಎಚ್ಚರ ಆಗಿದ್ದು. ' ಓಹ್ ! ಕ್ಷಮೆ ಇರಲಿ ಕಣೋ, ನನ್ನ ಬಾಲ್ಯದ ಗುಂಗಲ್ಲಿ ಮುಳುಗಿಹೋಗಿದ್ದೆ. ಸಮಯ ಹೋಗಿದ್ದೇ ಗೊತ್ತಾಗ್ಲಿಲ್ಲ ನೋಡು' ಎನ್ನುತ್ತಾ ಬೇಗನೇ ಎದ್ದು ಫ್ರಶಪ್ ಆಗಿ ಊಟಕ್ಕೆ ಹೋಗಿ ಬಂದರು. ಮತ್ತೆ ಅವನ ಸ್ನೇಹಿತ ರಾತ್ರಿ ಪಾಳಿಯ ಕೆಲಸಕ್ಕೆ ಹೊರಟುಹೋದ ಮತ್ತೆ ಇವನ ತನ್ನ ಕಲ್ಪನೆಯಲಿ ಮುಳುಗಿದ. *ಮುಂದುವರೆಯುವುದು*
*ಬದುಕ ರಕ್ಷಿಸು* ಎತ್ತ ಹೋದೆ ಮಳೆರಾಯ ಮತ್ತೆ ಬರದ ಬರೆ ಎಳೆದು ಸತ್ತ ಮೋಡದ ಹೆಣ ತೇಲಿದೆ ಆಗಸದ ಸೂರಿನೊಳಗಿದ್ದು /ಪ/ ಬಿತ್ತಿದ ಬೀಜಗಳೆಲ್ಲ ಮೊಳಕೆಯೊಡೆಯದೆ ಕಮರಿ ಹೋಗಿವೆ ಕರುಣೆ ಬಾರದೆ / ಬತ್ತಿದೊಡಲಿನಲಿ ಮತ್ತೆ ಚಿಗುರುವಾಸೆಯಿದೆ ನೀನೊಮ್ಮೆ ಇತ್ತಸುಳಿಯಬಾರದೆ // ಅಲ್ಲೆಲ್ಲೋ ಅತಿವೃಷ್ಟಿ ಇಲ್ಲೇಕೆ ಅನಾವೃಷ್ಠಿ ಒಂದೇ ಜಗದಿ ಏಕೀ ಅಂತರ / ಕಲ್ಲು ಕೂಡ ಸಿಡಿಯುತಿದೆ ಮಣ್ಣು ಕಾದು ಬೇಯುತಿದೆ ತಂಪೆರೆಯಲು ನೀ ಬಾ ನಿರಂತರ // ಒಣಗಿ ನಿಂತ ಮರಗಳಲ್ಲಿ ಗೂಡಿಲ್ಲದೆ ರೋಧಿಸುತಿವೆ ಮೂಕ ಹಕ್ಕಿಗಳ ಹಿಂಡು / ಬಾಯಾರಿ ಬಸವಳಿದು ಹಸಿವಿನಲಿ ಕಳೆಗುಂದಿವೆ ಕನಿಕರಿಸು ಅವು ಅಸುನೀಗುವುದ ಕಂಡು// ಬಾರಯ್ಯ ಮಳೆರಾಯ ಕೃಪೆ ತೋರು ಮಹನೀಯ ಭುವಿಯ ಬದುಕ ರಕ್ಷಿಸು ನಿಸರ್ಗಕೆ ಸಮೃದ್ಧಿಯ ಹೊದಿಸು 0653ಎಎಂ09082017 *ಅಮುಭಾವಜೀವಿ* ಶುಭೋದಯ ಸ್ನೇಹಿತರೇ [23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಗಜಲ್* ಹರೆಯ ಬಂತೆ ಗೆಳತಿ ನಿನಗೆ ಹೊಂಬಣ್ಣ ಬಳಿದಂತೆ ಸಂಜೆಗೆ ನಿನ್ನ ನಗುವ ಬೆಳದಿಂಗಳ ಕಂಡು ಉಕ್ಕುವಾಸೆ ಬಂತು ಅಲೆಗಳಿಗೆ ನಿನ್ನ ನಯನದೊಳಪು ತಂತು ಮಿನುಗೋತ್ಸವವ ತಾರೆಗಳಿಗೆ ನಿನ್ನ ಒಂದು ಸ್ಪರ್ಶ ಹರ್ಷವಾಗಿ ತುಂತುರು ಜನ್ಮ ನೀಡಿತು ಮಳೆಬಿಲ್ಲಿಗೆ ನಿನ್ನ ಸಂಗ ಸಿಕ್ಕಮೇಲೆ ದುಂಬಿ ಹೋಗುವುದನೇ ಮರೆತಿತು ಹೂವ ಬಳಿಗೆ ಕಲ್ಲಂತಹ ಅಮು ಕೂಡ ಕವಿಯಾಗಿ ಜೀವ ತುಂಬಿದ ನಿನ್ನೊಲವ ಕವಿತೆಗೆ 0550ಪಿಎಂ08082017 *ಅಮುಭಾವಜೀವಿ* ಶುಭಸಂಜೆ ಸ್ನೇಹಿತರೇ [23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಕದ ತೆರೆದನು* ಮೂಡಣದ ಮನೆಯಲ್ಲಿ ಏನಿದು ಸಂಭ್ರಮ ಮೂಡುತಿಹ ರವಿಕಿರಣಗಳ ಹೊಳಪೆಷ್ಟು ಅನುಪಮ /ಪ/ ಕವಿದ ಕಾರಿರುಳಿನ ಭಯ ನೀಗಿ ಸೂರ್ಯ ಬಂದನದೋ ಭರವಸೆಯಾಗಿ ಮುಂಜಾನೆಯ ಮಂಜನು ಒರೆಸಿ ಹಗಲಿನ ಕದ ತೆರೆದನು ದಿನದಾರಂಭಕೆ ಮುನ್ನುಡಿ ಬರೆದು ಹೊಸಕಿರಣಗಳಿಂದ ಜಗ ಬೆಳಗಿದ /೧/ ತರುಲತೆಗಳ ತಲೆ ನೇವರಿಸಿ ನವ ಸುಮಗಳ ದಳ ಬಿಡಿಸಿ ನಳನಳಿಸುವ ಪ್ರಕೃತಿಗೆ ಬಿಸಿಲಿನ ಝಳದ ಕಾವಿಟ್ಟನು ನಿಸರ್ಗ ಸ್ವರ್ಗದ ಅಧಿಪತಿ ಜೀವನ ಹೋರಾಟದ ದಳಪತಿ. /೨/ ದಿನವೆಲ್ಲವೂ ಹಬ್ಬವೇ ಸೊಗಸಿಂದ ಬದುಕಿನ ಪರೀಕ್ಷೆಗೆ ಸ್ಪೂರ್ತಿ ತಂದ ರವಿ ನಮ್ಮೆಲ್ಲರ ಸವಿಭಾವದ ಹಣತೆ ಕವಿ ಕಲ್ಪನೆಯಲಿ ಅರಳಿದ ಕವಿತೆ ದಿನಮಣಿಗೆ ಋಣಿಯಾಗಿ ದಿನ ಕಳೆಯೋಣ ಯಶಸ್ವಿಯಾಗಿ /೩/ ೦೬೫೯ಎಎಂ೧೧೦೮೨೦೧೭ *ಅಮುಭಾವಜೀವಿ* *ಶುಭೋದಯ ಸ್ನೇಹಿತರೇ*🌼🌺💐☕🌸 [23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಪ್ರೀತಿಯ ಅವತಾರ ನೀ* ಬಾಳಿನ ಸಂಸ್ಕಾರವು ನೀನು ಪ್ರೀತಿಯ ಅವತಾರವು ನೀನು ಸುಖವೆಂಬ ಯಾನದಲಿ ಗುರಿ ತಲುಪೋ ಭರವಸೆಯು ನೀನು /ಪ/ ಬಾನೆದೆಯಲಿ ಕವಿದ ಕಾರ್ಮೋಡ ನೀನಿಲ್ಲದ ಈ ಬದುಕಿನ ದುಗುಡ ದೂರ ಮಾಡಲು ಬಂದೆ ನೀ ಸಂಗಡ / ಅತಿರೇಕದ ವರ್ತನೆಯೊಳಗೂ ಅತಿ ಭಾವುಕ ಕಲ್ಪನೆ ನೀನು ಓ ನನ್ನ ನಲ್ಮೆಯ ಗೆಳತಿಯೇ /೧/ ಹರೆಯದಮಲು ನೆತ್ತಿಗೇರಿ ಓಡುವ ಮನವ ತಡೆದೆ ನೀನು ನನ್ನ ಬಾಳ ಸಾರಥಿಯಾಗಿ ನೀನೊಲಿದೆ ಕ್ಷಣದಿಂದಲೇ ನಾನಾದೆ ಹೂ ಮಾಲೆ ನನ್ನ ಬದುಕಲಿನ್ನು ಬರಿ ಸುಗ್ಗಿ /೨/ ಪ್ರೀತಿಗೆ ನೀ ತಾಯಿ ಭಕ್ತಿಗೆ ನೀ ದೇವಿ ನಿನ್ನಿಂದ ಬದುಕಾಯ್ತು ಜೇನಸವಿ ಅದನೆಲ್ಲ ಹೊಗಳಲು ನಾನಾದೆ ಕವಿ ಬೇಸರವು ಇನ್ನಿಲ್ಲ ಬವಣೆ ನೀಗಿತಲ್ಲ ನನಗಿನ್ನು ಬದುಕು ಸ್ವರ್ಗದಂತೆ ನಾವಿಬ್ಬರೂ ಅಲ್ಲಿ ಗಂಧರ್ವರಂತೆ 0144ಪಿಎಂ12082017 *ಅಮುಭಾವಜೀವಿ* [23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಅರ್ಪಣೆ* ಅರ್ಪಣೆ ಸಮರ್ಪಣೆ ಬದುಕ ಬಲಿಸಿ ನಿಲಿಸಿದ ಎಲ್ಲರಿಗೂ ಹೃದಯ ತುಂಬಿ ಅರ್ಪಣೆ ಸಮರ್ಪಣೆ ತನ್ನ ಒಡಲಲ್ಲಿ ಜಾಗವಿತ್ತು ಎಲ್ಲ ನೋವ ನುಂಗಿಕೊಂಡು ಜನ್ಮವಿತ್ತ ತಾಯೆ ನಿನಗೆ ಅರ್ಪಣೆ ಸಮರ್ಪಣೆ ನನ್ನ ಭವಿಷ್ಯವನು ಕಟ್ಟಲು ತಂದೆ ಆದರು ಮೆಟ್ಟಿಲು ಬದುಕಿನಾಧಾರವೇ ಆದ ಅಪ್ಪ ನಿನಗೆ ಅರ್ಪಣೆ ಸಮರ್ಪಣೆ ವಿಧ್ಯೆ ಎಂಬ ಅಸ್ತ್ರ ಕೊಟ್ಟು ಬದುಕ ಗೆಲ್ಲುವ ಗುರಿಯನಿಟ್ಟು ಸಾಧನೆಗೆ ಸ್ಫೂರ್ತಿಯಾದ ಗುರುವೇ ನಿಮಗೆ ಅರ್ಪಣೆ ಸಮರ್ಪಣೆ ರಕ್ತ ಹಂಚಿಕೊಂಡು ಹುಟ್ಟಿದವರು ನನ್ನ ಏಳಿಗೆಗೆ ಹೆಗಲಾದವರು ನೋವುನಲಿವಿಗೆ ಜೊತೆಯಾದ ಒಡಹುಟ್ಟಿದವರೆ ನಿಮಗೆ ಅರ್ಪಣೆ ಸಮರ್ಪಣೆ ಯಾವ ಬಂಧ ಬೆಸೆದ ನಂಟೋ ಯಾವ ಋಣದ ಸ್ನೇಹ ಗಂಟೋ ಅಲ್ಲಿಂದ ಇಲ್ಲಿವರೆಗೆ ಒಡನಾಡಿಗಳಾದ ಸ್ನೇಹಿತರೇ ನಿಮಗೆ ಅರ್ಪಣೆ ಸಮರ್ಪಣೆ ಮದುವೆ ಎಂಬ ಬೇಲಿಯಲ್ಲಿ ಮಡದಿಯೆಂಬ ಬೆಳಕ ಚೆಲ್ಲಿ ಮಕ್ಕಳ ಅನುಬಂಧ ಬೆಸೆದ ಸಂಸಾರವೇ ನಿನಗೆ ಅರ್ಪಣೆ ಸಮರ್ಪಣೆ ಇರುವ ತನಕ ಉಸಿರಾಗಿ ಹೋದ ಮೇಲೊಂದು ಹೆಸರಾಗಿ ಎಲ್ಲಕ್ಕೂ ಮೂಲವಾದ ಪಂಚಭೂತಗಳೇ ನಿಮಗೆ ಅರ್ಪಣೆ ಸಮರ್ಪಣೆ 0621ಪಿಎಂ12082017 *ಅಮುಭಾವಜೀವಿ* *ಶುಭಸಂಜೆ ಸ್ನೇಹಿತರೇ* [23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಕೈ ಹಿಡಿದು ನಡೆಸು* ದೂರ ತೀರದ ಮೌನ ಶಾಂತ ಸಾಗರದ ಧ್ಯಾನ ನಡುವೆ ಏಳುವಲೆಗಳು ನಮ್ಮಿಬ್ಬರ ಬೆಸೆದ ಬಂಧಗಳು ಹುಣ್ಣಿಮೆಯಂತ ನಿನ್ನ ರೂಪಿಗೆ ಬಣ್ಣನೆ ಏಕೆ ಚಿತ್ರಿಸೋ ಕುಂಚಕೆ ಮುಸ್ಸಂಜೆಯ ಹೊಂಬಣ್ಣದ ರಂಗಿಗೆ ನಿನ್ನ ಹರೆಯದ ಚೆಲುವಿನ ಹೋಲಿಕೆ ಕಂಪಿಸುವ ನಿನ್ನಧರಗಳು ರಂಜಿಸುವ ಚಿಟ್ಟೆಗಳು ಮಿಟುಕಿಸುವ ನಯನಗಳು ಬಾನಲಿ ಹೊಳೆವ ಚುಕ್ಕಿಗಳು ಪದೇಪದೇ ಕಾಡುವ ಮುಂಗುರುಳು ದೂರದಿ ಇಳಿದಂತೆ ಆ ಇರುಳು ರಮಣೀಯ ಅವತಾರ ನಿನ್ನೀ ಚಿತ್ತಾರ ಮುಂಜಾನೆ ದಳ ಬಿರಿದ ಮಂದಾರ ನಿನ್ನ ನಗುವಿನ ಸೆಳತ ಹಕ್ಕಿ ಕೊರಳ ಸಂಗೀತ ಕ್ಷಣ ನಿನ್ನ ಮಡಿಲಲ್ಲಿ ಹೀಗೆ ಮಗುವಾಗಿ ಮಲಗುವಾಸೆ ಕೈಹಿಡಿದು ನೀ ನಡೆಸು ಆಗಲೇ ನಮ್ಮ ಜೋಡಿ ಸೊಗಸು ತೊರೆದು ಬಿಡು ಈ ಮೌನ ಶಾಂತಸಾಗರವಾಗಲಿ ಮನ 0326ಪಿಎಂ12082017 *ಅಮುಭಾವಜೀವಿ* *ಶುಭಸಂಜೆ ಸ್ನೇಹಿತರೇ*💐🌺🌸 [23/08 10:27 pm] ಅಂಜಲಿ ಸದಾಶಿವಗಢ ಕಾರವಾರ: *ಸೂರ್ಯ ನಲಿದು ಬರಲು* ಕತ್ತಲು ಮೆಲ್ಲ ಸರಿಯುತಿದೆ ಬೆಳಕು ಎಲ್ಲೆಡೆ ಪಸರಿಸುತಿದೆ ಹಕ್ಕಿಯ ಗಾನವು ಸ್ವಾಗತ ಕೋರಿ ಮೂಡಣದಿ ಉಷೆಯ ಕರೆಯಿತು ಹೊನ್ನತೇರಿನಲಿ ರಾಜ ಗಾಂಭೀರ್ಯದಲಿ ರವಿ ತೇಲಿಬಂದ ಆಗಸದಲ್ಲಿ ಜಗವೆಲ್ಲ ಝಘಮಗಘಿಸಿತು ಬೆಳ್ಳಂಬೆಳಕು ಈಗಾಯ್ತು ಬಿರಿದ ಮೊಗ್ಗು ದಳ ಬಿಚ್ಚಿ ದುಂಬಿ ಮಧುಹೀರ
ದೀಪವಿರದ ಬಾಳಿನಲ್ಲಿ* ದೀಪವಿರದ ಬಾಳಿನಲ್ಲಿ /ಜ್ಯೋತಿಯನೆಲ್ಲಿ ತರಲಿ ಅಂಧಕಾರದ ತಿಮಿರದಲ್ಲಿ/ಪ್ರೀತಿಯನೆಲ್ಲಿ ಹುಡುಕಲಿ// /ಪ/ ವಿಧಿ ಬರೆದ ನಾಟಕದಲ್ಲಿ/ವಿಧಿಯಿಲ್ಲದೆ ನಟಿಸೋ ಪಾತ್ರ ನಾನು ಕರುಣೆಯಿರದ ಬದುಕಿನಲ್ಲಿ / ಬಸವಳಿದ ಕರುವು ನಾನು ಹೇಗೆ ಹೇಳಲಿ ಯಾರ ಕೂಗಲಿ/ಕೈ ಹಿಡಿದು ನಡೆಸುವವರಾರೋ /೧/ ಹರೆಯದಮಲು ನೆತ್ತಿಗೇರಿ/ಹಿರಿಯರ ಮಾತ ಗಾಳಿಗೆ ತೂರಿ ಪ್ರೀತಿಸಿದೆ ಪರೀಕ್ಷಿಸದೇ/ಪರಿತಪಿಸುತಿಹೆ ನಾನಿಲ್ಲಿ ಪ್ರೀತಿಯ ನಂಜು ಕೊಲ್ಲುತಿದೆ/ನನ್ನ ಉಳಿಸಿಕೊಳ್ಳುವವರಾರೋ /೨/ ಎಲ್ಲಿಹುದೋ ಆ ಹಣತೆ /ತರುವುದೇ ನನಗೊಂದು ಘನತೆ ಸೋತ ಪ್ರೀತಿಯ ಮತ್ತೆ ಪಡೆಯಲು/ಸಂತ ವಸಂತನಾಗುವನೇ ದಾರಿ ಕಾಣದೂರಿಗೆ ಮತ್ತೆ /ಪ್ರೀತಿಯ ದಾರಿದೀಪ ವಾಗುವವರಾರೋ /೩/ ೦೬೫೨ಎಎಂ೦೬೦೭೨೦೧೭ *ಅಮುಭಾವಜೀವಿ*
*ನಿನ್ನ ಹೊರತು* ಕಣ್ಣಂಚಲಿ ಹನಿಗೂಡಿದೆ ನಿನ್ನೊಲವಿಗೆ ಮರುಳಾಗಿ ಹೃದಯದ ಭಾವ ಮೂಡಿದೆ ಕಣ್ಣೊಳಗಿನ ಬಿಂಬವಾಗಿ ನನ್ನ ಕೈ ಹಿಡಿದು ನಡೆಸೋ ನಾವಿಕ ನೀನಲ್ಲವೆ ಗೆಳೆಯ ನೀ ಪ್ರೀತಿಯ ಅಂಬಾರಿಯಲಿ ಕೂತ ನನ್ನ ಒಡೆಯ ಬಾಳ ಯಾನದ ಬಳುವಳಿ ನೀನು ನಾಳೆ ಕನಸುಗಳ ಬಿತ್ತಿದವ ನೀನು ಬೇಕಿಲ್ಲ ನನಗೇನೂ ನಿನ್ನ ಹೊರತು ಬದುಕಲಿ ನೀನೇ ನನ್ನ ಗುರುತು ಜೊತೆಗಾರನಾಗಿ ನೀ ಹಿತವಾದೆ ದಂತಕಥೆಯಾಗೋಣ ಪ್ರೀತಿಗೆ ವ್ಯಥೆಗಳ ಕಳೆದು ಶಪಥಗೈದೆ ಇನ್ನು ಕಷ್ಟಗಳೇ ಇಲ್ಲ ಬಾಳಿಗೆ ಕಣ್ಣು ಕಣ್ಣು ಕಲೆತ ಈ ಬಂಧ ಮಣ್ಣು ಸೇರುವ ತನಕ ಬೆಸೆಯಲಿ ನಮ್ಮಿಬ್ಬರ ಈ ಅನುಬಂಧಕೆ ಕಣ್ಣಂಚಿನ ಹನಿ ಸಾಕ್ಷಿಯಾಗಲಿ 0446ಪಿಎಂ05072017 *ಅಮುಭಾವಜೀವಿ*
*ಮಳೆ ನೆನಪ ತಂತು* ತುಂತುರು ತುಂತುರು ಮಳೆ ಹನಿಯುತಿದೆ ನಿನ್ನಯ ನೆನಪುಗಳ ಹೊತ್ತು ತಂದಿದೆ ಶ್ರಾವಣ ಮಾಸದ ಈ ಮಳೆ ಹಸಿರಿನ ಸಂಭ್ರಮ ಸವಿದ ಇಳೆ ಕಾಮನಬಿಲ್ಲಿನ ಬಣ್ಣವ ಬಳಿದು ಕನಸನು ನನಸು ಮಾಡಿತು ಮೊದಲ ಭೇಟಿಯಲ್ಲಿ ಅಂದು ಮೊದಲ ಮಳೆಗೆ ನೆನೆದ ನೆನಪು ನೂರು ಭಾವ ಮೂಡಿ ಬರೆದ ಕವಿತೆಯಲ್ಲವೆ ಆ ಸುಂದರ ನೆನಪು ಮುಸ್ಸಂಜೆಯ ವೇಳೆಯಲ್ಲಿ ರಂಗನೆರಚಿದ ತೆರದಲಿ ಹಕ್ಕಿ ಗೂಡಿಗೆ ಮರಳುವಂತೆ ನೆನಪು ಬಂದು ಕಾಡಿದೆ ನೆನಪಿನ ಈ ಯಾತ್ರೆಯಲಿ ಸಂಭ್ರಮದ ಜಾತ್ರೆಯಲಿ ಶ್ರಾವಣದ ಸೋನೆಯಲ್ಲಿ ಕಾರಣವಿಲ್ಲದೆ ಕರಗಿ ಹೋದೆ 0226ಪಿಎಂ24082017 *ಅಮುಭಾವಜೀವಿ*
ಓ ಚಂದಮಾಮ|ಬಾರಯ್ಯ ಬಳಿಗೆ| ಮಧುರ ಭಾವವ| ತಾರಯ್ಯ ಮನಕೆ| ವಿರಹವೊಂದು| ಉರುಳಾಗಿದೆ| ಸಂಜೆ ರಂಗು /ರಕ್ತಕಾರಿದಂತಿದೆ/ ಮನಸಿಗೇಕೋ/ಭಯವು ಕಾಡಿದೆ/ 'ಅವನಿ'ಲ್ಲದೆ / ತನು ಸುಡುತಿದೆ/ ತಂಗಾಳಿಗೇಕೋ/ ಮುನಿಸಿದೆ ನನ್ನ ಮೇಲೆ / ಸವಿಭಾವವೇಕೋ/ಸಪ್ಪೆಯೆನಿಸಿದೆ ಈಗಲೇ/ ಅವನ ಸ್ಪರ್ಶವಿರದ/ ಈ ಸ್ವರ್ಗದಲ್ಲಿ/ ಸಾಗರದಲೆಗಳೆಲ್ಲಾ/ಸಾವಿಗೀಡಾಗಿವೆ/ ಸಾಮಿಪ್ಯವಿರದ ಬದುಕು/ಬರಡಾಗಿ ಹೋಗಿದೆ/ ಅವನಿರದ/ ಈ ಬದುಕಿನಲ್ಲಿ / ಮುಂಜಾನೆ ಏಕೆ /ನೀ ಬರುವೆ ಬೇಗ/ ಬೆಳದಿಂಗಳಿಗೇ /ತನು ಬಳಲಿದೆ ಈಗ/ ಇರು ದೂರ ನೀನು/ ಅವನು ಬರುವವರೆಗೆ/ ಈ ಪ್ರೇಮಿಗಳ ಹರಸು/ ಓ ಚಂದಮಾಮ / ಜಗಕೆ ಬೆಳಕಾಗಲಿ/ನಮ್ಮ ಈ ಪ್ರೇಮ / ಅವನ ಹುಡುಕಿ ತಂದು/ಒಸಗೆ ನೀಡು ನನಗೆ / 0605ಪಿಎಂ24062017 *ಅಮುಭಾವಜೀವಿ*
ನಂಬಿಕೆಯ ನೆರಳು* ನೀನಾಗು ಬಾಯಿಲ್ಲಿ ನನ್ನೊಳಗಿನ ನೋವಲ್ಲಿ ನಂಬಿಕೆಯ ನೆರಳು ನಾ ಬರೆದ ಕವಿತೆಗೆ ಭಾವ ತುಂಬಿ ಹಾಡಿಗೆ ನೀನಾಗು ಸವಿಗೊರಳು ಮುಂಜಾನೆ ಮಂಜಿನಲಿ ನಂಜೆಂಬುದು ಏನಿಲ್ಲ ನೀನಾಗು ಹೊಳೆವ ಕಿರಣ ಅರಳುವ ಸುಮದಿ ಮಕರಂದವಾಗಿ ಬೆರೆತು ದುಂಬಿಗಾಗು ನೀ ಪ್ರೇರಣ ನಾಳೆಗಳು ನರಳದಂತೆ ಬೆರಳು ಹಿಡಿದು ನಡೆಸು ನಿನ್ನೊಲವಿಗೆ ಬೆಲೆಯಿದೆ ಅಂತರಂಗದ ಮಿಡಿತ ಅರಿತಿರುವೆ ನೀ ಖಚಿತ ನಿನಗೆ ಆ ಕಲೆಯಿದೆ ಬೇಸರದ ಬರದ ಛಾಯೆ ಆವರಿಸಿರಲು ಮನದಲ್ಲಿ ನೀನಾಗು ತುಂತುರಿನ ಸೋನೆ ಹಿತವಾಗಿ ನಾ ನೆನೆದು ಸುಖವಾಗಿ ನಾನುಳಿದು ಸದಾ ಅರಾಧಿಸುವೆ ನಿನ್ನನೇ ಈ ಬದುಕೆಂಬ ಯಾನದಲ್ಲಿ ನೀನಿರಲು ಜೊತೆಯಲ್ಲಿ ಒಂಟಿತನ ನನ್ನ ಬಿಟ್ಟು ಓಡಿತು ಇರುವವರೆಗೂ ಒಲವಿಂದ ಬದುಕಿಸಿದೆ ನಗುವಿಂದ ನೀ ನನ್ನನ್ನು ಬೆರೆತು 0631ಎಎಂ16062017 ಅಮುಭಾವಜೀವಿ
*ಸವಿಭಾವದುಡುಗೊರೆ* ಮುಂಜಾನೆಯ ಹನಿ ಸಿಂಚನ ಪುಳಕಗೊಂಡಿದೆ ಮೈಮನ ಶುಭೋದಯಕೆ ಸವಿಭಾವವ ಉಡುಗೊರೆ ನೀಡಿದೆ ನಿಸರ್ಗ ಹಾಸನಾಂಬೆಯ ತವರಲ್ಲಿ ಕಾವ್ಯಸಂಗಮದ ಖುಷಿಯಲ್ಲಿ ವರುಣ ಕೃಪೆ ತೋರಿರಲು ಎಲ್ಲೆಲ್ಲೂ ಸಂಭ್ರಮವೇ ತಣ್ಣನೆಯ ಹೊತ್ತಿನಲಿ ಹೊಸ ಜಾಗದ ಉಲ್ಲಾಸದಲಿ ನಡೆದಾಡುವ ಸೊಬಗೇ ಸೋಜಿಗ ಮುಂಜಾನೆ ರಮ್ಯತೆಯ ಐಭೋಗ ಕವಿಪುಂಗವರ ಭೇಟಿಯಲ್ಲಿ ನವಕಲ್ಪನೆಯ ಧಾಟಿಯಲ್ಲಿ ಮೂಡಿದೆ ಹೊಸ ಕವಿತೆ ಮನವೋ ಉಲ್ಲಾಸದಿ ತೇಲಿದೆ ಕವಿಬಳಗದ ಕೋಗಿಲೆಯ ಗಾನ ಕರ್ಣಾಲಿಗಳಿಗೆ ಹೊಸ ಚೇತನ ನಲಿಯುವ ಮನದ ಭಾವನೆಗೆ ಈ ಜಾಗವೇ ಸುಂದರ ಒಸಗೆ 0727ಎಎಂ27082017 *ಅಮುಭಾವಜೀವಿ* ಹಾಸನದಿಂದ
*ಗೆದ್ದೇ ಗೆಲ್ಲುವೆವು* ಚಿಂದಿ ಆಯುವ ಹುಡುಗರು ನಾವು ನಮ್ಮ ನಡುವೆ ಎಂದೂ ಇರದು ಭೇದವು ಕಾಯಕದಲ್ಲಿ ತೊಡಗಿದೆವೆಂದರೆ ಹೆಗಲಿಗೆ ಹೆಗಲಾಗುವೆವು ಸ್ನೇಹದ ಮಾತಿಗೆ ಬಂದರೆ ಜೊತೆ ಜೊತೆಯಾಗಿರುವೆವು ಹಸಿವಿನಲಿ ಹಂಚಿ ತಿಂದು ಕಸುವಿನಲಿ ನಾವೇ ಮುಂದು ಬಡತನವದು ಬದುಕಿಗೆ ನಮಗೆಂದೂ ಅದು ಕಾಡದು ಬೀದಿ ಬದಿಯೇ ನಮ್ಮ ಮನೆ ತೊಟ್ಟಿಗೆಸೆದ ಅನ್ನವೇ ಮೃಷ್ಟಾನ್ನ ವಿದ್ಯೆ ನಮಗೆ ಒಲಿಯಲಿಲ್ಲ ಸ್ನೇಹ ನಮ್ಮನು ಎಂದು ಕೈಬಿಟ್ಟಿಲ್ಲ ನಮಗೆ ನಾವೇ ಬಂಧುಗಳು ಎಂದು ಕಳಚದ ಸಂಬಂಧಗಳು ಬಾಳುವೆವು ಹೀಗೆ ಜೊತೆಯಲ್ಲಿ ಸುಖಿಸುವೆವು ಹೀಗೆ ಬದುಕಲ್ಲಿ ಎಳೆಯರು ನಾವು ಗೆಳೆಯರು ಬಾಳ ಹೋರಾಟದ ಸೈನಿಕರು ಗೆದ್ದೇ ಗೆಲ್ಲುವೆವು ಬದುಕನ್ನ ಸೋಲಿಗೆ ಜಗ್ಗದು ನಮ್ಮ ಗೆಳೆತನ 0638ಪಿಎಂ27082017 *ಅಮುಭಾವಜೀವಿ*
ಓ ಮೇಘಮಾಲೆ ತಲಪಿಸು ಒಲವ ಸಂದೇಶವ ನನ್ನವಳಿಗೀಗಲೇ ಪಡುವಣದ ಬಾನಿನಲ್ಲಿ ಮೇಳೃಸಿದ ಮೋಡಗಳೇ ನನ್ನೊಲವ ಮಳೆಯಾಗಿ ಸುರಿಯಿರಿ ಅವಳೊಡಲಲ್ಲಿ ಮಳೆಬಿಲ್ಲಿನ ಮಧುರಾನುಭೂತಿ ಅವಳ ಮನಕೆ ನೀ ನೀಡು ಮಳೆ ಬಿಟ್ಟರೂ ಮರದ್ಹನಿ ಬಿಡದು ಓ ಮಳೆಯೇ ನೀನವಳಿಗೆ ನೆನಪಾಗಿ ಕಾಡು ಭಾವದೊರತೆ ತುಂಬಿ ತುಳುಕಲಿ ಅವಳ ನಗೆಗಡಲಿನೊಳಗೆ ನೋವನೆಲ್ಲ ಮರೆಸಿ ಚಿಂತೆ ದೂಡು ಬರಬಂದು ನೋಯಬಾರದು ಬಾಳೊಳಗೆ ನೆನಪುಗಳು ಸದಾ ಹಸಿರಾಗಿರಲಿ ಪ್ರೀತಿಯು ಅಲ್ಲಿ ಮಂಜಾಗಿ ಹೊಳೆಯಲಿ ಅವಳ ಹುಸಿಮೌನ ಬಿಸಿಯೇರುವ ಮುನ್ನ ಸುರಿದು ತಣಿದುಬಿಡಲಿ ಬಾಳೊಡಲು ಮತ್ತೆ ಮುಂಗಾರು ಮೈದಳೆದು ಮಳೆಯದು ಹೊಳೆಯಾಗಿ ಹರಿಯಲಿ ಹದವಾಗಿ ನೆನೆದ ನನ್ನವಳ ಬದುಕು ಶ್ರಾವಣದ ಸಂಜೆ ಸಂಭ್ರಮದ ಮೆರುಗಾಗಲಿ 0113ಎಎಂ28082017 *ಅಮುಭಾವಜೀವಿ*
ಯಾವ ನೋವು ನಿನ್ನ ಕಾಡಿದೆ ಏಕೆ ನಿನ್ನ ಮನವು ನೊಂದಿದೆ ಯಾವ ಕಾರಣವೋ ನಾನು ಕಾಣೆ ನಿನ್ನ ವೇದನೆಗೆ ಉಪಶಮನವೇನೋ ಕಾಣೆ /ಪ/ ಮೊದಲೇ ಹೆದರುವವನ ಮೇಲೆ ಹಗ್ಗ ಹಾವಾಗಿ ಕಾಡಿತದೇಕೆ ಮೃದು ದಳದ ಹೂವ ಮೇಲೆ ಬರಸಿಡಿಲು ಬಂದೆರಗಿತದೇಕೆ ನೋಯುವ ಸರದಿ ಬಿಟ್ಟು ಛಲದಿ ಎಲ್ಲ ದೂರ ಅಟ್ಟು |೧| ಯಾರಿಗಿಲ್ಲ ಇಲ್ಲಿ ನೋವು ಒಂದೇ ಭಾರಿಗೆ ಒಲಿಯದು ಗೆಲುವು ಸತತ ಸೋಲುವ ಮನದೊಳಗೆ ಗೆಲ್ಲುವ ಭರವಸೆಯ ಕಾಣಬೇಕು ಮರೆತುಬಿಡು ಎಲ್ಲ ನೋವ ಕದ ತೆರೆದು ನೋಡು ಜಗವೆಲ್ಲ |೨| ಹೆಜ್ಜೆ ಇಡುವ ಭರದಲಿ ಎಡವುವ ಭಯ ಕಾಡದೆಂದು ಸದ್ದು ಮಾಡುವ ಮಡಿಕೆಯಲ್ಲಿ ತುಂಬ ನೀರು ಇರಲಾರದೆಂದೆದೂ ಮಾತನಾಡಿ ಎಲ್ಲ ಮರೆತುಬಿಡು ಮೌನದಲ್ಲಿ ಎಲ್ಲ ತೊರೆದುಬಿಡು |೩| ತುಸು ಮೆಲ್ಲ ಗಾಳಿ ಬೀಸಿದಂತೆ ಹುಸಿನಗತಲಿರು ಯಾವ ನೋವು ಕಾಡದು ಹಸಿರೆಲೆಯ ಮೇಲೆಯೇ ತಾನೇ ಇಬ್ಬನಿಯು ಮಾಣಿಕ್ಯದಂತೆ ಹೊಳೆವುದು 0956ಪಿಎಂ28082017 *ಅಮುಭಾವಜೀವಿ*
ಓ ಮೇಘಮಾಲೆ ತಲಪಿಸು ಒಲವ ಸಂದೇಶವ ನನ್ನವಳಿಗೀಗಲೇ ಪಡುವಣದ ಬಾನಿನಲ್ಲಿ ಮೇಳೃಸಿದ ಮೋಡಗಳೇ ನನ್ನೊಲವ ಮಳೆಯಾಗಿ ಸುರಿಯಿರಿ ಅವಳೊಡಲಲ್ಲಿ ಮಳೆಬಿಲ್ಲಿನ ಮಧುರಾನುಭೂತಿ ಅವಳ ಮನಕೆ ನೀ ನೀಡು ಮಳೆ ಬಿಟ್ಟರೂ ಮರದ್ಹನಿ ಬಿಡದು ಓ ಮಳೆಯೇ ನೀನವಳಿಗೆ ನೆನಪಾಗಿ ಕಾಡು ಭಾವದೊರತೆ ತುಂಬಿ ತುಳುಕಲಿ ಅವಳ ನಗೆಗಡಲಿನೊಳಗೆ ನೋವನೆಲ್ಲ ಮರೆಸಿ ಚಿಂತೆ ದೂಡು ಬರಬಂದು ನೋಯಬಾರದು ಬಾಳೊಳಗೆ ನೆನಪುಗಳು ಸದಾ ಹಸಿರಾಗಿರಲಿ ಪ್ರೀತಿಯು ಅಲ್ಲಿ ಮಂಜಾಗಿ ಹೊಳೆಯಲಿ ಅವಳ ಹುಸಿಮೌನ ಬಿಸಿಯೇರುವ ಮುನ್ನ ಸುರಿದು ತಣಿದುಬಿಡಲಿ ಬಾಳೊಡಲು ಮತ್ತೆ ಮುಂಗಾರು ಮೈದಳೆದು ಮಳೆಯದು ಹೊಳೆಯಾಗಿ ಹರಿಯಲಿ ಹದವಾಗಿ ನೆನೆದ ನನ್ನವಳ ಬದುಕು ಶ್ರಾವಣದ ಸಂಜೆ ಸಂಭ್ರಮದ ಮೆರುಗಾಗಲಿ 0113ಎಎಂ28082017 *ಅಮುಭಾವಜೀವಿ*
*ಧನ್ಯವಾದಗಳು ನಿಮಗೆ* ಮಳೆಯನು ಸುರಿದ ಮೋಡಗಳೇ ಧನ್ಯವಾದಗಳು ನಿಮಗೆ ಬದುಕಿಗೆ ಮತ್ತೆ ಚೇತನವಾದೆರಿ ಅದಕೆ ಚಿರಋಣಿಗಳು ನಾವು ನಿಮಗೆ ಬರದಿಂದ ಬೇಸತ್ತ ಒಡಲಿಗೆ ಜೀವಕಳೆ ತಂತು ನಿಮ್ಮೀ ಕೊಡುಗೆ ಭೀಕರತೆ ಎಂಬುದನು ದೂರತಳ್ಳಿ ಮಮತೆಯ ತೋರಿದಿರೀ ಜಗಕೆ ಬತ್ತಿದ ಮಡಿಲಲಿ ಮೊಳೆತಿದೆ ಬೀಜ ಮತ್ತೆ ಜೀವನ ಸಾಗಿದೆ ಸಹಜ ಹಸಿರಿನ ಕುಸುರಿಯ ಎಣೆದಿದೆ ಭೂತಾಯಿ ಮತ್ತೆ ನಗುವಂತಾಗಿದೆ ಸತ್ತ ಕೆರೆಗಳಿಗೆ ಮತ್ತೆ ಜೀವ ಬಂತು ಒಣಗಿದ ನದಿಯಲಿ ನಾದ ತಂತು ಸಂಭ್ರಮವೇ ಈಗ ಎಲ್ಲೆಲ್ಲೂ ಸಮೃದ್ಧ ಬದುಕಿನ್ನು ಯಾವಾಗಲೂ ಹೀಗೆ ನಮ್ಮನು ಸಲಹುತಿರಿ ಕಾಲಕಾಲಕ್ಕೆ ಮಳೆ ಸುರಿಯುತಿರಿ ಬಂಜೆಯ ಒಡಲಲೂ ಖುಷಿ ತಂದಿರಿ ನೆಮ್ಮದಿ ಬದುಕನು ಹರಸಿದಿರಿ 0556ಪಿಎಂ29082017 *ಅಮುಭಾವಜೀವಿ*
*ಜೊತೆಜೊತೆಯಲಿ* ಓಡುವ ಮೋಡಗಳಡಿಯಲಿ ಮೀಯುವ ಬಾ ಬಾ ಗೆಳತಿ ತುಂತುರು ಹನಿಯಲಿ ಮಧುರ ಭಾವ ತರಲಿ ಪ್ರೀತಿ ಕಾಮನಬಿಲ್ಲಿಗೆ ಹಗ್ಗವ ಕಟ್ಟಿ ಜೀಕುವ ಬಾ ಉಲ್ಲಾಸದಲಿ ಬಣ್ಣಗಳೆರಚಿ ಭಾವನೆ ಬಿಚ್ಚಿ ನಲಿಯುವ ಬಾ ಉತ್ಸಾಹದಲಿ ಸಂಜೆಯೋಕುಳಿಯಲಿ ಮಿಂದು ಬಾನತಾರೆಗಳೊಂದಿಗೆ ಬೆರೆತು ಚಂದಿರನ ಮೆರವಣಿಗೆಯಲಿ ಸ್ವರ್ಗಕೆ ಲಗ್ಗೆಯ ಹಾಕೋಣ ಬಾ ಜುಳುಜುಳು ಹರಿವ ನೀರಿನ ಮೇಲೆ ಬರೆಯೋಣ ನಮ್ಮೊಲವಿನ ಓಲೆ ಸಾಗರ ಸಂಗಮದ ಸಂಭ್ರಮದಲ್ಲಿ ಗಂಧರ್ವರಾಗೋಣ ಆ ತೀರದಲಿ ಇರುಳಿನ ಅಂಜಿಕೆ ನಮಗೇಕೆ ಒಲವಿನ ಕಾವಲು ಇರುವಾಗ ಬೆಳಗಿನ ಸೌಂದರ್ಯ ಸವಿಯದಲೆ ಆಸ್ವಾದಿಸುವುದು ಹೇಗೆ ಆ ಸುಖವ ಖುಷಿ ಖುಷಿಯಲಿ ಇರೋಣ ಜೊತೆ ಜೊತೆಯಲಿ ಸಾಗೋಣ ಬಾಳಿನಯಾನವಿದು ಒಂದೇ ಸಾರಿ ಆನಂದಿಸೋಣ ಎಲ್ಲವನು ಮನಸಾರೆ 0612ಪಿಎಂ29082017 *ಅಮುಭಾವಜೀವಿ*
*ನನ್ನೀ ಮಾತೃಭೂಮಿ* ಜನ್ಮ ಭೂಮಿ ಮಾತೃಭೂಮಿ ನನ್ನ ಪೊರೆವ ತೊಟ್ಟಿಲು ನನ್ನ ನಾಡು ನನ್ನ ಪಾಡು ಎಲ್ಲ ಸಾಧನೆಗೂ ಮೆಟ್ಟಿಲು ಸಂಸ್ಕೃತಿಯ ತವರಲ್ಲಿ ಪರಂಪರೆಯ ನೆರಳಲ್ಲಿ ಅರಳುವ ಭವಿಷ್ಯದ ಆಶಾಭಾವವೇ ನನ್ನೀ ಮಾತೃಭೂಮಿ ಸುಜ್ಞಾನದ ಬೆಳಕಿನಡಿಯಲ್ಲಿ ವಿಜ್ಞಾನದ ಮುನ್ನಡೆಯಲ್ಲಿ ತತ್ವಜ್ಞಾನದ ತಿಳುವಳಿಕೆ ನೀಡುವ ಶಾಲೆ ನನ್ನೀ ಮಾತೃಭೂಮಿ ಸಂವಿಧಾನದ ಚೌಕಟ್ಟಿನಲ್ಲಿ ಸ್ವಾತಂತ್ರ್ಯದ ಹಕ್ಕಿನಲ್ಲಿ ಸಹಬಾಳ್ವೆಯ ಸಮಭಾವವ ಕಣಕಣದಿ ಬೆರೆಸಿದ ನನ್ನೀ ಮಾತೃಭೂಮಿ ಗಂಗೆ ತುಂಗೆ ಕಾವೇರಿಯರ ಒಡಲ ಕರುಳ ಬಳ್ಳಿಯಿದು ಹಿಮಾಲಯದ ಶೃಂಗದಲ್ಲಿ ತಿರಂಗ ಹಾರಿಸಿದ ನನ್ನೀ ಮಾತೃಭೂಮಿ ಯೋಧರ ಗಡಿ ಗಸ್ತಿನಲ್ಲಿ ಆರಕ್ಷಕರ ಬಿಗಿ ಶಿಸ್ತಿನಲ್ಲಿ ಧರ್ಮಗ್ರಂಥಗಳ ನಂಬಿಕೆಯಲ್ಲಿ ಒಂದಾಗಿ ಬದುಕುವುದೆನ್ನ ಮಾತೃಭೂಮಿ ಇಲ್ಲಿ ಜನಿಸಿದ ನಾನು ಧನ್ಯ ಅದರಿಂದಲೇ ನಾನಿಂದು ಜಗಮಾನ್ಯ ನನ್ನದೆಂಬ ಹೆಮ್ಮೆಪಡುವ ನಾನು ಜನಸಿದ ಮಾತೃಭೂಮಿ 0958ಪಿಎಂ17082017 *ಅಮುಭಾವಜೀವಿ* *ಸೂರಿ ಸೃಷ್ಟಿಯ ಬರಹ ವಾಟ್ಸಪ್ ಗ್ರೂಪ್ನಲ್ಲಿ ನಡೆದ ಶ್ರಾವಣ ಕವಿಗೋಷ್ಠಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ನನ್ನ ಕವಿತೆ.*
*ಬಾನ ಮುತ್ತಾಗಿ* ಬಾನ ಮುತ್ತಾಗಿ ಹೊಳೆದು ಭೂತಾಯ ನತ್ತಾಗಿ ಮಿನುಗಿ ಜಗದ ಕತ್ತಲೆಯ ಕಳೆಯ ಬಂದಾನೋ ನೇಸರ ನಮ್ಮ ಈ ನೇಸರ ಬೆಳದಿಂಗಳಿನ ಜೋಕಾಲಿಯಲ್ಲಿ ತಾರೆಗಳ ಜೋಲಾಲಿಯಲ್ಲಿ ತಂಗಾಳಿಯ ಹೊದ್ದು ಮಲಗಿದ್ದ ಜಗವನೆಬ್ಬಿಸ ಬಂದಾನೋ ನೇಸರ ನಮ್ಮ ನೇಸರ ಹನಿ ಹನಿ ಇಬ್ಬನಿಯಿಂದ ಜಗದ ಮೊಗ ತೊಳೆದು ಗಿಡಗಳ ತಲೆ ನೇವರಿಸ ಬಂದಾನೋ ನೇಸರ ನಮ್ಮ ನೇಸರ ಚಿಲಿಪಿಲಿಯ ಸುಪ್ರಭಾತಕೆ ದಳ ಬಿರಿವ ಚೆಲುವ ಹೂಗಳಿಗೆ ಹಿತ ಸ್ಪರ್ಶ ನೀಡುವ ಬಂದಾನೋ ನೇಸರ ನಮ್ಮ ನೇಸರ ಸಾಗರದಲೆಗಳಿ ಪಾದ ತೊಳೆದು ಹರಿವ ನೀರ್ಝರಿಗಳಲಿ ಮಿಂದು ಶುಭ್ರ ಬೆಳಕ ಬೀರ ಬಂದಾನೋ ನೇಸರ ನಮ್ಮ ನೇಸರ ಬಾನ ದಾರಿಯಲ್ಲಿ ನಡೆದು ಕ್ಷಣ ತಡಮಾಡದೆ ಬಂದು ದಿನದ ಅವಕಾಶವ ತಂದಾನೋ ನೇಸರ ನಮ್ಮ ನೇಸರ 0711ಎಎಂ31082017 *ಅಮುಭಾವಜೀವಿ*
*ಪ್ರತಿಭೆ ಇದ್ದರೂ* ನಾ ಬಯಸಿದವರಾರೂ ನನ್ನವರಾಗಲೇ ಇಲ್ಲ ಬಯಸದೇ ಬಂದವರೆಲ್ಲಾ ನನ್ನವರಾಗೇ ಉಳಿದರೆಲ್ಲಾ ನಾ ಅಂದುಕೊಂಡದ್ದೇನೂ ಆಗಲೇ ಇಲ್ಲ ಬದುಕಲಿ ನೊಂದುಕೊಂಡೇ ಬಾಳುತಿರುವೆ ನಿತ್ಯ ನೋವಿನ ನೆರಳಲಿ ಪ್ರತಿಭೆ ಇದ್ದರೂ ಯಾರೂ ನನ್ನನ್ನು ಗುರುತಿಸಲೇ ಇಲ್ಲ ಪ್ರತಿಭಟಿಸಲಾಗದೇ ಕೈಚೆಲ್ಲಿದೆ ಪ್ರೋತ್ಸಾಹವಿಲ್ಲದೆ ಪರಿತಪಿಸಿದೆ ಬೆಳೆಯುವ ಹಂಬಲದಲೇ ದಾರಿ ಸವೆಸುತಿರುವೆ ನಾನು ಬೆಳೆಸುವ ಬೆಂಬಲವೆಲ್ಲಿದೆಯೋ ಅರಸುತಿರುವೆ ಹಸಿವಿನೊಳಗೂ ನಾನು 0136ಪಿಎಂ310816 *ಅಮುಭಾವಜೀವಿ* ನನ್ನೀ ಕವಿತೆಗೆ ಸ್ನೇಹಿತರಾದ ಭರತ್ ರಾಜ್ ಪೆರ್ಡೂರ್ ಅವರ ಅರ್ಥಪೂರ್ಣ ವಿಮರ್ಶೆ. ... ಕವನ ಚೆನ್ನಾಗಿದೆ ವಿಷಾದ ಹೆಚ್ಚಾಗಿ ವ್ಯಕ್ತವಾಗಿದೆ. ಕಡಲೆ ಇದೆ ಹಲ್ಲಿಲ್ಲ ಅನ್ನುವಂತೆ ಪ್ರತಿಭೆಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಆದರೂ ಮುಂದೊಮ್ಮೆ ಸಿಗುವ ಆಶಾಭಾವದೊಡನೆ ಕವಿ ಅಮುಭಾವಜೀವಿಯವರು ಉತ್ತಮ ಕವನ ನೀಡಿದ್ದಾರೆ. ಎಷ್ಟೊ ಪ್ರತಿಭೆಗಳು ಅವಕಾಶ ವಂಚಿತರಾಗಿ ಬೆಳೆಯದೆ ತೆರೆಮರೆ ಕಾಯಿಯಾಗಿ ಬೆಳಕಿಗೆ ಬಾರದಿರುವುದು ವಿಷಾದನೀಯ. ಇಂದಿನ ಅಂತರ್ಜಾಲಯುಗದಲ್ಲಿ ಕೆಲವರ ಇಚ್ಚಾಶಕ್ತಿಯಿಂದ ಅಂತಹ ಪ್ರತಿಭೆಗಳಿಗೆ ಮಾನ್ಯತೆ ಸಿಗುತ್ತಿರುವುದು ಸಮಾಜದ ಉತ್ತಮ ಬೆಳವಣಿಗೆ. ಒಂದು ಉತ್ತಮ ಕವನ ಹಾಗೆ ಒದಿದಾಗ ಎಲ್ಲೊ ಮನದ ಮೂಲೆಯಲ್ಲಿ ಸಾಧಿಸುವ ಹೂವಿನ ಮೊಗ್ಗು ಅರಳಿಸುವ ಸೂರ್ಯನ ಬೆಳಕಿನಂತಹ ಕವನ.........
*ರವಿ ಬರುವ ಹಾದಿಯಲ್ಲಿ* ಕಣ್ಣು ತೆರೆಯಿತೊಂದು ಹಗಲು ಬಣ್ಣ ಬಳಿದ ಹೊನ್ನ ಮುಗಿಲು ರವಿಯು ಬರುವ ಹಾದಿಯಲ್ಲಿ ಇಬ್ಬನಿ ಮಿನುಗಿತು ಎಲೆಎಲೆಯಲ್ಲಿ ಇರುಳಿನೊಡೆಯ ಚಂದಿರಗೆ ವಿಶ್ರಾಂತಿ ನೀಡಲು ಬಂದ ಭಾಸ್ಕರ ಕವಿದ ಕತ್ತಲೆಗೆ ಮುಕ್ತಿ ಹಾಡಿ ಬೆಳಕಿನೊಸಗೆ ತಂದ ನೇಸರ ಮುದುಡಿದ ತಾವರೆಯು ನಕ್ಕಿತು ಅಲೆಗಳಿಗೆ ಹೊಂಬಣ್ಣ ಬಳಿಯಿತು ಮರಗಿಡಗಳ ತಲೆ ನೇವರಿಸಿ ಹೊಸ ಚೈತನ್ಯದ ಪುಳಕ ತಂದಿತು ರವಿಯು ಬರೆದ ಚಿತ್ರ ಕಾವ್ಯವನು ಹಕ್ಕಿ ಉಲಿಯಿತು ಇಂಪು ಗಾನದಲಿ ಬೆರಗುಗೊಂಡಿತು ಈ ಜಗವು ನವೋಲ್ಲಾಸದ ಬೀದಿಯಲಿ ಶುಭೋದಯದ ನವಕಿರಣದಿಂದ ಜಗದ ಚೆಲುವಾಯ್ತು ನವೀಕರಣ ದಿನವೆಲ್ಲ ರವಿಗೆ ರಾಜಮರ್ಯಾದೆ ಜಗವು ಅದರಿಂದ ಹಿಗ್ಗಿ ನಲಿದಿದೆ 0709ಎಎಂ01092017 *ಅಮುಭಾವಜೀವಿ*
*ಭಾವವಿರದ ಹಾಡಿನಲ್ಲಿ* ಭಾವವಿರದ ಹಾಡಿನಲ್ಲಿ / ಬರಿಯೇ ನೋವು ತುಂಬಿದೆ ಭಾರ ಹೊತ್ತ ಬದುಕಿನಲ್ಲಿ / ಕರಿಯ ಛಾಯೆ ಮೂಡಿದೆ /ಪ/ ಯಾರೋ ಬರೆದ ಕವಿತೆ ಇಂದು ನನ್ನ ಕಥೆಯ ಹೇಳಿದೆ ಯಾವ ಬಣ್ಣ ಬಳಸಿದರೂ ನನ್ನ ವ್ಯಥೆಯ ಬದಲಿಸದಾಗಿದೆ ಯಾವ ತಪ್ಪಿಗೆ ನನಗೀ ಶಿಕ್ಷೆ ದೇವ ನೀಡೆಯಾ ನನಗೆ ರಕ್ಷೆ /೧/ ಬಡತದನ ಪ್ರತಿ ಹೊಡೆತಕೂ ನಾನೇ ಸಿಕ್ಕು ಬಲಿಯಾದೆ ಒಳ್ಳೆಯ ಕಾಲ ಬರುವುದೆಂದು ಬರುವ ಕಷ್ಟಗಳನೆಲ್ಲ ಸಹಿಸಿ ನಡೆದೆ ನೀಗಲಿಲ್ಲ ನನ್ನ ಬಡತನ ಕಾಲ ಬದಲಿಸಲಿಲ್ಲ ಜೀವನ /೨/ ಪ್ರೀತಿಯೆಂಬ ಹಣತೆ ಕಂಡು ಹಾರಿ ಬಂದೆ ನಾನದರ ಬಳಿಗೆ ಜ್ಯೋತಿಯೂ ಕೂಡ ರೆಕ್ಕೆ ಸುಟ್ಟು ಬಿದ್ದಿತ್ತು ಉರಿವ ದೀಪದ ಕೆಳಗೆ ಬದುಕು ಬರೀ ಬೇಗೆ ಸುಖ ಮರೀಚಿಕೆ ಇನ್ನು ನನಗೆ /೩/ 0729ಎಎಂ01092017 *ಅಮುಭಾವಜೀವಿ* ಅಂಜಲಿ ಜೀವಸೆಲೆ ಅವರ ವಿಮರ್ಶೆ ಭಾವಗೀತೆ ತುಂಬಾ ಭಾವಪೂರ್ಣ ಆಗಿದೆ..ಕೊನೆಯ ಆರು ಸಾಲುಗಳು..ಅರ್ಥಪೂರ್ಣ..🌸🌸🌸🌸🌸🌸 ಪ್ರೀತಿಯನ್ನು ಹಣತೆಗೆ ಹೋಲಿಸಿ ಭಾವವಿರದ ಪ್ರೀತಿಯು ಜೊತೆಯಿದ್ದರೆ ಬೆಳಗುವ ಜ್ಯೋತಿ ಕೂಡಾ ಸುಡುವುದೆಂಬ ಭಾವ ವ್ಯಕ್ತವಾಗಿದೆ.... ಕವಿ ಪ್ರತಿಯೊಂದು ಸಾಲಿನಲ್ಲಿ ಭಾವಗಳ ಪೂರ್ಣತೆಯ ಮಹತ್ವ ತಿಳಿಯಪಡಿಸಿರುವರು... ಬೇಗೆಯ ಬದುಕಲಿ ಬೆಂದು ನಿರಾಶಭಾವದ ಕವಿಮನಕೆ ಸುಖ ಮರೀಚಿಕೆಯಾಗದೆ ನಿರಂತರ ಜಿನುಗುವ ಭಾವಸೆಲೆಯಾಗಲಿ... ಬಹುಬೇಗ ಆಶಾಭಾವದ ಕವನ ಹೊಮ್ಮಲಿ...👍🏻
*ಓಡುವ ತಾಯಿ ಮಹದಾಯಿ* ಓ ತಾಯಿ ಮಹದಾಯಿ ನೀನಾಗು ಕರುಣಾಮಯಿ ಮೈದುಂಬಿ ಹರಿಯುತಲಿ ಬಾಯಾರಿಕೆ ನೀಗು ಮಹತಾಯಿ ಬರ ನಮಗೆ ಬರೆ ಎಳೆದು ಹನಿನೀರಿಗೂ ಅನ್ಯಾಯವಾಗಿ ಜೀವಜಲಕಾಗಿ ಕೂಗಿಕೂಗಿ ಬಾಯಿ ಒಣಗಿದೆ ತಣಿಸು ಬಾತಾಯಿ ನಮಗೆ ಬದುಕಲಾಗದ ಬಲು ದಾಹ ಆಳುಗರಿಗೆ ಅಧಿಕಾರದ ಮೋಹ ನಿತ್ಯ ನಮಗಿಲ್ಲಿ ನಿಲ್ಲದ ಪರದಾಟ ಅವರಿಗೋ ಪರಸ್ಪರ ಕೆಸರೆರಚಾಟ ಪ್ರತಿಭಟನೆಯ ಬೆಂಕಿಯೊಳಗೆ ತಮ್ಮ ಬೇಳೆ ಬೇಯಿಸಲು ಹವಣಿಸಿದರು ನ್ಯಾಯ ಕೇಳಿದ ಅಮಾಯಕರ ಮೇಲೆ ಲಾಟಿ ಏಟು ಕೊಟ್ಟು ಹತ್ತಿಕ್ಕಿದರು ವರ್ಷಗಟ್ಟಲೇ ಕಾದು ಕೇಳಿದರೂ ಅವರ ಕಿವಿಗೆ ನಮ್ಮ ಕೂಗು ಕೇಳಲಿಲ್ಲ ಇವರು ಅವರ ಮೇಲೆ ಅವರು ಇವರ ಮೇಲೆ ಹೇಳಿ ಕಾಲ ಕಳೆದರು ನ್ಯಾಯ ಕೊಡಿಸಲಿಲ್ಲ ಓ ತಾಯಿ ಮಹದಾಯಿ ನೀನಾದರೂ ಕೇಳಿಸಿಕೋ ನಮ್ಮ ಬಾಯಾರಿದ ಗೋಳು ಹನಿಹನಿಯಾಗಿ ಕೂಡಿಸಿ ಹಳ್ಳವಾಗಿ ಹರಿದು ದಾಹ ನೀಗಿ ಹಸನಾಗಿಸು ನಮ್ಮ ಬಾಳನು 0214ಪಿಎಂ02092017 *ಅಮುಭಾವಜೀವಿ*
*ಚಿತ್ರಕವನ* *ಕಾಡಿಲ್ಲದೆ* ಮಂಗನಿಂದ ಮಾನವನಾದ ಸಮೃದ್ಧ ಕಾಡನು ಖಾಲಿ ಮಾಡಿದ ಬುದ್ದಿ ಇಲ್ಲದಾಗ ಕಾಡಿನೊಂದಿಗೆ ಹೊಂದಿಕೊಂಡು ಬದುಕ ನಡೆಸಿ ಹಂತ ಹಂತವಾಗಿ ಬೆಳೆಯುತ್ತಾ ಸ್ವಲ್ಪ ಸ್ವಲ್ಪವೇ ನಾಶ ಮಾಡುತ ಬಂದ ತನ್ನನೇ ಸಲಹಿದ ಕಾಡು ಕಡಿದು ಬರಡು ಮಾಡಿ ಪರಿದಾಡುತಿಹನು ಹಸಿರೇ ಇಲ್ಲದ ನಾಡನು ಕಟ್ಟಿ ಉಸಿರಿಗಾಗಿ ಪರಿತಪಿಸುತಿಹನು ಅಂದು ಹಸಿವಿಗಾಗಿ ತಿನ್ನುತ್ತಿದ್ದ ಇಂದು ಅತಿಯಾಸೆಗಾಗಿ ನಾಶಗೈದ ವಾನರನಾಗಿ ಮರದಾಸರೆ ಪಡೆದ ಮಾನವನಾಗಿ ನೆರಳಿಲ್ಲದಂತೆ ನರಳಾಡಿದ ಪ್ರಕೃತಿ ಪಾಲಿನ ಕಂಟಕ ಇವನು ವಿಕೃತ ಮನಸ್ಸಿನ ವಂಚಕನಿವನು ಕಡಿಯುವಯೆಡೆಯಲಿ ನೆಡದೆ ಬೆಳೆದುದನೆಲ್ಲ ಕಡಿದು ಕಂಗಾಲಾದ ಕಾಡಿಲ್ಲದೆ ಮಳೆ ಬಾರದೆ ಹೆಚ್ಚಾಗಿದೆ ಬರದ ಬಾಧೆ ಮೂಲವ ಮರೆತು ಕುಲದ ನೆಲೆಗೆ ಕಾಲಯಮನಾದ ನಿಸರ್ಗ ಸೌಖ್ಯಕೆ 0350ಪಿಎಂ03092017 *ಅಮುಭಾವಜೀವಿ*
*ಮಹಾತಪಸ್ವಿ* *ಶಿ*ಷ್ಯನ ತಪ್ಪುಗಳನು *ಕ್ಷ*ಮಿಸಿ ಅವನ ಬದುಕಿಗೆ *ಕ*ಲಿಕೆಯ ವರ ನೀಡುವನೀತ ಶಿಕ್ಷಕನೆಂಬ ಸಂಭಾವಿತ *ಗು*ರಿಯ ಆ ನಿಖರತೆಯನ್ನು *ರು*ಜುವಾತುಪಡಿಸಿ ಸಾಧಿಸಲು ಏಣಿಯಾಗಿ ಭವಿಷ್ಯ ಕಟ್ಟಿದ ದೈವ ಸಮಾನನೀತ *ಉ*ತ್ಸಾಹದ ಚಿಲುಮೆಯಾಗಿ *ಪಾ*ಠಪ್ರವಚನದಿ ಭಾಗಿಯಾಗಿ *ಧ್ಯಾ*ನದಂತೆ ವೃತ್ತಿ ಮಾಡುವ *ಯ*ಶಸ್ಸಿನ ಮೆಟ್ಟಿಲಾದವನೀತ ಮುಂದೆ ಗುರಿಯನಿಟ್ಟು ಹಿಂದೆ ಗುರು ತೋರಿ ಬೊಟ್ಟು ಸಾಧನೆಯ ಶಿಖರವನೇರಲು ಹೆಮ್ಮೆ ಪಡುವ ಮೊದಲ ವ್ಯಕ್ತಿ ಈತ ತನ್ನ ಸ್ಥಾನಕ್ಕೆ ಘನತೆಯ ತಂದು ಮಗುವಿನ ಭವಿಷ್ಯ ಉಜ್ವಗೊಳಿಸಿ ವೃತ್ತಿಯಲಿ ಧನ್ಯತೆ ಪಡೆವ ಧರ್ಮನಿರಪೇಕ್ಷನೀತ ಗುರುವಿನ ಗುಲಾಮರಾಗಿ ಅರಿವಿನ ಮೂಲವನರಿ ತೋರಿ ಸಮಾಜದ ಮನ್ನಣೆ ಪಡೆದ ಶಿಕ್ಷಣದ ಮಹಾತಪಸ್ವಿ ಈತ *ಅಮುಭಾವಜೀವಿ*
*ಗುಂಡು ಸದ್ದು ಮಾಡದಿರಲಿ* ಸಾಧಿಸಿದ್ದಾದರೂ ನೀವೇನನ್ನು ಸಾವಿನಿಂದ ಹತ್ತಿಕ್ಕುವಿರೇ ಸತ್ಯವನ್ನು ಪ್ರಜಾಪ್ವಭುತ್ವದ ಈ ನಾಡಿನಲ್ಲಿ ವಿಚಾರವಾದಿಗಳ ಹತ್ಯೆಯಾಗುತಿದೆ ಅಭಿವ್ಯಕ್ತಿ ಸ್ವಾತಂತ್ರ್ಯಕೆ ಇನ್ನಿಲ್ಲಿ ಕೋವಿಯ ನಳಿಕೆಯಿಂದ ಸತ್ಯ ಸಾಯುವುದೇ? ಪಂಥೀಯ ವಾದವದೇನೇ ಇರಲಿ ಅದನ್ನು ಹತ್ತಿಕ್ಕಲು ಗುಂಡು ಸದ್ದು ಮಾಡದಿರಲಿ ಖಂಡಿಸುವ ತಾಕತ್ತು ಇಲ್ಲದಿದ್ದರೆ ನೀವು ಅವರ ಕೊಲ್ಲುವಷ್ಟು ಹೇಡಿಯಾದಿರೇ? ಎಲ್ಲ ವಾದಗಳಿಗೂ ಮಿಗಿಲು ಮಾನವೀಯತೆಯ ಮಡಿಲು ಎಲ್ಲಿಗೆ ತಲುಪಿದೆವು ನಾವಿಂದು ಬಾಯಿ ಮುಚ್ಚಿಸಬಹುದೆ ಕೊಂದು ? ಸಂವಹನ ಮಾಡಲಾಗದ ಅಯೋಗ್ಯರು ಸಂಹಾರ ಮಾಡಿ ತಲೆ ಮರೆಸಿಕೊಂಡರು ರಕ್ತ ಹರಿಸಿ ಶಕ್ತರಾದಿರೇ ನೀವು ನಾಳೆ ನಿಮ್ಮನ್ನು ಉಳಿಕೊಳ್ಳುವುದಿಲ್ಲ ಸಾವು ! ಬಿಟ್ಟು ಬಿಡಿ ಈ ಮೂರ್ಖತನ ಅರಿತು ನಡೆಯಿರಿ ಮಾನಮಾನವೀಯನ್ನ ಕೊಲ್ಲುವ ಹೇಡಿ ಕೈಗಳೇ ಕಾಯುವವರಾರು ನಿಮ್ಮನ್ನ ಒಂದು ಸಾವಿನಿಂದ ಸತ್ಯ ಸಾಯುವುದಿಲ್ಲ ಒಂದು ವಾದದಿಂದ ಮಿಥ್ಯ ಗೆಲ್ಲುವುದಿಲ್ಲ ಓ ಕ್ರೂರ ಅಸ್ವಸ್ಥ ಕೊಳಕು ಮನಗಳೇ ಇಲ್ಲಿ ನಿಮಗೆ ಜಾಗವಿಲ್ಲ ಹೊರಡಿ ಗುಳೆ 1054ಪಿಎಂ05092017 *ಅಮುಭಾವಜೀವಿ* ಗೌರಿ ಲಂಕೇಶ್ ಅವರ ಹತ್ಯೆ ಕುರಿತು ಬರೆದ ಕವಿತೆ
ತಲ್ಲಣಗಳು ತಳಮಳಿಸುತ್ತಿವೆ ಕಾರಣಗಳು ತಿಳಿಯದೇ ಮನ ನೊಂದಿದೆ ತನು ಬೆಂದಿದೆ ಎಂದಿಗೆ ಕೊನೆ ಎಂದು ತಿಳಿಯದೆ ಬರದ ಛಾಯೆ ಆವರಿಸಿದೆ ಬದುಕಲು ಹೋರಾಟ ನಿತ್ಯವಾಗಿದೆ ಕಲ್ಲು ಕೂಡ ಕರಗವ ಆಕ್ರಂದನಕೆ ನ್ಯಾಯ ಮಾತ್ರ ಮರೀಚಿಕೆಯಾಗದೆ ವಾದಗಳ ಭಿನ್ನತೆಯಲಿ ಬದುಕುವ ಸಾಮ್ಯತೆ ಬಲಿಯಾಗಿ ಸತ್ಯದ ಹತ್ಯೆಯಾಗುತಿದೆ ಸಮಾಜದ ಸ್ವಾಸ್ಥ್ಯ ಹಾಳಾಗಿ ವಿಚಾರಧಾರೆಯನು ಹೇಳಲೂ ಇಲ್ಲಿ ಸ್ವಾತಂತ್ರ್ಯ ಇಲ್ಲವಾಗುತಿದೆ ಅಂಜದೆ ಬಾಯಿ ಬಿಟ್ಟರೆ ಗುಂಡು ಸದ್ದು ಮಾಡಿ ಸಾವು ತರುತಿದೆ ಕಾಯಕ ಮಾಡುವುದೆ ಕಷ್ಟವಾಗಿ ಭ್ರಷ್ಟ ವ್ಯವಸ್ಥೆಗೆ ಬಲಿಯಾಗಿ ಧರೆಯೇ ಹೊತ್ತಿ ಉರಿಯುವಾಗ ಬದುಕಲು ತಲ್ಲಣ ಶುರುವಾಗಿದೆ 0821ಎಎಂ06092017 *ಅಮುಭಾವಜೀವಿ *
*ಇಲ್ಲಿ ಹಂತಕರಿದ್ದಾರೆ ಎಚ್ಚರ* ಹುಷಾರ್ ಇಲ್ಲಿ ಹಂತಕರಿದ್ದಾರೆ ಅಭಿವ್ಯಕ್ತಿ ಸ್ವಾತಂತ್ರ್ಯವ ಹತ್ತಿಕ್ಕಿ ವೈಚಾರಿಕತೆಯನ್ನು ಪೈಶಾಚಿಕವಾಗಿ ಕೊಲ್ಲುವ ಮಾನವೀಯತೆಯನ್ನೇ ಮರೆತ ಬಾಡಿಗೆ ಹಂತಕರಿದ್ದಾರೆ ಎಚ್ಚರ ವ್ಯವಸ್ಥೆಯ ವಿರುದ್ಧ ಹೋರಾಡಿದರೆ ಸತ್ಯದ ಪರ ಮಾತನಾಡಿದರೆ ಸಮಸ್ಯೆಯ ಕರಾಳ ಮುಖ ತೋರಿದರೆ ತಡಮಾಡದೆ ಕೊಲ್ಲುವ ಹಂತಕರಿದ್ದಾರೆ ಎಚ್ಚರ ಪಂಥೀಯ ಹಾದಿ ತುಳಿದರೆ ಮುಖ್ಯವಾಹಿನಿಗೆ ಕರೆತಂದರೆ ಸೈದ್ಧಾಂತಿಕ ನಿಲುವು ಹೊಂದಿದರೆ ಸಂಚು ಮಾಡಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ ತನ್ನ ನಿಲುವನ್ನು ಪ್ರಕಟಪಡಿಸಿದರೆ ಅವರ ಗೆಲುವನ್ನು ಖಂಡಿಸಿದರೆ ಸಮಾನತೆ ವಾದ ಮಂಡಿಸಿದರೆ ಗುಂಡಿಕ್ಕಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ ವಿಚಾರವಂತಿಕೆಯ ಪ್ರತಿಪಾದಿಸಿದರೆ ಮಡಿವಂತಿಕೆಯ ಅನುಮಾನಿಸಿದರೆ ಒಡಂಬಡಿಕೆಗೆ ಒಪ್ಪಿಕೊಳ್ಳದಿದ್ದರೆ ಅಮಾನವೀಯವಾಗಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ 0722ಎಎಂ07092017 *ಅಮುಭಾವಜೀವಿ*
*೧•ಕಾಡದಿರಲಿ ಮತ್ತೆ* ಈ ದೂರ ಆದರೆ ನಿರಂತರ ಹೇಗಾದಿತು ಮನ್ವಂತರ ಬಾಳಲಿ ಬರೀ ಬೇಸರ ನೀನಿಲ್ಲದ ಬದುಕು ಭೀಕರ ಎಷ್ಟೊಂದು ಒಲವಿತ್ತು ಎಷ್ಟೊಂದು ಚೆಲುವಿತ್ತು ನೀನಿರಲು ನನ್ನ ಬಳಿ ಎಷ್ಟೊಂದು ನೋವಿದೆ ಸಾವನ್ನು ಸೆಳೆದಿದೆ ನನ್ನನು ಈ ಬೇಸರದ ಸುಳಿ /೧/ ಭಾವದ ಅಲೆಯಲ್ಲಿ ತೇಲಿದ್ದೆ ಖುಷಿಯಲ್ಲಿ ನಿನ್ನೊಲವ ನನ್ನದಾಗಿರಲು ಬಾಯ್ಬಿಟ್ಟ ಭುವಿಯೊಳಗೆ ಆಕ್ರಂದನದ ವೇದನೆಯೊಗೆ ಬೇಯುತಿಹೆ ನೀನಿಲ್ಲದಿರಲು /೨/ ಮತ್ತೆ ನೀ ಬಂದು ಸೇರು ಮತ್ತೆದೇ ಒಲವ ತೋರು ಚೈತ್ರದ ಚಿಗುರಾಗಲಿ ಬದುಕು ನಿತ್ಯ ನಿನ್ನದೇ ಧ್ಯಾನ ಸಹಿಸಲಾರೆ ನಾ ಮೌನ ಕಾಡದಿರಲಿ ಮತ್ತೆ ಅಂತರದ ಕೆಡುಕು /೩/ ೧೦೪೬ಎಎಂ೦೭೦೯೨೦೧೭ *ಅಮುಭಾವಜೀವಿ* ಅಮುಭಾವಜೀವಿಯವರ ಕಾಡದಿರಲಿ ಮತ್ತೆ👌👌👌👌 ಪ್ರೀತಿ ಇದ್ದರೆ ಚೆಲುವು ಪ್ರೀತಿ ಇದ್ದರೆ ಒಲವು ಅದೆ ಪ್ರೀತಿ ಇಲ್ಲದ ಬದುಕು ಬರಿ ಬೇಸರ ನೀನಿದ್ದಾಗ ಖುಷಿ ನೀನಿಲ್ಲವೆಂದು ತಿಳಿದರೆ ಬೇಯುತ್ತಿದೆ ಮನಸು, ಮತ್ತೆ ನೀ ಬಂದು ಈ ಅಂತರವ ಕಳೆದು ಬಿಡು ಎಂದ ನಿಮ್ಮ ಗೀತೆ ಸೋಗಸಾಗಿದೆ ಸಾರ್🙏👌👌👌🙏🙏
*೧•ಮಧುರ ಸಾಕ್ಷಿ* ಮುತ್ತು ಮುತ್ತು ಸಿಹಿಮುತ್ತು ಸೋತ ಮನಕೆ ತಾಕತ್ತು ಆಪ್ತ ಭಾವದ ಗಮ್ಮತ್ತು ಅದುವೇ ಪ್ರೀತಿಯ ಸಂಪತ್ತು ತಾಯಿಯ ಮಡಿಲಲಿ ಮಲಗುವ ಕಂದನ ಭಯ ದೂರ ಮಾಡುವ ಸಿಹಿಮುತ್ತು ಅಮ್ಮನು ನೀಡುವ ಭರವಸೆಯೊಂದೇ ಕಂದನ ಮುದ್ದಿಸುವಾ ಸವಿಮುತ್ತು ಸೋದರ ಭಾವದ ಬಂಧವು ಬೆಸವ ಬಾಲ್ಯದ ಬಾಂಧವ್ಯದ ಸಿಹಿಮುತ್ತು ಸ್ನೇಹದ ಸೌಹಾರ್ದದ ಅಪ್ಪುಗೆಯ ಸದ್ಭಾವದ ಸವಿ ಮುತ್ತು ಹರೆಯದ ಅಮಲಲಿ ಜೋಡಿ ಜೀವಗಳ ಮಧುರ ಕ್ಷಣಗಳ ಸಾಕ್ಷಿ ಈ ಸಿಹಿಮುತ್ತು ಪ್ರೀತಿಯ ಜ್ಯೋತಿಯ ಬೆಳಕಲಿ ಕಣ್ಮುಚ್ಚಿ ಆನಂದಿಸುವ ಸವಿ ಹೊತ್ತು ಬಾಳ ಹೋರಾಟದಲಿ ಸೋತ ಸಂಗಾತಿಯ ಹುರಿದುಂಬಿಸುವ ಸಾಧನವೀ ಸಿಹಿಮುತ್ತು ಎಲ್ಲಾ ನೋವನು ಕ್ಷಣದಲಿ ಮರೆಸುವ ದಿವ್ಯೌಷಧಿ ಈ ಒಲವಿನ ಸವಿ ಮುತ್ತು ಮುಪ್ಪಿನ ಕಾಲದಿ ಸವೆದ ಹಾದಿಯ ಸವಿನೆನಪನು ಹಸಿರಾಗಿಸೋ ಸಿಹಿಮುತ್ತು ಎಲ್ಲಾ ಕಾಲಕೂ ಎಲ್ಲ ಕುಲಕೂ ಸಲ್ಲುವ ಗಟ್ಟಿ ನಿಲುವು ನೀಡುವ ಸವಿ ಮುತ್ತು 0235ಪಿಎಂ09092017 *ಅಮುಭಾವಜೀವಿ*
*೨•ತಂಗಾಳಿಯ ರಾತ್ರಿಯಲಿ* ಈ ಹಸಿರ ಸಿರಿಯಲಿ ತುಂತುರು ಹನಿಯಲಿ ನೆನವಾಗ ನಲ್ಲ ನೀ ಕೊಟ್ಟ ಸಿಹಿಮುತ್ತು ಚೆಂದ ಚೆಂದ ತಂಗಾಳಿಯ ರಾತ್ರಿಯಲಿ ಬೆಳ್ದಿಂಗಳ ಜೊತೆಯಲ್ಲಿ ನಲ್ಲ ನಿನ್ನ ಬಾಹುಗಳಲಿ ಬಂಧಿಯಾದ ಕ್ಷಣವೇ ಚೆಂದ ಚೆಂದ ಬಿರಿದರಳಿದ ವನಸುಮದಿ ಮಧು ಹೀರುವ ದುಂಬಿ ತೆರದಿ ನಲ್ಲ ನನ್ನ ನೀ ಮುತ್ತುವಾಗ ಒಲವ ಘಮಘಮ ಚೆಂದ ಚೆಂದ ಹರೆಯದ ನದಿ ಹರಿಯುವಾಗ ಸಂಗಾತಿ ನೀ ಬಂದು ಕೂಡಿದಾಗ ಖುಷಿಯ ಜುಳುಜುಳು ಹೊಮ್ಮುವಾಗ ಬದುಕ ಯಾನ ಚೆಂದ ಚೆಂದ ಮುಸ್ಸಂಜೆಯ ವೇಳೆಯಲ್ಲಿ ಪಡುವಣದ ಬಾನಿನಲ್ಲಿ ಹೊಳೆವ ಹೊನ್ನ ಕಿರಣದಲ್ಲಿ ನೋಡಲ್ಲಿ ನಮ್ಮ ಜೋಡಿ ಚೆಂದ ಚೆಂದ ಮತ್ತೆ ಬಂದ ರಾತ್ರಿಯಲ್ಲಿ ಚುಕ್ಕಿ ಚಂದ್ರಮರ ಜೊತೆಯಲ್ಲಿ ಪ್ರಣಯಗೀತೆ ಹಾಡುವ ನಾವೆಷ್ಟೊಂದು ಚೆಂದ ಚೆಂದ 0439ಪಿಎಂ09092017 *ಅಮುಭಾವಜೀವಿ*
*೧•ಸುಪ್ರಭಾತವ ಹೇಳು* ಏಳು ಎದ್ದೇಳು ಓ ಜೀವ ಬೆಳ್ಳಂಬೆಳಕು ಈಗಾಯ್ತು ಸೋಮಾರಿ ಶತ್ರುವ ಬಡಿದೇಳು ಸಂಸ್ಕಾರ ಸುಪ್ರಭಾತವ ನೀ ಹೇಳು // ಕಾಯಕ ದೀಕ್ಷೆಯ ಕೊಟ್ಟಾಯ್ತು ರವಿ ಬರಲು ಮೂಡಣ ಬೆಳಕಾಯ್ತು ಖಗಮೃಗಗಳ ನೋಡಿ ನೀ ಕಲಿ ಪ್ರಾಮಾಣಿಕ ಬದುಕಲಿ ನೀ ಬೆಳಿ ಜಗವೊಂದು ಜೀವನ ಪಾಠ ಯಾರಿಗಿಲ್ಲ ಇಲ್ಲಿ ಆ ಸಂಕಟ. /೧/ ದುಡಿಮೆಯ ಮಂತ್ರ ನೀ ಹಾಡು ತುಂಬಲಿ ನಿನ್ನಯ ಹೊಟ್ಟೆ ಪಾಡು ನಿನ್ನ ಈ ಶ್ರಮದ ಮುಂದೆ ಆ ಶತ್ರು ತಲೆಯೆತ್ತದೆ ಬದುಕನ್ನು ಗೆದ್ದು ಬೀಗು ಅನುಭವದಲ್ಲಿ ಹೆಮ್ಮರವಾಗಿ |೨| ಉದ್ಯೋಗ ನಿನ್ನ ಅಸ್ತ್ರ ಉತ್ಸಾಹ ಯಶದ ಸೂತ್ರ ಏಳು ನೀ ಹಾಸಿಗೆ ಬಿಟ್ಟು ಮುನ್ನುಗ್ಗು ನೀ ಪಣತೊಟ್ಟು 0350ಎಎಂ11092017 *ಅಮುಭಾವಜೀವಿ *
*೧•ಅಮ್ಮ ಎಂಬುದೇ* ಅಮ್ಮನ ಕೈತುತ್ತೇ ಸ್ವರ್ಗದ ಸಂಪತ್ತು ಅಮ್ಮನ ಸವಿಮುತ್ತೇ ಗೆಲ್ಲುವ ತಾಕತ್ತು /ಪ/ ಒಡಲಲಿ ಜಾಗವ ಕೊಡುವಾಗ ತಾಯಿಯ ಋಣದ ಆರಂಭ ಅಮ್ಮನೊಲವಿನ ಆಳದಲಿ ಮೀಯುವುದೇ ನಮಗೆ ಜಂಭ ಜಗವೇ ಸೋತಿದೆ ಅವಳ ಪ್ರೀತಿಗೆ ಮಗುವ ಮುಗ್ಧತೆಯಿದೆ ಅವಳ ಮಾತಿಗೆ /೧/ ನೋವಲೂ ನಲಿವಲೂ ಅಮ್ಮ ಎಂದರೆ ಎಲ್ಲಾ ನೋವು ಮಾಯ ಕನಸಲೂ ಮನಸಲೂ ಅಮ್ಮ ಎನ್ನದೆ ಸರಿಯದು ನಮ್ಮ ಸಮಯ ಅಮ್ಮ ಎಂಬುದೇ ಸಂಸ್ಕಾರ ಅಮ್ಮ ತೋರಳು ಎಂದೂ ಅಧಿಕಾರ /೨/ ಹಸಿವಿಗೆ ಅಮ್ಮನ ಕೈತುತ್ತು ದೂರ ತಳ್ಳುವುದೆಲ್ಲಾ ಆಪತ್ತು ಅಮ್ಮನಿಗಾಗಿ ಮಿಡಿಯುವ ಜೀವ ಕವಿತೆಯ ಹಡೆಯಿತು ಕವಿಭಾವ ಅಮ್ಮ ಎಂದರೆ ಸೋಲಿಲ್ಲ ಅಮ್ಮನ ಮರೆತರೆ ಬದುಕಿಲ್ಲ /೩/ ೦೭೨೧ಎಎಂ೧೨೦೯೨೦೧೭ *ಅಮುಭಾವಜೀವಿ*
*೨•ಅನಾಥ ಬದುಕಿಗೆ* ಅಪ್ಪ ಮರೆತಿರಲು ಅಮ್ಮ ತೊರೆದಿರಲು ಯಾರ ಬೇಡಲಿ ಕೈತ್ತುತ್ತು ಬೀದಿ ಬದಿಯೇ ವಾಸ ಅವರಿವರ ಆ ಸಂತೋಷ ಎಂದೂ ಆಗದು ನಮ್ಮ ಸ್ವತ್ತು // ಅನಾಥ ಬದುಕಿಗೆ ಅವಹೇಳನವೇ ಉಡುಗೊರೆ ಪ್ರೀತಿ ತೋರರು ಯಾರೂ,,,? ಮೋರಿ ಸೇರಿದ ಅನ್ನಕೆ ನೂರು ಜೀವಗಳ ಹಂಬಲಿಕೆ ಎಸೆವ ಕೈ ಹಸಿವ ನೀಗದು ,,,! ಭಿಕ್ಷೆ ಬೇಡಿದರೆ ಶಿಕ್ಷೆ ನೀಡುವರು ಹೆತ್ತವರ ಪ್ರೀತಿಯುಂಡವರು,,,,! ಪ್ರಾಣಿಗೂ ಹೀನ ಬದುಕು ಅಲ್ಲಿಯೇ ನಮ್ಮ ಒಳಿತು ಕೆಡುಕು ಕೈತ್ತುತ್ತು ಕನಸಿನ ಮಾತಾಗಿಹುದು. .. 1159ಎಎಂ12092017 *ಅಮುಭಾವಜೀವಿ*
*೩•ಏಕೆ ತೊರೆದಿರುವೆ* ಅಮ್ಮ ನೀನು ಎಲ್ಲಿರುವೆ ನನ್ನನ್ನು ಏಕೆ ತೊರೆದಿರುವೆ ನಾನೇನು ತಪ್ಪನು ಮಾಡಿ ನಿನ್ನ ಕಂದನಾಗಿ ಹುಟ್ಟಿದೆ ಪಕ್ಕದ ಮನೆಯ ಅಮ್ಮನು ತನ್ನಯ ಕಂದನ ರಮಿಸುವಳು ಎದುರಿನ ಓಣಿಯ ಅಂಗಳದಲ್ಲಿ ಮಗುವನು ಮುದ್ದಿಸುವುದ ನೋಡಲ್ಲಿ ನನ್ನನ್ನು ಏಕೆ ತೊರೆದಿರಿ ನೀವು ಅಂದೇ ಬರಬಾರದಿತ್ತೇ ಸಾವು ಚಂದ ಚಂದದ ಬಟ್ಟೆಯ ಹಾಕಿ ಪರಿಮಳ ಪುಡಿಯನು ಪೂಸಿ ಸ್ವರ್ಗಕೆ ಕಿಚ್ಚು ಹೆಚ್ಚಿಹರು ನನ್ನನ್ನು ಹಾಗೆ ಸಲಹುವರಾರು ನಿಮಗಿದು ಸರಿ ಕಾಣುವುದೇ ಎಲ್ಲಿ ಅವಿತಿರಿ ನನಗೂ ಕಾಣದೆ ಬಯಸಿದ ವಸ್ತುಗಳ ಹರಡಿ ತಾವೂ ಮಗುವಿನ ಜೊತೆ ಆಡಿ ಕೈತುತ್ತನಿಕ್ಕುವ ತಾಯಿ ನೀನೇಕಾಗಲಿಲ್ಲ ಕರುಣಾಮಯಿ ಕೊಚ್ಚೆಯ ಬದುಕಿಗೆ ನನ್ನ ತಳಿ ಎಲ್ಲಿ ಹೋದಿರಿ ಬರದೆ ಮರಳಿ ನನಗೂ ಬೇಕು ಅಪ್ಪ ಅಮ್ಮ ನಿಮ್ಮ ಪ್ರೀತಿ ನನಗೇಕಿಲ್ಲಮ್ಮ ಎಲ್ಲೇ ಇದ್ದರೂ ಬಂದು ಬಿಡಿ ಪ್ರೀತಿಯ ಧಾರೆಯ ಹರಿಸಿಬಿಡಿ 0541ಪಿಎಂ12092017 *ಅಮುಭಾವಜೀವಿ*
*೧•ಸವಿನೆನಪುಗಳು* ಸವಿನೆನಪುಗಳು ಬೇಕು ಸವೆಯಲು ಈ ಬದುಕು ಒಂದೊಂದರ ಮೆಲುಕು ಮಿಡಿದಿದೆ ಸಾವಿರ ಫಲುಕು /ಪ/ ಬಾಲ್ಯದಲಿ ಆಡಿರುವ ತುಂಟತನಗಳ ನೆನಪು ಎಂದೂ ಮರೆಯಲಾರದ ಸ್ವರ್ಗಕೂ ಮಿಗಿಲಾದ ನೆನಪು ನೆನೆಯುತಿರೆ ಇನ್ನೂ ಬೇಕೆನ್ನುವ ಮುದು ನೀಡುವ ಮಧುರ ನೆನಪು |೧| ಹರೆಯದಲಿ ಮೆರೆಯುತಿಹ ಸ್ವಂಚ್ಚಂದದ ಸವಿನೆನಪು ಎಲ್ಲವನೂ ಗೆಲ್ಲುವ ನೆಚ್ಚಿನ ಬದುಕು ಪಡೆದ ನೆನಪು ಪ್ರೀತಿ ಪ್ರೇಮದ ಗೆಳೆತನದೊಳಗೂ ಮರೆಯಲಾಗದ ಸವಿ ಸವಿ ನೆನಪು /೨/ ಮದುವೆಯೆಂಬ ಮನೆಯೊಳಗೆ ಮುದದಿ ಪ್ರವೇಶಿಸಿದ ನೆನಪು ಮಕ್ಕಳೊಂದಿಗೆ ಮಗುವಾಗಿ ಆಡಿಕುಣಿದ ಸವಿ ನೆನಪು ಕಷ್ಟಸುಖಗಳ ಮೆಟ್ಟಿ ನಿಂತು ಬದುಕು ಕಟ್ಟಿದ ಸುಂದರ ನೆನಪು |೩| ಮುಪ್ಪು ಬಂದು ಮೆತ್ತಗಾಗಿ ಇಡೀ ಬದುಕನ್ನು ನೆನೆವ ಕಾಲ ಜೀವನದ ಓರೆಕೋರೆಗಳು ಫಲಿತಾಂಶ ನೀಡುವ ಸಕಾಲ ಎಲ್ಲ ನೆನಪುಗಳು ಮೆಲ್ಲ ಸರಿದು ಸಾರ್ಥಕತೆಯ ನಿಟ್ಟುಸಿರು ಬಿಟ್ಟ ಕಾಲ|೪| 0731ಎಎಂ13092017 *ಅಮುಭಾವಜೀವಿ*
ಹಾಳಾಗಿದೆ ನಮ್ಮ ವ್ಯವಸ್ಥೆ ಕೇಳೋರಿಲ್ಲ ಈ ಅವಸ್ಥೆ ಭ್ರಷ್ಟರನ್ನು ಪ್ರೋತ್ಸಾಹಿಸುತ್ತ ಶಿಷ್ಟರನ್ನು ಸಾಯಿಸುತ್ತೆ ನಮ್ಮ ಈ ದುಷ್ಟ ವ್ಯವಸ್ಥೆ ಭ್ರಷ್ಟರನ್ನು ರಕ್ಷಿಸುತ್ತಾ ಶಿಷ್ಟರನ್ನು ಶಿಕ್ಷಿಸುತ್ತೆ ನಮ್ಮ ಈ ದುಷ್ಟ ವ್ಯವಸ್ಥೆ ಭ್ರಷ್ಟತನವ ಮುಚ್ಚಿ ಹಾಕಿ ಶಿಷ್ಟತನಕೆ ಹಿಂಸೆ ಕೊಟ್ಟು ದುರ್ಬಲಗೊಳಿಸುತ್ತೆ ಈ ವ್ಯವಸ್ಥೆ ಭ್ರಷ್ಟರನ್ನು ಮೆರೆಸುತ್ತದೆ ಶಿಷ್ಟರನ್ನು ಹಿಂದೆ ಸರಿಸುತ್ತದೆ ನಮ್ಮ ಈ ದುಷ್ಟ ವ್ಯವಸ್ಥೆ ಭ್ರಷ್ಟರನ್ನು ಬಳಿಯೇ ಇರಿಸಿ ಶಿಷ್ಟರನ್ನು ದೂರವಿರಿಸಿ ಅಟ್ಟಹಾಸ ತೋರಿದೆ ಈ ವ್ಯವಸ್ಥೆ ಭ್ರಷ್ಟರಿಗೆ ಎಲ್ಲ ಸವಲತ್ತು ಶಿಷ್ಟರಿಗೆ ಬರೀ ಆಪತ್ತು ತಂದೊಡ್ಡುತಿದೆ ಈ ದುಷ್ಟ ವ್ಯವಸ್ಥೆ ಏತಕೆ ಹೀಗಾಗಿದೆಯೋ ಎಂದಿಗೆ ಬದಲಾಗುವುದೋ ವ್ಯವಸ್ಥೆ ಸರಿಗೊಳ್ಳದೆ ಭ್ರಷ್ಟತೆ ಬಿಟ್ಟು ಹೋಗದು 0203ಪಿಎಂ13092017 *ಅಮುಭಾವಜೀವಿ*
*ಮರೆಯಾಗಿವೆ ಮುಖಗಳು* ಮರೆಯಾಗಿವೆ ನಿಜ ಮುಖಗಳು ಮೆರೆದಾಡಿವೆ ಮುಖವಾಡಗಳು ಮಾತಿಗೂ ಕೃತಿಗೂ ಸಾಮ್ಯತೆ ಇಲ್ಲ ಅಂತರಂಗ ಬಹಿರಂಗ ಶುದ್ಧಿ ಇಲ್ಲ ಎಲ್ಲ ತಳುಕು ಬದುಕಿನ ವೇಷ ಮೈಮರೆತರೆ ಆದಾಗುವುದು ಪಾಶ ನಂಬಿಕೆಯು ಇಲ್ಲಿ ಅಂಜುತಿದೆ ಮಾನವೀಯತೆ ಬಲಿಯಾಗುತಿದೆ ವೈಚಾರಿಕತೆಯ ಕಗ್ಗೊಲೆಯಲ್ಲಿ ಕಾಣದ ಕೈಗಳು ಗೆಲ್ಲುತಿವೆ ಭ್ರಷ್ಟತೆ ಇಲ್ಲಿ ಬಲಿಯುತಿದೆ ಶಿಷ್ಟರ ಮೇಲೆರಗುತಿದೆ ಬಾಯಿ ಮುಚ್ಚಿಕೊಂಡರೆ ಬದುಕಿಲ್ಲಿ ನ್ಯಾಯ ಕೇಳುವುದು ಅಪರಾಧವಿಲ್ಲಿ ಪ್ರಾಮಾಣಿಕತೆ ಏಣಿಯ ಒದ್ದು ಬದುಕುವವನೇ ಇಲ್ಲಿನ ಒಡೆಯ ದನಿಯೆತ್ತಲು ಧಮನಗೈವರು ಸಹಿಸುವುದು ಹೇಗೆ ದಬ್ಬಾಳಿಕೆಯ ಕಳಚುವವರಾರೋ ಮುಖವಾಡ ತೋರುವವರಾರೋ ಧರ್ಮದ ಜಾಡ ಯೋಚಿಸಿ ಹೆಜ್ಜೆಯ ಇಡಬೇಕು ಬದುಕಲು ಎಲ್ಲ ಸಹಿಸಬೇಕು 0606ಪಿಎಂ13092017 *ಅಮುಭಾವಜೀವಿ*
*ನನ್ನ ಹಸಿವಿನ ಬೆಲೆ* ಬರೀ ದೇಹ ಕಿತ್ತು ತಿನ್ನುವ ಕಾಮುಕರ ಮಂಚದ ಮೇಲೆ ನಾ ಜೀವಂತ ಶವ ಮೈಯನಷ್ಟೆ ಮಾರಿಕೊಂಡಹೆ ನಾ ಮನಸನಂತೂ ಅಲ್ಲ ನಿತ್ಯ ಸಹಿಸಿ ನೋವ ನನ್ನ ಹಸಿವಿನ ಬೆಲೆ ಅವರ ಕಾಮದ ನೆಲೆ ದಾಹ ತೀರಲೇ ಬೇಕು ಇಬ್ಬರಿಗೂ ನನ್ನದು ಅನಿವಾರ್ಯದ ಬದುಕು ಅವರಿಗೋ ಕ್ಷಣದ ಸುಖ ಸಾಕು ವೇಶ್ಯೆಯ ಪಟ್ಟಕೆ ರಾಣಿ ನಾ ಕತ್ತಲಾದರೆ ಸಾಕು ನಾ ಬೆತ್ತಲಾಗಿರಲೇ ಬೇಕು ನನ್ನವರ ಮಾನ ಮುಚ್ಚಲು ಮನಸಿಲ್ಲ ಆದರೂ ಹೇಗುವೆ ನೋವ ಕೇಳುವ ಮನಸು ಸಿಗುವುದೋ ಎಂದು ನಿತ್ಯ ಕಾಮಕೂಪದಿ ದೀಪವಾಗಿ ಬಂದವರಾರಿಗೂ ಮನಸು ಬೇಕಿಲ್ಲ ಬರೀ ಮೈ ನೀಡಿದರೆ ಸಾಕು ತೀಟೆ ತೀರಿದ ಮೇಲೆ ನಾನ್ಯಾರೋ ಅವರ್ಯಾರೋ ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯ್ತು ಯೌವನಕೆ ಬಂದಿದ್ದೇ ಮುಳುವಾಯ್ತು ಬದುಕು ಸೂತ್ರವಿರದ ಪಟವಾಯ್ತು 0252ಪಿಎಂ130915 ಅಮುಭಾವಜೀವಿ ವಿನಯ್ ಅವರ ಪ್ರತಿಕ್ರಿಯೆ ಬದುಕಿನ ಅನಾಚಾರ-ಕರಾಳತೆ-ಅಸಹಾಯಕತೆ-ಸುಖ-ದುಃಖ ಎಲ್ಲವನ್ನೂ ತುಂಬಾ ಚನ್ನಾಗಿವಿವರಿಸಿದ್ದೀರ..... ಧನ್ಯವಾದಗಳು ಸರ್ 🙏🙏🙏🙏 ಸರೋಜ ಬೈಲಹೊಂಗಲ ಅವರ ಪ್ರತಿಕ್ರಿಯೆ ಸರೋಜ ಬೈಲಹೊಂಗಲ: ಯಪ್ಪಾ ದೇವರೇ ವೇಶ್ಯೇಯರ ಬಾಳು ಬರೀ ಕಣ್ಣೀರ ಗೋಳು ಅವರ ಮನದಾಳದ ನೋವುಗಳು ಮನ ಮಿಡಿಯುವಂತೆ ಬರೆದಿರುವಿರಿ ಸರ್ 👌👌👌👌👌👏👏👏👏 ನಮೀಕ್ಷಾ: ಕತ್ತಲೆ ಲೋಕದ ಚೆಂದದ ಅನಾವರಣ😒😒😒 ಶೀಲಾ ಸುರೇಶ್: ಏನೂಂತ ಪ್ರತಿಕ್ರಿಯೆ ನೀಡೋದು.ಅನಿವಾರ್ಯದ ಅಸಹ್ಯವಾದ ಬದುಕದು...ಹೆಣ್ಣಾಗಿ ಹುಟ್ಟಿದ್ದೆ ಅಪರಾಧ ಆಕೆಗೆ.ಚನ್ನಾಗಿದೆ...ಆದರೆ ಕೆಲ ಪದಗಳು ಸತ್ಯವಾದರೂ ನೇರ ಬದಲು ಏನಾದರೂ ರೂಪಕಗಳ ಮೂಲಕ ಹೇಳಬಹುದಿತ್ತೇನೊ ಶೀಲಾ ಸುರೇಶ್: ಕಾಮ,..ಬೆತ್ತಲೆ..ಹೀಗೆ ಪದಗಳ ಬದಲು ಕಿರಣ ಕುಮಾರ್ ‬: ಇನ್ನಷ್ಟು ಸೂಚ್ಯ ಬಳಸಿ, ಕಾವ್ಯೀಕರಿಸಿ...ಇದು ಲೇಖನದಂತಿದೆ ....ಎಂದು ನನ್ನ ಅಭಿಪ್ರಾಯ ಶ್ರೇಯ ಗೌಡ ಅವರ ಪ್ರತಿಕ್ರಿಯೆ ನಗ್ನ ಸತ್ಯ ತಿಪ್ಪೇಸ್ವಾಮಿ ಪ್ರೇಮಾಜ್ಞಿ ಆ ಮೌನಿಯ ಅಂತರಾಳದ ನೋವಿನ ಕನ್ನಡಿ 👏👏👏👏 ಅನ್ಸಾಲ್ ಸಿ ಕಾಸರಗೋಡು: ಮನ ಕರಗಿಸುವ ಕವನ 👌🏻👌🏻👌🏻 ಚಪ್ಪು ಸಫ್ವಾನ್ : ಸರ್ ಒಂದೊಂದು ವಾಕ್ಯ ಒಂದೊಂದು ನೋವ ತೋರಿಸಿದೆ [13/09 6:31 pm] ‪+91 73535 09250‬: ಒಂದಂತೂ ಸತ್ಯ ಸಂಗತಿ ಅವಳೆಂದರೆ ಅವನ ಗುಲಾಮ ಎಂದು ನೀಲಾ ಅವರ ಪ್ರತಿಕ್ರಿಯೆ ಕಣ್ಣಲಿ ಕಂಬನಿ ಬಂತು ಸರ್/ಮೇಡಮ ತುಂಬಾ ಚೆನ್ನಾಗಿದೆ👌 ದೀಪ ಪಟಾತ ಅವರ ಪ್ರತಿಕ್ರಿಯೆ ಹೆಣ್ಣು..ಈ ಕಾಮಕರ ಬದುಕಿನಲ್ಲಿ..ಸತ್ತು ಬದುಕುತ್ತಿದ್ದಾಳೆ...ಹೊಸ ಬದುಕು..ರೂಪಿಸಿಕೊಳ್ಳುವಲ್ಲಿ..ಸೋತು..ಕಾಮಕರಿಗೆ ಆಳಾಗಿದ್ದಾಳೆ...ದೇಹ ಎಂದೋ..ಸತ್ತು ಹೋಗಿದೆ..ಮನಸ್ಸು ಸತ್ತು ಬದುಕುತ್ತಿದೆ.... ತುಂಬಾ..ಚೆನ್ನಾಗಿದೆ..ಸರ್..ಅದರಲ್ಲಿಯೂ...ಆ..ಕವಿತೆಯಲ್ಲಿ..ಅದು ನಾನೆ..ಆ.ಸಂದರ್ಭದಲ್ಲಿ..ನಾನಾಗಿದ್ದರೆ..ಏನು ಮಾಡುತ್ತಿದ್ದೆ..ಎಂದು ಓದಿದರೆ..ಒಂದು ಹೆಣ್ಣಿನ ಬದುಕು ..ಎಲ್ಲರಿಗೂ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸರ್.. ಥ್ಯಾಂಕು ಸರ್🙏..ತುಂಬಾ ಚೆನ್ನಾಗಿದೆ.. ಭಾರತಿ ಪಲ್ಸಾರೆ ಅವರ ಪ್ರತಿಕ್ರಿಯೆ ಹಸಿಮಾಂಸದ ಒಳಗಡೆ ಒದ್ದಾಡೊ ಮನಸಿನ ಸಂಕಟ...ಮನಸಿನ ವಿರುದ್ಧ ಅಸಹಾಯಕತೆಯ ರಾಜ್ಯ...ಆ ಹೆಣ್ಣಿನ ಮನ ನಿಜಕ್ಕೂ ದಯನೀಯ.. ಆನಂದ ಅವರ ಪ್ರತಿಕ್ರಿಯೆ ಮನ ಕಲಕುವ ಕವನ ಕವಿತಾ ಪತ್ತಾರ್ ಅವರ ಪ್ರತಿಕ್ರಿಯೆ ಹೆಣ್ಣಿನ ಬಗ್ಗೆ ವಿಚಾರ ಮಾಡುವಂತ ಕವನ ಈ ಸಮಾಜದಲ್ಲಿ ..ಹೆಣ್ಣು ಇಲ್ಲ ಅಂದರ ಎನೂ ಇಲ್ಲ ..ಆದರು. ಹೆಣ್ಣು ಅರತಿರಬೇಕು ... ದೇವರು ಅಷ್ಟು ಶಕ್ತಿ ಕೊಟ್ಟಿರುತ್ತಾನೆ ದುಡಿದು .ಬದುಕ ಬೇಕು ಮೈ ಮಾರಿಕೊಂಡಲ್ಲ .. ಹೆಣ್ಣಿನಲ್ಲಿ ಚಲ ಬೇಕು ಗುರುರಾಜ್ ಅವರ ಪ್ರತಿಕ್ರಿಯೆ Nejwagllu thumba Adabuthavaghi bardidre sir thumba artha idhe e Kavithe Alli ❤ ವೀರೂ ಅವರ ಪ್ರತಿಕ್ರಿಯೆ Mana Muttuvanthaha Kathe " Katheyalla Jeevana" ರವಿ ಅವರ ಪ್ರತಿಕ್ರಿಯೆ Super sir 👌🏻👌🏻 But ಆದರೂ ಇತ್ತೀಚಿನ ದಿನಮಾನಗಳಲ್ಲಿ ಇಂತಹ ಸದ್ಗುಣವಂತ ವೇಶ್ಯೆಯರು ಸ್ವಲ್ಪ ಕಡಿಮೆ...🤔🤔 ರತ್ನ ರತ್ನ ಬಡಗನೂರು: ಮನಸು ಒಳಗೊಳಗೆ ಮರುಗುತ್ತದೆ ಅವಳ ನೋವ ಅರಿತರೂ ಅಸಹಾಯಕತೆ ನಮ್ಮದು ವೇಣಿಬಾಯಿ ಅವರ ಪ್ರತಿಕ್ರಿಯೆ ಅದ್ಭುತವಾದ ಸಹಜ ಚಿತ್ರಣ.ಅತಿಶಯೋಕ್ತಿ ಇಲ್ಲದ ನೈಜತೆಯ ನೆಲೆಗಟ್ಟಿನಲ್ಲಿ ಮೂಡಿರುವ ಮನಮುಟ್ಟುವ ಕವನ ಸಾರ್👏👏👏👏👏🙏🏻🙏🏻🙏🏻🙏🏻 ಸವಿ ಆಶ: Khandita iwathu 50 percent e tara irtare And samajada samskara agtide ಗುಡಿಬಂಡೆ ಫಯಾಜ್ ಅವರ ಪ್ರತಿಕ್ರಿಯೆ ಮಾಂಸಧಂಧೆಯ ಕರಾಳ ಮುಖವನ್ನು ಜೊತೆಗೆ ಅದರಲ್ಲೇ ಬಳಲುವವರ ಒಳಮನಸಿನ ಕನ್ನಡಿ ಈ ಕವನ ಎನ್ನಬಹುದು. 💐🙏👌***ಉತ್ತಮ
*ತಣಿಯಲಿ ಅವು ಕೂಡ* ಮುಸ್ಸಂಜೆ ವೇಳೆಯ ರಂಗೆರಚಿದ ಚಿತ್ರಾವಳಿ ನಲ್ಲೆ ನಿನ್ನ ಈ ಕೆನ್ನೆಯಲ್ಲಿ ಮೂಡಣದ ಬೀದಿಯಲಿ ಮಳೆಬಿಲ್ಲಿನ ಚೆಲುವಂತೆ ನಿನ್ನ ಕೆನ್ನೆ ಮೇಲಿನ ನಗೆ ಹಾವಳಿ ಸೋನೆ ಸುರಿವಾಗ ಜಾರುವ ಹನಿಗೂ ಒಂದಾಸೆ ಈ ನಿನ್ನ ಕೆನ್ನೆ ಸವರಲು ಬೆಳ್ದಿಂಗಳು ಕೂಡ ಬಳುವಳಿಯ ನೀಡಿತು ಈ ಕೆನ್ನೆ ಚೆಲುವು ಹೆಚ್ಚಾಗಲು ಬಿರಿದ ಮೊಗ್ಗೊಂದು ಕೊರಗುತಿದೆ ನಿನ್ನಧರಗಳ ಸ್ಪರ್ಶ ಬೇಕಂತೆ ಕನ್ಯೆ ನಿನ್ನಂದಕೆ ಮನಸೋತು ತಾರೆಗಳೆಲ್ಲ ನಿನ್ನ ಕೆನ್ನಯ ಹೊಳಪ ಬೇಡುತಿವೆ ನೀಡೊಮ್ಮೆ ತಣಿಯಲಿ ಅವು ಕೂಡ 0601ಪಿಎಂ14092017 *ಅಮುಭಾವಜೀವಿ*
*ಗುಂಗಲ್ಲಿ ಮಿಡಿಯುತಿದೆ* ಗೆಳತಿ ಓ ಗೆಳತಿ ಬಾ ಒಂದು ಸರತಿ ಹೃದಯಕ್ಕೀಗ ಆಘಾತವಾಗಿದೆ ಬೇಕದಕೆ ನಿನ್ನೊಲವ ಪ್ರಥಮ ಚಿಕಿತ್ಸೆ ಈ ಮುಗ್ಧ ಹೃದಯ ಅದು ಹೇಗೋ ನಿನ್ನ ಬಯಸಿದೆ ನಿನ್ನ ಸ್ನಿಗ್ಧ ಸೌಂದರ್ಯ ಸ್ಪರ್ಶ ಅದಕೂನೂ ಬೇಕಾಗಿದೆ ಗೆಳತಿ ಓ ಗೆಳತಿ ಬಾ ಒಂದು ಸರತಿ ನಿನ್ನ ಮಮತೆಯ ದನಿಗೆ ಅದು ಎಂದೋ ಮರುಳಾಗಿದೆ ಕ್ಷಣ ಕ್ಷಣವೂ ಅದರ ಗುಂಗಲ್ಲೇ ಮಿಡಿಯುತಿದೆ ತುಡಿಯುತಿದೆ ಗೆಳತಿ ಓ ಗೆಳತಿ ಬಾ ಒಂದು ಸರತಿ ಬರೀ ರಕ್ತ ಮಾಂಸದ ನಡುವೆಯೂ ನಿನ್ನೊಲವನದು ಬೇಡುತಿದೆ ಒಮ್ಮೆ ಕರುಣೆ ತೋರು ಬಡಿತ ನಿಲ್ಲುವ ಮೊದಲು ಗೆಳತಿ ಓ ಗೆಳತಿ ಬಾ ಒಂದು ಸರತಿ 0619ಪಿಎಂ14092017 *ಅಮುಭಾವಜೀವಿ*
*೧•ನಿನ್ನ ಸಂಗಮದಿಂದ* ಈ ಸಮಯ ಸರಸಮಯ ನೀನಿರಲು ಸನಿಹ ಈ ಭೇಟಿಯ ಮರೆಯಲಾರೆ ತಾಳೆನು ಆ ವಿರಹ ಸುಮವು ಅರಳುವುದು ಸೂರ್ಯ ಬರುವ ಸಮಯಕ್ಕೆ ಸಾಗರ ಉಕ್ಕುವುದು ಹುಣ್ಣಿಮೆಯ ಸಂಭ್ರಮಕ್ಕೆ ನಾನೂ ಕೂಡ ಅರಳಿ ಉಕ್ಕುವೆನು ನಿನ್ನ ಸಂಗಮದಿಂದ ಸಮಯ ಯಾರನ್ನೂ ಕಾಯದು ಪ್ರೀತಿಯು ಯಾರನ್ನೂ ದೂರದು ತಾನೇ ತಾನಾಗಿ ಒಲಿದು ಬಂತು ತಾನೆಲ್ಲವನೂ ನಮಗೆ ನೀಡಿತು ಅದಕ್ಕಾಗಿ ಬೆಸೆದ ಬಂಧ ನಮ್ಮದು ಇದಕ್ಕೆ ಯಾವ ಅಂಜಿಕೆಯೂ ಇರದು ಒಲವೆಂಬ ಓಣಿಯಲಿ ಚಿತ್ತಾರದ ದೋಣಿಯಲಿ ಮತ್ತ್ಯಾರೂ ಇರದ ತಾಣದಲಿ ಸ್ವರ್ಗವ ನಾಚಿಸೋಣ ನಾವಲ್ಲಿ ಬಾರೋ ನೀ ಬದುಕಿನ ಒಡೆಯ ನಮಗೂ ಬಂತೀಗ ಸುಸಮಯ 0554ಪಿಎಂ15092017 *ಅಮುಭಾವಜೀವಿ*
*೧•ದಡವ ಸೇರಿಸು* ಕಣ್ಣು ಕಾಣುತಿಲ್ಲ ಕಿವಿಯೂ ಕೇಳುತಿಲ್ಲ ನನ್ನ ಈ ಸ್ಥಿತಿಗೆ ತಂದ ದೇವರೆ ನಿನಗೆ ಕರುಣೆಯಿಲ್ಲ ನನ್ನ ಕಂಬನಿಧಾರೆ ನಿಂತಿಲ್ಲ ನನ್ನ ಮೇಲೆ ಏಕೆ ಮುನಿಸು ನನ್ನಪರಾಧವ ನೀ ಮನ್ನಿಸು ಅಬಲೆ ನಾನು ಹಗಲೇ ಇರುಳ ಕಂಡೆನು ನನಗೇ ಏಕಿಂತಾ ಶಿಕ್ಷೆ ನೀ ನೀಡದಾದೆಯೇಕೆ ರಕ್ಷೆ ದುಷ್ಟ ಕ್ರಿಮಿಯೊಂದು ಬಂದು ನನ್ನ ಮೇಲೆಯೇ ಬಿದ್ದು ಎದ್ದು ಹೋಗಿದೆ ನಾನ್ಹೇಗೇ ಬಾಳಲಿ ಈಗ ದಾರಿ ಕಾಣದಾಗಿದೆ ಕೈ ಹಿಡಿದು ನಡೆಸೋನು ನೀನೇ ನನ್ನ ಕಾಪಾಡು ಓ ದೇವನೇ ಹೆಬ್ಬುಲಿಗಳ ಮುಂದೆ ನಾ ತಬ್ಬಲಿ ಈಗ ಭಯದಿ ಬೊಬ್ಬಿಡುತಿರುವೆ ಆಸರೆಗೆ ತಬ್ಬಲಿ ಯಾರನು ನಾನೀಗ ನೀನೇ ದಾರಿ ತೋರಿಸು ಕ್ಷೇಮದಿ ದಡವ ಸೇರಿಸು 0329ಪಿಎಂ16092017 *ಅಮುಭಾವಜೀವಿ* ಕವಿಮಿತ್ರ ಭೀಮೇಶ್ ಅವರ ಪ್ರತಿಕ್ರಿಯೆ ಹೆಣ್ಣಿನಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಇಡಿಯಾಗಿ ವ್ಯಕ್ತಪಡಿಸಿದ್ದೀರಿ..ಹಾಗೆಯೇ ದೈವದ ಕುರುಡುತನವನ್ನು ಕಾಣಿಸಿದ್ದೀರಿ..ಒಟ್ಟಾರೆ ಕವಿತೆ ಉತ್ತಮವಾಗಿದೆ ಭವಾನಿ ಶಂಕರ್ ಅವರ ಪ್ರತಿಕ್ರಿಯೆ ಅಬಲೆ ಹೆಣ್ಣಿನ ಕರುಣಾಜನಕ ಸ್ಥಿತಿಯನ್ನು ಕವಿಯೂ ಮನೋಜ್ಞವಾಗಿ ಅಭಿವ್ಯಕ್ತಪಡಿಸಿದ್ದಾರೆ. ಆಕೆಯ ಅಸಹಾಯಕತೆಯನ್ನು ಸಮಾಜದ ಮುಂದೆ ತರುವಲ್ಲಿ ಕವಿಗಳು ಯಶಸ್ವಿಯಾಗಿದ್ದಾರೆ. ದುಷ್ಟನಿಂದ ಅತ್ಯಾಚಾರಕ್ಕೊಳಗಾಗಿ ಪರಿತಪಿಸುವ ಮುಗ್ಧ ಬಾಲೆಯ ದುಃಖವನ್ನು ಸಮಾಜದ ಮುಂದೆ ತೆರೆದಿಡುವಲ್ಲಿ ಕವಿಗಳು ಯಶಸ್ವಿಯಾಗಿದ್ದಾರೆ. ದೇವರು ನಿಮ್ಮ ಪ್ರಯತ್ನಕ್ಕೆ ಫಲ ನೀಡಲಿ.
*ಮೆಟ್ಟಿಲು ಮಾಡಿಕೊಂಡರು* ಎಷ್ಟು ಕೇಳಿಕೊಂಡರೇನು ಅವರಿಗೆ ಕೇಳಲಿಲ್ಲ ನಮ್ಮ ಅಳಲು ಮೆಟ್ಟಿಲು ಮಾಡಿಕೊಂಡರು ನಮ್ಮನ್ನು ತಾವು ರಾಜ್ಯವಾಳಲು ಬರದಲ್ಲಿ ಬೆಂದ ನಮಗೆ ನೀರು ಕೊಡದೆ ಹೋದರು ಪ್ರತಿಭಟನೆಯ ಹಾದಿ ಹಿಡಿದಾಗ ಲಾಟಿ ಏಟು ಕೊಟ್ಟು ಓಡಿಸಿದರು ಸಾಲದ ಶೂಲಕೇರಿ ರೈತ ಆತ್ಮಹತ್ಯೆ ಮಾಡಿಕೊಂಡರೂ ಸಾವಿನ ಮನೆಯಲ್ಲಿ ರಾಜಕೀಯ ಬೇಳೆಯನಷ್ಟೇ ಬೇಯಿಸಿಕೊಂಡರು ದಕ್ಷರನ್ನು ರಕ್ಷಿಸಿಕೊಳ್ಳದೇ ಭ್ರಷ್ಟರಿಗೆ ಪಟ್ಟ ಕೊಟ್ಟು ಮೆರೆದರು ವಿಚಾರವಾದಿಗಳಿಗೆ ಬೆದರಿಕೆಯೊಡ್ಡಿ ಬಂದೂಕಿನಿಂದ ಹತ್ಯೆಗೈದರು ಭೀಕರವಾಗುತಲಿದೆ ಸಾಮಾನ್ಯನ ಬದುಕು ಕೋಟಿ ಕೋಟಿ ವೆಚ್ಚವಾಗುತಿದೆ ಯಾವ್ಯಾವುದಕೋ ನಮ್ಮ ಅಳಲನು ಹೂತರು ತಮ್ಮ ಬದುಕ ವೃದ್ಧಿಸಿಕೊಂಡರು ಬಡಪಾಯಿಗೆ ಬೆಲೆಯಿಲ್ಲದಾಗಿ ಬಸವಳಿದು ಕೂತ ಹಸಿವಿನಲಿ 0604ಪಿಎಂ17092017 *ಅಮುಭಾವಜೀವಿ*
*ಬದುಕಿನ ನಾಟಕಕೆ* ಮುಂಜಾನೆಯ ಇಬ್ಬನಿಯಲಿ ಹೊಂಬಣ್ಣದ ರಂಗನು ಚೆಲ್ಲಿ ಮೂಡಣ ದಿಗಂತದಿ ತೇಲಿ ಬಂದ ನೇಸರ ನಗುನಗುತಾ ಹಕ್ಕಿಯ ಕೊರಳಿಗೆ ದನಿಯಾಗಿ ಹರಿವ ನೀರಿಗೆ ಸ್ಪೂರ್ತಿಯಾಗಿ ಹೂಚೆಲುವಿನ ಅನಾವರಣಗೈದು ಅರುಣ ತಂದನ ನವೋದಯವ ಹೊಂಗಿರಣಗಳ ಸೈನ್ಯ ಕಳಿಸಿ ಮಲಗಿದ್ದ ಪ್ರಕೃತಿಯ ಎಬ್ಬಿಸಿ ಕತ್ತಲೆಯ ಪರದೆಯನೆತ್ತಿ ಬದುಕಿನ ನಾಟಕಕೆ ಚಾಲನೆಯಿತ್ತ ಮೋಡಗಳ ನಡುವೆ ಓಡೋಡಿ ಏರುತ ಬಂದ ಈ ಬಾನಾಡಿ ಬಿಸಿಲಿನ ಒಸಗೆಯ ತಂದು ಭೂಮಿಯ ಕನಸನು ಮೊಳೆಸಿದ ದಿನಕರ ಶುಭಕರ ನಮಗೆಂದೂ ಕಾಯಕದೀಕ್ಷೆಗೆ ಚೇತನ ಅವನೆಂದೂ ಬೆಳಕಿನ ಒಡೆಯಗೆ ನನ್ನ ನಮನ ಅವನಿಗಾಗಿ ಬರೆದೆ ಈ ಕವನ 0626ಎಎಂ20092017 *ಅಮುಭಾವಜೀವಿ*
*ನಿತ್ಯಾರಾಧನೆ* ಕವಿತೆ ನೀನೇಕೆ ನನ್ನಲಿ ಬೆರೆತೆ ನೀನಿರಲು ನನ್ನ ನಾ ಮರೆತೆ ಭಾವದ ಅಲೆಯಲಿ ತೇಲುತ ಬಂದೆ ಕಾವ್ಯವು ಕರೆಯಲು ನಾನಿಲ್ಲಿ ನಿಂತೆ ಬರೆಯುತ ಬೆಳೆಸಿತು ಕವಿತೆ ಜಗ ಹೇಳುತಿದೆ ನಾನು ಕವಿಯಂತೆ ಅನುಭವವ ನಾ ಹಂಚಿಕೊಂಡೆ ಅನುಭಾವವ ಅದರಲಿ ಬಿಂಬಿಸಿ ಬರೆದೆ ಅಭಿಮಾನವ ತಂದಿತು ಕವಿತೆ ಅವಕಾಶಕೆ ಇನ್ನಿಲ್ಲದಂತೆ ಕೊರತೆ ಪ್ರೀತಿ ಪ್ರೇಮದ ಆಲಾಪನೆಯು ರೋಷನ್ ಆಕ್ರೋಶದ ವೇದನೆಯು ಪ್ರಕೃತಿ ಚೆಲುವಿನ ಬಣ್ಣನೆಯೂ ಎಲ್ಲಾ ಕವಿ ಕಲ್ಪನೆಯೂ ನಗುವಿನ ನಲಿವಿನ ವರ್ಣನೆ ನೋವಿನ ಅಳುವಿನ ಭಾವನೆ ಕಾವ್ಯವು ಕವಿಯ ಕಲ್ಪನೆ ಕವಿತೆಯೇ ಅವನ ನಿತ್ಯಾರಾಧನೆ ಜಗವನೆ ಮರೆಸಿತು ಜಗಕಾವರಿಸಿತು ಜನುಮದೊಡನಾಡಿ ಭಾವವು ನೀಗಿತು ಬದುಕಿನ ಭಾವದ ಹಸಿವು 0555ಎಎಂ22092017 *ಅಮುಭಾವಜೀವಿ*
*ನಾ ಭ್ರಮಿಸಿದೆ* ನೀ ರಮಿಸುವೆ ಎಂದು ನಾನು ಭ್ರಮಿಸಿದೆ ನೀ ಮೋಸವ ಮಾಡಿ ನನ್ನನ್ನು ವಂಚಿಸಿದೆ ಹರೆಯದ ಕಾಲಕೆ ಕಂಡ ನೀನು ಅರಿಯುವ ಮೊದಲೇ ಸೆಳೆದೆ ಸಕ್ಕರೆ ಮಾತುಗಳನೆಲ್ಲಾ ನಂಬಿ ಅಕ್ಕರೆ ಎಂದು ಅಭಿಮಾನಿಸಿದೆ ವಿಶ್ವಾಸದ ಕತ್ತು ಹಿಸುಕಿ ಘಾಸಿಗೊಳಿಸಿದೆ ನೀ ನನ್ನನು ಪ್ರೀತಿಯ ಪಾಶಕೆ ಬಲಿಯಾಗಿ ತ್ರಿಶಂಖುವಿನಲಿ ಒದ್ದಾಡುತಲಿರುವೆ ಒಂಚೂರೂ ಸುಳಿವನು ನೀಡದೆ ವಂಚಿಸಿದ ಕಾರಣವಾದರೂ ಏನು? ಉತ್ತರ ಹೇಳು ಓ ಗೆಳೆಯ ನೀಗು ನನ್ನ ಈ ಸಂಶಯ ಬದುಕಿನ ಗತಿಯನೇ ಬದಲಿಸಿದೆ ಸಾಯುವ ಸ್ಥಿತಿಗೆ ತಂದು ನಿಲಿಸಿದೆ ಯಾವ ತಪ್ಪಿಗೆ ನನಗೀ ಶಿಕ್ಷೆ ಮೋಸಗೈಯಿತೇ ನಾ ನಂಬಿದ ರಕ್ಷೆ ಅನುಭವ ಹೇಳಿತು ಸಾಂತ್ವನ ಕಾಲವು ತೋರಿತು ಎಡವಿದ ಕ್ಷಣವನ್ನ 0107ಪಿಎಂ23092017 *ಅಮುಭಾವಜೀವಿ*
*ಚಿತ್ರ ಕವನ ಸ್ಪರ್ಧೆಗಾಗಿ* *ಮಳೆಯಿಲ್ಲದೆ* ನೆತ್ತಿಯು ಸುಡುತಿದೆ ನೆಲ ಬಿರುಕು ಬಿಟ್ಟಿದೆ ಮಳೆಗಾಗಿ ಮುಗಲತ್ತ ನೋಡುತ ಬದುಕು ಬಸವಳಿದು ಕೂತಿದೆ ಬಿತ್ತಿದ ಬೆಳೆ ಬತ್ತಿಹೋಗಿದೆ ಭರವಸೆ ಎಂಬುದು ಸತ್ತೇ ಹೋಗಿದೆ ಮಳೆಯಿಲ್ಲದೆ ಬರಿದಾಗಿದೆ ರೈತನ ಬದುಕು ಕಂಗಾಲಾಗಿದೆ ಬಂಜೆ ಮೋಡಗಳನು ಸಂಜೆವರೆಗೂ ನೋಡಿದರೂ ಹನಿ ಮಳೆ ಸುರಿಯದೇ ಕರಗಿ ಮಾಯವಾಗಿ ಹೋಗಿವೆ ಬರದ ಬೇಗೆ ಕಸಿದು ನಗೆ ಆಹಾಕಾರದ ಅಟ್ಟಹಾಸ ಮೆರೆಸಿದೆ ಒಣಗಿ ನಿಂತ ಮರ ಕೆರೆತೊರೆಗಳ ಮತ್ತೆ ಚಿಗುರಿಸುವುದನೇ ಮರೆತಿದೆ ತೊರೆದು ಬಿಡು ಮುನಿಸು ಮತ್ತೆ ತಂದು ಕೊಡು ಸೊಗಸು ರೈತನ ಮೊಗದಲ್ಲಿ ಮಂದಹಾಸ ಮೂಡಲಿ ಮತ್ತೊಂದು ವರ್ಷ 4:45ಪಿಎಂ23092017 *ಅಮುಭಾವಜೀವಿ*
ಬೆಳೆದು ಬೆಳೆದು ಬೃಹತ್ತಾಯ್ತು ನಮ್ಮ ಬೆಂದಕಾಳೂರು ಸುತ್ತಮುತ್ತಲಿನ ಹಳ್ಳಿಗಳ ನಗರವಾಗಿಸಿ ದೂರದಿಂದ ಬಂದು ಬದುಕು ಕಟ್ಟಿಕೊಂಡರು ಕಾಂಕ್ರೀಟ್ ಕಾಡಿನಲ್ಲಿ ಎಷ್ಟೊಂದು ಜನ ಜಂಗುಳಿ ವಾಹನಗಳ ಬಲು ಹಾವಳಿ ಧಾವಂತದ ಬದುಕೇ ಇದರ ಬಳುವಳಿ ದುಡಿಮೆಯೊಂದೇ ಇಲ್ಲಿನ ಮಂತ್ರ ವಾರಾಂತ್ಯಕೆ ವಿರಾಮದ ಸೂತ್ರ ಕಲೆ ಸಾಹಿತ್ಯ ಒಂದಷ್ಟು ಪ್ರೋತ್ಸಾಹ ಏನು ಹೇಳಲಿ ಅವರ ಜೀವನೋತ್ಸಹವನು ಬದುಕು ಅರಸಿ ಬಂದವರನೆಲ್ಲ ಅಪ್ಪಿ ಒಪ್ಪಿಕೊಳ್ಳುವ ನಗರ ವಾಹನ ದಟ್ಟಣೆಯೊಂದಿಗೆ ಗುರಿ ತಲುಪಲಿಲ್ಲಿ ನಿತ್ಯ ಸಮರ ಉದ್ಯಾನವನಗಳ ನಗರವಿಂದು ಭಾರಿ ಬೃಹತ್ ಕಟ್ಟಡಗಳ ಆಗರ ಮೆಟ್ರೊ ಮಾಲ್ ಸಂಸ್ಕೃತಿ ಪೋಷಕ ಕರುನಾಡ ರಾಜಧಾನಿ ಎಂಬ ದ್ಯೋತಕ ಹೆಮ್ಮೆಯ ನಗರದೊಳಗೂ ಸಮಸ್ಯೆಗಳ ಮಹಾಪೂರ ಆಧುನಿಕತೆಯ ಹೆಸರಿನಲ್ಲಿ ಇದು ಸಿಲಿಕಾನ್ ವ್ಯಾಲಿ 0510ಎಎಂ25092017 *ಅಮುಭಾವಜೀವಿ*
*೧•ಬೀದಿಗೆ ಬಿದ್ದವರು* ಕುಶಲವೇ ಎನ್ನೋರಿಲ್ಲ ಕ್ಷೇಮವ ಬಯಸುವವರಿಲ್ಲ ನಮಗ್ಯಾರಿಲ್ಲ ನಮ್ಮವರೆಂಬ ಬಂಧು ಬೀದಿಗೆ ಬಿದ್ದ ಬದುಕು ನಮ್ಮದು ಕೊಳೆಗೇರಿಯಲಿ ಕೊಳೆವ ಜೀವನ ತಬ್ಬಲಿಗಳಾದುದೇ ಅದಕೆ ಕಾರಣ ದೂರೆವು ನಾವು ಯಾರನ್ನೂ ಹೇಳಿಕೊಳ್ಳಲಾರೆವು ಆ ಕೊರಗನ್ನು ಬೆರಳ ಹಿಡಿದು ನಡೆಸೋರಿಲ್ಲ ಪ್ರೀತಿ ಮಾಡಿ ಮುದ್ದಿಸುವವರಿಲ್ಲ ದೇವರ ಮಕ್ಕಳಂತೆ ನಾವು ಅದಕೆ ಕರುಣೆ ತೋರದು ಸಾವು 0432ಎಎಂ25092017 *ಅಮುಭಾವಜೀವಿ* ಚಳ್ಳಕೆರೆ ಭವಾನಿ ಶಂಕರ್ ಅವರ ಪ್ರತಿಕ್ರಿಯೆ ಉತ್ತಮ ಕವನ. ನಮ್ಮ ಏಳ್ಗೆಯನ್ನು ಬಯಸೋರು ಯಾರು ಇಲ್ಲ. ಜೀವನದಲ್ಲಿ ನಮಗೆ ನಾವೇ ದಿಕ್ಕು ಎಂದು ಕವಿ ಮನೋಜ್ಞವಾಗಿ ಹೇಳಿದ್ದಾರೆ. ಹೆತ್ತವರು ನಮ್ಮ ಕೊನೆಯ ತನಕ ಶ್ರೇಯಸ್ಸು ಹಾರೈಸಲ್ಲ. ಅವರ ಕಾಲ ಮುಗಿದಾಗ ಅವರು ನಮ್ಮನ್ನು ತೊರೆಯುತ್ತಾರೆ. ಜೀವನ ನಶ್ವರವೆಂದು ಕವಿ ಧ್ವನಿಸಿದ್ದಾರೆ. ಒಳಿತು ಮಾಡು ಮನುಸಾ.. ನೀ ಇರೋ ಮೂರು ದಿವಸ..🐿ಶಂಕರ್ ಗುರು
*೨•ತೊರೆದು ಬಿಡು ಮೌನ* ಏಕೆ ನಲ್ಲೆ ಮೊಗದ ಮೊಲ್ಲೆ ಬಾಡಿದಂತಿದೆ ಸದಾ ನಗುವ ಮುಖ ಸ್ಪೂರ್ತಿ ದ್ಯೋತಕ ಇಂದು ಏಕೋ ಮೌನ ತಾಳಿದೆ // ಇರುವುದೆಲ್ಲ ಇರಲಿ ಬಿಡು ನಗುವನೊಂದು ತೇಲಿ ಬಿಡು ಎಲ್ಲ ನೋವ ನುಂಗಿಕೊಂಡು ಮತ್ತೆ ನಗುವ ಮೊಲ್ಲೆಯಂತಾಗಿಬಿಡು // ಯಾರಿಗಿಲ್ಲ ನೋವು ಯಾರಿಗಿಲ್ಲ ಸಾವು ಎಲ್ಲ ಜಯಿಸಿದಾಗಲೇ ಸಾರ್ಥಕ ಜೀವನವು // ತೊರೆದುಬಿಡು ಈ ಮೌನ ಪಸರಿಸು ನಲ್ಲೆ ನಗುವನ್ನ ಆಗ ನೋಡು ಜಗವಾಗುವುದು ನಿತ್ಯ ಸತ್ಯದ ಚೆಲುವ ತಾಣ // ೦೭೪೭ಎಎಂ೨೬೦೯೨೦೧೭ *ಅಮುಭಾವಜೀವಿ* ಮಾನಸ ಅವರ ಪ್ರತಿಕ್ರಿಯೆ ಅಮ್ಮುಭಾವ ಜೀವಿಯವರೇ ಏನು ಹೇಳಲಿ ನಿಮ್ಮ ಗೀತೆ ಅದ್ಬುತ ನೀವು ಹಾಡಿಕೊಂಡು ಬರೆಯುವಿರಾ ಕೊಂಚ ಭಾವ ಕಡಿಮೆ ಅನಿಸಿತು ಮಿಕ್ಕಂತೆ ಸೂಪರ್ ಪದಗಳು ಸ್ವಚ್ಚ ಜೋಡಣೆ ಸರ್ ಚೆಂದದ ಬರಹಗಾರರ ಸಾಲಿನಲ್ಲಿ ನೀವು ಒಬ್ಬರು‌ ಹೆಮ್ಮೆಯಾಗುತ್ತದೆ 👏🏾👏🏾👏🏾👍🏾👍🏾🙏🙏💐💐✍🏾✍🏾 ಅಂಕ ೯ ಶುಭವಾಗಲಿ
*೧•ಪ್ರೀತಿ ದೊಡ್ಡದು* ಬದುಕಿನ ಯಾನದಲ್ಲಿ ನಿತ್ಯ ನಿನ್ನದೇ ಧ್ಯಾನ ನೀನಿಲ್ಲದೆ ಬದುಕೆಲ್ಲಿದೆ ಬರೀ ಶೂನ್ಯ ಸದನ ನಲ್ಲೆ ನಿನ್ನ ಪ್ರೀತಿಗಾಗಿ ಎಲ್ಲ ನೋವ ನುಂಗಿಕೊಂಡೆ ನಿನ್ನಿಂದಲೇ ನನ್ನ ಬದುಕಿಗೊಂದು ಅರ್ಥ ಕಂಡುಕೊಂಡೆ ಬಡಿವಾರವಿಲ್ಲದ ಬಡವನ ಪ್ರೀತಿಯು ನನ್ನದು ಅಂತರಗಳ ಕಂದರ ಮುಚ್ಚಿ ಒಪ್ಪಿ ಅಪ್ಪಿದ ನಿನ್ನ ಪ್ರೀತಿ ದೊಡ್ಡದು ಬಾ ನಲ್ಲೆ ಇದ್ದುದರಲ್ಲೇ ಬದುಕನು ಗೆಲಿಸಿಕೊಳ್ಳುವ ಅಭಿಪ್ರಾಯದಲ್ಲಿ ಭಿನ್ನತೆ ಬರದಂತೆ ಜಗಕೆ ನಾವು ಬದುಕಿ ತೋರುವ 0718ಎಎಂ26092017 *ಅಮುಭಾವಜೀವಿ* ಮಾನಸ ಅವರ ಪ್ರತಿಕ್ರಿಯೆ ಅಮ್ಮು ಸರ್ ಚೆಂದದ ಗೀತೆ ಬರೆದಿದ್ದೀರಾ ಸೂಪರ್ 👌🏻👌🏻👌🏻👍🏾👏🏾👏🏾👏🏾🙏🙏👌? ಸ್ವಲ್ಪ ಭಾವಬೆರೆಸಿ ಬರೆಯಿರಿ ಕಡಿಮೆ ಅನಿಸಿತು ಅಭಿಪ್ರಾಯ ಗೀತೆಯ ಸಾಲು ಚೆಂದವಿದೆ ?👌🏻 ಅಂಕ -೮ ಶುಭವಾಗಲಿ
*೧•ಬಾಳ ಘನತೆ* ಜೀವನದ ಯಾನದಲ್ಲಿ ನೀ ಕೊರಗದಿರು ಗೆಳತಿ ನಿನಗೆ ನೆರಳಾಗಿ ನಿನ್ನ ಕೊರಳಾಗಿ ಬಳಿಯಿದ್ದು ಕೊಡುವೆ ಪ್ರೀತಿ ಬಾಳಲ್ಲಿ ಏನಿಲ್ಲ ಕೊರತೆ ನಾವಾಗಿ ಬಾಳೋಣ ಅದರ ಘನತೆ ಸೂರ್ಯ ಚಂದ್ರರ ಹಾಗೆ ನಾವು ಬಾಳೋಣ ಬರಲೇನೆಲ್ಲ ನೋವು ಬದುಕಲ್ಲಿ ಒಲವೊಂದು ಹಣತೆ ಬೇಕದಕೆ ನಿನ್ನೊಲವ ಮಮತೆ ನೀ ಬೆರಳು ತೋರಿದೆಡೆ ನಾ ನಡೆವೆ ಅಭಿಪ್ರಾಯ ಭಿನ್ನವಾಗದಿರಲಿ ನಮ್ಮ ನಡುವೆ ಬಿಡು ಚಿಂತೆ ಚಿಮ್ಮು ಕಾರಂಜಿಯಂತೆ ಬದುಕಲ್ಲಿ ಇನ್ನಿರದು ಕೊರತೆ ನಾನು ನಿನಗಾಗಿ ನೀನು ನನಗಾಗಿ ಬದುಕುವುದೆ ನಮ್ಮ ಸಾಧನೆಯಂತೆ 1051ಪಿಎಂ27092017 *ಅಮುಭಾವಜೀವಿ*
*೧•ಎರಡನೇ ತಾಯಿ* ಹೆಂಡತಿ ಎಂದರೆ ಪ್ರಾಣ ಹಿಂಡುವವಳಲ್ಲ ಗಂಡನೇಳಿಗೆಗಾಗಿ ಟೊಂಕ ಕಟ್ಟಿ ನಿಂತವಳು ಸತಿ ಎಂಬುವಳೊಂದು ಸ್ವತ್ತಲ್ಲ ಬದುಕಿನ ಬೆಲೆಕಟ್ಟಲಾಗದ ಸಂಪತ್ತವಳು ಹೆಂಡತಿಯೊಬ್ಬಳು ಸಿಪಾಯಿಯಂತೆ ಅವಳಿದ್ದರೆ ಇರದು ಯಾವ ಚಿಂತೆ ಹೆಂಡತಿ ಅವಳು ಎರಡನೆ ತಾಯಿ ತಪ್ಪನು ತಿದ್ದುವ ಸಹನಾಮಯಿ ಹೆಂಡತಿ ದಂಡಿಸೋ ದಂಡವಲ್ಲ ಸ್ವಾರ್ಥಕಾಗಿ ಅವಳೆಂದೂ ಬಾಳುವುದಿಲ್ಲ ಗಂಡ ಮನೆ ಮಕ್ಕಳೇ ಅವಳಾಸ್ತಿ ದಂಡೆಮಲ್ಲಿಗೆಗೆ ಒಲಿವ ಪ್ರೀತಿ ಖಂಡಿಸಬೇಡಿರಿ ಅವಳನ್ನು ಬದುಕಿಗೆ ಬೆಳಕು ಅವಳಿನ್ನು ದಂಡಿಸಬೇಡಿರಿ ಅವಳನ್ನು ಧರ್ಮಪತ್ನಿ ಅವಳಿನ್ನೂ 0811ಎಎಂ28092017 *ಅಮುಭಾವಜೀವಿ* [28/09 9:38 am] ಮಾನಸ ಬೆಂಗಳೂರು: ಅಮ್ಮುಭಾವಜೀವಿ ರವರೇ 🙏 ಖಂಡಿತಾ ಸತ್ಯ ಹೆಂಡತಿ ಗಂಡನಿಗೆ ಎರಡನೇ ತಾಯಿಯೇ ನಿಮ್ಮ ಅನುಭವದ ನುಡಿಗಳಂತೆ ಬರೆದ ಹಾಗಿದೆ .. ಚೆಂದದಾ ಸಾಲುಗಳನ್ನು ಬರೆದಿದ್ದೀರಾ ಹಣ್ಣು ನಿಸ್ವರ್ಥ ಜೀವಿ ಅವಳು ಎಂದಿಗೂ ಅವಳಿಗಾಗಿ ಬದುಕಿದವಳಲ್ಲಾ ನಿಜ ಸರ್ ಹೆಣ್ಣಿನ ಮನಸನ್ನು ನೋಯಿಸದಿರಿ ಎಂದು ಸಂದೇಶ ನೀಡಿದ್ದೀರಾ ಅದ್ಬುತ ವಾಸ್ತವತೆಯ ಭಾವಗೀತೆ ದಯವಿಟ್ಡು ಎಲ್ಲರೂ ಓದಿ ಓದಲೇ ಬೇಕಾದ ಸಾಲುಗಳು ದನ್ಯವಾದ ಸರ್ಉತ್ತಮ ಗೀತೆ ಬರೆದು ಬಳಗಕ್ಕೆ ನೀಡಿದ್ದೀರಾ👏🏾👏🏾👏🏾🙏👌🏻👌🏻👌🏻💐💐💐👍🏾👍🏾🤝 [28/09 11:12 am] ದೇವರಾಜ್ ಹಾಸನ ದೇಸು: *೧•ಎರಡನೇ ತಾಯಿ* ಅಮುಭಾವಜೀವಿ *ಹೆಣ್ಣೆಂದರೆ ಜಗ, ಹೆಣ್ಣೆಂದರೆ ನೊಗ. ಹೆಣ್ಣು ಈ ಜಗದೊಳು ಅದೆಷ್ಟೊಂದು ಕಾರ್ಯ ನಿರ್ವಹಿಸುತ್ತಾಳೆ ಎಂದರೆ ಅದನ್ನು ಎಣಿಸಿ ಗುಣಿಸಿ ಲೆಕ್ಕವಿರಿಸಿರುವವರ್ಯಾರು?* *ಹೌದು! ಹೆಣ್ಣೆಂದರೆ ಈ ಜಗದ ಕಣ್ಣು. ಹೆಣ್ಣು ಜಗದಲ್ಲಿ ಮಗಳಾಗಿ, ಸೊಸೆಯಾಗಿ, ಹೆಂಡತಿಯಾಗಿ, ಅಮ್ಮನಾಗಿ, ಅತ್ತಿಗೆಯಾಗಿ, ನಾದಿನಿಯಾಗಿ, ಅತ್ತೆಯಾಗಿ, ಗಂಡಿನ ಬಾಳಿನ ಬೆಳಕಾಗಿ, ಕಾರ್ಯನಿರ್ವಹಿಸುವ ಹೆಣ್ಣು ಎಲ್ಲೂ ಸ್ವಾರ್ಥವನ್ನು ತೋರದ ಭಾಗ್ಯದೇವತೆ. ಆದರಿಲ್ಲಿ ಕವಿ ಒಂದು ಹೆಜ್ಜೆ ಮುಂದಡಿಯಿಟ್ಟು ಎರಡನೆ ತಾಯಿ ಎಂದು ಹೇಳಿರುವುದು ನಿಜಕ್ಕೂ ಇಷ್ಟವಾಗುವ ಸಂಗತಿ.* *ಸರಳವಾಗಿ ಸುಂದರ ಪದಗಳನ್ನೊಳಗೊಂಡ ಗೀತೆ, ಕೊನೆಯ ಚರಣ ವಾಚ್ಯವೆನಿಸುತ್ತಿದೆ. ಗಮನಿಸಿ.* ಸಂಪ್ರೀತಿಯಿಂದ ದೇಸು ಆಲೂರು...✍ [28/09 12:11 pm] ಮನುಜ ಬಿ. ವಿ: *ಅಮು ಸರ್ ರವರ ಎರಡನೇ ತಾಯಿ ತುಂಬಾ ತುಂಬಾ ಅರ್ಥಪೂರ್ಣವಾಗಿದೆ, ನಿಜ ಹೆಂಡತಿ ಎಂದರೆ ಗಂಡನ ಏಳಿಗೆಗಾಗಿ ಅವನ ಜೊತೆ ಇರುವವಳು ಅವನ ಕಷ್ಟ ಸುಖವನ್ನು ಸಮನಾಗಿ ಹಂಚಿಕೊಳ್ಳುವವಳು ಅವಳಿಗೆ ಅವನೆ ಸರ್ವಸ್ವ ಹೆಂಡತಿ ಎರಡನೇ ಯ ತಾಯಿ ವಾವ್ ಸೂಪರ್‌ ಸುಂದರ ಸಾಲುಗಳು* 👌👌👌👌
*ಒಲಿದು ತಾ ಬಂದ* ಮಳೆ ಬಂದ ಮರುದಿನದ ಬೆಳ್ಮುಗಿಲ ಆಲಯದಿ ಹೊಂಬೆಳಕ ಸೂಸಿ ಬಂದ ಬೆಳಕಿನೊಡೆಯ ರವಿತೇಜ ಹಚ್ಟ ಹಸುರಿನ ಪಚ್ಚೆ ಪೈರಿನ ಸಂಭ್ರಮಕೆ ಇಬ್ಬನಿಯ ಹೊಳಪು ತಂದ ಹಕ್ಕಿಗಳ ಕೊರಳುಲಿವ ಇಂಪು ಗಾನಕೆ ಒಲಿದು ತಾ ಮೂಡಿ ಬಂದ ತುಂಬಿ ಹರಿವ ನೀರ್ಝರಿಗಳಲಿ ಮಿಂದು ಹೊಂಬಣ್ಣವ ಹಚ್ಚಿದ ಗಿರಿಯ ತಲೆಯೇರಿ ವಜ್ರದಂತೆ ಹೊಳೆದು ಜಗವನಾಳಲು ಬಂದ ಕತ್ತಲಿನ ಭೀತಿಯನು ಕಳೆದು ಮೆಲ್ಲ ಬೆಳಕಿನ ಹಾದಿ ತುಳಿದು ಜಗಕೆಲ್ಲ ಜೀವ ಚೇತನವಾಗಿ ಅರುಣೋದಯದ ಒಸಗೆ ತಂದ ದಿನವೆಲ್ಲ ದುಡಿಯುವ ಜನಕೆ ಸ್ಪೂರ್ತಿಯ ಚಿಲುಮೆಯಾದ ತುತ್ತು ಕೂಳಿನ ಚಿಂತೆ ಕಳೆದು ಹಸಿವನ್ನು ನೀಗಲು ವರವಾಗಿ ಬಂದ 0728ಎಎಂ28092017 *ಅಮುಭಾವಜೀವಿ*
*ನಮ್ಮ ನೇಸರ* ಮೋಡದ ಮರೆಯಲಿ ಮುಖವನು ತೊಳೆದು ತುಂತುರು ಹನಿಗಳಲಿ ಮಹಾಮಜ್ಜನಗೈದು ಹೊಂಗಿರಣದ ಉಡುಪು ತೊಟ್ಟು ಬಂದಾನೋ ನಮ್ಮ ನೇಸರ ಎಲೆ ಎಲೆಯಲೂ ಇಬ್ಬನಿ ಸಾಲು ರವಿಯ ಪಾದವ ತೊಳೆದು ಸ್ವಾಗತಿಸಿ ಮೆಲ್ಲ ಅರಳಿದ ಹೂವುಗಳೆಲ್ಲ ಭಾಸ್ಕರ ಬರುವ ದಾರಿಯ ಸಿಂಗರಿಸಿ ಹಕ್ಕಿಗಳುಲಿದ ಮಂಜುಳಗಾನಕೆ ವಶವಾಗಿ ಬಂದಾನೋ ನಮ್ಮ ನೇಸರ ಹರಿಯುವ ನದಿಗಳ ಚೇತನವಾಗಿ ಉಕ್ಕುವಲೆಗಳ ಅಂದಕೆ ಮರುಳಾಗಿ ಜಗದ ಹಸಿರಿಗೆ ಉಸಿರಾಗಿ ಝಗಮಗಿಸುವ ಬೆಳಕನೇರಿ ಬಂದಾನೋ ನಮ್ಮ ನೇಸರ ದಿನದಾರಂಭದ ಸ್ವಾಗತವು ತೃಣ ಮಾನವನಭಿಮಾವು ಸ್ವೀಕರಿಸಲು ನಮ್ಮ ನಮಸ್ಕಾರ ಬಂದನದೋ ನಮ್ಮ ನೇಸರ 0743ಎಎಂ29092017 *ಅಮುಭಾವಜೀವಿ*
ಗಜಲ್ ೧ ತನ್ನದಲ್ಲದ ತಪ್ಪಿಗೆ ಸಿಲುಕಿ ಮೈಮಾರಿಕೊಂಡವಳು ಸಾಕಿ ಯೌವನವ ಸಂಭ್ರಮಿಸುವ ಮೊದಲೇ ಕಾಮಕ್ರಿಮಿಯ ತೃಷೆಗೆ ಬಲಿಯಾದವಳು ಸಾಕಿ ಆಚಾರವನೇ ನಂಬಿದ ಮನೆಯೊಳಗೆ ವ್ಯಭಿಚಾರದ ಪಟ್ಟ ಹೊತ್ತು ಹೊರಬಂದವಳು ಸಾಕಿ ಹರಿದ ಬಟ್ಟೆಯೊಳಗಿನ ಅಂಗಾಂಗವನೇ ಕಂಡು ಆನಂದಿಸುವಾಗ ನೊಂದವಳು ಸಾಕಿ ನಾಗರಿಕ ಸಮಾಜದೊಳಗಿರುವ ಅನಾಗರಿಕ ಕಾಮದುರಿಗೆ ಬೆಂದವಳು ಸಾಕಿ ಕಾಮದ ಕೊಚ್ಚೆಯಲಿ ಬಿದ್ದು ಪ್ರೇಮಕಾಗಿ ಹಂಬಲಿಸಿದ್ದಳು ಸಾಕಿ ಮೈಯನುಂಡವರೆಲ್ಲಾ ಮನಸು ಕೊಂದರೆಂದು ನೊಂದಿದ್ದಳು ಸಾಕಿ ಬೇಡದ ಬದುಕಿನಲಿ ಕಾಡಿದ ನೋವುಗಳಿಗೆ ಬಲಿಯಾದವಳು ಸಾಕಿ ಅಮುವಿನಂತರಂಗವ ಕಲಕಿ ಭಾವಯಾನದ ವಸ್ತುವಾದವಳು ಸಾಕಿ 0512ಎಎಂ28092017 *ಅಮುಭಾವಜೀವಿ* ತನ್ನದಲ್ಲದ ತಪ್ಪಿಗೆ ಅದೇಷ್ಟೊ ಜೀವಿಗಳು ಪ್ರತಿ ದಿನಾ ದಖಃದಲ್ಲಿ ಜೀವನ ಸಾಗಿಸುತ್ತಿದಾರೆ ತನ್ನಗೆ ಆದ ಅನ್ಯೆಯವನು ಹೆಳಲ್ಲು ಆಗದೆ ಮುಚ್ಚಿಡಲು ಆಗದೆ ನರಕ ಯಾತನೆ ಪಡುತ್ತಾಳೆ ಯಾರೊ ಮಾಡಿದ ತಪ್ಪಿಗೆ ಇನ್ ಯಾರಿಗೊ ಶಿಕ್ಷೆ.. ಮೇಡಂ ಯಾಕೊ ಬೇಜಾರ ಆಯ್ತು ನನ್ನಗೆ ತಿಳಿದ ಎರಡು. ಸಾಲು ಬರೆದೆ ತಪ್ಪುಗಳು ಇದರೆ ಕ್ಷಮಿಸಿ ನಾನು ಅಭಿಪ್ರಾಯ ತಿಳಿಸೊದು ತುಂಬ ಕಮ್ಮಿ ನಿಮ್ಮ ಗಜಲ ತುಂಬ ಕಾಡುತ್ತಿದೆ ಒಂದು ಹೆಂಣ್ಣಿನ ಕಥೆವ್ಯೆತೆಯನು ನಿಮ್ಮ ಗಜಲನಲ್ಲಿ ಹೆಳಿದಿರ ಧನ್ಯವಾದಗಳು ಅನುಭಾವದ ಜೀವವೇದನೆ ಸಾರಹೊತ್ತ ಈ ಕವಿತೆ ಮತ್ತು ಕವಿರಾಜ ಶಿರೋಮಣಿಗೆ ಆನಂತ ಆನಂತ ನಮನಗಳು... ವಾಣಿ ಬಿ ವಿ ಅವರ ಪ್ರತಿಕ್ರಿಯೆ ಸರ್ , ನಿಮ್ಮ ಕವನ 'ನಿರಂಜನವರ ಕೊನೆಯ ಗಿರಾಕಿ ' ಕಥೆಯ ಚಿತ್ರಣವನ್ನು ನೆನಪಿಗೆ ತರುತ್ತದೆ .ನಿಜಕ್ಕೂ ಅದ್ಭುತವಾಗಿದೆ ಸೂಪರ್ ಸರ್ .👌🏻👌🏻👌🏻👌🏻👍🙏

Sunday, September 24, 2017

*೧•ಬೀದಿಗೆ ಬಿದ್ದವರು* ಕುಶಲವೇ ಎನ್ನೋರಿಲ್ಲ ಕ್ಷೇಮವ ಬಯಸುವವರಿಲ್ಲ ನಮಗ್ಯಾರಿಲ್ಲ ನಮ್ಮವರೆಂಬ ಬಂಧು ಬೀದಿಗೆ ಬಿದ್ದ ಬದುಕು ನಮ್ಮದು ಕೊಳೆಗೇರಿಯಲಿ ಕೊಳೆವ ಜೀವನ ತಬ್ಬಲಿಗಳಾದುದೇ ಅದಕೆ ಕಾರಣ ದೂರೆವು ನಾವು ಯಾರನ್ನೂ ಹೇಳಿಕೊಳ್ಳಲಾರೆವು ಆ ಕೊರಗನ್ನು ಬೆರಳ ಹಿಡಿದು ನಡೆಸೋರಿಲ್ಲ ಪ್ರೀತಿ ಮಾಡಿ ಮುದ್ದಿಸುವವರಿಲ್ಲ ದೇವರ ಮಕ್ಕಳಂತೆ ನಾವು ಅದಕೆ ಕರುಣೆ ತೋರದು ಸಾವು 0432ಎಎಂ25092017 *ಅಮುಭಾವಜೀವಿ* ಚಳ್ಳಕೆರೆ ಭವಾನಿ ಶಂಕರ್ ಅವರ ಪ್ರತಿಕ್ರಿಯೆ ಉತ್ತಮ ಕವನ. ನಮ್ಮ ಏಳ್ಗೆಯನ್ನು ಬಯಸೋರು ಯಾರು ಇಲ್ಲ. ಜೀವನದಲ್ಲಿ ನಮಗೆ ನಾವೇ ದಿಕ್ಕು ಎಂದು ಕವಿ ಮನೋಜ್ಞವಾಗಿ ಹೇಳಿದ್ದಾರೆ. ಹೆತ್ತವರು ನಮ್ಮ ಕೊನೆಯ ತನಕ ಶ್ರೇಯಸ್ಸು ಹಾರೈಸಲ್ಲ. ಅವರ ಕಾಲ ಮುಗಿದಾಗ ಅವರು ನಮ್ಮನ್ನು ತೊರೆಯುತ್ತಾರೆ. ಜೀವನ ನಶ್ವರವೆಂದು ಕವಿ ಧ್ವನಿಸಿದ್ದಾರೆ. ಒಳಿತು ಮಾಡು ಮನುಸಾ.. ನೀ ಇರೋ ಮೂರು ದಿವಸ..🐿ಶಂಕರ್ ಗುರು

Tuesday, September 19, 2017

*ಬದುಕಿನ ನಾಟಕಕೆ* ಮುಂಜಾನೆಯ ಇಬ್ಬನಿಯಲಿ ಹೊಂಬಣ್ಣದ ರಂಗನು ಚೆಲ್ಲಿ ಮೂಡಣ ದಿಗಂತದಿ ತೇಲಿ ಬಂದ ನೇಸರ ನಗುನಗುತಾ ಹಕ್ಕಿಯ ಕೊರಳಿಗೆ ದನಿಯಾಗಿ ಹರಿವ ನೀರಿಗೆ ಸ್ಪೂರ್ತಿಯಾಗಿ ಹೂಚೆಲುವಿನ ಅನಾವರಣಗೈದು ಅರುಣ ತಂದನ ನವೋದಯವ ಹೊಂಗಿರಣಗಳ ಸೈನ್ಯ ಕಳಿಸಿ ಮಲಗಿದ್ದ ಪ್ರಕೃತಿಯ ಎಬ್ಬಿಸಿ ಕತ್ತಲೆಯ ಪರದೆಯನೆತ್ತಿ ಬದುಕಿನ ನಾಟಕಕೆ ಚಾಲನೆಯಿತ್ತ ಮೋಡಗಳ ನಡುವೆ ಓಡೋಡಿ ಏರುತ ಬಂದ ಈ ಬಾನಾಡಿ ಬಿಸಿಲಿನ ಒಸಗೆಯ ತಂದು ಭೂಮಿಯ ಕನಸನು ಮೊಳೆಸಿದ ದಿನಕರ ಶುಭಕರ ನಮಗೆಂದೂ ಕಾಯಕದೀಕ್ಷೆಗೆ ಚೇತನ ಅವನೆಂದೂ ಬೆಳಕಿನ ಒಡೆಯಗೆ ನನ್ನ ನಮನ ಅವನಿಗಾಗಿ ಬರೆದೆ ಈ ಕವನ 0626ಎಎಂ20092017 *ಅಮುಭಾವಜೀವಿ*

Saturday, September 16, 2017

*೧•ದಡವ ಸೇರಿಸು* ಕಣ್ಣು ಕಾಣುತಿಲ್ಲ ಕಿವಿಯೂ ಕೇಳುತಿಲ್ಲ ನನ್ನ ಈ ಸ್ಥಿತಿಗೆ ತಂದ ದೇವರೆ ನಿನಗೆ ಕರುಣೆಯಿಲ್ಲ ನನ್ನ ಕಂಬನಿಧಾರೆ ನಿಂತಿಲ್ಲ ನನ್ನ ಮೇಲೆ ಏಕೆ ಮುನಿಸು ನನ್ನಪರಾಧವ ನೀ ಮನ್ನಿಸು ಅಬಲೆ ನಾನು ಹಗಲೇ ಇರುಳ ಕಂಡೆನು ನನಗೇ ಏಕಿಂತಾ ಶಿಕ್ಷೆ ನೀ ನೀಡದಾದೆಯೇಕೆ ರಕ್ಷೆ ದುಷ್ಟ ಕ್ರಿಮಿಯೊಂದು ಬಂದು ನನ್ನ ಮೇಲೆಯೇ ಬಿದ್ದು ಎದ್ದು ಹೋಗಿದೆ ನಾನ್ಹೇಗೇ ಬಾಳಲಿ ಈಗ ದಾರಿ ಕಾಣದಾಗಿದೆ ಕೈ ಹಿಡಿದು ನಡೆಸೋನು ನೀನೇ ನನ್ನ ಕಾಪಾಡು ಓ ದೇವನೇ ಹೆಬ್ಬುಲಿಗಳ ಮುಂದೆ ನಾ ತಬ್ಬಲಿ ಈಗ ಭಯದಿ ಬೊಬ್ಬಿಡುತಿರುವೆ ಆಸರೆಗೆ ತಬ್ಬಲಿ ಯಾರನು ನಾನೀಗ ನೀನೇ ದಾರಿ ತೋರಿಸು ಕ್ಷೇಮದಿ ದಡವ ಸೇರಿಸು 0329ಪಿಎಂ16092017 *ಅಮುಭಾವಜೀವಿ* ಕವಿಮಿತ್ರ ಭೀಮೇಶ್ ಅವರ ಪ್ರತಿಕ್ರಿಯೆ ಹೆಣ್ಣಿನಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಇಡಿಯಾಗಿ ವ್ಯಕ್ತಪಡಿಸಿದ್ದೀರಿ..ಹಾಗೆಯೇ ದೈವದ ಕುರುಡುತನವನ್ನು ಕಾಣಿಸಿದ್ದೀರಿ..ಒಟ್ಟಾರೆ ಕವಿತೆ ಉತ್ತಮವಾಗಿದೆ

Tuesday, September 12, 2017

ಆ ನೆನಪುಗಳು

"ಜೀವನ ಏರು ಪೇರಿನಾ ಗಾಯನ" ಆಕಾಶವಾಣಿಯಲ್ಲಿ ಮೂಡಿಬರುತ್ತಿದ್ದ ಸುಶ್ರಾವ್ಯ ಗೀತೆಯನ್ನು ಕೇಳುತ್ತಾ ಹಾಗೆ ಮಲಗಿಕೊಂಡವನ ಭಾವಲಹರಿ ಅವನ ಕಾಲೇಜಿನ ದಿನಗಳತ್ತ ಹೊರಳಿತು. ನಿಜಕ್ಕೂ ಬದುಕಿನ ಅತ್ಯಂತ ಸಂಭ್ರಮದಿಂದ ಸಂತೋಷವನ್ನು ಆಸ್ವಾದಿಸುವ ವಯಸ್ಸು ಅದು.ಕಾಲೇಜಿನ ಗೆಳೆಯ ಗೆಳತಿಯರ ಒಡನಾಟದಲ್ಲಿ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಪರ್ವ ಕಾಲವದು.ಬಾಲ್ಯದ ಗೆಳೆಯರನ್ನೆಲ್ಲಾ ಮತ್ತೊಮ್ಮೆ ಕೂಡಿಕೊಳ್ಳುವ ಸದಾವಕಾಶ ಹಾಗೂ ಹೊಸ ಗೆಳೆಯ ಗೆಳತಿಯರೊಂದಿಗೆ ಹೊಸ ಬಂಧ ಹುಟ್ಟಿಕೊಳ್ಳುವ ಸುಸಮಯ. ಅರುಣ್ ಮಧ್ಯಮವರ್ಗದ ಕುಟುಂಬದಿಂದ ಬಂದವನು. ಆದ್ದರಿಂದ ಅವನಲ್ಲಿ ಗರ್ವಕ್ಕಿಂತ ವಿನಯಕ್ಕೆ ಹೆಚ್ಚು ಆದ್ಯತೆ. ತನ್ನಲ್ಲಿ ವಿದ್ವತ್ ಇದ್ದರೂ ಅದನ್ನೆಂದೂ ಅಹಂಕಾರವಾಗಿ ಬಳಸಿಕೊಳ್ಳದ ಚತುರ.ತನ್ನ ಸ್ನೇಹಿತರನ್ನು ಜಾತಿ ಧರ್ಮಗಳಿಗೆ ಪ್ರೀತಿಸುವ ಮಾನವೀಯ ಗುಣಗಳು ಅವನಲ್ಲಿದ್ದವು.ಅದಕ್ಕಾಗಿಯೇ ಎಲ್ಲಾ ಸ್ನೇಹಿತರು ಅವನನ್ನು ಸೂಜಿಗಲ್ಲಿನಂತೆ ಅಂಟಿಕೊಂಡಿರುತ್ತಿದ್ದರು. ಅರುಣ್ ಬಡ ಕುಟುಂಬದಿಂದ ಬಂದುದಕ್ಕಾಗಿಯೇ ಏನೋ ದೂರದ ಊರಿನಲ್ಲಿದ್ದ ಕಾಲೇಜಿಗೆ ಸೇರಿಕೊಂಡನು. ಆದರೆ ಏಕೋ ಅವನಿಗೆ ಅಲ್ಲಿನ ವಾತಾವರಣ ಹಿಡಿಸಲಿಲ್ಲ.ತುಂಬಾ ಮಂಕಾಗುತ್ತಾ ಹೋದ. ಇದನ್ನು ಗಮನಿಸಿದ ಅವನ ಮಾವ ಮತ್ತೆ ತಾನು ಓದಿದ ಶಾಲೆಯಲ್ಲಿಯೇ ಇದ್ದ ಪ್ರಥಮ ಪಿಯುಸಿಗೆ ಸೇರಿಸಿದರು. ಅನಿವಾರ್ಯ ಕಾರಣಗಳಿಂದ ಮತ್ತೆ ತನ್ನ ಹುಟ್ಟೂರಿನ ಶಾಲೆಯಲ್ಲಿಯೇ ಓದುವ ಅವಕಾಶ ಒದಗಿಬಂತು. ಆಗ ಅರುಣ್ ಮತ್ತೆ ಮೊದಲಿನಂತೆ ಚುರುಕಾದ. ತನ್ನ ಗ್ರಾಮದ ಕಾಲೇಜಿನಲ್ಲಿ ಓದಿ ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ಛಲ ತೊಟ್ಟು ಅದಕ್ಕಾಗಿ ಮೊದಲ ದಿನದಿಂದಲೇ ಕಾರ್ಯಪ್ರವೃತ್ತನಾದ. ಅದು ಕಾಲೇಜಿಗೆ ಬಂದ ಹೊಸದರಲ್ಲಿ ಅದೇ ಶಾಲೆಯಲ್ಲಿ ಓದಿದ್ದರೂ ಎರಡು ಮೂರು ತಿಂಗಳ ನಂತರ ಬಂದಿದ್ದರಿಂದ ಹೊಸ ಜಾಗದಲ್ಲಿ ಹೊಸ ಸ್ನೇಹಿತರೊಂದಿಗೆ ಹೊಸತನವು ಚಿಗುರೊಡೆವ ಕಾಲ.ಬಾಲ್ಯದ ಕೆಲ ಸ್ನೇಹಿತರನ್ನು ಬಿಟ್ಟರೆ ಉಳಿದವರೆಲ್ಲ ಹೊಸಬರೇ ಆಗಿದ್ದರು.ಕಾಲೇಜಿಗೆ ಬಂದ ಮೊದಲ ದಿನ ಎಲ್ಲರ ಪರಿಚಯದ ಕಾರ್ಯಕ್ರಮವನ್ನು ಹಳೆಯ ಸ್ನೇಹಿತರು ನೆರವೇರಿಸಿದರು. ಹೀಗೆ ದಿನೇ ದಿನೇ ಕಾಲೇಜಿನ ವಿದ್ಯಾಭ್ಯಾಸ ಸಾಗುತ್ತಿತ್ತು.ಅರುಣ್ ಕೆಲವೇ ದಿನಗಳಲ್ಲಿ ಎಲ್ಲರ ನೆಚ್ಚಿನ ವಿದ್ಯಾರ್ಥಿಯಾಗಿದ್ದ.ಯಾವೊಬ್ಬ ಸ್ನೇಹಿತನನ್ನು ನೋಯಿಸದೇ ಜನಾನುರಾಗಿಯಾದ. ಅರುಣ್ ಓದಿನಲ್ಲಿ ಸದಾ ಮುಂದು. ಇವನ ಹಿಂದೆ ಅವನ ಗೆಳೆಯರ ದಂಡು. ಹೀಗಿದ್ದರೂ ಕಾಲೇಜಿನಲ್ಲಿ ಅವನೆಂದೂ ಗುಂಪುಗಾರಿಕೆ ಮಾಡಿದವನಲ್ಲ.ಬದಲಾಗಿ ತನ್ನ ಆಪ್ತರೊಂದಿಗೆ ಸೇರಿ ಅಂದಂದಿನ ಪಾಠಗಳ ಕುರಿತಾದ ಚರ್ಚೆಯಲ್ಲಿ ತೊಡಗಿಸಿಕೊಂಡು ತಾನೂ ಕಲಿಯುತ್ತ ಸ್ನೇಹಿತರನ್ನು ಕಲಿಕೆಯಲ್ಲಿ ಪಕ್ವಗೊಳಿಸುತ್ತಿದ್ದ ಪ್ರತಿಭಾನ್ವಿತ. ಹೀಗೆ ಅರುಣ್ ತನ್ನ ಪಾಡಿಗೆ ತಾನು ಕಲಿಕೆಯಲ್ಲಿ ಪ್ರಗತಿ ಹೊಂದುತ್ತ ಉಪನ್ಯಾಸಕರು ಪ್ರಾಂಶುಪಾಲರು ಏಕೆ ಇಡೀ ಕಾಲೇಜಿನ ಜವಾನರಲ್ಲೂ ಮನೆಮಾತಾಗಿದ್ದು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ವಿದ್ಯಾಭ್ಯಾಸದ ವಿಷಯದಲ್ಲಿ ಅವನನ್ನು ಸರಿಗಟ್ಟುವವರಿದ್ದಿಲ್ಲ.ಬಡತನ ಎನ್ನುವುದು ಅವನಿಗಿಂತಹ ಸಂಸ್ಕಾರವನ್ನು ಕಲಿಸಿತ್ತು.ಹೀಗಿರುವಾಗ ಅದೇ ಕಾಲೇಜಿನಲ್ಲಿ ಇವನ ಪ್ರತಿಸ್ಪರ್ಧಿ ಎಂದರೆ ರಶ್ಮಿ ಎಂಬ ಸೌಂದರ್ಯವತಿ. ತನ್ನ ತಂದೆ ತಾಯಿ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರು.ಆಕೆಗೆ ಯಾವುದಕ್ಕೂ ಕೊರತೆಬಾರದಂತೆ ಸಾಕಿದ್ದರು. ಅವಳು ಸಹ ಬುದ್ದಿವಂತೆ. ಆದರೆ ಅರುಣನನ್ನು ಸರಿಗಟ್ಟಲಾಗುತ್ತಿರಲಿಲ್ಲ. ಅವಳೊಮ್ಮೆ ಉಪಾಧ್ಯಾಯರಲ್ಲಿ ಹೇಳಿಕೊಳ್ಳುತ್ತಿದ್ದಳಂತೆ," ಸರ್ ನಾನು ಎಷ್ಟೇ ಓದಿದರೂ ಅವನನ್ನು ಸರಿಗಟ್ಟಲಾಗುತ್ತಿಲ್ಲ. " ಅಂತ ಆದರೆ ಅವನೇನು ಪುಸ್ತಕದ ಹುಳುವಾಗಿರಲಿಲ್ಲ. ಬದಲಾಗಿ ಕಷ್ಟಪಟ್ಟು ಓದುವ ಛಲ ಉಳ್ಳವನಾಗಿದ್ದ. ಹೀಗೆ ಅವನ ಕಲ್ಪನಾ ಲಹರಿ ಸಾಗುತ್ತಿತ್ತು. ಅಷ್ಟರಲ್ಲಿ ಅವನ ರೂಮ್ ಮೇಟ್ 'ಅಪ್ಪ ಮಾರಾಯ ಕನಸು ಕಂಡಿದ್ದು ಸಾಕು, ಈಗ ಊಟಕ್ಕೆ ಸಮಯ ಆಗಿದೆ ಬಾರೋ ' ಎಂದಾಗಲೇ ಅವನಿಗೆ ಎಚ್ಚರ ಆಗಿದ್ದು. ' ಓಹ್ ! ಕ್ಷಮೆ ಇರಲಿ ಕಣೋ, ನನ್ನ ಬಾಲ್ಯದ ಗುಂಗಲ್ಲಿ ಮುಳುಗಿಹೋಗಿದ್ದೆ. ಸಮಯ ಹೋಗಿದ್ದೇ ಗೊತ್ತಾಗ್ಲಿಲ್ಲ ನೋಡು' ಎನ್ನುತ್ತಾ ಬೇಗನೇ ಎದ್ದು ಫ್ರಶಪ್ ಆಗಿ ಊಟಕ್ಕೆ ಹೋಗಿ ಬಂದರು. ಮತ್ತೆ ಅವನ ಸ್ನೇಹಿತ ರಾತ್ರಿ ಪಾಳಿಯ ಕೆಲಸಕ್ಕೆ ಹೊರಟುಹೋದ ಮತ್ತೆ ಇವನ ತನ್ನ ಕಲ್ಪನೆಯಲಿ ಮುಳುಗಿದ. ಅರುಣನದು ಸ್ಥಿತಿವಂತ ಕುಟುಂಬವಲ್ಲ. ಆದರೆ ಕಷ್ಟಪಟ್ಟು ದುಡಿದು ತಿನ್ನುವ ಬಡತನದಲ್ಲೂ ಸ್ವಾಭಿಮಾನಕ್ಕೆ ಎಂದೂ ಧಕ್ಕೆ ಬಾರದಂತೆ ಬದುಕಿದ ಕುಟುಂಬವಾಗಿತ್ತು. ಅವನ ತಂದೆ ರೈತ. ಹೇಳಿ ಕೇಳಿ ರೈತನ ಬದುಕು ಇಂದು ತುಂಬಾ ಕನಿಷ್ಠವಾಗಿದೆ.ಆದರೆ ಅಂದು ಅವನ ಮನೆಯಲ್ಲಿ ಎಲ್ಲರೂ ಶ್ರಮಜೀವಿಗಳಾಗಿ ದುಡಿಯುತ್ತಿದ್ರು. ಅವನ ಅಕ್ಕಂದಿರು ಅಣ್ಣ ಅಪ್ಪ ಅಮ್ಮ ಎಲ್ಲರೂ ದಿನವೂ ಹೊಲದ ಕೆಲಸದಲ್ಲಿ ನಿರತಾಗಿರುತ್ತಿದ್ದರು. ಅರುಣ್ ಕೂಡ ಅವರೊಂದಿಗೆ ಕೆಲಸ ಮಾಡುತ್ತಿದ್ದ. ಶಾಲೆ ಪ್ರಾರಂಭಕ್ಕೂ ಮುಂಚೆ ಹಾಗೂ ಶಾಲೆ ಬಿಟ್ಟ ನಂತರ ಹೊಲಕ್ಕೆ ತೆರಳಿ ತನ್ನವರೊಂದಿಗೆ ಸೇರಿ ಕೆಲಸ ಮಾಡುವುದು.ಅಲ್ಲಿ ಬಿಡುವಿನ ವೇಳೆಯಲ್ಲಿ ಓದಿಕೊಳ್ಳುವುದನ್ನು ಮಾಡುತ್ತಿದ್ದ.ಹೀಗಿದ್ದರೂ ಅವನ ಶಾಲೆಯಲ್ಲಿ ಮಾತ್ರ ನಂಬರ್ ಒನ್. ಬದುಕನ್ನು ಕಟ್ಟಿಕೊಳ್ಳುವ ದಿಟ್ಟ ಕನಸಿಗಿಂತ ನಿತ್ಯದ ಆಭ್ಯಾಸ ಅವನನ್ನು ಉನ್ನತ ಶ್ರೇಣಿಯಲ್ಲಿ ಪಾಸಾಗುವಂತೆ ಮಾಡಿತ್ತು.ಎರಡು ವರ್ಷದ ಕಾಲೇಜು ಜೀವನ ಹಾಗಂತಮುಗಿದದ್ದೇ ಗೊತ್ತಾಗಂತೆ ಕಳೆದುಹೋಯ್ತು .ಮತ್ತೆ ಸ್ನೇಹಿತರನ್ನು ಅಗಲುವ ಆ ಘಳಿಗೆ ಬಂತು. ತನ್ನ ತಂದೆ ತಾಯಿಯ ಆಸೆಯಂತೆ ಸರ್ಕಾರಿ ಕೆಲಸ ಹಿಡಿಯುವ ಸಲುವಾಗಿ ಮುಂದಿನ ಹೆಚ್ಚಿನ ಅಭ್ಯಾಸಕ್ಕಾಗಿ ಬೇರೊಂದು ಊರಿಗೆ ಹೋಗಬೇಕಾಯಿತು. ಅಲ್ಲಿ ಮತ್ತೆ ಅರುಣನಿಗೆ ಒಂಟಿತನ ಕಾಡಲು ಶುರುವಾಯ್ತು..ಹಾಗಂತ ಅವನೇನು ಅಲ್ಲಿ ಓದಿನಲ್ಲಿ ಹಿಂದೆ ಬೀಳಲಿಲ್ಲ. ಚೆನ್ನಾಗಿ ಅಭ್ಯಾಸ ನಡೆಸುತ್ತಿದ್ದ. ಒಮ್ಮೆ ಊರಿಗೆ ಬಂದಾಗ ಅವನ ಬಾಲ್ಯದ ಗೆಳೆಯ ಸಿಕ್ಕ. "ಹಾಯ್ ಗೆಳೆಯ ! ಹೇಗಿದ್ದೀಯೋ ? . ನಮ್ಮನ್ನು ಮರೆತೇಬಿಟ್ಟೆಯಾ ? ಎಂದು ಆಲಂಗೀಸಿಕೊಂಡ.
*೧•ಕಾಡದಿರಲಿ ಮತ್ತೆ* ಈ ದೂರ ಆದರೆ ನಿರಂತರ ಹೇಗಾದಿತು ಮನ್ವಂತರ ಬಾಳಲಿ ಬರೀ ಬೇಸರ ನೀನಿಲ್ಲದ ಬದುಕು ಭೀಕರ ಎಷ್ಟೊಂದು ಒಲವಿತ್ತು ಎಷ್ಟೊಂದು ಚೆಲುವಿತ್ತು ನೀನಿರಲು ನನ್ನ ಬಳಿ ಎಷ್ಟೊಂದು ನೋವಿದೆ ಸಾವನ್ನು ಸೆಳೆದಿದೆ ನನ್ನನು ಈ ಬೇಸರದ ಸುಳಿ /೧/ ಭಾವದ ಅಲೆಯಲ್ಲಿ ತೇಲಿದ್ದೆ ಖುಷಿಯಲ್ಲಿ ನಿನ್ನೊಲವ ನನ್ನದಾಗಿರಲು ಬಾಯ್ಬಿಟ್ಟ ಭುವಿಯೊಳಗೆ ಆಕ್ರಂದನದ ವೇದನೆಯೊಗೆ ಬೇಯುತಿಹೆ ನೀನಿಲ್ಲದಿರಲು /೨/ ಮತ್ತೆ ನೀ ಬಂದು ಸೇರು ಮತ್ತೆದೇ ಒಲವ ತೋರು ಚೈತ್ರದ ಚಿಗುರಾಗಲಿ ಬದುಕು ನಿತ್ಯ ನಿನ್ನದೇ ಧ್ಯಾನ ಸಹಿಸಲಾರೆ ನಾ ಮೌನ ಕಾಡದಿರಲಿ ಮತ್ತೆ ಅಂತರದ ಕೆಡುಕು /೩/ ೧೦೪೬ಎಎಂ೦೭೦೯೨೦೧೭ *ಅಮುಭಾವಜೀವಿ* ಅಮುಭಾವಜೀವಿಯವರ ಕಾಡದಿರಲಿ ಮತ್ತೆ👌👌👌👌 ಪ್ರೀತಿ ಇದ್ದರೆ ಚೆಲುವು ಪ್ರೀತಿ ಇದ್ದರೆ ಒಲವು ಅದೆ ಪ್ರೀತಿ ಇಲ್ಲದ ಬದುಕು ಬರಿ ಬೇಸರ ನೀನಿದ್ದಾಗ ಖುಷಿ ನೀನಿಲ್ಲವೆಂದು ತಿಳಿದರೆ ಬೇಯುತ್ತಿದೆ ಮನಸು, ಮತ್ತೆ ನೀ ಬಂದು ಈ ಅಂತರವ ಕಳೆದು ಬಿಡು ಎಂದ ನಿಮ್ಮ ಗೀತೆ ಸೋಗಸಾಗಿದೆ ಸಾರ್🙏👌👌👌🙏🙏
*೧•ಮಧುರ ಸಾಕ್ಷಿ* ಮುತ್ತು ಮುತ್ತು ಸಿಹಿಮುತ್ತು ಸೋತ ಮನಕೆ ತಾಕತ್ತು ಆಪ್ತ ಭಾವದ ಗಮ್ಮತ್ತು ಅದುವೇ ಪ್ರೀತಿಯ ಸಂಪತ್ತು ತಾಯಿಯ ಮಡಿಲಲಿ ಮಲಗುವ ಕಂದನ ಭಯ ದೂರ ಮಾಡುವ ಸಿಹಿಮುತ್ತು ಅಮ್ಮನು ನೀಡುವ ಭರವಸೆಯೊಂದೇ ಕಂದನ ಮುದ್ದಿಸುವಾ ಸವಿಮುತ್ತು ಸೋದರ ಭಾವದ ಬಂಧವು ಬೆಸವ ಬಾಲ್ಯದ ಬಾಂಧವ್ಯದ ಸಿಹಿಮುತ್ತು ಸ್ನೇಹದ ಸೌಹಾರ್ದದ ಅಪ್ಪುಗೆಯ ಸದ್ಭಾವದ ಸವಿ ಮುತ್ತು ಹರೆಯದ ಅಮಲಲಿ ಜೋಡಿ ಜೀವಗಳ ಮಧುರ ಕ್ಷಣಗಳ ಸಾಕ್ಷಿ ಈ ಸಿಹಿಮುತ್ತು ಪ್ರೀತಿಯ ಜ್ಯೋತಿಯ ಬೆಳಕಲಿ ಕಣ್ಮುಚ್ಚಿ ಆನಂದಿಸುವ ಸವಿ ಹೊತ್ತು ಬಾಳ ಹೋರಾಟದಲಿ ಸೋತ ಸಂಗಾತಿಯ ಹುರಿದುಂಬಿಸುವ ಸಾಧನವೀ ಸಿಹಿಮುತ್ತು ಎಲ್ಲಾ ನೋವನು ಕ್ಷಣದಲಿ ಮರೆಸುವ ದಿವ್ಯೌಷಧಿ ಈ ಒಲವಿನ ಸವಿ ಮುತ್ತು ಮುಪ್ಪಿನ ಕಾಲದಿ ಸವೆದ ಹಾದಿಯ ಸವಿನೆನಪನು ಹಸಿರಾಗಿಸೋ ಸಿಹಿಮುತ್ತು ಎಲ್ಲಾ ಕಾಲಕೂ ಎಲ್ಲ ಕುಲಕೂ ಸಲ್ಲುವ ಗಟ್ಟಿ ನಿಲುವು ನೀಡುವ ಸವಿ ಮುತ್ತು 0235ಪಿಎಂ09092017 *ಅಮುಭಾವಜೀವಿ*

ಮರಳುವೆ ಗೂಡಿಗೆ

ಈ ಸುಂದರ ಸಂಜೆಯಲಿ ಗೋಧೂಳಿಯ ವೇಳೆಯಲಿ ಸವಿಭಾವದ ಹಾಡಿಗೆ ನಾ ಮರಳುವೆ ಗೂಡಿಗೆ ಪಡುವಣದ ಮೇಘ ಚಿತ್ತಾರ ಆಹಾ! ಎಷ್ಟೊಂದು ಸುಂದರ ಜೋಡಿ ಹಕ್ಕಿ ಗೂಡ ಹೊಕ್ಕಿ ಗುಟುಕನಿಕ್ಕೋ ಸುಂದರ ಸಂಸಾರ ದೂರದಲ್ಲಿಳಿಯುತಿರುವ ಇರಳ ಮಾಲೆ ಕಪ್ಪು ನೆರಳ ಹರಡಿ ಬುವಿಯ ಮೇಲೆ ಹೊಳೆವ ತಾರೆ ತೊಟ್ಟಿಲಲ್ಲಿ ಚಂದಿರ ತಾ ಬಂದ ತೇಲಿ ತೇಲಿ ತಂಗಾಳಿಯು ರಮಿಸುತಿದೆ ಬೆಳದಿಂಗಳಿಗೆ ಬೆವರಿಳಿಯುತಿದೆ ಪ್ರಣಯದ ದಿಬ್ಬಣದಲ್ಲಿ ಕನಸುಗಳ ಸವಿ ನರ್ತನ ನೋಡಲ್ಲಿ ಪ್ರಕೃತಿಯ ಚೆಲುವಿನ ಶೃಂಗಾರ ಎಲ್ಲೆ ಮೀರದ ಶುದ್ಧ ಸಂಸ್ಕಾರ ಖಗಮೃಗಗಳ ಬಾಳಾಧಾರ ಕವಿ ಕಲ್ಪನೆ ಎಂದೆಂದಿಗೂ ಅಮರ 0527ಪಿಎಂ09092017 *ಅಮುಭಾವಜೀವಿ*
*೧•ಸುಪ್ರಭಾತವ ಹೇಳು* ಏಳು ಎದ್ದೇಳು ಓ ಜೀವ ಬೆಳ್ಳಂಬೆಳಕು ಈಗಾಯ್ತು ಸೋಮಾರಿ ಶತ್ರುವ ಬಡಿದೇಳು ಸಂಸ್ಕಾರ ಸುಪ್ರಭಾತವ ನೀ ಹೇಳು // ಕಾಯಕ ದೀಕ್ಷೆಯ ಕೊಟ್ಟಾಯ್ತು ರವಿ ಬರಲು ಮೂಡಣ ಬೆಳಕಾಯ್ತು ಖಗಮೃಗಗಳ ನೋಡಿ ನೀ ಕಲಿ ಪ್ರಾಮಾಣಿಕ ಬದುಕಲಿ ನೀ ಬೆಳಿ ಜಗವೊಂದು ಜೀವನ ಪಾಠ ಯಾರಿಗಿಲ್ಲ ಇಲ್ಲಿ ಆ ಸಂಕಟ. /೧/ ದುಡಿಮೆಯ ಮಂತ್ರ ನೀ ಹಾಡು ತುಂಬಲಿ ನಿನ್ನಯ ಹೊಟ್ಟೆ ಪಾಡು ನಿನ್ನ ಈ ಶ್ರಮದ ಮುಂದೆ ಆ ಶತ್ರು ತಲೆಯೆತ್ತದೆ ಬದುಕನ್ನು ಗೆದ್ದು ಬೀಗು ಅನುಭವದಲ್ಲಿ ಹೆಮ್ಮರವಾಗಿ |೨| ಉದ್ಯೋಗ ನಿನ್ನ ಅಸ್ತ್ರ ಉತ್ಸಾಹ ಯಶದ ಸೂತ್ರ ಏಳು ನೀ ಹಾಸಿಗೆ ಬಿಟ್ಟು ಮುನ್ನುಗ್ಗು ನೀ ಪಣತೊಟ್ಟು 0350ಎಎಂ11092017 *ಅಮುಭಾವಜೀವಿ *
*೨•ಅನಾಥ ಬದುಕಿಗೆ* ಅಪ್ಪ ಮರೆತಿರಲು ಅಮ್ಮ ತೊರೆದಿರಲು ಯಾರ ಬೇಡಲಿ ಕೈತ್ತುತ್ತು ಬೀದಿ ಬದಿಯೇ ವಾಸ ಅವರಿವರ ಆ ಸಂತೋಷ ಎಂದೂ ಆಗದು ನಮ್ಮ ಸ್ವತ್ತು // ಅನಾಥ ಬದುಕಿಗೆ ಅವಹೇಳನವೇ ಉಡುಗೊರೆ ಪ್ರೀತಿ ತೋರರು ಯಾರೂ,,,? ಮೋರಿ ಸೇರಿದ ಅನ್ನಕೆ ನೂರು ಜೀವಗಳ ಹಂಬಲಿಕೆ ಎಸೆವ ಕೈ ಹಸಿವ ನೀಗದು ,,,! ಭಿಕ್ಷೆ ಬೇಡಿದರೆ ಶಿಕ್ಷೆ ನೀಡುವರು ಹೆತ್ತವರ ಪ್ರೀತಿಯುಂಡವರು,,,,! ಪ್ರಾಣಿಗೂ ಹೀನ ಬದುಕು ಅಲ್ಲಿಯೇ ನಮ್ಮ ಒಳಿತು ಕೆಡುಕು ಕೈತ್ತುತ್ತು ಕನಸಿನ ಮಾತಾಗಿಹುದು. .. 1159ಎಎಂ12092017 *ಅಮುಭಾವಜೀವಿ*
*೧•ಅಮ್ಮ ಎಂಬುದೇ* ಅಮ್ಮನ ಕೈತುತ್ತೇ ಸ್ವರ್ಗದ ಸಂಪತ್ತು ಅಮ್ಮನ ಸವಿಮುತ್ತೇ ಗೆಲ್ಲುವ ತಾಕತ್ತು /ಪ/ ಒಡಲಲಿ ಜಾಗವ ಕೊಡುವಾಗ ತಾಯಿಯ ಋಣದ ಆರಂಭ ಅಮ್ಮನೊಲವಿನ ಆಳದಲಿ ಮೀಯುವುದೇ ನಮಗೆ ಜಂಭ ಜಗವೇ ಸೋತಿದೆ ಅವಳ ಪ್ರೀತಿಗೆ ಮಗುವ ಮುಗ್ಧತೆಯಿದೆ ಅವಳ ಮಾತಿಗೆ /೧/ ನೋವಲೂ ನಲಿವಲೂ ಅಮ್ಮ ಎಂದರೆ ಎಲ್ಲಾ ನೋವು ಮಾಯ ಕನಸಲೂ ಮನಸಲೂ ಅಮ್ಮ ಎನ್ನದೆ ಸರಿಯದು ನಮ್ಮ ಸಮಯ ಅಮ್ಮ ಎಂಬುದೇ ಸಂಸ್ಕಾರ ಅಮ್ಮ ತೋರಳು ಎಂದೂ ಅಧಿಕಾರ /೨/ ಹಸಿವಿಗೆ ಅಮ್ಮನ ಕೈತುತ್ತು ದೂರ ತಳ್ಳುವುದೆಲ್ಲಾ ಆಪತ್ತು ಅಮ್ಮನಿಗಾಗಿ ಮಿಡಿಯುವ ಜೀವ ಕವಿತೆಯ ಹಡೆಯಿತು ಕವಿಭಾವ ಅಮ್ಮ ಎಂದರೆ ಸೋಲಿಲ್ಲ ಅಮ್ಮನ ಮರೆತರೆ ಬದುಕಿಲ್ಲ /೩/ ೦೭೨೧ಎಎಂ೧೨೦೯೨೦೧೭ *ಅಮುಭಾವಜೀವಿ*

Saturday, September 9, 2017

ಕವಿತೆಗಳು

[24/08 2:52 pm] ಅಮುಭಾವಜೀವಿ: *ಮಳೆ ನೆನಪ ತಂತು*

ತುಂತುರು ತುಂತುರು
ಮಳೆ ಹನಿಯುತಿದೆ
ನಿನ್ನಯ ನೆನಪುಗಳ
ಹೊತ್ತು ತಂದಿದೆ

ಶ್ರಾವಣ ಮಾಸದ  ಈ ಮಳೆ
ಹಸಿರಿನ ಸಂಭ್ರಮ ಸವಿದ ಇಳೆ
ಕಾಮನಬಿಲ್ಲಿನ ಬಣ್ಣವ ಬಳಿದು
ಕನಸನು ನನಸು ಮಾಡಿತು

ಮೊದಲ ಭೇಟಿಯಲ್ಲಿ ಅಂದು
ಮೊದಲ ಮಳೆಗೆ ನೆನೆದ ನೆನಪು
ನೂರು ಭಾವ ಮೂಡಿ ಬರೆದ
ಕವಿತೆಯಲ್ಲವೆ ಆ ಸುಂದರ ನೆನಪು

ಮುಸ್ಸಂಜೆಯ ವೇಳೆಯಲ್ಲಿ
ರಂಗನೆರಚಿದ ತೆರದಲಿ
ಹಕ್ಕಿ ಗೂಡಿಗೆ ಮರಳುವಂತೆ
ನೆನಪು ಬಂದು ಕಾಡಿದೆ

ನೆನಪಿನ  ಈ ಯಾತ್ರೆಯಲಿ
ಸಂಭ್ರಮದ ಜಾತ್ರೆಯಲಿ
ಶ್ರಾವಣದ ಸೋನೆಯಲ್ಲಿ
ಕಾರಣವಿಲ್ಲದೆ ಕರಗಿ ಹೋದೆ

0226ಪಿಎಂ24082017

*ಅಮುಭಾವಜೀವಿ*
[27/08 7:30 am] ಅಮುಭಾವಜೀವಿ: *ಸವಿಭಾವದುಡುಗೊರೆ*

ಮುಂಜಾನೆಯ ಹನಿ ಸಿಂಚನ
ಪುಳಕಗೊಂಡಿದೆ ಮೈಮನ
ಶುಭೋದಯಕೆ ಸವಿಭಾವವ
ಉಡುಗೊರೆ ನೀಡಿದೆ ನಿಸರ್ಗ

ಹಾಸನಾಂಬೆಯ ತವರಲ್ಲಿ
ಕಾವ್ಯಸಂಗಮದ ಖುಷಿಯಲ್ಲಿ
ವರುಣ ಕೃಪೆ ತೋರಿರಲು
ಎಲ್ಲೆಲ್ಲೂ ಸಂಭ್ರಮವೇ

ತಣ್ಣನೆಯ ಹೊತ್ತಿನಲಿ
ಹೊಸ ಜಾಗದ ಉಲ್ಲಾಸದಲಿ
ನಡೆದಾಡುವ ಸೊಬಗೇ ಸೋಜಿಗ
ಮುಂಜಾನೆ ರಮ್ಯತೆಯ ಐಭೋಗ

ಕವಿಪುಂಗವರ ಭೇಟಿಯಲ್ಲಿ
ನವಕಲ್ಪನೆಯ ಧಾಟಿಯಲ್ಲಿ
ಮೂಡಿದೆ ಹೊಸ ಕವಿತೆ
ಮನವೋ ಉಲ್ಲಾಸದಿ ತೇಲಿದೆ

ಕವಿಬಳಗದ ಕೋಗಿಲೆಯ ಗಾನ
ಕರ್ಣಾಲಿಗಳಿಗೆ ಹೊಸ ಚೇತನ
ನಲಿಯುವ ಮನದ ಭಾವನೆಗೆ
ಈ ಜಾಗವೇ ಸುಂದರ  ಒಸಗೆ

0727ಎಎಂ27082017

*ಅಮುಭಾವಜೀವಿ*

ಹಾಸನದಿಂದ
[28/08 4:54 pm] ಅಮುಭಾವಜೀವಿ: *ನಿನ್ನ ಹೊರತು*

ಕಣ್ಣಂಚಲಿ ಹನಿಗೂಡಿದೆ
ನಿನ್ನೊಲವಿಗೆ ಮರುಳಾಗಿ
ಹೃದಯದ ಭಾವ ಮೂಡಿದೆ
ಕಣ್ಣೊಳಗಿನ ಬಿಂಬವಾಗಿ 

ನನ್ನ ಕೈ ಹಿಡಿದು ನಡೆಸೋ
ನಾವಿಕ ನೀನಲ್ಲವೆ ಗೆಳೆಯ
ನೀ ಪ್ರೀತಿಯ ಅಂಬಾರಿಯಲಿ
ಕೂತ ನನ್ನ  ಒಡೆಯ

ಬಾಳ ಯಾನದ ಬಳುವಳಿ ನೀನು
ನಾಳೆ ಕನಸುಗಳ ಬಿತ್ತಿದವ ನೀನು
ಬೇಕಿಲ್ಲ ನನಗೇನೂ ನಿನ್ನ ಹೊರತು
ಬದುಕಲಿ ನೀನೇ ನನ್ನ ಗುರುತು

ಜೊತೆಗಾರನಾಗಿ ನೀ ಹಿತವಾದೆ
ದಂತಕಥೆಯಾಗೋಣ ಪ್ರೀತಿಗೆ
ವ್ಯಥೆಗಳ ಕಳೆದು ಶಪಥಗೈದೆ
ಇನ್ನು ಕಷ್ಟಗಳೇ ಇಲ್ಲ ಬಾಳಿಗೆ

ಕಣ್ಣು ಕಣ್ಣು ಕಲೆತ  ಈ ಬಂಧ
ಮಣ್ಣು ಸೇರುವ ತನಕ ಬೆಸೆಯಲಿ
ನಮ್ಮಿಬ್ಬರ ಈ ಅನುಬಂಧಕೆ
ಕಣ್ಣಂಚಿನ ಹನಿ ಸಾಕ್ಷಿಯಾಗಲಿ

*ಅಮುಭಾವಜೀವಿ*

ಶುಭಸಂಜೆ ಸ್ನೇಹಿತರೇ
[28/08 10:15 pm] ಅಮುಭಾವಜೀವಿ: *ಯಾವ ನೋವು ಕಾಡದೆ*

ಯಾವ ನೋವು ನಿನ್ನ ಕಾಡಿದೆ
ಏಕೆ ನಿನ್ನ ಮನವು ನೊಂದಿದೆ
ಯಾವ ಕಾರಣವ ನಾನು ಕಾಣೆ
ನಿನ್ನ ವೇದನೆಗೆ ಉಪಶಮನವೇನೋ ಕಾಣೆ /ಪ/

ಮೊದಲೇ ಹೆದರುವವನ ಮೇಲೆ
ಹಗ್ಗ ಹಾವಾಗಿ ಕಾಡಿತದೇಕೆ
ಮೃದು ದಳದ ಹೂವ ಮೇಲೆ
ಬರಸಿಡಿಲು ಬಂದೆರಗಿತದೇಕೆ
ನೋಯುವ ಸರದಿ ಬಿಟ್ಟು
ಛಲದಿ ಎಲ್ಲ ದೂರ  ಅಟ್ಟು  |೧|

ಯಾರಿಗಿಲ್ಲ ಇಲ್ಲಿ ನೋವು
ಒಂದೇ ಭಾರಿಗೆ ಒಲಿಯದು ಗೆಲುವು
ಸತತ ಸೋಲುವ ಮನದೊಳಗೆ
ಗೆಲ್ಲುವ ಭರವಸೆಯ ಕಾಣಬೇಕು
ಮರೆತುಬಿಡು ಎಲ್ಲ ನೋವ
ಕದ ತೆರೆದು ನೋಡು ಜಗವೆಲ್ಲ  |೨|

ಹೆಜ್ಜೆ  ಇಡುವ ಭರದಲಿ
ಎಡವುವ ಭಯ ಕಾಡದೆಂದು
ಸದ್ದು ಮಾಡುವ ಮಡಿಕೆಯಲ್ಲಿ
ತುಂಬ ನೀರು  ಇರಲಾರದೆಂದೆದೂ
ಮಾತನಾಡಿ  ಎಲ್ಲ ಮರೆತುಬಿಡು
ಮೌನದಲ್ಲಿ  ಎಲ್ಲ ತೊರೆದುಬಿಡು |೩|

ತುಸು ಮೆಲ್ಲ ಗಾಳಿ ಬೀಸಿದಂತೆ
ಹುಸಿನಗತಲಿರು ಯಾವ ನೋವು ಕಾಡದು
ಹಸಿರೆಲೆಯ ಮೇಲೆಯೇ ತಾನೇ
ಇಬ್ಬನಿಯು ಮಾಣಿಕ್ಯದಂತೆ ಹೊಳೆವುದು

0956ಪಿಎಂ28082017

*ಅಮುಭಾವಜೀವಿ*

ಶುಭಸಂಜೆ ಸ್ನೇಹಿತರೇ
[29/08 8:05 am] ಅಮುಭಾವಜೀವಿ: *ಮಲಿನವಾಗಿದೆ ಹೆಸರು*

ಅಲ್ಲೂ ಇರಬಹುದು
ಮಾನವೀಯತೆಯ ಬೇರು
ಆದರೂ ಹಿಂಸೆಯಲಿ ಮಿಂದು
ಮಲಿನವಾಗಿದೆ ಅದರ ಹೆಸರು

ಧರ್ಮಸಾರದೊಳಗೆಲ್ಲೂ ಇಲ್ಲ
ಒಬ್ಬರನೊಬ್ಬರು ಕೊಲ್ಲುವ ಪಾಠ
ಆದರೆ ಅದಕ್ಕೆ ಭಯೋತ್ಪಾದನೆಯ
ಬೆಂಬಲಿಸಿ ಜಗ ಗೆಲ್ಲುವ ಹಠ

ಶಾಂತಿಯ ಸಾರ ಬೇಕಿಲ್ಲ
ಪ್ರೀತಿಯ ಸಂಸ್ಕಾರ ಗೊತ್ತಿಲ್ಲ
ಸ್ನೇಹ ಹಸ್ತವ ಚಾಚಿದರೂ
ಅವರು ದ್ವೇಷದ ಪೊರೆ ಕಳಚದವರು

ಸ್ವರ್ಗವೇ ಇರಬಹುದು ಅಲ್ಲಿ
ನರಕಸದೃಶವಾಗಿಹುದು ಜಗದ ಕಣ್ಣಲ್ಲಿ
ಸಾಮಾಜಿಕ ಬದುಕಿಗಿಂತಲೂ
ರಾಜಕೀಯ ಪ್ರತಿಷ್ಠೆಯೇ ಮೇಲಲ್ಲಿ.

ಕೈಜೋಡಿಸಿದರೆ ಈಗಲೂ
ನಾವಾಗುವೆವು ಸೋದರರು
ಕೈಮಿಲಾಯಿಸಿದರೆ ಸುಮ್ಮನಿರಲು
ನಾವಲ್ಲ ಹೇಡಿಗಳು

0410ಪಿಎಂ270816

*ಅಮುಭಾವಜೀವಿ*

*ವರ್ಷದ ಹಿಂದೆ ಬರೆದ ಕವನ*

.
[29/08 9:09 pm] ಅಮುಭಾವಜೀವಿ: *ಕವಿಗೋಷ್ಠಿಗಾಗಿ*

*ನನ್ನೀ ಮಾತೃಭೂಮಿ*

ಜನ್ಮ ಭೂಮಿ ಮಾತೃಭೂಮಿ
ನನ್ನ ಪೊರೆವ ತೊಟ್ಟಿಲು
ನನ್ನ ನಾಡು ನನ್ನ ಪಾಡು
ಎಲ್ಲ ಸಾಧನೆಗೂ ಮೆಟ್ಟಿಲು

ಸಂಸ್ಕೃತಿಯ ತವರಲ್ಲಿ
ಪರಂಪರೆಯ ನೆರಳಲ್ಲಿ
ಅರಳುವ ಭವಿಷ್ಯದ
ಆಶಾಭಾವವೇ ನನ್ನೀ ಮಾತೃಭೂಮಿ

ಸುಜ್ಞಾನದ ಬೆಳಕಿನಡಿಯಲ್ಲಿ
ವಿಜ್ಞಾನದ ಮುನ್ನಡೆಯಲ್ಲಿ
ತತ್ವಜ್ಞಾನದ ತಿಳುವಳಿಕೆ
ನೀಡುವ ಶಾಲೆ ನನ್ನೀ ಮಾತೃಭೂಮಿ

ಸಂವಿಧಾನದ ಚೌಕಟ್ಟಿನಲ್ಲಿ
ಸ್ವಾತಂತ್ರ್ಯದ ಹಕ್ಕಿನಲ್ಲಿ
ಸಹಬಾಳ್ವೆಯ ಸಮಭಾವವ
ಕಣಕಣದಿ ಬೆರೆಸಿದ ನನ್ನೀ ಮಾತೃಭೂಮಿ

ಗಂಗೆ ತುಂಗೆ ಕಾವೇರಿಯರ
ಒಡಲ ಕರುಳ ಬಳ್ಳಿಯಿದು
ಹಿಮಾಲಯದ ಶೃಂಗದಲ್ಲಿ
ತಿರಂಗ ಹಾರಿಸಿದ ನನ್ನೀ ಮಾತೃಭೂಮಿ

ಯೋಧರ ಗಡಿ ಗಸ್ತಿನಲ್ಲಿ
ಆರಕ್ಷಕರ ಬಿಗಿ ಶಿಸ್ತಿನಲ್ಲಿ
ಧರ್ಮಗ್ರಂಥಗಳ ನಂಬಿಕೆಯಲ್ಲಿ
ಒಂದಾಗಿ ಬದುಕುವುದೆನ್ನ ಮಾತೃಭೂಮಿ

ಇಲ್ಲಿ ಜನಿಸಿದ ನಾನು ಧನ್ಯ
ಅದರಿಂದಲೇ ನಾನಿಂದು ಜಗಮಾನ್ಯ
ನನ್ನದೆಂಬ ಹೆಮ್ಮೆಪಡುವ
ನಾನು ಜನಸಿದ ಮಾತೃಭೂಮಿ

0958ಪಿಎಂ17082017
*ಅಮುಭಾವಜೀವಿ*
[29/08 9:11 pm] ಅಮುಭಾವಜೀವಿ: ಸೂರಿ ಸೃಷ್ಟಿಯ ಬರಹ ವಾಟ್ಸಪ್ ಗ್ರೂಪ್ನಲ್ಲಿ ನಡೆದ ಶ್ರಾವಣ ಕವಿಗೋಷ್ಠಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದ ನನ್ನ ಕವಿತೆ.
[30/08 1:47 pm] ಅಮುಭಾವಜೀವಿ: *ಸ್ಪೂರ್ತಿಗೀತೆಯಾದೆ*

ನೀ ತೋರಿದ ಪ್ರೀತಿಗೆ
ಅದಿತ್ತ ಆ ಭದ್ರತೆಗೆ
ಋಣಿಯಾಗಿರುವುದೊಂದುಳಿದು
ಅನ್ಯ ಮಾರ್ಗವಿಲ್ಲೆನಗೆ

ಅಲುಗಾಡುವ ಹರೆಯಕೆ
ಆಸರೆಗೋಲಾಗಿ ಬಂದೆ
ಹೆಜ್ಜೆಹೆಜ್ಜೆಗೂ ಅನುಸರಿಸಿ
ಬಾಳಿಗೊಂದು ರೂಪ ತಂದೆ

ಗುರಿಯಿರದ ನಡೆಗೊಂದು
ತಡೆ ಕೋರಿ ಮಾರ್ಗ ಬದಲಿಸಿದೆ
ಸರಿ ದಾರಿ ಬೆರಳು ತೋರಿ ನನ್ನ
ಉನ್ನತಿಯ ಸ್ಪೂರ್ತಿಗೀತೆಯಾದೆ

ಜೋಡು ಇಲ್ಲದ ಹಾದಿಯಲಿ
ಜೋಡಿಯಾಗಿ ನೀ ನಡೆದೆ
ನೀ ಬಂದ ಕ್ಷಣದಿಂದಲೇ
ನನ್ನ ನಡೆ ದಣಿವ ಮರೆತಿದೆ

ಸಂಭ್ರಮಿಸುತಿಹೆ ನಾನೀಗ
ನೀನನ್ನ ಎಲ್ಲಾ ಐಭೋಗ
ಸಾಕೆನಗೆ ಜೋತಿಯಿರು ಹೀಗೆ
ನನ್ನ ಬಾಳಿಗಾಗ ಬಾಧಿಸದು ಬೇಗೆ

ನೀನಿತ್ತ ಈ ಒಲವಿಗೆ
ನನ್ನ ಅಭಿನಂದನೆ
ನನ್ನಲ್ಲಿ ನೀನಿರುವೆ ಓ ಅರ್ಧಾಂಗಿ ಅದೇ  ನನಗೆ ಪ್ರೇರಣೆ

0703ಎಎಂ300815

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಇದೇ ದಿನ ಬರೆದ ಕವಿತೆ*

*ಶುಭ ಮಧ್ಯಾಹ್ನ ಸ್ನೇಹಿತರೇ*
[31/08 1:33 pm] ಅಮುಭಾವಜೀವಿ: *ಪ್ರತಿಭೆ ಇದ್ದರೂ*

ನಾ ಬಯಸಿದವರಾರೂ
ನನ್ನವರಾಗಲೇ ಇಲ್ಲ
ಬಯಸದೇ ಬಂದವರೆಲ್ಲಾ
ನನ್ನವರಾಗೇ ಉಳಿದರೆಲ್ಲಾ

ನಾ ಅಂದುಕೊಂಡದ್ದೇನೂ
ಆಗಲೇ ಇಲ್ಲ ಬದುಕಲಿ
ನೊಂದುಕೊಂಡೇ ಬಾಳುತಿರುವೆ
ನಿತ್ಯ ನೋವಿನ ನೆರಳಲಿ

ಪ್ರತಿಭೆ ಇದ್ದರೂ ಯಾರೂ
ನನ್ನನ್ನು ಗುರುತಿಸಲೇ ಇಲ್ಲ
ಪ್ರತಿಭಟಿಸಲಾಗದೇ ಕೈಚೆಲ್ಲಿದೆ
ಪ್ರೋತ್ಸಾಹವಿಲ್ಲದೆ ಪರಿತಪಿಸಿದೆ

ಬೆಳೆಯುವ ಹಂಬಲದಲೇ
ದಾರಿ ಸವೆಸುತಿರುವೆ ನಾನು 
ಬೆಳೆಸುವ ಬೆಂಬಲವೆಲ್ಲಿದೆಯೋ
ಅರಸುತಿರುವೆ ಹಸಿವಿನೊಳಗೂ ನಾನು

0136ಪಿಎಂ310816

*ಅಮುಭಾವಜೀವಿ*
[31/08 9:05 pm] ಅಮುಭಾವಜೀವಿ: *ಧನ್ಯವಾದಗಳು ನಿಮಗೆ*

ಮಳೆಯನು ಸುರಿದ ಮೋಡಗಳೇ
ಧನ್ಯವಾದಗಳು ನಿಮಗೆ
ಬದುಕಿಗೆ ಮತ್ತೆ ಚೇತನವಾದೆರಿ
ಅದಕೆ ಚಿರಋಣಿಗಳು ನಾವು ನಿಮಗೆ

ಬರದಿಂದ ಬೇಸತ್ತ ಒಡಲಿಗೆ
ಜೀವಕಳೆ ತಂತು ನಿಮ್ಮೀ ಕೊಡುಗೆ
ಭೀಕರತೆ ಎಂಬುದನು ದೂರತಳ್ಳಿ
ಮಮತೆಯ ತೋರಿದಿರೀ ಜಗಕೆ

ಬತ್ತಿದ ಮಡಿಲಲಿ ಮೊಳೆತಿದೆ ಬೀಜ
ಮತ್ತೆ ಜೀವನ ಸಾಗಿದೆ ಸಹಜ
ಹಸಿರಿನ ಕುಸುರಿಯ ಎಣೆದಿದೆ
ಭೂತಾಯಿ ಮತ್ತೆ ನಗುವಂತಾಗಿದೆ

ಸತ್ತ ಕೆರೆಗಳಿಗೆ ಮತ್ತೆ ಜೀವ ಬಂತು
ಒಣಗಿದ ನದಿಯಲಿ ನಾದ ತಂತು
ಸಂಭ್ರಮವೇ ಈಗ ಎಲ್ಲೆಲ್ಲೂ
ಸಮೃದ್ಧ ಬದುಕಿನ್ನು ಯಾವಾಗಲೂ

ಹೀಗೆ ನಮ್ಮನು ಸಲಹುತಿರಿ
ಕಾಲಕಾಲಕ್ಕೆ ಮಳೆ ಸುರಿಯುತಿರಿ
ಬಂಜೆಯ  ಒಡಲಲೂ ಖುಷಿ ತಂದಿರಿ
ನೆಮ್ಮದಿ ಬದುಕನು ಹರಸಿದಿರಿ

0556ಪಿಎಂ29082017

*ಅಮುಭಾವಜೀವಿ*

*ಶುಭರಾತ್ರಿ ಸ್ನೇಹಿತರೇ*
[01/09 7:14 am] ಅಮುಭಾವಜೀವಿ: *ರವಿ ಬರುವ ಹಾದಿಯಲ್ಲಿ*

ಕಣ್ಣು ತೆರೆಯಿತೊಂದು ಹಗಲು
ಬಣ್ಣ ಬಳಿದ ಹೊನ್ನ ಮುಗಿಲು
ರವಿಯು ಬರುವ ಹಾದಿಯಲ್ಲಿ
ಇಬ್ಬನಿ ಮಿನುಗಿತು ಎಲೆಎಲೆಯಲ್ಲಿ

ಇರುಳಿನೊಡೆಯ ಚಂದಿರಗೆ
ವಿಶ್ರಾಂತಿ ನೀಡಲು ಬಂದ ಭಾಸ್ಕರ
ಕವಿದ ಕತ್ತಲೆಗೆ ಮುಕ್ತಿ ಹಾಡಿ
ಬೆಳಕಿನೊಸಗೆ ತಂದ ನೇಸರ

ಮುದುಡಿದ ತಾವರೆಯು ನಕ್ಕಿತು
ಅಲೆಗಳಿಗೆ ಹೊಂಬಣ್ಣ ಬಳಿಯಿತು
ಮರಗಿಡಗಳ ತಲೆ ನೇವರಿಸಿ
ಹೊಸ ಚೈತನ್ಯದ ಪುಳಕ ತಂದಿತು

ರವಿಯು ಬರೆದ ಚಿತ್ರ ಕಾವ್ಯವನು
ಹಕ್ಕಿ ಉಲಿಯಿತು ಇಂಪು ಗಾನದಲಿ
ಬೆರಗುಗೊಂಡಿತು ಈ ಜಗವು
ನವೋಲ್ಲಾಸದ  ಬೀದಿಯಲಿ

ಶುಭೋದಯದ ನವಕಿರಣದಿಂದ
ಜಗದ ಚೆಲುವಾಯ್ತು ನವೀಕರಣ
ದಿನವೆಲ್ಲ ರವಿಗೆ ರಾಜಮರ್ಯಾದೆ
ಜಗವು  ಅದರಿಂದ ಹಿಗ್ಗಿ ನಲಿದಿದೆ

0709ಎಎಂ01092017

*ಅಮುಭಾವಜೀವಿ*

🌞💐🌼 *ಶುಭೋದಯ ಸ್ನೇಹಿತರೇ* 🌺🌼💐
[02/09 7:49 pm] ಅಮುಭಾವಜೀವಿ: *ಭಾವವಿರದ ಹಾಡಿನಲ್ಲಿ*

ಭಾವವಿರದ ಹಾಡಿನಲ್ಲಿ /
ಬರಿಯೇ ನೋವು ತುಂಬಿದೆ
ಭಾರ ಹೊತ್ತ ಬದುಕಿನಲ್ಲಿ /
ಕರಿಯ ಛಾಯೆ ಮೂಡಿದೆ /ಪ/

ಯಾರೋ ಬರೆದ ಕವಿತೆ ಇಂದು
ನನ್ನ ಕಥೆಯ ಹೇಳಿದೆ
ಯಾವ ಬಣ್ಣ ಬಳಸಿದರೂ
ನನ್ನ ವ್ಯಥೆಯ ಬದಲಿಸದಾಗಿದೆ
ಯಾವ ತಪ್ಪಿಗೆ ನನಗೀ ಶಿಕ್ಷೆ
ದೇವ ನೀಡೆಯಾ ನನಗೆ ರಕ್ಷೆ  /೧/ 

ಬಡತದನ ಪ್ರತಿ ಹೊಡೆತಕೂ
ನಾನೇ ಸಿಕ್ಕು ಬಲಿಯಾದೆ
ಒಳ್ಳೆಯ ಕಾಲ ಬರುವುದೆಂದು
ಬರುವ ಕಷ್ಟಗಳನೆಲ್ಲ ಸಹಿಸಿ ನಡೆದೆ
ನೀಗಲಿಲ್ಲ  ನನ್ನ ಬಡತನ
ಕಾಲ ಬದಲಿಸಲಿಲ್ಲ ಜೀವನ /೨/

ಪ್ರೀತಿಯೆಂಬ ಹಣತೆ ಕಂಡು
ಹಾರಿ ಬಂದೆ ನಾನದರ ಬಳಿಗೆ
ಜ್ಯೋತಿಯೂ ಕೂಡ ರೆಕ್ಕೆ ಸುಟ್ಟು
ಬಿದ್ದಿತ್ತು ಉರಿವ ದೀಪದ ಕೆಳಗೆ
ಬದುಕು ಬರೀ ಬೇಗೆ
ಸುಖ ಮರೀಚಿಕೆ ಇನ್ನು ನನಗೆ /೩/

0729ಎಎಂ01092017

*ಅಮುಭಾವಜೀವಿ*
[03/09 8:14 am] ಅಮುಭಾವಜೀವಿ: *ನನ್ನಂತೆ ನಾನಿರುವೆ*

ನಾ ಸುಂದರನಲ್ಲ
ನಾ ಚಂದಿರನಲ್ಲ
ಇದ್ದಿಲಾ ಕುಲದವನು

ನನಗಿಲ್ಲ ಯಾರ ಬೆಂಬಲ
ನನ್ನದೊಂದೇ ಹಂಬಲ
ನಾನಾಗಬೇಕೆಲ್ಲರಿಗೂ ಬೇಕಾದವನು

ನನ್ನ ಹೊರಗಿಡಿ   ಬೇಜಾರಿಲ್ಲ
ನಾನ್ಯಾವ ಗಡಿ ದಾಟುವುದಿಲ್ಲ
ಎಲ್ಲರೊಳಗೊಂದಾಗಿರುವೆನು

ನಿಮ್ಮ ಸ್ನೇಹಕ್ಕೆ ಹಿತವಾಗಿ
ಪ್ರೀತಿಗೆ ಪ್ರತಿಯಾಗಿ
ನನ್ನೆದೆಯಲಿ ಗುಡಿ ಕಟ್ಟಿ ಪೂಜಿಪೆನು

ಹಣವು ನನ್ನೊಳಿಲ್ಲ
ಗುಣಕೆ ನನ್ನೊಳು ಕೊರತೆಯಿಲ್ಲ
ಬೇಡಿ ಪಡೆವ ಬಡವ ನಾನು

ಹಂಗಿಸಿ ಆದರೆ ಕುಗ್ಗಿಸಬೇಡಿ
ಪ್ರೀತಿಸಿ ಆದರೆ ದ್ವೇಶಿಸಬೇಡಿ
ಸದಾ ನಿಮ್ಮ ಋಣಿ ನಾನು

ಆಸರೆಗೆ ಕೈ ನೀಡಿ
ನಡೆವ ಕಾಲೆಳೆಯಬೇಡಿ
ಏನಿಲ್ಲದಿದ್ದರೂ ನನ್ನಂತೆ ನಾನಿರುವೆ

ಹರಸಿ ಸಾಕು ನನ್ನೇಳ್ಗೆಗೆ
ಬುತ್ತಿ ಕಟ್ಟಿಕೊಳ್ವೆ ಬಾಳಿಗೆ.

0532ಎಎಂ030915

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ*

ಶುಭೋದಯ ಸ್ನೇಹಿತರೇ
[03/09 9:35 am] ಅಮುಭಾವಜೀವಿ: ನಲ್ಲ ನೀನಿಲ್ಲದೆ
ನನಗೇನೂ ಇಲ್ಲ
ಬಳ್ಳಿಗೆ ನೀನೊಂದಾಸರೆ
ನಾ ನಿನಗಾಗಿ ಅರಳಿದ ತಾವರೆ

ಹರೆಯದ ಆಗಸದಲಿ
ನೂರು ಕನಸ ಹರವಿದವ ನೀನು
ಪ್ರೀತಿಯಾ ಪಯಣಕ್ಕೆ
ಎಂದೆಂದೂ ಜೊತೆಯಾದವನು

ಎದೆಯ ಭಾವದೊಳು
ಒಲವ ಬಿತ್ತಿದವನು ನೀನು
ನೆನಪಿನ ಹದ ಮಳೆಯಲಿ
ನಿತ್ಯ ತೋಯ್ದು ಮುದಗೊಳ್ಳುವೆನು

ಹೆತ್ತವರ ಆ ಹಾರೈಕೆಯ
ಮರೆಸುವ ಸ್ನೇಹಿತ ನೀನು
ನಿನ್ನ ಬಳಿ ಸದಾ ಮಗುವಾಗ
ಬಯಸಿಹೆ ನಾನು

ಒಂಟಿತನವ ದೂರ ತಳ್ಳಿ
ಒಲವಿನಾಲಿಂಗನವಿತ್ತೆ
ಹಗಳಿರುಳು ಅದೇ ಗುಂಗಲಿ
ಮಿಂದೇಳುತಿಹೆ ನಾ ಮತ್ತೆ ಮತ್ತೆ

ನೀನೆನಗೆ ಕಟ್ಟಿಸಬೇಡ ಮಹಲು
ನಿನ್ನೆದೆಯಲಿ ಜಾಗ ನೀ ನೀಡಿರಲು
ಸಾಕೆನಗೆ ಅದೇ ಸವಿ ಸ್ವರ್ಗ
ನೀ ನನ್ನ ಬಾಳ ಸನ್ಮಾರ್ಗ

0750ಎಎಂ010915

*ಅಮುಭಾವಜೀವಿ*
[03/09 10:02 pm] ಅಮುಭಾವಜೀವಿ: *ಚಿತ್ರಕವನ*

*ಕಾಡಿಲ್ಲದೆ*

ಮಂಗನಿಂದ ಮಾನವನಾದ
ಸಮೃದ್ಧ ಕಾಡನು ಖಾಲಿ ಮಾಡಿದ

ಬುದ್ದಿ ಇಲ್ಲದಾಗ ಕಾಡಿನೊಂದಿಗೆ
ಹೊಂದಿಕೊಂಡು ಬದುಕ ನಡೆಸಿ
ಹಂತ ಹಂತವಾಗಿ ಬೆಳೆಯುತ್ತಾ
ಸ್ವಲ್ಪ ಸ್ವಲ್ಪವೇ ನಾಶ ಮಾಡುತ ಬಂದ

ತನ್ನನೇ ಸಲಹಿದ ಕಾಡು ಕಡಿದು
ಬರಡು ಮಾಡಿ ಪರಿದಾಡುತಿಹನು
ಹಸಿರೇ ಇಲ್ಲದ ನಾಡನು ಕಟ್ಟಿ
ಉಸಿರಿಗಾಗಿ ಪರಿತಪಿಸುತಿಹನು

ಅಂದು ಹಸಿವಿಗಾಗಿ ತಿನ್ನುತ್ತಿದ್ದ
ಇಂದು ಅತಿಯಾಸೆಗಾಗಿ ನಾಶಗೈದ
ವಾನರನಾಗಿ ಮರದಾಸರೆ ಪಡೆದ
ಮಾನವನಾಗಿ ನೆರಳಿಲ್ಲದಂತೆ ನರಳಾಡಿದ

ಪ್ರಕೃತಿ ಪಾಲಿನ ಕಂಟಕ  ಇವನು
ವಿಕೃತ ಮನಸ್ಸಿನ ವಂಚಕನಿವನು
ಕಡಿಯುವಯೆಡೆಯಲಿ ನೆಡದೆ
ಬೆಳೆದುದನೆಲ್ಲ ಕಡಿದು ಕಂಗಾಲಾದ

ಕಾಡಿಲ್ಲದೆ ಮಳೆ ಬಾರದೆ
ಹೆಚ್ಚಾಗಿದೆ ಬರದ ಬಾಧೆ
ಮೂಲವ ಮರೆತು ಕುಲದ ನೆಲೆಗೆ
ಕಾಲಯಮನಾದ ನಿಸರ್ಗ ಸೌಖ್ಯಕೆ

0350ಪಿಎಂ03092017

*ಅಮುಭಾವಜೀವಿ*


[04/09 9:52 am] ಅಮುಭಾವಜೀವಿ: *ನಾ ಹಂಬಲಿಸುವಂತೆ*

ಕ್ಷಮಿಸು ನನ್ನ ಕ್ಷಮಿಸು ನನ್ನ
ಓ ನನ್ನ  ಒಲವ ಜೀವವೇ /ಪ/

ಪ್ರೀತಿಯ ಭಾವ ಸಹಿಸಿ ನೋವ
ಅಂದು ತಂದಿತ್ತು ಹಿತಾನುಭವವ
ನಿನ್ನ ಈ ಸಹವಾಸದಿಂದ /
ದುಡುಕಿ ಆಡಿದ ಮಾತಿಗೆ
ಮುದುಡಿ ಕುಳಿತೆ ನೀನಿಂದು
ಕ್ಷಮೆ ತೋರು ನಿನ್ನ ನಗುವಿಂದ /೧/

ಯಾಕೋ ಬೇಸರ ನಿನ್ನ ಕಾಣೋ ಕಾತರ
ನನ್ನ ಮನದೊಳಗೆ ಏನೇನೋ ಹೊಯ್ದಾಟ
ಅಲ್ಲೆಲ್ಲ ನೀನಿಲ್ಲದ ಬಲು ಸಂಕಟ /
ಯಾರೋ ಹೇಳಿದರೆಂದು ನಂಬಿದ
ನಾನು ನಿನ್ನ ನಿಂದಿಸಿದ  ಆ ತಪ್ಪಿಗೆ
ಕ್ಷಮೆ ಇರಲಿ ಕೊನೆಯಾಗಲಿ ಸಂಕಷ್ಟ  /೨/

ದಿನವೆಲ್ಲವೂ ಕನವರಿಸಿದೆ ನಿನ್ನನ್ನೇ
ಕ್ಷಣಕ್ಷಣವೂ ಮನ ಕಾಡಿದೆ ನನ್ನನ್ನೇ
ಬಾ ಒಲವೇ ಮನ್ನಿಸು ನನ್ನ /
ದೂಡು ಈ ಬೇಸರ ನೋಡು ಆ ನೇಸರ
ದಿನಕಾಗಿ ರಾತ್ರಿಯೆಲ್ಲ ಅಲೆದು ಬಂದ
ನಾ ಹಂಬಲಿಸುವಂತೆ ನಿನ್ನ  /೩/

0950ಪಿಎಂ03092017

*ಅಮುಭಾವಜೀವಿ*
[04/09 4:45 pm] ಅಮುಭಾವಜೀವಿ: *ಅರ್ಪಣೆ*

ಅರ್ಪಣೆ ಸಮರ್ಪಣೆ
ಬದುಕ ಬಲಿಸಿ ನಿಲಿಸಿದ
ಎಲ್ಲರಿಗೂ ಹೃದಯ ತುಂಬಿ
ಅರ್ಪಣೆ ಸಮರ್ಪಣೆ

ತನ್ನ ಒಡಲಲ್ಲಿ ಜಾಗವಿತ್ತು
ಎಲ್ಲ ನೋವ ನುಂಗಿಕೊಂಡು
ಜನ್ಮವಿತ್ತ ತಾಯೆ ನಿನಗೆ
ಅರ್ಪಣೆ ಸಮರ್ಪಣೆ

ನನ್ನ ಭವಿಷ್ಯವನು ಕಟ್ಟಲು
ತಂದೆ ಆದರು ಮೆಟ್ಟಿಲು
ಬದುಕಿನಾಧಾರವೇ ಆದ ಅಪ್ಪ 
ನಿನಗೆ  ಅರ್ಪಣೆ ಸಮರ್ಪಣೆ

ವಿಧ್ಯೆ ಎಂಬ ಅಸ್ತ್ರ ಕೊಟ್ಟು
ಬದುಕ ಗೆಲ್ಲುವ ಗುರಿಯನಿಟ್ಟು
ಸಾಧನೆಗೆ ಸ್ಫೂರ್ತಿಯಾದ ಗುರುವೇ
ನಿಮಗೆ ಅರ್ಪಣೆ ಸಮರ್ಪಣೆ

ರಕ್ತ ಹಂಚಿಕೊಂಡು ಹುಟ್ಟಿದವರು
ನನ್ನ  ಏಳಿಗೆಗೆ ಹೆಗಲಾದವರು
ನೋವುನಲಿವಿಗೆ ಜೊತೆಯಾದ 
ಒಡಹುಟ್ಟಿದವರೆ ನಿಮಗೆ ಅರ್ಪಣೆ ಸಮರ್ಪಣೆ

ಯಾವ ಬಂಧ ಬೆಸೆದ ನಂಟೋ
ಯಾವ  ಋಣದ ಸ್ನೇಹ ಗಂಟೋ
ಅಲ್ಲಿಂದ ಇಲ್ಲಿವರೆಗೆ ಒಡನಾಡಿಗಳಾದ
ಸ್ನೇಹಿತರೇ ನಿಮಗೆ ಅರ್ಪಣೆ ಸಮರ್ಪಣೆ

ಮದುವೆ ಎಂಬ ಬೇಲಿಯಲ್ಲಿ
ಮಡದಿಯೆಂಬ ಬೆಳಕ ಚೆಲ್ಲಿ
ಮಕ್ಕಳ  ಅನುಬಂಧ ಬೆಸೆದ
ಸಂಸಾರವೇ ನಿನಗೆ ಅರ್ಪಣೆ ಸಮರ್ಪಣೆ

ಇರುವ ತನಕ ಉಸಿರಾಗಿ
ಹೋದ ಮೇಲೊಂದು ಹೆಸರಾಗಿ
ಎಲ್ಲಕ್ಕೂ ಮೂಲವಾದ
ಪಂಚಭೂತಗಳೇ ನಿಮಗೆ ಅರ್ಪಣೆ ಸಮರ್ಪಣೆ

*ಅಮುಭಾವಜೀವಿ*

*ಶುಭಸಂಜೆ ಸ್ನೇಹಿತರೇ*
[04/09 6:20 pm] ಅಮುಭಾವಜೀವಿ: *ಬದುಕು ಕಟ್ಟಿದ ದೇವತೆ*

ಅವಳಿಗಾಗಿ ಬಾಳು ಮೀಸಲು
ಅವಳಿಗೆ ನಾ ಸದಾ ಕಾವಲು
ಅವಳಿಂದಲೇ ಬೆಳಕು
ಅವಳೇ ನನ್ನ ಬದುಕು

ಅವಳೆನ್ನ ಕಂಗಳು
ನಾನವಳಿಗೆ ಆ ರೆಪ್ಪೆಗಳು
ಅವಳ ಸಲಹೆ ನನಗೆ ಸ್ಪೂರ್ತಿ
ಕಾರಣ ಅವಳೆನ್ನವಳೆಂಬ ಖಾತ್ರಿ

ಗೆಳತಿಯಾಗಿ ಗುರಿಯ ತೋರಿ
ಸಂಗಾತಿಯಾಗಿ ಬಾಳ ಸಲಹಿ
ನನ್ನ ಆ ಎತ್ತರಕ್ಕೇರಿಸಿ
ಬದುಕು ಕಟ್ಟಿದ ದೇವತೆ ಇವಳು

ಅವಳ ಕಣ್ಣಾಗಿ ಕಾಯುವೆ
ಅವಳ ಕಣ್ಣೀರಿಗೆ ನೋಯುವೆ
ಅವಳೋ ತ್ಯಾಗದ ಮೂರ್ತಿ
ಅವಳೆನ್ನ ಬಾಳ ಸಾರಥಿ

ಅವಳ ಕೈ ಹಿಡಿದೆ ನಾ
ಬಾಳಿಗ್ಹೊಸ ಸ್ಪರ್ಶವಿತ್ತಳು
ಅವಳೇ ನನ್ನ ಸಂಗಾತಿ
ಬಾಳ ತುಂಬ ಹರ್ಷ ತಂದಳು

ಅವಳ ಋಣ ತೀರಿಸಲಾಗದು
ಅವಳ ಸೇವೆಯಿಂದದು ಕಡಿಮೆಯಾಗುವುದು
ಅವಳು ಸತಿ ನಾನು ಪತಿ
ನಾವಿಬ್ಬರೂ ದಂಪತಿ.

644ಎಎಂ040915

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ*
[05/09 7:54 am] ಅಮುಭಾವಜೀವಿ: *ಮಹಾತಪಸ್ವಿ*

*ಶಿ*ಷ್ಯನ ತಪ್ಪುಗಳನು
*ಕ್ಷ*ಮಿಸಿ  ಅವನ ಬದುಕಿಗೆ
*ಕ*ಲಿಕೆಯ ವರ ನೀಡುವನೀತ
ಶಿಕ್ಷಕನೆಂಬ ಸಂಭಾವಿತ

*ಗು*ರಿಯ  ಆ ನಿಖರತೆಯನ್ನು
*ರು*ಜುವಾತುಪಡಿಸಿ ಸಾಧಿಸಲು
ಏಣಿಯಾಗಿ ಭವಿಷ್ಯ ಕಟ್ಟಿದ
ದೈವ ಸಮಾನನೀತ

*ಉ*ತ್ಸಾಹದ ಚಿಲುಮೆಯಾಗಿ
*ಪಾ*ಠಪ್ರವಚನದಿ ಭಾಗಿಯಾಗಿ
*ಧ್ಯಾ*ನದಂತೆ ವೃತ್ತಿ ಮಾಡುವ
*ಯ*ಶಸ್ಸಿನ ಮೆಟ್ಟಿಲಾದವನೀತ

ಮುಂದೆ ಗುರಿಯನಿಟ್ಟು
ಹಿಂದೆ ಗುರು ತೋರಿ ಬೊಟ್ಟು
ಸಾಧನೆಯ ಶಿಖರವನೇರಲು
ಹೆಮ್ಮೆ ಪಡುವ ಮೊದಲ ವ್ಯಕ್ತಿ  ಈತ

ತನ್ನ ಸ್ಥಾನಕ್ಕೆ ಘನತೆಯ ತಂದು
ಮಗುವಿನ ಭವಿಷ್ಯ  ಉಜ್ವಗೊಳಿಸಿ
ವೃತ್ತಿಯಲಿ ಧನ್ಯತೆ ಪಡೆವ
ಧರ್ಮನಿರಪೇಕ್ಷನೀತ

ಗುರುವಿನ ಗುಲಾಮರಾಗಿ
ಅರಿವಿನ ಮೂಲವನರಿ ತೋರಿ
ಸಮಾಜದ ಮನ್ನಣೆ ಪಡೆದ
ಶಿಕ್ಷಣದ ಮಹಾತಪಸ್ವಿ ಈತ

*ಅಮುಭಾವಜೀವಿ*

*ಶಿಕ್ಷಕರ ದಿನದ ಶುಭಾಶಯಗಳು ಸ್ನೇಹಿತರೇ*
[05/09 8:03 am] ಅಮುಭಾವಜೀವಿ: ಶಿಕ್ಷಕ ಬದುಕನ್ನು ಬರೆಯುವ ಲೇಖನಿ. ತನ್ನ ಒಡಲಾಳದಲಿ ನೂರು ನೋವಿದ್ದರೂ ಎಲ್ಲ ಮರೆತು ತನ್ನ ವಿದ್ಯಾರ್ಥಿಗಳ ಬದುಕನ್ನು  ರೂಪಿಸುವ ಹೊಣೆ ಹೊತ್ತು  ಶ್ರಮಿಸುತ್ತಾನೆ.ಸ್ವತಃ ಶಿಕ್ಷಕನಾಗಿ ನನ್ನ ಶಿಕ್ಷಕರು ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಗಳ ದೃಷ್ಟಿಕೋನದಿಂದ ಗ್ರಹಿಸಿ ಹೇಳುವುದಾದರೆ,ಶಿಕ್ಷಕ ಮಾರ್ಗದರ್ಶಕನಾಗಿರಬೇಕು.ಕೇವಲ ಪಾಠವನಷ್ಟೇ ಭೋದಿಸದೆ ಬದುಕನ್ನು  ನಿರ್ದೇಶಿಸುವಂತವರಾಗಿರಬೇಕು.ತನ್ನ ತರಗತಿಯ ನಿಗದಿ ಪಡಿಸಿದ ಒಂದು ಪಾಠವನ್ನು ಮಾಡದಿದ್ದರೂ ಪರವಾಗಿಲ್ಲ ತನ್ನ ಗರಡಿಯಲ್ಲಿ ತರಬೇತಿಗೊಳ್ಳುತ್ತಿರುವ ಪ್ರತಿ ವಿದ್ಯಾರ್ಥಿಯನ್ನು ಬದುಕಲು ಸನ್ನದ್ದಗೊಳಿಸುವಂತಿರಬೇಕು. ಶಿಕ್ಷಕ  ತನ್ನ ಹೊಟ್ಟೆಪಾಡಿಗಿಂತಲೂ  ವಿದ್ಯಾರ್ಥಿಗಳ ಭವಿಷ್ಯದ ಬದುಕು ಸಮೃದ್ಧವಾಗಿರುವ ಹಾಗೆ ಬುನಾದಿ ಭದ್ರಪಡಿಸಬೇಕು.
             ನನ್ನ ಶಿಕ್ಷಕ ಕವಿಯಾಗಿ ನನ್ನನ್ನು ಕವಿತೆಯಾಗಿ ಚಿತ್ರಿಸುವ ಕನಸುಗಾರನಾರಬೇಕು.ನನ್ನ ಶಿಕ್ಷಕ ವಿಜ್ಞಾನಿಯಾಗಿ ನನ್ನ ಬದುಕನ್ನು ಸಂಶೋಧಿಸಬೇಕು.ನನ್ನ ಶಿಕ್ಷಕ ತನ್ನ ಕಲ್ಪನೆಯ ಮೂಸೆಯಲ್ಲಿ ನನ್ನನ್ನು ಅರಳಿಸಬೇಕು.ಬದುಕಿನ ಎಂಥಹದ್ದೇ ಸನ್ನಿವೇಶದಲ್ಲೂ ಧೃತಿಗೆಡದ  ಆತ್ಮವಿಶ್ವಾಸವನ್ನು ಅಚ್ಚೊತ್ತಬೇಕು.ವಿದ್ಯಾರ್ಥಿಯೆಂಬ ಹರಿಯುವ ನೀರನ್ನು ಸಮಾಜದ ವಿವಿಧೋದ್ದೇಶಗಳಿಗೆ ಸಮರ್ಥವಾಗಿ ಬಳಕೆಯಾಗುವಂತೆ ಯೋಜಿಸುವವರಾಗಿರಬೇಕು.ನವರಸಗಳನ್ನು ಸಮರಸದೊಂದಿಗೆ ಬೆರೆಸಿ ಬದುಕಿಗೆ ಮಧುರಾನುಭವವ ಸವಿಸಬೇಕು.ಶಿಕ್ಷಕ ಗೋಪುರವಾಗಿ ವಿದ್ಯಾರ್ಥಿಯನ್ನು ಅದರ ಕಳಶವಾಗಿಸಬೇಕು.
                  ತನ್ನೊಡಲ ಕುಡಿಗಳ ಹಾರೈಕೆ ಮಾಡೋ ತಾಯಾಗಿ,ತನ್ನ ಬೇರನೇ ನಂಬಿದ ರೆಂಬೆಕೊಂಬೆಗಳ ಸಲಹೋ ತಂದೆಯಾಗಿ,ಅನುಭವಾಮೃತವ ಉಣಬಡಿಸೋ ಅಜ್ಜನಾಗಿ, ಮಡಿಲಲ್ಲಿ ಮಲಗಿಸಿಕೊಂಡು ನೀತಿಕತೆಗಳಿಂದ ನೈತಿಕತೆ ಯ ಬಿತ್ತುವ ಅಜ್ಜಿಯಾಗಿ,ಜೊತೆಯಲ್ಲಿ ಆಡಿಬೆಳೆದ ಸೋದರತೆಯ ಕುರುಹಾಗಿ, ಒಂದಿಡೀ ಬದುಕಿನ ಮಾರ್ಗಸೂಚಿಯಾಗಿರಬೇಕು ನನ್ನ ಟೀಚರ್.

*ಶಿಕ್ಷಕರ ದಿನಾಚರಣೆಯ ಶುಭಾಶಯಗಳು*
[06/09 7:01 am] ಅಮುಭಾವಜೀವಿ: *ಗುಂಡು ಸದ್ದು ಮಾಡದಿರಲಿ*

ಸಾಧಿಸಿದ್ದಾದರೂ ನೀವೇನನ್ನು
ಸಾವಿನಿಂದ ಹತ್ತಿಕ್ಕುವಿರೇ ಸತ್ಯವನ್ನು

ಪ್ರಜಾಪ್ವಭುತ್ವದ  ಈ ನಾಡಿನಲ್ಲಿ
ವಿಚಾರವಾದಿಗಳ ಹತ್ಯೆಯಾಗುತಿದೆ
ಅಭಿವ್ಯಕ್ತಿ ಸ್ವಾತಂತ್ರ್ಯಕೆ  ಇನ್ನಿಲ್ಲಿ
ಕೋವಿಯ ನಳಿಕೆಯಿಂದ ಸತ್ಯ ಸಾಯುವುದೇ?

ಪಂಥೀಯ ವಾದವದೇನೇ ಇರಲಿ
ಅದನ್ನು ಹತ್ತಿಕ್ಕಲು ಗುಂಡು ಸದ್ದು ಮಾಡದಿರಲಿ
ಖಂಡಿಸುವ ತಾಕತ್ತು  ಇಲ್ಲದಿದ್ದರೆ
ನೀವು ಅವರ ಕೊಲ್ಲುವಷ್ಟು  ಹೇಡಿಯಾದಿರೇ?

ಎಲ್ಲ ವಾದಗಳಿಗೂ ಮಿಗಿಲು
ಮಾನವೀಯತೆಯ ಮಡಿಲು
ಎಲ್ಲಿಗೆ ತಲುಪಿದೆವು ನಾವಿಂದು
ಬಾಯಿ ಮುಚ್ಚಿಸಬಹುದೆ ಕೊಂದು ?

ಸಂವಹನ ಮಾಡಲಾಗದ  ಅಯೋಗ್ಯರು
ಸಂಹಾರ ಮಾಡಿ ತಲೆ ಮರೆಸಿಕೊಂಡರು
ರಕ್ತ ಹರಿಸಿ ಶಕ್ತರಾದಿರೇ ನೀವು
ನಾಳೆ ನಿಮ್ಮನ್ನು  ಉಳಿಕೊಳ್ಳುವುದಿಲ್ಲ ಸಾವು !

ಬಿಟ್ಟು ಬಿಡಿ ಈ ಮೂರ್ಖತನ
ಅರಿತು ನಡೆಯಿರಿ ಮಾನಮಾನವೀಯನ್ನ
ಕೊಲ್ಲುವ ಹೇಡಿ ಕೈಗಳೇ
ಕಾಯುವವರಾರು ನಿಮ್ಮನ್ನ

ಒಂದು ಸಾವಿನಿಂದ ಸತ್ಯ ಸಾಯುವುದಿಲ್ಲ
ಒಂದು ವಾದದಿಂದ ಮಿಥ್ಯ ಗೆಲ್ಲುವುದಿಲ್ಲ
ಓ ಕ್ರೂರ  ಅಸ್ವಸ್ಥ ಕೊಳಕು ಮನಗಳೇ
ಇಲ್ಲಿ ನಿಮಗೆ ಜಾಗವಿಲ್ಲ ಹೊರಡಿ ಗುಳೆ

1054ಪಿಎಂ05092017

*ಅಮುಭಾವಜೀವಿ*

ಗೌರಿ ಲಂಕೇಶ್ ಅವರ ಹತ್ಯೆ ಕುರಿತು ಬರೆದ ಕವಿತೆ



[06/09 5:28 pm] ಅಮುಭಾವಜೀವಿ: *ಎಂದಿಗೆ ಕೊನೆ*

ತಲ್ಲಣಗಳು ತಳಮಳಿಸುತ್ತಿವೆ
ಕಾರಣಗಳು ತಿಳಿಯದೇ
ಮನ ನೊಂದಿದೆ ತನು ಬೆಂದಿದೆ
ಎಂದಿಗೆ ಕೊನೆ ಎಂದು ತಿಳಿಯದೆ

ಬರದ ಛಾಯೆ ಆವರಿಸಿದೆ
ಬದುಕಲು ಹೋರಾಟ ನಿತ್ಯವಾಗಿದೆ
ಕಲ್ಲು ಕೂಡ ಕರಗವ  ಆಕ್ರಂದನಕೆ
ನ್ಯಾಯ ಮಾತ್ರ ಮರೀಚಿಕೆಯಾಗದೆ

ವಾದಗಳ ಭಿನ್ನತೆಯಲಿ
ಬದುಕುವ ಸಾಮ್ಯತೆ ಬಲಿಯಾಗಿ
ಸತ್ಯದ ಹತ್ಯೆಯಾಗುತಿದೆ
ಸಮಾಜದ ಸ್ವಾಸ್ಥ್ಯ ಹಾಳಾಗಿ

ವಿಚಾರಧಾರೆಯನು ಹೇಳಲೂ
ಇಲ್ಲಿ ಸ್ವಾತಂತ್ರ್ಯ ಇಲ್ಲವಾಗುತಿದೆ
ಅಂಜದೆ ಬಾಯಿ ಬಿಟ್ಟರೆ
ಗುಂಡು ಸದ್ದು ಮಾಡಿ ಸಾವು ತರುತಿದೆ

ಕಾಯಕ ಮಾಡುವುದೆ ಕಷ್ಟವಾಗಿ
ಭ್ರಷ್ಟ ವ್ಯವಸ್ಥೆಗೆ ಬಲಿಯಾಗಿ
ಧರೆಯೇ ಹೊತ್ತಿ ಉರಿಯುವಾಗ
ಬದುಕಲು ತಲ್ಲಣ ಶುರುವಾಗಿದೆ

*06092017*
*ಅಮುಭಾವಜೀವಿ*
[06/09 9:36 pm] ಅಮುಭಾವಜೀವಿ: *ಕೊಡಲಿ ನಾನೇನು*

ಅಲ್ಪ ನಾನು ಕೊಡಲಿ ಏನು
ನನ್ನ ತಾಯಿ ನಾಡಿಗೆ
ಕಲ್ಪನೆಯ ಕಣ್ಣುಹರಿಸಿ
ಭಾವ ತುಂಬುವೆ ಹಾಡಿಗೆ

ನಾ ಹುಟ್ಟಿದ ಈ ಮಣ್ಣಲಿ
ಹೆಮ್ಮರವಾಗಿ ನಾ ಬೆಳೆಯಬೇಕು
ದಣಿದು,ಮಣಿದು ಬರುವ ಜೀವಕೆ
ತಣ್ಣೆಳಲ ನೀಡಿ ಸಂತೈಸಬೇಕು

ನಾನಿರುವೆಡೆಯಲಿ ತಂಗಾಳಿ
ಬೀಸಿ ತಂಬೆಲರ ಹರಡಬೇಕು
ಪ್ರತಿಶ್ವಾಸದ ಆಸ್ವಾದನೆಯಲಿ
ಆ ಸುಖವ ನಾನೀಯಬೇಕು

ನನ್ನೊಡಲ ಉರಿ ದಹಿಸಿ
ಹಸಿದವಗನ್ನ ಬೇಯಿಸಿಡಬೇಕು
ತುತ್ತಿಗಾಗಿ ಹಂಬಲಿಸಿ ಬಂದವನ
ಮುಖದ ಸಂತೃಪ್ತಿ ನಾನಾಗಬೇಕು

ಬೆವರ ಹರಿಸಿ ಬಾಯಾರಿದವನ
ಬಾಯ್ಗೆ ನಾ ಜಲವಾಗಬೇಕು
ಬಸವಳಿದ ಅವನ ಮೈಯೊಳು
ಮತ್ತೆ ನವಚೈತನ್ಯ ತುಂಬಬೇಕು

ಮಣ್ಣಿನ ಮುದ್ದೆಯಂತಹವನ
ವಿದ್ಯೆಯಲಿ ನಾ ತಿದ್ದಬೇಕು
ಕತ್ತಲಲ್ಲಿರುವವನ ಬೆಳಕಿಗೆ
ತಂದು ಉದ್ದರಿಸಬೇಕು

0652ಎಎಂ060915
*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ*

ಶುಭರಾತ್ರಿ ಸ್ನೇಹಿತರೇ
[07/09 8:26 am] ಅಮುಭಾವಜೀವಿ: *ಇಲ್ಲಿ ಹಂತಕರಿದ್ದಾರೆ ಎಚ್ಚರ*

ಹುಷಾರ್ ಇಲ್ಲಿ ಹಂತಕರಿದ್ದಾರೆ

ಅಭಿವ್ಯಕ್ತಿ ಸ್ವಾತಂತ್ರ್ಯವ ಹತ್ತಿಕ್ಕಿ
ವೈಚಾರಿಕತೆಯನ್ನು ಪೈಶಾಚಿಕವಾಗಿ
ಕೊಲ್ಲುವ ಮಾನವೀಯತೆಯನ್ನೇ ಮರೆತ
ಬಾಡಿಗೆ ಹಂತಕರಿದ್ದಾರೆ  ಎಚ್ಚರ

ವ್ಯವಸ್ಥೆಯ ವಿರುದ್ಧ ಹೋರಾಡಿದರೆ
ಸತ್ಯದ ಪರ ಮಾತನಾಡಿದರೆ
ಸಮಸ್ಯೆಯ ಕರಾಳ ಮುಖ ತೋರಿದರೆ
ತಡಮಾಡದೆ ಕೊಲ್ಲುವ ಹಂತಕರಿದ್ದಾರೆ ಎಚ್ಚರ

ಪಂಥೀಯ ಹಾದಿ ತುಳಿದರೆ
ಮುಖ್ಯವಾಹಿನಿಗೆ ಕರೆತಂದರೆ
ಸೈದ್ಧಾಂತಿಕ ನಿಲುವು ಹೊಂದಿದರೆ
ಸಂಚು ಮಾಡಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ

ತನ್ನ ನಿಲುವನ್ನು  ಪ್ರಕಟಪಡಿಸಿದರೆ
ಅವರ ಗೆಲುವನ್ನು ಖಂಡಿಸಿದರೆ
ಸಮಾನತೆ ವಾದ ಮಂಡಿಸಿದರೆ
ಗುಂಡಿಕ್ಕಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ

ವಿಚಾರವಂತಿಕೆಯ ಪ್ರತಿಪಾದಿಸಿದರೆ
ಮಡಿವಂತಿಕೆಯ  ಅನುಮಾನಿಸಿದರೆ
ಒಡಂಬಡಿಕೆಗೆ ಒಪ್ಪಿಕೊಳ್ಳದಿದ್ದರೆ
ಅಮಾನವೀಯವಾಗಿ ಕೊಲ್ಲುವ ಹಂತಕರಿದ್ದಾರೆ ಎಚ್ಚರ

0722ಎಎಂ07092017

*ಅಮುಭಾವಜೀವಿ*

[07/09 1:33 pm] ಅಮುಭಾವಜೀವಿ: *೧•ಕಾಡದಿರಲಿ ಮತ್ತೆ*

ಈ ದೂರ ಆದರೆ ನಿರಂತರ
ಹೇಗಾದಿತು ಮನ್ವಂತರ
ಬಾಳಲಿ ಬರೀ ಬೇಸರ
ನೀನಿಲ್ಲದ ಬದುಕು ಭೀಕರ

ಎಷ್ಟೊಂದು ಒಲವಿತ್ತು
ಎಷ್ಟೊಂದು ಚೆಲುವಿತ್ತು
ನೀನಿರಲು ನನ್ನ ಬಳಿ
ಎಷ್ಟೊಂದು ನೋವಿದೆ
ಸಾವನ್ನು ಸೆಳೆದಿದೆ
ನನ್ನನು ಈ ಬೇಸರದ ಸುಳಿ /೧/

ಭಾವದ  ಅಲೆಯಲ್ಲಿ
ತೇಲಿದ್ದೆ ಖುಷಿಯಲ್ಲಿ
ನಿನ್ನೊಲವ ನನ್ನದಾಗಿರಲು
ಬಾಯ್ಬಿಟ್ಟ ಭುವಿಯೊಳಗೆ
ಆಕ್ರಂದನದ ವೇದನೆಯೊಗೆ
ಬೇಯುತಿಹೆ ನೀನಿಲ್ಲದಿರಲು /೨/

ಮತ್ತೆ ನೀ ಬಂದು ಸೇರು
ಮತ್ತೆದೇ ಒಲವ ತೋರು
ಚೈತ್ರದ ಚಿಗುರಾಗಲಿ ಬದುಕು
ನಿತ್ಯ ನಿನ್ನದೇ ಧ್ಯಾನ
ಸಹಿಸಲಾರೆ ನಾ ಮೌನ
ಕಾಡದಿರಲಿ ಮತ್ತೆ  ಅಂತರದ ಕೆಡುಕು /೩/

೧೦೪೬ಎಎಂ೦೭೦೯೨೦೧೭
*ಅಮುಭಾವಜೀವಿ*
[07/09 5:38 pm] ಅಮುಭಾವಜೀವಿ: *೨•ಒಲವು ಬೆಸೆದ ಕಾರಣಕ್ಕೆ*

ಈ ಅಂತರ ತಂದಿದೆ ಕಾತರ
ಸೇರಿಸಲು ನಮ್ಮಿಬ್ಬರ
ಒಲವು ಬೆಸೆದ ಕಾರಣಕ್ಕೆ
ಒಂದಾಯ್ತು ನಮ್ಮೀ ಸಂಸಾರ

ಹರೆಯದೆಲ್ಲ  ಎಲ್ಲೆ ದಾಟಿ
ಬಂದು ಸೇರಿದ್ದೆ ನೀನಾಗ
ಖಾಲಿ ಕೈಯ ಬಡವ ನಾನು
ನೀನೊಲಿದುದು ನನ್ನ ಯೋಗ

ನಿನಗೆ ನಾನು ನನಗೆ ನೀನು
ಎಂಬ ಭಾವ ನಮ್ಮ ಬೆಸೆದ ಬಂಧನ
ನಾವಿಬ್ಬರೂ ಒಂದಾದ ಮೇಲೆ
ಹಗಲಿರುಳಂತೆ ನಮ್ಮೀ ಆಲಿಂಗನ

ಅಂತರದ ಕಂದರವೇಕೆ
ನಮ್ಮಿಬ್ಬರ ಭಾವ ಬದುಕಲಿ
ಸುಂದರ ಸಂಸ್ಕಾರವಂತ
ಒಲವು ನಮ್ಮನಾಳುತಿರಲಿ

ಭೇದವನ್ನು ದೂರ ತಳ್ಳಿ
ಭಾವದಿಂದ ನಾವು  ಅರಳಿ
ಅಂತರದ ಬೇಗೆ ಕಳೆದು
ಅನುಬಂಧವ ಬೆಸೆದುಕೊಳ್ಳಲಿ

ಪ್ರೀತಿ ನಮ್ಮ ದೈವವು
ಬದುಕು ಅದರ ರೂಪವು
ಅಂಬರದ ಚುಕ್ಕಿ ತಾರೆ ನಾವಾಗಿ
ಅಂತರದ  ಅಪಸ್ವರವ ಮರೆಯುವ

0400ಪಿಎಂ07092017

*ಅಮುಭಾವಜೀವಿ*
[07/09 9:16 pm] ಅಮುಭಾವಜೀವಿ: *ನನ್ನಂತೆ ಬಾಳಬೇಕು*

ನನ್ನ ನೀ ಹಳಿಯಬೇಡ
ನಾನಿಲ್ಲಿ ಬೆಳೆದುಳಿಯಬೇಕು
ಇತರರೊಡನೆ ಹೋಲಿಸಬೇಡ
ನನ್ನಂತೆ ನಾನಿಲ್ಲಿ ಬಾಳಬೇಕು

ಈ ಬದುಕು ನನ್ನದು
ಅದನು ನಾ ಕಟ್ಟಿಕೊಳ್ಳಬೇಕು
ನೂರು ಕಷ್ಟಗಳೆದುರಾಗಲೇಳು
ನಾ ಗೆದ್ದು ಗಟ್ಟಿಗೊಳ್ಳಬೇಕು

ನನ್ನಂತೆ ನಾನಿರಲು ಬಿಡು
ಪ್ರವಾಹದಿಂದೆದ್ದು ಬರುವೆ
ದುಡಿಮೆಯೇ ನನ್ನ ಅಸ್ತಿತ್ವ
ಜತನದಿ ನಾ ಕಾಯ್ದುಕೊಳುವೆ

ಯಾರದೋ ಮಾತಿಗಂಜುವುದಿಲ್ಲ
ಅವರ ನೆಚ್ಚಿ ನಾ ಬಂದಿಲ್ಲ
ನನ್ನ ದಾರಿಯ ನಾನೇ ಸವೆಸಬೇಕು
ನನ್ನಾಸೆಯೆಂತೆ ನಾ ಜೀವಿಸಬೇಕು

ಕೈ ಹಿಡಿದ ನೀ ನನ್ನ
ಜೊತೆ ನಡೆ ಸಾಕು
ನಮ್ಮ ನೋಡಿ ಈ ಜಗ
ಮೆಚ್ಚಿ ತಲೆದೂಗಬೇಕು

ಸಂಗಾತಿಯಾದ ತಪ್ಪಿಗೆ
ನೀ ನನ್ನನನುಸರಿಸಬೇಕು
ತಾಳಿಪಾಶಕೆ ತಲೆ ಕೊಟ್ಟು
ತಾಳಿ ಬಾಳ ಬೇಕು.

0621ಪಿಎಂ070915

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ*
ಕೃಪೆ : ಫೇಸ್ ಬುಕ್

ಶುಭರಾತ್ರಿ ಸ್ನೇಹಿತರೇ
[08/09 9:51 pm] ಅಮುಭಾವಜೀವಿ: *ಒಲವ ಬೆಳಕಿನಿಂದ*

ನಿನ್ನ ನೋಟವೊಂದು ಕವಿತೆ
ನನ್ನ ಬಾಳಲದು ಹಚ್ಚಿದಂತೆ ಹಣತೆ
ಶಾಂತತೆಯಲಿ ಉರಿಯೇ ದೀಪ
ಕ್ರೋಧಗೊಂಡರೆ ಉಗ್ರ ರೂಪ

ನನ್ನ ನಿನ್ನ ನಡುವೆ
ಹರಿದಿದೆ ಒಲವ ಕಾಲುವೆ
ಆ ದಡದಿ ನೀನು ಈ ದಡದಿ ನಾನು
ಈ ನೋಟ ತರಂಗ ತಂತು ಸಂದೇಶವನು

ನೀನು ಭೂಮಿ ನಾನು ಬಾನು
ಕಿರಣ ಕಾಂತಿಗೆ ಒಲಿಯುವೆನು
ಪ್ರೀತಿ ಇಬ್ಬನಿ ಮೇಲೆ ನಿಂತು
ಹೊಳೆವ ಪುಳಕವ ನನಗೆ ತಂತು

ನಿನ್ನಧರ ಬಿರಿದ ಮಧುವ ಹೀರಿ
ನಾ ತೇಲುವೆ ದುಂಬಿಯಾಗಿ ಹಾರಿ
ಮುದ್ದಿಸುವಾ ಮುಂಗುರುಳು
ಇರುಳಬಾನ ಬೇಳಗೊ ಬೆಳ್ದಿಂಗಳು

ನಾನು ಜ್ಯೋತಿ ನೀನು ಬತ್ತಿ
ನಾವಿಬ್ಬರೇ ಆದರ್ಶ ದಂಪತಿ
ಕಳೆಯಬೇಕು ಬಾಳ ಕತ್ತಲೆ
ಒಲವ ಬೆಳಕಿನಿಂದಲೇ.

0237pm080915

*ಅಮುಭಾವಜೀವಿ*

*ಎರಡು ವರ್ಷದ ಹಿಂದೆ ಬರೆದ ಕವಿತೆ.*

ಕೃಪೆ : ಫೇಸ್ ಬುಕ್

*ಶುಭರಾತ್ರಿ ಸ್ನೇಹಿತರೇ*
[09/09 3:50 pm] ಅಮುಭಾವಜೀವಿ: *೧•ಮಧುರ ಸಾಕ್ಷಿ*

ಮುತ್ತು ಮುತ್ತು ಸಿಹಿಮುತ್ತು
ಸೋತ ಮನಕೆ ತಾಕತ್ತು
ಆಪ್ತ ಭಾವದ  ಗಮ್ಮತ್ತು
ಅದುವೇ ಪ್ರೀತಿಯ ಸಂಪತ್ತು

ತಾಯಿಯ ಮಡಿಲಲಿ ಮಲಗುವ ಕಂದನ
ಭಯ ದೂರ ಮಾಡುವ ಸಿಹಿಮುತ್ತು
ಅಮ್ಮನು ನೀಡುವ ಭರವಸೆಯೊಂದೇ
ಕಂದನ ಮುದ್ದಿಸುವಾ ಸವಿಮುತ್ತು

ಸೋದರ ಭಾವದ ಬಂಧವು ಬೆಸವ
ಬಾಲ್ಯದ ಬಾಂಧವ್ಯದ ಸಿಹಿಮುತ್ತು
ಸ್ನೇಹದ ಸೌಹಾರ್ದದ  ಅಪ್ಪುಗೆಯ
ಸದ್ಭಾವದ ಸವಿ ಮುತ್ತು

ಹರೆಯದ  ಅಮಲಲಿ ಜೋಡಿ ಜೀವಗಳ
ಮಧುರ ಕ್ಷಣಗಳ ಸಾಕ್ಷಿ ಈ ಸಿಹಿಮುತ್ತು
ಪ್ರೀತಿಯ ಜ್ಯೋತಿಯ ಬೆಳಕಲಿ
ಕಣ್ಮುಚ್ಚಿ ಆನಂದಿಸುವ ಸವಿ ಹೊತ್ತು

ಬಾಳ ಹೋರಾಟದಲಿ ಸೋತ ಸಂಗಾತಿಯ
ಹುರಿದುಂಬಿಸುವ ಸಾಧನವೀ ಸಿಹಿಮುತ್ತು
ಎಲ್ಲಾ ನೋವನು ಕ್ಷಣದಲಿ ಮರೆಸುವ
ದಿವ್ಯೌಷಧಿ ಈ ಒಲವಿನ ಸವಿ ಮುತ್ತು

ಮುಪ್ಪಿನ ಕಾಲದಿ ಸವೆದ ಹಾದಿಯ
ಸವಿನೆನಪನು ಹಸಿರಾಗಿಸೋ ಸಿಹಿಮುತ್ತು
ಎಲ್ಲಾ ಕಾಲಕೂ  ಎಲ್ಲ ಕುಲಕೂ ಸಲ್ಲುವ  
ಗಟ್ಟಿ ನಿಲುವು ನೀಡುವ ಸವಿ ಮುತ್ತು

0235ಪಿಎಂ09092017

*ಅಮುಭಾವಜೀವಿ*