Friday, September 29, 2017
ಭಾಗ 2
ಕಥೆ: *ಆ ನೆನಪುಗಳು*
*ಹಿಂದಿನ ಸಂಚಿಕೆಯಿಂದ*
ಅರುಣ್ ಓದಿನಲ್ಲಿ ಸದಾ ಮುಂದು. ಇವನ ಹಿಂದೆ ಅವನ ಗೆಳೆಯರ ದಂಡು. ಹೀಗಿದ್ದರೂ ಕಾಲೇಜಿನಲ್ಲಿ ಅವನೆಂದೂ ಗುಂಪುಗಾರಿಕೆ ಮಾಡಿದವನಲ್ಲ.ಬದಲಾಗಿ ತನ್ನ ಆಪ್ತರೊಂದಿಗೆ ಸೇರಿ ಅಂದಂದಿನ ಪಾಠಗಳ ಕುರಿತಾದ ಚರ್ಚೆಯಲ್ಲಿ ತೊಡಗಿಸಿಕೊಂಡು ತಾನೂ ಕಲಿಯುತ್ತ ಸ್ನೇಹಿತರನ್ನು ಕಲಿಕೆಯಲ್ಲಿ ಪಕ್ವಗೊಳಿಸುತ್ತಿದ್ದ ಪ್ರತಿಭಾನ್ವಿತ.
ಹೀಗೆ ಅರುಣ್ ತನ್ನ ಪಾಡಿಗೆ ತಾನು ಕಲಿಕೆಯಲ್ಲಿ ಪ್ರಗತಿ ಹೊಂದುತ್ತ ಉಪನ್ಯಾಸಕರು ಪ್ರಾಂಶುಪಾಲರು ಏಕೆ ಇಡೀ ಕಾಲೇಜಿನ ಜವಾನರಲ್ಲೂ ಮನೆಮಾತಾಗಿದ್ದು ಎಲ್ಲರ ಪ್ರೀತಿಗೆ ಪಾತ್ರನಾಗಿದ್ದ. ವಿದ್ಯಾಭ್ಯಾಸದ ವಿಷಯದಲ್ಲಿ ಅವನನ್ನು ಸರಿಗಟ್ಟುವವರಿದ್ದಿಲ್ಲ.ಬಡತನ ಎನ್ನುವುದು ಅವನಿಗಿಂತಹ ಸಂಸ್ಕಾರವನ್ನು ಕಲಿಸಿತ್ತು.ಹೀಗಿರುವಾಗ ಅದೇ ಕಾಲೇಜಿನಲ್ಲಿ ಇವನ ಪ್ರತಿಸ್ಪರ್ಧಿ ಎಂದರೆ ರಶ್ಮಿ ಎಂಬ ಸೌಂದರ್ಯವತಿ. ತನ್ನ ತಂದೆ ತಾಯಿ ಇಬ್ಬರೂ ಸರ್ಕಾರಿ ಕೆಲಸದಲ್ಲಿದ್ದರು.ಆಕೆಗೆ ಯಾವುದಕ್ಕೂ ಕೊರತೆಬಾರದಂತೆ ಸಾಕಿದ್ದರು. ಅವಳು ಸಹ ಬುದ್ದಿವಂತೆ. ಆದರೆ ಅರುಣನನ್ನು ಸರಿಗಟ್ಟಲಾಗುತ್ತಿರಲಿಲ್ಲ. ಅವಳೊಮ್ಮೆ ಉಪಾಧ್ಯಾಯರಲ್ಲಿ ಹೇಳಿಕೊಳ್ಳುತ್ತಿದ್ದಳಂತೆ," ಸರ್ ನಾನು ಎಷ್ಟೇ ಓದಿದರೂ ಅವನನ್ನು ಸರಿಗಟ್ಟಲಾಗುತ್ತಿಲ್ಲ. " ಅಂತ ಆದರೆ ಅವನೇನು ಪುಸ್ತಕದ ಹುಳುವಾಗಿರಲಿಲ್ಲ. ಬದಲಾಗಿ ಕಷ್ಟಪಟ್ಟು ಓದುವ ಛಲ ಉಳ್ಳವನಾಗಿದ್ದ.
ಹೀಗೆ ಅವನ ಕಲ್ಪನಾ ಲಹರಿ ಸಾಗುತ್ತಿತ್ತು. ಅಷ್ಟರಲ್ಲಿ ಅವನ ರೂಮ್ ಮೇಟ್ 'ಅಪ್ಪ ಮಾರಾಯ ಕನಸು ಕಂಡಿದ್ದು ಸಾಕು, ಈಗ ಊಟಕ್ಕೆ ಸಮಯ ಆಗಿದೆ ಬಾರೋ ' ಎಂದಾಗಲೇ ಅವನಿಗೆ ಎಚ್ಚರ ಆಗಿದ್ದು. ' ಓಹ್ ! ಕ್ಷಮೆ ಇರಲಿ ಕಣೋ, ನನ್ನ ಬಾಲ್ಯದ ಗುಂಗಲ್ಲಿ ಮುಳುಗಿಹೋಗಿದ್ದೆ. ಸಮಯ ಹೋಗಿದ್ದೇ ಗೊತ್ತಾಗ್ಲಿಲ್ಲ ನೋಡು' ಎನ್ನುತ್ತಾ ಬೇಗನೇ ಎದ್ದು ಫ್ರಶಪ್ ಆಗಿ ಊಟಕ್ಕೆ ಹೋಗಿ ಬಂದರು. ಮತ್ತೆ ಅವನ ಸ್ನೇಹಿತ ರಾತ್ರಿ ಪಾಳಿಯ ಕೆಲಸಕ್ಕೆ ಹೊರಟುಹೋದ ಮತ್ತೆ ಇವನ ತನ್ನ ಕಲ್ಪನೆಯಲಿ ಮುಳುಗಿದ.
*ಮುಂದುವರೆಯುವುದು*
Subscribe to:
Post Comments (Atom)
No comments:
Post a Comment