Friday, September 29, 2017
ಬೆಳೆದು ಬೆಳೆದು ಬೃಹತ್ತಾಯ್ತು
ನಮ್ಮ ಬೆಂದಕಾಳೂರು
ಸುತ್ತಮುತ್ತಲಿನ ಹಳ್ಳಿಗಳ ನಗರವಾಗಿಸಿ
ದೂರದಿಂದ ಬಂದು ಬದುಕು ಕಟ್ಟಿಕೊಂಡರು
ಕಾಂಕ್ರೀಟ್ ಕಾಡಿನಲ್ಲಿ
ಎಷ್ಟೊಂದು ಜನ ಜಂಗುಳಿ
ವಾಹನಗಳ ಬಲು ಹಾವಳಿ
ಧಾವಂತದ ಬದುಕೇ ಇದರ ಬಳುವಳಿ
ದುಡಿಮೆಯೊಂದೇ ಇಲ್ಲಿನ ಮಂತ್ರ
ವಾರಾಂತ್ಯಕೆ ವಿರಾಮದ ಸೂತ್ರ
ಕಲೆ ಸಾಹಿತ್ಯ ಒಂದಷ್ಟು ಪ್ರೋತ್ಸಾಹ
ಏನು ಹೇಳಲಿ ಅವರ ಜೀವನೋತ್ಸಹವನು
ಬದುಕು ಅರಸಿ ಬಂದವರನೆಲ್ಲ
ಅಪ್ಪಿ ಒಪ್ಪಿಕೊಳ್ಳುವ ನಗರ
ವಾಹನ ದಟ್ಟಣೆಯೊಂದಿಗೆ
ಗುರಿ ತಲುಪಲಿಲ್ಲಿ ನಿತ್ಯ ಸಮರ
ಉದ್ಯಾನವನಗಳ ನಗರವಿಂದು
ಭಾರಿ ಬೃಹತ್ ಕಟ್ಟಡಗಳ ಆಗರ
ಮೆಟ್ರೊ ಮಾಲ್ ಸಂಸ್ಕೃತಿ ಪೋಷಕ
ಕರುನಾಡ ರಾಜಧಾನಿ ಎಂಬ ದ್ಯೋತಕ
ಹೆಮ್ಮೆಯ ನಗರದೊಳಗೂ
ಸಮಸ್ಯೆಗಳ ಮಹಾಪೂರ
ಆಧುನಿಕತೆಯ ಹೆಸರಿನಲ್ಲಿ
ಇದು ಸಿಲಿಕಾನ್ ವ್ಯಾಲಿ
0510ಎಎಂ25092017
*ಅಮುಭಾವಜೀವಿ*
Subscribe to:
Post Comments (Atom)
No comments:
Post a Comment