Friday, September 29, 2017

*ಮೆಟ್ಟಿಲು ಮಾಡಿಕೊಂಡರು* ಎಷ್ಟು ಕೇಳಿಕೊಂಡರೇನು ಅವರಿಗೆ ಕೇಳಲಿಲ್ಲ ನಮ್ಮ ಅಳಲು ಮೆಟ್ಟಿಲು ಮಾಡಿಕೊಂಡರು ನಮ್ಮನ್ನು ತಾವು ರಾಜ್ಯವಾಳಲು ಬರದಲ್ಲಿ ಬೆಂದ ನಮಗೆ ನೀರು ಕೊಡದೆ ಹೋದರು ಪ್ರತಿಭಟನೆಯ ಹಾದಿ ಹಿಡಿದಾಗ ಲಾಟಿ ಏಟು ಕೊಟ್ಟು ಓಡಿಸಿದರು ಸಾಲದ ಶೂಲಕೇರಿ ರೈತ ಆತ್ಮಹತ್ಯೆ ಮಾಡಿಕೊಂಡರೂ ಸಾವಿನ ಮನೆಯಲ್ಲಿ ರಾಜಕೀಯ ಬೇಳೆಯನಷ್ಟೇ ಬೇಯಿಸಿಕೊಂಡರು ದಕ್ಷರನ್ನು ರಕ್ಷಿಸಿಕೊಳ್ಳದೇ ಭ್ರಷ್ಟರಿಗೆ ಪಟ್ಟ ಕೊಟ್ಟು ಮೆರೆದರು ವಿಚಾರವಾದಿಗಳಿಗೆ ಬೆದರಿಕೆಯೊಡ್ಡಿ ಬಂದೂಕಿನಿಂದ ಹತ್ಯೆಗೈದರು ಭೀಕರವಾಗುತಲಿದೆ ಸಾಮಾನ್ಯನ ಬದುಕು ಕೋಟಿ ಕೋಟಿ ವೆಚ್ಚವಾಗುತಿದೆ ಯಾವ್ಯಾವುದಕೋ ನಮ್ಮ ಅಳಲನು ಹೂತರು ತಮ್ಮ ಬದುಕ ವೃದ್ಧಿಸಿಕೊಂಡರು ಬಡಪಾಯಿಗೆ ಬೆಲೆಯಿಲ್ಲದಾಗಿ ಬಸವಳಿದು ಕೂತ ಹಸಿವಿನಲಿ 0604ಪಿಎಂ17092017 *ಅಮುಭಾವಜೀವಿ*

No comments:

Post a Comment