Friday, June 21, 2019

ಬಂದ ಪ್ರವಾಹದಲ್ಲಿ ಕೊಚ್ಚಿ ಹೋಯಿತು ಬದುಕು
ಜೀವ ಕೈಯಲ್ಲಿ ಹಿಡಿಸಿ ನರಳಿತು ಬದುಕು

ಕಣ್ಣು ಮುಂದೆ ಮನೆಯು ಕುಸಿದು
ಬೀದಿಗೆ ಬಿದ್ದಾಯ್ತು ಬದುಕು

ಬಂಧು ಬಳಗದವರನೆಲ್ಲ ದೂರವಾಗಿಸಿ ದಿಕ್ಕಾಪಾಲಾಗಿ ಹೋಯಿತು ಬದುಕು

ಹೊಲ ಗದ್ದೆಗಳನೆಲ್ಲ ನುಂಗಿ
ಇನ್ನಿಲ್ಲದಂತೆ ನಾಶವಾಯಿತು ಬದುಕು

ಬೆಟ್ಟವೇ ಕಳಚಿ ಮಣ್ಣ ರಾಶಿಯೊಳಗೆ
ದಾರಿಯೇ ಮುಚ್ಚಿ ನರಕವಾಯಿತು ಬದುಕು

ಆಶ್ರಯಿಸಿದುದನೆಲ್ಲ ಹೊತ್ತೊಯ್ದು
ನಿರಾಶ್ರಿತವಾಯಿತು ಬದುಕು

ಸುರಿವ ಮಳೆಯಲ್ಲಿ ಕಣ್ಣೀರು
ಕೋಡಿ ಹರಿಸಿತು ಬದುಕು

ಅಮುವಿನಂತರಂಗದ ಬೋಧನೆಗೆ
ಕಿವಿ ಇರದೇ ಕಿವುಡಾಯಿತು  ಬದುಕು

ಅಮು ಭಾವಜೀವಿ
ಚಿತ್ರದುರ್ಗ

No comments:

Post a Comment